ಒಡೆಯ ಬಸವಲಿಂಗಾ

-ಶಿಶುನಾಳ ಶರೀಫ್

ಒಡೆಯ ಬಸವಲಿಂಗಾ ಜಂಗಮ ನೆಲಸಿರ್ದ
ಕಡಕೋಳದಲಿ ವಸತಿ ಮಾಡಿದಿಯೋ                    || ಪ||

ಬಿಡದೆ ಈ ಗ್ರಾಮದ ಜನರೆಲ್ಲ ಕೂಡಲು
ನೋಡಿ ಕನ್ನಡ ಪದ ಹಾಡಿದರಯ್ಯಾ                      ||೧|| 

ಮನಸಿ ನಿನಗೆ ನಾ ಏನಂದೆ ಆತ್ಮದಿ
ನೆಲಸಿಕೊಂಡು ಸುಖವನು ಬೇಡಿಕೊಂಬೆನಯ್ಯಾ      ||೨|| 

ರಸಿಕರಾಜ ಗೋವಿಂದನ ಸೇವಕ
ಆಸಮ ಸಾಹಸಿಯು ಪಾತ್ರಿಯ ಬೇಡುವೆ                ||೩||

ಎನಿಸಿ ತೇಜಪ್ರಕಾಶ ತೋರಿದೆ
ಬಸವನ ಪಾದಕ ಕರವ ಜೋಡಿಸಿ ನಾ                   ||೪||

              ****

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ