ಬೆಟ್ಟದಾ ಮೇಲೊಂದು

- ಪ್ರಭಾಕರ ಶಿಶಿಲ

ಆ ಊರಲ್ಲಿ ಇಳಿಯಬೇಕಿದ್ದರವರಲ್ಲಿ ಅವನೂ ಒಬ್ಬ.  ಆಪರಿಚಿತ ಊರಲ್ಲಿ ತನ್ನ ಫೀಲ್ಡ್ ಸ್ಟಡಿಗೆ ಸಹಾಯ ಮಾಡುವವರು ಯಾರಾದರೂ ಸಿಕ್ಕಾರೇ ಎಂದು ಸುತ್ತಲೂ ಕಣ್ಣಾಡಿಸುತ್ತಿದ್ದಂತೆ ಅವನನ್ನು ಆಲ್ಲಿಗೆ ಹೊತ್ತು ತಂದ ಬಸ್ಸು ಇಳಿಸಿದ್ದಕ್ಕಿಂತ ಹೆಚ್ಚು ಮಂದಿಯನ್ನು ಹತ್ತಿಸಿಕೊಂಡು ಮುಂದಕ್ಕೆ ಓಡಿತು.  ಅವನು ಕಾಲೆಳೆದುಕೊಂಡು ಎದುರಲ್ಲಿ ಕಾಣುವ ಹೋಟೆಲಿಗೆ ಹೋಗಬೇಕು ಎನ್ನುವಾಗ ಆವನಿಗೆ ಕಂಡದ್ದು ಅವಳು.

ಆವಳು ಇದ್ದದ್ದು ದೊಡ್ಡದೊಂದು ಫ್ಯಾನ್ಸಿ ಸ್ಟೋರಿನಲ್ಲಿ. ಅವನನ್ನು ದೂರದಿಂದಲೇ ನೋಡಿದ ಅವಳ ಮುಖ ಆರಳಿತು.  ಈಗ ಆವನ ಕಾಲುಗಳು ದಾರಿ ತಪ್ಪಿಸಿ ಅವನನ್ನು ಫ್ಯಾನ್ಸಿ ಸ್ಟೋರಿನತ್ತ ಒಯ್ದುವು.  ಅವಳು ಸಂಭ್ರಮದಿಂದ ಹೊರಬಂದಳು.  ಜತೆಗೆ ಎರಡು ಬದಿಗಳಲ್ಲಿ ಜೋತು ಬಿದ್ದಂತೆ ಇಬ್ಬರು ಹೆಣ್ಣುಮಕ್ಕಳು.  ಅವುಗಳ ಮುಖದಲ್ಲಿ ಪೆದ್ದು ಕಳೆ.  ನಿರಾಸಕ್ತಿಯ ನೋಟ.  ಒಂದು ಕ್ಷಣ ಗಲಿಬಿಲಿಗೊಳಗಾದ ಅವನನ್ನು ಕಂಡು ಅವಳು ನಗುತ್ತಾ ನಮಸ್ಕಾರ ಮಾಡಿದಳು.  ಅದರಲ್ಲಿ ಗೌರವಕ್ಕಿಂತ ಹೆಚ್ಚಾಗಿ ಹುಡುಗಾಟ ಇದ್ದುದನ್ನು ಗಮನಿಸಿ ಆವನು  ನಕ್ಕು ಕೇಳಿದ, "ಏನಮ್ಮಾ... ಹೇಗಿದ್ದೀಯಾ?

ಈಗವಳು ಗಟ್ಟಿಯಾಗಿ ನಕ್ಕಳು. ಫ್ಯಾನ್ಸಿ ಸ್ಟೋರಿನಲ್ಲಿದ್ದವರೆಲ್ಲಾ ಆವರತ್ತ ನೋಡುತ್ತಿರುವುದನ್ನು ಕಂಡು ಅವನಿಗೆ ಕಸಿವಿಸಿಯಾಯಿತು.  ಅವಳಿಗೆ ಆರ್ಥವಾಯಿತು. ಅವನ ಕ್ಕೆಯಲ್ಲಿದ್ದ ಬ್ಯಾಗು ಎತ್ತಿಕೊಳ್ಳುತ್ತಾ "ನಡೀರಿ ಗಾಬರಿ ಬೇಡ. ಇದು ನಮ್ಮದೇ ಅಂಗಡಿ" ಎಂದು ಮು೦ದಕ್ಕೆ ನಡೆದಳು.  ನಡೆಯುತ್ತಾ "ನೆನಪಿದ್ಯಾ ಸಾ.. ನೀವೇ ಹೇಳ್ತಿದ್ರಿ. ಹೇಗಿದ್ದೀರಿ ಆಂತ ಕೇಳುವುದು ಇನ್ನೇನೂ ತೋಚದೆ ಇರುವಾಗ ಆಂತ.  ಅದಕ್ಕೆ ನಗು ಬಂತು" ಆಂದಳು.

ಆವನಿಗೂ ನಗು ಬಂತು.  ಸ್ಟೋರಿನ ಒಳ ಹೊಕ್ಕಾಗ ಅವನಿಗೆ ದಂಗು ಬಡಿದಂತಾಯಿತು.  ಫಾನ್ಸಿ ಎಂದರೆ ಬಳೆ, ಪೌಡರ್, ಲಿಪ್‍ಸ್ಟಿಕ್ ಎಂದೇ ತಿಳಿದಿದ್ದ ಅವನಿಗೆ  ಅವುಗಳೊಂದಿಗೆ ಬಟ್ಟೆ , ಸ್ಟೇಶನರಿ, ಆಟದ ಸಾಮಾನು ಮತ್ತು ವಿಧವಿಧದ ಪಾದರಕ್ಷೆ ಕಂಡು ಆಶ್ಚರ್ಯ.  ವಿಶಾಲವಾದ ಅಂಗಡಿಯಲ್ಲಿ ನಾಲ್ಕೈದು ಮಂದಿ  ಸೇಲ್ಸ್‍ಮನ್‍ಗಳಿದ್ದರು.  ಜತೆಗೆ ಫೋನು, ಟಿ. ವಿ., ಫ್ಯಾನು ಎಲ್ಲವೂ.

"ನಮ್ದೇಸಾ ಹೇಗಿದೆ ?  ಅವ್ರನ್ನು ನೀವು ನೊಡಿಲ್ಲ ಅಲ್ವಾ?  ಬಾಂಬೆಗೆ ಹೋಗಿದ್ದಾರೆ ನಾಲ್ಕು ದಿನ ಬಿಟ್ಟು ಬರ್ತಾರೆ."  ಅವನ ಕಣ್ಣಲ್ಲಿನ ಶಂಕೆಗೆ ಅವಳು ಉತ್ತರಿಸಿದಳು.

"ಕೂತ್ಕೊಳ್ಳಿ, ಏನ್ ಕುಡೀತಿರಿ" ಎಂದವಳೇ, ಅವನ ಉತ್ತರಕ್ಕೆ ಕಾಯದೆ" ನೋಡಪಾ ಎರಡು ಲೆಮನ್ ಸೋಡಾ ತಗೊಂಬಾ" ಎಂದು ಸೇಲ್ಸ್‍ ಮ್ಯಾನ್ ಒಬ್ಬನನ್ನು ಓಡಿಸಿದಳು. "ಸೆಕೆಗೆ ಅದೇ ವಾಸಿ ಅಲ್ವೇ?" ಎಂದು ಸೇರಿಸಿದಳು.

ಅವನು ಕೂತುಕೊಂಡ.  "ಇಲ್ಲಿಗೇನ್ ಬಂದ್ರಿ ಸಾ?" ಈಗವನು ಬಿಚ್ಚಿಕೊಂಡ.  ಅವನು ರಿಸರ್ಚ್ ಮಾಡಲು ತೊಡಗಿರುವುದು, ಇದೀಗ ಅವಳ ಊರಿನ ಪಶುಪತಿ ದೇವಾಲಯದ ಬಗ್ಗೆ ಆಧ್ಯಯನ ಮಾಡಲು ಬಂದಿರುವುದು ಹೀಗೆ.

"ಅಯ್ಯೋ ಅಲ್ಲಿಗೆ ನಮ್ಮ ಮನೆ ಮುಂದ್ಲಿಂದ್ಲೇ ಹೋಗಬೇಕು ನೀವು. ಅಲ್ಲಿಂದ ಆರೇ ಫರ್ಲಾಂಗು.  ಅಂದ್ಹಾಗೆ ಎಷ್ಟು ದಿನ ಉಳ್ಕೊಳ್ತೀರಿ ಸಾ ಇಲ್ಲಿ?"

"ಸ್ಟಡಿ ಅಂದ್ಮೇಲೆ ಇಷ್ಟೇ ದಿನಾಂತ ಹೇಳೋಕಾಗಲ್ಲ.  ಮೊದ್ಲು ದೇವಸ್ಥಾನ ನೋಡ್ಬೇಕು.  ಶಿಲ್ಪಗಳ ಬಗ್ಗೆ ಆಧ್ಯಯನ ಮಾಡಬೇಕು.  ಅರ್ಚಕರನ್ನು ಕಾಣಬೇಕು.  ಊರ ಹಳಬ್ರನ್ನು ಭೇಟಿಯಾಗಬೇಕು.  ಕೆಲವು ಪೋಟೋ ತೆಗೀಬೇಕು.  ಅದ್ರಿಂದ ನಾಲ್ಕೈದು ದಿನಾ ಇರ್ಬೇಕಾಗಿ ಬರ್ಬೋದು.  ಎಲ್ಲಾದ್ರೂ ಹೋಟ್ಲಲ್ಲಿ ರೂಮು ಸಿಗುತ್ತೋ ನೋಡಬೇಕು."

ಆವಳ ಕಣ್ಣುಗಳು ಆರಳಿದವು.  "ಹೋಟೆಲ್ಲಿಗ್ಯಾಸಾ ದುಡ್ಡು ಸುರೀತೀರಿ? ನಮ್ಮನೇಲೇ ಇರಿ.  ಮನೇಲಿ ಮಾವ ಇದ್ದಾರೆ.  ಈ ಊರ ಬಗ್ಗೆ ಅವರೆಷ್ಟು ತಿಳುಕೊಂಡಿರೋರು ಯಾರೂ ಇಲ್ಲ.  ಅದೇನೋ ಎನ್‍ಸೈಕ್ಲೋಪೇಡಿಯಾ ಅಂತಾರಲ್ಲಾ ಹಾಗೆ.  ದೇವಸ್ಥಾನ ಇಂದೇ ಒಮ್ಮೆ ನೋಡ್ಕಂಬನ್ನಿ.  ಅಲ್ಲಿಂದ ನೇರ ನಮ್ಮನೇಗೆ.  ಇವ್ನೆ ನಿಮ್ಗೆ ಕಂಪನಿ." ಆಗ ತಾನೆ ಜ್ಯೂಸ್ ತಂದುಕೊಟ್ಟವನನ್ನು ತೋರಿಸಿದಳು.

ಜ್ಯೂಸ್ ಕುಡಿದು ಅವನು ಎದ್ದು ಬ್ಯಾಗು ಕೈಗೆತ್ತಿಕೊಂಡ.  ಅವಳು ತಡೆದಳು.  "ಆದೆಲ್ಲಾ ಇಲ್ಲೇ ಇರ್ಲಿ.  ಬೇಕಿದ್ರೆ ಪೆನ್ನು, ಬುಕ್ಕು, ಕ್ಯಾಮರಾ ತಗಳ್ಳಿ.  ಬ್ಯಾಗು ನಮ್ಮನೆಗೆ ಹೋಗುತ್ತೆ.  ನಿಮ್ಮ ಜವಾಬ್ದಾರಿಯೆಲ್ಲಾ ಸದ್ಯಕ್ಕೆ ಇವಂದು."

ಆವನು ಸುಧಾರಿಸಿಕೊಂಡ. ಅವಳ ಮಕ್ಕಳಿಗೆ ಏನನ್ನೂ ಕೊಡದ್ದು ನೆನಪಾಗಿ ಜೇಬಿಗೆ ಕ್ಕೆ ಹಾಕಿ ಸಿಕ್ಕಿದ ಎರಡು ನೋಟು ತೆಗೆದು ಮಕ್ಕಳ ಕ್ಕೆಯಲ್ಲಿ ಇರಿಸಹೋದ. ಆವಳು ತಡೆದಳು. "ನಿಮ್ಗೇನಾಗಿದೆ ಸಾ?  ನಮ್ಗೇನ್ಸಾ ಕಡಿಮೆಯಾಗಿರೋದು?  ಒಳ್ಳೇ ಸಂಪ್ರದಾಯವಾದಿ ಆಗ್ಬಿಟ್ರಲ್ಲಾ?"

ಅವನಿಗೆ ಪಿಚ್ಚನಿಸಿತು. "ಇದ್ರಲ್ಲಿ ಸಂಪ್ರದಾಯ ಏನ್ಬಂತು ? ನಿನ್ಮಕ್ಳಿಗೆ ಇಷ್ಟಾದ್ರೂ ಕೊಡ್‍ಬೇಡ್ವೇ ನಾನು.  ಅವಳು ಮತ್ತೆ ನಕ್ಕಳು "ಈಗ ನೀವು ಹೋತ್ತಿರೋ ದೇವಾಲಯದ ಅರ್ಚಕರಿಗೆ ತುಂಬಾ ಮಕ್ಳು. ಅವ್ರಲ್ಲಿ ಯಾರಿಗಾದ್ರೂಕೊಟ್ಟು ಪುಣ್ಯ ಕಟ್ಕೊಳ್ಳಿ."

ಆವನು ಮುದುಡಿ ಹೋದ. ನೋಟು ಬುಕ್ಕು, ಪೆನ್ನು, ಕ್ಯಾಮರಾ ಹಿಡ್ಕೊಂಡು ಹೊರ ಬಂದ. ಮುರ್ಳೀ, ದೇವಸ್ಥಾನದಿಂದ ನೇರ ನಮ್ಮನೆಗೇ ಕರ್‍ಕೊಂಬಂದ್ಬಿಡು" ಎಂದು ಅವನ ಮಾರ್ಗದರ್ಶಕನನ್ನು ಎಚ್ಚರಿಸಿದಳು. "ಬೆಟ್ಟಕ್ಕೆ ಕಾರಲ್ಲಿ ಹೋಗ್ತೀರಾ" ಎಂದು ಆವಳು ಕೇಳಿದ್ದಕ್ಕೆ, "ಇಲ್ಲ, ಊರು ನೋಡ್ಬೇಕು" ಅಂದ.

ಮುರ್ಳಿ ಮುಂದಿನಿಂದ, ಅವನು ಹಿಂದೆ.  ಒಳಹಾದಿಯಲ್ಲಿ ಹೋಗುವಾಗ ಊರನ್ನು ವೀಕ್ಷಿಸುತ್ತಾ ನಡೆದ.  ಪೇಟೆ ಸಣ್ಣದು.  ಊರಾಚೆ ಮೈದಾನ.  ಅದರ ತುದಿಯಲ್ಲಿ ಎಡಭಾಗಕ್ಕೆ ಬೆಟ್ಟ.  ಅದರ ಮೇಲೆ ಬಹುದೂರಕ್ಕೆ ಕಾಣುವ ದೇವಾಲಯ.

ಮುರ್ಳಿ ಅವನಿಗೆ ತುಂಬಾ ಗೌರವ ಕೊಡುತ್ತಿದ್ದ.  ದನಿಯ ಹೆಂಡತಿ "ಸಾ" ಎಂದು ಕರೆಯುತ್ತಿದ್ದುದನ್ನು ಅವನು ಕೇಳಿಸಿಕೊಂಡಿದ್ದ.  ಬಿ. ಎ. ವರೆಗೆ ಓದಿದ್ದ ಹುಡುಗ  ಚುರುಕಾಗಿದ್ದ ಮುರ್ಳಿಯನ್ನು ಅವನೇ ಮಾತಿಗೆಳೆಯಬೇಕಾಯಿತು. ಅವಳ ಬಗ್ಗೆ, ಅವಳ ಸಂಸಾರದ ಬಗ್ಗೆ ಕೇಳಿದ್ದಕ್ಕೆ ಮುರ್ಳಿ ಗೌರವದಿಂದ ಉತ್ತರಿಸಿದ.  ದನಿಗಳ ಬಗ್ಗೆಯೂ ಹೇಳಿದ. "ಇಬ್ರೂ ಬಾಳಾ ಒಳ್ಳೇವ್ರು ಸಾ.  ಒಂದು ದಿನಾನೂ ಜಗ್ಳಾ ಆಡಿದ್ದನ್ನು ಯಾರೂ ಕಂಡಿಲ್ಲ.  ಅಮ್ಮ ನಮ್ಗೆ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸ್ತಾರೆ.  ತಿಂಗ್ಳಿಗೊಂದು ಪೂಜೆ ಮಾಡ್ಸಿ ಊಟ ಹಾಕ್ತಾರೆ. ಪ್ರತಿವರ್ಷ ಸಂಬ್ಳಾ ಏರಿಸ್ತಾರೆ.  ಆದ್ರೆ ಸಾ ದೇವ್ರಿಗೆ ಕಣ್ಣಿಲ್ಲ.  ಇರೋ ಇಬ್ಬರು ಮಕ್ಳಿಗೂ ಮಂದ ಬುದ್ದಿ. ರಕ್ತ ಸಂಬಂಧದಲ್ಲೇ ಮದ್ವಿಯಾಗಿರೋದ್ರಿಂದ್ಲೇ ಹಿಂಗಾಯ್ತಂತೆ.  ಅಮ್ಮಾವ್ರ ನಂತ್ರ ಇವ್ರ ಹಣಕ್ಕಾಗಿ ಏನೇನೋ ನಡಿಯೋದೂಂತ ಜನಾ ಆಡ್ಕೋತಾರೆ ಸಾ."

ಮುರ್ಳಿಯ ದನಿಯಲ್ಲಿನ ವಿಷಾದದ ಛಾಯೆ ಅವನನ್ನು ಮುತ್ತಿಕೊಂಡಿತು.  ಅವಳು ಕಾಲೇಜಿನಲ್ಲಿ ಇದ್ದಾಗಿನ ದಿನಗಳನ್ನು ನೆನೆದುಕೊಂಡ.  ಸಾಹಿತ್ಯದ ಬಗ್ಗೆ ಅವನು ಚುರುಕಾಗಿ ಓಡಾಡಲು ಕಾರಣವಾಗಿದ್ದವಳು ಅವಳೇ.  ಅವನ ವಿಚಾರಗಳಿಗೆ ಹೊಸ ದಿಕ್ಕನ್ನು ಕೂಡಾ ಆಕೆ ಒಮ್ಮೊಮ್ಮೆ ತೋರಿಸುತ್ತಿದ್ದಳು.  ಸಂಪ್ರದಾಯಗಳೆಲ್ಲಾ ಸ್ತ್ರೀ ಶೋಷಣೆಯ ಪರಿಕರಗಳೆಂದೂ, ಗಂಡಿನಷ್ಟೇ ಸ್ವಾತಂತ್ರ್ಯ ನೀಡದ ಸಮಾಜ ವೈಜ್ಞಾನಿಕವಾಗಿ ಎಂದಿಗೂ ಮುಂದುವರಿಯದೆಂದೂ ಆಕೆ ಆಗಾಗ ವೇದಿಕೆಗಳಲ್ಲಿ ಹೇಳುತ್ತಿದ್ದುದು ಅವನಿಗೆ ನೆನಪಾಯಿತು.  ಅವಳಿಗೆ ಮಂದ ಬುದ್ದಿಯ ಮಕ್ಕಳು !

ಅವನಿಂದ ಅದನ್ನು ಕಲ್ಪಿಸಿಕೊಳ್ಳುವುದೇ ಕಷ್ಟವಾಯಿತು.  ಅವರಾಗ ಮೈದಾನ ದಾಟಿ ಬೆಟ್ಟ ಹತ್ತಲು ತೊಡಗಿದ್ದರು.  ತಂಗಾಳಿ ಮೃದುವಾಗಿ ತೀಡತೊಡಗಿತ್ತು.  ಹತ್ತುತ್ತಿದ್ದಂತೆ ಮುರ್ಳಿ ಹೇಳಿದ.  "ಇದಕ್ಕೆ ತಿಮ್ಮನ ಬೆಟ್ಟ ಅಂತಾರೆ."

ಆವನ ಕಿವಿಗಳು ಚುರುಕಾದವು.  ಎಲ್ಲಿಯ ತಿಮ್ಮ, ಎಲ್ಲಿಯ ಪಶುಪತಿ?  ಅವನು ಕುತೂಹಲದಿಂದ ಕೇಳಿದ. "ಯಾಕೇಂತ ನಿಂಗೆ ಗೊತ್ತಾ ಮುರ್ಳಿ?"  ಮುರ್ಳಿ ಹೇಳುತ್ತಾ ಹೇಳುತ್ತಾ ಹೋದ.  "ಇಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತೆ ಸಾ. ಜಾತ್ರೆಗೆ ಹತ್ತು ದಿನಕ್ಕೆ ಮೊದ್ಲು ಧ್ವಜಾ ಏರಿಸ್ತಾರೆ.  ಇಲ್ಲಿನ ಧ್ವಜಕಂಬ ಭಾಳಾ ಎತ್ರದ್ದು. ಒಂದ್ಸಲಾ ಧ್ವಜಾ ಏರ್ಸೋವಾಗ ಹಗ್ಗ ಸಿಕ್ಕೊಂಬುಡ್ತು.  ಧ್ವಜಾ ಮೇಲೇರ್ಲೇ ಇಲ್ಲ.  ಸೇರಿದ್ದ ಜನ ಅಪಶಕುನ ಆಗೋಯ್ತು ಅಂತಾ ಆಡ್ಕೊಂಡ್ರು.  ಅಷ್ಟೆತ್ರದ ಕಂಬ ಹತ್ತಿ ಹಗ್ಗ ಸರಿ ಮಾಡೋ ಧೈರ್ಯ ಯಾರ್‍ಗೂ ಬರ್ಲಿಲ್ಲ.  ಆಗ ಧೈರ್ಯ ಮಾಡಿ ಹತ್ತಿದೋನು ಈ ತಿಮ್ಮ."

"ಓ ! ಅದ್ಕೇ ಇದು ತಿಮ್ಮನ ಬೆಟ್ಟ ಆಗೋಯ್ತಾ?"

"ಇಲ್ಲಿ ಕೇಳಿ ಸಾ. ತಿಮ್ಮ ಆಷ್ಟೆತ್ರದ ಕಂಬಕ್ಕೆ ಹತ್ತಿ ಹಗ್ಗ ಬಿಡಿಸೋವಾಗ ಆ ಮರದ ಕಂಬ ಲಟಾರ ಮುರಿದೋಯ್ತು. ಆಯತಪ್ಪಿ ತಿಮ್ಮ ಬಿದ್ಬಿಟ್ಟ. ಧ್ವಜಕಂಬದ ಎದ್ರು ಬಲಿಕಲ್ಲೂಂತ ಇದೆಯಲ್ಲಾ ಸಾ.  ಆದ್ಕೆ ತಲೆ ತಾಗಿ ದೇವ್ರಿಗೆ ಕಾಯಿ ಒಡೀತಾರಲ್ಲಾ ಸಾ.  ಹಾಗೆ ಚೂರು ಚೂರು ಆಗೋಯ್ತು."

ಮುರ್ಳಿ ಮುಖ ಕಿವುಚಿಕೊಂಡ.  ಅವನೂ ಒಂದು ಕ್ಷಣ ವಿಷಾದದ ಮೌನದಲ್ಲಿದ್ದ.  ಮತ್ತೆ ನಿಧಾನವಾಗಿ ಕೇಳಿದ.  "ಇದೆಲ್ಲಾ ನೀನು ನೋಡಿದ್ದಾ?"

"ಅಯ್ಯೋ ಎಲ್ಬಂತು ಸಾ?  ಇದು ನಮ್ಮಜ್ಜ ಹೇಳಿದ ಕತೆ.  ಎಷ್ಟು ವರ್ಷ ಹಿಂದ್ಲಿದ್ದೋ !  ಆ ವರ್ಷ ಜಾತ್ರೆ ನಿಂತು ಹೋಯ್ತಂತೆ.  ಕೇರಳದಿಂದ ಯಾರನ್ನೋ ಕರ್‍ಸಿ ಅಷ್ಟಮಂಗ್ಲ ಪ್ರಶ್ನೆ ಕೇಳಿದ್ರಂತೆ.  ದೇವಸ್ಥಾನ ಮೈಲಿಗೆ ಆಯ್ತೂಂತ ಅದ್ರಲ್ಲಿ ಕಂಡುಬಂತಂತೆ.  ಆ ಮೇಲೆ ಕಲ್ಲಿನ ಕಂಬ ಮಾಡ್ಸಿ ಬ್ರಹ್ಮಕಳ್ಸಾ ಅಂತೇನೇನೋ ನಡ್ಸೀ, ಮರುವಷ ಜಾತ್ರೆ ಮಾಡಿದ್ರಂತೆ.  ತಿಮ್ಮ ಹೀರೋ ಆಗ್ಬಿಟ್ಟ.  ಆಲ್ಲೀವರ್ಗೆ ಪಶುಪತಿ ಬೆಟ್ಟ ಆಂತಿದ್ದದ್ದು ಜನ್ರ ಬಾಯಲ್ಲಿ ತಿಮ್ಮನ ಬೆಟ್ಟ ಅಂತಾಗೋಯ್ತು."

"ಒಳ್ಳೆ ಹೆಸ್ರು ಬಿಡು. ಹಾಗಾದ್ರೂ ತಿಮ್ಮ ಉಳ್ಕೊಂಡ್ನಲ್ಲಾ?"

"ಅದೂ ಹೋಗಿ ಬಿಡೋದ್ರಲ್ಲಿತ್ತು ಸಾ.  ಈ ಊರು ಚಿಕ್ಕದಾದ್ರೂ‌ ಇಲ್ಲಿನ ಪಾಲ್ಲಿಟಿಕ್ಸು ತುಂಬಾ ಜೋರು.  ಮೊನ್ನೆ ಮೊನ್ನೆ ಇಲ್ಲಿ ಕೆಲ್ಸಾ ಇಲ್ದ ಪುಂಡ್ರು ಸೇರ್‍ಕೊಂಡು ಬೆಟ್ಟಕ್ಕೆ ವಿಷ್ಣುಗಿರಿ ಆಂತ ಹೆಸರಿಡೋದಕ್ಕೆ ಹೊರಟ್ರು ಆದ್ರೆ ಇಲ್ಲಿ ತಿಮ್ಮನ ಜಾತಿಯವರದ್ದೇ ಮೆಜಾರಿಟಿ.  ಮೇಲಾಗಿ ಇಲ್ಲಿನ ಅರ್ಚಕರು ಶೈವ್ರು.  ವಿಷ್ಣುವಿನ ಹೆಸ್ರಿಡೋದಕ್ಕೆ ಸುತಾರಾಂ ಒಪ್ಪೇ ಇಲ್ಲ.  ಆಗ ದೊಡ್ಡ ಹೊಡ್ದಾಟ ನಡೀತು ಸಾ.  ಸೆಂಟ್ರಲ್ ರಿಸರ್ವು ಬಂದು ಟಿಯರ್ ಗ್ಯಾಸ್ ಬಿಟ್ಟು.  ಒಂದು ವಾರ ಇಲ್ಲೇ ಜಂಡಾ ಹೊಡದ್ರು. ಊರ ಹಿರೀರೆಲ್ಲಾ ಸೇರಿ ಶಾಂತಿ ಸಭೆ ಮಾಡಿ, "ಹೆಸ್ರಿಗೊಂದು ಇತಿಹಾಸ ಇರತ್ತೆ.  ಆದ್ರಿಂದ ಯಾವುದೇ ಹೆಸ್ರನ್ನು ಬದಲಾಯಿಸೋದು ತಪ್ಪು" ಅಂತ ತೀರ್ಮಾನಕ್ಕೆ ಬಂದ್ರು. ಕೊನಿಗೂ ತಿಮ್ಮನ ಬೆಟ್ಟ ಅನ್ನೋ ಹೆಸ್ರೇ ಉಳಿಸಿಕೊಂಡ್ರು. "

ಮಾತಾಡುತ್ತಾ ಆವರು ದೇವಾಲಯದ ಆಂಗಣಕ್ಕೆ ಬಂದು ಮುಟ್ಟಿದರು.  ಅಲ್ಲಿಂದ ಇಡೀ ಊರು ಕಾಣುತ್ತಿತ್ತು.  ಬೆಂಕಿ ಪೊಟ್ಟಣದ ಹಾಗೆ ಮನೆಗಳು.  ಇರುವೆಗಳ ಹಾಗೆ  ಮನುಷ್ಯರು.  ಊರನ್ನು ಸುತ್ತಲೂ ತಬ್ಬಿಕೊಂಡಿರುವ ಹಸಿರು.  ಊರಾಚೆ ವಿಶಾಲವಾದ ಕೆರೆ.  ಅದಕ್ಕೂ ಆಚೆ ಚೌಕಾಕಾರದ ಹೊಲಗಳು.

ಅಂಗಣ ಸಾಕಷ್ಟು ದೊಡ್ಡದಿತ್ತು.  ಬಲಬದಿಯಲ್ಲಿ ಉದ್ದಕ್ಕೊಂದು ಕಟ್ಟಡ.  ಎಡಬದಿಯಲ್ಲೊಂದು ಚಪ್ಪರ.  "ಆಲ್ಲಿ ಬಲಕ್ಕಿರೋದು ಬಾಮಿನ್ಸಿಗೆ ಸಾ. ಎಡಕ್ಕಿರೋದು ಶೂದ್ರರಿಗೆ.  ಮುಟ್ಟಿಸ್ಕೋಬಾರ್ದೋರು ಅಲ್ಲಿ ದೂರ ನಿಂತ್ಕೋತಾರೆ.  ಭಾರಿ ಕಾರ್ಣಿಕದ ದೇವಸ್ಥಾನ ಸಾ ಇದು.  ಅದ್ಕೆ ಮಡಿ ಜಾಸ್ತಿ.  ಜಾತ್ರೆಗೆ ದಿನಾ ಊಟ ಇರತ್ತೆ. ಹತ್ತೂರ ಜನಾ ಸೇರ್ತಾರೆ.  ಭಾರೀ ಮಜಾ ಇರತ್ತೆ ಸಾ.  ನೀವು ಜಾತ್ರೆಗೆ ಬರ್ಬೇಕಿತ್ತು."  ಮುರ್ಳಿ ಮಾತಲ್ಲೇ ಜಾತ್ರೆಯ ಸುಖ ಅನುಭವಿಸಿದ.

ಮುರ್ಳಿ ಹೇಳಿದ್ದಕ್ಕೆಲ್ಲಾ ಅವನು ಹೂಂಗುಟ್ಟುತ್ತಿದ್ದ.  ಪ್ರವೇಶ ದ್ವಾರದ ಬಳಿ ಬಂದಾಗ ಅವನ ದೃಷ್ಟಿ ಧ್ವಜ ಕಂಬದತ್ತ ಹೋಯಿತು. ಅಷ್ಟೆತ್ತರದಿಂದ ಬಿದ್ದು  ಬಲಿಕಲ್ಲಿಗೆ ತಲೆಯನ್ನು ತೆಂಗಿನಕಾಯಿಯಾಗಿಸಿದ ತಿಮ್ಮನ ನೆನಪಾಗಿ ಕಸಿವಿಸಿಯಾಯಿತು.  ಪ್ರವೇಶದ್ವಾರದ ಕೆತ್ತನೆಯ ಕೆಲಸಗಳು ಆಕರ್ಷಕವಾಗಿದ್ದರೂ ಅವುಗಳಲ್ಲಿ ಅವನಿಗೆ ವಿಶೇಷವಾದುದೇನೂ ಕಾಣಿಸಲಿಲ್ಲ.

ಪ್ರವೇಶದ್ವಾರದ ಒಳಬದಿಗೆ ಬಂದು ಮೇಲ್ಭಾಗದತ್ತ ದೃಷ್ಟಿ ಹಾಯಿಸಿದ.  ಎತ್ತರದ ಭಾಗದಲ್ಲಿ ಅವನಿಗೆ ಬೇಕಾದುದು ಕಣ್ಣಿಗೆ ಬಿತ್ತು.  ವಿವಿಧ ಭಂಗಿಯ ಮಿಥುನ ಶಿಲ್ಪಗಳು!  ಅವನು ನೋಡುತ್ತಾ ಹಾಗೇ ನಿಂತುಬಿಟ್ಟ.  ಭುಜಕ್ಕೆ ತೂಗು ಹಾಕಿದ ಕ್ಯಾಮರಾದಿಂದ ನಾಲ್ಕೈದು ಫೋಟೋ ಹೊಡೆದ. ಮುರ್ಳಿ ಇದನ್ನು ನೋಡಿ "ಆಲ್ಲೇನಿದೇಂತ ಪೋಟೋ ಹೊಡೀತೀರಾ ಸಾ?  ಇಲ್ಲಿ ಬನ್ನಿ. ದೇವ್ರು ಇಲ್ಲಿದ್ದಾನೆ" ಎಂದು ಗರ್ಭಗುಡಿಯತ್ತ ಕ್ಕೆ ತೋರಿಸಿದ.

ಅವನು "ನೀನಿವುಗಳನ್ನು ನೋಡಿದ್ದೀಯಾ ಮುರ್ಳಿ" ಎಂದು ಶಿಲ್ಪಗಳನ್ನು ತೋರಿಸಿದ.  ಅದೇನೆಂದು ಮುರ್ಳಿಗೆ ನಿಧಾನವಾಗಿ ಆರ್ಥವಾಗತೊಡಗಿ ಅವನು ಕೆಂಪೇರುತ್ತಾ  ಹೋದ.  "ಥೂ ಪೋಲಿ ಶಿಲ್ಪಗಳು ಸಾ. ಅಸಯ್ಯ" ಎಂದು ಮುಖ ಕಿವುಚಿದ.  "ಇಲ್ಲಿಗೆ ವಾರಕ್ಕೊಮ್ಮೆ ಬರ್ತಿರ್ತೀನಿ ಸಾ ‌ಆದ್ರೆ ಇವನ್ನ ನೋಡೋದು ಇದೇ ಮೊದ್ಲು.  ಇವನ್ನು ನೋಡ್ತಾ ಇದ್ರೆ ದೇವ್ರ ನೆನಪಾಗೋದುಂಟಾ ಬನ್ನಿ ಸಾ ದೇವರತ್ರ ಹೋಗಾನ" ಎಂದು ಕೈ ಹಿಡಿದೆಳೆದ.

ಅಲ್ಲಿದ್ದದ್ದು ಅರ್ಚಕರು ಮಾತ್ರ.  ಅವರಿಬ್ಬರ ಮಾತು ಕೇಳಿ ದೂರದಲ್ಲಿದ್ದ ಅವರು ಕುತೂಹಲದಿಂದ ಹತ್ತಿರ ಬಂದರು.  ದೇವಾಲಯಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದ ಅವನ ವಿಚಾರ ತಿಳಿದು ಸಂತೋಷಪಟ್ಟರು.  ಅರ್ಚಕರು ಒಂದು ಒಂದು ಫೋಟೋ ತೆಗೆದಾಗ ಅವರು ಖುಷಿಯಿಂದ ಜನಿವಾರ ನೀವಿಕೊಂಡರು. ಮುರ್ಳಿಯೂ ಒಂದು ಪೋಸು ಕೊಟ್ಟ.  ಮುರ್ಳಿ ಅಡ್ಡಬಿದ್ದು ಪ್ರಸಾದ ತೆಗೆದುಕೊಳ್ಳುವಾಗ ಆತ ಇನ್ನೊಂದು ಫೋಟೋ ಹೊಡೆದ.  ಮುರ್ಳಿಗೆ ತುಂಬಾ ಖುಷಿಯಾಯಿತು.

ಒಳಭಾಗದ ಕಲ್ಲು ಹಾಸಿನ ಮೇಲೆ ಮೂವರೂ ಕೂತರು.  ದೇವಾಲಯದ ಇತಿಹಾಸ ಅರ್ಚಕರಿಗೆ ಗೊತ್ತಿರಲಿಲ್ಲ.  ಸ್ಥಳ ಪುರಾಣದ ಬಗ್ಗೆ ತುಂಬಾ ಹೇಳಿದರು.  "ನೀವು ಮುರ್ಳಿಗೆ ತೋರಿಸುತ್ತಿದ್ರಲ್ಲಾ ಆ ಶಿಲ್ಪಗಳು.  ಅವುಗಳನ್ನು ದೇವಸ್ಥಾನದಲ್ಲೇಕೆ ಕೆತ್ತುತ್ತಾರೆ ಆನ್ನೋದು ನನಗೆ ಇನ್ನೂ ಗೊತ್ತಾಗಿಲ್ಲ.  ಮುರ್ಳಿಗೆ ಹೇಳುತ್ತಿದ್ದುದೆಲ್ಲಾ ನನಗೆ ಕೇಳಿಸ್ತು. ಆದ್ರೆ ಸಂಶಯ ಹಾಗೆ ಉಳ್ಕೊಂಬಿಟ್ಟಿದೆ."

ಅವನು ನಕ್ಕ.  "ನಾನು ಓದಿ ತಿಳ್ಕೊಂಡಿರೋದನ್ನ ಹೇಳಬಲ್ಲೆ.  ಬಹಳ ಹಿಂದೆ ದೇವಾಲಯಗಳು ಊರಿನ ಇಡೀ ಸಾಂಸ್ಕೃತಿಕ ಬದುಕನ್ನು ರೂಪಿಸುತ್ತಿದ್ದುವಂತೆ.  ಬರೀ ನಮಸ್ಕಾರ ಮಾಡಲು ಜನ ದೇವಾಲಯಕ್ಕೆ ಬರುತ್ತಿದ್ದುದಲ್ಲ.  ಹುಟ್ಟು, ಮದುವೆ, ಸಾವು, ಹಬ್ಬ ಎಲ್ಲಾ ದೇವಾಲಯಗಳಲ್ಲೇ ಆಚರಿಸಲ್ಪಡುತ್ತಿದ್ದುವಂತೆ.  ಸೃಷ್ಟಿಗೂ ದೇವಾಲಯಗಳು ಮಹತ್ವ ನೀಡುತ್ತಿದ್ದವಂತೆ.  ಅದಕ್ಕೇ ಪೂಜಾಸ್ಥಳಗಳಲ್ಲಿ ಮೈಥುನದ ಶಿಲ್ಪಗಳನ್ನು ಕೆತ್ತಿದರು.  ಸೃಷ್ಟಿ ಕ್ರಿಯೆಯಲ್ಲಿ ದ್ಯೆವತ್ವವನ್ನು ಕಂಡರು.  ಲಿಂಗ ಮತ್ತು ಪಾಣಿ ಪೀಠಗಳ ಸಂಕೇತ ನಿಮಗೆ ಗೊತ್ತಲ್ಲಾ?"

ಅವನ ಪ್ರಶ್ನೆಗೆ ಅರ್ಚಕರು ಗಹಗಹಿಸಿ ನಕ್ಕರು.  ಮುರ್ಳಿ ತನ್ನ ಕೈಯ ಕರವಸ್ತ್ರವನ್ನು ತಿರುಚಿದ ಕೆಳತುಟಿಯನ್ನು ಕಚ್ಚಿಕೂಂಡ.  "ನೀವು ಹೇಳೋದನ್ನು ನಾನು ನಂಬೋಲ್ಲ ಸಾ" ಎಂದು ಕಷ್ಟಪಟ್ಟು ಹೇಳಿದ.

ಅರ್ಚಕರ ಮುಖದಲ್ಲಿ ನಗು ಲಾಸ್ಯವಾಡುತ್ತಿತ್ತು.  "ನಿಮ್ಮ ತರ್ಕ ಸರಿ.  ಇಲ್ಲಿಗೆ ಬರೋ ಜನನ್ನ ನೋಡಿದ್ರೆ ನಂಗೇ ಒಮ್ಮೊಮ್ಮೆ ಬೇಸರ ಆಗುತ್ತೆ.  ಎಲ್ಲಾ ಆಚಾರ ಮತ್ತು ಶೋ ಮಾತ್ರ.  ವಿಚಾರ ಏನೂ ಇರೋದಿಲ್ಲ.  ವಿಚಾರವೇ ಇಲ್ಲದ ಆಚಾರಕ್ಕೆ ಏನು ಆರ್ಥವಿದೆ ಆಲ್ವೆ?"

ಆವನು ತಲೆದೂಗಿದ.  "ನನ್ನ ಆಧ್ಯಯನಕ್ಕೆ ನಿಮ್ಮ ಸಹಾಯ ಬೇಕು.  ಈ ದೇವಾಲಯದ ಇತಿಹಾಸ ನನಗೆ ಎಲ್ಲಿ ಸಿಗಬಹುದು ಹೇಳ್ತೀರಾ?"

"ಓಹೋ ಅದಕ್ಕೇನು? ನೀವು ಇವರ ದೊಡ್ಡ ದನಿಗಳನ್ನು ನೋಡಿದ್ರಾಯ್ತು.  ಪಾಪ ವಯಸ್ಸಾಗಿದೆ.  ಅವರಷ್ಟು ತಿಳ್ಕೊಂಡಿರೋರು ಈ ಫಾಸಲೆಯಲ್ಲಿ ಯಾರೂ ಇಲ್ಲ.  ದೇವಾಲಯದ ಕಲ್ಲು ಕಲ್ಲೂ ಆವರಿಗೆ ಗೊತ್ತು.  ಅವ್ರನ್ನೇ ಕೇಳಿ ತಿಳ್ಕೊಂಡ್ರಾಯ್ತು ಬಿಡಿ" ಎಂದು ಅರ್ಚಕರು ಮುರ್ಳಿಗೆ ಒಂದು ಪೊಟ್ಟಣ ಕೊಟ್ಟು "ಯಜಮಾನ್ರಿಗೆ ಪ್ರಸಾದ" ಎಂದು ಇವನತ್ತ ನೋಡಿ "ನೀವು ನಮಸ್ಕಾರ ಮಾಡಿದ್ದನ್ನ ನೋಡ್ಲಿಲ್ಲ.  ಬಲವಂತತಕ್ಕೆ ಪ್ರಸಾದ ಕೊಡೋವನಲ್ಲ ನಾನು" ಎನ್ನುತ್ತಾ ನಕ್ಕರು.

ಅವನೂ ನಕ್ಕ.  "ಸಾಂಸ್ಕೃತಿಕವಾಗಿ ದೇವಾಲಯಗಳು ಮಹತ್ವ ಪಡೆದರೆ, ಎಲ್ಲಾ ಜಾತಿಗಳ ಜನರನ್ನು ಸಮಾನವಾಗಿ ದೇವಾಲಯಗಳಿಗೆ ನೋಡೋಕ್ಕೆ ಸಾಧ್ಯವಾದರೆ  ಎಷ್ಟು ಒಳ್ಳೆಯದಿತ್ತು ಅಲ್ವಾ?  ಹಣ ಮತ್ತು ಜಾತಿಯೇ ದೇವರಿಗೆ ಮುಖ್ಯ ಎಂದಾಗ ಕೂಡದು ಎನ್ನುವವ ನಾನು.  ಆದುದರಿಂದ ಇನ್ನೂ ನನ್ನ ಕೆಲವು ಸಂಶಯಗಳು ಹಾಗೆ  ಉಳಿದಿವೆ" ಅಂದ.

ಅವನು ನಿಧಾನವಾಗಿ ಎದ್ದ.  "ಪ್ರಯಾಣದ ಸುಸ್ತು.  ನಾಳೆ ಬೆಳಿಗ್ಗೇ ಬಂದ್ಬಿಡ್ತೀನಿ.  ನಿಮ್ಮಿಂದ ತುಂಬಾ ತಿಳ್ಕೋಬೇಕು ನಾನು" ಎಂದದ್ದಕ್ಕೆ ಅರ್ಚಕರು, "ನೀವು  ಎಷ್ಟೊಂದು ಓದ್ಕೊಂಡಿದೀರಿ!  ಬಾಳಾ ಇಂಟ್ರೆಸ್ಟಿಂಗ್ ಇದ್ದೀರಿ ನೀವು!  ನಾಳೆ ಸಂಜೆ ನನಗೆ ಬಿಡುವಿರತ್ತೆ.  ದೇವಾಲಯಗಳ ಬಗ್ಗೆ ನೀವು ಓದಿದ್ದನ್ನು ಹೇಳಿದ್ರೆ ಸಾಕು. ನಂಗೂ ಒಂದು ಚೇಂಜು ಸಿಗುತ್ತೆ" ಎಂದು ಅವನನ್ನು ಬೀಳ್ಕೊಟ್ಟರು.

ವಾಪಸ್ಸು ಬರುವಾಗ ಮುರ್ಳಿ ಮಾತಾಡಲೇ ಇಲ್ಲ.  ಶಿಲ್ಪಗಳನ್ನು ನೋಡಿದ ಶಾಕ್‍ನಿಂದ ಆತ ಹೊರಬಂದಿರಲಿಲ್ಲ.  ಅರ್ಚಕರ ಮಾತು ಆವನನ್ನು ಮತ್ತಷ್ಟು, ಗೊಂದಲಕ್ಕೆ ದೂಡಿತ್ತು.  ಮೌನದಲ್ಲಿ ದಾರಿ ಸಾಗಿತು.

ಅವಳ ಮನೆಗೆ ಮುಟ್ಟುವಾಗ ಮಬ್ಬುಗತ್ತಲು ಕವಿಯುತ್ತಿತ್ತು.  ಮುರ್ಳಿ ಕಂಪೌಂಡು ಗೇಟಿನಿಂದಲೇ ಆವನನ್ನು ಬೀಳ್ಕೊಂಡ.  "ನಾಳೆ ಬೆಳಿಗ್ಗೆ ದೇವಸ್ಥಾನಕ್ಕೆ  ಬರ್ತಿಯಾ ಮುರ್ಳಿ" ಎಂದು ಕೇಳಿದ್ದಕ್ಕೆ  "ನೋಡೋಣ" ಎಂದು ವಿಶ್ವಾಸವೇ ಇಲ್ಲದ ದನಿಯಲ್ಲಿ ಅವನು ಉತ್ತರಿಸಿದ.

ಅವಳದು ದೊಡ್ಡ ಮನೆ.  ಮಾವನಿಗೆ ಪಾರ್ಶ್ವವಾಯು.  ಅತ್ತೆ ಹಿಂದಿನ ವರ್ಷ ತೀರಿಕೊಂಡಿದ್ದರು.  ಮನೆಯಲ್ಲಿ ಇಬ್ಬರು ಆಳುಗಳು.  ಅವಳು ಮನೆಯನ್ನು ತೋರಿಸುತ್ತಾ ಅವನನ್ನು ದೊಡ್ಡದಾದ ಕೋಣೆಯೊಂದಕ್ಕೆ ಕರೆದುಕೊಂಡು ಹೋದಳು.  ಅಲ್ಲಿ ಆರು ಕಪಾಟು ಭರ್ತಿ ಪುಸ್ತಕಗಳು!  ಇದು ನಿಮ್ದೇ ಪ್ರಭಾವ ಸಾ.  ಈಗ್ಲೂ ಎಷ್ಟೊಂದು ಓದ್‍ತಿರ್ತೀನಿ ಗೊತ್ತಾ?"  ಎಂದು ಹೆಮ್ಮೆಯಿಂದ ಹೇಳಿಕೊಂಡಳು.  ನಿಮಗೆ ಇಲ್ಲಿ ವ್ಯವಸ್ಥೆ ಮಾಡಿದ್ದೀನಿ" ಎಂದು ಮಹಡಿ ತೋರಿಸಿ ಮೇಲಕ್ಕೆ ಹತ್ತಿದಳು.  ಒಂದು ಕೋಣೆಯ ಬಾಗಿಲು ತೆಗೆದು, "ನಿಮ್ಮ ಸ್ಟಡಿ ಮುಗಿಯೋವರ್ಗೂ ಇದು ನಿಮ್ದೇ" ಎಂದಳು.

ಡಬಲ್‍ಕಾಟ್ ಹಾಕಿದ ದೊಡ್ಡ ಕೋಣೆ ಅದು.  ವಾರ್ಡ್ರೋಬ್, ನಿಲುವುಗನ್ನಡಿ, ಬುಕ್‍ರ್‍ಯಾಕ್, ಟೇಬಲ್ಯಾಂಪು, ಸ್ಟೀರಿಯೋ ಉಳ್ಳ ಏರ್ಕಂಡಿಶನ್ಡ್ ರೂಮು.  ಅದಕ್ಕೆ ಅಟ್ಯಾಚ್ಡ್ ಬಾತ್‍ರೂಂ ಮತ್ತು ಟ್ಯಾಲೆಟ್ಟು.  ಅವನ ಬ್ಯಾಗು ಆಲ್ಲೇ ಟೇಬಲ್ ಮೇಲೆ ಅವನನ್ನು ಕಾಯುತ್ತಿತ್ತು.  "ನಲ್ಲಿಯಲ್ಲಿ ಬಿಸಿನೀರು ಬರ್ತದೆ.  ಆರ್ಧ ಗಂಟೆಯಲ್ಲಿ ಎಲ್ಲಾ ಮುಗ್ಸಿ ಊಟಕ್ಕೆ ಕೆಳಕ್ಕೆ ಬಂದ್ಬಿಡಿ. ಮಾವ ಕಾದಿರ್ತಾರೆ" ಎಂದು ಕೆಳಗಿಳಿದು ಹೋದಳು.

ಹಿತವಾದ ಬಿಸಿನೀರು ಸ್ನಾನ ಮುಗಿಸಿ ಅವನು ಕೆಳಗಿಳಿದ.  ಮಾವ ವೀಲ್‍ಚೇರ್ನಲ್ಲಿ ಕೂತು ಟಿ.ವಿ. ನೋಡುತ್ತಿದ್ದರು. ಅವನು ನಮಸ್ಕಾರ ಮಾಡಿದಾಗ ಬಲದ ಕೈ ಎತ್ತಿದರು.  ಅವಳು ಮಾವನ ಪಕ್ಕದ ಚೇರೊಂದರಲ್ಲಿ ಕೂತು ಅವನನ್ನು ಕಾಯುತ್ತಿದ್ದಳು.  ಮಾವ ನಿಧಾನವಾಗಿ "ನಿಮ್ಮ ಬಗ್ಗೆ ಎಲ್ಲಾ ಹೇಳಿದ್ಲು. ನೀವು ದೇವಸ್ಥಾನಗಳ ಬಗ್ಗೆ ಏನೋ ರಿಸಚ್೯ ಮಾಡ್ತೀದ್ದೀರಂತೆ." ಯಾವ ಸಬ್ಜೆಕ್ಟು ಎಂದು ಕೇಳಿದರು.

ಅವರ ನೇರಕ್ರಮ ಅವನಿಗೆ ತುಂಬಾ ಹಿಡಿಸಿತು.  "ದೇವಾಲಯಗಳ ಮಿಥುನ ಶಿಲ್ಪಗಳು ನನ್ನ ಸಬ್ಜೆಕ್ಟು.  ಆರಾಧನಾ ವಿಧಾನಗಳ ವಿಕಾಸದ ಬಗ್ಗೆಯೂ ಟಚ್ಚ್ ಮಾಡ್ತಿದೀನಿ.  ನಿಮ್ಮ ದೇವಾಲಯದಲ್ಲಿ ಕೆಲವು ಹೊಸ ಶಿಲ್ಪಗಳನ್ನು ನೋಡಿದೆ" ಎಂದ.

ಅವರ ಬಲ ಹುಬ್ಬು, ಒಮ್ಮೆ ಮೇಲೇರಿತು.  "ನನಗೆ ಇನ್ನೂ ಅರ್ಥವಾಗಿಲ್ಲ ನೋಡಿ ಸಾಮಾನ್ಯವಾಗಿ ವಿಷ್ಣುವಿನ ದೇವಾಲಯಗಳಲ್ಲಿ ಅಂತಹ ಶಿಲ್ಪಗಳಿರುತ್ತವೆ. ಪಶುಪತಿಯನ್ನು ಲಿಂಗ ರೂಪದಲ್ಲಿ ಆರಾಧಿಸಲಾಗುತ್ತದೆ.  ಶೈವ ದೇವಾಲಯಗಳಲ್ಲಿ ಈ ತೆರನ ಶಿಲ್ಪಗಳಿರೋದನ್ನ ಬೇರೆಲ್ಲೂ ಕಂಡಿಲ್ಲ"

"ಹಾಗೇನೂ ಇಲ್ಲ.  ಮೈಥುನನ್ನು ಅತ್ಯಂತ ಸಹಜ ಅವಸ್ಥೆ ಎಂದು ಸ್ವೀಕರಿಸಿದ ಹಿರಿಯರು ಶೈವ ದೇವಾಲಯಗಳಲ್ಲೂ ಅಂತಹ ಶಿಲ್ಪಗಳಿಗೆ ಅವಕಾಶ  ನೀಡಿದ್ದಾರೆ" ಆವನೆಂದ.

"ಹಾಗೇನು?  ಉರ್ಳಿ ನಿಮ್ಗೆ ಒಂದಷ್ಟು ತಿಳಿಸಿಬೇಕು.  ಇಮ್ಮನ ಬೆಟ್ಟದ ಗಲಾಟೆ ಬಗ್ಗೆ.  ಬೆಟ್ಟಕ್ಕೆ ಆ ಹೆಸರು ಬಂದ ಬಗ್ಗೆ.  "ಅವನು ಹೌದೆಂದು ತಲೆಯಾಡಿಸಿದ.  ಅವರು ಮುಂದುವರಿಸಿದರು.  "ಈಗಿನವರಿಗೆ ಗೊತ್ತಿರದ ವಿಷಯ ಒಂದುಂಟು.  ತಿಮ್ಮನ ಸಾವು ಆಕಸ್ಮಿಕ ಅಲ್ಲ.  ಅದೊಂದು ಯೋಚಿತ ಕೊಲೆ!"

ಅವನು ಸ್ತಬ್ಬನಾದ.  ಅವಳದ್ದೂ ಅದೇ ಅವಸ್ಥೆ.  ಅವರಿಬ್ಬರನ್ನೂ ಗಮನಿಸಿದ ಮಾವ ನಿಧಾನವಾಗಿ ಮಾತು ಮುಂದುವರಿಸಿದರು. "ನಿಮ್ಮ ರಿಸರ್ಚ್ಗೆ ನೆರವಾದೀತು ಎಂದು ಇದನ್ನು ಹೇಳುತ್ತಿದ್ದೇನೆ.  ದೇವಸ್ಥಾನದ ಧ್ವಜ ಕಂಬ ಗೆದ್ದಲು ತಿಂದು ಮುರಿಯುವುದರಲ್ಲಿತ್ತು.  ಅದು ಅರ್ಚಕರಿಗೆ ಚೆನ್ನಾಗಿ ಗೊತ್ತಿತ್ತು.  ತಿಮ್ಮನ ಸಾಹಸದ ಮೇಲೆ ನಂಬಿಕೆಯಿದ್ದುದರಿಂದ ಧ್ಚಜ ಏರಿಸುವಾಗ ಹಗ್ಗದ ಗಂಟು ಬಿಗಿಯುವಂತೆ ಮಾಡಿದ್ದು ಆವರೇ.  ತಿಮ್ಮ ದೇವಸ್ಥಾನದ ಕಾವಲುಗಾರ ನೋಡಿ, ಧೈರ್ಯ ಮಾಡಿ ದ್ವಜಕಂಬಕ್ಕೆ ಹತ್ತಿದ.  ಮುಂದಿನದ್ದು ನಿಮಗೆ ಗೊತ್ತೇ ಇದೆ".

ಅವನಿಗೆ ನಂಬಿಕೆ ಬರಲಿಲ್ಲ.  "ತಿಮ್ಮನನ್ನು ಅವರು ಯಾಕೆ ಕೊಲ್ಲಿಸಬೇಕಿತ್ತು ಅದೂ ಜಾತ್ರೆ ನಿಲ್ಲುತ್ತದೆಂದು ತಿಳಿದೂ?"  ಅವರ ಮುಖದಲ್ಲಿ ಮಂದಹಾಸ ಜಿನುಗಿತು.  ಸ್ವರ ತಗ್ಗಸಿ ನಿಧಾನವಾಗಿ ಹೇಳಿದರು. "ಆಗಿನ ಆರ್ಚಕರಿಗೆ ಸಂತಾನ ಲಕ್ಷ್ಮಿ ಒಲಿದಿರಲಿಲ್ಲ.  ಅವರ ಹೆಂಡತಿ ಹೇಗಿದ್ದರಂತೆ ಗೊತ್ತಾ? ನಮ್ಮ ಸಿನಿಮಾದವರನ್ನು ಅವರ ಮುಂದೆ ನಿವಾಳಿಸಿ ಒಗೆಯಬೇಕು.  ಪಶುಪತಿಯನ್ನು ಏಳುರಾತ್ರಿ ಏಕಾಂತದಲ್ಲಿ ಪ್ರಾರ್ಥಿಸಿ ಒದ್ದೆ ಬಟ್ಟಿಯಲ್ಲಿ ಉರುಳುಸೇವೆ ಮಾಡಿದ್ರೆ ಪಶುಪತಿ ಸಂತಾನಭಾಗ್ಯ ಕರುಣಿಸುತ್ತಾನೆ ಎನ್ನುವುದು ಇಲ್ಲಿನ ನಂಬಿಕೆ ಸೋಡಿ.  ಆ ಅಮ್ಮ ಏಳು ರಾತ್ತಿ ಸೇವೆ ಮಾಡಿದ್ದು.  ಗರ್ಭವತಿಯೂ ಆದ್ಲು."  ಅವರು ಮಾತು ನಿಲ್ಲಿಸಿದರು.

"ಅದಕ್ಕೆ ತಿಮ್ಮನನ್ನು ಯಾಕೆ ಕೊಲ್ಲಿಸಬೇಕಿತ್ತು?"

ಅವನ ಪ್ರಶ್ನೆಗೆ ಅವರು ನಕ್ಕರು.  "ಅಯ್ಯೋ ನಿಮ್ಮ!  ನಿಮಗೆ ಅರ್ಥ ಆಗಲಿಲ್ಲ?  ಆ ಚೆಂದುಳ್ಳಿ ಹಸಿ ಹೆಣ್ಣು ರಾತ್ರೆ ಒದ್ದೆ ಬಟ್ಟೆಯಲ್ಲಿ ಒಂಟಿಯಾಗಿ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಅಲ್ಲಿರುತ್ತಿದ್ದುದು ತಿಮ್ಮ ಮಾತ್ರ.  ಆಗ ಅವನಿಗೆ ನಲುವತ್ತು ಇರಬಹುದೇನೋ?  ಕಷ್ಟಪಟ್ಟು ಬೆಳೆದ ಗಟ್ಟಿಜೀವ.  ಉಪ್ಪು ಹುಳಿ ತಿಂದ ದೇಹ ನೋಡಿ.  ಅದೂ ಆ ಅಮ್ಮ ಅವಳಾಗಿಯೇ ಬಂದು ಇವನನ್ನು ತಬ್ಬಿಕೊಂಡಾಗ ಏನಾಗಬೇಕೋ ಆದು ಆಯ್ತು.  ಅರ್ಚಕರಿಗೂ ಗೊತ್ತಿತ್ತು.  ಉರುಳುಸೇವೆಯಿಂದ ಮಕ್ಕಳಾಗುವುದಿಲ್ಲ ಎಂದು.  ಹಿಂದಿನ ಅರ್ಚಕರಿಗೆ ಸಂತಾನಭಾಗ್ಯ ನೀಡುವ ಶಕ್ತಿ ಇತ್ತು.  ಇವರಿಗೆ ಅದು ಇರಲಿಲ್ಲ.  ಅರ್ಚಕರಿಗೇ ಮಕ್ಕಳಾಗದಿದ್ದರೆ ಸ್ಥಳದ ಕಾರ್ಣಿಕವನ್ನು ಯಾರು ನಂಬುತ್ತಾರೆ?  ಹೇಗಾದರೂ ಸ್ಥಳದ ಕಾರ್ಣಿಕವನ್ನು ಉಳಿಸಿಕೊಳ್ಳಬೇಕಿತ್ತು.  ಗುಟ್ಟನ್ನೂ ಕಾಪಾಡಿಕೊಳ್ಳಬೇಕಿತ್ತು.  ಸಾಧುಪ್ರಾಣಿ ತಿಮ್ಮ ಅದಕ್ಕೆ ಹೇಳಿಮಾಡಿಸಿದಂತಿದ್ದ.  ಆದರೂ ಎಲ್ಲಾದರೂ ಗುಟ್ಟು ರಟ್ಟಾದೀತೆಂದು ಹೆದರಿ ಅವನನ್ನು ಮುಗಿಸಿಬಿಟ್ಟರು.  ಈಗಲೂ ಇಲ್ಲಿನ ಮುಖ್ಯ ಆಕರ್ಷಣೆ ಈ ಕಾರಣಿಕವೇ".

ಅವರು ಜೋರಾಗಿ ನಕ್ಕರು.  ಅವಳಿಗೂ ನಗು ತಡೆಯಲಾಗಲಿಲ್ಲ.  ಅವನು ಮಾತ್ರ ನಗಲಿಲ್ಲ.  ಮಾವ ಅವನನ್ನು ಗಮನಿಸಿ "ನಿಯೋಗ ಕ್ರಮದಿಂದ ಮಕ್ಕಳನ್ನು ಪಡೆಯುವುದಕ್ಕೆ ಶಾಸ್ತ್ರಾಧಾರವಿದೆಯಲ್ಲಾ?" ಎಂದು ಕೇಳಿದರು.

"ಅದೇನೋ ಸರಿಯೇ.  ಆದರೆ ನಿಯೋಗ ಕ್ರಿಯೆಗೆ ಬುದ್ದಿವಂತರನ್ನು ಮಾತ್ರವೇ ಆರಿಸುತ್ತಿದ್ದರು.  ಪ್ಲೇಟೋನ ರಿಪಬ್ಲಿಕ್ ಓದಿದ್ದೀರೇನೋ?  ಆದರಲ್ಲಿ ಮಕ್ಕಳನ್ನು ಮೇಧಾವಿ ಗಂಡಸಿಂದ ಮಾತ್ರ ಪಡೆಯಬೇಕೆಂದಿದೆ.  ಆದರೆ ನಿಮ್ಮ ತಿಮ್ಮ ಎಂಥ ಮೇಧಾವಿ?"

ಅವಳ ಮಾವ ಮತ್ತೊಮ್ಮೆ ನಕ್ಕರು.  "ಶಾಸ್ತ್ರದಲ್ಲಿ ಆನುಕೂಲ ಶಾಸ್ತ್ರ ಅಂತ ಒಂದಿದೆ ನೋಡಿ.  ಸಂತಾನ ಅಗುವುದು ಇಲ್ಲಿ ಮುಖ್ಯವಾಗಿತ್ತು.  ಎಂತಹ ಬೀಜ ಎಂಬುದಲ್ಲ.  ಕಾರಣಿಕ ಮತ್ತು ಗುಟ್ಟು ಉಳಿಸುವುದಕ್ಕೆ ತಿಮ್ಮನಂತ ವ್ಯಕ್ತಿ ಬೇರೆ ಇರಲಿಲ್ಲ.  ಕೊನೆಗೂ ಮಾತೃತ್ವ ಮಾತ್ರ ವಾಸ್ತವ ಮತ್ತು ಪಿತೃತ್ವ ಕಲ್ಪನೆಯೇ ಅಲ್ಲವೇ?"

ಈಗ ಅವನಿಗೂ ನಗು ಬಂತು. "ಹಾಗಾದರೆ ಈ ಗುಟ್ಟು ಹೊರಬಂದದ್ದು ಹೇಗೆ?"

"ಓ ಅದೋ? ತಿಮ್ಮ ಸತ್ತ ದಿನದಿಂದ್ಲೇ ಆಯಮ್ಮ ಮಂಕಾಗಿದ್ಲಂತೆ.  ಏನೇನೋ ಮಂತ್ರ, ತೀರ್ಥ, ತಾಯಿತ ಯಾವುದೂ ಪ್ರಯೋಜನಕ್ಕೆ ಬರ್ಲಿಲ್ಲ. ದೇವರ ದಯೆಯಿಂದ  ಗರ್ಭಕ್ಕೇನೂ ತೊಂದರೆಯಾಗಲಿಲ್ಲ.  ಮಗು ಕೂಡಾ ಆರೋಗ್ಯವಾಗೇ ಇತ್ತು.  ಆದರೆ ಆಯಮ್ಮ ಮತ್ತೂ ಮಂಕಾಗಿಯೇ ಇದ್ಲಂತೆ.  ಹೆರಿಸಲಿಕ್ಕೆ ಬಂದ ಸೂಲಗಿತ್ತಿಯಲ್ಲಿ ಈ  ಮಗುವಿನ ಅಪ್ಪ ಧ್ವಜಕಂಬದಿಂದ ಬಿದ್ದು ಸತ್ತ ಎಂದದ್ದೇ ಊರಿಗೆಲ್ಲಾ ವಿಷಯ ಗೊತ್ತಾಯಿತು.  ಮಗುವಿಗೆ ಒಂದು ತಿಂಗಳಾಗುವಾಗ ಅಮ್ಮ ನೇಣು ಹಾಕ್ಕೊಂಡ್ಳಂತೆ.  ಅದು ತಿಮ್ಮನ ಪ್ರೇತ ಚೇಷ್ಟೆ ಎಂದು ಅರ್ಚಕರು ಶಾಂತಿ ಹೋಮ ಮಾಡಿಸಿದ್ರಂತೆ.  ಊರವರು ನಂಬಿದ್ರು.  ಕಾಲ ಎಲ್ಲವನ್ನೂ ನುಂಗಿ ಬಿಡುತ್ತೆ ನೋಡಿ."

ಸ್ವಲ್ಪ ಹೊತ್ತು ವಿಷಾದದ ಮೌನ. ಅವನು ಮೌನದ ಚಿಪ್ಪನ್ನೊಡೆದ. "ಮಗುಬೇಕೆಂದು ಹಂಬಲಿಸಿ ವ್ರ್‍ಅತ ಮಾಡಿ ತಿಮ್ಮನಿಂದ ಮಗುವನ್ನು ಪಡೆದ ಆ ಅಮ್ಮ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನವರಾಗಿರಲು ಸಾಧ್ಯವೇ?  ಇಲ್ಲೂ ಒಂದು ಕೊಲೆಯ ಸಂಚು ಇರಲಾರದೇಕೆ?"

ಅವಳ ಮಾವ ಒಂದು ಬಾರಿ ಕೆಮ್ಮಿದರು.  "ನಿಮ್ಮ ತರ್ಕವೇನೋ ಸರಿಯೇ.  ಆ ಅಮ್ಮ ಪಾಪಪ್ರಜ್ಞೆ ಕಾಡಿ ದುರ್ಬಲ ಗಳಿಗೆಯೊಂದರಲ್ಲಿ ಹಗ್ಗ ತಗೊಂಡದ್ದೆಂದು ನನಗನಿಸುವುದಿಲ್ಲ.  ತಿಮ್ಮನನ್ನು ಕೊಂದದ್ದೇ ಅಮ್ಮನ ಮನಸ್ಸು ಅಸ್ವಸ್ಥವಾಗಲು ಕಾರಣವಾಗಿರಬೇಕು.  ಮಗು ಪಡೆದದ್ದು ಗಂಡನ ಸಮ್ಮತಿ ಇದ್ದೇ ಅಲ್ಲವೇ? ಅದು ಪಾಪ ಎಂಬ ಭಾವನೆ ಇದ್ದಿದ್ದರೆ ಅವರು ಉರುಳುಸೇವೆಗೆ ಹೋಗ್ತಾನೇ ಇದ್ದಿರಲಿಲ್ಲ.  ತಿಮ್ಮನ ಕೊಲೆಗೆ ತಾನೇ ಕಾರಣನಾದೆ ಎಂಬ ನೋವಿನಿಂದ ಅವರು ಹಗ್ಗ ತೆಗೊಂಡಿರಬೇಕು."

ಅವನು ತಲೆದೂಗಿದ. "ಇನ್ನೂ ಒಂದು ಸಂಶಯ ಉಳ್ಕೊಂಬಿಡ್ತು ನೋಡಿ. ಗುಡ್ಡೆಗೆ ವಿಷ್ಣು ಅಂತ ಹೆಸರಿಡಲು ಹೋಗಿ ಗಲಾಟೆ ಆಯ್ತೂಂತ ಮುರ್ಳಿ ಹೇಳ್ದ.  ಹೆಸರು ಬದಲಾವಣೆಗೆ ಮುಖ್ಯ ವಿರೋಧ ಅರ್ಚಕರದ್ದೇ ಅಂತೆ!  ಇಲ್ಲಿ ಶೈವ ವೈಷ್ಣವ ಭಾವನೆ ಅಷ್ಟೊಂದು ತೀವ್ರವಾಗಿದ್ಯಾ?"

ಆವಳ ಮಾವ ಗಟ್ಟಿಯಾಗಿ ನಕ್ಕರು.  "ಛೆ!ಛೆ! ಹಾಗೇನಿಲ್ಲ.  ಕತೆ ಆಲ್ಲಿಗೆ ಮುಗೀಲಿಲ್ಲ ಹೀಗೆ ಹುಟ್ಟಿದ ಮಗುವಿಗೆ ಉಪನಯನ, ವೇದಾಧ್ಯಯನ ಎಲ್ಲಾ ನಡೆಯಿತು. ಊರ ಇನ್ನೊಂದು ವೈದಿಕ ಕುಟುಂಬ ಆ ಮಗುವಿನ ಮೂಲವನ್ನು ಪ್ರಶ್ನಿಸಿ ಅರ್ಚಕವೃತ್ತಿ ತನಗೆ ಸಿಗಬೇಕೆಂದು ತಗಾದೆ ತೆಗೆಯಿತು.  ಆದ್ರೆ ಅರ್ಚಕರು ಆದೆಲ್ಲಾ ಆಗದವರ ಮಾತು.  ಅವಳಿಗೆ ವ್ರತ ಮೆಟ್ಟಿ ಏನೇನೋ ಹೇಳಿದ್ದನ್ನು ನಂಬುವವರಿಗೆ ಬುದ್ದಿ ಇಲ್ಲ.  ಗರ್ಭಿಣಿಯರಿಗೆ ಮತ್ತು ಹೆತ್ತವರಿಗೆ ಪ್ರೇತಚೇಷ್ಟೆ ಇರೋದೇ. ಅದಕ್ಕಾಗಿ ಶಾಂತಿ ಹೋಮ ಮಾಡಿ, ಪ್ರೇತ ಉಟ್ಟಾಟನೆ ಆದ ಮೇಲೆ ಇನ್ನೇನು?" ಎಂದು ದಬಾಯಿಸಿದರು.  ಸೂಲಗಿತ್ತಿಗೆ ಸ್ವಲ್ಪ ಕೊಟ್ಟು ಅಮ್ಮ ಹಾಗೆಲ್ಲಾ ಹೇಳಲೇ ಇಲ್ಲ.  ಪ್ರೇತಚೇಷ್ಟೆಯಿಂದ ಹುಚ್ಚು ಹಿಡ್ದು ಏನೇನೋ ಅರ್ಥವಾಗದ್ದು ಬಡಬಡಿಸುತ್ತಿದ್ದುದು ಹೌದು ಎಂದು ಹೇಳಿಸಿದ್ರು.  ಆಗಿನ ಅರ್ಚಕರಲ್ಲಿ ಊರವ್ರಿಗೆ ತುಂಬಾ ವಿಶ್ವಾಸವಿತ್ತು.  ಹಾಗಾಗಿ ಆ ವಿಷಯ ಆಲ್ಲಿಗೇ ಮುಚ್ಚಿಹೋಯ್ತು.  ತಿಮ್ಮನಿಗೆ ಹುಟ್ಟಿದ ಮಗು ಅರ್ಚಕನಾಗಲು ಆ ಮೇಲೆ ಯಾವ ತಕರಾರೂ ಬರ್ಲಿಲ್ಲ.  ಈಗಿನ ಅರ್ಚಕರಿಗೆ ಮಗು ಮುತ್ತಜ್ಜನಾಗಬೇಕು.  ಈಗ ನಿಮಗೆ ಹೆಸರು ಬದಲಾವಣೆಗೆ ಇವ್ರ ವಿರೋಧದ ಕಾರಣ ಗೊತ್ತಾಯ್ತಲ್ಲಾ?"  ಎಂದು ಮತ್ತೊಮ್ಮೆ ನಕ್ಕರು.  ಅವನು ಮತ್ತು ಅವಳು ಆವರ ನಗುವಿನಲ್ಲಿ ಸೇರಿಕೊಂಡರು.

ನಗುತ್ತಲೇ ಅವಳು ಎದ್ದಳು.  ಅವರೆಗೆ ಎಲ್ಲೋ ಒಳಗಿದ್ದ ಅವಳ ಮಕ್ಕಳು ಅವರಿದ್ದಲ್ಲಿಗೆ ಬಂದರು.  ಅವರನ್ನು ನೋಡಿ ಅವಳ ಮಾವನ ಮುಖದಲ್ಲಿ ವಿಷಾದ ಮೂಡಿತು.  ಅವಳು ಆದನ್ನು ಗಮನಿಸಿ, "ನೀವಿನ್ನೂ ಮಲಗಿಲ್ವಾ?  ಬನ್ನಿ" ಎಂದು ಆವರನ್ನು ಕರೆದುಕೊಂಡು ಒಳಹೋದಳು.  ಅದನ್ನೇ ನೋಡುತ್ತಿದ್ದ ಅವಳ ಮಾವ ಅವನೊಡನೆ ಹೇಳಿದರು.  "ನನಗೆ ಇದೊಂದೇ ಚಿಂತೆ ನೋಡಿ. ಎರಡಕ್ಕೂ ಮಂದಬುದ್ಧಿ. ಇವಳದ್ದೇನೂ ತಪ್ಪಿಲ್ಲ. ನಮ್ಮ ಕುಟುಂಬದಲ್ಲಿ ಇದು ಇದ್ದದ್ದೇ.  ಹಾಗಿದ್ದೂ ರಕ್ತಸಂಬಂಧದಲ್ಲೇ ಮದ್ವೆ ಮಾಡಿ ಒಳ್ಳೆ ಹುಡ್ಗಿಗೆ ಅನ್ಯಾಯ ಮಾಡಿಬಿಟ್ಟೆ ಅನ್ನಿಸ್ತದೆ.  ಇವ್ಳು ಮಾಡೋ ಸೇವೆ ನೋಡಿದ್ರೆ, ಇವಳೆಲ್ಲೋ ನಂಗೆ ತಾಯಿಯಾಗಬೇಕಿತ್ತು.  ಆದ್ರೆ ಎಲ್ಲಾ ಇದ್ರೂ ಪಶುಪತಿ ಕಣ್ಣು ಬಿಡ್ಲಿಲ್ಲ."

ಅವನೇನೂ ಮಾತಾಡಲಿಲ್ಲ.  ಈಗ ಮಾತಿಗಿಂತ ಮೌನವೇ ವಾಸಿಯಂದು ಸುಮ್ಮನಿದ್ದ.  ವಿಷಾದದ ಗಳಿಗೆಗಳು ಕಳೆದುಹೋಗುತ್ತಿರುವಾಗ ಅವಳು ಬಂದಳು.  "ಮಲಗಿಸಿ ಬಂದೆ. ನಾವು ಊಟ ಮಾಡೋಣ್ವಾ" ಎಂದು ಅವನನ್ನು ಕೇಳಿದಳು.  ಅವನು ಅವಳ ಮಾವನನ್ನು ನೋಡಿದ.  "ನಾನು ರಾತ್ರಿ ಊಟ ಬಿಟ್ಟು ಅದೆಷ್ಟೋ ವರ್ಷವಾಯ್ತೋ! ಈಗ ತಗೊಳ್ಳೋದು ಎರಡು ಮಾತ್ರೆ ಮಾತ್ರ.  ಅದೂ ನಿದ್ದೆಗಾಗಿ.  ಹೋಗಿ ನೀವು ಊಟ ಮಾಡಿ. ಬೆಳಿಗ್ಗೆ ಮಾತಾಡೋಣ" ಎಂದು ವೀಲ್‌ಚೇರ್ ಬೆಡ್‍ರೂಮಿನತ್ತ ತಿರುಗಿಸಿದರು.

ಅವನು ಪೊಗದಸ್ತಾಗಿ ಊಟ ಮಾಡಿ ಮಹಡಿ ಹತ್ತಿ ಮಂಚದಲ್ಲಿ ಬಿದ್ದುಕೊಂಡ.  ಅವನನ್ನು ಇಡಿಯಾಗೆ ತಿಮ್ಮ ಆವರಿಸಿಕೊಂಡಿದ್ದ.  ತನ್ನ ಸಂಶೋಧನೆಯಲ್ಲಿ ತಿಮ್ಮನಿಗೆ ಎಲ್ಲಿ ಸ್ಥಾನ ಕಲ್ಪಿಸುವುದು ಎನ್ನುವುದು ಅವನಿಗೆ ಹೊಳೆಯಲೇ ಇಲ್ಲ.  ರಾತ್ರೆ ತುಂಬಾ ಹೊತ್ತಾಗಿರಬಹುದು.  ಇನ್ನೇನು ಜೊಂಪು ಹತ್ತಬೇಕು ಅನ್ನುವಷ್ಟರಲ್ಲಿ ಬಾಗಿಲ ಮೇಲೆ  ಮೃದುವಾದ ಬಡಿತ.  ಗಾಬರಿಯಿಂದ ಎದ್ದು ಬಾಗಿಲು ತೆರೆದರೆ ಅವಳು!  ಒಳಗೆ ಬಂದವಳೇ ಬಾಗಿಲು "ಮುಚ್ಚಿ ಅವನನ್ನು ಪೂರ್ತಿಯಾಗಿ ಆವರಿಸಿಕೊಂಡು ನನಗೊಂದು ಬುದ್ಧಿವಂತ ಮಗು ಬೇಕು" ಎಂದು ಕಂಪಿಸುತ್ತಾ ಪಿಸುಗುಟ್ಟಿದಳು.

            *****
೧೯೯೭

ಕೀಲಿಕರಣ: ಎಂ.ಎನ್.ಎಸ್. ರಾವ್

ಒಳ್ಳೇದಲ್ಲೋ ಇದು ಭೂಕಲಿ

- ಶಿಶುನಾಳ ಶರೀಫ್

ಒಳ್ಳೇದಲ್ಲೋ ಇದು ಭೂಕಲಿ ಬಾರೋ ಬಾ ಮಳೆ       ||ಪ||

ನಾಲ್ಕು ಲೋಕದ ಜನಾ ಕಾಕೆದ್ದು ಬಳಲುತಿರಲು
ಜೋಕೆ ನಿನ್ನೊಳು ನೀ ತಿಳಿ ಕಳವಳಿಸುತಲಿ              ||೧||

ಕೃಷ್ಣಾನದಿ ತುಂಬಿ ತುಳಕ್ಯಾಡಿ ಬರುತಿರಲು
ಆಣೆ ಹಾಕಿದೆ ಸೈ ಸೇರಿ ಜರಿದಾಡಿ                         ||೨||

ಉತ್ತರ ದಿಕ್ಕಿನಿಂದ ದುರ್ಗಿಯು ಬರುತಾಳೆ
ಕರ್ಮಗಳೆಲ್ಲ ಸಂಹರಿಸಿ ಖಬರಾ                           ||೩||

ಗುರುವಿನ ಮಗ ಹ್ಯಾವಾ ಹಾಕಿ ಹಿಂಬಾಲಿರುತಿರೆ
ಧರೆಯೊಳು ಶಿಶುನಾಳಧೀಶರೆ ಮಹಾಭಾಪುರೆ         ||೪||

             *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ಸೂರ್ಯ ಚಂದ್ರರ ಹಾಡು

- ಗಿರಿಜಾಪತಿ ಎಂ. ಎನ್

ನಾವು ಮುಳುಗುವುದಿಲ್ಲ
ಏಳುವವರು ನಾವಲ್ಲ
ಮುಳುಗೇಳು ಬೀಳುಗಳ
ಸಂಕರಗಳೆಮಗೆ ಸಲ್ಲ
ಜಡದ ಸೋಂಕುಗಳಿರದ
ನಮ್ಮ ಪಥಗಳಲಿ ನಿತ್ಯ ಜಂಗಮರು ನಾವು
ಸಮಯಾತಿ ಸಮಯಗಳು
ಸಮ ವಿಷಮಾದಿ ನಿಯತಿಗಳು
ನಿಮ್ಮ ಹಾದಿಯ ಹೂ-ಮುಳ್ಳ ಹಾಸು
ಇತಿ-ಮಿತಿಯ ಮತಿಗೀತ
ಸ್ತುತಿ-ನಿಂದೆ ಭೋರ್ಗರೆತ
ಪ್ರೀತ-ಸಂಪ್ರೀತಗಳ ಕವಿ ಸಮಯ ನೀವು
ದೇವರೆ ಮಾಡಿದ ಮಾನವರ ಸಾಲೊ
ಮಾನವರೆ ಮಾಡಿದ ದೇವರಹವಾಲೊ
ನಿಮ್ಮ-ನಿಮ್ಮಯ ಸಮಯ ಶೂಲ-ಜಾಲ
ಅಜ್ಞಾನದಾ ಬಿಲ-ಬಿಲಕೆ
ಜ್ಞಾನ ವರ್ಣಗಳ ಮಾರ್ಜಾಲ
ನಿಮ್ಮ ಹಿಂದೆ-ಮುಂದೆ...
ನಮ್ಮ ಪಥದಲಿ ನಾವು ಮುಂದೆ....
ಮುಂದೆ... ಎಂದೂ ಮುಂದೆ.

        *****

ಕೀಲಿಕರಣ: ಕಿಶೋರ್‍ ಚಂದ್ರ

ಬ್ಯಾರೆಕ್ಸ್ ಹುಡುಗರು

-ಮಂಜುನಾಥ ವಿ ಎಂ

ರಜೆ ಮುಗಿಸಿ ಬ್ಯಾರೆಕ್ಸ್ ಮೂಲೆಗಳಲ್ಲಿ ಜೀವಿಸತೊಡಗಿದ್ದಾರೆ
ಅಸ್ವಾಭಾವಿಕ ವರ್ತನೆಗಳಿಂದ.

ಅವರಲ್ಲಿ ಒಬ್ಬನೇ ಒಬ್ಬ ನಗಬಲ್ಲ;
ಅವನು ದಿಕ್ಕೆಟ್ಟ ಸಿನಿಮಾ ಹಾಡುಗಳನ್ನು ಬಲ್ಲವನು.

ಮಳೆ ತರಿಸುವ, ಸದಾಕಾಲ ಗಾಳಿ ಬೀಸುವ ಆ ಮರ
ಹೊಸ ಹಸಿರನ್ನೇನೊ ಹೊದ್ದು ನಿಂತಂತಿದೆ.

ಕೈ ಬೀಸಿದವರು ಒಬ್ಬೊಬ್ಬರಾಗಿ ಎಡತಾಕುತ್ತಿದ್ದಾರೆ
ಪರೇಡ್ ಮೈದಾನದಲ್ಲಿ;
ಅವರು ಅಲ್ಲಿ, ಹಳ್ಳಿ ತೋಟಗಳಲ್ಲಿ ಬೆರಕೆ ಮಕ್ಕಳನ್ನು ಹೆರುವ
ಇವರ ಹೆಂಡಂದಿರು.

ಅಡ್ಡಗೋಡೆಯ ಮೇಲೆ ಕಾಣುವ ಆ ಹ್ಯಾಟಿನ ತುದಿಗೆ
ಮೂರು ದಿನದ ಹೂವು ಮತ್ತೆ ಚಿಗುರಲಿದೆ.
        *****

ಛೇ ಇದು ಸೂಳಿಗಾರಿಕೆ

- ಶಿಶುನಾಳ ಶರೀಫ್

ಛೇ ಇದು ಸೂಳಿಗಾರಿಕೆ
ಛೇ ಇದು ಸೂಳಿಗಾರಿಕೆ                      ||ಪ||

ಬಾಯೆನುತಲಿ ನೀ ಕರೆದರೆ ಬರಲೋಣ
ನ್ಯಾಯ ಬೆಳಸಿ ನಿಮಗ್ಹೇಳುವದಿದು          ||೧||

ಕೆಟ್ಟ ಹೆಂಗಸನಿಟ್ಟುಕೊಂಡವನೆನ್ನ
ಗುಟ್ಟಿನ ಸ್ನೇಹವಮರಿಸಿಟ್ಟ ಬಳಿಕ ಇದು    ||೨||

ಚಿತ್ತಗಡಕಿ ಎನ್ನ ಜತ್ತಿನವರ ಕೈ
ಕತ್ತಿ ಕೊಟ್ಟು ಕಡಿದಾಟಕ ಹಚ್ಚುವುದಿದು     ||೩||

ಸುಳ್ಳಿನ ಸೂಳೆಯರ ಒಲ್ಲದೆನ್ನ ಮನ
ಮೆಲ್ಲನೆ ಜುಲುಮಿಲೆ ಮೇಲ್ ಬೀಳುವದಿದು ||೪||

ಶಿಶುವಿನಾಳಧೀಶ ಸೇವಕನಾತನ
ರಸಿಕ ಸಖತ್ವದಿ ವಿಷವ ಬೆರಿಸುವುದು    ||೫||

*****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ಸಂಬಂಜ ಅನ್ನೋದು ದೊಡ್ಡದು ಕನಾ

ಚಿತ್ರ: ರಾಂಗೋಪಾಲ್ ರಾಜಾರಾಮ್
- ರಘುನಾಥ ಚ ಹ

ಸಾಹಿತ್ಯಕ್ಕೆ ಸಂಬಂಧಿಸಿದಂತೆ ನಗರ ಪಟ್ಟಣಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಭ್ಯಾಸವಿದ್ದರೆ ನೀವೊಂದು ಸಂಗತಿಯನ್ನು ಗಮನಿಸಿಯೇ ಇರುತ್ತೀರಿ:  ಕಾರ್ಯಕ್ರಮ ಆರಂಭಕ್ಕೆ ಅರ್ಧ ತಾಸು ಮುನ್ನ ಹಾಗೂ ಮುಗಿದ ನಂತರದ ಅರ್ಧ ತಾಸು ಸಭಾಂಗಣದ ಒಳಗೆ-ಹೊರಗೆ ಸಣ್ಣಸಣ್ಣ ಗುಂಪುಗಳು ಮಾತುಕೆಯಲ್ಲಿ ತೊಡಗಿರುತ್ತವೆ.  ಕಾರ್ಯಕ್ರಮ ನಡೆಯುವಾಗಲೂ ಕೆಲವರು ಸಭಾಂಗಣದ ಹೊರಗೆ ಹರಟುತ್ತಾ ನಿಲ್ಲುವುದುಂಟು.  ಸಮಾರಂಭ ಎನ್ನುವುದು ಅವರ ಪಾಲಿಗೆ ನೆಪ.  ಈ ನೆಪದಲ್ಲಿ ಸ್ನೇಹಿತರ ಭೇಟಿ, ಒಂದಷ್ಟು ಹರಟೆ ನಡೆಯುತ್ತದೆ.

`ನಿಮ್ಮನ್ನು ನೋಡಿ ಎಷ್ಟು ದಿನವಾಯ್ತು ಅಲ್ಲವಾ?  ಈ ನಗರದ ಟ್ರಾಫಿಕ್ಕಿನ ಕಿರಿಕಿರಿ, ಕೆಲಸದ ಒತ್ತಡದಲ್ಲಿ ಬಿಡುವೇ ಸಿಗೊಲ್ಲ ನೋಡಿ' ಎನ್ನುವ ಆತಂಕ ನಾಲ್ಕಾರು ಜನ ಸೇರಿದಲ್ಲಿ ವ್ಯಕ್ತವಾಗುತ್ತದೆ.  ಮಾತು ಕೊನೆಯಾಗುವುದು ಜಾಗತೀಕರಣದ ದೂಷಣೆಯೊಂದಿಗೆ.  `ಈ ಜಾಗತೀಕರಣದ ಕೆಡುಕುಗಳು ಒಂದೆರಡಲ್ಲ.  ಬಂಡವಾಳ ಹೂಡುವ ಆಟವಾಡಿ ಬಡದೇಶಗಳ ರಕ್ತವನ್ನು ಶ್ರೀಮಂತ ದೇಶಗಳು ಹೀರುತ್ತಿವೆ.  ದೇಸೀ ಸಂಸ್ಕೃತಿಯ ಬೇರುಗಳು ಬುಡಮೇಲಾಗುತ್ತಿವೆ.  ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ.  ಮನುಷ್ಯನಿಗಿಂತ ಮೆಷೀನಿಗೆ ಹೆಚ್ಚು ಕಿಮ್ಮತ್ತು.  ಸಂಬಂಧಗಳೂ ಅನುಕೂಲಸಿಂಧು ಅನ್ನಿಸುತ್ತಿವೆ.

ನಿಜ, `ಜಾಗತೀಕರಣ'ದ ಕೆಡುಕುಗಳು ಸಾಕಷ್ಟಿವೆ.  ಆದರೆ ಈ ಜಾಗತೀಕರಣದಿಂದ ಒಂದು ಅನುಕೂಲವೂ ಇದೆ.  ಇದೊಂದು ಸುಂದರ ಪದ ಇಲ್ಲದ್ದಿದಲ್ಲಿ ನಮ್ಮ ಕಷ್ಟಗಳಿಗೆಲ್ಲ ನಾವು ಯಾರನ್ನು ದೂರಬೇಕಿತ್ತು?  `ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ' ಎನ್ನುವ ಗಾದೆಯಂತೆ.  ಆಧುನಿಕೆ ಸಂದರ್ಭದಲ್ಲಿ - `ಎಲ್ಲದಕು ಕಾರಣ ಜಾಗತೀಕರಣ' ಎನ್ನಬಹುದು.

ಐದಾರು ವರ್ಷಗಳ ಹಿಂದೆ ನಡೆದ ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ನೆನಪಿಗೆ ಬರುತ್ತಿದೆ.  ಆ ಕಾರ್ಯಕ್ರಮದಲ್ಲಿ ಕನ್ನಡದ ಮಹತ್ವದ ಲೇಖಕರೊಬ್ಬರು ಜಾಗತೀಕರಣವನ್ನು ದೂಷಿಸಿದ್ದರು.  ಅವರು `ದಿವ್ಯ' ಲಹರಿಯಲ್ಲಿದ್ದರು.  ಆ ಲಹರಿಯಲ್ಲೇ, ತಮ್ಮ ಯೌವನದ ದಿನಗಳನ್ನು ಚಪ್ಪರಿಸಿದರು.  ಸಹ ಲೇಖಕರೊಂದಿಗೆ ಯಾವುದೋ ಊರಿನ ಯಾವುದೋ ಹೋಟೆಲ್‌ನಲ್ಲಿ ಕೂತು, ಕಾಫಿ ಹೀರುತ್ತಾ, ಕಾವ್ಯದ ಬಗ್ಗೆ ಚರ್ಚಿಸುತ್ತಿದ್ದುದನ್ನು ನೆನಪಿಸಿಕೊಂಡರು.  ಆ ಕಾಫಿಸಂಜೆಯಗಳಲ್ಲಿ ನಡೆಯುತ್ತಿದ್ದ ಕೂಟಗಳಲ್ಲಿ ಓದುತ್ತಿದ್ದ ಅಪ್ರಕಟಿತ ಪದ್ಯಗಳು ಹತ್ತು, ನೂರು ಬಾಯಿಗಳಿಗೆ ಜನಪದದಂತೆ ತಲುಪುತ್ತಿದ್ದ ಮಾಯೆಯೆನ್ನು ನೆನಪಿಸಿಕೊಂಡು ಪುಳಕಿತರಾದರು.  ಆದರೆ ಈಚಿನ ದಿನಗಳಲ್ಲಿ ಒಂದೇ ಊರಿನಲ್ಲಿ ಇರುವ ಲೇಖಕರು ಒಂದೆಡೆ ಸೇರುವುದು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದ ಅವರು, ಕನಿಷ್ಠ ತಿಂಗಳಿಗೊಮ್ಮೆಯಾದರೂ ಮುಖಗಳನ್ನು ನೋಡಿಕೊಳ್ಳುವುದು, ಕೂತು ಮಾತನಾಡುವುದು ಸಾಧ್ಯವಾದರೆ ಒಳ್ಳೆಯದು ಎಂದರು.  ಹಿರಿಯ ಸಾಹಿತಿಯ ನೆನಪುಗಳು ಯುವ ಲೇಖಕರ ಹೊಟ್ಟೆ ಉರಿಸುವಂತಿದ್ದವು.  ಸಮಾಧಾನದ ಸಂಗತಿಯೆಂದರೆ, ಲೇಖಕರು ದ್ವೀಪಗಳಾಗುತ್ತಿರುವುದಕ್ಕೆ ಜಾಗತೀಕರಣವೇ ಕಾರಣ ಎನ್ನುವುದನ್ನು ಆ ಹಿರಿಯರು ರೂಪಕಗಳ ಮೂಲಕ ಸಾಧಿಸಿ ಹೇಳಿದ್ದರು.  ತಮ್ಮೆಲ್ಲ ತವಕತಲ್ಲಣಗಳಿಗೆ ಹಿರಿಯ ಲೇಖಕರು ಒಂದು ರೂಪಕ ಒದಗಿಸಿದ್ದನ್ನು ನೋಡಿ ಅನೇಕ ಕಿರಿಯ ಲೇಖಕರು ಸಮಾಧಾನಗೊಂಡಿದ್ದರು.

ಜಾಗತೀಕರಣದ ಬಗ್ಗೆ ಮಾತನಾಡಿದ ಹಿರಿಯ ಲೇಖಕರ ಮನೆಗೆ ಅನಿವಾರ್ಯವಾಗಿ ಹೋಗಲೇಬೇಕಾದ ಸಂದರ್ಭ ಕಿರಿಯ ಲೇಖಕನೊಬ್ಬನಿಗೆ ಒದಗಿತು.  ಭೇಟಿಯ ನಂತರ ಆ ಯುವಲೇಖಕ ಆಘಾತಗೊಂಡಿದ್ದ.  ಹಿರಿಯ ಲೇಖಕರ ಮನೆಯಲ್ಲಿ ಮೂರ್‍ನಾಲ್ಕು ತಾಸು ಕಳೆದಿದ್ದರೂ ಆತನಿಗೊಂದು ಲೋಟ ನೀರೂ ಸಿಕ್ಕಿರಲಿಲ್ಲ.  `ಏನ ಬಂದಿರಿ, ಹದುಳವಿದ್ದಿರೇನು?' ಎಂದು ಅವರು ಕೇಳಲೂ ಇಲ್ಲ.  ಮಾತಿಗೂ ಕೃತಿಗೂ ಸಂಬಂಧ ಇರಬೇಕಿಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟ.

    `ಏನ ಬಂದಿರಿ, ಹದುಳವಿದ್ದಿರೆಂದರೆ
    ನಿಮ್ಮ ಮೈಸಿರಿ ಹಾರಿಹೋಹುದೆ?
    ಕುಳ್ಳಿರೆಂದರೆ ನೆಲ ಕುಳಿಹೋಹುದೇ
    ಒಡನೆ ನುಡಿದರೆ ಶಿರಹೊಟ್ಟೆ ಒಡೆವುದೆ?'

ಹನ್ನೆರಡನೇ ಶತಮಾನದ ಬಸವಣ್ಣನವರ ವಚನವನ್ನು ಇಂದಿನ ನಗರ ಜೀವನಕ್ಕೆ ಅನ್ವಯಿಸುವುದು ಹೇಗೆ?  ಕಾಲು ತೊಳೆಯಲು ನೀರು ಕೊಡುವುದು, ನೀರನ್ನೋ ನೀರುಮಜ್ಜಿಗೆಯನ್ನೋ ನೀಡಿ ದಣಿವು ತಣಿಸುವುದು, ಕುಶಲ ವಿಚಾರಿಸಿ ಆಪ್ತ ವಾತಾವರಣ ಮೂಡಿಸುವುದು - ಇವೆಲ್ಲವನ್ನು ಆಧುನಿಕ ಸಂದರ್ಭದಲ್ಲಿ ಆತಿಥೇಯರಿಂದ ನಿರೀಕ್ಷಿಸುವುದು ಮರುಳುತನವೇ ಇರಬಹುದೇನೊ?  ಆದರೆ ಒಳ್ಳೆಯ ಮಾತಿಗೂ ಬರ ಒದಗಿದರೆ ಹೇಗೆ?

ಹಳ್ಳಿಗಳಲ್ಲೂ ಪಟ್ಟಣದ ಬಣ್ಣಗಳು ದಟ್ಟವಾಗುತ್ತಿವೆ.  ಹಾಗಾಗಿ ಗ್ರಾಮೀಣ ಬದುಕಿನಲ್ಲೂ ಮಾನವೀಯ ಸಂಬಂಧಗಳು ತೆಳುವಾಗುತ್ತಿವೆ ಎಂದು ಹೇಳುವ ಮೂಲಕ ನಗರ ಜೀವನದಲ್ಲಿ ಸಂಬಂಧಗಳು ತೆಳುವಾಗುತ್ತಿವೆ ಎನ್ನುವ ಆತಂಕವನ್ನು ತಳ್ಳಿಹಾಕುವುದು ಸುಲಭ.  ಆದರೆ, ಯಾವುದೇ ಹಳ್ಳಿಗೆ ಹೋಗಿ.  ಅಲ್ಲಿ ಯಾರೊಬ್ಬರ ಮನೆಯ ಬಾಗಿಲನ್ನು ಸುಲಭವಾಗಿ ತಟ್ಟಬಹುದು.  ಪರಿಚಯವೇ ಇಲ್ಲದ ಹಾದಿಹೋಕನನ್ನು ಮಾತಿಗೆಳೆದು ನಿಲ್ಲಿಸಬಹುದು.  ಆದರೆ, ನಗರವೊಂದರ ಮನೆಯನ್ನು ಸಲೀಸಾಗಿ ಹೋಗಿ ತಟ್ಟಲು ಸಾಧ್ಯವೇ?  ನಿಂತ ರಸ್ತೆಗೂ ಎದುರಿನ ಮನೆಗೂ ಐದಾರು ಅಡಿಯಷ್ಟೇ ದೂರವಿದ್ದರೂ, ಬಾಗಿಲು ತಟ್ಟಲು ಹಿಂಜರಿಯುತ್ತೇವೆ.  `ನಾಯಿ ಇದೆ ಎಚ್ಚರಿಕೆ' ಎನ್ನುವ ಫಲಕವನ್ನು ಕಣ್ಣುಗಳು ಹುಡುಕುತ್ತವೆ.  ಅನೇಕ ಮನೆಗಳಲ್ಲಿ ನಾಯಿ ಇರುವುದಿಲ್ಲ, ಎಚ್ಚರಿಕೆಯ ಫಲಕಗಳಿರುತ್ತವೆ.  ಗೇಟು ದಾಟಿ, ಬಾಗಿಲ ಬಳಿ ನಿಂತೆವೆನ್ನಿ.  ಅಲ್ಲೊಂದು ಕಾಲಿಂಗ್ ಬೆಲ್ ಇರುತ್ತದೆ.  ಒತ್ತುತ್ತೇವೆ.  ಬಾಗಿಲು ತೆರೆಯುವುದಿಲ್ಲ.  ಬಾಗಿಲಿನ ಸಣ್ಣಕಿಂಡಿಗೆ ಕಣ್ಣುಮೂಡುತ್ತದೆ.  ಯಾರು?  ಎನ್ನುವ ಪ್ರಶ್ನೆ ಮುಖಕಕ್ಕೆ ರಾಚುತ್ತದೆ.  ಈ ಎಲ್ಲ ಪ್ರಶ್ನೋತ್ತರದ ನಡುವೆ ಆತ್ಮೀಯತೆಗೆ ಜಾಗವಾದರೂ ಎಲ್ಲಿ?  ಮುಚ್ಚಿದ ಬಾಗಿಲುಗಳ, ಕರ್ಟನ್‌ಗಳಿಂದ ಅಲಂಕರಿಸಿದ ಕಿಟಕಿಗಳ, ಮಕ್ಕಳ ಕಲರವ ಅಡಗಿಸುವ ಟೀವಿಯ ಅಬ್ಬರದ ಹಾಗೂ ವಿದ್ಯುದ್ದೀಪಗಳು ಸದಾ ಉರಿಯುವ ಮನೆಗಳಿಂದ ಸೂರ್ಯ ದೂರವಾಗುತ್ತಿದ್ದಾನೆ.  ಇಂಥ ಆಧುನಿಕ ಮನೆಗಳಲ್ಲಿ ಕ್ಷುಲ್ಲಕ ಔಪಚಾರಿಕತೆಗೆ ತಾವಾದರೂ ಎಲ್ಲಿ!?

ನಗರದ ನಾಗರಿಕರ ಆತಂಕಗಳು ಅರ್ಥಹೀನವೇನೂ ಅಲ್ಲ.  ಬಾಗಿಲು ತಟಟುವ ವ್ಯಕ್ತಿ ಹಂತಕನಿರಬಹುದು, ಕಳ್ಳನಾಗಿರಬಹುದು, ವೃಥಾ ಪೀಡಿಸುವ ಸೇಲ್ಸ್‌ಮ್ಯಾನ್ ಆಗಿರಬಹುದು.  ಮಾಧ್ಯಮಗಳಿಗೆ ರಜೆಯಿದ್ದ ದಿನವೂ ನಗರಗಳಲ್ಲಿ ಅಪರಾಧಗಳು ಸಂಭವಿಸುತ್ತವೆ!  ಇದು ನಾವೇ ಕಟ್ಟಿಕೊಂಡ ವಿಷವೃತ್ತ.  ಒಂದು ಮನೆಗೆ ಕಳ್ಳ ನುಗ್ಗಿದ ಅನ್ನಿ;  ಪಕ್ಕದ ಮನೆಯವರನ್ನು ಸಹಾಯಕ್ಕೆ ಕೂಗಿ ಪ್ರಯೋಜನವಿಲ್ಲ.  ನೆರವು ನೀಡುವುದು ನೆರೆಹೊರೆಯವರ ಕೆಲಸವಲ್ಲ;  ಅದಕ್ಕಾಗಿಯೇ ಪೊಲೀಸರಿದ್ದಾರೆ!  ಹಳ್ಳಿಗಳಲ್ಲಿ ಹಾಗಲ್ಲ.  ಮೆನಯೊಂದರಲ್ಲಿ ಸಂಭವಿಸುವ ಅನಾಹುತಕ್ಕೆ ಊರು ಕಣ್ಣೀರಾಗುತ್ತದೆ.  ಪಕ್ಕದ ಮನೆಯ ದುಃಖ ನಮ್ಮ ಮನೆಯದೂ ಆಗಿರುತ್ತದೆ.

ಎರಡು ಘಟನೆಗಳನ್ನು ಹೇಳಬೇಕು.  ಆತ ಹಣ್ಣುಹಣ್ಣು ಮುದುಕ.  ಆಟೋದಲ್ಲಿ ಕುಳಿತು ವಿಳಾಸ ಹುಡುಕುತ್ತಿದ್ದ.  ವಿಳಾಸವೇನೋ ಸಿಕ್ಕಿತು.  ಆದರೆ ತಟ್ಟಿದ ಮನೆಯ ಬಾಗಿಲು ತೆರೆಯಲಿಲ್ಲ.  ಗುಂಪುಗೂಡಿತು.  `ಹೆಂಡತಿಗೆ ಹುಷಾರಿಲ್ಲ.  ಆಸ್ಪತ್ರೆಯಲ್ಲಿದ್ದಾಳೆ' ಎಂದು ವೃದ್ಧ ಗುಂಪಿಗೆ ಹೇಳುತ್ತಿದ್ದ.  ಸೊಸೆ ಬಾಗಿಲು ತೆರೆಯಲಿಲ್ಲ.  ಮೊಮ್ಮಕ್ಕಳು ಕ್ಯಾರೆ ಅನ್ನಲಿಲ್ಲ.  ಅ ವೃದ್ಧನ ಮಗ ಮನೆಯಲ್ಲಿ ಇರಲಿಲ್ಲ.  ಆಟೋದವನ ಸಹನೆ ತೀರಿತು.  ಗುಂಪೂ ಕರಗಿತು.  ವೃದ್ಧ ವಾಪಸ್ಸಾದ.  ಆತನ ಮಗ ಮೆನಯಲ್ಲಿ ಇದ್ದಿದ್ದರೆ ಸನ್ನಿವೇಶ ಬೇರೆಯಾಗುತ್ತಿತ್ತಾ?  ಗೊತ್ತಿಲ್ಲ.  ಆದರೆ ಯಾವಯಾವುದೋ ನೆನಪು-ನೆಪಗಳನ್ನು ಮುಂದಿರಿಸಿ ವೃದ್ಧನನ್ನು ನಿರಾಕರಿಸಿದ ಸೊಸೆಯ ನಡವಳಿಕೆ ಅಮಾನವೀಯತೆ ಎಂಬುದು ಮಾತ್ರ ನಿಜ.  ಈ ಘಟನೆ ಹಳ್ಳಿಯಲ್ಲಿ ನಡೆದಿದ್ದರೆ ಏನಾಗುತ್ತಿತ್ತು?  ಆ ಹಠಮಾರಿ ಸೊಸೆಗೆ ಯಾರಾದರೂ ತಿಳಿ ಹೇಳುತ್ತಿದ್ದರಾ?  ವೃದ್ಧನ ಉಪಚರಿಸುತ್ತಿದ್ದರಾ?  ಉತ್ತರ ನಿಮ್ಮ ಅನುಭವಗಳನ್ನು ಆಧರಿಸಿದ್ದು.

ಎರಡನೆಯ ಘಟನೆ ಹೀಗಿದೆ.  ಜ್ವರದ ತೀವ್ರತೆಯಿಂದ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿದ್ದ ಆ ಹಿರಿಯ ಹೆಣ್ಣುಮಗಳು ಯಾರನ್ನೂ ಗುರುತು ಹಿಡಿಯುತ್ತಿರಲಿಲ್ಲ.  ಮೂಗಿಗೊಂದು ಕೊಳವೆ.  ಮುಂಗೈಗೆ ಚುಚ್ಚಿದ ಸೂಜಿಗೊಳವೆಯ ಮೂಲಕ ತೊಟ್ಟುತೊಟ್ಟಾಗಿ ದೇಹ ಸೇರುತ್ತಿದ್ದ ಪುಷ್ಟಿದ್ರವ.  ಸೂಜಿ ಚುಚ್ಚಿ ಚುಚ್ಚಿ ಗಾಯಗೊಂಡು ಬ್ಯಾಂಡೇಜ್ ಮಾಡಿದ ಮತ್ತೊಂದು ಕೈ ಮಂಚದ ಒಂದು ಬದಿಗೆ ಮೂತ್ರಸಂಗ್ರಹ ಚೀಲ.  ಆಕೆ ಒದ್ದಾಡುತ್ತಿದ್ದಳೂ.  `ಸ್ವಾಸ್ಥ್ಯ ಸುಧಾರಿಸಲು ಮೂರ್‍ನಾಲ್ಕು ದಿನ ಬೇಕು.  ಆವರೆಗೆ ಕೈಕಾಲುಗಳನ್ನು ಮಂಚಕ್ಕೆ ಕಟ್ಟಿ' ಎಂದು ಸಲಹೆ ನೀಡಿದ ವೈದ್ಯರು ಕೈತೊಳೆದುಕೊಂಡಿದ್ದರು.  ಆದರೆ ಕೈಕಾಲು ಕಟ್ಟುವುದು ಹೇಗೆ?  ಬಲೆಗೆ ಬಿದ್ದ ಮಿಕದಂತೆ ಒದ್ದಾಡುವ ಆಕೆಯ ಚಿತ್ರವನ್ನು ಕಲ್ಪಿಸಿಕೊಳ್ಳುವುದೇ ಅಸಹನೀಯ.  ಕೈಕಾಲು ಹಿಡಿದು ಒದ್ದಾಡುವ ದೇಹವನ್ನು ತಲಾ ನಾಲ್ಕು ಜನ ಎರಡು ಹಗಲು ಎರಡು ರಾತ್ರಿ ಪಾಳಿಗಳಲ್ಲಿ ಒತ್ತಿಹಿಡಿದಿದ್ದರು.  ಒಂದು ಮೊದಲ ಜಾವದಲ್ಲಿ ಆಕೆಗೆ ಇದ್ದಕ್ಕಿದ್ದಂತೆ ತಿಳಿವಳಿಕೆ ಬಂತು.  ಆದಿನ ಬೆಳಗ್ಗೆ ಆಸ್ಪತ್ರೆಗೆ ಬಂದವರಿಗೆ ತಮ್ಮ ಕಣ್ಣನ್ನೇ ನಂಬಲಾರದಷ್ಟು ಅಚ್ಚರಿ.  ಅವರ ಅಚ್ಚರಿಗೆ ಕಾರಣ ಆಕೆಯ ಆರೋಗ್ಯ ಸುಧಾರಣೆ ಅಲ್ಲ;  ಮಂಚದ ಮೇಲೆ ಮಲಗಿಯೇ ಆಕೆ ಉಪಚರಿಸಿದ ರೀತಿ.  ಬಂದವರಿಗೆ ಹೋಟೆಲ್‌ನಿಂದ ಕಾಫಿ ತಂದುಕೊಡುವಂತೆ ಆಕೆ ಒತ್ತಯಿಸತೊಡಗಿದಳು.  ಎಳನೀರಾರದರೂ ಕುಡಿದುಹೋಗಿ ಎಂದು ಎಳನೀರು ತಂದವರನ್ನೇ ಒತ್ತಾಯಿಸಿದಳು.  ಆ ಹಳ್ಳಿಯ ಹೆಣ್ಣುಮಗಳ ಉಪಚಾರ ಕಂಡು ಎದುರಿಗೆ ಕುಳಿತಿದ್ದವರು ಮುದುಡಿಹೋಗಿದ್ದರು.  ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿ ನೋವನುಭವಿಸುತ್ತಿದ್ದರೂ, ಎದ್ದು ಕೂರಲು ಆಗದೆ ಹೋದರೂ ಆಕೆ ಅತಿಥಿಗಳನ್ನು ಉಪಚರಿಸಲು ಮರೆತಿರಲಿಲ್ಲ.  ಅದು ಯಾರೋ ಹೇಳಿಕೊಟ್ಟ ಪಾಠವಲ್ಲ;  ಹಳ್ಳಿಯ ಬದುಕು ಕಲಿಸಿಕೊಟ್ಟ ಸಂಸ್ಕಾರ.

ನಗರ ಎನ್ನುವುದು ಘಟೋತ್ಕಚ ಸೃಷ್ಟಿಸಿದ ಮಾಯಾಬಜಾರಿನಂತಹುದು.  ಈ ಬಜಾರಿನಲ್ಲಿ ಕನಸುಗಳನ್ನು ಕೊಳ್ಳುವವರು ನಾವು.  ಈ ಕನಸುಗಳೇನೂ ಸೋವಿಯಲ್ಲ.  ಒಂದೊಂದು ಕನಸೂ ವಯಸನ್ನು ಬೇಡುತ್ತದೆ, ರೊಕ್ಕವನ್ನು ಬೇಡುತ್ತದೆ, ಏಕಾಂತವನ್ನು ಬೇಡುತ್ತದೆ.  ಇಷ್ಟೆಲ್ಲ ದಂಡ ಕಟ್ಟಿಸಿಕೊಂಡು ದಕ್ಕಿದರೂ ಅದು ಪರಿಪೂರ್ಣವೇನಲ್ಲ.  ಅದರ ಪರಿಪೂರ್ಣತೆಗೆ ಮತ್ತೊಂದು ಕನಸನ್ನು ನನಸು ಮಾಡಿಕೊಳ್ಳಬೇಕಿದೆ.  ಎಷ್ಟು ಸುತ್ತಿದರೂ ತೀರದ ವೃತ್ತವಿದು.  ಈ ಸುತ್ತಾಟದಲ್ಲಿ, ನಟಿಯೊಬ್ಬಳು ತನ್ನ ಮೂಗು ತಿದ್ದಿಕೊಂಡಷ್ಟು ಸಲೀಸಾಗಿ ಮುಖಗಳನ್ನು ಬದಲಿಸಿಕೊಳ್ಳುತ್ತೇವೆ.  ಕೊನೆಗೊಮ್ಮೆ ನೈಜ ಮುಖದ ನೆನಪೇ ಅಳಿಸಿಹೋಗುತ್ತದೆ.  ನಮ್ಮದಲ್ಲದ ಮುಖವನ್ನು ಹೊತ್ತು ಬದುಕುತ್ತೇವೆ.  ಸುಖದ ಅರ್ಥಗಳನ್ನು ಬದಲಿಸಿಕೊಳ್ಳುತ್ತೇವೆ.  ಒಂದುದಿನ, ಬಜಾರಿನ ಮಾಯೆ ಹರಿಯುತ್ತದೆ.  ಆವೇಳೆಗೆ ಬದುಕೇ ಒಂದು ಬಜಾರಾಗಿರುತ್ತದೆ.  ಕೆಲವರು ಮಾಯೆಯ ಪೊರೆಯಲ್ಲೇ ಉಳಿಯುತ್ತಾರೆ.

ಇಪ್ಪತ್ತನಾಲ್ಕು ಗಂಟೆ ನಮಗೆ ಯಾವುದಕ್ಕೂ ಸಾಲದು.  ಗೆಳೆಯರೊಂದಿಗೆ ಹರಟೆ ಹೊಡೆಯಲು, ಮಗುವಿಗೆ ಚಂದಮಾಮನ ತೋರಿಸಲು, ಸಂಗಾತಿಯೊಂದಿಗೆ ಸಂಜೆಯ ನೀರವತೆಗೆ ರಂಗೇರಿಸಲು ನಮ್ಮ ಗಡಿಯಾರಗಳಲ್ಲಿ ಸಮಯವಿಲ್ಲ.  ಕುಟುಂಬದ ಸದಸ್ಯರು ಪರಸ್ಪರ ಅಪರಿಚಿತರಾಗುವ ಉದಾಹರಣೆಗಳು ಇಲ್ಲದಿಲ್ಲ.  `ಅರ್ಧ ನಾರೀಶ್ವರ' ಕಲ್ಪನೆ ನಗರದ ಜಮಾನಕ್ಕೆ ಹೊಂದುತ್ತಿಲ್ಲ.  ಇಲ್ಲಿ ಗಂಡ ಒಂದು ದಂಡೆ.  ಹೆಂಡತಿ ಇನ್ನೊಂದು ದಂಡೆ.  ಮಕ್ಕಳೆಂಬ ನಾವೆ ಎರಡೂ ದಡಗಳನ್ನು ಕೂಡಿಸುವುದಿಲ್ಲ.  ಮಕ್ಕಳಿಗೆ ಅವರದೇ ಆದ ಜವಾಬ್ದಾರಿಗಳಿವೆ.  ಮುಂದಿನ ಬದುಕಿಗಾಗಿ ಅವರು ಇಂದಿನ ಬಿಡುವು ಹಾಗೂ ಮುಗ್ಧತೆ ಕಳೆದುಕೊಂಡಿದ್ದಾರೆ.  ಮಕ್ಕಳ ಅಗತ್ಯಗಳನ್ನು ಪೂರೈಸುವುದಕ್ಕೆ ಮಾತ್ರ ಪೋಷಕರ ಪಾತ್ರ ಸೀಮಿತವಾಗುತ್ತಿದೆ.  ಕೊಳ್ಳುಬಾಕ ಸಂಸ್ಕೃತಿ ಹಾಗೂ ಸಿರಿಜ್ವರ ಮನುಷ್ಯರ ಭಾವನೆಗಳನ್ನು ಪ್ರಭಾವಿಸಿವೆ.  ಮನಃಶಾಂತಿಯೂ ಇಲ್ಲಿ ಕೊಳ್ಳುವ ಸರಕು.  ಏಕಾಂತದ ಧ್ಯಾನವೂ ಬಿಕರಿಗಿದೆ.

ನಮ್ಮ ಗೆಳೆತನಗಳಾದರೂ ಎಂಥವು?  ಕಚೇರಿ ಬೆಸೆಯುವ ಗೆಳೆತನ, ಮಸಾಲೆದೋಸೆ ಗೆಳೆತನ ಅಥವಾ ಯಾವುದೋ ರೀತಿಯಲ್ಲಿ ರೂಪಾಯಿಯೊಂದಿಗೆ ನಂಟು ಹೊಂದಿದ ಗೆಳೆತನ.  ಗೆಳೆತನ ಈಗ ಸುವಿಶಾಲ ಆಲವಲ್ಲ;  ಹುಲ್ಲು.  ನಗರಗಳಲ್ಲಿ ಹುಲ್ಲನ್ನು ಬೆಳೆಯಲಾಗುತ್ತದೆ, ಎಲ್ಲಿಯೋ ಬೆಳೆಸಿದ ಹುಲ್ಲುಮಡಿಗಳನ್ನು ಮತ್ತ್ಯಾವುದೋ ನೆಲಕ್ಕೆ ಕಸಿ ಮಾಡಲಾಗುತ್ತದೆ, ಅಲಂಕಾರಕ್ಕಾಗಿ.  ಗೆಳೆತನಗಳನ್ನು ಉಳಿಸಿಕೊಳ್ಳಲಾಗುತ್ತದೆ, ಅಲಂಕಾರಕ್ಕಾಗಿ.

`ಚಿನ್ನಾರಿ ಮುತ್ತ' ಚಿತ್ರದಲ್ಲಿ, ಹಳ್ಳಿಯಿಂದ ನಗರದ ಪಾಲಾದ ಮುತ್ತ ಹಾಡುವ ಹಾಡು ನೆನಪಿದೆಯಾ?  `ಎಷ್ಟೊಂದು ಜನ ಇಲ್ಲಿ ಯಾರು ನನ್ನೋರು/ ಎಷ್ಟೊಂದು ಮನೆ ಇಲ್ಲಿ ಎಲ್ಲಿ ನನ್ಮನೆ' ಎಂದು ಮುತ್ತ ತನ್ನನ್ನು ತಾನು ಕೇಳಿಕೊಳ್ಳುತ್ತಾನೆ.  ಇದು ನಾವು ಕೇಳಿಕೊಳ್ಳಬೇಕಾಧ ಪ್ರಶ್ನೆಯೂ ಹೌದು.  ಉತ್ತರ ಸಿಕ್ಕಿದರೆ ನೀವು ಅದೃಷ್ಟವಂತರೇ ಸರಿ.

ಸಣ್ಣಸಣ್ಣ ಕೌಟುಂಬಿಕ ಸಂಗತಿಗಳ ಮೂಲಕವೇ ಬದುಕಿನ ಸುಖ ಕಾಣುವ ಸಂಸ್ಕೃತಿ ನಮ್ಮದು.  ನ್ಯೂಕ್ಲಿಯರ್‍ ಕುಟುಂಬಗಳು ಜನಪ್ರಿಯವಾಗುತ್ತಿರುವ ಸಂದರ್ಭದಲ್ಲೂ ಅವಿಭಕ್ತ ಕುಟುಂಬ ಕಲ್ಪನೆಯನ್ನು ಉಳಿಸಿಕೊಂಡಿರುವ ಸಂಸ್ಕೃತಿ ನಮ್ಮದು.  ಆದರೆ ಈ ಹೆಮ್ಮೆಗಳಷ್ಟೇ ನಮ್ಮನ್ನು ಕಾಯುವುದಿಲ್ಲ.  ಮಾಯಾಬಜಾರಿನ ಒಳಗಿದ್ದೂ ಹಳ್ಳಿಯ ಬೇರುಗಳ ಆರ್ದ್ರತೆ ಉಳಿಸಿಕೊಳ್ಳದಿದ್ದಲ್ಲಿ ಉಳಿಗಾಲವಿಲ್ಲ.

ಹಳ್ಳಿ ಎನ್ನುವುದು ಈಗ ಒಂದು ಊರಾಗಿ ಉಳಿದಿಲ್ಲ.  ಹಳ್ಳಿಯ ಹೈಕಳು ನಗರ ಸೇರಿದ್ದಾರೆ.  ಅಮೆರಿಕ ಸೇರಿದ್ದಾರೆ.  ಅವರ ಮೂಗುಗಳಿಗೆ ಹಳ್ಳಿಯ ಮಣ್ಣಿನ ವಾಸನೆ ಸೇರುವುದಿಲ್ಲ.  ಬಾವಿಯ ನೀರು ದೇಹಕ್ಕೆ ಒಗ್ಗುವುದಿಲ್ಲ.  ಹೀಗಿರುವಾಗ ಹಳ್ಳಿಯಲ್ಲಿನ ಜನರು ಅವರಿಗೆ ಅಪರಿಚಿತ ಅನ್ನಿಸುವುದು ಸಹಜ ತಾನೆ?  ಆ ಜನರಲ್ಲಿ ಅಪ್ಪ ಅಮ್ಮ ಇರುತ್ತಾರೆ.  ಸೋದರ ಸೋದರಿ ಇರುತ್ತಾರೆ.  ಏನು ಮಾಡುವುದು:  ದಾರಿಗಳು ಕವಲೊಡೆದಿವೆ.  ನಮ್ಮ ಬದುಕು ನಮ್ಮದು ಎಂದು ಯೋಚಿಸುವವರ ಸಂಖ್ಯೆ ಹೆಚ್ಚುತ್ತಿದೆ.  ಮನೆಯ ಗೋಡೆಯ ಮೇಲಿನ ಗ್ರೂಪ್ ಫೋಟೊಗಳು ಮಾಯವಾಗಿವೆ.  ಷೋಕೇಸ್‌ನಲ್ಲಿ ಗಂಡಹೆಂಡಿತ ಚಿತ್ರ ಸ್ಥಾನ ಪಡೆದಿದೆ.  ಬೆಳೆದ ಮಕ್ಕಳು ಗೂಡಿನಿಂದ ಹಾರುತ್ತಿದ್ದಾರೆ.  ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ.

ಹಳ್ಳಿ ಎನ್ನುವುದು ಒಂದು ಊರಲ್ಲ.  ಅದೊಂದು ಅದ್ಭುತ ಕಲ್ಪನೆ;  ಎಟುಕಿಸಿಕೊಳ್ಳಬಹುದಾದ ಆದರ್ಶ.  ಆ ಆದರ್ಶವನ್ನು ಎಟುಕಿಸಿಕೊಳ್ಳಲಿಕ್ಕಾಗಿ ಹಳ್ಳಿಗಳಲ್ಲೇ ಬದುಕಬೇಕಿಲ್ಲ.  ನಗರದಲ್ಲಿದ್ದೂ ಬೇರುಗಳಿಗೆ ಬದ್ಧರಾಗಿರಲು, ಎದೆಯ ತೇವ ಉಳಿಸಿಕೊಳ್ಳಲು ಸಾಧ್ಯವಿದೆ.  ಕಾಲದ ಓಟದಲ್ಲಿ ಹಳ್ಳಿಗಳ ಸ್ವರೂಪ ಉಳಿಯುತ್ತದೋ ಇಲ್ಲವೋ ಹೇಳುವುದು ಕಷ್ಟ.  ಆದರೆ... ಹಳ್ಳಿಯ ಸ್ವರೂಪವನ್ನು ಹಳ್ಳಿ ಎನ್ನುವ ಆದರ್ಶವನ್ನು ಉಳಿಸಿಕೊಳ್ಳಲು ಸಾಧ್ಯವಿದೆ.

ನಗರದ ಜನರನ್ನು ಟೀಕಿಸುವುದು;  ಹಳ್ಳಿಗರನ್ನು ಅಟ್ಟಕ್ಕೇರಿಸುವುದು ಈ ಬರಹದ ಉದ್ದೇಶವಲ್ಲ.  ನಗರದ ಒಂದು ಭಾಗವಾಗಿ ನಿಂತು ನಾವು ಕಳೆದುಕೊಳ್ಳುತ್ತಿರುವ ಸುಖಗಳ, ಮೌಲ್ಯಗಳ ಕುರಿತು ಯೋಚಿಸುವುದಷ್ಟೇ ಇಲ್ಲಿನ ಯೋಚನೆಯ ಪ್ರಯತ್ನ.  `ಊರು, ಮನೆ, ಅಪ್ಪ ಅಮ್ಮ, ಒಡಹುಟ್ಟಿದವರು- ಇವರೆಲ್ಲ ಸೇರಿ ನಾನು' ಎನ್ನುವವರು ನಮ್ಮ ನಡುವೆ ಇದ್ದಾರೆ.  ಈ ಸಮಾಧಾನವೇ, ಇಂಥವರ ಸಂತತಿ ಇನ್ನೂ ಹೆಚ್ಚಲಿ ಎನ್ನುವ ಹಂಬಲವೇ ಈ ಬರಹವನ್ನು ರೂಪಿಸಿದೆ.  ಇಂಥ ಹಂಬಲಗಳು ವೈಯಕ್ತಿಕವಾಗಿ ಜಡ್ಡುಗಟ್ಟದೆ ಉಳಿಯಲು ನಡೆಸುವ ಪ್ರಯತ್ನಗಳೂ ಹೌದು.

`ಸಂಬಂಜ ಅನ್ನೋದು ದೊಡ್ಡದು ಕನಾ' ಅನ್ನುತ್ತಾರೆ ದೇವನೂರು ಮಹಾದೇವ.  ಇಲ್ಲ ಅಂತೀರಾ?

            *****

ಕೀಲಿಕರಣ: ಕಿಶೋರ್‍ ಚಂದ್ರ

ಬಿಡು ಬಿಡು ಈ ನಡತಿ

- ಶಿಶುನಾಳ ಶರೀಫ್

ಬಿಡು ಬಿಡು ನಿಮ್ಮಯ ಈ ನಡತಿ
ಛೇ   ಸಲ್ಲದು ಈ ರೀತಿ                                    ||ಪ||

ಪೊಡವಿಯೊಳಗೆ ನಮ್ಮ ಗೊಡವಿಯಾತಕೆ ನಿಮಗೆ
ನುಡಿಯದೊಂದನು ನೀನು ನಡಿನಡಿಮನೆಗೆ         ||೧||

ಭೋಗವಿಷಯಸುಖ ನೀಗಿ ಯೋಗದೊಳಗೆ
ಆಗದಾಗದು ಸ್ನೇಹ ನಡಿ ನಮಗೀಗ                   ||೨||

ಧರೆಯೊಳು ಶಿಶುನಾಳಧೀಶನು ಕಂಡರೆ
ಮರುಳೆ ಒಪ್ಪನು ಇದಕೆ ತರವಲ್ಲವು ಕಂಡ್ಯಾ        ||೩||
*****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ನಾಯಿಯ ಸಾಕಿದರು

- ಡಾ || ರಾಜಪ್ಪ ದಳವಾಯಿ

ನಾಯಿ ಸಾಕಿದರು
ಶೋಕಿ ಮಾಡಿದರು
ಇದ್ದವರು;  ಕದ್ದವರು
ಬಾಯಿ ಬಿಟ್ಟರು
ಬೇಗೆ ನುಂಗಿದರು
ಇಲ್ಲದವರು; ಮನಷ್ಯರು

        *****

ಸೋರುತಿಹುದು ಮನೆಯಮಾಳಿಗಿ

- ಶಿಶುನಾಳ ಶರೀಫ್

ಸೋರುತಿಹುದು ಮನೆಯಮಾಳಿಗಿ ಅಜ್ಞಾನದಿಂದ
ಸೋರುತಿಹುದು ಮನೆಯಮಾಳಿಗಿ    ||ಪ||

ಸೋರುತಿಹುದು ಮನೆಯಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲ
ಕಾಳಕತ್ತಲೆಯೊಳಗೆ ನಾನು
ಮೇಲಕೇರಿ ಮೆಟ್ಟಲಾರೆ                   ||೧||

ಮುರುಕು ತೊಲೆಯು ಹರಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರಕು ಚಪ್ಪರ ಜೇರು ಗಿಂಡಿ
ಮೇಲಕೇರಿ ಮೆಟ್ಟಲಾರೆ                   ||೨||

ಕರಕಿಹುಲ್ಲು ಕಸವು ಹತ್ತಿ
ದುರಿತಭವದಿ ಇರಬಿ ಮುತ್ತಿ
ಜಲದಿ ಭರದಿ ತಿಳಿಯಮಣ್ಣು
ಒಳಗೆ ಹೊರಗೆ ಏಕವಾಗಿ                ||೩||

ಕಾಂತೆ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬಿ ಮಳಿಯು
ಈಗ ಶಿಶುವಿನಾಳ ಗ್ರಾಮಕ
ಮೇಘರಾಜ ಒಲಿದು ಬಂದ              ||೪||
          *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ಸಹಕಾರ ಮಂತ್ರ

-ರವಿ ಕೋಟಾರಗಸ್ತಿ

ಸಹಕಾರ ನಮ್ಮ ಉಸಿರು
ಸಹೋದರತೆ ನಮ್ಮ ಹಸಿರು
ಸಮಬಾಳ್ವೆ ಮಂತ್ರವೆಮಗಿರಲಿ

ದುಡಿದು... ದಣಿದ ಬಂಧುಗಳೇ
ಬದುಕಲಿ ಬಳಲುತ
ಬೆವರು ಸುರಿಸುವ ಬಾಂಧವರೆ

ಕಾಯಕ ಕೈಲಾಸವೆಂಬ
ಬಸವ ಘೋಷದಲಿರುವ
ಅಗಾಧ ಶಕ್ತಿಯ ಅರಿವು ತಿಳಿಯಿರಿ

ಸಹಕಾರ ತತ್ವದಡಿ
ಬಸವಯುಗದಲಿ
ಬಂದಿತು ಅನುಭವ ಮಂಟಪ

ಅಲ್ಲಿ ಎನಗಿಂತ ಕಿರಿಯರಿಲ್ಲ
ಎನಗಿಂತ ಹಿರಿಯರಿಲ್ಲ
ಸಹಕಾರದಡಿ ನಾವೆಲ್ಲ ಒಂದೆನ್ನುತ

ಸಹಕಾರದಿ ನಾವೆಲ್ಲ ಕೂಡೋಣ
ಸಹಕಾರದಿ ನಾವೆಲ್ಲ ಬಾಳೋಣ
ಸಹಕಾರದಿ ನಾವೆಲ್ಲ ಬೆಳೆಯೋಣ
ಸಹಕಾರ ಮಂತ್ರವ ಪಠಿಸೋಣ
ಗೆಲುವಿನ ಪಥದೀ ಸಾಗೋಣ

         ***

ಕೀಲಿಕರಣ: ಕಿಶೋರ್‍ ಚಂದ್ರ

ಅಸೂಯೆ

- ಮಂಜುನಾಥ ವಿ ಎಂ

ನನ್ನ ಹಾಸಿಗೆಯ ಹೊದಿಕೆಯಲಿ ಆ ರಾತ್ರೆಗಳಲಿ
ಮಿಡತೆಯಂತೆ ತುಂಡರಿಸಿ ಬಿದ್ದ ಅವಳ ಚಿತ್ರಣವಿದೆ.
          *****

ನರರ ಕರ್ಮಕೆ ತಕ್ಕ ದಿನ ಬಂತು

-ಶಿಶುನಾಳ ಶರೀಫ್

ನರರ ಕರ್ಮಕೆ ತಕ್ಕ ದಿನ ಬಂತು ರಮಣಿ
ಅರಸರ ರಾಜ ಕ್ರಿಸಾನ ರಾಣಿ                       ||ಪ||

ಹದ್ದು ಮಾಂಸಕ ಬಂದು ಎರಗಿದ ತೆರದಿ
ಗುದ್ಯಾಟ ನೋಡಿ ಕಾಳಗ ಮಹಿಮರದಿ           ||೧|| 

ಮಾಡೋ ಶಿಶುನಾಳಧೀಶನ ಸ್ಮರಣಿ
ಆಸಮ ಸದಗುರು ಬೋಧಾಮೃತ ಕರುಣಿ       ||೨||

                 ****

ಕೀಲಿಕರಣ: ಎಂ.ಎನ್.ಎಸ್. ರಾವ್

ಇಂದು ಏಕಾದಶಿ ವ್ರತವ ತೀರಿಸಿದೆ

-ಶಿಶುನಾಳ ಶರೀಫ್

ಇಂದು ಏಕಾದಶಿ ವ್ರತವ ತೀರಿಸಿದೆ
ಶ್ರೀ ಗುರುನಾಥನುಪದೇಶ ಬಲದಿಂದ     ||ಪ||

ಹೊಂದಿದೆನು ದ್ವಿತೀಯ ಸಂದ್ಯಾವಂದನೆಯ ಕಾಲದಲಿ
ಬಂಧುರ ಬಯಲು ಬ್ರಹ್ಮಾನಂದದಲಿ      ||೧||

ತೋಟ ಸರೋವರ ಸಹಿತ ಲಕ್ಷ್ಮಿ ವಿಲಾಸಕೆ ಸೀಬೆ ವೃಕ್ಷದ ನೆಲದೀ
ನಿಟಾದ ವೃಂದಾವನವ ವಿವಾಹದ್ವಾದಶಿ ನಾಳೆ ನೋಡೆ
ತ್ರಿಕೂಟದ ಜೋತಿ ಬೆಳಕಿನೊಳುಸರಿದೆ      ||೨||

ಭೂಮಿಪ ಸಮಾನ ಮಾಮಲೇದೇಶಪಾಂಡೆ
ರಾಮರಾವಜಿ ನೀನು ಜ್ಞಾನದಿಂ ತಿಳಿದೇ     ||೩||

ಸೀಮೆಯೊಳು ಶಿಶುನಾಳಧೀಶನೊರವಿಲೆ ಬಂದು
ನೇಮಿಸಿರುವ ನಾಗನೂರೆಂಬಸ್ಥಲದಿ ನಿಂದು ||೪||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಮನದೊಳಗಣ ಕಿಚ್ಚು

- ಅಬ್ಬಾಸ್ ಮೇಲಿನಮನಿ

ಕರೀಮ ಆ ಕತ್ತಲನ್ನು ಸೀಳಿಕೂಂಡು ಬಂದ. ಪೆಡಸುಪಡಸಾದ ಮೈ.... ಅಗಲಿಸಿದ ಕಣ್ಣುಗಳಲ್ಲಿ ದ್ವೇಷಾಗ್ನಿ. ಕೈಯಲ್ಲಿ ಹರಿತವಾದ ಕುಡಗೋಲು...."ಲೇss ಅಬಿದಾಲಿ. ಇವತ್ತ ನಿನ್ನ ಕತಲ್‍ರಾತ್ರಿ !" ಕತ್ತಲನ್ನು ಬೆಚ್ಚಿಬೀಳಿಸುವ ಆಸ್ಪೋಟದ ಧ್ವನಿ ...... ತೋಟದ ಅಂಗಳದ ತುಂಬಾ ಒಣಗಲು ಹರವಿದ್ದ ಶೇಂಗಾ.... ಪಕ್ಕದಲ್ಲಿ ಮಲಗಿದ್ದ ಅಬಿದಾಲಿ.... ಅವನ ಎದೆಯ ಮೇಲೆ ಒಂದೇ ನೆಗೆತಕ್ಕೆ ಹಾರಿ ಕುಳಿತ ಕರೀಮ. ಉಸಿರಾಡಲು ಹೆಣಗಾಡಿದ ಅಬಿದಾಲಿಯ ಕತ್ತು ಕತ್ತರಿಸಿತ್ತು ಅವನ ಕೈಯ ಕುಡುಗೋಲು. ಮುಲ್ಲಾನ ಚೂರಿಯಿಂದ ಕೊರಳು ಕತ್ತರಿಸಿಕೊಂಡ ಕೋಳಿಯಂತೆ ಅಬಿದಾಲಿ ವಿಲಿವಿಲಿಸಿದ. ಧಾರೆಧಾರೆ ರಕ್ತ. ಸೈತಾನ  ಹೊಕ್ಕಂತೆ ಅಬಿದಾಲಿಯ ರುಂಡ, ಮುಂಡ, ಕ್ಕೆಕಾಲು ಕೊಚ್ಚಿ "ಈ ತ್ವಾಟ ನಮಗ....  ಗೋರಿ ನಿನಗ" ಎಂದು ವಿಕಾರವಾಗಿ ಕೂಗಿದ ಕರೀಮ. ಅವನ ಕೇಕೆಗೆ ಹುಚ್ಚು ನಗೆಯ  ಆವೇಶ ತುಂಬಿತ್ತು.

ದಿಗ್ಗನೆದ್ದು ಕುಳಿತಳು ಹಮೀದಾ. ತಲ್ಲಣದ ಮೈತುಂಬಾ ಬೆವರು. ಕರುಳಲ್ಲಿ ಸಂಕಟ. ಸಾವರಿಸಿಕೊಂಡು ಎದ್ದು ಅಬಿದಾಲಿಯ ಕೋಣೆಯತ್ತ ಧಾವಿಸಿ "ಬೇಟಾ" ಎಂದು ಕರೆದಳು. "ಏನು ಅಮ್ಮಾ?" ನಿದ್ದೆಗಣ್ಣಲ್ಲೇ ಕೇಳಿದ್ದ ಅಬಿದಾಲಿ. ಮಗನ ಧ್ವನಿ ಕೇಳಿ ಹಮೀದಾಳ ಕಳವಳದ ಮನಸ್ಸು ಸಮಾಧಾನಗೊಂಡಿತು. "ಏನಿಲ್ಲ ಮಲಗು ಬೇಟಾ" ಎಂದು ಹಿಂತಿರುಗಿ ಬಂದು ಹಾಸಿಗಯಲ್ಲಿ ಕುಳಿತಳು. ಕಂಡದ್ದು  ಕನಸು ಎಂಬುದು ಅವಳ ಅರಿವಿಗೆ ಬಾರದಿರಲಿಲ್ಲ. ಆದರೆ ಅದೆಂಥ ಖರಾಬ್ ಕನಸು !

ಕರೀಮನ ಮತ್ಸರಾವತಾರ ಅವಳ ತೆರೆದ ಕಣ್ಣೆದುರು ಮತ್ತೆ ಪ್ರತ್ಯಕ್ಷವಾಗಿತ್ತು. "ಆ ಹರಾಮಜಾದೆಯನ್ನು ಕಡಿದು ಚೂರುಚೂರು ಮಾಡಿ ತ್ವಾಟದ ತುಂಬ ಚರಾಗ ಚಲ್ತಿನಿ" ಅಂದ ಅವನ ಮಾತು ಅವಳ ಎದೆಯ ಗಹ್ವರದಲ್ಲಿ ಪ್ರತಿಧ್ವನಿಸಿತು. ಒಂದೇ ರಕ್ತಕ್ಕೆ ಹುಟ್ಟಿದ ಮಕ್ಕಳು ಪರಸ್ಪರ ವೈರಿಗಳಾದರು ! ಮುಂದೆ ಎಂಥ ದುರಂತ ಸಂಭವಿಸುವುದೋ ? ತಹತಹಿಸಿದಳು ಹಮೀದಾ. ಕನಸು ವಿಜೃಂಭಿಸಿದ ಕಣ್ಣುಗಳು ಹನಿಯೊಡೆದವು.

***

ಅಬಿದಾಲಿಯ ಮೇಲೆ ಕರೀಮನಿಗೆ ವಿಪರೀತ ಸಿಟ್ಟಿದೆ ಎಂಬುದು ಅವಳಿಗೆ ಚನ್ನಾಗಿ ಗೊತ್ತಿದೆ. ತೋಟದಲ್ಲಿಪಾಲು ಸಿಗಲಿಲ್ಲ‌ಎನ್ನುವ ಕಾರಣ ಅವನ  ಮನಸ್ಸಿನೊಳಗೆ ಆಸೂಯೆಯ ಲಾವಾವನ್ನು ಕುದಿಸುತ್ತಿರುವುದು ಕೂಡಾ ಗೊತ್ತು.  ಊರಿಗೆ ತೀರಾ ಹತ್ತಿರದಲ್ಲಿರುವ ತೋಟ ಎಲ್ಲರ ಕಣ್ಣು ಕುಕ್ಕಿಸುವುದು. ಅದರ  ಮಣ್ಣ ಚಿನ್ನವೇ ! ಕಾಸೀಮಸಾಹೇಬರಿಗೆ ಅದು ಅದೃಷ್ಟ ಎನ್ನುವಂತೆ ಸಿಕ್ಕಿತ್ತು.  ಕಿರಾಣಿ ವ್ಯಾಪಾರಿಗಳಾದ ಅವರು ಹಾಳುಬಿದ್ದ ಆ ಹೊಲವನ್ನು ನಂದನವನವಾಗಿ  ಪರಿವರ್ತಿಸುವಲ್ಲಿ ಸಫಲರಾದರು. ಆ ವೇಳೆಗೆ ಅಲೆಮಾರಿಯಾಗಿ ಬಂದು ಅವರ ಜೊತೆಗೂಡಿದ ಚಲುವಜ್ಜ ತನ್ನೂಡೊಲ ಪ್ರೀತಿಯನ್ನು ತೋಟದ ಮಣ್ಣಿಗೆ ಬಸಿದ.

ಮದುವೆಯಾಗಿ ಹನ್ನೆರಡು ವಷ೯ವಾದರೂ ಮಕ್ಕಳಾಗದ ಹಮೀದಾ, ಮತ್ತೊಂದು  ನಿಕಾಹ್ ಮಾಡಿಕೊಳ್ಳಲು ಗಂಡನಿಗೆ ಒತ್ತಾಯಿಸಿದ್ದಳು. ಕಾಸೀಮಸಾಹೇಬರು ಬಿಲ್ಕುಲ್ ಆಗದೆಂದು ನಿರಾಕರಿಸಿದ್ದರು. ಹೆಂಡತಿಯ ಮೇಲಿನ ಸಾಂದ್ರವಾದ ಪ್ರೀತಿ ಆ ದಿಸೆಯಲ್ಲಿ ಅವರನ್ನು ಗಟ್ಟಿಗೊಳಿಸಿತ್ತು. ಆದರೆ ಹಮೀದಾ ಹಠ ಹಿಡಿದು, ಅನ್ನ-ನೀರು ತ್ಯಜಿಸಿ ಕುಳಿತಳು. ಸೋತ ಕಾಸೀಮಸಾಹೇಬರು ಜುಬೇದಾಳೊಂದಿಗೆ  ನಿಕಾಹ್ ಮಾಡಿಕೊಂಡರು. ಅಂಥ ಸಂಭ್ರಮದ ಕ್ಷಣದಲ್ಲಿ ಅಚ್ಚರಿ ಎನ್ನುವಂತೆ
ಜುಬೇದಾ ಮನೆ ತುಂಬಿದ ಮೂರು ತಿಂಗಳಿಗೆ ಹಮೀದಾಳ ಗರ್ಭ ಬೀಜಾಂಕುರದ ಪುಳಕ ಅನುಭವಿಸಿತ್ತು. ಆಕೆ ಅಬಿದಾಲಿಗೆ ಜನ್ಮನೀಡಿದ ಬಳಿಕ ಜುಬೇದಾ, ಶರೀಫ್,ರಹಮತ್, ಕರೀಮ್ ಹಾಗೂ ತಸ್ರಿಫಾ ಅವರಿಗೆ ತಾಯಿಯಾಗಿದ್ದಳು.

ಮಕ್ಕಳಿಗೆ ಓದಿಸಬೇಕೆಂಬ ಮಹತ್ವಾಕಾಂಕ್ಷೆ ಸಾಹೇಬರದಾಗಿತ್ತು ಆದರೆ ಮಕ್ಕಳಿಗೆ ವ್ಯವಹಾರದ ಕಡೆಗೆ ಆಸಕ್ತಿ. ರಹಮತ್, ಕರೀಮ್ ಆ ಸೆಳೆತದಿಂದ ಕಿರಾಣಿ ಅಂಗಡಿ ಹಿಡಿದು ಕುಳಿತರು. ವಸ್ತುಗಳ ಖರೀದಿಯ ಜವಾಬ್ದಾರಿಯನ್ನು ಶರೀಫ್  ವಹಿಸಿಕೊಂಡರೆ ಅಬಿದಾಲಿ ತೋಟದ ಉಸ್ತುವಾರಿಗೆ ನಿಂತ. ತೋಟದ ತೆಂಗು, ಬಾಳೆ, ದಾಳಂಬರಿ, ದ್ರಾಕ್ಷಿ, ಸೇಂಗಾ, ತರಕಾರಿ, ಧಾನ್ಯಗಳ ಮಾರ್ಕೆಟ್ ವ್ಯವಹಾರವನ್ನು  ಅವನೇ ನೋಡಿ ಕೊಂಡಿದ್ದ. ಮಕ್ಕಳ ಪರಿಶ್ರಮ, ವ್ಯವಹಾರ ಚತುರತೆ ಕಾಸೀಮ  ಸಾಹೇಬರಿಗೆ ನೆಮ್ಮದಿ ತಂದಿತ್ತು. ತಸ್ರಿಫಾ ಒಳ್ಳೆಯ ಮನೆ ಸೇರಿಕೊಂಡ ಮೇಲೆ  ಅಬಿದಾಲಿ ಮತ್ತು ಶರೀಫ್‍ರ ನಿಕಾಹ್ ಜರುಗಿದ್ದವು. ಹಮೀದಾ-ಜುಬೇದಾ ತನುವೆರಡಾದರೂ ಮನಸ್ಸೊಂದಾಗಿ ಅನ್ಯನ್ಯತೆಯ ಗಂಧ ತೀಡಿದ್ದರು.  ಕಾಸೀಮಸಾಹೇಬರ ಬದುಕು ಘಮ-ಘಮಿಸತೊಡಗಿತ್ತು.

ಅದರಲ್ಲಿ ಕೊಳಕು ಸ್ರವಿಸುವ ಇರಾದೆಯೋ ಎಂಬಂತೆ ದಾವೂದನ ಪ್ರವೇಶವಾಗಿತ್ತು. ಅಬಿದಾಲಿಗೆ ಹೆಣ್ಣುಕೊಟ್ಟ ಮಾವ ಅವನು. ನೆಂಟಸ್ತನದ ನೆಪದಲ್ಲಿ ಆಗಾಗ ಮುಖ ತೋರಿಸಿ ಹೋಗುತ್ತಿದ್ದವನು ವಷಾ೯ರು ತಿಂಗಳು ಕಳೆದ ಮೇಲೆ ಅಳಿಯನ  ಮನೆಯಲ್ಲಿತನ್ನ ಮನಸ್ಸೋ ಇಚ್ಚೆ ತಳವೂರತೊಡಗಿದ್ದ. ಕಾಸೀಮಸಾಹೇಬರು ಊರಿನಲ್ಲಿ ನಾಲ್ಕು ಉಪ್ಪರಿಗೆಯ ಮನೆ ಮತ್ತು ಆದಕ್ಕೆ ಹೊಂದಿಕೊಂಡಂತೆ ದೊಡ್ಡ ಕಿರಾಣಿ ಅಂಗಡಿಯನ್ನು ಕಟ್ಟಿಸಿದರು. ಆಲ್ಲಿ ಜುಬೇದಾ ಮತು ತೋಟದ ಮನೆಯಲ್ಲಿ ಹಮೀದಾ ಇದ್ದರು. ಇದೆಲ್ಲ ಕೌಟುಂಬಿಕ ವ್ಯವಹಾರವನ್ನು ಸರಿದೂಗಿಸುವ ಕಾಸೀಮಸಾಹೇಬರ ಕ್ರಮವಾಗಿತ್ತು. ದಾವೂದನೂ ಅದನ್ನು ತಿಳಿದವನಾಗಿದ್ದ. ಆದರೆ ಅವನ ಅಕ್ರಮ ಬುದ್ದಿ ಇದನ್ನು ಸಹ್ಯವೆಂದು ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹಾಲಿನಲ್ಲಿ ಹುಳಿ ಹಿಂಡುವುದು ಅವನ ನೀಚ ಪ್ರವೃತ್ತಿ. ಆದರೆ ಅದು ದಿಢೀರೆಂದು ಕಾಯಾ೯ಚರಣೆಗೆ ತೊಡಗುವಂಥದ್ದಲ್ಲ. ಅಂತಸ್ತು ಮತ್ತು ಆರ್ಥಿಕ ಸಾಮಥ್ಯ೯ದಿಂದ ಆವನು ಪ್ರಬಲನಾಗಿರಲಿಲ್ಲ. ಸಮೃದ್ಧ ಮಾತುಗಾರಿಕೆಯ ಜಂಭದಲ್ಲಿ ಏನೆಲ್ಲವನ್ನು ತನ್ನ ಸುಪರ್ದಿಗೆ ಒಪ್ಪಿಸಿಕೊಂಡುಬಿಡುವ ಚಾಲಾಕುತನದಿಂದ ಮುಗ್ದ  ಅಬಿದಾಲಿಯನ್ನು ತನ್ನ ತಾಳಕ್ಕೆ ಕುಣಿಯುವಂತೆ ಮಾಡಿದ್ದ. ಅವನಿಗೆ ಸಾಲುಸಾಲಾಗಿ  ಆರು ಜನ ಹೆಣ್ಣಮಕ್ಕಳು, ಅವರನ್ನು ಒಳ್ಳೆಯ ಮನೆತನಕ್ಕೆ ಕೊಟ್ಟಿದ್ದ. ಅಬಿದಾಲಿಯ ಹೆಂಡತಿ ನಸೀಮಾ ಅವನ ಕೊನೆಯ ಮಗಳು. ಚಲುವಿನ ಚಿತ್ತಾರದಂತಿದ್ದ ಆಕೆಯೆಂದರೆ  ಅವನಿಗೆ ವಿಶೇಷ ಮಮತೆ. ಅಬಿದಾಲಿ ಜೋರುಕಾ ಗುಲಾಮನಾಗಿ ಮಾಪ೯ಡುವಲ್ಲಿ  ನಸೀಮಾಳ ಲಾವಣ್ಯವೂ, ದಾವೂದನ ಕಾರಸ್ಥಾನವೂ ಯಶಸ್ಸು ಕಂಡಿದ್ದವು.

ಕಾಸೀಮಸಾಹೇಬರ ಆವಿಭಕ್ತ ಕುಟುಂಬದಲ್ಲಿ ಕಳ್ಳಿಯಹಾಲು ಸುರಿಯಲು ಅವನ ಒಳತೋಟಿ ಕಾತರಿಸಿತ್ತು ಅವನ ಆದೃಷ್ಟ ಎನ್ನುವಂತೆ ಕಾಸೀಮಸಾಹೇಬರು ಅಚಾನಕ್ಕಾಗಿ ಲಕ್ವಾ ಪೀಡಿತರಾದರು. ಕೊಡಿಸಿದ ಯಾವ ಚಿಕಿತ್ಸೆಯೂ ಫಲಕಾರಿಯಾಗದೇ ಅವರು ಬದುಕು ಸಾವಿನ ಹೋರಾಟದೊಂದಿಗೆ  ಹಾಸಿಗೆಯಲ್ಲಿ ಸ್ಥಿರವಾದರು. ದಾವೂದ ಕ್ಷಿಪ್ರವಾಗಿ ಮಗಳ ಮೂಲಕ ಅಳಿಯನ ಆಂತರಾಳದಲ್ಲಿ  ಸುನಾಮಿಯ ಅಲೆಯೆಬ್ಬಿಸಿದ್ದ. ತನಗೂ ಎಷ್ಟು ಸಾಧ್ಯವೋ ಅಷ್ಟು ಪಿತೂರಿಯ  ಗೊಬ್ಬರವನ್ನು ಅವನ ತಲೆಯಲ್ಲಿ ತುಂಬಿಸಿದ್ದ. ಅಬಿದಾಲಿ ಆ ಗೊಬ್ಬರದೊಳಗೆ ಹುಳುವಾಗಿ ಹರಿದಾಡಿದ.

***

ಕಾಸೀಮಸಾಹೇಬರು ಬರಿ ಕಣ್ಣು ಪಿಳುಕಿಸುತ್ತಿದ್ದರು. ಆವರ ತೊದಲು ಮಾತು ದುಸ್ತರವೆನಿಸಿತ್ತು. ಆವತ್ತು ಅವರು ಅಬಿದಾಲಿಗೆ ಏನನ್ನೋ ಹೇಳಲು  ಹಾತೊರೆದಿದ್ದರು. ದಾವೂದ ಆದರ ಹೊಳವು ಗ್ರಹಿಸಿಕೊಂಡವನಂತೆ ತುತಾ೯ಗಿ  ಹೋಗಿ ತನಗೆ ಪರಿಚಿತವಿರುವ ವಕೀಲರೊಬ್ಬರನ್ನು ಕರೆದುಕೊಂಡು ಬಂದಿದ್ದ.  ವಕೀಲರನ್ನು ಕಂಡ ಸಾಹೇಬರು ಕಣ್ಣರಳಿಸಿದ್ದರು. ವಕೀಲರು ಆವರ ಭಾವನೆಗಳನ್ನು  ತಿಳಿದುಕೊಳೃಲು ಬಹಳ ಹೆಣಗಾಡಿದ್ದರು. ಆದರೂ ಆವರಿಂದ ಉಯಿಲು  ಸಿದ್ದಗೊಂಡಿತ್ತು. ತಂದೆಯ ಜಡ ಹಸ್ತವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು  ಅಬಿದಾಲಿ ಅವರಂತೆ ಉಯಿಲಿನಲ್ಲಿಸಹಿ ಹಾಕಿದ್ದ.  ಇಂಥ ಕೃತ್ಯಕ್ಕೆ ಪ್ರಚೋದನೆ  ನೀಡುವ ಮೂಲಕ ಪಾಪದ ಹೊರೆಯೊಂದನ್ನು ಅಳಿಯನ ತಲೆಯ ಮೇಲೆ ಹೊರಿಸಿದ್ದ ದಾವೂದ. ಅದು ನಿಕೃಷ್ಟ ಹೊರೆಯೆಂದು ಅಬಿದಾಲಿಗೆ ತಿಳಿಯಲಿಲ್ಲ. ಸ್ಯೆತಾನ ದಾವೂದನ ಮನಸ್ಸಿಚ್ಛೆ ಸಂಭ್ರಮವೆಂದರೆ ಅತೀ ಸಂಭ್ರಮವಾಗಿ ಅನಾವರಣಗೊಂಡಿತ್ತು.

ಉಯಿಲಿನಲ್ಲಿ ಬರೆದಿರುವ ವಿಷಯವನ್ನು ಅರಿತುಕೊಳ್ಳುವ ಧಾವಂತವಿತ್ತೇನೋ.... ಕಾಸೀಮಸಾಹೇಬರು ಒಂದೇ ಸಮನೆ ತೊದಲಿದ್ದರು. ದಾವೂದ ಅದನ್ನು ನಿಲ೯ಕ್ಷಿಸಿ ವಕೀಲರನ್ನು ಕರೆದುಕೊಂಡು ಹೋಗಿದ್ದ.

ಉಯಿಲು ಆದ ನಾಲ್ಕನೆಯ ದಿನಕ್ಕೆ ಕಾಸೀಮಸಾಹೇಬರು ಕಬರ್ ಸೇರಿದ್ದರು. ಅವರ ದಿನಕಮ೯ಗಳು ಮುಗಿದ ಮೇಲೆ ಜಮಾತಿನ ಕೆಲವು ಹಿರಿಯರ ಸಮ್ಮುಖದಲ್ಲಿ ಲಕೋಟೆ ಒಡೆಯಲಾಗಿತ್ತು. ಲಾಯರ್ ಅದರೊಳಗಿನ ವಿಷಯವನ್ನು ಓದಿ  ಹೇಳಿದ್ದರು. ಊರಿನಲ್ಲಿರುವ ನಾಲ್ಕುಮನೆ, ಕಿರಾಣಿ ಆಂಗಡಿ ಜುಬೇದಾ ಮತ್ತು ಅವಳ ಮಕ್ಕಳಿಗೆ, ತೋಟ, ಅಲ್ಲಿನ ಮನೆ ಹಮೀದಾ ಮತ್ತು ಅಬಿದಾಲಿಗೆ ಪಾಲಾಗಿರುವುದೆಂದು ನಿಣ೯ಯಿಸಲಾಗಿತ್ತು.

ಕರೀಮನ ಒಡಲಲ್ಲಿ ಆಸಮಾಧಾನದ ಹೊಗೆ ಎದ್ದಿತ್ತು. ಮನೆಗೆ ಬಂದವನೇ "ಭಯ್ಯಾ ನಮಗೆ ಮೋಸ ಮಾಡಿದ" ಎಂದು ಹುಯಿಲೆಬ್ಬಿಸಿದ್ದ.
"ಉಯಿಲು ಬರಿಸಿದ್ದು ನಿಮ್ಮ ಬಾಬಾ, ಅದರಾಗೇನು ಮೋಸಾ?" ಮೋಸದ ಒಳಸುಳಿ ಗೊತ್ತಿದರೂ ಜುಬೇದಾ ಆದನ್ನು ತೇಲಿಸಿದ್ದಳು.
"ಉಯಿಲು ಬರೆಸಿದ್ದು ಬಾಬಾ ಅಲ್ಲ, ಆ ದುಷ್ಮನ್ ದಾವೂದ" ಕರೀಮನ
ಬಿಸಿರಕ್ತದ ಆಕ್ರೋಶ ಜುಬೇದಾಳ ಬಾಯಿಕಟ್ಟಿಸಿತ್ತು.

"ನಮ್ಮ ಮನೆ ವಿಚಾರದಾಗ ಆ ನಸಲಿ ಹರಾಮ್ ಯಾಕ್ ಮೂಗು
ತೂರಿಸಬೇಕು?" ಕರೀಮ ಕೇಳಿದ್ದರಲ್ಲಿ ನ್ಯಾಯವಿತ್ತು.

"ಅಲ್ಲಾಹ್ ಎಲ್ಲಾನೂ ನೋಡ್ತಾನೆ ಬಿಡು" ಮಗನನ್ನು ಸಮಾಧಾನ ಮಾಡಲು ನೋಡಿದ್ದಳು ಜುಬೇದಾ.

"ಭಯ್ಯಾನಿಗಾದರೂ ಇದು ತಿಳಿಬೇಕಿತ್ತು' ಎಂದಿದ್ದ ರಹಮತ್.

"ದಾವೂದನ ಬಗಲ ಬಚ್ಚಾ, ಬೇಶರಮ್  ಅವನು !" ಕರೀಮನ ಮಾತು ತುಚ್ಛವಾಗಿತ್ತು.

"ಅಬಿದಾಲಿ ನಿನಗಿಂತಲೂ ದೊಡ್ಡಾಂವ. ಹಂಗೆಲ್ಲಾ ಅನ್ನಬೇಡ" ಹಗುರಾಗಿ ಗದರಿದ್ದಳು ಜುಬೇದಾ.

" ಅದಕ್ಕೇ ನಮಗ ಮೋಸ ಮಾಡಿ ತನ್ನ ದೊಡ್ಡಸ್ತಿಕೆ ತೋರಿಸಿದ ಅಂವಾ. ನಮಗೂ ಆ ತೋಟದ ಮೇಲೆ ಹಕ್ಕು ಐತಿ. ಅದರಾಗ ಪಾಲು ಸಿಗುತನಕ ನಾನು ಬಿಡೂದss ಇಲ್ಲ"  ಕರೀಮನ ಧೋರಣೆ ಸವಾಲಿನಂತಿತ್ತು.

ಮಗನ ಒಡಲಲ್ಲಿ ಹುಟ್ಟಿಕೂಂಡ ಮತ್ಸರದ ಕಿಚ್ಚಿನಿಂದ ಜುಬೇದಾ ಆತಂಕ ಅನುಭವಿಸಿದ್ದಳು. ಆ ಕಿಚ್ಚು ಹೊತ್ತಿ‌ಉರಿಯಬಾರದೆನ್ನುವ ತಹತಹಿಕೆ ಕೂಡ ಅವಳಲ್ಲಿ ಹೆಚ್ಚಿತ್ತು. ತಂದೆಯ ಆಸ್ತಿಯನ್ನು ಮಕ್ಕಳು ಹೆಚ್ಚುಕಡಿಮೆ ಪಾಲುಮಾಡಿಕೊಂಡಿರಬಹುದು. ಸಂಬಂಧವನ್ನು ಪಾಲುಮಾಡಿಕೊಳ್ಳಲು ಸಾಧ್ಯವಿಲ್ಲ  ಅಂದುಕೊಂಡಿದ್ದಳಾಕೆ.

****

ತೋಟದ ಮೇಲೆ ಅಬಿದಾಲಿಗೆ ಸಹಜ ಪ್ರೀತಿ ಇತ್ತು.  ಆದರೆ ಕೆಟ್ಟ ದಾಹ ಇದ್ದದ್ದು  ದಾವೂದನಿಗೆ. ಅದರ ಫಲದ ಎಷ್ಟೋ ಭಾಗ ಈ ದಾಹದ ಉದರ ಸೇರುತ್ತಿರುವುದರ ಕಲ್ಪನೆ ಕೂಡಾ ಇರದಂತಿದ್ದ ಅಬಿದಾಲಿ. ಚಲುವಜ್ಜನಿಗೆ ತನ್ನ ಕಣ್ಣಗಾವಲು ನಿರಥ೯ಕ ಎನ್ನುವ ಸ್ಥಿತಿ. ಒಂದೆರಡು ಸಲ ದಾವೂದನ ಕಬಳಿಕೆಯ ಬಗ್ಗೆ ಅಬಿದಾಲಿಯ ಎದುರು ಪ್ರಸ್ತಾಪಿಸಿದ್ದು ವ್ಯಥ೯ವೆನಿಸಿತ್ತು. ದಾವೂದನಿಗೆ ಚಲುವಜ್ಜನೆಂದರೆ ಆಷ್ಟಕಷ್ಟೆ. ಕಾಸೀಮಸಾಹೇಬರ ಮೈತ ಆದ ಮೇಲೆ ಅವನನ್ನು ತೋಟದಿಂದ ಓಡಿಸಲು ದಾವೂದ ಹಾಕಿದ ಪ್ಲಾನನ್ನು ಹಮೀದಾ ಹುಸಿಗೊಳಿಸಿದ್ದಳು. "ಚಲುವಜ್ಜ ತೋಟದ ಜೀವಾಳ" ಎಂದಾಕೆ ಸ್ಪಷ್ಟವಾಗಿ  ಹೇಳಿದ್ದಳು.

ತೋಟದ ದಾಳಂಬರಿ ತುಂಬಿಕೊಂಡು ಲಾರಿ ಹೈದರಾಬಾದಿಗೆ ಹೋಗುವಾಗ, ಟ್ರ್ಯಾಕ್ಟರ ದ್ರಾಕ್ಷಿ, ತೆಂಗು, ಧಾನ್ಯ, ತರಕಾರಿಗಳನ್ನು ಮಾರ್ಕೆಟ್‌ಗೆ ಒಯ್ಯುವಾಗ ಕರೀಮನ ರಕ್ತ ಕಳಕಳ ಎನ್ನುವದು. ಅವನು ಒಳ್ಳೆಯ ಹುಡುಗನಾದರೂ ಸ್ವಭಾವ ನಿಷ್ಠುರ. ಆವೇಶವೂ ಹೆಚ್ಚು. ಜುಬೇದಾಳಿಗೆ ಆದೇ ಭಯ.

ಅವತ್ತು ತನ್ನನ್ನು ಕುರಿತು ಅಬಿದಾಲಿ ಕ್ಷುಲಕ ಮಾತನಾಡಿದನೆಂದು ಕೇಳಿಸಿಕೊಂಡು ಮನೆಗೆ ಬಂದು ಕೈಯಲ್ಲಿಕುಡುಗೋಲು ಹಿಡಿದುಕೊಂಡು ಬಿರುಗಾಳಿಯಂತೆ ತೋಟದ ಕಡೆಗೆ ಹೊರಟವನನ್ನು ಜುಬೇದಾ ಅಡ್ಡಗಟ್ಟಿದ್ದಳು. ಈ ಪ್ರಸಂಗ ಕೇಳಿದ ಹಮೀದಾ ಎದೆ ಒಡೆದು ಹೋದಂತೆ, ಮಗನ ಕಣ್ಣುತಪ್ಪಿಸಿ ತಂಗಿಯ ಮನೆಗೆ ಬಂದು, ಕರೀಮನ ಕೈ ಹಿಡಿದು "ಬೇಟಾ, ನಿಮ್ಮ ಭಯ್ಯಾಗ ಅಕಲು ಕಮ್ಮಿ. ದಾವೂದನ ಮಾತು ಕೇಳಿ ನಮಗ ಅನ್ಯಾಯ ಮಾಡಿದ್ದು ಖರೆ. ನೀವು ನನ್ನ ಪಾಲಿನ ಆಸ್ತಿನss ತಗೋರಿ. ಭಯ್ಯಾಗ ಮಾಫ್ ಮಾಡ್ರಿ" ಎಂದು ಗೋಗರೆದಿದ್ದಳು. ಆಕೆ ದೊಡ್ಡಮ್ಮ ಎಂಬ ಸಂಬಂಧ ಲೆಕ್ಕಿಸದೆ "ಆ ನಾಲಾಯಕನಿಗ ಮಾಫ್ ಇಲ್ಲ ನೀನು ಪಂಚರಂಗಿ ಅಟ ಆಡಬ್ಯಾಡ" ಎಂದು ಹಮೀದಾಳನ್ನು ದೂರಕ್ಕೆ ತಳ್ಳಿದ್ದ. ಜುಬೇದಾ ಮಗನ  ಕಪಾಳಕ್ಕೆ ಹೊಡೆದು ಅಕ್ಕನ ಕ್ಷಮೆ ಕೇಳಿದ್ದಳು. ಅಪಮಾನದಿಂದ ಅಳುತ್ತ ಮನೆಗೆ ಹಿಂತಿರುಗಿದ್ದಳು ಹಮೀದಾ.

ನಾ ಇನ್ಸಾಫಿ ಹಕೀಕತ್‍ನೊಂದಿಗೆ ರಾಜಿಮಾಡಿಕೊಳ್ಳುವ ಇರಾದೆ ಕರೀಮನದಲ್ಲ. ತೋಟದಲ್ಲಿ ಸಮಪಾಲು ದೊರಕಿಸಿಕೊಳ್ಳುವ ಹಸಿಹಸಿ ತುಡಿತದಲ್ಲಿ ಅವನು ಕೋಟಿ೯ನ ಮೆಟ್ಟಲೇರಲು ನಿಧ೯ರಿಸಿದ್ದ. ಲಾಯರ್ ಹತ್ತಿರಕ್ಕೂ ಹೋಗಿ  ಮಾತನಾಡಿದ್ದ. ಈ ವಿಷಯದಲ್ಲಿ ಜುಬೇದಾ ಮಗನನ್ನು ವಿರೋಧಿಸಿದ್ದಳು.  ಅಷ್ಟಲ್ಲದೇ ಜಮಾತಿನ ಚೇರ್ಮನ್ ಫಕ್ರುದ್ದೀನಸಾಹೇಬರನ್ನು ಕರೆಯಿಸಿ ಮಗನಿಗೆ  ಬುದ್ಧಿ ಹೇಳಿಸಿದ್ದಳು. ಕೋರ್ಟು-ಕಚೇರಿಯ ಸಂಗತಿ ಸುಖದ್ದಲ್ಲ  ಎಂದು  ಫಕ್ರುದ್ದೀನರು ಕರೀಮನಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಅವನ ಮನದೊಳಗಣ ಕಿಚ್ಚಿನ್ನು ತಣ್ಣಗಾಗಿಸಲು ಅವರಿಂದ ಸಾಧ್ಯವಾಗಲಿಲ್ಲ.

ಅವನು ಹಮೀದಾಳನ್ನು ಆವರಿಸಿಕೊಂಡಿದ್ದು  ಇದೇ ಕಾರಣಕ್ಕಾಗಿ. ತನ್ನ ಮಡಿಲಲ್ಲಿ ಕೂಸಾಗಿ ಆಡಿದ ಕರೀಮ ಮೀಸೆ ಬಂದಮೇಲೆ ಎಷ್ಟು ಬದಲಾಗಿದ್ದಾನೆ ಎಂದು ಆಕೆಯ ಹೃದಯ ಚಡಪಡಿಸಿತ್ತು. ಆವನು ತನ್ನನ್ನು ಪಂಚರಂಗಿಯೆಂದು ಲೇವಡಿ ಮಾಡಿ ಕರುಳ
ಮಮತೆ ಕಡೆಗಣಿಸಿ ನೂಕಿದ್ದು ಅಬಿದಾಲಿಯ ಮೇಲಿನ ದ್ವೇಷದ ಪರಿಣಾಮದಿಂದ ಎಂದಾಕೆ ತಿಳಿದಿದ್ದಳು. ಅಬಿದಾಲಿ ಮಾಡಿದ ದ್ರೋಹ ದುಬಾರಿಯದಾಗಿದೆ. ಅದು ಕರೀಮನಿಗೆ ಅಸಹನೆ ಹುಟ್ಟಿಸಿದೆ. ಮಗನ ಬದುಕು ಹೇಗೋ ? ಎಂಬ ಚಿಂತೆಯಿಂದ ಅವಳ ಜೀವ ಸೊಗಸು ಕಳೆಗುಂದಿತ್ತು. ಮೊದಲಿನಂತೆ ಆಕೆ ತೋಟದಲ್ಲಿ  ಸುತ್ತಾಡುವುದನ್ನು ನಿಲ್ಲಿಸಿದ್ದಳು. ಹೊರಗೆ ಬಂದರೆ ಕರೀಮನ ವ್ಯಗ್ರ ಮುಖವೇ  ಅವಳೆದುರು ನಿಲ್ಲುವುದು. ಇಲ್ಲೆಲ್ಲೋ ಆವನು ಜಪ್ಪಿಸಿಕೂಂಡು ಕುಳಿತಿರುವಂತೆ, ಅಬಿದಾಲಿಯ ಬೇಟೆಗೆ ಹೊಂಚುಹಾಕಿ ಸುಳಿದಾಡುತ್ತಿರುವಂತೆ ಗುಮಾನಿ  ಹುಟ್ಟಿಸಿಕೊಂಡ ಆಕೆ "ಯಾರಬ್ಬಾ !" ಎನ್ನುತ್ತಾ ತಸಬಿ ಹಿಡಿದು ಕುಳಿತು  ಬಿಡುತ್ತಿದ್ದಳು.

ಮಕ್ಕಳ ಭವಿಷ್ಯಕಾಗಿ ಹೆತ್ತವರು ದುಡಿದು ಸಣ್ಣಾಗುವರು. ಬಾಯಿಗೆ ಮಣ್ಣು ಹಾಕಿಕೊಂಡು ಸಂಪತ್ತು ಸಂಗ್ರಹಿಸುವರು. ಅವರ ಬೆವರು ವಾಸನೆಯ ಪರಿಮಳವನ್ನು ಆಸ್ವಾವದಿಸುವ ಮಕ್ಕಳು ಮಾತ್ರ ನೀಚರಾಗುವರು. ಸಂಪತ್ತು ಗಳಿಸುವವರಿಗೆ  ನೋವೇ ಗತಿ ! ಅಲ್ಲಿ ಅವರು ಎಂಥ ಯಾತನೆ ಆನುಭವಿಸುತ್ತಿದ್ದಾರೋ ?  ಹಮೀದಾ ಗಂಡನನ್ನು ನೆನಪಿಸಿಕೊಂಡು ಚಡಪಡಿಸುತ್ತಿದ್ದಳು.

****

ರಾತ್ರಿ ಕಂಡ ಭೀಕರ ಕನಸ್ಸಿನಿಂದಾಗಿ ಭೀತಿಗೊಳಗಾದ ಆಕೆ ಇಡೀ ದಿನ ನಮಾಜು  ಮಾಡತೊಡಗಿದ್ದಳು. ಅಬಿದಾಲಿ ಆಮ್ಮಾSS  ಎಂದು ಕೂಗಿದ್ದ . ದು‌ಆ ಬೇಡಿ ಮುಖದ ಮೇಲೆ ಹಸ್ತಗಳನ್ನು ಆಡಿಸಿಕೊಂಡು ಹೊರಬಂದಳು ಹಮೀದಾ.

`ಈ ಸಲ ಸೇಂಗಾ ನೂರು ಚೀಲ ಆಗುವುದು ಅಮ್ಮಾ' ಉತ್ಸಾಹದಿಂದ ಹೇಳಿದ ಅಬಿದಾಲಿ.

"ಎಲ್ಲಾ‌ಆ ದೇವರ ದಯ !" ಪ್ರತಿಕ್ರಿಯಿಸಿದಳು ಹಮೀದಾ.

"ಅಮ್ಮಾ ನಾಳೆ ಅಡತಿಗೆ ಹೋಗಿ ಸೇಂಗಾ ಹಚ್ಚಿ ಬರಬೇಕು" ಅಬಿದಾಲಿ ಹೇಳಿದ.

"ನಾಡದು ಬಡೋಂಕೆ ಈದ್. ಆಮೇಲೆ ಶಬ್ಬೇ ಬಾರಾತ್ ಅದು ಮುಗಿಲಿ ಬೇಟಾ" ಎಂದಳು ಹಮೀದಾ.

ಅವನ ಉಲ್ಲಾಸದ ಕ್ಷಣವನ್ನು ಅವಕಾಶ ಮಾಡಿಕೊಂಡ ಆಕೆ "ನಿಮ್ಮ ಬಾಬಾನ ಮೈಯತ್ತಾಗಿ ನಾಲ್ಕು ವಷ೯ ಆಯ್ತಲ್ಲಬೇಟಾ" ಎಂದು ತನ್ನಂತರಂಗದ ಮಾತಿಗೆ  ಪೀಠಿಕೆ ಹಾಕಿದಳು. ಅಬಿದಾಲಿ ಹೌದು ಎಂದ. ಅವಳ ಕಣ್ಣಲ್ಲಿ ತಟ್ಟನೆ ನೀರು ಜಿನುಗಿತು.

"ನಿಮ್ಮ ಬಾಬಾನ ಆತ್ಮಕ್ಕ ಶಾಂತಿ ಇಲ್ಲಾ ಅನಸ್ತೈತಿ. ಆವರು ಮ್ಯಾಲಿಂದ ಮ್ಯಾಲೆ ಕನಸನ್ಯಾಗ ಬರ್‍ತಾರ. ಒಂದೂ ಮಾತss  ಆಡುದಿಲ್ಲ. ಸುಮ್ಮನ ನಿಂತ್ಕೊಂಡು  ಅಳತಾರ" ಹೊಯ್ದಾಡಿದಳು ಹಮೀದಾ.

"ಬಾಬಾನಿಗೆ ಏರಿಸಲು ನಾನು ಕಪಡಾ ತರ್‍ತೀನಿ ಅಮ್ಮ" ತಾಯಿಗೆ ಸಮಾಧಾನ ಹೇಳಿದ ಅಬಿದಾಲಿ.

"ಅವರ ಮನಸ್ಸಿನ್ಯಾಗ ಏನೋ ಕೊರಗು ಇರುವುದು ಬೇಟಾ" ಎಂದ ತಾಯಿಯ  ಮುಖವನ್ನು ಅದೇನು ಎನ್ನುವಂತೆ ನೋಡಿದ ಅಬಿದಾಲಿ.

"ನಿನ್ನ ತಮ್ಮಂದಿರು ಬ್ಯಾರೆ ಇರುದರ ಸಂಕಟ ಇರಬೇಕು"

"ನಮ್ಮಿಂದ ಅವರೇ ದೂರ ಇದ್ದಾರಲ್ಲ ಅಮ್ಮಾ"

"ಈ ತ್ವಾಟದಾಗ ಪಾಲು ಸಿಗಲಿಲ್ಲ ಅಂತ ಅವರಿಗೆ ಬೇಜಾರು"

"ಅದು ಹೊಟ್ಟಿಕಿಚ್ಚು ಅನ್ನು"

"ಆ ಹುಡುಗರು ಅಂಥವರಲ್ಲ ಬೇಟಾ"

"ನನಗಿಂತ ನಿನಗೆ ಅವರ ಮ್ಯಾಲೆ ನಂಬಿಕಿ ಜಾಸ್ತಿ"

"ನೀವೆಲ್ಲಾರೂ ನನ್ನ ಮಡಿಲಾಗ ಆಡಿ ಬೆಳದೋರು. ನನಗ ಎಲ್ಲಾರೂ ಅಷ್ಟೆ.
ಆದ್ರ ಪಾಲಿನ ವಿಷಯದಾಗ ಜನರು ಆಡಿಕೊಳ್ಳೋ ಮಾತು ನನ್ನೆದಿ ಇರಿತಾವು
ಬೇಟಾ"

"ಜನರ್‍ಯಾಕಂತಿ? ಆ ನಿನ್ನ ಮಕ್ಳss ಊರತುಂಬಾ ಹೇಳ್ಕೊಂತ ತಿರಗತಾರನ್ನು"

"ಎಷ್ಟss ಆಗಲಿ ಆವರು ನಿನಗಿಂತ ಸಣ್ಣವರು"

"ಆ ತಾಯಿ-ಮಕ್ಳು ಭಾರಿ ಜಾಬಾದಿ ಆದಾರ. ಬಾಬಾ ಇರುವಾಗss ಒಳಗಿಂದೊಳಗ ರೊಕ್ಕಾ, ಬಂಗಾರ ಮಾಡ್ಕೊಂಡಾರ. ನಿನಗೇನು ಗೊತ್ತಾಗುದಿಲ್ಲ. ದಾವೂದ ಮಾಮು ನನಗೆಲ್ಲಾ ಹೇಳ್ಯಾನ."

"ನೀನು ಓತಿಕಾಟದ ಮಾತು ನಂಬ್ತಿ. ಬ್ಯಾನಿ ತಿಂದು ಜನ್ಮಕೊಟ್ಟಾಕಿ ಮಾತಿಗೆ  ಕಿಮ್ಮತ್ತಿಲ್ಲ ನಿನ್ನ ಛೋಟಿ ಅಮ್ಮ ಆಗ್ಲಿ ತಮ್ಮಗೋಳಾಗ್ಲಿ ಖರಾಬ್ ಆಲ್ಲ.  ಈ  ತ್ವಾಟಾ ಬೇಕಾದ್ರ ನೀನss ತಗೋ. ಆದ್ರ ಅವರನ್ನ ಹತ್ರ ಕರಕೋ. ದ್ವೇಷಾನ  ಪ್ರೀತಿಯಿಂದ ಗೆಲ್ಲುದರಾಗ ಖುಷಿ ಇರೋದು ಬೇಟಾ. ಹ್ಯಾಂಗು ಈಗ ಮೌಕಾ ಐತಿ. ಅವರನ್ನ ಕರಿಸು. ಎಲ್ಲಾರೂ ಕೂಡಿ ಫಾತಿಹಾ ಕೊಟ್ರ ನಿಮ್ಮ ಬಾಬಾನ ಆತ್ಯಕ್ಕ ಶಾಂತಿ  ಸಿಗತೈತಿ" ಒಳತುಡಿತ ಪ್ರಕಟಿಸಿದಳು ಹಮೀದಾ.

" ಅವರು ಬೇಕಾದ್ರ ಬರಲಿ. ನಾನಂತೂ ಸಲಾಮ್ ಹೊಡೆಯೊದಿಲ್ಲ "

" ಇಂಥಾ ಹಠದ ಮಾತು ನಿನಗೆ ಶೋಭಾ ತರುದಿಲ್ಲ ಬೇಟಾ "

" ಮನಷ್ಟು ಕೆಡಿಸಿಕೊಂಡವರ ಬಗ್ಗೆ ನಾನು ತಲಿ ಕೆಡಿಸಿಕೊಳ್ಳೋದಿಲ್ಲ "

"ಯಾ ರಬ್ಬಾ! ನಾನು ಗೋರಿಗೆ ಹೋಗುತನಕ ಇಂಥ ಮಾತss ಕೇಳಬೇಕಾ?"

ಹಣೆಬಡಿದುಕೊಂಡಳು ಹಮೀದಾ.

***

ಚೆಲುವಜ್ಜನ ಎದುರು ನಿಂತುಕೊಂಡ ಅಬಿದಾಲಿ ಬೇಸರದಿಂದ ಒಟಗುಟ್ಟಿದ "ಅಮ್ಮಾನದೊಂದು ದೊಡ್ಡ -ಕಿರಿಕಿರಿಯಾಯ್ತು"

" ಏನಾಯ್ತು ಮುನ್ನಾ ? " ದ್ರಾ,ಕ್ಷಿಯ ಬಳ್ಳಿಗೆ ಔಷಧಿ ಸಿಂಪಡಿಸುತ್ತಲೇ ಕೇಳಿದ ಚಲುವಜ್ಜ.

" ಈದ್ಗೆ ಅವರನ್ನು ಕರಸು ಅಂತಾಳೆ ಅಮ್ಮಾ"

" ಯಾರನ್ನ? "

" ಛೋಟಿ ಅಮ್ಮಾ ಮತ್ತ ಆಕೆಯ ಮಕ್ಕಳನ್ನ "

" ಭಾಭಿ ಹೇಳಿದ್ದು ಛಲೋ ಮಾತು. ಕರಸಿ ಬಿಡು ಮುನ್ನಾ "

" ಚಾಚಾ, ನಿಂದೂ ಆದೇ ರಾಗ, ಅದೇ ಹಾಡಾತು "

" ಭಾಭಿ ಹೇಳುದ್ರಾಗ ತಪ್ಪಿಲ್ಲ ಮುನ್ನಾ "

" ನಾನು ಸವ೯ನಾಶ ಆಗಬೇಕಂತ ಯೋಚಿಸ್ತಾರ ಆವರು "

" ಹಾಗಾಂತ ಯಾರು ಹೇಳಿದ್ರು ನಿನಗ? "

" ಅದೆಲ್ಲಾ ಬೆನ್ನ ಹಿಂದಿನ ಮಾತು. ಖರೆ ಎಷ್ಟೋ ,ಸುಳ್ಳು ಎಷ್ಟೋ? ಅವರು ಅಂದ್ರಂತ ನೀನು, ನೀನು ಮಾತಾಡದಿ ಅಂತ ಅವರು ಸುಮ್ಮ ಸುಮ್ಮಕ ಮನಸ್ಸಿನ್ಯಾಗ ಕಿಚ್ಚು ಹೊತ್ತಿಸಿಕೊಂಡೀರಿ. ಇಂಥಾ ಕಿಚ್ಚಿಗೇ ಅಲ್ಲೇನು ಮಹಾಭಾರತ  ನಡೆದಿದ್ದು; ಕುರುಕ್ಷೇತ್ರ ಯುದ್ಧ ಆಗಿದ್ದು "

" ಆ ಕಿಚ್ಚು ಅವರ ಹೊಟ್ಯಾಗಿಂದು "

" ನಿಂದೋ, ಅವರದೋ. ಕಿಚ್ಚಿಗೆ ಗಾಳಿ ಊದಾಕಹತ್ತೀರಿ. ಅದು ನಿಮ್ಮನ್ನ ಸುಡತೈತಿ ಅನ್ನೋ ಪ್ರಜ್ಞಾ ಇಲ್ಲಾ"

" ಎಲ್ಲಾರೂ ಒಂದಿನಾ ಸಾಯೋದೈತಿ ಬಿಡು ಚಾಚಾ "

" ಹುಟ್ಟಿದ ಮನುಷ್ಯಾ ಸಾಯೋದು ಖರೆ. ಆದ್ರ ಹೀಂಗ ದ್ವೇಷಾ ಮಾಡಿ ಸಾಯೋದ್ರಾಗ ಅಥ೯ ಇಲ್ಲ. ದೇವರು ನಮಗ ಬದುಕಾಕ ಹುಟ್ಟಿಸ್ಯಾನ. ಒಟ್ಟಿಗೇ ಇರಾಕಂತ ಭೂಮಿ ಕೊಟ್ಟಾನ. ಪ್ರೀತಿ ಹಂಚ್ಗೊಂಡು ಇರುದು ಬಿಟ್ಟು ಸಾಯೋ  ಆಟಾ ಆಡ್ತೀನಂದ್ರ ಇದೇನು ಬುದ್ಧಿನೋ ತಮ್ಮ " ಚಲುವಜ್ಜ ನಿಟ್ಟುಸಿರಿದ. ಮತ್ತೆ ಅವನ ಕಣ್ಣಿಂದ ನೀರು ಉದುರಿತು. "ಚಾಚಾ, ನೀನು ಅಳಾಕ ಹತ್ತಿ ?" ಅಚ್ಚರಿಯಿಂದ ಕೇಳಿದ ಅಬಿದಾಲಿ.

"ಹಳೆದೆಲ್ಲಾ ನೆಪ್ಪಾತು ಮುನ್ನಾ .... .." ಧೋತರದ ಚುಂಗಿನಿಂದ ಕಣ್ಣೊತ್ತಿಕೊಂಡ ಚಲುವಜ್ಜ.

"ನೆನಪಾ.... ಅದೇನು ಚಾಚಾ?" ಅಬಿದಾಲಿ ಕೇಳಿದ.

ಚಲುವಜ್ಜನ ಮುಖದಲ್ಲಿ ಒಮ್ಮೆಲೇ ದುಗುಡ ಆವರಿಸಿಕೊಂಡಿತು. ತಾನು ಇದುವರೆಗೂ ಕಂಡಿರದ ನೋವು ಅಲ್ಲಿ ಹೆಪ್ಪುಗಟ್ಟಿದೆ ಅನಿಸಿ, ಏನೂ ಕೇಳಬಾರದೆಂದು ಅಬಿದಾಲಿ ಮೌನವಹಿಸಿದ. ಆದರೆ ಹೇಳದೇ ಇರಬಾರದೆಂದು ನಿಧ೯ರಿಸಿದವನಂತೆ
ಚಲುವಜ್ಜ ತನ್ನ ಹೆಗಲಿಗೆ ಹಾಕಿಕೊಂಡಿದ್ದ ಪಂಪನ್ನು ಕೆಳಗಿರಿಸಿ, ಸಮೀಪದ ಬದುವಿನ ಮೇಲೆ ಕುಳಿತ. ಬಗಲಗಸಿ ಅಂಗಿಯ ಜೇಬಿನಿಂದ ಬೀಡಿಯೊಂದನ್ನು ತೆಗೆದು ಬಾಯಿಗಿಟ್ಟು ಕಡ್ಡೀಗೀರಿದ. ಉರಿಯುತ್ತಿದ್ದ ಕಡ್ಡಿಯನ್ನು ಅಬಿದಾಲಿಗೆ ತೋರಿಸುತ್ತ  "ಇದss.... ಇದss  ಉರಿ ತಮ್ಮ, ನನ್ನ ಜೀವನಾನ ss ಭಸ್ಮ ಮಾಡ್ತು" ಎಂದು ಬೀಡಿ ಹಚ್ಚಿಕೊಂಡು ಕಡ್ಡಿಯನ್ನು ಮಣ್ಣಿನಲ್ಲಿ ತಿಕ್ಕಿ "ಹೀಂಗ ಉರಿ ಆರಸಾಕ  ನನಗಾಗ ಸಾಧ್ಯ ಆಗಲಿಲ್ಲ " ಎಂದು ನೆನಪಿನ ಸುರುಳಿ ಬಿಚ್ಚಿದ.

"ಹತ್ತು-ಹನ್ನೆರಡರ ವಯಸ್ಸು ನಂದು. ಸಾಲಿ ಕಲ್ಯಾಕಂತ ಅಜ್ಜಿ ಊರಾಗ ಇದ್ಯಾ. ನನಗ ಒಬ್ಬಾಕಿ ತಂಗಿ. ಮೂರು ಮಂದಿ ಅಣ್ಣಂದಿರು. ಅಪ್ಪನ ಕೂಡ ಅವರು ಒಕ್ಕಲತನ ಮಾಡ್ತಿದ್ರು. ನಮ್ಮದು ಹತ್ತು ಎಕರೆ ನಿರಾವರಿ ಜಮೀನು. ಅಜ್ಜ ಗಳಿಸಿದ ಆಸ್ತಿ ಅದು. ಅಂವ ತೀರಿಕೊಂಡ ಮ್ಯಾಲೆ ಅವನ ಅಣ್ಣನ ಮಕ್ಕಳು ತೊಂಟ ನ್ಯಾಯಾ ತಗೆದು ಭೂಮಿ ತಮ್ಮದು ಅಂದ್ರು. ಅವರದೊಂದು ತುಂಡು ಜಮೀನು ನಮ್ಮ ಭೂಮಿಗೆ ಹೊಂದಿಕೊ೦ಡಿತ್ತು. ಅದು ತಲೆಮಾರುಗಳ ಆಸ್ತಿ‌ಎಂದು ಖೊಟ್ಟಿ ದಾಖಲೆ ಸೃಷ್ಟಿ ಮಾಡಿ ಕೋಟಿನ್ಯಾಗ ದಾವಾ ಹೂಡಿದ್ರು. ಪ್ರತಿ ಹಂತದಾಗೂ ಕೇಸು ನಮ್ಮಂಗ ಆತು. ಸೋತ ಅವರು ರಾಕ್ಷಸರಾದರು. ಅವರ ಮನದಾಗ ದ್ವೇಷದ ಬೆಂಕಿ ಹೊತಗೊಂತು. ಅದು ಪ್ರಳಯಾಗ್ನಿ ಆತು. ಒಂದಿನಾ ರಾತ್ರಿ ಅವರು ನಮ್ಮ ತ್ವಾಟದ ಮನಿಗ ಬೆಂಕಿ ಹಚ್ಚಿದ್ರು. ಒಳಗ ಮಲ್ಕೊಂ೦ಡ ನಮ್ಮಪ್ಪ, ನಮ್ಮವ್ವ, ತಂಗಿ, ಅಣ್ಣಂದಿರು, ಅವರ ಹೆಂಡಿರು - ಮಕ್ಕಳು ಸುಟ್ಟು ಕರಕಲಾದ್ರು...." ಚಲುವಜ್ಜ  ಬಿಕ್ಕಳಿಸಿದ. ತುಸು ಹೊತ್ತಿನ ಬಳಿಕ ಹೇಳಿದ "ಭೂಮಿ ಮ್ಯಾಲೆ ಈ ಪರದೇಶಿ ಜನ್ಮ  ಒಂದss  ಉಳಿತು"

ಅಬಿದಾಲಿ ಕೇಳಿದ "ಚಾಚಾ ನೀನು ಮತ್ತ ಅಲ್ಲಿಗೆ ಹೋಗಲ್ಲಿಲ್ಲೇನು? "

"ಅವರು ಬಹಳ ದುಷ್ಟರು ಅಂತ ನಮ್ಮಜ್ಜಿ ನನ್ನ ಅಲ್ಲಿಗ ಕರಕೊಂಡು ಹೋಗಲಿಲ್ಲ.  ಆಕಿ ಒಬ್ಬಾಕಿ ಹೋಗಿ ಕರಕಲ ದೇಹಕ್ಕ ಮಣ್ಣುಹಾಕಿ ಬಂದ್ಲು"  ಗಂಟಲು ತುಂಬಿಕೊಂಡು ಹೇಳಿದ ಚಲುವಜ್ಜ.

"ಅವರಿಗೆ ಶಿಕ್ಷಾ ಆಗಲಿಲ್ಲೇನು?"

"ಅವರ ವಿರುದ್ದ ಹೋರಾಡೋರು ಯಾರಿದ್ರು? ಕೋರ್ಟ್‌ನ್ಯಾಗ ಸಾಕ್ಷಿ ಇಲ್ಲದ ಪಾರಾದ್ರು. ನಮ್ಮ ಜಮೀನು ನುಂಗಿದ್ರು. ಆದ್ರ ದಿನಾ ಕಳಧಾಂಗ ಅವರವರ ಕಚ್ಚಾಡಿ, ಭೂಮಿ ಮಾರ್ಕೊಂಡು ಒಬ್ಬಿಬ್ಬರ ಬ್ಯಾನಿ ಎಂಬೋ ಬ್ಯಾನಿಯೊಳಗ, ನರಕಾ ಆನ್ನೋ ನರಕದಾಗ ನೆಳ್ಳಾಡಿ ಸತ್ರು. ದೇವರ ಕೋರ್ಟನ್ಯಾಗ ಯಾರು ಪಾರಾಗ್ತಾರೋ ತಮ್ಮ?" ಎಂದು ಮತ್ತೆ ಆರಿದ ಬೀಡಿಗೆ ಕಡ್ಡಿಗೀರಿ ಜುರುಕಿ ಎಳೆದ ಚಲುವಜ್ಜ.  ಮತ್ತೆ ಹೊಗೆಯ ಜೊತೆಗೆ "ನಮ್ಮ ಆಜ್ಜಿನೂ ಸತ್ತು ಹ್ವಾದ್ಲು. ನಾನೂ ಊರೂರು ತಿರುಕೊಂತ ಇಲ್ಲಿ ಬಂದು ಸೇರ್ಕೊಂಡ್ಯಾ. ನಿಮ್ಮ ಬಾಬಾ ನನ್ನ  ತಮ್ಮನಂಗ ನೋಡಕ್ಕೊಂಡ" ಎನ್ನುತ್ತಿರುವಂತೆ ದಾವೂದ ಆವನ ಹತ್ತಿರ ಬಂದು  ನಿಂತಿದ್ದ.

"ಏನ ಕತಿ ಸುರು ಮಾಡಿಯಪ ಚಲುವಜ್ಜ. ನಮ್ಮ ಅಳೀಯ ದಂಗಾಗಿ ಕುಂತು ಬಿಟ್ಟಾನ ?" ಎಂದು ಕೇಳಿದ ಆವನ ಪ್ರಶ್ನೆಗೆ ಉತ್ತರಿಸದೇ ಆಲ್ಲಿಂದ ಎದ್ದು ಹೋದ ಚಲುವಜ್ಜ .

"ನಾಳೆ ನಾನು ಊರಿಗೆ ಹೋಗಿ ಬತ್ತೀನಿ " ಎಂದ ದಾವೂದ. ಕೂಡಲೆ ತಾಯಿ ಆಡಿದ ಮಾತುಗಳನ್ನು ಮಾವನೆದುರು ಪ್ರಸ್ತಾಪಿಸಿದ ಅಬಿದಾಲಿ.

"ಅವರನ್ನು ಕರಿಬ್ಯಾಡ. ನಿನ್ನ ಅಮ್ಮಾನಿಗೆ ಏನೂ ಗೊತ್ತಾಗುದಿಲ್ಲ. ದೂರ ಇರುವ ಇಬ್ಲೀಸಗಳನ್ನು ಮತ್ತ ಒಳಗ ಕರಕೋಬ್ಯಾಡ ನೀನು. ಅದರಿಂದ ನಿನಗ ss  ಲುಕ್ಸಾನು" ದಾವೂದ ಎಚ್ಚರಿಸಿದ.

"ಆದ್ರ ಆಮ್ಮ ಹಠ ಹಿಡಿದಾಳ " ದಿಕ್ಕು ತೋಚದಂತೆ ಹೇಳಿದ ಅಬಿದಾಲಿ.

"ನಿಮ್ಮ ಅಮ್ಮಾಂದು ಸೆರಗಿನ್ಯಾಗ ಕೆಂಡಾ ಕಟಗೊಳ್ಳು ಚಾಳಿ. ಆ ಕರೀಮಾ ಮೊದಲ ಧಗಾಧಗಾ ಉರ್‍ಯಾಕ ಹತ್ಯಾನ. ಮತ್ತ ತ್ವಾಟಕ್ಕ ಬೆಂಕಿನೂ ಹಚ್ಚತೀನಿ ಅಂದಾನ. ನೀನು ಹುಷಾರಿರು"  ಹೆದರಿಸುವ ಮಾತು ಆಡಿದ ದಾವೂದ. ಅಣ್ಣ ತಮ್ಮಂದಿರ ನಡುವೆ ಇದ್ದ ದ್ವೇಷವನ್ನು ಬಲಗೊಳಿಸುವ ಧಾಟಿ ಆವನ  ಮಾತಿನಲ್ಲಿತ್ತು. ಅದನ್ನು ಅರ್ಥ ಮಾಡಿಕೊಳ್ಳದೆ " ಆ ನಾಮರ್ದ ಹೀಂಗ ಹೇಳಕೊಂತ  ಬಂದಾನ ಬಿಡು ಮಾಮು" ಎಂದು ಉದಾಸೀನ ವ್ಯಕ್ತಪಡಿಸಿದ ಅಬಿದಾಲಿ.

***

ಶಬ್ಬೇ ಬಾರಾತದ ನಮಾಜಿಗೆಂದು ಅಬಿದಾಲಿ ಮಸೀದಿಗೆ ಬಂದ. ತಳಮಳದ  ಮನಸ್ಸಿನಿಂದಲೇ ನಮಾಜು ಪೂರೈಸಿದ. ಬೇರೆ ಕಡೆಯಿಂದ ಆಗಮಿಸಿದ ಮೌಲಾನಾ ಆವರು ಶಬ್ಬೇ ಬಾರಾತದ ಮಹತ್ವ ಕುರಿತು ಬಯಾನಾ ಶುರು ಮಾಡಿದರು. ಅಬಿದಾಲಿಯ ಎದುರು ತಾಯಿಯ ಮುಖ ಕಂಡಿತ್ತು. ಅವಳ ಮೌನ ಪ್ರತಿಭಟನೆಯ ನಡುವೆ ತಾನು ಬಾಬಾನಿಗೆ ಫಾತಿಹಾ ಕೊಟ್ಟ ಪ್ರಸಂಗವನ್ನು
ಜ್ಞಾಪಿಸಿಕೊಂಡ. "ಅಲ್ಲಾಹ್ ಈ ರಾತ್ರಿ ಭೂಲೋಕದ ಕಡೆಗೆ ಗಮನ ಕೊಡುವನು " ಮೌಲಾನಾ ಗಂಭೀರವಾಗಿ ಹೇಳಿದರು. ತಾಯಿ ತುತ್ತು ಅನ್ನವನ್ನು ಬಾಯಿಗೆ ಹಾಕಿಕೊಳ್ಳದೆ, ಮುಖ ಬಾಡಿಸಿಕೊಂಡು ಕಣ್ಣೀರು ಉದುರಿಸಿದ ಸನ್ನಿವೇಶ  ಅಬಿದಾಲಿಯ ಕಣ್ಣು ಕಟ್ಟಿತು. " ಅಲ್ಲಾಹ್ ಮನುಷ್ಯನ ಪಾಪ - ಪುಣ್ಯಗಳ ಪ್ರಕಾರ  ಸುಖ - ದುಃಖಗಳನ್ನು ಹಂಚುವನು " ಎತ್ತರದ ಧ್ವನಿಯಲ್ಲಿ ಉಲಿದರು  ಮೌಲಾನಾ. ಅಬಿದಾಲಿಯೆದುರು ಕಾಸೀಮಸಾಹೇಬರ ಆರೆಪ್ರಜ್ಞಾವಸ್ಥೆಯ ನಿತ್ರಾಣ ದೇಹ ತೇಲಿ ಬಂದಿತ್ತು ಬಾಬಾನ ದುಬ೯ಲ ಆವಸ್ಥೆಯೊಂದಿಗೆ ತಾನು ವರ್ತಿಸಿದ ಕ್ಷುದ್ರ ಕ್ರಿಯೆ ನೆನಪಾಗಿ ಒಳಗೆ ಕಂಪಿಸಿದ ಅವನು.

***

ಅಬಿದಾಲಿ ಮನೆ ತಲುಪಿದಾಗ ಮಧ್ಯರಾತ್ರಿ. ಹೆಂಡತಿಯನ್ನು ಎಬ್ಬಿಸದೇ ಮನೆ ಮುಂದಿನ ಕಟ್ಟೆಯ ಮೇಲೆ ಚಾಪೆ ಬಿಡಿಸಿ ಮೈ ಚಲ್ಲಿದ.

ತನ್ನದೆನ್ನುವುದು ಏನಿತ್ತು ಈ ತೋಟದಲ್ಲಿ? ಅದೆಲ್ಲಾ ಬಾಬಾನ ಗಳಿಕೆ. ಅದನ್ನು ಅವನು ತನ್ನೊಂದಿಗೆ ಹೊತ್ತೊಯ್ಯಲಿಲ್ಲ. ತೋಟದ ಮಣ್ಣಾಗಲಿ, ಅದರೊಳಗೆ ಊರಿಕೊಂಡು ಪಲ್ಲವಿಸುವ ಬೀಜವಾಗಲಿ ಯಾವ ಫಲವನ್ನು ಅಪೇಕ್ಷಿಸುವುದಿಲ್ಲ. ತನಗೇಕೆ ಹುಟ್ಟಿತೋ ದುರಾಸೆ ? ಪಕ್ಕ ಬದಲಾಯಿಸಿದ ಅಬಿದಾಲಿ. ಅವನ ಉರಿವ ಕಣ್ಣು ನಿದ್ದೆಯ ಮಾಯೆಗೆ ಒಳಗಾಗಲು ತಡವಾಗಲಿಲ್ಲ.

ಪ್ರಜ್ವಲಿಸುವ ಕೆಂಡ. ಅದರ ಬೆಳಕಿನಲ್ಲಿ ಶರೀಫ್, ರಹಮತ್, ಕರೀಮರ ಮುಖಗಳು ಢಾಳವಾಗಿಯೇ ಗೋಚರಿಸಿದವು. ತನ್ನನ್ನೆ ನುಂಗುವಂತಿರುವ ಅವರ ಕೆಂಪು ಕಣ್ಣುಗಳು ! ಕರೀಮನ ದೇಹ ಎಂಬೋ ದೇಹ ಉರಿಯ ಕೊಳ್ಳಿಯಾಗಿ ತನ್ನ ಹತ್ತಿರ ಧಾವಿಸಿ ಬರುತ್ತಿದೆ. ಚಲುವಜ್ಜನ ವಂಶವನ್ನು ಸುಟ್ಟು ಬೂದಿಮಾಡಿದ  ಬೆಂಕಿಯೇ ಅದು! ಅಬಿದಾಲಿ ದಿಗ್ಗನೆದ್ದು ಕುಳಿತ. ಸಹಸ್ರ ನಾಲಗೆಗಳನ್ನು  ಹೊರಚಾಚಿದ ಆ ಉರಿ ಭಯಂಕರ ಸದ್ದುಮಾಡಿತು. ಎಷ್ಟೋ ಸಮಯದ ದಾಹವೋ  ಎಂಬಂತೆ ಗಾಳಿಯೊಂದಿಗೆ ಕೊಬ್ಬಿ ತನ್ನನ್ನು ಹಿಗ್ಗಿಸಿಕೊಳ್ಳುತ್ತ ಹೋಗಿ ದಾಳಂಬರಿ,  ದ್ರಾಕ್ಷಿ, ತೆಂಗು, ಬಾಳೆಗಿಡಗಳನ್ನು ಕಬಳಿಸಿತು. ಅಷ್ಟು, ಸಾಕಾಗಲಿಲ್ಲವಾಗಿ ಸೇಂಗಾ  ತುಂಬಿದ ಮೂಟೆಗಳನ್ನು ಆಕ್ರಮಿಸಿಕೊಂಡಿತು.

"ಬೆಂಕಿ .... .. ಬೆಂಕಿ .... .. ಮುನ್ನಾ ಬೆಂಕಿ... ಬೆಂಕಿ..." ಚಲುವಜ್ಜನ ಕೂಗಿಗೆ ಇರುಳು ತತ್ತರಿಸಿತು. ಹಮೀದಾ, ನಸೀಮ ಬಾಗಿಲು ತೆರೆದು ಓಡಿಬಂದರು. ರಕ್ಕಸ ಬೆಂಕಿ ಸೇಂಗಾ ಚೀಲಗಳನ್ನು ಹುರಿದು ಮುಕ್ಕತೊಡಗಿತ್ತು "ಬೇಟಾ ಅಬಿದಾಲಿ, ಬೆಂಕಿ...ಚಿಂಕಿ..." ಮಗನ ಹತ್ತಿರ ಬಂದು ಮೈ ಅಲುಗಾಡಿಸಿದಳು ಹಮೀದಾ. " ಆಂ .... .. " ಎಂದು ಮೈ ಮೇಲಿನ ಚಾದರ ಕೊಡವಿ ಎದ್ದು ಬಂದು ನಿಂತವನಿಗೆ ನೆಲದಾಳದಿಂದ ಆಕಾಶದೆತ್ತರಕ್ಕೆ ಚಿಮ್ಮುತ್ತಿರುವ ಉರಿ ಕಂಡಿತ್ತು. ಕನಸಿನಲ್ಲಿ ಕಂಡ ಉರಿಯೇ ಅದು! ಎದೆ ಝಲ್ ಎಂದಿತು. ತನ್ನ ಶಕ್ತಿಮೀರಿ ಒಮ್ಮೆ ಮಣ್ಣು ತೂರುತ್ತ, ಇನ್ನೊಮ್ಮೆ ನೀರು ಹೊಯ್ಯುತ್ತ ಚಲುವಜ್ಜ ಬೆಂಕಿ ಆರಿಸಲು ಹೋರಾಡುತ್ತಿದ್ದ. ಅಬಿದಾಲಿ, ಹಮೀದಾ, ನಸೀಮಾ  ಬೆಂಕಿಯ ಮೇಲೆ ಬೊಗಸೆ ಬೊಗಸೆ ಮಣ್ಣು ತೂರಿದರು. ಸುತ್ತಮುತ್ತಲಿನ ಜನ ಧಾವಿಸಿ ಬಂದರು. ನಂತರ ಊರಿಗೆ ಊರೇ  ಬಂದಿತು.

ಬೆಂಕಿ ಹೇಗೆ ಬಿತ್ತು? ಅಬಿದಾಲಿ ಯೋಚಿಸಿದ. ದಾವೂದ ಮಾಮು ಹೇಳಿದ್ದೇ ನಿಜವಾಯಿತು. ಇದು ಆ ನಸಲಿ ಹರಾಮ್ ಕರೀಮನದೇ ಕೆಲಸ. ಅವನನ್ನು ಹೆಡಮುರಿಗೆ ಕಟ್ಟಿ ತಂದು ಈ ಬೆಂಕಿಯಲ್ಲಿ‌ಒಗೆಯಬೇಕು ಎಂದು ಹಲ್ಲು  ಕಡಿಯುತ್ತಿರುವಂತೆ ಜನರ ಗುಂಪಿನೊಳಗಿಂದ ಶರೀಫ್, ರಹಮತ್ ಧಾವಿಸಿ ಬಂದರು.  ಅವರೊಂದಿಗೆ ಕರೀಮನೂ ಇದ್ದ. ಜನರ ಜೊತೆಗೆ ಅವರೂ ಬೆಂಕಿ ಆರಿಸಲು  ಹೆಣಗಾಡತೊಡಗಿದರು. ಕರೀಮ ಸೇಂಗಾ ಚೀಲಗಳನ್ನು ಎಳೆದೆಳೆದು ಬಯಲಿಗೆ ಹಾಕಿದ.  ದಿಙ್ಮೂಢನಾಗಿ ನಿಂತ ಅಬಿದಾಲಿ. ಹಾಗೆ ನಿಂತವನ ಪಕ್ಕ ಸೇಂಗಾ ಚೀಲವೊಂದು  ಉರುಳಿ ಬಿತ್ತು. ಕರೀಮ ಅತ್ತ ಚಿಗಿದವನೇ ಅಬಿದಾಲಿಯನ್ನು ಪಕ್ಕಕ್ಕೆ ಸರಿಸಿ,  ಚೀಲವನ್ನು ದೂರಕ್ಕೆ ಒದ್ದು, ಅನಾಹುತ ತಪ್ಪಿಸಿದ. ಸುಮಾರು ಹೊತ್ತಿನ ಬಳಿಕ ಬೆಂಕಿ  ತಹಬಂದಿಗೆ ಬಂದಿತು.

ಚಲುವಜ್ಜ ತೋಟದ ಮಣ್ಣಲ್ಲಿ ಅಚ್ಚೊತ್ತಿದ್ದ ಹೆಜ್ಜೆಗಳನ್ನು ಗಮನಿಸುತ್ತ ಹೋಗಿದ್ದ. ಹೆಜ್ಜೆಗಳು ಅಸ್ಪಷ್ಟವಾಗಿಯೇ ಇದ್ದವು. ದೂರಕ್ಕೆ ಹೋದಂತೆ  ಅಲ್ಲಿಗೊಂದು ಇಲ್ಲಿಗೊಂದರಂತೆ ಎರಡು ಚಪ್ಪಲಿಗಳು ಸಿಕ್ಕವು. ಚಲುವಜ್ಜಂಗೆ ಬೆಂಕಿ  ಹಚ್ಚಿದವರು ಯಾರೆಂದು ಖಾತ್ರಿಯಾಯಿತು. ಆ ಚಪ್ಪಲಿ ತೆಗೆದುಕೂಂಡು ಬಂದು ಅಬಿದಾಲಿಗೆ ತೋರಿಸಿದ. ದಾವೂದ ಧರಿಸುತ್ತಿದ್ದ ಕಾನ್ಪುರಿ ಚಪ್ಪಲಿಗಳು! ತೀವ್ರ  ಆಘಾತಕ್ಕೊಳಗಾದ ಅಬಿದಾಲಿ ತಟ್ಟನೆ ಕುಸಿದು ಕುಳಿತ. ಶರೀಫ್, ರಹಮತ್,  ಕರೀಮರು ಅಣ್ಣನ ಹತ್ತಿರ ಬಂದು ಪ್ರೀತಿಯಿಂದ ಮೈ ದಡವಿದರು. ಕತ್ತಲಿನ ಆಕಾಶ  ಸಾವಕಾಶವಾಗಿ ಶುಭ್ರವಾಗತೊಡಗಿತು.

             *****

ಕೀಲಿಕರಣ: ಎಂ. ಎನ್. ಎಸ್. ರಾವ್
ವ್ಯಾಕರಣ ದೋಷ ತಿದ್ದುಪಡಿ: ಶ್ರೀಕಾಂತ್ ಮಿಶ್ರಿಕೋಟಿ

ಸಾಲೆಯ ನೋಡಿದಿಯಾ ಸರಕಾರದ

-ಶಿಶುನಾಳ ಶರೀಫ್

ಸಾಲೆಯ ನೋಡಿದಿಯಾ ಸರಕಾರದ
ಸಾಲೆಯ ನೋಡಿದಿಯಾ                    ||ಪ||

ಸಾಲಿ ಸದ್ಗುರುವಿನ ಮಾಲು ಮಂಟಪವಿದು
ಮೇಲೆ ಕಾಣಿಸುವದು ಭೂಲೋಕದಲ್ಲಿ        ||ಅ.ಪ.||

ಕುಂಭ ಆರು ಮಧ್ಯದಿ
ತುಂಬಿರುವ ಒಂಭತ್ತು ದ್ವಾರದಲಿ
ಸಾಂಬ ಸದಾಶಿವ ಧ್ಯಾನಕೆ ಇಂಬಾಗಿ
ನಂಬಿಕೊಂಡು ನಿಜ ಅಕ್ಷರ ಕಲಿಸುವ        ||೧||

ಪಶ್ಚಿಮ ಬಾಗಿಲಕೆ
ಗಚ್ಚಿನ ಕೆಲ್ಸಾ ಹೆಚ್ಚಿನ ದೇಗುಲಕೆ
ಸ್ವಚ್ಚ ಪೂರ್ವೋತ್ತರ ದಕ್ಷಿಣ ದ್ವಾರದಿ
ಉಚ್ಚರಿಸುವ ತತ್ವಾಂಕಿತ ಸಾರದ          ||೨||

ಮೋಜಿಲಿಂದಿರುವ ಮಾಸ್ತಾರಾ
ರಾಜಿತಮಾದ ಸಹಜ ಶಿಕ್ಷಣ ವಿಸ್ತಾರಾ
ಸೋಜಿಗವೆನಿಪ ಶ್ರೀ ಗುಡಿಪುರ ಗ್ರಾಮದಿ
ರಾಜ ಶಿಶುನಾಳಧೀಶನ ದಯದಿಂದ     ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಶುಚಿಯಾಗಿರಬೇಕೊ

- ಡಾ || ರಾಜಪ್ಪ ದಳವಾಯಿ

ಅಣ್ಣ ಶುಚಿಯಾಗಿರಬೇಕೊ
ನೀನು ಲಕಲಕ ಅನಬೇಕೋ ||

ದಿನವೂ ಸ್ನಾನವ ಮಾಡಬೇಕು
ಶುಭ್ರ ಬಟ್ಟೆಯ ಧರಿಸಬೇಕು
ಕೂದಲ ಬಾಚಿ ನೀಟಿರಬೇಕು
ನಡೆವ ಕಾಲಿಗೆ ಚಪ್ಪಲಿ ಬೇಕು ||

ವಾರದಲೊಮ್ಮೆ ಉಗುರ ಕಟಾವು
ಆಗಾಗ ಶುದ್ಧಿ ಕಣ್ಣಿನ ತಾವು
ಬೆರಳ ತಿರುವದಿರು ಮೂಗಿಗೆ
ಬೆಳಗು ರಾತ್ರಿ ಉಜ್ಜಣ್ಣ ಹಲ್ಲಿಗೆ ||

ಹಾದಿ ಬೀದಿಲಿ ಉಗುಳಬ್ಯಾಡ
ನಾಯಿಯಂತೆ ಮೂತ್ರಬ್ಯಾಡ
ಶೌಚಾಲಯವ ಬಳಸು ನಿತ್ಯಾ
ಆಗ ನೋಡು ಬದುಕೆಂಥ ಸ್ವಚ್ಚಾ ||

ಇವೆಲ್ಲ ಮಾಡಲು ಸಬೂಬುಬ್ಯಾಡ
ದುಡ್ಡಿರಬೇಕೆಂಬ ಭ್ರಮೆಯೂಬ್ಯಾಡ
ಬಡವರೆಂದರೆ ಕೊಳಕರಲ್ಲ
ಹಣವಂತರೆಲ್ಲ ಪರಿ ಶುದ್ಧರಲ್ಲ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಗುಡಗುಡಿಯನು ಸೇದಿನೋಡೋ

-ಶಿಶುನಾಳ ಶರೀಫ್

ಗುಡಗುಡಿಯನು ಸೇದಿನೋಡೋ ನಿನ್ನ
ವಡಲೊಳಗಿನ ರೋಗಾ ತೆಗೆದು ಈಡ್ಯಾಡೋ             ||ಪ||

ಮನಸೆಂಬ ಚಂಚಿಯ ಬಿಚ್ಚಿ ದಿನ-
ದಿನಸು ಪಾಲಕವೆಂಬ ಭಂಗಿಯ ಕೊಚ್ಚಿ
ನೆನವೆಂಬ ಚಿಲುಮಿಗೆ ಹಚ್ಚಿ ಬುದ್ಧಿ
ಯೆನುವೆಂಥ ಬೆಂಕಿಯ ಮೇಲೆ ನೀ ಮುಚ್ಚಿ                  ||೧||  

ಬುರುಡಿಯೆಂಬುವದು ಶರೀರಾ ಇದು
ಮುರೆತು ಸುಕೃತ ಬಿಟ್ಟು ಕೊಳವಿಯಾಕಾರಾ
ವರನಾರಾಯಣನೆಂಬೋ ನೀರಾ ತುಂಬಿ
ಆರವೆಂಬ ಆರುವೀಯ ಹೊಚ್ಚೋ ಮೋಜುಗಾರಾ       ||೨||

ಶುದ್ಧಜ್ಞಾನವು ಮೇಲೇರುವದು
ದಾರಿದ್ರ್ಯ ದೇಹವು ಸುಟ್ಟು ಹೋಯ್ತು ಹಾರವದು
ಬುದ್ಧವಂತರಿಗೆ ತಿಳಿಯುವದು ನಮ್ಮ
ಮುದ್ದು ಚಿದಾನಂದ ಪಾದಕ್ಹೊಂದುವದು                   ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಪಯಣ

- ಗಿರಿಜಾಪತಿ ಎಂ. ಎನ್

ಸಾಗುತಿರಲಿ ಜೀವನ ಯಾತ್ರೆ
ಎಚ್ಚರೆಚ್ಚರ ಸಿರಿ ಬೆಳಕಲಿ
ಅಲ್ಲೊ, ಇಲ್ಲೊ, ಎಲ್ಲೋ ಮುಗ್ಗರಿಸದೆ
ಮನ - `ಮನ'ವ ಕೈಯ ಹಿಡಿಯಲಿ ||

ನೀನೆ ನಿನ್ನಯ ದಾರಿ ಬೆಳಕು
ಸಾಗು ಒಳ ಬೆಳಕಿನ ಪಥದಲಿ
ನಿನ್ನರಿವೆ ತಾನದು ಹೊನ್ನ ದೀವಿಗೆ
ಮರವೆ ತಾರದೆ ಜೊತೆ ಸೇರಲಿ ||

ದೇವ ದೇವರಿರವಿನರಿವಿಗೆ
ನೀನೆ ನಿನ್ನಯ ಆಲಯ
ಸಮತೆ ಸಮರಸ ಶಾಂತ ಕ್ಷಮತೆಗೆ
ನಡೆ ನುಡಿಯೇ ಶೃತಿಲಯ ||

ಮೇಲು ಕೀಳಿನ ಸೋಂಕ ಕಾಣದೆ
ಸ್ವಸ್ಥವಿರಲೆದೆ ಬಾಂದಳ
ಸ್ವಾರ್ಥ, ಕ್ರೌರ್ಯ, ದ್ವೇಷದೆದೆಗೂ
ಕಣ್ಣ ತೆರೆಸಲಿ ಪ್ರೀತಿ ಜೋಗುಳ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ನಮ್ಮಯ್ಯಾ ನಿಮಗೆ ಆಗದಾಗದೋ ಗಾಂಜೀ

-ಶಿಶುನಾಳ ಶರೀಫ್

ನಮ್ಮಯ್ಯಾ ನಿಮಗೆ ಆಗದಾಗದೋ ಗಾಂಜೀ       ||ಪ||

ಅಗದಾಗದು ಗಾಂಜಿ
ಹೋಗಿ ಬಹು ಸುಖವು
ಯೋಗಿ ಜನರು ಕಂದು
ಮೂಗು ಮುಚ್ಚಿಕೊಳ್ಳುವ                                 ||೧||

ಹರಿಗೆ ಸಕ್ಕರಿಯಾಯ್ತು ಸಾಕ್ಷಾತ್
ಹರಿಗೆ ಪ್ರತಿಯಾದುದೆ ಗೊತ್ತು ಈ ಮಾತು
ಆರಿಯದ ನರಗುರಿಗಳದು ಕೇಳದೆ
ಬರಿದೆ ವಿಚಾರಿಸದೆ ಹೋಯ್ತು ನಮ್ಮಯ್ಯಾ         ||೨||

ಸಿದ್ದ ಜ್ಞಾನದ ಮುನಿಯು ಸಂಗೀತಸ್ವರ
ತಿದ್ದುವ ಮೃದು ಮಧುರ ಗೊನಿಯೊಳು
ಸಧ್ಯಕ್ಕೆ ಶಿಶುನಾಳದೀಶನೊಳು
ಬದ್ಧಿಗೇಡಿತನ ಸಲ್ಲದು ನಮ್ಮಯ್ಯಾ                    ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಬೊಣ್ಯೋ ಬೂರೊಂದಿತ್ತ್ಂಡ್

-ಡಾ || ಪ್ರಭಾಕರ ಶಿಶಿಲ

ಆ ಕಟ್ಟೋಣೊದ ಬೇಲೆ ಸುರುವಾಯಿಬುಕ್ಕೊ ಊರುಡು ಬಾರೀ ಸಡಗರೋ.  ರಂಗ್ ರಂಗ್‌ದ ಲಾರಿಲು, ಬೇತೆ ಬೇತೆ ಸೊರೊತ್ತ ಯಂತ್ರೊಲು ಉರುಗು ಪೊಸ ರಂಗ್ ದಿಂಜಾದೊ.  ಕಟ್ಟೋಣೊದ ಬೇಲೆ ಬೇಗೊ ಮುಗ್ಯೊಡುಂದು ಬೇತೆ ಬೇತೆ ಬಾಸೆಲೆನ್ ಪಾತೆರುನ ಕಪ್ಪು ಕರಿಯಕುತ್ರಿ ಜನಕ್ಕುಲು ಪುರ್ಸೋತು ಇಜ್ಜಾಂದೆ ಬೆಂದೊಂದಿತ್ತೆರ್‍.  ಒರೊರೊ ಇರ್ಲ್‌ಡ್‌ಲಾ ಗಾಳಿ ಸುಡರ್‍ ಪೊತ್ತಾದ್ ಬೇಲೆ ಮಲ್ತೊಂದಿತ್ತೆರ್‍.  ಆ ಊರುಡಿತ್ತಿ ರಡ್ದ್ ಹೋಟೇಲ್, ರಡ್ಡ್ ಅಂಗಡಿ, ಒಂಜಿ, ಕಲಿತ್ತಬುಕೊಂಜಿ ಗಂಗಸರೆತ್ತ ಗಡಂಗ್‌ಲೆಗ್ ಪುರ್ಸೋತಿಜ್ಜಾಂದಿತ್ ಬೇರೊ.  ಊರುದ ನೆತ್ತೆರುರ್ಕುನ ಜವ್ವನೆರ್‍ ಬಯ್ಯೆಗ್ ಕಟ್ಟೋಣೊದ ಎದ್‌ರ್‌ತ ಕೆಲ್ಸಿಕಟ್ಟೆಡ್ ಸೇರ್‌ದ್ ಕೆಲಸ ಮಲ್ಪಿನ ಕಪ್ಪು ಕಪ್ಪು ಉಂಡೆ ಉಂಡೆ ಪೊಂಜೋವೆಲ್‌ನ ಮೈತ ತಗ್ಗ್ ಏರ್ತೆದ ವಿಷಯೊಲೆನ್ ದಿನೋಲಾ ಪಾತೆರೋಂದಿತ್ತೆರ್‍.  ಆತೊಂಜಿ ಪೊಂಜೇ ವೆಲ್‌ನ ಬೇಲೆಗ್ ದೀವೊಂದಿನ ಮೇಸ್ತ್ರಿನ ಅದೃಷ್ಟೊಗು ನಂಜಿ ಕಾರೊಂದಿತ್ತೆರ್‍.

ಅವು ನೂದು ಕಂಡಿ ಬಜೈದ ಸುಬ್ರಾಯ ಬಟ್ಟೇರ್‍ ಕಟ್ಟಾವೋಂದಿತ್ತಿನ ಕಟ್ಟೋಣೊ.  ಕಲ್ಜಿಗದ ಅಬತಾರೊಂದು ಬಾರೀ ಪುದಾರ್‍ ಪೋಯಿನ ಜೀವೊ ಇಪ್ಪಿ ದೇವೆರೆಗಾದ್ ಕಟ್ಟೊಂದಿತ್ತಿನ ಕಟ್ಟೋಣೊದ ಬೇಲೆ ಎಚ್ಚ್‌ಕಮ್ಮಿ ಮುಗ್ಯೊಂದು ಬತ್ತಿತ್‌ಂಡ್.  ಬಟ್ಟೆರ್‍ ಅಯ್ಕ್ ಭಗವಾನ್ ಮಂದಿರೊಂದು ಪುದಾರ್‌ಲಾ ದೀದೆತ್ತೆರ್‍.  ಆ ದೇವರ್‍ ಉಪ್ಪಿನ ಊರುಗು ಬಟ್ಟೇರ್‍ ಐನಾಜಿ ಸರ್ತಿ ಪೊದು ಬತ್ತಿ ಬುಕ್ಕೊ ದೇವರ್‍ನ ಇಸಯೊ ಊರು ಪೂರಾ ಪ್ರಚಾರೊ ಆಂಡ್.  ಮಾಂತಾ ಊರುಲೆಡ್ ಆ ದೇವರೆಗ್ ಮಂದಿರೊ ಉಪ್ಪುನಗ ಈ ಊರು ಈ ಇಸಯೊಡು ಪಿರವೊರಿಯೆರ ಬಲ್ಲಿಂದ್‌ದ್ ನಿಗೊದೀಯೆರ್‍ ಮಂದಿರೊದ ಒಕ್ಕೆಲ್ ಜಂಬರೋನ್ ಆ ದೇವೆರ್‍ನ ಕೈಯಿಡ್ದೇ ನಡಪ್ಪಾವೋಡುಂದು ಬಟ್ಟೇರ್‍ ಪಂಡೊಂದಿತ್ತೆರ್‍.

ಊರುದ ದೂಮಣ್ಣ ಗೌಂಡನ ಮಗೆ ರಡ್ಡನೇ ಕ್ಲಾಸ್‌ದ ಚಿನ್ನಪ್ಪಗ್ ಕಟ್ಟೋಣೊತಾಡೆಕ್ ಪುಲ್ಯಕಾಂಡೆ ಒರ, ಬಯ್ಯಗೊರ ಪೋಯಿಜಾಂಡ ನಿದ್ರೆನೇ ಬರಾಂದ್.  ಅಯನ ಇಲ್ಲ ಕಯಿತಲ್‌ದ ಕೂಸಪ್ಪೆ, ಬಾಳಣ್ಣೆ, ಡೀಕಯ್ಯೆರೆಗ್ಲಾ ಉಂದುವೇ ಬೇಲೆ.  ಅವುಲು ನಡಪುನ ಸಂಗತಿಲೆನ್ ಅಕ್‌ಲಕ್‌ಲೇ ಚರ್ಚೆ ಮಲ್ತೊಂದು.  ಒಂಜಿ ತೀರ್ಮಾನೊಗು ಬತ್ತಿಬೊಕ್ಕ ಇಲ್ಲಗ್ ವರದಿ ಮಲ್ಪಿನ ಅಕ್‌ಲೆನ ದಿನಚರ್ಯೆ.  ಬಟ್ಟೇರೆ ತೋಟೊಗು ಬೇಲೆಗ್ ಪೋವೊಂದಿತ್ತಿನ ದೂಮಣ್ಣಗ್ ಮಗನ ಪಾತೊರೊ ಪಂಡ ಸಸಾರೊ.  ಆಂಡ ಬೀಡಿ ಕಟ್ಟೋಂದು, ಇಲ್ಲೇ ಪರಪಂಚೋಂದು ತೇರಿಯೋಂದಿತ್ತಿನ ಚಿನ್ನಪ್ಪನ ಅಪ್ಪೆ ಎಂಕಮ್ಮಗ್ ಆಯನ ಪಾತೊರೊ ಕೇನ್ಯೇರೆ ಬಾರೀ ಇಸ್ಟೊ.  ಆಲೆಗ್ ಚಿನ್ನಪ್ಪೆ ಪಂಡ ದಿನಾ ಬರ್ಪಿನ ಉದಯವಾಣಿ ಪೇಪರ್‍ದಲೆಕ್ಕ.

ಒಂಜಿ ದಿನೊ ಚಿನ್ನಪ್ಪೆ ಕೊನಯಿನ ವಾರ್ತೆ ಕೇನ್‌ದ್ ಎಂಕಮ್ಮಗ್ ಆಶ್ಚರ್ಯೊಲಾ ಸಂತೋಸೋಲಾ ಒಟ್ಟುಗೇ ಆಂಡ್.  ಆ ನೋಟೀಸ್ ಕೊನದ್ ಓದಾಂತೆ ಇಪ್ಪೆಂದ್ಂಡ ಆಲೆಗ್ ಆಯ್ಡ್ ಇಸ್ವಾಸೊ ಬರ್‍ಯೆರ ಇತ್ತ್‌ಜಿ.  ಊರುಗು ಬೇಸ್ಯ ಪದಿನಾಜೆಗ್ ಕಲ್ಜಿಗೊದ ಅಬತಾರೊ ಬಗವಾನೆರ್‍ ಬರ್ಪೆರ್‍ ಆನಿಯೇ ಮಂದಿರೊದ ಒಕ್ಕೆಲ್ ಕಾರ್ಯೊ.  ಆನಿ ಊರೊರ್ಮೆ ತೋರಣೊ ಕಟ್ಟೊಡು, ಅಂಬಿ ಅಡ್ತಿ ಸುದ್ದೊವಾಯಿನ ಮುಂದಿಲ್‌ಗ್ ರಂಗೋಲೆ ಪಾಡೊಡು, ಸೂದ್ರೆರ್‍ ಮದುಮಾಸೊ ತಿನಾಂದೇ ಸೋಕುಡು ಮೀದ್ ಮಡಿಕುಂಟು ತುತ್ತೋಂದು ಮಂದಿರೊಗು ಬರೊಡು.  ದೇವೆರೆ ಕಾರ್ಯೊಗು ಮಲ್ಲಮನಸ್ ಮಲ್ತ್‌ದ್ ಕಾಣಿಕೆ ಕೊರೊಡುಂದು ಮಗೆ ಓದುತು ಪನ್ನಗ ಎಂಕಮ್ಮಗ್ ಬಾರೀ ಕುಸಿಯಾಂಡ್.

ಚಿನ್ನಪ್ಪೆ ಅಪ್ಪೆನ್ ಕಾಸ್‌ಗ್ ರಂದ್ಯೆರ ಸುರು ಮಲ್ತೆ.  ಆಲ್ ನಾಡ್ ನಾಡ್‌ದ್ ಗೋಡೆತ ತೂಂಬುಡು, ಅರಿತ ಡಬ್‌ಇಡ್, ಓಲೋಲೋ ದೀದಿತ್ತಿನ ಕಾಸ್ ಒಟ್ಟು ಮಲ್ತಲ್.  ಚಿನ್ನಪ್ಪೆ ಲೆಕ್ಕೊ ಪಾಡ್ಯೆ.  ಒಟ್ಟುಗು ಆಜಿ ಆಣೆ ಮೂಜಿ ಮುಕ್ಕಾಲ್!  ಆಯ್ನ್ ಚೀಲೊಡು ಪಾಡೊಂಡೆ.  ಇತ್ತೆ ಅಯನ ಮೋನೆಡ್ ಒಂಜಿ ಮುಗರ್‍ ತೆಲಿಕ್ ಮೂಡ್‌ಂಡ್.  ಎಲ್ಲೆ ಬಯ್ಯೆಗ್‌ವುಂದೆನ್ ಬಟ್ಟೆ ರೆಗ್ ಕೊರೊಡು, ಭಗವಾನ್ ಸಮಿತಿಗ್ ಎನ್ನ ಕಾಣಿಕೆಂದ್ ಪನೊಡುಂದು ಎನ್ನೊನಗ ಅಯಗ್ ಕುಸಿ ಆಂಡ್.

ದೂಮಣ್ಣೆ ಎಚ್ಚ ಪಾತೆರುನ ಜನೊ ಅತ್ತ್.  ಕೆಲ್ಸೊ ಮುಗೀದ್ ಬನ್ನಗ ಏಪಲಾ ಕತ್ತಲೆನೇ.  ಗಡಂಗ್‌ಡ್ ಒಂತೆ ಪಾಡ್ದ್ ಬತ್ತಿನಾನಿ ಆಯನ ಸೊರೊ ಊರಿಡೀ ಕೇನುಂಡು ಆನೆ ಒಂತೆ ಜಾಸ್ತಿ ಪಾಡ್ದಿತ್ತೆ.  ಅಂಚಾದ್ ಬಾರೀ ಕುಸಿಟ್ಟೇ ಇತ್ತೆ.  ಬತ್ತಿಲೆಕ್ಕೊನೇ ಊರುಗೇ ಕೇನಿಲೆಕ್ಕೊ ಬುಡೆದಿನ್ ಲೆತ್ತೆ.  "ಎಂಕೂ ಕೇಂಡನಾ?  ನಮ ಊರುಗು ದೇಬೆರ್‍ ಬರ್ಪೆರ್‌ಗೆ"  ಪೊಡಿತ್ತ ಬುರ್‍ಡೆಡ್ತ್ ಪೊಡಿನ್ ಅಂಗೈಗ್ ಪಾಡ್ತ್ ಒಂಜಿ ಈಡ್ ಏರ್ಸಾದ್ ಎಂಕಮ್ಮ ಕಂಡನ್ಯನ ಅಬತಾರೊ ತೂದು ಕೇಂಡಲ್ "ಏರ್‍ ಬತ್ತ್ಂಡ ನಂಕ್ ದಾನೆ?  ನಮೊ ಏಪಲಾ ಇಂಚನೇಅತ್ತಾ?"  ದೂಮಣ್ಣೆ ತೆಲಿತೋಂದೇ ಪಂಡೆ:  "ನಿನವು ಏಪಲಾ ಒಂಜೇ ರಾಗೊ ಆಟಿದ ಬರ್ಸತ ಲೆಕ್ಕೊ.  ಅಯ್ನ್ ಬುಡು.  ಇನಿ ದನಿಕುಲೆನ ಇಲ್ಲಲ್ ದೇಬೆರನ ಪೊಟೊ ತೂಯೆ.  ಏತ್.  ಏತ್ ಸೋಕು ಉಲ್ಲೆರ್‍ ಗೊತ್ತುಂಡಾ?  ಉದ್ದೋತ ಮಂಜೊಲು ಮಂಜೊಲು ಅಂಗಿ.  ಉಂಗುರುಂಗುರ ತರೆಕೂಜಲ್ ಕೆಂಪು ಕೆಂಪು ಬಚ್ಚಂಗಾಯ್ದ ಲೆಕ್ಕ ಉಲ್ಲೆರ್‍.  ಕಿಟ್ಣೆ ದೇಬೆರೆ ಅಬತಾರೊಂದು ದನಿಕಲು ಪಂಡರ್‍."

ಆಲ್ ಉಂದೆನ್ ಕೇನ್ದಿತ್ತಲ್ ದೇಬೆರ್‍ ನರಮಾನ್ಯಾದ್ ಅಬತಾರೊ ದೆತ್ತ್‌ತ್ತ್ ವೈಕುಂಟೊಡ್ದು ನರಲೋಕೊಗು ಜತ್ತ್‌ದೆರ್‍.  ಪೆದಾಂತಿನಕುಲೆಗ್ ಜೋಕುಲಾಪಿಲೆಕ್ಕ ಮಲ್ಪೆರ್‍ ನೀರ್‌ನ್ ಪೆಟ್ರೋಲು ಮಲ್ಪೆರ್‍.  ಗಾಳಿಡ್ ಕೈಯಾಡಿಸಾದ್ ವಾಚಿ, ಉಂಗುರು, ಬೊನ್ಯೊ ಕೊರ್ಪೆರ್‍.  ಇಂಚ ಮಾಂದಾ ಊರೊರ್‍ಮೆ ಸುದ್ದಿ ಯಾನಗ ಏರೆನೊಟ್ಟುಗೋ ಬೆಲ್ತ್‌ಪೋಯಿನ ತನ್ನ ರಡ್ಡ್ ಪೊಣ್ಣು ಬಾಲೆಳು ವಾಪಾಸ್ ಬಿರ್ಪಿಲೆಕ್ಕೊ, ಏರೆರೆಗ್ ತೋಜಿಪಾಂಡಲಾ ಗುಣ ಆವಂದಿ ತನ್ನ ವಾತೊ ಗುಣವಾಪಿಲೆಕ್ಕೊ ಆ ಸಾಮಿ ಮಲ್ಪೆರಾ ದಾನೋದ್ ಆಲ್ ಏತೋ ಸರ್ತಿ ಎನ್ನೊಂದಿತ್ತಲ್.  ಆಂಡ ಆತ್ ದೂರದ ಆ ಸಾಮಿನಾಡೆಗ್ ಎಂಚ ಪೋಪಿನ ಪನ್ಪಿನವೇ ಚಿಂತೆ.  ಇತ್ತೆ ಆ ದೇಬೆರ್‍ ತನ್ನ ಉರುಗೇ ಬರೋಂದುಲ್ಲೆರ್‍!

ಈ ಸಂತೋಸೊಟು ಎಂಕಮ್ಮ ಕಂಡನ್ಯಟ ಕೇಂಡಲ್ "ಇತ್ತೆ ಸಾಮಿ ಈಡೆಗೇ ಬರೋಂದುಲ್ಲೆರ್‍.  ಆರೆನ ದಯೆಟ್ಟ್ ರಡ್ಡ್ ಪೊಣ್ಣು ಬಾಲೆಳೆಲಾ ವಾಪಸ್ ಬರ್ಪಿಲೆಕ್ಕ ಆಂಡ, ಎನ್ನ ವಾತೊ ಗುಣ ಆಂಡ ಏತ್ ಎಡ್ಡೆತ್ತೆ?"

ದೂಮಣ್ಣೆ ಪುಸ್ಕ ತೆಲ್ತೆ.  ಆಯನ ಬಾಯಿಡಿತ್ತಿ ಬಚ್ಚಿರೆ ಬಜ್ಜೈತ ಕೆಂಪು ರಸೋ ಆಲೆನ ಮೋನೆಗ್ ಚಿರ್‍ಕ್‌ಂದ್ ರಟ್ಟ್‌ಂಡ್.  ಆಲ್ ಸೀರೆತ ಸೆರಂಗ್‌ಟ್ ಮೋನೆ ಉರ್ದೊಂದಿಪ್ಪುನಗ ದೂಮಣ್ಣೆ ಪಂಡೆ "ನಿಕ್ಕ್ ದಾನೆ ಮರ್ಲ ಎಂಕೂ?  ಅವು ರಡ್ಡ್‌ಲಾ ಮೈಟ್ ಸೊರ್ಕು ದಿಂಜಿದ್ ಬೆಲ್‌ದ್‌ಪೋದೊ.  ಅವು ವಾಪಸ್ ಬರ್‍ಯೆರ ಉಂಡೊ?  ಆಂಡ ನಿನ್ನ ವಾತೊ ಗುಣ ಆಯೆರೆಲಾ ಯಾವು.  ಅವು ಬುಡು.  ಇನಿ ದನಿಕುಲೆ ಇಲ್ಲಲ್ದ ಇಸೇಸೊ ಕೇನ್ದನಾ?"

"ದಾನೆ ಆಂಡ್?"  ಎಂಕಮ್ಮನ ಕೆಬಿ ನಿಮಿರ್‌ಂಡ್.  "ಅಲ್ಲ್ ಸಾಮಿನ ಬಾರೀ ಮಲ್ಲ ಪಟೋದೀತೆರ್‍.  ಆ ಪಟೊಡ್ತು ಬೊಣ್ಯೊ ಬೂರೊಂದುಂಡು.  ವಾ ಕಮ್ಮೆನೊ!  ಆಯ್ನ್ ಇಬೂ ತಿಂದ್ ಪನೊಡುಗೆ.  ದನಿಕುಲೆ ಮಗೆ ಎಲ್ಯಮಾಣ್ಯಣ್ಣೆ ಉಲ್ಲೇರತ್ತ?  ಆರೆನ ಮೈಟ್ ದೇವರ್‍ ಬರೋಂದುಲ್ಲೆರ್‍.  ಏತ್ ಜನ ಸೇರೊಂದುಲ್ಲೆರ್‍?  ಏತ್ ಕಾನಿಗೆ ಬತ್ತೊಂದುಂಡು ಗೊತ್ತುಂಡ?  ಇತ್ತೆ ಎಲ್ಯಮಾಣ್ಯಣ್ಣೆ ದೇವರ್‍ನಂಚನೇ ಆತೆರ್‍."

ಚಿನ್ನಪ್ಪಗ್ ಉಸಿಲ್‌ತಿಕೋಂದಿಲೆಕ್ಕಾಂಡ್, ದನಿಕುಲೆ ಮಗೆ ರಾಮಕಿಸ್ನೆ ಆಯನ ಕ್ಲಾಸ್‌ದಾಯೆ.  ಅಯೆ ಒಂಜಿ ವಾರೊಡ್ಧಿಂಚ ಸಾಲೆಗ್ ಬತ್ತೊಂದಿತ್ತಿಜೆ.  ಎಂಚಿನ ಬಾಗ್ಯೊ ಅಯನವು!  ತನ್ನ ಮೈಟ್‌ಲಾ ದೇವೆರ್‍ ಬರ್ಪಿನಲೆಕ್ಕೊ ಅಪೆತೆಂಟ್!  ಚಿನ್ನಪ್ಪೆ ತನ್ನ ಮೈ ಕೈ ತೂವೂಂಡೆ.  ಕಪ್ಪು ಸೀಂಕ್ರ್‌ಮೈ.  ಪದ್ಪೆದ ದಂಟ್‌ದಂಚಿನ ಕೈಕಾರ್‍!  ಬೆಗರ್‍ ವಾಸನೆ ಬರ್ಪಿನಿ ಪರ್ಕೊಟೆ ಅಂಗಿ.  ಇಂಚಿತ್ತಿನ ಮೈಡ್ ಕುಲೆ ಬರುವೋ ದಾನೊ!  ದೇವೆರ್‍ ಬರೋಡಾಂಟ ಬೊಲ್ದು ಬೊಲ್ದು ದಪ್ಪೊ ದಪ್ಪೊ ಮೈಯೇ ಉಪ್ಪೊಡೋ ದಾನೋ?  ಮದ್ದು ಮಾಸೊ ತಿನಾಂದೆ ಮಡಿಟ್ಟೇ ಉಪ್ಪೊಡೋ ದಾನೊ?  ಇಂಚ ಮಾಂತ ಎಣ್ಣೋಂದು ತರೆ ಕಿರ್ಬೋಂದು ಕುಲ್ಲಿನ ಮಗನ್ ತೂದು ದೂಮಣ್ಣೆ ಪಂಡೆ:  "ಎಲ್ಯ ಮಾಣ್ಯಣ್ಣೇರೆ ಮೈಡ್ ದೇವೆರ್‍ ಬಂತ್ತೊಂದುಲ್ಲೆರ್‍.  ನಿನ್ನ ಮೈಡ್‌ಲಾ ಬರ್ಪೆದೇರೆಂಡ ಬೆನಾಂದೆ ದುಡ್ಡು ಮಲ್ಪೊಲಿಂತ್ತ್ಂಡ್."

ಮಗೆ ಬೂರ್ನಾಸ್‌ಂದ್ ಪಂಡೆರತ್ತಾಂದ್ ಎಂಕುಗು ಪಿಸಿರ್‍ ಬತ್ತ್ಂಡ್.  "ಯಾವು ಒರ ಮನಿಪ್ಪಂದೆ ಕುಲ್ಲೆ.  ಈರ್‍ ದನಿ ಕುಲೆ ಲೆಕ್ಕೊ ಇಪ್ಪೆತಾರ್‌ಂಡ್ ಅಯೆ ಎಲ್ಯ ಮಾಣ್ಯಣೇರೆ ಲೆಕ್ಕೊ ಉಪ್ಪೆತೆ."  ಈ ಪಾತೆರೊಗು ದೂಮಣ್ಣನ ಬಾಯಿ ಬಂದಾಂಡ್.  ಇತ್ತೆ ಚಿನ್ನಪ್ಪೆ ಕೇಂಡೆ.  "ಅಮ್ಮೆರೇ ಎಂಕೊಂಜಿ ಪೊಟೊ ಕೊನತ್ ಕೊರ್ಪರಾ?"

"ವಾ ಪಟೋ ಮಗಾ?"

"ಅವ್ವೇ ಆ ದೇಬೆರನವು.  ನಮ್ಮ ಇಲ್ಲಲ್ಲಾ ಬೊಣ್ಯೊ ಬೂರುಂಡಾಂದ್ ತೂವೊಲಿತ್ತ್‌ಂಡ್."

ದೂಮಣ್ಣಗ್ ಇತ್ತೆ ಸಂತೋಸಾಂಡ್.  ಆವಡ್, ಬೋದಾಳೆಂದ್‌ದ್ ಎಣ್ಣಿನ ಮಗಕ್ಕ್‌ಲಾ ತರೆ ಉಂಡು.  ಪಂಡ್ ಆಂಡ್‌ಂದ್ ತರೆ ಆಡಯೆ.  ಕಿಸೆಕ್ ಕೈ ಪಾಡ್‌ನಗ ನಾಲಾಣೆ ಪಾವೊಲಿ ತಿಕ್ಕ್‌ಂಡ್.  ಅಯಿನ್ ಚಿನ್ನಪ್ಪಗ್ ಕೊರ್ದು "ಪೆಪ್ಪರ್‌ಮುಂಟ ದೆತೊನು ಮಗಾ" ಪಂಡೆ.  ಅಪ್ಪೆ ಕೊರಿನ ದುಡ್ಡುಗು ಉಂದೆನ್ಲಾ ಸೇರ್‍ನಾದ್ ಮಂದಿರೊತ ನಿಧಿಕ್ ಕಾಣಿಕೆ ಕೊರೊಡುಂದು ಚಿನ್ನಪ್ಪೆ ಎಣ್ಣೋಂಡೆ.

ಆ ರಾತ್ರೆ ಇಡೀ ಚಿನ್ನಪ್ಪಗ್ ಆ ದೇವೆರೆನೆವೇ ಕನೊ.  ಉದ್ದೋತ ಗೌನು ಪಾಡಿನ, ಗಾಳಿಗ್ ರಾಪಿನ ಕೂಜಲ್ದ ದೇವೆರೆನ ಪೊಟೊ ಇಲ್ಲಡೆಟ್ ದೀಯಿಲೆಕ್ಕೊ, ಅಯ್ತ ಎದ್‌ರ್‌ ಆಯೆ ಒಂಜಿ ಚಿಬಿಲೆ ಪೊತ್ತಾದ್ ದೀಯಿಲೆಕ್ಕೊ.  ಆ ಪೊಟೋಡ್ದು ಬೊನ್ಯೊ ಬೂರಿಲೆಕ್ಕೊ, ಜನೊಕ್ಕುಲು ಮಾಂತ ಇಲ್ಲಾಡೆಗ್ ಬತ್ತ್‌ದ್ ಪೊಟೊಕ್ಕು ಅಡ್ಡೊಬೂರ್‍ದು ಕಾನಿಗೆ ಪಾಡ್‌ದ್ ತನನ್ ಪುಗರ್‍ದ್  ಪೋಪಿಲೆಕ್ಕೊ.

ಮನದಾನಿ ಪುಲ್ಯಕಾಂಡೆ ದೂಮಣ್ಣೆ ಬೇಲೆಗ್ ಪಿದಾಡ್ನಾಗ ಎಂಕು ನೆಂಪು ಮಲ್ತಲ್:  "ಪಟೋ ಕನದ್ ಕೊರ್‍ಯೆರ ಮದಪ್ಪಡೇ."

"ವಾ ಪಟೊದೇ"?  ಡಿಂಗಾದಿಪುನ್ನಗ ನಡತ್ತಿನ ಪಾತೆರಕತೆ ಒಂಜಿಲಾ ದೂಮಣ್ಣಗ್ ನೆಂಪಿತ್ತಿಜಿ.

"ಅವ್ವೇ ಆ ದೇವೆರೆನವು".

ಅಮ್ಮೆರ್‍ ದಾದ ಪನ್ಪೆರೋಂದ್ ಚಿನ್ನಪ್ಪೆ ಅಪ್ಪೆಗ್ ಅಂಟೋಂದೆ ಉಂತ್ತೊಂದು ದೂಮಣ್ಣನ್ ತೂಯೆ.  ದೂಮಣ್ಣೆ ಬೀಡಿ ಪೊತ್ತಾವೊಂದು ಬಾಯಿಗ್ ದೀತ್ ರಡ್ಡ್ ದಮ್ಮು ಒಯ್ತೆ.  "ಈ ನಾಯಿ ತರೆತ್ತಯಗ್ ನನ ಅವೊಂಜ್ಜಿ!  ಮರ್‍ಯಾದಿಡ್ ಸಾಲೆಗ್ ಪೋದು ಓದಡ್".  ಎಂಕಮ್ಮಗ್ ಬೇಜಾರಾಂಡ್;  ಪಾಪೊ, ಬಾಲೆ ಆಸೆ ಮಲ್ತೊಂದುಂಡು.  ನಂಕ್ ಇತ್ತೆ ದೇಬೆರ್‍ ಒರಿತ್ತಿನ ಅವೊಂಜೆನೆ.  ಈರ್‍ ಕಾಸ್ ಕಚಿ ಮಲ್ಪಡುಂದಿಜ್ಜಿ.  ದನಿ ಕ್ಕುಲೆಡ ಕೇನ್ದ್ ಕೊನಂಡ ಈರೆನ ವಾ ಗಂಟ್ ಪೋಪುಂಡು?"

ನನ ಪಾತೆರ್‌ಂಡ ಪೊರ್ತಾಪುಂಡುಂದ್ ದೂಮಣ್ಣೆ ತರೆ ಆಡಾದ್ ಕೆಲ್ಸೊಗು ನಡೆತ್ತೆ.

"ಈ ಕೈಕಾರ್‍ ದೆಕ್ಕ್‌ದ್ ಸಾಲೆಗ್ ಪೋತು ಬಲ ಮಗಾ.  ಅಮ್ಮೆರ್‍ ಪಟೊ ಕನೆಯಿಜೇರ್‍ಡ ಜಾತ್ರೆಗ್. ದೆತ್ತೋನ್ಕೊ."  ಎಂಕಮ್ಮ ಮಗನ ತರೆ ಪೂಜಿದ್ ಪಂಡಲ್.  ಬಗವಾನ್ ಸಮಿತಿಗ್ ಕಾನಿಗೆ ಕೊರ್‍ಯೆರ ಉಪ್ಪಿನ ನೆಂಪಾದ್ ದೂಮಣ್ಣೆ ಬಾಯಿಡ್ ಬುರ್‍ರೆಂದ್ ಬಸ್ ಬುಡೋಂದು ಕೆರೆತ್ತಂಚಿ ಪಾರ್‍ಯೆ.

ಆನಿ ಆಯಗ್ ಪಾಠೊ ತರೆಕ್ಕೇ ಪತ್ತಿಜಿ.  ಒರ ಬಯ್ಯ ಆವಡ್‌ಂದ್ ದೇವೆರೆಡ ನಟ್ಟೋಂದೇ ಇತ್ತೆ.  ಸಾಲೆದ ಜೋಕುಲೆಡ ಪೂರಾ ಅಪ್ಪೆ ಕೊರ್ನ ಆಜಾಣೆ ಮೂಜಿ ಮುಕ್ಕಾಲ್ ಬುಕೊ ಅಮ್ಮೆ ಕೊರ್ನ ನಾಲಾಣೆ ಪಾವಲಿ ತೋಜಾದ್ ಇನಿ ಮಂದಿರೊಗು ಕಾನಿಗೆ ಕೊರ್‍ಯೆರುಂಡುಂದು ಪಂಡೋತ್ ಬತ್ತೆ.  ಸಾಲೆ ಬುಡಿ ಸಾತ್‌ಗ್ ಡುರ್‍ರ್‌ಂದ್ ಬಸ್ ಬುಡೋಂದು ಬಟ್ಟೇರೆ ಕಟ್ಟೋಣದಂಚಿ ಪಾರಿಯೆ.

ಕಟ್ಟೋಣದ ಎದ್‌ರ್‍ ಬಟ್ಟೇರ್‍ ಗಡಿಬಿಡಿಟ್ ಅಂಚಿ ಇಂಚಿ ಪೋವೊಂದಿತ್ತೆರ್‍.  ಏಪೊಲಾ ತನನ್ ತೂದು "ಸೂದ್ರ ಮುಂಡೇಮಗ.  ದೂರ ಉಂತು" ಪನ್ಪಿನ ಬಟ್ಟೇರೆಗ್ ಇನಿ ಕಾನಿ ಗೆದ ದುಡ್ಡು ತೂನಗ ಕುಸಿ ಆವು.  ನನ ಆರೆಡ ನೆರಡೆ ತಿಕ್ಕಾಂದ್‌ಂದ್ ಎಣ್ಣೋಂದು ಬಟ್ಟೇರೆ ಕೈತಲ್ ಪೋಯೆ.  ದುಡ್ಡು ದೆಪ್ಯೆರ ಚೀರಾವುಗು ಕೈಪಾಡ್‌ದ್ ಪರಡ್ಯೆ.  ಓಲುಂಡು ದುಡ್ಡು?  ಚಿನ್ನಪ್ಪಗ್ ಬುಲ್ಪೆರ ಬತ್ತ್ಂಡ್.  ಸಾಲೆಡ್ ಮಾಂತೆರೆಗ್‌ಲಾ ದುಡ್ಡು ತೋಜಾಯಿನವೇ ತಪ್ಪಾಂಡ್.  ಇತ್ತೆ ದಾದ ಮಲ್ಪಿನ?

ಚಪ್ಪೆ ಮೋನೆ ಮಲ್ತೋಂದು, ಚೀರಾವುಗು ಕೈ ಪಾಡೋಂದು.  ಒಂಜಿ ಕೈಟ್ ಮೂಕು ಸೀಟೊಂದು, ಬಾಯಿಡ್ ಮಣಮಣ ಏರೆಗೋ ನೆರೋಂದು ಉಂತೋಂದಿತ್ತಿನ ಚಿನ್ನಪ್ಪನ್ ತೂದು ಬಟ್ಟೇರ್‍ `ಓ ಸೂದ್ರ ನಾಯ್ತಮಗಾ ಮೀವಾಂದೆ ಈಡೆಗ್ ಬರ್‍ಯೆ ರಾವಂದ್.  ನಡುಪ್ಪು.... ನಡುಪ್ಪು ಪಂಡ್ದ್ ಜೋರು ಮಲ್ತೆರ್‍.

ಚಿನ್ನಪ್ಪೆ ದಾದ ಪನೊಡುಂದು ತೆರಿಯಾಂದೆ ಆರೆನೇ ತೂಯೆ.  ಬುಕೊ "ಯಾನ್ ದುಡ್ಡು ಈರ್‍" ಎಂದ್‌ದಾನ್ನೋ ಪನಿಯೆರ ಪೋದು ಪಾತೆರ್‍ಯೆರಾವಂದೆ ಉಂತಾಯೆ.

ಬಟ್ಟೇರೆಗ್ ಪಿಸಿರ್‍ ಏರ್‌ಂಡ್.  "ನಿನ್ನ ಅಮ್ಮೆ ದೂಮಣ್ಣಗ್ ದುಡ್ಡು ಕೊರ್ದು ಕೊರ್ದು ಎಂಕ್ ಸಾಕಾಂಡ್.  ಇತ್ತೆ ಈ ಕೇನ್ಯರ ಸುರು ಮಲ್ತನಾ?  ನಡುಪ್ಪುವನಾ ಅತ್ತ್ ಬೆರಿ ಪೊಡಿ ಮಲ್ಪೊಡ?"  ಬಟ್ಟೇರೆನ ಬೊಬ್ಬೆಗ್ ಕೆಲಸದಕುಲು ಕೆಲಸ ಉಂತಾದ್ ಚಿನ್ನಪ್ಪನೇ ತೂಯರ ಸುರು ಮಲ್ದೆರ್‍.  ಮಾಂತೆರೆನೆದ್‌ರ್‍ ಮರ್ಯಾದೆ ಪೋನಗ  ಈತೆನೆಡ ಕಟ್ಟ್‌ದೀಯಿನ ದುಕ್ಕೊದ ಕಟ್ಟೆ ಪುಡಾಂಡ್.  ಕಣ್ಣ್‌ಡ್, ಮೂಕುಡ್ ನೀರು ಉರ್ಕುಂಡ್.

ಚಿನ್ನಪ್ಪನ ಸುರ್‍ ಸುರ್‍ ಬುಲ್ಪಾಟಿಕೆ ಕೇನ್ದ ಬಟ್ಟೇರ್‍ ಒಂತೆ ಮೆತ್ತೆನಾಯೆರ್‍.  "ಒರೊ ಉಂತಾಪನಾ?  ನಿಕ್ಕ್ ಒಂಜಿ ಪೊಟೊ ದೂಮಣ್ಣನ ಕೈಡ್ ಕೊದೆð.  ಪೋದು ಮೀತ್ ಪೂಜೆ ಮಲ್ಪು.  ಚಿನ್ಪಪ್ಪನ ಬುಲ್ಪಾಟಿಕೆ ಒರೋನೆ ಉಂತ್ಂಡ್.  ಬಟ್ಟೇರೆ ಮಿತ್ತ್‌ದ ಕೋಪೊ ಸರ್‍ರ ಜಾರ್ದ್ ಪೊಂಡ್.  ಆಯೆ ಅಂಗಿಡ್ ಮೂಂಕುನು ಉರ್ದೋಂದು ಡುರ್‍ರ್‌ಂದು ಬಸ್ ಬಡೋಂದು ಪಾರ್‍ಯೆ.

ಅಮ್ಮೆ ಇಲ್ಲಲೇ ಉಪ್ಪಿನೆನ್ ತೂದು ಚಿನ್ನಪ್ಪಗ್ ಬಾರಿ ಅಚ್ಚಿರೊ.  ದೂಮಣ್ಣೆ ನಿರ್ಮಲೊ ಮೀದ್ ಬೊಲ್ದು ಕುಂಟು ಉತ್ತೊಂದು ಮುಂಡೊಗು ಪೊರ್ಲುಡು ಬಸ್ಮೊ ಪೂಜಿದಿತ್ತೆ.  ಜಾಲ್‌ಗ್ ಅಂಬಿ ಅಡಿತ್ತಿತ್‌ಂಡ್.  ಚಿನ್ನಪ್ಪೆ ಇಲ್ಲಗ್ ನೂರೊಂಡುಂದಿಪ್ಪುನಗ ದೂಮಣ್ಣೆ ಬೊಬ್ಬೆ ಪಾಡ್ಯೆ:  "ಓ... ಓ... ಉಂತು ಉಂತು.  ನಿನ್ನ ಅಂಗಿ, ಚಡ್ಡಿ ಮಾಂತ ಬಿಚ್ಚಿದ್ ಅಂಚನೆ ಕಿರೆಟ್ಟ್ ಮುರ್ಕುದ ಬಲ್ಲ.  ಸಾಲೆಡ್ ಏರೇರೆನ್ ಮುಟ್ಟುದು ಬತ್ತನೋ ದಾನೋ"?

ಚಿನ್ನಪ್ಪಗ್ ಬಟ್ಟೇರೆ ಪಾತೆರೊ ನೆಂಪಾಂಡ್.  ಅಲ್ಲೇ ಪಿದಯಿ ಕೋರಿಗೂಡುದ ಮಿತ್ತ್ ಚೀರಾವುದೀಯೆ.  ಅಂಗಿ ಚಡ್ಡಿ ಕೋಮಣೊ ಬಿಚ್ಚಾದ್ ಉರ್ಬುಲಿಯಾದ್ ಕಿರೆಕ್ ಬೆಲಿತ್ತೆ.  ದುಡುಮ್ಮ ಕಿರೆಕ್ಕ್ ಲಾಗಿದ್ ಕುಸಿಟ್ಟ್ ಮೀಂದಿಯೆ.  ಕಾರ್‌ದ ಕಜ್ಜಿಗ್ ತರುಕುಲು ತುಚ್ಚಿನಗ ಬಟ್ಟೇರ್‍ ಪನ್ನವು ನೆಂಪಾಂಡ್.  ಬೇಕೊ ಮಿತ್ತ್ ಬತ್ತ್‌ದ್ ಅಂಚನೆ ಇಲ್ಲಗ್ ಬೆಲಿತ್ತೆ.

ಎಂಕಮ್ಮಲಾ ಆನಿ ತೆರೆಕ್ಕ್ ಮೀದ್ ಮುಂಡೊಗು ಗಮಗಮ ಬಸ್ಮೊ ಪಾಡ್ದಿತ್ತಲ್.  ಅಂಬಿ ಅಡಿತ್ತಿ ಇಲ್ಲ್ ಕಿಲೀನಾದ್ ತೋಜೆತ್‌ಂಡ್.  ಚಿನ್ನಪ್ಪನ್ ತೂದು ಎಂಕಮ್ಮ "ಬಲ ಮಗಾ... ಸೀತೊ ಅವುಂದು ಸಿರೆಂಗ್‌ಡ್ ವರೆಸ್ಯಾಲ್.  ಅರ್ದ್‌ತ್ ಉಣ್ಗಾದ್ ದೀಯಿನ ಬೆಚ್ಚ ಚಡ್ಡಿಯೊಂಜೆನ್ ಅಯಗ್ ಕೊರ್ಯಲ್.

ಬಟ್ಟೇರ್‍ ಕೊರಿನ ಫೋಟೊ ಅಲ್ಲೇ ಗೋಡೆದ ಮಿತ್ತ್ ಇತ್ತ್ಂಡ್.  ಆ ಪೊತೆಲಿಕ್ಕೆದ ದೇವೆರ್‌ನ ತೂದು ಅಯನ ಬೇಜಾರ್‍ ಮಾಂತ ಒರೊನೇ ಮಾಯವಾದ್ ಪೋಂಡ್.  ದೇವೆರ್‌ಗ್ ಅಡಡೊ ಬೂರ್ದು ನಮಸ್ಕಾರೊ ಮಲ್ದೆ.  ಉಂದೆನ್ ತೂದು ಎಂಕಮ್ಮನ ಮೋನೆ ಅಗಲಾಂಡ್.  "ಎಂಕ್‌ಲಾ ಒಂತೆ ಬೊಣ್ಯೊ ಬೋಡು ಮುಂಡೊಗು ಪಾಡ್ಯೆರ."  ಮಗೆ ಕೇನ್ನಗ ಉಲಾಯಿಡಿತ್ತಿನ ದೂಮಣ್ಣೆ ಪಂಡೆ.  "ಅಯಿನ್ ಬೊಣ್ಯೊಂದು ಪನೆರಾವಂದ್.  ದನಿಕ್ಕುಲು ಪಂತೆರ್‍ ಅಯ್ನ್ ಇಬೂತಿಂದ್ ಪನೋಡುಗೇ".

ಯತ್ಯಾಸೊ ಗೊತ್ತಾವಂದೆ ಚಿನ್ನಪ್ಪೆಕೇಂಡೆ:  "ದಾಯಿಗ್?" ದೂಮಣ್ಣಗ್ ಇತ್ತೆ ಪಿಸಿರ್‍ ಬತ್ತ್‌ಂಡ್.  "ಪಿದಂಬು ಪಾತೆರ್‍ವನಾ?  ಬೊಣ್ಯೊ ದಿಕ್ಕೆಲ್‌ಡ್ ಉಪ್ಪಿನವು.  ಉಂದು ಆ ದೇವೆರೇ ಕೊರಿನವು.  ಅಂಚಾದ್ ಉಂದೆನ್ ಇಬೂತೀಂದ್ ಪನೊಡು".  ಕೈಡಿತ್ತಿ ಕರಡಿಗೆದ ಮುಚ್ಚೆಲ್‌ದೆತ್ತ್‌ದ್ ಮಗಕ್ಕ್ ತೋಜಾದ್ ಪಂಡೆ:  "ಪಾಡೋನು".  ಚಿನ್ನಪ್ಪೆ ಅಮಸರೊಡು ಕರಡಿಗೆಗ್ ಕೈ ಪಾಡಿನಗ ಒಂತೆ ಇಬೂತಿ ನೆಲಕ್ಕ್ ಬೂರ್‌ಂಡ್.  ಮಗನ ಮಂಡೆಗ್ ಟಕ್ಕಂದ್ ಒಂಜಿ ಕುಟ್ಟಿ ಪಾಡ್ದ್ ದೂಮಣ್ಣೆ ಕರಡಿಗೆ ಮುಚ್ಚಿಯೆ ನೆಲ ತೋಜ್ಪಾದ್ ಮಗಟ್ಟ ಪಂಡೆ:  "ಆಯ್ನೇ ಪಾಡೋನು".

ಚಿನ್ನಪ್ಪೆ ನೆಲಟ್ಟಿತ್ತಿನ ಬೊಣ್ಯೊನು ಮುಂಡೊಗು ತಿಕ್ಕೋಂಡೆ.  "ಅಂಚನೇ ಒಂತೆ ಬಾಯಿಗ್ಲಾ ಪಾಡೋನು.  ದನಿಕುಲು ಪನ್ದೇರ್‍ ಕಾಯಿಲೆ ಬತ್ತ್‌ಂಡ ಮರ್ದ್ ಪರೊಡುಂದು ಇಜ್ಜಿ.  ಇಬೂತಿ ಒಂತೆ ತಿದ್‌ಡ ಯಾವೊಂದು".  ದೂಮಣ್ಣೆ ಪನ್ನಗ ಎಂಕಮ್ಮ ಬಗ್ಗ್‌ದ್ ಬೊಣ್ಯೊನು ಕೈ ಬಿರೆಲ್‌ಡ್ ದೆತ್ತೊಂದು ಬಾಯಿಗ್ ಪಾಡೊಂದು ವಾತೊ ಗುಣ ಆವಡ್ ದೇವೆರೇಂದ್ ನಟ್ಟೋಂಡಾಲ್.

ಆನಿ ಬಯ್ಯಗ್ ಬಜಿಲ್ ಕದಳಿ ಬಾರೆದ ಪಂರ್ದ್‌‌ತ ರಸಾಯನೊದ ಪಳಾರೊ.  ರಾತ್ರೆ ಉಪಾಸೋಂದು ದೂಮಣ್ಣೆ ಪಂಡೆ.  ಪ್ರತಿ ಗುರುವಾರೊಲಾ ಉಂದೇ ಕ್ರಮೋಂದು ಆಮ್ಮೆ ಪನ್ನಾಗ ಚಿನ್ನಪ್ಪಗ್ ಬಾರೀ ಸಂತೋಸಾಂಡ್.  ಆತ್ ಪೊರ್ತುಗ್ ಬಟ್ಟೇರೆನ ಕಟ್ಟೋಣೊಡ್ದು ಬಜನೆ ಕೇನ್ಡ್.  ಬಜನೆದ ಸೊರೊ ಕೇಂಡಿ ಚಿನ್ನಪ್ಪೆ ಅಮ್ಮಡ ಕೇಂಡೆ:  "ಯಾನ್ ಬಜನೆಗ್ ಪೋವೊಡಾ."

ದೂಮಣ್ಣೆ ಪರಾಂದೆಲಾ ಸಂತೋಸುಟಿತ್ತಿನ ಆನಿ ಮಾತ್ರ.  ತೆಲಿತ್ತೋಂದೇ ಮಗಟ್ಟ ಪಂಡೆ:  "ಸರಿ ಮಗ ಪೋದು ಬಜನೆ ಮಲ್ಪು.  ಒಂತೆ ತೈರ್‍ದ್ ಯಾನ್‌ಲಾ ಬರ್ಪೆ".

ಬಾರೀ ಕುಸಿಡ್ ಚಿನ್ನಪ್ಪೆ ಬಸ್ಸ್ ಸ್ಟಾರ್ಟ್ ಮಲ್ಪುನಾಗ ಎಂಕಮ್ಮ ಪಂಡಲ್:  "ಬಜನೆತಲ್ಲ್ ಬ್ರಾಣೆರನ್ ಮುಟ್ಟುದು ಅಕುಲೆನ ಮಡಿ ಆಲ್ ಮಲ್ಪಡಾ.  ಮನ್ಸೆರೆನ್ ಮುಟ್ಟುದು ನಿನ್ನ ಮಡಿನ್‌ಲಾ ಆಲ್ ಮಲ್ತೊನಡಾ."  ಚಿನ್ನಪ್ಪ ಮಲ್ಲ ಸೊರೊಡು ಆವುಂದ್ ಪಂಡ್‌ದ್ ಬಸ್ಸ್ ಬುಡಿಯೆ.

ಕಟ್ಟೋಣೋದ ಎದ್‌ರ್‍ ಜನೊಕ್ಕುಲು ಸಾಲ್‌ಡ್ ಕುಲ್ಲುದಿತ್ತೆರ್‍.  ಮುಂಡೊಗು ಬೊಣ್ಯೊ ಪೂಜಿದಿತ್ತಿನ ಟ್ಟೇರ್‍ ಚಿನ್ನಪ್ಪನ್ ತೂದು "ಅಲ್ಲ್ ಕುಲು" ಪಂಡ್‌ದ್ ಪಿರಾವುದ ಜಾಗೆ ತೋಜಾಯೆರ್‍.  ಚಿನ್ನಪ್ಪೆ ತನ್ನ ಎದ್‌ರ್‍ ಕುಲ್ದಿನಕುಲೆನ್ ತೂಯೆ.  ದೂರೊಡು ಉಂತೊಂದು ಕಣ್ಣ್ ಬಾಯಿ ಬುಡುದು ಉಂದೆನ್ನ್ಮಾಂತ ತೂಪೆತಿನ ಮನ್ಸೆರೆನ್‌ಲಾ ತೂಯೆ.  ಇನಿ ಏರೆನ್ಲಾ ಮುಟ್ಯೆರ ಬಲ್ಲೀಂದ್ ಅಪ್ಪೆ ಪನ್ನವು ನೆಂಪಾದ್ ಬಟ್ಟೇರೆನೇ ತೂವೂಂದು ಕುಲ್ಯೆ.

ಬಟ್ಟೇರ್‍ ಒಂಜಿ ಪೊಸ ಬಜನೆ ಪಂಡ್‌ದ ಕೊರಿಯೆರ ಸರು ಮಲ್ಪೆರ್‍.

"ಓಂ ಭಗವಾನ್ ಓಂ ಭಗವಾನ್
ಓಂ ಭಗವಾನ್ ಸತ್ಯನಾಥ ಭಗವಾನ್"

ಚಿನ್ನಪ್ಪನ ಸಾಲೆಡ್‌ಲಾ ಪ್ರತಿ ಸನಿವಾರೊ ಬಜನೆ ಇತ್ತ್‌ಂಡ್.  ಅಲ್ಲ್ `ನೋಡು ನೋಡು ಗೋಪಿ ನಿನ್ನ ಮಗನ ಲೂಟಿಯಾ' `ಎಲ್ಲಿರವೆ ತಂದೆ ಬಾರೋ' `ಯಮನೆಲ್ಲು ಕಾಣೆನೆಂದು ಹೇಳಬೇಡ' ಇಂಚಿತ್ತಿನ ಪರಾ ಬಜನೆ ಅತ್ತಾಂದೆ ಬಟ್ಟೇರ್‍ ಪಂಡ್‌ದ್ ಕೊರ್ಪಿನಂಚಿನ ಪೊಸ ಪೊಸ ಬಜನೆಲೇ ಇತ್ತಿಜೊ.  ಪೊಸ ರಾಗೊದ ಪೊಸ ಬಜನೆ ಕೇಂಡ್‌ತ್ ಚಿನ್ನಪ್ಪಗ್ ಬಟ್ಟೇರ್‍ ಮಲ್ಲ ಜನೊ ಅಂದ್‌ಂದಾಂಡ್.  ಬಜನೆ ಮುಗಿನಾಗ ಮಾಂತೆರ್ಲಾ ಲಕ್ಕ್‌ದುಂತಿಯೆರ್‍.  ಬಟ್ಟೇರ್‍ ಪೊಸ ಮಂಗಳೊ ಪಂಡ್ ಕೊರಿಯೆರ್‍.  ಅವು ಆಯನ ಸಾಲೆದ "ಚಲಿಸುವ ಜಲದಲಿ ಮತ್ಸನಿಗೆ" ಮಂಗಳೊದ ಲೆಕ್ಕತ್ತ್.  ಬಾರೀ ಎಡ್ಡೆರಾಗೊ.  ಆಂಡ ಅಯ್ತ ಒಂಜಿ ರಡ್ಡ್ ಸಾಲ್ ಬುಡುಂಡ ಚಿನ್ನಪ್ಪಗ್ ಒರಿ ನವು ನೆಂಪುಡು ಒರಿಯಿಜಿ.

ಮಂಗಳೊ ಮುಗಿಬುಕ್ಕೊ ಮಾಂತೆರ್‍ಲಾ ಕುಲ್ಯೆರ್‍.  ಬಟ್ಟೇರ್‍ ಒಂಜೆ ಕರಂಡಿಗೆಡ್ ಇಬೂತಿ ಪಾಡ್ದ್ ಕುಲ್ಲಿನಕುಲೆ ಎದ್‌ರ್‍ ಪತ್ತೊಂದು ಬತ್ತೆರ್‍.  ಅಪಗ ಬಟ್ಟೇರೆ ಮಲ್ಲಮಗೆ ಮಲ್ಲ ಮಾಣ್ಯಣ್ಣೇರ್‍ ಇಬೂತಿ ಸ್ಲೋಕೊ ಪಂಡ್ ಕೊರಿಯೆರ್‍:

"ಪರಮ ಪವಿತ್ರಂ ದೇವಂ ವಿಭೂತಿಂ
ಪರಮಂ ವಿಚಿತ್ರಂ ಲೀಲಾ ವಿಭೂತಿಂ
ಪರಮಾರ್ಥ ಇಷ್ಟಾರ್ಥ ಮೋಕ್ಷ ಪ್ರದಾನಂ
ದೇವಾ ವಿಭುತಿಂ ಇದಮಾಶ್ರಯಾಮಿ."

ಸುಮಾರ್‍ ಸರ್ತಿ ಆಯಿನ್ ಪಂಡ್‌ದ್ ಪಂಡ್‌ದ್ ಚಿನ್ನಪ್ಪಗ್ ಅವು ಬಾಯಿ ಪಾಠೊ ಬತ್ತ್ಂಡ್.

ಇಬೂತಿ ದೆತ್ತೋಂದು ಮಾತೆರಲ್ಲಾ ಮಲ್ತಿನಂಚನೆ ಒಂತೆ ಬಾಯಿಗ್ ಪಾಡೋಂದು, ಒರಿನೆನ್ ಚಿನ್ನಪ್ಪೆ ಮುಂಡೊಗು ತಿಕ್ಕೋಂಡೆ.  ಆಯೆ ಇಬೂತಿ ಸ್ಲೋಕೊಡೇ ಮುರ್ಕುದಿಪ್ಪುನಗ ತೋರೊತ ಕೈಯೊಂಜಿ ಆಯನ ಬೆರಿನ್ ಮುಟ್ಟುಂಡು.  ತಿರ್‌ಗ್‌ದ್ ತೂನಗ ಅಮ್ಮೆರ್‍!  "ಮುಗೀಂಡತ್ತ ಮಗಾ, ನನ ಪೋಯಾ?"  ಅಮ್ಮೆರ್‍ ದಿನೊಲಾ ಇಂಚನೇ ಇತ್ತ್ಂಡ ಏತ್ ಎಡ್ಡೆಂದ್ ಚಿನ್ನಪ್ಪೆ ಎಣ್ಣೋಂದಿಪ್ಪುನಗ ಬಟ್ಟೇರ್‍ ಬತ್ತೆರ್‍.  ದೂಮಣ್ಣನ್ ತೂದು ಪಿರೀತಿಡ್ "ಎಂಚಿ ದೂಮಾ ಪೂಜೆ ಮಲ್ದನಾ?  ಕೇಂಡರ್‍."  ದೂಮಣ್ಣೆ ತರೆ ಬಗ್ಗಾದ್ "ಊದು ಬತ್ತಿ ಪೂತ್ತಾದ್ ದೀತೆ" ಪಂಡೆ.

"ಅವು ಯಾವಂದ್ ದೂಮಾ.  ಒಂಜಿ ದೀಪೊ ಬೋಡು.  ಚಿಬಿಲೆಳಾ ಅವು.  ಪರ್ತಿದ ಬತ್ತಿ ಮಲ್ಪೋಡು.  ತಾರಾಯಿದ ಎಣ್ಣೆ ಪಾಡ್‌ದ ದೀಪೊ ಪೊತ್ತಾವೊಡು.  ಚಿನ್ನಪ್ಪಾ ಈ ದಿನೊಲಾ ಈಡೆ ಬರೊಡು.  ಮೂಲು ಬಜನೆ ಕಲ್ಪೊಡು.  ಇಲ್ಲಡ್ ಬಜನೆ ಪನೊಡು ದಾನೆ?"  ಬಟ್ಟೇರ್‍ ಪನ್ನಾಗ ಚಿನ್ನಪ್ಪೆ ಸಂತೋಸೊಡು ತರೆ ಆಡಯೆ.

ಇಲ್ಲಾಗ್ ಬರ್ಪಿ ಸಾದಿಡ್ ದೂಮಣ್ಣೆ ಮಗಟ ಪಂಡೇ "ಇಂಚಾಂಡ ನಮೊ ಬಿರಾಣೆರೆ ಲೆಕ್ಕೊನೇ ಆಪೊ.  ದಿನೋಲಾ ಬಜನೆ, ಪೂಜೆ, ಇಬೂತಿ.  ಈ ದೇವೆರೆಡ್ದ್ ಈತ್ ಮಾಂತ ಆಂಡ್.  ನನ ಗುರುವಾರೊ ಗುರುವಾರೊ ಮದು ಮಾಸೊ ಇಜ್ಜಿ.  ಆನಿ ಯಾನ್ ಪರ್‍ಯೆರಲಾ ಇಜ್ಜಿ.  ಯಾನ್ ಆ ದೇವೆರಡ್ಡ ನಟ್ಟುನೆ ಒಂಜೇ.  ಒರೊ ನಮ ಪೊಟೊಡ್ತು ಇಬೂತಿ ಬೂರ್‍ಯೆರ ಸುರುವಾಂಡ ಆಂಡ್.  ಬುಕೊ ಬೇಲೆಗ್ ಪೋವಂದೆಲಾ ಬದ್ಕೊಲಿ."

ಇಲ್ಲಡೆಡ್ ಎಂಕಮ್ಮಲಾ ಬೀಡಿ ಕಟ್ಟೋಂದು ಆಲ್ ಎಲ್ಯ ಉಪ್ಪುನಗ ಕಲ್ತಿನ ಒವ್ವೋ ಒಂಜಿ ಬಜೆತದ ರಾಗೊ ಒಯ್ತೋಂದಿತ್ತಲ್.  ಚಿನ್ನಪ್ಪೆ ಬಟ್ಟೇರ್‍ ಪನ್ನೇನ್ ಪೂರ ಅಪ್ಪೆಗ್ ಒಪ್ಪಿಸಾಯೆ.  ನೆಂಪಾಯಿನ ಬಜೆನೆದ ಸಾಲ್‌ಳೆನ್ ಪಂಡೆ.  "ಆ ಇಬೂತಿದ ಬಜನೆ ಪನ್‌ಮಗಾ" ದೂಮಣ್ಣೆ ಪನ್ನಗ ಅಯಗ್ ರಡ್ಡ್ ಸಾಲ್ ಮಾತ್ರ ನೆಂಪಾಡ್.  "ಬುಡು ಒರಿನೆನ್ ಎಲ್ಲೆ ಕಲ್ತೊನು" ಅಮ್ಮೆ ಸಮದಾನೊಡೇ ಪಂಡೆ.

"ಇತ್ತೆ ದೀಪೊಗು ದಾನೆ ಮಲ್ಪಿನ"?  ದೂಮಣ್ಣೆ ಎಂಕಮ್ಮ ಪಂಡೋಂದೇ ಉಲಯಿ ಪೋಯಲ್.  ಉಲಯಿ ಓಲೋಲೋ ನಾಡ್ದ್ ಚಿಬಿಲೆ ಪತ್ತೊಂದು ಬತ್ತಲ್.  ದೂಮಣ್ಣೆ ತಾರಾಯಿತ ಎಣ್ಣೆ ಮೈತೆ.  "ಬತ್ತಿಗ್ ಪರ್ತಿ ಇಜ್ಜತ್ತಾ"?  ದೂಮಣ್ಣೆ ತರೆ ಬೆಚ್ಚ ಮಲ್ದೆ.  ಎಂಕಮ್ಮ ಪರಾ ಪೆಟ್ಯದ ಬಾಯಿದೆತ್ತ್‌ದ್ ಪರಾ ಬೊಲ್ದು ಕುಂಟುದ ತುಂಡೊಂಜೆನ್ ದೆತ್ತಲ್.  ಅಯ್ನ್ ಎಲ್ಯ ತುಂಡು ಮಲ್ತ್‌ದ್ ಕೈತ ನಡುಟು ದೀದ್ ತಿರ್‍ಗಾದ್ ಬತ್ತಿ ಮಲ್ತ್‌ದ್ ಚಿಬಲೆಟ್ ದೀಯಲ್.  ದೂಮಣ್ಣೆ ಕಡ್ಡಿ ಗೀರ್‌ದ್ ದೀಪೊ ಪೊತ್ತಾಯೆ.  ಆಂಡ ಪೊಟೋ ಗೊಡೆದ ಮತ್ತ್‌ ಉಂಡು.  ಅಲ್ಲ್ ದೀಪೊನು ದೀಪುನೆ ಎಂಚ?  ದೂಮಣ್ಣೆ ಯೋಚನೆ ಮಲ್ತೊಂದು ಉಲಯಿ ಪೋಯೆ.  ಕೆಲ ದಿನೊಕ್ಕು ದುಂಬು ಅಂಗಡಿಡ್ದ್ ಕೊನದಿನ ಕಾಲಿ ರಟ್ಟ್‌ತ ಪೆಟ್ಟಿಗೆನ್ ಪತ್ತೊಂದು ಬತ್ತೆ.  ಅಯ್ತ ಒಂಜಿ ಬಾಗೊನು ಪರ್ತ್‌ದೆತ್ತೆ.  ಆಯ್ನ್ ಪೋಟೊತ ತಿರ್ತ್ ತಿಕ್ಕಾಯೆ.  ಅವು ಬೂರಾಂದಿಲೆಕ್ಕ ರಡ್ಡ್ ಆಣಿ ಹಾಕ್‌ತ್ ಉಂತಾಯೆ.  ಇತ್ತೆ ಚಿಬಲೆ ಉಂತುನಾತ್ ಜಾಗೆ ಆಂಡ್.  ಚಿಬಲೆದ ಸೊಡರ್‌ಗ್ ದೇವೆರೆ ಪೋಟೋ ನನಲಾ ಸೋಕು ತೋಜ್ಯೆರೆ ಸುರುವಾಂಡ್.  ಎಂಕಮ್ಮ ಅಯ್ನ್ ತೂದು ಬಯೋ ಬಕ್ತಿಡ್ ಕೈ ಮುಗಿಯಲ್.  ಚಿನ್ನಪ್ಪೇಲಾ ಕೈ ಮುಗಿದ್ "ದೇವೆರೇ ನಿನ್ನ ಪೊಟೊಡ್ದು ಒರೊ ಇಬೂತಿ ಬೂರಿಲೆಕ್ಕ ಮಲ್ಪು" ಪಂಡ್‌ದ್ ನಟ್ಟೊಂಡೆ.

ಪುಲ್ಯಕಾಂಡೆ ಚಿನ್ನಪ್ಪೆ ಲಕ್ಕ್‌ನಾಗ ಎಂಕಮ್ಮ ಜೆತ್ತಿನಲ್ಪನೇ  ನರಕ್ಕೊಂದಿತ್ತಲ್.  ದೂಮಣ್ಣೆ ಅಟ್ಟಿಲ್ದ ಕೆಲಸದ ಗಡಿಬಿಡಿಟ್ಟಿತ್ತೆ.  ಉಲಯಿಡ್ತ್ ಒಂತೆ ನೀರ್‍ ಕೊನದ್ ದೂಮಣ್ಣೆ ಅಯ್ಕ್ ಒಂತೆ ಇಬೂತಿ ಪಾಡ್ದ್ ಆಲೆಗ್ ಪರ್ಪಾಯೆ.  ಆಂಡಲಾ ನರಕ್ಕುನೆ ಉಂತಿಜಿ.  ಉಂದುನ್ ತೂದು ದೂಮಣ್ಣೆ ಪಮಡೆಃ `ಮಗಾ... ಇನಿ ಈ ಸಾಲೆಗ್ ಪೋವಡ.  ಅಪ್ಪೆನೊರ ಯಾನ್ ಲೆತ್ತೋಂದು ಚಾತು ಪಂಡಿತೆರಾಡೆಗ್ ಪೋದು ಬರ್ಪೆ'.  ಶಾಲೆ ತತ್ತ್‌ಂಡತ್ತಾಂದ್ ಚಿನ್ನಪ್ಪೆ ಒರೊ ಚಪ್ಪೆ ಆಯೆ.  ಸಾತ್‌ಗೇ ಪೊಟೋತ ನೆಂಪಾತ್ ಅಯನ ಬೇಜಾರ್‍ ಒರೊನೇ ಮಾಯಕಾಂಡ್.

ಅಪ್ಪೆನ ಕೈ ಪತ್ತೊಂದು ಅಮ್ಮೆ ಪೊಪುನಯಿನ್ ಕಣ್ಣ್‌ಗ್ ಬೂರುನಾತ್ ದೂರ ತೂಯಿನ ಚಿನ್ನಪ್ಪಗ್ ಅಕ್ಲು ಬರ್ಪಿಮುಟ್ಟದಾಯ್ತ ಮಲ್ಪಿನಾಂದ್ ಯೋಚನೆ ಸುರುವಾಂಡ್.  ಪದಿರಾಡೊಂಜ್ಲಿ ಪದಿರಾಡ್ ಮಗ್ಗಿ ಗಟ್ಟಿಡ್ ರಡ್ಡ್ ಸರ್ತಿ ಪಂಡೆ.  ಬಾಯಿಗ್ ಬರ್ಪಿ ಪದ್ಯೊಲೆನ್ ಪಂಡ್‌ದ್ ನಲ್ತೆ.  ಒಂಜಿ ಬೈರಾಸ್ ಪತ್ತೋಂದು ಕಿರೆಕ್ಕ್ ಪೋದು ದಡುಮ್ಮಲಾಗಿಯೆ.  ಮಲಂಕಾನಿ ಮೀಂದೋಂದು ಬಾಯಿಟ್ ನೀರ್‍ ಚಿಂದಾದ್ ಸುರ್‍ಕಂದ್ ಉಗಿಯೋಂದು ಒಂತೆ ಪೊರ್ತು ಕಲೆಯೆ.  ಇಲ್ಲಡ್ ಬತ್ತ್‌ದ ನೆಂಪಾಯಿನ ಮಾಂತಾ ಬಜನೆಲ್‌ನ್ ಪಂಡೆ.  ಬಡಾವಾಣಾಗ ನಂಗ್ ಸೂಟುಪಾಡ್ದ್ ರಡ್ಡ್ ಉಂಡೆ.

ಆಂಡಲಾ ಪೊರ್ತೇ ಪೋಪುಜಿ.  ಕುಡಾ ದೇವೆರ್‍ನೆ ಪೊಟೋತ ಎದ್‌ರ್‍ ಬತ್ತ್‌ದ್ ಉಂತ್ಯೆ.  ಪಟೊದ ಎದ್‌ರ್‌ತ್‌ ಚಿಬಿಲೆದ ಬತ್ತಿ ಪಿದಾಯಿ ನಿಲ್ಕೊಂದಿತ್ತ್‌ಂಡ್.  ಓ ಇನಿ ಚಿಬಿಲೆ ಪೊತ್ತಾತಿಜಿ.  ತನಾಂಡಲಾ ಪೊತ್ತಾದ್ ದೇವೆರೆನ್ ಬಯಬಕ್ತಿಡ್ ನಟ್ಟೊನೊಡು.  ಪಟೊಡ್ತು ಇಬೂತಿ ಬೂರಿಲೆಕ್ಕ ಆವೊಡು.  ಇಂಚಂದ್‌ದ್‌ ಎಣ್ಣಿನ ಚಿನ್ನಪ್ಪೆ ಮುಂದಿಲಿಗ್ ಬೆಲ್ತೆ.  ಅಲ್ಪ ನಾಲೈನ್ ಮಡಲ್ ಉಣುಂಗೋಂದಿತ್ತೊ.  ಅಯ್ಡದ್ ರಡ್ಡ್ ಮಡಲ್ದಗರಿ ಪತ್ತೊಂದು ದಿಕ್ಕೆಲ್ತಾಡೆಗ್ ಪೋಯೆ.  ದಿಕ್ಕೆಲ್ದ ಗೆಂಡೊಗ್ ಅವೆನ್ ತಾಗಾದ್ ಗಟ್ಟಿ ಉರಿತ್ತೆ.  ಒಂತೆ ಪೊರ್ತುಡು ಅವೆಕ್ ಸೂ ಪತ್ತ್ಂಡ್.  ಅವೆನ್ ಅಂಚನೇ ಪತ್ತೋಂದು ಪಟೊತಾಡೆಗ್ ಬತ್ತೆ.  ಚಿಬಿಲೆದ ಬತ್ತಿನ್ ಪೊತ್ತಾಯೆರ ಕಸರತ್ತ್‌ ಮಲ್ದೆ.

ಪಟೋ ದೀದಿತ್ತಿನ ಗೋಡೆತ ಎದ್‌ರ್‌ಡ್ ಬೆದರ್‍ದ ಅಡ್ಡೊ ಒಂಜಿತ್ತ್‌ಂಡ್.  ಬತ್ತಿ ಮಲ್ಪೆರಾಂದ್ ಒಂತೆ ಪರತ್ ಬೊಲ್ದು ಕುಂಟುಲೆನ್ ದೂಮಣ್ಣೆ ಅಡ್ಡೊಗು ಕಟ್ಟ್‌ದಿತ್ತೆ.  ಚಿನ್ನಪ್ಪನ ಲಾಗಾಟೊಡು ಸೂ ಬತ್ತಿಗ್ ತಾಗುನ ಬದಲ್ ಅಡ್ಡೊಗು ಕಟ್ಟ್‌ದಿತ್ತಿನ ಕುಂಟುಗು ತಾಗ್‌ಂಡ್.  ಕುಂಟುಗು ಪತ್ತಿನ ಸೂ ಬೆದ್‌ರ್‌ತ ಅಡ್ಡೊಗು ಪತ್ತ್‌ಂಡ್.  ಅಡ್ಡೊಡ್ದು ಇಲ್ಲ ಮಾಡ್‌ಗ್ ಮಾಡ್‌ತ ಮುಳಿಕ್ ಸೂ ಪತ್ತ್‌ನಗ ಚಿನ್ನಪ್ಪೆ ಕಂಗಾಲಾಯೆ.  `ಸ್ವಾಮಿ ದೇಬೇರೇ.  ಒರ ಸೂ ತೆಕ್ಕಾಲ.  ಒರ ನಿನ್ನ ಕಾರ್ನಿಗೊ ತೊಜಿಪ್ಪಾಲ.  ದೇಬೆರೇ ಸೂ ತೆಕ್ಕಾಲಾಂದ್' ಬೊಬ್ಬೆ ಪಾಡ್ದ್‌ ಕೈ ಮುಗಿಯೆ.

ಸೂ ಏರೋಂದೇ ಪೋಂಡು.  ಪೊತ್ತೊಂದಿತ್ತಿ ಮಾಡ್‌ದ ಅಡ್ಡ ಒಂಜಿ ಪಟೊಕ್ಕೇ ಬೂರುಂಡು.  ಪಟೋ ನೆಲಕ್ಕ್ ಬೂರುದು ನರಿನಗ ಚಿನ್ನಪ್ಪೆ ಇಲ್ಲದ ಪಿದಾಯಿ ಬೆಲ್ತೆ "ಅಯ್ಯೋ ಸೂ ಸೂ ಇಲ್ಲ್ ಪೊತ್ತೋಂತುಂಡು.  ಅಯ್ಯೋ... ಏರಾಂಡಲಾ ಬಲ್ಲೆ" ಎಂದ್‌ದ್ ಅರೆಬಾಯಿ ಪತ್ತಿಯೆ.  ದೂರೊಡಿತ್ತಿ ಇಲ್ಲಾಲೆಡ್ ಇತ್ತಿನ ಪರಬ್ಬೇರ್‌ಲಾ, ಪೊಡಿ ಜೋಕುಲ್ಲಾ ಮಾತ್ರೊ.  ಮಾಂತೆರ್‍ಲಾ ಇಂಬ್ಯನ ಸೊರೊ ಕೇಂಡ್‌ತ್ ಬಲಿತ್ತೋಂದು ಬತ್ತ್‌ದ್ ಒಟ್ಟುಗು ಅರೆಬಾಯಿ ಪತ್ಯೆರ ಸುರು ಮಲ್ತೆರ್‍.

ಬೊಬ್ಬೆ ಕೇನ್ದ್, ಪುಗೆ ತೂದು ಬಟ್ಟೇರೆ ತೋಟೊಡು ಕೆಲಸೊ ಮಲ್ತೊಂದಿತ್ತಿ ಏಲೆದಕುಲು ಬಲ್ತೊಂದು ಬತ್ತೆರ್‍.  ಪೊತ್ತುನ ಇಲ್ಲನ್ ತೂದು ತಿಕ್ಕಿನ ಕರ ಕೆಡ್ಯಟ್ ನೀರ್‍ ಕೊನದ್ ಸೇತೆರ್‍.  ಮಾಂತಾ ಉರಿದ್ ಪೋಯಿ ಬುಕೊ ಸೂ ಉಂತ್‌ಡ್.  ಸೂಡು ಕರೆಂಟಿನ ಮಾಡ್‌ ಇಜ್ಜಂದಿ ಇಲ್ಲ್ ಕಪ್ಪಾಯಿನ ಮಣ್ಣ್‌ದ ಗೋಡೆಲು ನಡೆತಿನೆಕ್ ಸಾಕ್ಷಿದ ಲೆಕ್ಕೊ ತೋಜೊಂದಿತ್ತೊ.

ಇಲ್ಲಡೆ ವಾಪಾಸ್ ಬರೋಂದಿತ್ತಿನ ದೂಮಣ್ಣೆ ದೂರೊಡ್ಡೇ ಬೊಬ್ಬೆ ಕೆಂಡ್‌ದ್, ಎಂಕಮ್ಮನ್ ಪಿರ ಬುಡ್ದು ಬೆಲ್ತೋಂದೇ ಬತ್ತೆ.  ಇಲ್ಲ್‌ನ್ ತೂದ್ ಮರಕಟ್ಟ್‌ದ್ ಉಂತಿಯೆ.  ಮಗನ ನೆಂಪಾದ್ ಅಂಚಿ ಇಂಚಿ ತೂಯೆ.  ಕಂಗಾಲಾದಿತ್ತಿನ ಮಗನ್ ತೂಯಿ ಬುಕೊ ದೂಮಣ್ಣಗ್ ಜೀವೊ ಬತ್ತ್‌ಂಡ್.  ಮಗನ ತಲೆ ಪೂಜಿದ್ ಅರ್ಕ್‌ಪತ್ತೋಂದು ಕೇಂಡೆ:  "ದಾನೆ ಆಂಡ್ ಮಗಾ?"  ಚಿನ್ನಪ್ಪೆ ಪೋಡ್ಡ್‌ದ್ ನಡಿಗ್ಯೆ.  ಸತ್ಯ ಪಂಡ ಅಮ್ಮೆ ಗುಂಡಿ ದೆತ್ತ್‌ದ್ ಕವುಂಪುವೆಂದ್ ಬುಲ್ಪೆರ ಸುರು ಮಲ್ತೆ.  ಬುಲ್ತೊಂದೇ ಪಂಡೆ:  "ಎಂಕ್ ಗೊತ್ತುಜ್ಜಿ".

ದೂಮಣ್ಣನ್ ತೂಯಿ ಬುಕ್ಕೊ ಅಲ್ಪ ಸೇರ್ದಿತ್ತಿನ ಜನೊ ಒರ್‍ಯೊರ್‍ಯಾದ್ ಜಾರ್‍ಯೆರ ಸುರು ಮಲ್ದೆರ್‍.  ದೂಮಣ್ಣೆ ಒಂತೆ ಪೊರ್ತು ಇಲ್ಲನೇ ತೂವೋಂದು ಉಂತ್ಯೆ.  ಎಂಕಮ್ಮ ಮೆಲ್ಲ ಮೆಲ್ಲ ಕಾರ್‍ ಒಯ್ತೋಂದು ಬತ್ತಲ್.  ಅಯ್ಯನ ಮಂಡೇಂದ್ ಪಂಡ್‌ದ್ ಜಾಲ್‌ಡೇ ಕಾರ್‍ ನೀರ್ದ್ ಕುಲ್ಯಲ್.  ಪೊತ್ತುದು ಪೋಯಿನ ಇಲ್ಲದ ಉಲಯಿ ದೂಮಣ್ಣೆ ಮೆಲ್ಲ ಕಾರ್‌ದೀಯೆ.  ಚಿನ್ನಪ್ಪ್ ಪಟೋತ್ತ ನೆಂಪಾಂಡ್.  ದೇವೆರೆನ ಪಟೋ ಆಯಿನೆಡ್ದಾದ್ ಅವು ಪೊತ್ತುಂದಿಪ್ಪಾಂದ್‌ದ್ ಅಮ್ಮನ ಬೆರಿಯೇ ಪೋಯೆ.  ಎಂಕಮ್ಮ "ಜಾಗ್ರತೆ ಮಗ ಗೆಂಡೊ ದೊಂಕಡಾ" ಪಂಡಲ್.

ಚಿನ್ನಪ್ಪೆ ಜಾಗ್ರತೆಡ್ ಒಂಜೊಂಜೇ ಪಜ್ಜೆದೆರ್ತ್ ದೀವೊಂದು ಉಲಯಿಪೋಯೆ.  ಪಟೊ ನೇಲಾಯಿನಲ್ಪ ಆಣಿಲು ಆಂಚನೇ ಒರಿಇತ್ತೊ.  ತಿರ್ತ್ ಬೊಣ್ಯೋದ ರಾಸಿಡ್ ಅಲ್ಲಲ್ಲ್ ಪುಡಾದ್ ರಟ್ಟಿನ ಕನ್ನಡಿತ ಚೂರುಲು ಇತ್ತೊ.  ನನ ಈ ಇಲ್ಲಾಡೆಗ್ ಪಟೋ ಕೊನರ್‍ಯೆರ ಇಜ್ಜಿ.  ನನ ಪಟೊಡ್ದು ಇಬೂತಿ ಬೂರ್‍ಯೆರಲಾ ಇಜ್ಜಿಂದ್‌ದ್ ಎನ್ನಿನ ಚಿನ್ನಪ್ಪಗ್ ಬುಲ್ಪೆರ ಬತ್ತ್‌ಂಡ್.

ಮಾಡ್ ಇಜ್ಜಂದಿ ಇಲ್ಲದುಲಯಿ ಕಾರೊದ ಕೊಂಬು ಬೂರೊಂದಿತ್ತ್‌ಂಡ್.  ಸೂ ಇಡೀ ಇಲ್ಲನೆ ಪೊತ್ತಾಂಡಲು ಗೋಡೆತ ಒಂಜಿ ಬಿದ್ದಿರ್‍ದ ಅಡ್ಡೊ ಪೂರ ಪೊತ್ತಾಂತೆ ಇತ್ತ್ಂಡ್.  ನೀರ್‍ ಚೇತಿನೆಡ್ತಾತ್ ಅವು ಕರಂಟ್‌ದ್ ಪೋಂಡಲಾ ಅಯ್ತ ಉಲಯಿಡ್ತ್ ಒಂತೆ ಪುಗೆ ಬರೋಂದೇ ಇತ್ತ್‌ಂಡ್.  ಚಿನ್ನಪ್ಪೆ ಅಯ್ನೇ ತುಯೆರ ಸುರುಮಲ್ತೆ.  ಅಂದ್, ಕರೆಂಟಿನ ಅಡ್ಡೊದ ಬಾಗೊಡ್ದು ಒಂತೊಂತೆನೇ ಒಂತೊಂತೆನೇ ಬೊಣ್ಯೊ ಬೂರೊಂದಿತ್‌ಂಡ್!

                         *****

ಕೀಲಿಕರಣ: ಕಿಶೋರ್‍ ಚಂದ್ರ

ತುಳು ಗಾದೆಗಳು


೧      :    ಆಟಿಡ್ದ್ ಬೊಕ್ಕ ಅರೆಗಾಲ; ಮಾಯಿಡ್‌ದ್ ಬೊಕ್ಕ ಮಾರಿಯಾಲ   
೨      :    ಅಪ್ಪ ತಿಂದ್oಡ ಯಾವಂದೋ ?  ಗುರಿ ಲೆಕ್ಕ ಮಲ್ಪೋಡಾ ?   
೩      :    ಅರಿ ಇತ್ತ್oಡ  ಪುರಿ ಉಂಡು.   
೪      :    ಅರಿ ತಿನ್ಪಿನಾಯೆ ಪೊಯೆಡ. ಬಾರ್ ತಿನ್ಪಿನಾಯೆ ಬರ್ಪೆ.   
೫      :    ಅಳೆಕ್ ಪುಳಿ ಬೋಡೇ?   
೬      :    ಆನೆ ಸಯ್ತ್ಂಡಲ ಸಾರೊ ವರಣ್ ಬೆಲೆ ಉಂಡುಗೆ   
೭      :    ಆನೆನ್ ದೇರ್ಪರೆ ಆನೆನೆ ಆವೊಡು   
೮      :    ಇಲ್ಲ್ ನಾಲಾಂಡ ನಟ್ಟುನಾಯೆಗ್  ಎಡ್ಡೆ ಆಂಡ್.   
೯      :    ಕಂಚಾಲ್ ಇತ್ತಂದ ಎನ್ಚಲಾ ಉಣೋಲಿ   
೧೦     :    ಕುರೀದಿನ ಕುಂಬುಡೊಗ್ ತೆಟ್ ಪೋತಿ  ತಾರಾಯಿ.   
೧೧     :    ತುಳುವೆರೆ ಮನಸ್  ತುಳುವೆ ಪೆಲಕಾಯಿದಂಚ.   
೧೨     :    ತೂನಗ ದಿನ್ನೊ ; ಪಾತೆರ್ನ ಬೊಜ್ಞ   
೧೩     :    ಪೆಲಕಾಯಿದ ಮೈ ಮುಳ್ಳುಂದು ಕಂಚೋಲು ಪಂತುಂದುಗೆ   
೧೪     :    ಮತ್ತ್ ಮೀರ್ಂಡ ಮರ್ಳೆರ ಲೆಕ್ಕೊ   
೧೫     :    ಮನಸ್  ಮಲ್ಲೆ  ಕೈ  ಕುದ್ಯ.   
೧೬     :    ಮರತ್ತ ಪುರಿ ಮರನೇ  ತಿನ್ಪುoಡು.   
೧೭     :    ಮರ್ಮಲೆಗ್ ಬುದ್ಧಿ ಪಂಡ್‌ದ್ ಮಾಮಿಗ್ ಬಂಜಿ ಬೈದ್ಂಡ್‌ಗೆ   
೧೮     :    ಮೂಂಕುದಾಂತಿನಾಲೆಗ್ ಮೂಂಕುತ್ತಿ ದಾಯೆ ಮಾದಿರ?   

ಸೇದಿದಿಯಾ ಬತ್ತಿ ನೀ ಸೇದಿದಿಯಾ

-ಶಿಶುನಾಳ ಶರೀಫ್

ಸೇದಿದಿಯಾ ಬತ್ತಿ ನೀ ಸೇದಿದಿಯಾ                 ||ಪ||

ಸೇದಿ ಬತ್ತಿಯ ಹೊಗಿ
ಊದಿ ಊರ್ಧ್ವಕೆ ನಿಂತು
ನಾದ ಬ್ರಹ್ಮದ ಗರುಪಾದವ ಭಜಿಸಿ            ||೧||

ವಿಷಯವನೆಲ್ಲವ ಬಿಟ್ಟು
ವ್ಯಸನಕಗ್ನಿಯ ಕೊಟ್ಟು
ಹಸನಾದ ಹಸರು ತಂಬಾಕದ ಬತ್ತಿಯ          ||೨||

ಸಧ್ಯಕ್ಕೆ ಶಿಶುನಾಳ
ಸದ್ಗುರು ದಯದಿಂದ
ಬುದ್ಧಿತಿಳಿದು ದಿವ್ಯ ಸಿದ್ಧಜ್ಞಾನದ ಬತ್ತಿ    ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಹದಿನಾಲ್ಕು ವರ್ಷಗಳ ನಂತರ

-ರವಿ ಕೋಟಾರಗಸ್ತಿ

ಹದಿನಾಲ್ಕು ವರುಷಗಳ ಮೇಲೆ
ಸವಿನೆನಪುಗಳ ಬುತ್ತಿಯಲಿ
ಏನೇನೊ ಹಲವು ಕನಸನೆ ಹೊತ್ತು
ಮಣ್ಣ ವಾಸನೆ ಅರಸುತ ಹಳ್ಳಿಗೆ ನಡೆದೆ

ಕರಿಮಣ್ಣಿನ ಏರೆಹೊಲದ ದಿಬ್ಬದಿ
ನನ್ನೂರು ಕಾಣುವ ತವಕದಿ
ಹೆಜ್ಜೆಯ ಮೇಲೆ ಹೆಜ್ಜೆಯಿಡುತ ಇಳಿದಾಗ
ಜುಳು... ಜುಳು... ಹರಿಯುತಿಹಳು
ಕಷ್ಣೆಯುದರದೊಳಗಿನ `ಡೋಣಿ'

ಹದಿನಾಲ್ಕು ವರ್ಷಗಳ ಹಿಂದೆ
ಹೇಗಿತ್ತು ಹಾಗೆ ಇಂದಿಗು ಎಲ್ಲೆಲ್ಲೂ
ಪರಿಚಯದ ಮರುಛಾಯೆ
ಕಣ್ಮುಂದೆ ತುಂಬಿ ಮರುಕಳಿಸಿತ್ತು
ಮನದಿ ಇಲ್ಲುಂಡ ಸುಖವೆಲ್ಲ
ಬಾಲ್ಯದ ಬನವ ತವಕದಲಿ
ಹೊಕ್ಕಾಗ ಎಲ್ಲೆಡೆಗೂ ಹದಿನಾಲ್ಕು ವರ್ಷಗಳ
ಮುದುಡಿದ ಮುದಿ ನೆರಳು ಕವಿದಿತ್ತು

ವರುಣ ದುಬಾರಿಯಾಗಿದ್ದು...
ಎಲ್ಲೆಡೆ ಬಣ... ಬಣ
ನೆಲ ಜಲ - ಮನಗಳು
ನಿಂತ ಮರವಾಗಿದ್ದವು ಒಣಗಿ...

ಹೊಟ್ಟೆಪಾಡಿಗಾಗಿ ಗುಳೆ ಎದ್ದು ಹೋಗಿದ್ದ
ನನ್ನೂರಿನ ಅಣ್ಣ-ತಮ್ಮಂದಿರು
ಅಕ್ಕ-ತಂಗಿಯರು ಕಾಣದ
ಓಣೆಲ್ಲಾ ಮೌನ ಆವರಿಸಿತ್ತು

ಓಡಾಡಿ... ಆಡಿದ
ಬೆಚ್ಚಗಿನ ಮನೆಗಳೆಲ್ಲಾ ನೆಲಕೆ
ಕುಸಿದ ಮಣ್ಣಿನ ಗುಡ್ಡೆಗಳೆಲ್ಲ
ಹುಗಿದಿಟ್ಟುಕೊಂಡ ಬಾಲ್ಯದ ನೆನಪುಗಳೆಲ್ಲಾ
ಬಿದ್ದಿದ್ದವು ಮಾಸಿ ತಬ್ಬಲಿಯಾಗಿ

ಅಂದು ಗಿಜಿ-ಗಿಜಿ ತುಂಬಿದ
ಭೇದವೆಣಿಸದ ಮನಗಳು ಓಣಿಗಳು
ನಿರ್ಜೀವ ಸವೆತದ ಮುದುಡಿದ
ಆ ಹಿರಿಜೀವಗಳ ಅಸಹಾಯಕತೆ ಕಾಣುತ

ಕಣ್ಮುಂದೆ ಕಟ್ಟುತಲಿ
ಜೀವ ಮರಮರನೆ ಬಳಲಿತು
ಅವ್ವ-ಅಪ್ಪ- ಹೋದ
ಅಜ್ಜ-ಮುತ್ತಜ್ಜರು ಹೋದ
ಮನೆ-ಮನ-ಬರಿದಾಗಿತ್ತು

ಆ ಹಿರಿಜೀವಗಳ ಸ್ಪರ್ಶದ
ಪ್ರೀತಿ ಉಂಡ ಬಾಲ್ಯವು
ಅವರೊಡನೆ ಈ ಲೋಕವು ಹೋಯ್ತು
ಎಲ್ಲೋ ಮಣ್ಣಲ್ಲಡಗಿದ....
ಈ ಜಗದ ರೀತಿ ನೀತಿಯಿದು

ಹಸಿ ಗಾಯದಿ ಬಸಿವ
ನೆತ್ತರ ತೆರಹದಿ
ಬರಿಯ ವ್ಯಥೆಯೇ ಜೀವ ತುಂಬಿರಲು

ಸುಡು ಬಿಸಿಲಿನ ನಡು ಹಗಲು
ಮುಸ್ಸಂಜೆ ಕವಿದಿತ್ತು...
ಮನಕ್ಕೆಲ್ಲ ತಂಪು ಎರೆದಿತ್ತು
ಅಂದು ಇಂದಿನ ನಡುವೆ ತಿರುಗಿತ್ತು
ಹದಿನಾಲ್ಕು ವರ್ಷಗಳ
ಕಠೋರ ನಿಷ್ಕರುಣ ಕಾಲಚಕ್ರ

         *****

ಕೀಲಿಕರಣ: ಕಿಶೋರ್‍ ಚಂದ್ರ

ಬಾ ಬಾ ಸಿರಿಯೆ

- ಡಾ || ರಾಜಪ್ಪ ದಳವಾಯಿ

ಬಾ ಬಾ ಸಿರಿಯೆ ಈ ಅಂತರ ಸರಿಯೆ
ಬದುಕಿಗೆ ಬಣ್ಣದ ಲಾಸ್ಯವ ಸುರಿಯೆ

ದುಂಬಿಯ ಝೇಂಕಾರದ ಮೋಹಕತೆ
ಭ್ರಮಿಸಲು ನಿಂತರಳಿದೆ ಪುಷ್ಪಲತೆ

ಎಲ್ಲಿಯೆ ನೋಡಲಿ ಕಣ್‌ಮನ ತಂಪು
ಕುಹು ಕೋಗಿಲೆಯೆ ಸುರಿ ನೀರಿನಿಂಪು

ಗಿರಿಕಂದರಗಳ ಭೂರಮೆ ತೊಡುಗೆ
ಬೀಸುವ ತಂಗಾಳಿಯ ಬಳುಕು ನಡಿಗೆ

ಎತ್ತರ ಎತ್ತರ ಚಿತ್ತಾರ ಉತ್ತರ
ವಿಸ್ಮಯ ಹೊಮ್ಮಿದೆ ಆಹ! ನಿರಂತರ

        *****

ಕೀಲಿಕರಣ: ಕಿಶೋರ್‍ ಚಂದ್ರ

ಉತ್ತಮ ಸೆಳಕಿನಿಂದ ಆರಂಭವಾಗುವ ಜನ

- ಮಂಜುನಾಥ ವಿ ಎಂ

ಸಂಜೆ ಐದರ ನಂತರದ ರೈಲುಗಾಡಿ ಬಂದು ನಿಂತಿದೆ.
ಇನ್ನೇನು ಹೊರಡುತ್ತದೆ;
ಬೋಗಿಗಳು ಅದಲು ಬದಲಾಗಬೇಕಷ್ಟೇ.

ಸೆಪ್ಟೆಂಬರ್‍ ತಿಂಗಳ ಮಳೆಗಾಲದ ನಡುಮಧ್ಯಾಹ್ನ
ಅವರೆಲ್ಲರೂ ಬಂದು ನೆಲೆ ನಿಂತರು.

ಆ ಮರಗಿಡಗಳು ಬೆಳೆಯುತ್ತಲೇ ಇವೆ.
ಕೆಲವರು ನಗಲು ಪ್ರಾರಂಭಿಸಿದ್ದಾರೆ ಎನ್ನುವ ಸುದ್ದಿ.

ಅಳುವುದರ ಸತ್ಯಾಸತ್ಯತೆ ಅವರ ನರನಾಡಿಗಳಲ್ಲಿ
ಪ್ರವಹಿಸುತ್ತಿದೆ.

ಇನ್ನೇನು ಎದ್ದು, ಎಲ್ಲವನ್ನೂ ಹೇಳಿಬಿಡಬೇಕೆಂಬ
ಕಾತರದ ಹುಡುಗನ ಕಣ್ಣುಗಳಲ್ಲಿ-
ಸೀಗಡಿ, ಕರಿಮೀನು ಉರಿಯುವ ಆ ಮೂಲೆಯ
ರೋಗಗ್ರಸ್ತ ಕುಟುಂಬ-
ಅವಳ ಪ್ರೇಮದ ಲೆಕ್ಕಾಚಾರವನ್ನು ಗುಣಿಸಿ ಹಾಕುತ್ತಿರುತ್ತದೆ
           *****

ಡೊಂಕು ಬಾಲದ ನಾಯಕರೆ

- ವೀಣಾ ಮಡಪ್ಪಾಡಿ

ಮೂರ್ತಿಯು ಸಂಜೆ ಕಛೇರಿ ಮುಗಿಸಿ ಮನೆಗೆ ವಾಪಾಸಾಗುವಾಗ ದಾರಿಯಲ್ಲಿ ಆ ನಾಯಿಮರಿಯನ್ನು ಕಂಡನು.  ಅದು ಹಸಿವು ಬಾಯಾರಿಕೆಗಳಿಂದ ಕಂಗೆಟ್ಟು ಸರಿ ಒಡಾಡಲೂ ಆಗದೆ ದೈನಾವಸ್ಥೆಯಲ್ಲಿ  ಜೋಲು ಮೋರೆ ಹಾಕಿ ಕೂತಿತ್ತು.  ಇನ್ನೇನು ಯಾವುದಾದರೂ ಕಾರು, ಆಟೋ, ಬಸ್ಸಿನ ಅಡಿ ಬಿದ್ದು ಅಪ್ಪಚ್ಚಿಯಾಗುವುದರಲ್ಲಿತ್ತು.  ಅದರ ಎರಡು ಉದ್ದನೆ ಕಿವಿ, ಕಪ್ಪು ಬಿಳಿ ಬಣ್ಣ, ಹಣೆಯಲ್ಲೊಂದು ಬಿಳಿ ಮಚ್ಚೆ, ಅದನ್ನು ಅತ್ಯಂತ ಆಕರ್ಷಕವನ್ನಾಗಿಸಿತ್ತು.  ಅವನ ಗಮನ ಸೆಳೆದದ್ದು ಅದರ ಮುದ್ದಾದ ಮೈಬಣ್ಣ.

ಅವನ ಪುಟಾಣಿ ಮಗಳು ಮನೆಗೊಂದು ನಾಯಿಮರಿ ಬೇಕೆಂದು ಅವನನ್ನು ಪೀಡಿಸುತ್ತಿದ್ದಳು.  ಅಣ್ಣ ಶಾಲೆಗೆ ಹೋದ ಮೇಲೆ ಮನೆಯಲ್ಲಿ ಅವಳಿಗೆ ತುಂಬಾ ಬೋರಾಗುತ್ತಿತ್ತು.  ನಾಯಿ ಬೇಕೆಂದು ಅದೆಷ್ಟು ಸಲ ಅಂಗಲಾಚಿದ್ದಳೋ.  ಅವಳಿಗೆ ನಾಯಿಮರಿ ಪದ್ಯವೆಂದರೆ ಪ್ರೀತಿ.  ಅವಳ ಆಸೆ ಅತಿಯಾದಾಗ ಅವಳಪ್ಪ ನಾಯಿಮರಿಗಳ ಎರಡು ಗೊಂಬೆ ತಂದುಕೊಟ್ಟಿದ್ದ.  "ಇದಲ್ಲಾ... ನನಗೆ ನಿಜವಾದ ನಾಯಿಮರಿಯೇ ಬೇಕು" ಎಂದು ಚಂಡಿ ಹಿಡಿದ ಅವಳನ್ನು ಸಮಾಧಾನಿಸಲು ಅವಳಪ್ಪ ಅಮ್ಮನಿಗೆ ಸಾಕಾಗಿ ಹೋಯ್ತು.

ಈಗ ಪುಟಾಣಿ ನಾಯಿ ಮರಿಯೊಂದು ಕಣ್ಣಿಗೆ ಬಿದ್ದಾಗ ನಾಯಿಮರಿಗಾಗಿ ಚಂಡಿ ಹಿಡಿಯುವ ಮಗಳ ಮುಖ ಮೂರ್ತಿಯ ಕಣ್ಣಿಗೆ ಕಟ್ಟಿದಂತಾಯಿತು.  ಅವನಿಗೆ ಖಚಿತವಾಗಿ ಗೊತ್ತಿತ್ತು ಅದೊಂದು ಹೆಣ್ಣು ಮರಿಯೆಂದು.  ಹೆಣ್ಣು ಮರಿಗಳನ್ನು ಯಾರೂ ಸಾಕುವುದಿಲ್ಲ.  ಅವನ್ನು ಎಲ್ಲೆಲ್ಲೋ ಬಿಟ್ಟು ಬಿಡುತ್ತಾರೆ.  ಅವು ಹೊಟ್ಟೆಗಿಲ್ಲದೆ ಅರಚಿ ಯಾವುದೋ ವಾನಗಳ ಕೆಳಗೆ ಬಿದ್ದು ಅಪ್ಪಚ್ಚಿಯಾಗುತ್ತವೆ.  ಅಥವಾ ದೊಡ್ಡ ಗಂಡು ಬೀದಿ ನಾಯಿಗಳು ಅವುಗಳನ್ನು ಕೊಂದು ಹಾಕಿ ಬಿಡುತ್ತವೆ.  ಅವನಿಗೆ ಮನುಷ್ಯರ ವರ್ತನೆಯೇ ವಿಚಿತ್ರವೆನಿಸಿತು.  ಎಲ್ಲಾ ಮನುಷ್ಯರು ಹೇಂಟೆ ಇರಲಿ ಎಂದು ಬಯಸುತ್ತಾರೆ.  ಮೊಟ್ಟೆ ಸಿಗತ್ತದಲ್ಲಾ!  ಆಕಳು ಮರಿ ಬರಲೆಂದು ಹಾರೈಸುತ್ತಾರೆ.  ಹಾಲು ಕೊಡುತ್ತದಲ್ಲಾ?  ಹೆಣ್ಣು ನಾಯಿಮರಿ ಯಾರಿಗೂ ಬೇಡ.  ಅವನ್ನು ಹೇಗೋ ನಿವಾರಿಸಿಕೊಳ್ಳುತ್ತಾರೆ.  ಪಾಪ ಶ್ರಾವಣದಲ್ಲಿ ಗಂಡು ನಾಯಿಗಳ ಪಾಡು ಯಾರಿಗೂ ಬೇಡ.

ಮೂರ್ತಿ ನಾಯಿ ಮರಿಯೊಂದನ್ನು ತರುವ ಬಗ್ಗೆ ಹೆಂಡತಿಯೊಡನೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದನು.  ಅವಳು "ಪಮೇರಿಯನ್ ಆದರೆ ತನ್ನಿ.  ಅಥವಾ ಆಲ್‌ಶೇಷಿಯನ್.  ಅದಿಲ್ಲದಿದ್ದರೆ ಮುದೋಳದ ಬೇಟೆನಾಯಿಯೂ ಆದೀತು.  ಕಂತ್ರಿ ನಾಯಿ ಬೇಡವೇ ಬೇಡ"  ಎಂದಿದ್ದಳು.  ಅವಳು ಹೇಳಿದಂತಹ ನಾಯಿಮರಿಗಳನ್ನು ತಂದು ಸಾಕಲು ತನ್ನ ಸಂಬಳ ಸಾಲದೆನ್ನುವುದು ಅವನಿಗೆ ಖಚಿತವಾಗಿ ಗೊತ್ತಿತ್ತು.  ಒಂದು ಪಮೇರಿಯನ್ ಅಥವಾ ಆಲ್‌ಶೇಷಿಯನ್ ಸಾಕುವ ಖರ್ಚಲ್ಲಿ ಇಬ್ರು ಮನುಷ್ಯರನ್ನು ಧಾರಾಳ ಸಾಕಬಹುದು ಎಂದು ಅವನು ಹೆಂಡತಿಯೊಡನೆ ಹೇಳಿದ್ದ.  ನಾಯಿಮರಿ ಸಾಕುವ ಆಲೋಚನೆಯನ್ನೇ ಕೈಬಿಟ್ಟಿದ್ದ.

ಆದರೆ, ಈಗ ಈ ಕಪ್ಪು ಬಿಳಿ ಹೆಣ್ಣು ಮರಿಯನ್ನು ಕಾಣುವಾಗ ಅವನ ಹೃದಯ ಬಾಯಿಗೆ ಬಂದಂತಾಯಿತು.  ಪಾಪ!  ಎಷ್ಟು ಮುದ್ದಾಗಿದೆ.  ಈ ಮಾನವ ಎಷ್ಟು ನಿಷ್ಕರುಣಿ.  ಹೆಣ್ಣಿಗಾಗಿ ಹಂಬಲಿಸುತ್ತಾನೆ.  ಅವಳಿಗಾಗಿ ಸಮಯ, ಹಣ ವ್ಯಯಿಸುತ್ತಾನೆ.  ಹೆಣ್ಣನ್ನು ಸ್ಪೂರ್ತಿ ಅಂದುಕೊಳ್ಳುತ್ತಾನೆ.  ಆದರೆ ಹೆಣ್ಣು ನಾಯಿಮರಿಯನ್ನು ಬೀದಿಗೆ ಬಿಡುತ್ತಾನೆ.  ಅವನದೇ ಸ್ವಂತ ಮಗು ಹೆಣ್ಣಾದರೆ ಅದನ್ನು ಬೀದಿಪಾಲು ಮಾಡುತ್ತಾನೆಯೆ?  ಇಂಥವರನ್ನು ಪಾಪ ಪ್ರಜ್ಞೆ ಏಕೆ ಕಾಡುವುದಿಲ್ಲ?

ಮೂರ್ತಿ ನಾಯಿಮರಿಯತ್ತ ಧಾವಿಸಿದ.  ಅದನ್ನು ಬಾಚಿ ಎತ್ತಿಕೊಂಡ.  ಅದು ನಡುಗುತ್ತಾ ಮುಲುಗುಟ್ಟಿತು.  ಯಾವಾಗಲೂ ಸಿಟಿಬಸ್ಸಿಗೆ ಕಾಯುವ ಮೂರ್ತಿ ಅಂದು ಆಟೋವೊಂದನ್ನು ನಿಲ್ಲಿಸಿ ನಾಯಿಮರಿಯೊಡನೆ ಅದರೊಳಗೆ ನುಗ್ಗಿದ.  ದಾರಿಯಲ್ಲಿ ಬೇಕರಿಯೊಂದರಿಂದ ಬ್ರೆಡ್ಡು, ರಸ್ಕು ಮತ್ತು ನಂದಿನಿ ಮಿಲ್ಕ್ ಪಾರ್ಲರಿನಿಂದ ಹಾಲು ತೆಗೆದುಕೊಂಡು ಬಂದ.

ಬೇಗ ಬಂದ ಗಂಡನ ಕೈಯಲ್ಲಿನ ಹೆಣ್ಣು ನಾಯಿಮರಿಯನ್ನು ನೋಡಿ ಅವನ ಹೆಂಡತಿಯ ಮುಖ ದಪ್ಪಗಾಯಿತು.  "ಈ ದರಿದ್ರದ್ದನ್ನು ಯಾಕೆ ತಂದ್ರಿ?  ಕಂತ್ರಿ ಹೆಣ್ಣು ನಾಯಿಮರಿಯನ್ನು?" ಎಂದು ಗಂಡನನ್ನು ಗದರಿಕೊಂಡಳು.  "ಬಿಡೇ, ಪಾಪ ಸಾಯೋದ್ರಲ್ಲಿತ್ತು.  ನಮ್ಮ ಪಾಪು ನಾಯಿಮರಿಗೆ ಅಲವತ್ತು ಕೊಳ್ಳುತ್ತಿತ್ತಲ್ಲಾ?  ಹಾಗೆ ತಂದು ಬಿಟ್ಟೆ" ಎಂದ.  ಮಗಳಿಗೆ ನಾಯಿಮರಿಯನ್ನು ನೋಡಿ ತುಂಬಾ ಖುಷಿಯಾಯಿತು.  ಅದು ಹಾಲು ಕುಡಿಯುವುದನ್ನು, ಬ್ರೆಡ್ಡು ತಿನ್ನುವುದನ್ನು ನೋಡಿ ಕೈ ತಟ್ಟಿ ಕುಣಿದಳು.  ಮೂರ್ತಿ ಅದಕ್ಕೆ ಶಾಂಪೂ ಹಾಕಿ ಬೆಚ್ಚನೆಯ ನೀರಲ್ಲಿ ಸ್ನಾನ ಮಾಡಿಸಿ ಹಳೆಯ ಟವಲೊಂದರಲ್ಲಿ ಮೈ ಉಜ್ಜಿದ.  ಅದು ಅವನ ಮಗಳೊಡನೆ ಮಲಗಿ ಹಾಯಾಗಿ ನಿದ್ದೆ ಮಾಡಿತು.

ಮರುದಿನ ಬೆಳಿಗ್ಗೆ ಮೂರ್ತಿ ಏಳುವ ಮೊದಲು ಅವನ ಹೆಂಡತಿ ಸುಪ್ರಭಾತ ಆರಂಭಿಸಿದಳು.  "ಹಾಳಾದ ನಾಯಿ, ಎಲ್ಲೆಂದರಲ್ಲಿ ಇಸ್ಸಿ ಹೊಯ್ದಿದೆ.  ಎರಡು ಕಡೆ ಕಕ್ಕ ಮಾಡಿದೆ.  ನಾನು ನೋಡದೆ ತುಳಿದುಬಿಟ್ಟೆ.  ಛೀ!  ಅಸಹ್ಯ.  ಸುಮ್ಮನೆ ಆ ನಾಯಿಮರಿಯನ್ನು ಎಲ್ಲಾದರೂ ಬಿಟ್ಟು ಬನ್ನಿ."

ಗಡಬಡಿಸಿ ನಿದ್ದೆಯಿಂದೆದ್ದ ಮೂರ್ತಿಗೆ ವಸ್ತುಸ್ಥಿತಿ ಏನೆಂದು ತಿಳಿಯಲು ಸ್ವಲ್ಪ ಹೊತ್ತು ಹಿಡಿಯಿತು.  ಅವನು ನಾಯಿಮರಿಯನ್ನು ನೋಡಿದ.  ಅದು ಮಗಳೊಟ್ಟಿಗೆ ಮಲಗಿ ಕೊಂಡಿದೆ.  "ಏನೇ ನಿನ್ನದು ಪಿರಿಪಿರಿ?  ಆ ನಾಯಿಮರಿಗೆ ಎಷ್ಟು ಬುದ್ಧಿ ಇದೆ ನೋಡು.  ಅದು ಹಾಸಿಗೆಯಲ್ಲಿ ಇಸ್ಸಿ, ಕಕ್ಕ ಮಾಡಿಲ್ಲ.  ನಿನ್ನ ಮಗಳು ಹಾಸಿಗೆಯಲ್ಲೇ ಮಾಡ್ತಿದ್ಲಲ್ಲಾ?  ಆಗ ಹೇಗೆ ಸಹಿಸಿಕೊಂಡಿ?  ಇನ್ನು ಮುಂದೆ ರಾತ್ರೆ ಮತ್ತು ಬೆಳಿಗ್ಗೆ ನಾನದನ್ನು ಹೊರಗೆ ಕರಕೊಂಡು ಹೋಗ್ತೇನೆ.  ಮಧ್ಯಾಹ್ನ ಮಗಳು ಹೊರಗೆ ಕರಕೊಂಡು ಹೋಗಿ ಇಸ್ಸಿ ಮತ್ತು ಕಕ್ಕ ಮಾಡಿಸಲಿ."

ಮೂರ್ತಿಯ ಮಾತು ನಿಜವಾಯಿತು.  ಹಾಗೆ ರಾತ್ರೆ ಮತ್ತು ಬೆಳಿಗ್ಗೆ ಅವನು, ಮಧ್ಯಾಹ್ನ ಅವನ ಮಗಳು ನಾಯಿ ಮರಿಯನ್ನು ಇಸ್ಸಿ ಮತ್ತು ಕಕ್ಕಕ್ಕೆ ಮನೆಯಿಂದ ಹೊರಗೆ ಕರಕೊಂಡು ಹೋಗಲು ತೊಡಗಿದ ಮೇಲೆ ಅದು ಮನೆಯೊಳಗೆ ಗಲೀಜು ಮಾಡಲೆ ಇಲ್ಲ.  ಈಗೀಗ ಮೂರ್ತಿಯ ಹೆಂಡತಿಗೂ ನಾಯಿಮರಿ ಇಷ್ಟವಾಗತೊಡಗಿತು.  ಅದಕ್ಕೆ ಜ್ಯೋತಿ ಎಂದು ಅವಳೇ ಹೆಸರಿಟ್ಟು ಬಿಟ್ಟಳು.  ಮೂರ್ತಿಗೂ ಆ ಹೆಸರು ಪ್ರಿಯವಾಯಿತು.

ನಾಯಿಮರಿ ಈಗ ಬಲಿತು ಹೆಣ್ಣು ನಾಯಿಯಾಯಿತು.  ಆ ವರ್ಷದ ಶ್ರಾವಣ ಬಂದಾಗ ಮೂರ್ತಿಯ ಮನೆಯೆದುರು ಗಂಡುನಾಯಿಗಳು ಜಮಾವಣೆಯಾಗಿ ತೃತೀಯ ಮಹಾಯುದ್ಧ ಆರಂಭಿಸಿದವು.  ಅವುಗಳ ಚಿತ್ರವಿಚಿತ್ರ ಆರ್ತನಾದ, ಬೊಗಳುವಿಕೆ, ವಿಶಿಷ್ಟ ನಾದದ ಸ್ವರಗಳು ಮೂರ್ತಿಯ ಮನೆಯವರ ನಿದ್ದೆಕೆಡಿಸತೊಡಗಿದವು.  ಜ್ಯೋತಿಯನ್ನು ಹೊರಗಡೆ ಇಸ್ಸಿ ಮತ್ತು ಕಕ್ಕಕ್ಕೆ ಕರಕೊಂಡು ಹೇದಾಗಲೆಲ್ಲಾ ಗಂಡುನಾಯಿಗಳು ಮೂರ್ತಿಯನ್ನು ಕ್ಯಾರೇ ಮಾಡದೆ ಜ್ಯೋತಿಯನ್ನು ಹಿಂಬಾಲಿಸಿ ಬಿಡುತ್ತಿದ್ದವು.  ಮೂರ್ತಿ ಕಲ್ಲೆತ್ತಲೆಂದು ಬಾಗಿದರೆ ಅವನನ್ನೆ ಗುರ್‍ರೆಂದು ಹೆದರಿಸತೊಡಗಿದವು.  ಜ್ಯೋತಿಯೂ ಸರಪಣಿ ಬಿಚ್ಚಿ ಅವುಗಳೊಡನೆ ಹೋಗಲು ಹೆಣಗಾಡ ತೊಡಗಿತು.  ಅದು ಹೇಗೋ ಮೂರ್ತಿ ಅದನ್ನು ಸಂಭಾಳಿಸಿ ಮನೆಗೆ ಕರಕೊಂಡು ಬಂದ.  ಅವ ಬಾಗಿಲು ತೆಗೆದು ಒಳ ನುಗ್ಗುವಾಗ ಗಂಡುನಾಯಿಗಳ ಒಂದು ಹಿಂಡೇ ಅವನ ಹಿಂದೆ ನುಗ್ಗಿ ಬಿಟ್ಟಿತು.  ಅವುಗಳನ್ನು ನೋಡಿ ಅವನ ಹೆಂಡತಿ, ಮಗ, ಮಗಳು ಏನು ಮಾಡುವುದೆಂದು ದಿಗ್ಬ್ರಾಂತರಾಗಿ ನಿಂತು ಬಿಟ್ಟರು.  ಕೊನೆಗೆ ಮೂರ್ತಿ ಜ್ಯೋತಿಯನ್ನು ಮಂಚದ ಕಾಲಿಗೆ ಕಟ್ಟಿ ಹಾಕಿ ಮೂಲೆಯಲ್ಲಿದ್ದ ಸರಳೊಂದರಿಂದ ಒಂದು ನಾಯಿಗೆ ಬಡಿದ.  ಅದು ಕಿರ್‍ರೋ ಮರ್‍ರೋ ಎಂದು ಹೊರಗೆ ಓಡಿತು.  ಈಗ ಮೂರ್ತಿಯ ಹೆಂಡತಿಗೆ ಧೈರ್ಯ ಬಂದು ಕಸಬರಿಕೆ ತಂದು ನಾಯಿಯೊಂದರ ಮುಖ ಮೂತಿ ನೋಡದೆ ಚಚ್ಚಿದಳು.  ಮಗ ಕ್ರಿಕೆಟ್ಟು ಬ್ಯಾಟು ತಂದು ಎರಡು ನಾಯಿಗಳಿಗೆ ಬೌಂಡರಿ ಬಾರಿಸಿದ.  ಹಾಗೂ ಹೀಗೂ ನಾಯಿಗಳೆಲ್ಲಾ ಒಡಿ ಹೋದ ಮೇಲೆ ಮೂರ್ತಿ ಉಸ್ಸಪ್ಪಾ ಎಂದು ಉಸಿರುಬಿಟ್ಟ.

ಅಂದು ಅವನಿಗೆ ಕಛೇರಿಯಲ್ಲಿ ಮನಸ್ಸಿಟ್ಟು ಕೆಲಸ ಮಾಡಲಾಗಿಲಿಲ್ಲ.  ನಾಯಿಗಳು ಇನ್ನು ಏನೇನು ಮಾಡಿ ಹಾಕುತ್ತವೋ ಎಂಬ ಗಾಬರಿಯಲ್ಲಿ ದಿನ ಕಳೆಯಿತು.  ಯಾರಿಗಾದರೂ ಈ ಬೀದಿನಾಯಿಗಳು ಕಚ್ಚಿ ಬಿಟ್ಟರೇನು ಗತಿ?  ಮತ್ತೆ ಹೊಕ್ಕುಳ ಸುತ್ತ ೧೩ ಇಂಜೆಕ್ಷನ್ನು ತೆಗೆದುಕೊಳ್ಳಬೇಕಲ್ಲಪ್ಪಾ.  ದೇವ್ರೇ ಎಂದು ಚಿಂತಾಕ್ರಾಂತನಾದ.  ಹಾಗೂ ಹೀಗೂ, ಹೇಗೋ ಮನೆಗೆ ಬಂದು ತಲುಪಿದ.

ಮನೆಯ ಹೊರಗೆ ಒಂದೇ ಒಂದು ನಾಯಿ ಅವನಿಗೆ ಕಾಣಸಿಗಲಿಲ್ಲ.  ಯಾವ ದೇವರು ಅದೇನು ಪವಾಡ ಮಾಡಿ ಬಿಟ್ಟನೋ ಎಂದು ಅವ ಖುಷಿಯಿಂದ ಕಾಲಿಂಗ್ ಬೆಲ್ಲು ಒತ್ತಿದ.  ಮಗಳು ಓಡಿ ಬಂದು ಬಾಗಿಲು ತೆರೆದಳು.  ಅವಳ ಮುಖ ಮೌನವಾಗಿತ್ತು.  "ಏನಾಯಿತು ಮಗಳೇ" ಎಂದು ಮೂರ್ತಿ ಕೇಳಿದ್ದಕ್ಕೆ "ಮಧ್ಯಾಹ್ನ ನಾನು ಜ್ಯೋತಿನ ಹೊರಗೆ ಕರ್ಕೊಂಡು ಹೋಗಿದ್ದೆ.  ಅದು ನನ್ನ ಕೈಯಿಂದ ಬಿಡಿಸಿಕೊಂಡು ನಾಯಿಗಳೊಟ್ಟಿಗೆ ಓಡಿ ಹೋಯ್ತು" ಎಂದು ಅತ್ತೇ ಬಿಟ್ಟಳು.  ಮೂರ್ತಿ ಹೆಂಡತಿಯ ಮುಖ ನೋಡಿದ.  ಹಾಳಾಗಿ ಹೋಗಲಿ ದರಿದ್ರದ್ದು ಎಂಬಂತಿತ್ತು ಅವಳ ಮುಖ ಭಾವ.  ಮೂರ್ತಿ ಮಗಳನ್ನು ಅಪ್ಪಿ ಸಂತೈಸಿದ.  "ಹೋಗಲಿ ಮಗಳೇ, ನಿನಗೆ ಇನ್ನೊಂದು ಮರಿ ತಂದು ಕೊಡುತ್ತೇನೆ" ಎಂದ.  ಮೂರ್ತಿಯ ಹೆಂಡತಿ "ನೀವು ಒಂದು ತಂದದ್ದೇ ಸಾಕು.  ಇನ್ನೆಂದು ಈ ಮನೆಗೆ ನಾಯಿಮರಿ ತರಬೇಡಿ" ಎಂದು ಸಿಡುಕಿದಳು.

ಶ್ರಾವಣ ಮುಗಿದು ಮೂರು ದಿನ ಆಗಿತ್ತು.  ಒಂದು ಬೆಳಿಗ್ಗೆ ಯಾರೋ ಬಾಗಿಲು ಬಡಿದಂತಾಗಿ ಮೂರ್ತಿ ಹೋಗಿ ನೋಡಿದರೆ ಜ್ಯೋತಿ ಬಾಲವನ್ನು ಬಾಗಿಲಿಗೆ ಬಡಿಯುತ್ತಾ ನಿಂತುಕೊಂಡಿದೆ.  ನೆಟ್ಟಗೆ ಒಳಗೆ ಬಂದ ಜ್ಯೋತಿ ಮೂರ್ತಿಯ ಮಗಳ ಹಾಸಿಗೆಯ ಬಳಿಗೆ ಬಂದು ಅವಳನ್ನು ನೆಕ್ಕಿ ಎಬ್ಬಿಸಿಯೇ ಬಿಟ್ಟಿತು.  "ಅಮ್ಮಾ.... ಜ್ಯೋತಿ ಬಂದ್ಲು" ಎಂದು ಸಂಭ್ರಮದಿಂದ ಮಗಳು ನುಡಿದಳು.  ಅಮ್ಮ, ಅಣ್ಣ ಜ್ಯೋತಿಯ ಬಳಿಗೆ ಬಂದಾಗ ಅದು ಕುಯಿಂ ಕುಯಿಂ ಮಾಡುತ್ತಾ ಎಲ್ಲರನ್ನೂ ಮೂಸಿ ಮೂಸಿ ನೆಕ್ಕಿ ಮುಜುರೆ ಸಲ್ಲಿಸಿತು.

"ಈ ದರಿದ್ರಕ್ಕೆ ಕಳೆದ ಇಪ್ಪತ್ತು ದಿನ ನಾವು ಯಾರೂ ಬೇಕಿರಲಿಲ್ಲ.  ಈಗ ಬಂದಿದೆ ಮುಂಡೇದು.  ಎಲ್ಲಾದ್ರೂ ಕೊಂಡು ಹೋಗಿ ಬಿಟ್ಟು ಬನ್ನಿ" ಎಂದು ಮೂರ್ತಿಯ ಹೆಂಡತಿ ಸಿಡುಕಿದಳು.  ಅವಳ ಕೋಪ ಅರ್ಥವಾದಂತೆ ಜ್ಯೋತಿ ಮೂರ್ತಿಯ ಮಗಳ ಹತ್ತಿರ ಬಂದು ಮಲುಗತೊಡಗಿತು.  ಮೂರ್ತಿಯ ಮಗಳು ಜ್ಯೋತಿಯ ಕುತ್ತಿಗೆಯನ್ನು ತಬ್ಬಿಕೊಂಡು "ಇಲ್ಲ.  ಇದನ್ನು ಕೊಂಡು ಹೋಗಲಿಕ್ಕೆ ನಾನು ಬಿಡುವುದಿಲ್ಲ" ಎಂದಳು.

ದಿನಗಳು ಉರುಳಿದವು.  ಜ್ಯೋತಿ ಈಗ ತುಂಬು ಗರ್ಭಿಣಿ.  "ಇನ್ನೀಗ ಇದು ನಾಯಿ ಮನೆ ಆಗಿ ಬಿಡುತ್ತದೆ ನೋಡಿ" ಎಂದು ಮೂರ್ತಿಯ ಹೆಂಡತಿ ಆಗಾಗ ಸಿಡುಕತೊಡಗಿದಳು.  ಮೂರ್ತಿಯ ಮಗಳು "ಎಷ್ಟು ನಾಯಿ ಮರಿಗಳಿದ್ದರೂ ನನಗೆ ಬೇಕು.  ಅವುಗಳನ್ನು ನಾನು ಸಾಕುತ್ತೇನೆ" ಎಂದು ಮರು ನುಡಿಯತೊಡಗಿದಳು.

ಕೆಲವು ವಾರಗಳ ಬಳಿಕ ಮೂರ್ತಿಗೆ ಬೆಳಿಗ್ಗೆ ಸಂಭ್ರಮದ ಕೇಕೆ ಕೇಳಿ ಎಚ್ಚರವಾಯಿತು.  ಮಗಳು ಕರೆಯುತ್ತಿದ್ದಳು.  "ಅಪ್ಪಾ ಬಂದು ನೋಡಿ.  ಎಷ್ಟೊಂದು ಮರಿಗಳು."

ಮೂರ್ತಿ ಗಡಬಡಿಸಿ ಎದ್ದು ಬಂದು ನೋಡಿದರೆ ಅವನ ಮುದ್ದಿನ ಜ್ಯೋತಿ ಎಂಟು ಮರಿಗಳನ್ನು ಈದು ಅವನನ್ನು ಹೆಮ್ಮೆಯಿಂದ ನೋಡುತ್ತಿದೆ.  ಅವ ಜ್ಯೋತಿಯ ಒಂದೊಂದೆ ಮರಿಗಳನ್ನು ಎತ್ತಿ ಲಿಂಗ ಪರೀಕ್ಷೆ ಮಾಡತೊಡಗಿದ.  ಎಂಟರಲ್ಲಿ ಏಳು ಹೆಣ್ಣು ಮರಿಗಳು!  ಮೂರ್ತಿ ತಲೆಗೆ ಕೈ ಇಟ್ಟು ಕುಳಿತು ಬಿಟ್ಟ.

             *****

ಕೀಲಿಕರಣ: ಕಿಶೋರ್‍ ಚಂದ್ರ

ಹೆಂಡಗಡಂಗಿನ ಚಿತ್ರ

- ಮಂಜುನಾಥ ವಿ ಎಂ

ಗೋಡೆ ಮೇಲಿನ ದೊಡ್ಡ ಗಾತ್ರದ ಎಲೆಗಳ ಹೂಬಳ್ಳಿ
ಸ್ತಬ್ಧ ಚಿತ್ರವಾಗಿಯಷ್ಟೇ ಉಳಿದಿದೆ.  ಎಂದೋ ಉದುರಿದ ಎಲೆಗಳು
ನೆಲ ಬಗೆದು ಬೂಮಿಯೊಡಲು ಸೇರಿ, ಗೆದ್ದಲಿಡಿದು ಎಲುಬು ತಿಂದ
ಮನುಷ್ಯನಂತೇ ಆಗಿಹೋಗಿವೆಯೇನೊ.

ಬುದ್ಧಿ ಬಂದಾಗ ಮೂಲೆ ಸೇರಿದ ಪ್ರಜ್ಞಾಹೀನ ಇನ್ನೂ ಮೇಲೆದ್ದಿಲ್ಲ.
ಉಡುಪು ಮಾಸಿಲ್ಲ, ಪ್ರೇಮ ಮಾತ್ರ ಬೆಂಕಿಯಂತೆ ಉರಿದು ಹೋಗುತಿದೆ.
ಮಳೆಗಾಲದ ಬಣ್ಣಬಣ್ಣದ ಚಿಟ್ಟೆಗಳು ಒಳಸುಳಿದು ಹೂದೋಟದತ್ತ ಹಾರಿಹೋಗಲಾರಂಭಿಸಿವೆ.

ಹುಲಿ ಆಡಿಸುವವನು ಈಗಷ್ಟೇ ಪೀಪಾಯಿ ಘಾಟು ಹೆಂಡ ಏರಿಸಿ,
ಜನರ ಮಧ್ಯೆಯೇ ನಡೆದುಹೋಗಿದ್ದಾನೆ.

ವಸಂತಮಾಸದ ಹಿರಿಮೆಯಲಿ ಹಿಗ್ಗುವ ಪ್ರಕೃತಿ ಸೌಂದರ್ಯದ ಮೋಹಕಪ್ರಭೆ - ಹೆಂಡಗಿರಾಕಿಗಳನ್ನು
ಯಥೇಚ್ಛವಾಗಿ ಕರೆತರುತ್ತಿದೆ.
ದಮ್ಮಡಿಯಿಲ್ಲದೆ ಕುಡಿದವನೊಬ್ಬ ಅಡವಿಟ್ಟು ಹೋದ ಸ್ಯಾಕ್ಸಫೋನ್
ಇನ್ನೂ ಅಡ್ಡಗೋಡೆಯ ಮೇಲಿದೆ.

ತಡಿಕೆ ಮರೆಯಲ್ಲಿ ಹಂದಿಬಾಡಿನ ಚಾಕಣ ಉರಿಯುತ್ತಿದ್ದವಳು ಮಾತ್ರ
ಅಂದು ಗೈರು ಹಾಜರು.  ಹಸಿ ನೆಲಗಡಲೆ, ಆಲೂಗಡ್ಡೆ ನಂಜಿಕೊಳ್ಳುವ
ಕುಡುಕರಿಗೆ ಅವಳ ಚಿಂತೆಯೇ ಇಲ್ಲ.

ನಾಲ್ಕೈದು ಬಾತುಕೋಳಿಗಳೊಂದಿಗೆ ಬಂದು ಮೂಲೆ ಸೇರಿದ ಬೇಟೆಗಾರ-
ಅಂದಿನ ಶೌರ್ಯ ಸಾಹಸಗಳ ವರ್ಣನೆ ಮಾಡುತ್ತಲೇ ನೆಲಕ್ಕೆ ಬೀಳುತ್ತಾನೆ.

ಕಾಲವನ್ನೇ ಮೀರಿ ಮುನ್ನಡೆಯುವ ಹೆಂಡಗಡಂಗು-
ಕ್ಷಣಕಾಲ ನಿಂತು ನಡೆದಂತೆಯೂ ಭಾಸವಾಗುತ್ತಿತ್ತು.

          *****

ಕರುಣಿಕರು ಕೊಟ್ಟ ಆರಪಾವು ಜೋಳ

-ಶಿಶುನಾಳ ಶರೀಫ್

ಕರುಣಿಕರು ಕೊಟ್ಟ ಆರಪಾವು ಜೋಳದಿಂದ
ಹೊಟ್ಟೆ ಬರ ಹಿಂಗುವುದ್ಯಾಂಗಲೋ ಮನಸೇ               ||ಪ||

ಸ್ಥಿರವಲ್ಲ ಸಂಸಾರ ಕೆರವನಟ್ಟಿಯ ಸರಿ
ಬರಿದೆ ಆಸೇಕ ಬಿದ್ದಲ್ಲೋ ಮನಸೇ                            ||ಅ.ಪ.||

ನೇಮಿಸಿ ದೇಶಪಾಂಡೆ ಭೀಮರಾಯನೆಂಬೊ
ನಾಮವನು ಕೇಳಿ ಬಂದೆಲ್ಲೋ ಮನಸೇ
ಇವನ್ನು ಕೊಡುತಿದ್ದಿಲ್ಲ ಶಿವನೇ ಸದ್ಗುರು ಬಲ್ಲಾ
ಅವರಪ್ಪ ಬಲು ಜ್ಞಾನಿಯೋ ಮನಸೇ                         ||೧||

ಸತಿ ಸಂತರ ಹಸಿವಿಗೊದಗದ ಕಾಳು ಮನಿಗೊಯ್ಯೋ
ಮತಿಗೇಡಿಯೆನ್ನುತಿಹರೋ ಮನಸೇ
ಜತನದಲಿ ಮಹಾರಾಯನ ಸರಕಿನೊಳಗೆ ಸುರುವಿ
ಹಿತದಿ ಹಿಂದಕ್ಕೆ ನೀ ನಡಿಯಲೋ ಮನಸೇ                 ||೨||

ಆರು ಬೇಡಿದರಿಲ್ಲಾ ಆರು ಕಾಡಿದರಿಲ್ಲಾ
ಪ್ರಾರಬ್ದ ಕೃತಭೋಗವು ಮನಸೇ
ಚಾರುತರದ ವ್ರ್‍ಇಷಬನಮಂತ್ರ ಬಲವಿರಲು
ನರರ ಹಂಗಿನ್ನೇನಲೋ ಮನಸೇ                              ||೩||

ಇಂದಿಗೆ ದುಷ್ಕಾಳ ವಂದೇ ಎನ್ನಲಿಬ್ಯಾದ
ಮುಂದೆ ಪ್ರಳಯ ಕಾಲವೋ ಮನಸೇ
ಬಂದ ಭವಾ ಕಳಿದು ಶಿಶುನಾಳ ಮಂದಿರದಿ ಗೋ-
ವಿಂದ ಗುರುವಿನ ಹೊಂದಿಕೋ ಮನಸೇ                      ||೪||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಚಿನ್ಮಯಿ

- ಗಿರಿಜಾಪತಿ ಎಂ. ಎನ್

ದಾರಿ ತೋರುವವರಾರು ನಿನಗೆ
ಚಿನ್ಮಯಾನಂದದ ಶಿವ ಬೆಳಕಿನೆಡೆಗೆ ||

ವೀಧಿ ಬೀಧಿ ಹಾದಿಯಲ್ಲು ಕಲ್ಲು ಮುಳ್ಳಿನ ಕಂದರ
ಪೊಳ್ಳು-ಜೊಳ್ಳು ಭರವಸೆ ಗೋಪುರ
ಹೆಜ್ಜೆ-ಹೆಜ್ಜೆಗೂ ಮುಖವಾಡ ಬಿಂಬವು
ಹಗಲುಗನಸಿನ ಡಂಗುರ ||

ಎನು ನೆಚ್ಚುವೆ ಯಾರ ಮೆಚ್ಚುವೆ
ಹುಚ್ಚು-ಪೆಚ್ಚು ಸಂತೆ ಸಂದಣಿಯಲಿ
ಪೆಚ್ಚು ಮನಸಿಗೆ ಹಿಡಿದ ಗ್ರಹಣವ
ಬಿಡಿಸಲಾಗದು ಬರಿಗೈಯಲಿ ||

ಬರಿ ನರರಿಲ್ಲಿಲ್ಲವೋ ನಾಕಗೆಡಿಸೊ
ಮೃಗ ಮೊಗಜರ ರಣ ಭೀಕರ
ಗೆದ್ದ ಕಟ್ಟಿದ ಹುತ್ತ ಕಬಳಿಸೋ
ಉರಗ ಲೋಕದ ಕರಿ ನಾಗರ ||

        *****

ಕೀಲಿಕರಣ: ಕಿಶೋರ್‍ ಚಂದ್ರ