ಸಣ್ಣ ಹುಡುಗನ ಶಡುವಿಗೆ

-ಶಿಶುನಾಳ ಶರೀಫ್

ಸಣ್ಣ ಹುಡುಗನ ಶಡುವಿಗೆ
ಮಿಡಿಕ್ಯಾಡೋ ಮನಕ ಮಚ್ಚಿಲ್ಹೊಡದು       ||ಪ||

ಆಣಕವಾಡು ಶಿವನಂದಿ ಪಿಟೀಲಿಗೆ
ತಣಕ ಚರಂತಿಯ ತಾಳ ಕುಟೀಲಗೆ
ಹೆಣಕ್ಕಾಡುವ ಸೊಟ್ಟದ ಕೌಚಾಪಿಗೆ
ಕಣಕಹಚ್ಚಿ ಬಾರಿಸುವ ಮೃದಂಗದ
ಘನಶಾಸ್ರ ಅರಿಯದ ಗುಣಗೇಡಿಗಳಿಗೆ        ||೧||

ಹೊಸಹಳ್ಳಿ ಗ್ರಾಮದ ಗಾಣಿಗ ಕುಲ
ರಸಿಕನಾದನೋ ಆಗ ಸಾಲಿಗೆ ಬಂದು
ಅಸಮ ಪ್ರಸಂಗಕ ಸರಿ ಇಟ್ಟನು ಇದು
ಕಿಸಿ ಕಿಸಿ ಹಲ್ಲುಗಳ ತೆರೆದು ನಕ್ಕನವ
ಹೆಸರಿಗೆ ಕಾಲನ ಹೊಸತರ ಚೇಷ್ಟಿಗೆ          ||೨||

ಪುಂಡ ಶಿಶುನಾಳಧೀಶನ ಸೇವಕ
ತೊಂಡ ಶೂರನ ಗ್ರಾಮ ಸಂಹಾರಕ
ಪಂಡಿತರಿಗೆ ಹಿತವಾದ ವಿಚಾರಕ್ಕೆ
ಮಂಡಲದೊಳು ಗುರುಲಿಂಗ ಕೃಪಾಂಗಗೆ
ಇಂಗಿತವರಿಯದ ಮಂಗಮನುಜರಿಗೆ        ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಎರಡು ಮುಖ

- ಎಂ.ಎನ್.ಎಸ್. ರಾವ್

ಏನು ಮಾಡೋದು ಯಾವಾಗಲೂ ಎಲ್ಲಾದಕ್ಕೂ ಎರೆಡೆರಡು ಮುಖ

ಮನುಷ್ಯನಿಗೆ ಹೆಚ್ಚು ಆಸೆ ಯಾವುದು ಕೆಟ್ಟದ್ದೋ ಅದರ ಮೇಲೆ
ಯಾರಿಗೆ ಗೊತ್ತಿಲ್ಲ ತಂಬಾಕು ದೇಹಕ್ಕೆ ಘೋರ ಘೋರ
ಸಿಗರೇಟು ಸೇದಲು ಮನೇಲಿ ಹೆಂಡತಿ ಅಡ್ಡಿ ಬೀದೀಲಿ ಕಾನೂನು ಅಡ್ಡಿ
ಆದರೂ ಅದನ್ನು ಬಿಟ್ಟು ಬದುಕೋದು ಅವರಿಗೆ ಹೇಗೆಂದು ಗೊತ್ತಿಲ್ಲ

ರೈತರಿಗೆ ತಂಬಾಕೇ ಬೆಳೀಬೇಡಿ ಅಂದ್ರೆ ಅವರು ದುಡ್ಡು ಮಾಡೋದು ಬೇಡವೇ
ತಂಬಾಕೇ ಬೆಳೀದ್ರಿದ್ರೆ ಸರ್ಕಾರ ಸುಂಕ ಹಾಕದೇ ದೇಶ ಅಭಿವೃದ್ಧಿ ಹೇಗೇ
ಬೆದುರು ಬೊಂಬೆ ಚಿತ್ರ ಸಿಗರೇಟು ಪ್ಯಾಕ್ ಮೇಲೆ ಮುದ್ರಿಸಿದರೆ ಸಾಕೇ
ಸುಂಕ ಹಾಕಲು ಬೇರೇನು ಇಲ್ಲವೆ ತಂಬಾಕು ಬೆಳೆ ನಿಲ್ಲಿಸೋದು ಹೇಗೇ
           *****

ದೂರದಲ್ಲಿದ್ದೇನೆ

- ಮಂಜುನಾಥ ವಿ ಎಂ

ಅಲ್ಲಿ ಭಾವಗೀತೆಯಂತೆ ತಂಗಾಳಿ ಸೂಸುವ,
ದಟ್ಟ ನೆರಳು ಕೊಡುವ ಸಾಲುಹುಣಸೆಮರಗಳಿದ್ದವು.

ಯಂತ್ರ, ವಾಹನಗಳ ಹೊಗೆ;  ಪ್ರವಹಿಸುತ್ತದೆ ಮನಸ್ಸಿನಾಳದಲ್ಲಿ,
ಇತ್ತೀಚೆಗೆ ಹಾಳು ಹುಡುಗಿಯರು ಕತ್ತೆಗಳಂತೆ
ಅಲ್ಲಲ್ಲಿ ಸ್ತಬ್ಧವಾಗಿ ನಿಂತಿರುತ್ತಾರಂತೆ.

ಮುರಿದು ಬಿದ್ದಿರುವುದು ನನ್ನ ಮನೆ-
ಆದ್ದರಿಂದ ನಾನೀಗ ದೂರದಲ್ಲೆಲ್ಲೋ ವಾಸವಿದ್ದೇನೆ;

ಅದೊಂದು ಸೂಳೆಯರು ಬಿಟ್ಟುಹೋದ ಕಸಾಯಿಖಾನೆಯಲ್ಲಿ.

        *****

ಭ್ರೂಣ ಹೇಳಿದ ಕಥೆ

- ಕಂನಾಡಿಗಾ ನಾರಾಯಣ

ಅಮ್ಮಾ ಅಮ್ಮಾ, ನಾನೂ ನಿನ್ನ ಹಾಗೇ ಹೆಣ್ಣೇ ಅಲ್ಲವೇನಮ್ಮಾ... ನಿನ್ನ ಮೈಯೊಳಗೆ ಹರಿವ ರಕ್ತವೇ ನನ್ನೊಳಗೂ ಹರಿಯುತ್ತಿರುವುದರಿಂದ, ನೀನು ಉಸಿರಾಡುವ ಗಾಳಿಯನ್ನೇ ನಾನೂ ಉಸಿರಾಡುತ್ತಿರುವುದರಿಂದ, ನೀನು ಉಣ್ಣುವ ಊಟವನ್ನೇ ನಾನೂ ಉಣ್ಣುತ್ತಿರುವುದರಿಂದ, ನಿನ್ನೊಳಗೇ ನೀನೇ ಆಗಿ ನಾನಿರುವುದರಿಂದ ನಿನ್ನ ಎಲ್ಲಾ ಭಾವನೆಗಳು ನನಗೆ ಅರ್ಥವಾಗುತ್ತವೆ.

ಅವತ್ತು ನೀನು ನಿಲ್ಲಬೇಕಾದ ದಿನಕ್ಕೆ ಮುಟ್ಟು ನಿಲ್ಲಲಿಲ್ಲವೆಂದು ಎಷ್ಟೊಂದು ಸಂಭ್ರಮಿಸಿದೆಯಲ್ಲಾ.  ಆದರೂ ಗುಟ್ಟನ್ನು ರಟ್ಟು ಮಾಡದೇ ಒಂದು ವಾರ ಕಾದು ನೋಡೋಣ ಅಂತ ಕಾಯುತ್ತಿದ್ದೆಯಲ್ಲಾ.  ಈ ಮಧ್ಯೆ ಅಪ್ಪನಿಗೆ ಹೇಳಬೇಕೆಂದು ನಾಲ್ಕೈದು ಸಲ ಬಾಯಿಗೆ ಬಂದದ್ದರೂ ಹೇಳದೇ ಹಾಗೆ ತಡೆದುಕೊಂಡೆಯಲ್ಲಾ.  ಅಕಸ್ಮಾತ್ ಮುಟ್ಟು ಜಾರಿ ಬಿಟ್ಟರೆ ಅವಮಾನ ಎಂದು ಸುಮ್ಮನಿದ್ದೆಯಲ್ಲಾ.  ವಾರದ ನಂತರ ಒಂದು ದಿನ ಬೆಳಗ್ಗೆ, ಅಪ್ಪ ಆಫೀಸಿಗೆ ಹೋಗುತ್ತಿದ್ದಂತೆಯೇ, ಯಾರಿಗೂ ಹೇಳದೇ ವಾಸವಿ ಲ್ಯಾಬ್‌ಗೆ ಹೋಗಿ ಮೂತ್ರ ಪರೀಕ್ಷೆಗೆ ದುಡ್ಡು ಕಟ್ಟಿ, ಸಣ್ಣ ಖಾಲಿ ಸೀಸೆಯನ್ನು ಹಿಡಿದು ಟಾಯ್ಲೆಟ್‌ಗೆ ಬಂದು ಬಾಗಿಲು ಹಾಕಿಕೊಂಡಾಗ ನಿನ್ನಲ್ಲಿ ಎಂಥ ದುಗುಡ ಇತ್ತು ಗೊತ್ತಾ... ಅಕಸ್ಮಾತ್ ನೆಗೆಟೀವ್ ಅಂತ ಬಂದುಬಿಟ್ಟರೆ ಏನು ಎಂಬ ಆತಂಕ ನಿನ್ನದಾಗಿತ್ತು. ಅಯ್ಯೋ ದೇವರೇ, ಹಾಗಾಗದಿರಲಿ ಅಂತ ಅಪ್ಪನನ್ನು ನೆನೆಸಿಕೊಂಡು, ಸೀರೆ ಕಟ್ಟಿನ ಕೆಳಗೆ ನೀನು ಹೊಟ್ಟೆಯನ್ನು ಸವರಿಕೊಂಡಾಗ ನನಗೆ ನನ್ನ ತಲೆಯನ್ನೇ ಸವರಿದಂತಾಗಿ ರೋಮಾಂಚನವಾಗಿತ್ತು.

`ಅರ್ಧ ಗಂಟೆ ಬಿಟ್ಟು ಬನ್ನಿ' ಎಂದು ರಿಸೆಪ್ಷನಿಸ್ಟ್ ಹೇಳಿದರೂ, ನೀನು ಮನೆಗೆ ಹೋಗಿ ಮತ್ತೆ ಬರುವವರೆಗಿನ ಧಾವಂತವನ್ನು ತಡೆದುಕೊಳ್ಳಲಾರದೇ, `ಪರವಾಗಿಲ್ಲ. ನನಗೆ ಬೇರೆ ಏನೂ ಕೆಲಸ ಇಲ್ಲ. ಕಾಯ್ತಿರ್‍ತೀನಿ. ರಿಪೋರ್ಟ್ ರೆಡಿಯಾದ ಕೂಡಲೇ ಹೇಳ್ರೀ...' ಅಂತ ಅಲ್ಲೇ ಕೂತಿದ್ದೆ ಅಲ್ವಾ. ಆಗ ನೆನೆಸಿಕೊಂಡ ದೇವರ ಹೆಸರುಗಳನ್ನೆಲ್ಲಾ ಹೇಳಲಾ ಬೇಕಾದರೆ?

ರಿಪೋರ್ಟ್ ಪಾಸಿಟೀವ್ ಅಂತ ಬಂದಾಗ ನಿನ್ನ ಹೆಸರನ್ನು ಕೂಗಿ ಕರೆದ ಆ ರಿಸೆಪ್ಷನಿಸ್ಟ್, ಅನುಮಾನದಿಂದ ನಿನ್ನ ಕೊರಳಲ್ಲಿ ತಾಳಿ ಇದೆಯಾ ಅಂತ ನೋಡಿದ್ಲು ಗೊತ್ತಾ? ನಿನ್ನ ಸೆರಗಿನೊಳಗಿಂದ ಅದು ಕಾಣದೇ ಇದ್ದಾಗ ರಿಪೋರ್ಟ್‌ನ್ನ ಕೆಳಗೆ ಬೀಳಿಸಿದಂತೆ ಮಾಡಿ ನಿನ್ನ ಕಾಲುಂಗರ ನೋಡಿ ಸುಮ್ಮನಾದಳು.  ಒಂದು ಮಗು ಆಗಿ, ಎರಡನೆಯದಕ್ಕೆ ಕಾಲಿಡುತ್ತಿದ್ದರೂ, ನೀನು ಇನ್ನೂ ಕಾಲೇಜು ಹುಡುಗಿ ಥರಾ ಕಾಣುಸ್ತೀಯಾ ಗೊತ್ತಾ.  ಬೈಕಲ್ಲಿ ಹೋಗೋ ಹುಡುಗರು ನಿನ್ನನ್ನ ಕಂಡು ಸಿಳ್ಳೆ ಹೊಡೀತಾ ಹೋಗುವಾಗ ನೀನು ಹುಸಿ ಮುನಿಸು ತೋರಿದರೂ ಒಳಗೊಳಗೇ ಖುಷಿ ಪಡ್ತೀಯಾ ಅಂತ ನನಗೆ ಗೊತ್ತು ಬಿಡು.

ಮಧ್ಯಾಹ್ನ ಅಪ್ಪ ಊಟಕ್ಕೇ ಅಂತ ಮನೆಗೆ ಬಂದಾಗ ನೀನು ಒಂಥರಾ ಸಸ್ಪೆನ್ಸ್ ಹೇಳುವವಳ ಹಾಗೆ ಸತಾಯಿಸಿದೆಯಲ್ಲಾ.  ಅಕ್ಕನನ್ನ ಬೇಬಿ ಸಿಟ್ಟಿಂಗ್‌ನಿಂದ ಕರಕೊಂಡು ಬರಲು ಹೇಳುವ ನೆಪದಲ್ಲಿ ಇನ್ನು ಮುಂದೆ ಇಬ್ಬರನ್ನ ಕರ್‍ಕೊಂಡು ಬರ್‍ಬೇಕಾಗುತ್ತೆ ಅಂತ ಅಂದಿದ್ದೆ.  ಅಪ್ಪ, `ನನ್ನ ಆಫೀಸ್ ಬಿಟ್ಟು ಅಕ್ಕಪಕ್ಕದ ಮನೆಯವರನ್ನೆಲ್ಲಾ ಕರ್‍ಕೊಂಬರಕ್ಕಾಗಲ್ಲ' ಅಂತ ಸಿಡುಕಿದಾಗ, `ಬೇರೆಯವರ ಮಕ್ಕಳಲ್ಲರೀ, ನಿಮ್ಮ ಮಕ್ಕಳನ್ನೇ...' ಅಂದಾಗ ಒಂದು ಥರಾ ಪೆದ್ದಾಗಿ ನಿನ್ನ ಮುಖ ನೋಡಿದ್ದರು.  ನೀನು ವಾರೆಗಣ್ಣಲ್ಲಿ ಅಪ್ಪನ್ನ ನೋಡ್ತಾ ಸಿನೆಮಾದಲ್ಲಿ ಮಾಡೋ ಹಾಗೆ ಎತ್ತಿ ಸುತ್ತಾಡಿಸಿ ಮುದ್ದಾಡುತ್ತಾರೆ ಅಂತ ಬಯಸಿದ್ದೆ ಅಲ್ಲವಾ.  ಆದರೆ ಅಪ್ಪ ಹಾಗೆ ಮಾಡಲಿಲ್ಲ. ಅವರು ತುಂಬಾ ಪ್ರಾಕ್ಟಿಕಲ್ ಮನುಷ್ಯ. `ಹೌದಾ. ನೋಡೋಣ ಬಾ ಹಾಗಾದರೆ' ಅಂತ ಮಂಚದ ಮೇಲೆ ಬಲವಂತದಿಂದ ನಿನ್ನನ್ನ ಮಲಗಿಸಿ, ನಿನ್ನ ಹೊಟ್ಟೆ ಮೇಲೆ ಕಿವಿಯಿಟ್ಟು ನನ್ನ ಹೃದಯದ ಬಡಿತ ಕೇಳಿಸಿಕೊಳ್ಳಲು ಪ್ರಯತ್ನಿಸಿದರು.  ಆದರೆ ಜೋರಾಗಿದ್ದ ನಿನ್ನ ಎದೆಯ ಬಡಿತದ ಮುಂದೆ ನನ್ನ ಎದೆಯ ಬಡಿತ ಎಲ್ಲಿ ಕೇಳಬೇಕು?  ಆದರೂ ಅಪ್ಪ ಎಷ್ಟೊಂದು ಒಳ್ಳೆಯವರಲ್ಲವಾ ಅಂತ ಕೇಳಬೇಕೆಂದುಕೊಂಡೆನಾದರೂ ಆಗ ನನಗಿನ್ನೂ ಬಾಯಿ ಬಂದಿರಲಿಲ್ಲ...

ಅಪ್ಪ ಮತ್ತೆ ಆಫೀಸಿಗೆ ಹೋಗುತ್ತಿದ್ದಂತೆಯೇ ಅಜ್ಜಿಗೆ ನೀನು ಫೋನ್ ಮಾಡಿ ಎಲ್ಲಾ ಹೇಳಲಾರಂಭಿಸಿದೆ.  ಎಷ್ಟು ಹೊತ್ತು ನೀವಿಬ್ಬರೂ ಮಾತಾಡಿದಿರಿ ಗೊತ್ತಾ.  ಅಬ್ಬಾ, ನನಗಂತೂ ಕೇಳಿದ್ದನ್ನೇ ಕೇಳೀ ಕೇಳೀ ನಿದ್ದೆ ಬಂದು ಬಿಡ್ತು.  ನಿನ್ನ ಮೊಬೈಲಿನಿಂದ ಅಜ್ಜಿ ಫೋನಿಗೆ ನಿಮಿಷಕ್ಕೆ ಹತ್ತು ಪೈಸೆಯ ಕಾಲ್ ಹಾಕಿಕೊಟ್ಟಿದ್ದರಿಂದ ಅಪ್ಪ ಬಚಾವ್.  ಇಲ್ಲಾ ಅಂದಿದ್ರೆ... ಆದರೂ ತಿಂಗಳ ಕೊನೆಗೆ ಎಷ್ಟೊಂದು ಬಿಲ್ಲು ಬಂದಿದೆಯಲ್ಲಾ ಅಂತ ಬೇಜಾರು ಮಾಡಿಕೊಂಡ್ರು ಗೊತ್ತಾ?

ಅಜ್ಜಿ ಹೇಳಿದ್ದರಲ್ಲಿ ಕೆಲವು ಮಾತುಗಳು ಇನ್ನೂ ನನಗೆ ನೆನಪಿನಲ್ಲಿವೆ.  ಮದುವೆಯಾದ ತಿಂಗಳಲ್ಲೇ ಇದೇ ರೀತಿ ಗರ್ಭ ಧರಿಸಿದ್ದರೂ ನೀನು ಫ್ರೆಂಡ್ಸ್ ಅವರೂ ಇವರೂ ಅಂತ ಆಟೋದಲ್ಲೆಲ್ಲಾ ಓಡಾಡಿ, ಅದು ರಾಜನಹಳ್ಳಿ ಛತ್ರದ ಎದುರು ಒಂದು ಸಣ್ಣ ಗುಂಡಿಗೆ ದಡಕ್ಕಂತ ಬಿದ್ದು ಮುಂದೆ ಹೋಗಿದ್ದರೂ, ಆ ಕುಲುಕಿಗೇ ನಿನಗೆ ಹೊಟ್ಟೆ ನೋವು ಬಂದು, ಬ್ಲೀಡಿಂಗ್ ಆಗಿ, ಊರಿಂದ ಅಜ್ಜಿ ಬಂದು ಆಸ್ಪತ್ರೆಗೆ ಸೇರಿಸಿದಾಗಲೇ ಅಬಾರ್ಷನ್ ಆಗಿದೆ ಅಂತ ಗೊತ್ತಾಗಿದ್ದಂತೆ!  ಅದಕ್ಕೇ ಅಕ್ಕ ಹುಟ್ಟುವಾಗ ಅಪ್ಪನ ಬೈಕಲ್ಲೂ ಕೂರಿಸದೇ ನಡೆಸಿಕೊಂಡೇ ಓಡಾಡಿಸಿದ್ದಂತೆ.

ಅಕ್ಕ ತುಂಬಾ ಲಕ್ಕಿ ಅಲ್ವಾ ಅಮ್ಮಾ... ಅವಳಿಗೆ ಎಷ್ಟೊಂದು ತರಹದ ಚಾಕೋಲೆಟ್‌ಗಳು, ಹಣ್ಣುಗಳು, ಎಷ್ಟೊಂದು ರೀತಿಯ ಆಟದ ಸಾಮಾನುಗಳು, ಎಷ್ಟೊಂದು ಬಟ್ಟೆಗಳು... ಅದರಲ್ಲಿ ಎಷ್ಟೋ ಬಟ್ಟೆಗಳನ್ನು ಅವಳು ಒಂದು ದಿನಕ್ಕೂ ಹಾಕಿಕೊಳ್ಳದೇ ಅವಳು ದೊಡ್ಡವಳಾಗಿ ಬೆಳೆದುಬಿಟ್ಟಳು ಅಂತ ಅಪ್ಪ ಹೇಳೋದ್ರಲ್ಲಿ ಏನೂ ಸುಳ್ಳಿಲ್ಲ ಬಿಡು.  ನೀನು ಅದೇ ಬಟ್ಟೆಗಳನ್ನು ಇನ್ನೊಂದು ಮಗುವಾದ್ರೆ ಇರಲಿ ಅಂತ ಎತ್ತಿಟ್ಟಿದ್ದೀಯಂತೆ.  ನಾನಂತೂ ಅವನ್ನೆಲ್ಲಾ ಹಾಕ್ಕೊಳಲ್ಲಾ, ನನಗೆ ಹೊಸವನ್ನೇ ಕೊಡುಸ್ಬೇಕು ಅಂತ ಅಪ್ಪನ ಹತ್ರ ಹಠ ಮಾಡ್ತೀನಿ...

ಅಪ್ಪ ಅವತ್ತು ಸಾಯಂಕಾಲ ಮನೆಗೆ ಬಂದಾಗ ಸ್ವೀಟ್ ತಂದಿದ್ದರು. ವೆಂಕಟೇಶ್ವರ ಸ್ವೀಟ್ ಸ್ಟಾಲಿನ ಸ್ಪೆಷಲ್ ಮೈಸೂರು ಪಾಕು ಅಂತ ಹೇಳಿದ್ರು.  ನೀನಂತೂ ಇನ್ನೂ ಬಿಸಿಬಿಸಿಯಾಗಿದ್ದ ಅವನ್ನ ಒಂದೂ ಬಿಡದಂಗೆ ತುಂಬಾ ಚೆನ್ನಾಗಿದೆ ಅಂತ ತಿನ್ನುತ್ತಲೇ ಇದ್ದೆ.  ನಿಜಕ್ಕೂ ಎಷ್ಟೊಂದು ಸ್ವೀಟಾಗಿತ್ತು ಗೊತ್ತಾ.  ನಾನು ರುಚಿ ನೋಡಿದ ಮೊದಲ ಸ್ವೀಟ್ ಅಲ್ಲವಾ ಅದು, ಅದಕ್ಕೇ.  ನೀನು ತಿಂದದ್ದರ ರಸ ಎಲ್ಲಾ ನನಗೂ ತಲುಪುತ್ತಿತ್ತಲ್ಲವಾ... ಆದರೂ, ಅಪ್ಪ ಒಂದು ಪೀಸ್ ಕೇಳಿದ್ರೂ ಕೊಡ್ಲಿಲ್ಲ ನೀನು, `ಶುಗರ್ ಜಾಸ್ತಿಯಾಗುತ್ತೆ ಸುಮ್ಮನಿರ್ರೀ' ಅಂತ ಒಂದೇ ಒಂದು ಗ್ರಾಂ ನಷ್ಟು ಕೊಟ್ಟೆ.  ಪಾಪಿ ಅಮ್ಮ ನೀನು.  ಪಾಪ ಅಪ್ಪ ಎಷ್ಟು ಬಾಯಿ ನೀರು ಸುರಿಸಿದ್ರೋ.
ಆದರೂ ನೀನು ಅವತ್ತು, ಒಂದು ವಾರ ತವರಿಗೆ ಹೋಗಿ ವಾಪಾಸ್ ಬಂದ ದಿನದ ರಾತ್ರಿಯ ನೆನಪು ಮಾಡಿಕೊಟ್ಟೆ ಅಪ್ಪನಿಗೆ.  ಅಕ್ಕ ಮಲಗಿದ ಮೇಲೆ ನೀವಿಬ್ಬರೂ ಬರಗೆಟ್ಟವರಂತೆ ಏನೇನೋ ಆಟ ಆಡಿದಿರಂತೆ.  ಅಪ್ಪ ಏನೇನೋ ಪೋಲಿ ಮಾತುಗಳನ್ನು ಆಡುತ್ತಾ ಸ್ವೀಟಿನ ವಿಷಯ ಮರೆತೇ ಬಿಟ್ಟರು ಪಾಪ!

ತಿಂಗಳಿಗೊಂದು ಸಲ ಡಾ. ಶೈಲಜಾ ಹತ್ತಿರ ಅಪ್ಪ ಕರ್‍ಕೊಂಡು ಹೋಗ್ತಾ ಇದ್ರು.  ಅವರು ಚೆಕ್‌ಅಪ್ ಮಾಡಿ ಬರೆದುಕೊಡುವ ಎಲ್ಲಾ ಔಷಧಿ ಮಾತ್ರೆಗಳನ್ನೂ ಅಪ್ಪ ತಂದು ಕೊಡ್ತಾ ಇದ್ರು.  ನೀನು ಚೌಕಾಸಿ ಮಾಡ್ತಾ, ಇಷ್ಟೊಂದು ಯಾಕೆ ತಂದ್ರಿ, ಅಷ್ಟೊಂದು ಯಾಕೆ ತಂದ್ರಿ, ಎರಡೆರಡು ತಂದಿದ್ರೆ ಸಾಲ್ತಿರಲಿಲ್ಲವಾ ಅಂತೆಲ್ಲಾ ಜಗಳ ಮಾಡ್ತಾ ಇದ್ದೆ.  ಅಪ್ಪ ಆಗಿದ್ದಕ್ಕೆ ಪಾಪ ಸುಮ್ಮನೇ ಇರೋರು. ನಾನಾಗಿದ್ದಿದ್ದರೆ...

ಆದ್ರೂ ಒಂದೊಂದು ಸಲ ರಾತ್ರೆ ಹನ್ನೊಂದೂವರೆ ಹನ್ನೆರಡು ಗಂಟೆಗೆ ಆ ಮಾತ್ರೆ ತಂದು ಕೊಟ್ಟಿಲ್ಲಾ, ಈ ಮಾತ್ರೆ ತಂದು ಕೊಟ್ಟಿಲ್ಲಾ ಅಂತ ಜಗಳ ಮಾಡ್ತಿದ್ದೆ.  `ಮಾತ್ರೆ ಖಾಲಿ ಆಗಿದೆ ಅಂತ ಮೊದಲೇ ಹೇಳಬಾರದಾ, ನನಗೇನು ಕನಸು ಬಿದ್ದಿರುತ್ತಾ.  ಇಷ್ಟೊತ್ತಿಗೆ ಎಲ್ಲಾ ಅಂಗಡೀನೂ ಬಾಗಿಲು ಹಾಕಿರ್‍ತಾವೆ ಗೊತ್ತಾ...' ಅಂತ ರೇಗೋರು.  ಅದೇ ಅವರ ಜೋರು ಮಾತು. ನೀನು ಅದನ್ನೇ ದೊಡ್ಡದು ಮಾಡಿ ಅಜ್ಜಿಗೆ ಫೋನ್ ಮಾಡಿ ಹೀಗೀಗೆಲ್ಲಾ ಬೈತಾರೆ ಅಂತ ಕಂಪ್ಲೆಂಟ್ ಮಾಡ್ತಾ ಇದ್ದೆ.  ಅಜ್ಜಿನೂ ನಿನ್ನ ತಾಳಕ್ಕೆ ತಕ್ಕಂತೇ ಕುಣೀತಾ ಇದ್ರೂ. ಆವಾಗ ಅಪ್ಪ ಯಾಕೆ ಸುಮ್ಮನೇ ಇರ್‍ತಿದ್ದರೋ -ನಿನ್ನ ಹೊಟ್ಟೆ ಒಳಗೆ ಇದ್ದಿದ್ರಿಂದ- ನನಗಂತೂ ಗೊತ್ತಾಗ್ತಾ ಇರ್‍ಲಿಲ್ಲ.

ಮೂರನೇ ತಿಂಗಳು ಕಳೀತಿದ್ದಂಗೆ ನೀನು ಡಾ. ಶೈಲಜಾ ಅವರು ಸ್ಕ್ಯಾನಿಂಗ್ ಮಾಡುವಾಗ `ಡಾಕ್ಟ್ರೇ, ಮಗು ಹೆಣ್ಣೋ ಗಂಡೋ?' ಅಂತ ನೀನು ಕೇಳಿದ್ದಕ್ಕೆ ಡಾಕ್ಟರ್ರು ನಿನಗೆ ಬೈದಿದ್ದರು: `ನಾವು ಸ್ಕ್ಯಾನಿಂಗ್ ಮಾಡೋದು, ಮಗು ಆರೋಗ್ಯವಾಗಿದೆಯೋ ಇಲ್ಲವೋ, ಅಂಗವಿಕಲ ಗಿಂಗವಿಕಲ ಏನಾದರೂ ಆಗಿದೆಯೋ ಇಲ್ಲವೋ ಇಂತ ತಿಳ್ಕೊಳಕ್ಕೇ ಹೊರತು, ಗಂಡೋ ಹೆಣ್ಣೋ ಅಂತ ನೋಡೋಕ್ಕಲ್ಲ...' ಅಂತ.

`ಇಲ್ಲಾ ಡಾಕ್ಟ್ರೇ, ನನಗೆ ಹೆಣ್ಣು ಮಗು ಅಂದರೆ ತುಂಬಾ ಇಷ್ಟ... ಅವಳಿಗೆ ಎಷ್ಟೊಂದು ರೀತೀಲಿ ತಲೆ ಬಾಚಬಹುದು, ಜಡೆ ಹಾಕಬಹುದು, ಎಷ್ಟೊಂದು ರೀತಿಯ ಬಟ್ಟೆ ಹಾಕಿ ನಲಿಯಬಹುದು.  ಆದರೆ ಗಂಡು ಮಗುವಿಗೆ ಅದೇ ಶರ್ಟು, ಅದೇ ಪ್ಯಾಂಟು ಇಲ್ಲ ಚೆಡ್ಡಿ. ಅಷ್ಟಕ್ಕೂ ಹೆಣ್ಣು ಮಕ್ಕಳೇ ತಂದೆ ತಾಯಿ ಅಂತ ನೋಡಿಕೊಳ್ಳೋದು.  ಗಂಡು ಮಕ್ಕಳಾದರೆ ಯಾವುದಾದರೂ ಹುಡುಗಿಯ ಬೆನ್ನು ಮೂಸಿಕೊಂಡು ಹೋಗಿಬಿಡ್ತಾರೆ, ಇಲ್ಲ ಮಗ್ಗುಲಿಗೆ ಹೆಂಡತಿ ಬರುತ್ತಿದ್ದಂತೆಯೇ ಎಲ್ಲರನ್ನು ಮರೆತುಬಿಡ್ತಾರೆ... ಯಾಕೆ ಮೊದಲನೇ ಮಗಳು ಹುಟ್ಟಿದಾಗಲೂ ನನಗೆ ಹೆಣ್ಣು ಮಗೂನೇ ಬೇಕು ಅಂತ ನಿಮ್ಮ ಹತ್ರಾನೇ ಹೇಳಿರಲಿಲ್ಲವಾ ಡಾಕ್ಟ್ರೇ... ನೀವೇ ಅವಳ ಹೆರಿಗೆ ಮಾಡಿಸಿದಾಗ ಸ್ವೀಟ್ ಹಂಚಿರಲಿಲ್ಲವಾ...' ಅಂತ ನಯವಾಗಿ ನೀನು ಅಂದಿದ್ದನ್ನು ಅವರು ನಂಬಿದರು.

ಆದರೂ, `ಅದೆಲ್ಲಾ ಈಗಲೇ ಗೊತ್ತಾಗಲ್ಲಮ್ಮ. ಕನಿಷ್ಟ ನಾಲ್ಕು ತಿಂಗಳಾದರೂ ಆಗಬೇಕು...' ಅಂದಿದ್ದರು.  `ಸರಿ ಡಾಕ್ಟ್ರೇ. ಆವಾಗ ಇನ್ನೊಂದು ಸಲ ಬರ್‍ತೀನಿ' ಅಂತ ನೀನು ಅಂದದ್ದಕ್ಕೆ, `ಸುಮ್ಮನೇ ಹಣ ಪೋಲಾಗುತ್ತೆ.  ಮತ್ತೆ ಬರುವ ಅಗತ್ಯ ಇಲ್ಲ' ಅಂದಿದ್ದರು.  `ದುಡ್ಡಿನ ಪ್ರಶ್ನೆ ಅಲ್ಲಾ ಡಾಕ್ಟ್ರೇ, ಹಾಗೇ ಸುಮ್ಮನೇ... ಕ್ಯೂರಿಯಾಸಿಟೀಗೆ...' ಅಂತಂದು ನೀನು ಮನೆಗೆ ಬಂದಿದ್ದೆ.

ಅಪ್ಪ ಇದ್ದವರು, ತಿಂಗಳೆರಡು ತಿಂಗಳ ಹಿಂದೆ ಸತ್ತ ಅವರ ಅಮ್ಮನನ್ನು ನೆನೆಸಿಕೊಂಡು, `ಈ ಸಲ ಅಮ್ಮನೇ ಮತ್ತೆ ಹುಟ್ಟಿ ಬರುತ್ತಾಳೆ, ನೋಡುತ್ತಿರು...' ಅಂದಿದ್ದರು. ನಿನ್ನ ಹೊಟ್ಟೆಯ ಮೇಲೆ ತಲೆಯಿಟ್ಟು, `ಅಮ್ಮ ಹೀಗೆಯೇ ನನ್ನ ಕೆನ್ನೆಗೆ ಹೊಡೆಯುತ್ತಿದ್ದುದು...' ಎಂದು ನನ್ನ ಕಾಲು ಬಡಿತವನ್ನು ಎಂಜಾಯ್ ಮಾಡುತ್ತಿದ್ದರು. ಆಗಲೂ ನಾನು ನಿನ್ನೊಳಗೇ ಇದ್ದರೂ, ನಿನ್ನ ಒಳಮರ್ಮ ನನಗೆ ಅರ್ಥವಾಗಿರಲಿಲ್ಲ.

ನಾಲ್ಕು ನಾಲ್ಕೂವರೆ ತಿಂಗಳಿಗೆ ಪುನಃ ಡಾಕ್ಟರರ ಬಳಿ ಬಂದು ಸ್ಕ್ಯಾನಿಂಗ್ ಮಾಡಿಸಿಕೊಂಡೆಯಲ್ಲಾ.  ಈ ಸಲ ನೀನೊಬ್ಬಳೇ ಬಂದಿದ್ದೆ.  ಚೆನ್ನಾಗಿ ಪರಿಚಯವಿದ್ದ ಡಾಕ್ಟರರು ಎರಡು ಮೂರು ಸಾರಿ ಚೆಕ್ ಮಾಡಿ `ಹೆಣ್ಣು ಮಗು' ಎಂದು ಸಹಜವಾಗಿ ಹೇಳಿ ಬೇರೆ ಕೆಲಸಕ್ಕೆ ಹೊರಟು ಹೋದರು.

ನೀನು ಪ್ರಪಂಚವೇ ತಲೆಯ ಮೇಲೆ ಬಿದ್ದ ಹಾಗೆ, ಡಾಕ್ಟರರ ಬಳಿ ಏನು ಮಾತಾಡಬೇಕೆಂದು ತೋಚದೇ ಸುಮ್ಮನೇ ಎದ್ದು ಮನೆಗೆ ಬಂದಿದ್ದೆ.  ಬಂದವಳು ಸುಮಾರು ಎರಡು ಗಂಟೆ ಕಾಲ ಅಜ್ಜಿ ಜೊತೆ ಫೋನಿನಲ್ಲಿ ಮಾತಾಡಿದ್ದೆ.  ಸಾಯಂಕಾಲವೇ ಅಜ್ಜಿ ಬಂದಿಳಿದರು.  ನೀನು ಮತ್ತೆ ಡಾಕ್ಟರರ ಹತ್ತಿರ ಕೇಳಲು ಹೋದರೆ ಬಯ್ಯುತ್ತಾರೆಂದು ಅಜ್ಜಿಯನ್ನು ಕಳಿಸಿದೆ.  ಅವರಿಗೆ, `ಈಗಾಗಲೇ ನಮಗೆ ಒಂದು ಹೆಣ್ಣು ಮಗು ಇದೆ, ಇನ್ನೊಂದು ಹೆಣ್ಣಾದರೆ ಹೇಗೆ ಅಂತ ಕೇಳು' ಅಂತ ಒತ್ತಿ ಒತ್ತಿ ಹೇಳುತ್ತಿದ್ದೆ.  ನನಗೆ ಆತಂಕ ಶುರುವಾಯಿತು.

ವಾಪಸ್ಸು ಬಂದ ಅಜ್ಜಿ ಏನೆಲ್ಲಾ ಹೇಳಿದರೂ ಡಾಕ್ಟರರು ಒಪ್ಪದೇ ಬೈದು ಕಳಿಸಿದರೆಂದರು.  ಎಷ್ಟೊಂದು ಒಳ್ಳೆಯವರು ಆ ಡಾಕ್ಟರರು!  ಅಪ್ಪ ರಾತ್ರೆ ಆಫೀಸಿನಿಂದ ಮನೆಗೆ ಬರುತ್ತಿದ್ದಂತೆಯೇ, ಬೆಳಗ್ಗೆಯೇ ಬೆಂಗಳೂರಿಗೆ ಕರೆದುಕೊಂಡು ಹೋಗಲು ಬಂದಿರುವುದಾಗಿ ಅಜ್ಜಿಯಿಂದ ಹೇಳಿಸಿದೆ.  ಗರ್ಭಿಣಿಯ ಆಸೆಯೆಂದು ಬೇಡವೆನ್ನದೇ, ಸ್ವತಃ ಬಂದು ಬೆಳಗ್ಗಿನ ನಾನ್ ಸ್ಟಾಪ್ ಬಸ್ಸಿಗೆ ಕೂರಿಸಿ ಕಳಿಸಿಕೊಟ್ಟರು.

ಅಜ್ಜಿಯ ಜೊತೆಗೆ ಮಾಮ, ಅತ್ತೆ, ತಾತ ಎಲ್ಲರನ್ನೂ ಕಾರಿನಲ್ಲಿ ಕರಕೊಂಡು ಯಾವುದೋ ಆಸ್ಪತ್ರೆಗೆ ಹೋದೆ.  ಹೋಗುವಾಗ ದಾರಿಯುದ್ದಕ್ಕೂ ನೀನು ಯಾರು ಯಾರದೋ ಅಭಿಪ್ರಾಯ ಕೇಳಿದುದಾಗಿಯೂ, ಅವರೆಲ್ಲರೂ ತೆಗೆಸುವುದು ಸೂಕ್ತವೆಂದು ಹೇಳಿದ್ದಾರೆಂದು ನೀನು ಹೇಳುತ್ತಿದ್ದೆ.  ಮೊದಮೊದಲು ತೆಗೆಸುವುದು ಎಂದರೆ ಏನು ಎಂಬುದು ನನಗೆ ಗೊತ್ತಾಗುತ್ತಿರಲಿಲ್ಲ.  ಆದರೆ ಯಾವಾಗ ನೀನು ಎರಡು ಮೂರು ಆಸ್ಪತ್ರೆಯ ಇಬ್ಬರು ಮೂವರು ಡಾಕ್ಟರರ ಜತೆ ಮಾತನಾಡಿದಾಗಲೂ ಅವರೆಲ್ಲರೂ ಡಾ.ಶೈಲಜಾ ಹೇಳಿದ್ದನ್ನೇ ಹೇಳಿದಾಗ, ಒಂದೊಂದೇ ಸ್ಪಷ್ಟವಾಗಲಾರಂಭಿಸಿತು.

ಕೊನೆಗೊಬ್ಬರು ಡಾಕ್ಟರರಿಗೆ, `ಡಾಕ್ಟರ್ರೇ, ನನಗೆ ಹುಟ್ಟುತ್ತಿರುವ ಮಗು ಅಂಗವಿಕಲವಾಗಿದೆಯಂತೆ. ದಯವಿಟ್ಟು ಅಬಾರ್ಷನ್ ಮಾಡಿ ತೆಗೆದುಬಿಡಿ...' ಎಂದು ನೀನು ಅಳಲು ಶುರು ಮಾಡಿದಾಗ, ಅವರು ಸ್ಕ್ಯಾನಿಂಗ್ ರಿಪೋರ್ಟ್ ಕೇಳಿದರು.  ಆಗ ನೀನು ಹೀಗೆ ಬೇರೆ ಊರಿನಿಂದ ಬಂದಿರುವುದಾಗಿಯೂ, ಬರುವ ಅವಸರದಲ್ಲಿ ರಿಪೋರ್ಟನ್ನು ಮರೆತು ಬಂದಿರುವುದಾಗಿಯೂ ಹೇಳಿದೆ.  ಮತ್ತೊಮ್ಮೆ ಸ್ಕ್ಯಾನಿಂಗ್ ಮಾಡುವುದಾಗಿ ಅವರು ಹೇಳಿದಾಗ ಅಷ್ಟೊಂದು ದುಡ್ಡು ತಂದಿಲ್ಲವೆಂತಲೂ, ಈಗಾಗಲೇ ಐದು ತಿಂಗಳಾಗಿರುವುದರಿಂದ ಇನ್ನೂ ತಡವಾದರೆ, ನನ್ನ ಪ್ರಾಣಕ್ಕೇ ಅಪಾಯವಿದೆಯೆಂದು ನಮ್ಮೂರಿನ ಡಾಕ್ಟರರು ಹೇಳಿದುದರಿಂದ ಭಯಪಟ್ಟು ಎಲ್ಲವನ್ನೂ ಬಿಟ್ಟು ಓಡಿ ಬಂದಿರುವುದಾಗಿ ನೀನು ಹೇಳಿದ್ದನ್ನು ಅವರು ನಂಬಿದರು.  ಡಾ.ಶೈಲಜಾ ಅವರು ನಿಮ್ಮ ಬಳಿ ಹೋದರೆ ಮಾತ್ರ ಸುರಕ್ಷಿತವಾಗಿ ತೆಗೆಯುತ್ತಾರೆಂದು ಹೇಳಿದುದರಿಂದ ನಿಮ್ಮನ್ನೇ ಹುಡುಕಿಕೊಂಡು ಬಂದುದಾಗಿ ಹೇಳಿದ್ದರಿಂದ ಉಬ್ಬಿಹೋದ ಡಾಕ್ಟರರು ಒಪ್ಪಿ ಅಡ್ಮಿಟ್ ಮಾಡಿಕೊಂಡುಬಿಟ್ಟರು...

ಈಗಲೇ ನನಗೆ ನಿಜವಾದ ಪ್ರಾಣ ಸಂಕಟ ಶುರುವಾದದ್ದು...

ಇಲ್ಲಮ್ಮಾ ಇನ್ನೊಂದು ಸಾರಿ ಅಪ್ಪನ ಪರ ವಹಿಸಿಕೊಂಡು ಮಾತಾಡಲ್ಲ. ನೀನು ಹೇಳಿದ ಹಾಗೇ ಕೇಳುತ್ತೇನೆ. ಅಕ್ಕ ಬಿಟ್ಟ ಆಟದ ಸಾಮಾನಲ್ಲೇ ಆಟವಾಡಿಕೊಳ್ಳುತ್ತೇನೆ; ಅವಳು ಬಿಟ್ಟ ಬಟ್ಟೆಗಳನ್ನೇ ಹಾಕಿಕೊಳ್ಳುತ್ತೇನೆ. ಇದೇ ಬೇಕು ಅದೇ ಬೇಕು ಎಂದು ಹಠ ಮಾಡುವುದಿಲ್ಲಮ್ಮಾ. ಬೇಕಾದರೆ ಪ್ರಾಮಿಸ್ ಮಾಡುತ್ತೇನೆ... ನಾನು ಅಕ್ಕನ ಹಾಗೆ ಘಾಟಿಯಾಗುವುದಿಲ್ಲಮ್ಮ.  ಚೆನ್ನಾಗಿ ಓದುತ್ತೇನೆ.  ನೀನು ಏನು ಓದಿಸಿದರೂ ಅಕ್ಕನ ಹಾಗೆ ಎದುರು ಮಾತನಾಡದೇ ಓದುತ್ತೇನೆ.  ಶಾಲೆಗೆ ಡಿಸ್ಟಿಂಗ್ಷನ್ ಬರುತ್ತೇನೆ.  ನನ್ನ ನಂಬು... ಬೇಕಾದರೆ ಕಲ್ಪನಾ ಚಾವ್ಲಾ ಥರಾ, ಸುನೀತಾ ವಿಲಿಯಮ್ಸ್ ಥರಾ ಬಾಹ್ಯಾಕಾಶದಲ್ಲಿ ಹೆಸರು ಮಾಡುತ್ತೇನೆ... ಬೇಕಾದರೆ ಮಾಧುರಿ ತರಾನೋ, ಐಶ್ವರ್ಯ ತರಾನೋ ಸಿನೆಮಾದಲ್ಲೂ ಹೆಸರು ಮಾಡುತ್ತೇನೆ... ವಿಜ್ಞಾನ-ತಂತ್ರಜ್ಞಾನದಲ್ಲಾಗಲೀ, ವೈದ್ಯಕೀಯದಲ್ಲಾಗಲೀ, ಕೊನೆಗೆ ಐ‌ಎ‌ಎಸ್ ಮಾಡಿಯಾದರೂ ನಿನ್ನ, ಅಪ್ಪನ ಹೆಸರುಳಿಸುತ್ತೇನಮ್ಮಾ... ನನ್ನ ನಂಬು... ಪ್ಲೀಸ್...

ಅಷ್ಟರಲ್ಲಿ ಯಾರೋ ನರ್ಸ್ ಬಂದವಳು ಇಂಜೆಕ್ಷನ್ ನೀಡಿದಳು. ಏನೋ ಒಂದು ಥರಾ ಮತ್ತು ಬಂದಂತಾಗಲಾರಂಭಿಸಿತು.  ಅಮ್ಮ, ಅಮ್ಮಾ... ಅಪ್ಪನಿಗಾದರೂ ಒಂದು ಮಾತು ಕೇಳಮ್ಮಾ... ನಾನು ಅಂದರೆ ಅವರಿಗೆ ತುಂಬಾ ಇಷ್ಟ... ನಾನು ಹುಟ್ಟುತಿದೀನಿ ಅಂತ ಕೇಳಿದ ದಿನ ಅವರು ಎಷ್ಟು ಸಂತಸ ಪಟ್ಟಿದ್ದರು... ದಯವಿಟ್ಟು ಒಂದೇ ಒಂದು ಮಾತು ಕೇಳಮ್ಮಾ... ಅಪ್ಪ ಆದರೆ ಖಂಡಿತಾ ನನ್ನನ್ನು ಸಾಯಿಸಲು ಒಪ್ಪುವುದಿಲ್ಲ... ಒಂದೇ ಒಂದು ಮಾತು ಕೇಳಮ್ಮಾ ಪ್ಲೀಸ್...

ನಾನು ಹೇಳೋದು ನಿನಗೆ ಕೇಳುಸ್ತಾ ಇಲ್ವಾಮ್ಮ?... ಅಯ್ಯೋ ನಾನು ಏನು ಮಾಡಲೀ... ಅಮ್ಮಾ ನೋಡಮ್ಮಾ, ನಾನೂ ನಿನ್ನ ಹಾಗೆ ಹೆಣ್ಣಲ್ಲವಾ... ನೋಡು ನನಗೂ ನಿನ್ನ ಹಾಗೆ ಮೃದುವಾದ ಮುಖ ಬೆಳೆದಿದೆ.  ಕೋಮಲವಾದ ಕಣ್ಣು ಬಂದಿದೆ.  ಒಂದು ಇಂಚು ಉದ್ದದ ನಯವಾದ ಕೂದಲೂ ಬಂದಿದೆ. ನೋಡು...  ನಿನ್ನದೇ ರಕ್ತ ನನ್ನ ಮೈಯ್ಯಲ್ಲೂ ಹರಿಯುತ್ತಿದೆ.  ನಿನ್ನದೇ ಮಾಂಸ ನನ್ನ ಮೈಯ್ಯಲ್ಲೂ ಬೆಳೆಯುತ್ತಿದೆ.  ನನ್ನನ್ನು ನೀನು ಕೊಂದರೆ ನಿನ್ನನ್ನೇ ನೀನು ಕೊಂದುಕೊಂಡಂತೆ...  ನೀನೇ ಸೃಷ್ಟಿಸಿದ ನನ್ನನ್ನು ಕೊಲ್ಲಲು ನಿನಗೆ ಮನಸಾದರೂ ಹೇಗೆ ಬರುತ್ತದಮ್ಮಾ...

ಅಮ್ಮಾ ಪ್ಲೀಸ್, ಅಪ್ಪನಿಗೆ ಒಂದೇ ಒಂದು ಮಾತು ಕೇಳಮ್ಮಾ... ಅಪ್ಪ `ಎಸ್' ಅಂದರೆ ನಿಮ್ಮಿಷ್ಟ... ನಾನು ಮತ್ತೆ ಕೇಳುವುದಿಲ್ಲ.  ಬೇಕಾದರೆ ನನ್ನ ಅರೆ ಬೆಳೆದ ಅಂಗಾಂಗಗಳನ್ನು ಕೊಯ್ದು ಅಂಗಳಕ್ಕೆ ಬಿಸಾಡಿದರೂ ಸರಿ, ನನ್ನ ಕತ್ತಿಗೆ ಇಕ್ಕಳ ಹಾಕಿ ನಿನ್ನ ಹೊಟ್ಟೆಯಿಂದ ಹೊರಗೆಳೆದು ನಾಯಿ ನರಿಗಳಿಗೆ ಎಸೆದರೂ ಸೈ. ನಾನು ಮಾತಾಡುವುದಿಲ್ಲ... ದಯವಿಟ್ಟು ಅಪ್ಪನಿಗೆ ಒಂದೇ ಒಂದು ಸಾರಿ ಫೋನ್ ಮಾಡಮ್ಮಾ...

ಸದ್ಯ. ನನ್ನ ಮಾತು ಅಮ್ಮನಿಗೆ ಕೇಳಿಸಿದಂತಿದೆ... ಅಪ್ಪನ ಮೊಬೈಲಿಗೆ ಫೋನ್ ಮಾಡಲು ಮಾಮನಿಗೆ ಹೇಳಿದಳು.  ಅಪ್ಪ ಮೊದಮೊದಲು ರೇಗಾಡಿದರು. ಇಂಜೆಕ್ಷನ್ನಿನ ಮತ್ತಿನಿಂದಾಗಿ ಅವರು ಏನೇನು ಹೇಳಿದರೆಂದು ನನಗೆ ಸ್ಪಷ್ಟವಾಗಿ ಕೇಳಿಸುತ್ತಿಲ್ಲ. ಆದರೂ ದೂರದಲ್ಲಿರುವ ಅವರು ಈಗಿಂದೀಗಲೇ ಬಂದು ನನ್ನನ್ನು ರಕ್ಷಿಸುವ ಸಾಧ್ಯತೆ ಬಹಳ ಕಡಿಮೆ.  ಎಂದೇ ನನ್ನನ್ನು ಬಹುಪಾಲು ಕೊಂದೇ ತೀರುವರೆಂದು ನಿರ್ಧಾರ ಮಾಡಿದೆ.  ಆದರೂ ಕೊನೆಯ ಸಲ ಅಪ್ಪನೊಂದಿಗೆ ನಾನಾದರೂ ಮಾತಾಡಿ, ಹೋಗಿಬರುವೆನೆಂದು ವಿದಾಯ ಹೇಳಬೇಕೆಂದುಕೊಂಡೆ... ಆದರೆ ನನಗೆ ಮಾತಾದರೂ ಹೇಗೆ ಬಂದೀತು;  ನನ್ನ ಅಳಲು ಅವರಿಗಾದರೂ ಹೇಗೆ ಕೇಳಿಸೀತು?  ಅಷ್ಟರಲ್ಲಿ ಬಂದ ಡಾಕ್ಟರರು, ಕನ್ಸೆಂಟ್ ಪತ್ರಕ್ಕೆ ಅಪ್ಪನ ಸಹಿ ಬೇಕೆಂದರು.  ಸದ್ಯ ಬಚಾವಾದೆ.  ಅಪ್ಪ ಹತ್ತಿರದಲ್ಲಿಲ್ಲ.  ಅವರ ಸಹಿ ಇಲ್ಲದೇ ನನ್ನನ್ನು ಕೊಲ್ಲುವುದಿಲ್ಲವಂತೆ! ಓ ಡಾಕ್ಟರರೇ, ನೀವೆಷ್ಟು ಒಳ್ಳೆಯವರು...

ತಾತ ಬಂದವರು, `ಅವರ ಯಜಮಾನರು ಕೆಲಸದ ನಿಮಿತ್ತ ವಿದೇಶಕ್ಕೆ ಹೋಗಿದ್ದಾರೆ.  ಬರುವುದು ಇನ್ನೂ ಎರಡು ಮೂರು ತಿಂಗಳಾಗಬಹುದು.  ಆಕೆಯ ತಂದೆ, ಕೇರ್ ಟೇಕರ್ ನಾನಿದ್ದೇನೆ.  ಕೊಡಿ, ನಾನು ಸಹಿ ಮಾಡುತ್ತೇನೆ...' ಎಂದು ಸಹಿ ಮಾಡಿಯೇ ಬಿಟ್ಟರು.

ಅಪ್ಪಾ, ಅಪ್ಪಾ... ಕಿರುಚಿಕೊಂಡೆ. ನನ್ನ ಕೂಗು ಅಮ್ಮನ ಹೊಟ್ಟೆಯ ಚರ್ಮ ದಾಟಿ ಹೊರಹೋಗಲೇ ಇಲ್ಲ...  ಅಷ್ಟರಲ್ಲಿ ಮೊಬೈಲ್ ರಿಂಗಾದ ಸದ್ದು. ಅಪ್ಪನೇ ತಿರುಗಿ ಫೋನ್ ಮಾಡಿದ್ದರು.  ಅಮ್ಮ ಏನೇನೋ ಕನ್ವಿನ್ಸ್ ಮಾಡುತ್ತಿದ್ದಳು.  ಎರಡೆರಡು ಹೆಣ್ಣು ಮಕ್ಕಳೇಕೆ ಬೇಕು, ಗಂಡಾಗಿದ್ದರೆ ಇರಲಿ ಅಂತ ಬಯಸಿದ್ದು ನಿಜ.  ಹಾಗಂತ ಮನೆ ತುಂಬಾ ಹೆಣ್ಣು ಮಕ್ಕಳನ್ನು ಇಟ್ಟುಕೊಳ್ಳಲು ಸಾಧ್ಯವಾ?... ಅಂತ ಅಮ್ಮ ರೇಗಾಡಿದಳು... ಅಪ್ಪ, ರೋಸಿಹೋಗಿ, `ನಿನ್ನಿಷ್ಟ ಬಂದಂತೆ ಮಾಡಿಕೋ...' ಎಂದು ಫೋನನ್ನು ಕುಕ್ಕಿದರು.

ನಾನು, `ಅಪ್ಪಾ, ನೀನೂ...' ಎಂದಂದೆನಾದರೂ ಅದು ಅವರಿಗೆ ಕೇಳಿಸಲೇ ಇಲ್ಲ.        

                *****

ಕೇಳಿರಣ್ಣ ಕೇಳಿರಿ

- ಡಾ || ರಾಜಪ್ಪ ದಳವಾಯಿ

ಕೇಳಿರಣ್ಣ ಕೇಳಿರಿ ದೀನರ ವ್ಯಥೆಯ
ನೋಡಿರಣ್ಣ ನೋಡಿರಿ ಹೀನರ ಕಥೆಯ ||

ಅಂತ್ಯಕಾಲದ ದೀಪ ಜನರಲ್ಲೆಜುಕೇಷನ್ನು
ಎಂಥ ದುಸ್ಥಿತಿ ಗ್ಯಾಟಿನಿಂದಲ್ಲದಿನ್ನೇನು
ತಲೆ ಕತ್ತರಿಸಿ ಪಾದಕೆ ನೀರೆರದರೇನು
ಹೈಯರೆಜುಕೇಷನ್ನಿನ ಜೀವ ಉಳಿದೀತೇನು ||

ಡಾಟುಕಾಮಿನಿಂದ ಬದುಕೆಲ್ಲ ಡಾಟು ಡಾಟು
ಸಾಪ್ಟುವೇರೆ ಸುತ್ತ ಉಳಿದದ್ದೆಲ್ಲ ವಾಟು ವಾಟು
ಆಗುತೈತೆ ದೇಶವೆಲ್ಲ ಪುಡಿ ಪುಡಿ ಅಮೇರಿಕ
ಯಾರಲ್ಲಿ ಕೇಳಲಿ ನಮ್ಮ ಸುಸ್ಥಿತಿಗೆ ಬೇಡಿಕೆ ||

ಬಡವರ್‍ಯಾರೂ ಓದುವಂತಿಲ್ಲ ಪೀಜು ಪಾಜು
ಪ್ರೊಪೆಷನಲ್ ಕೋರ್ಸೆ ಫಸ್ಟು ಆಜು ಬಾಜು
ಆಯಿತಲ್ಲಪ್ಪೊ ಶಿಕ್ಷಣವೂ ಲೊಟ್ಟೊ ಜೂಜು
ಖಾಸಗಿಯವರ ಮೆಣಸರೆತ ಮೋಜುಗೋಜು ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಕಾವ್ಯವೆಂದರೆ

- ಗಿರಿಜಾಪತಿ ಎಂ. ಎನ್

ಏನೆನ್ನಲಿ ಏನೆನ್ನಲಿ ಎನ್ನ
ಮನದಮನ್ವಂತರದ ಧಾರೆಗಿನ್ನು ನಾನು
ಬರಿದೆ ಬರೆವರ ಪದದಿ
ಕಟ್ಟುವುದೆಂತೀ ಬುದುಕಿನಕ್ಕರವ ನಾನು-ನೀನು ||

ಬರೆದುದೆ ಬದುಕಲ್ಲ
ಬದುಕಿದ್ದು ತಾ ನಿಲುಕಲ್ಲ.
ಕಾವ್ಯವೆಂದರೆ ಅದುವೆ
ಜನನಮರಣದಾಚೆ ಈಚೆ ಬಾಳು ||

ಹೇಳುವರು-ಹೇಳಿದ್ದು,
ಕೇಳುವರು-ಕೇಳಿದ್ದು,
ಉಂಡುಂಡು ಮರೆತು ಮಲೆಯುತಲಿರಲು,
ಸಂವಾದವೇತರದು ಶೂನ್ಯದಲ್ಲಿ. ||

ವೇಷಿಗರ ಬಿನ್ನಾಣ,
ಮುಗಿಲಗಲ ಕುಣಿತದಲಿ,
ಮಣ್ಣರಂಗದ ಪಾಡು,
ಪಾಡಾಗದ ಚರಮಗೀತೆ. ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಒಂದು ಹೆಣಕೆ ಎರಡು ಹೆಣ !

-ಶಿಶುನಾಳ ಶರೀಫ್

ಒಂದು ಹೆಣಕೆ ಎರಡು ಹೆಣವು ದಣಿವುದ್ಯಾತಕೆ
ನಾಗಲಿಂಗಯೋಗಿ ತಾನು ತಿರುಗುವುದ್ಯಾತಕೆ     ||ಪ||

ದುರಿತಭವದ ಯೋಗದಿಂದ ವಾದವ್ಯಾತಕೆ
ವಾದದಿಂದ ಸಿದ್ದಯೋಗ ಮಾಡುವುದ್ಯಾತಕೆ      ||೧||

ನಾಗಲಿಂಗಯೋಗಿ ತಾನು ತಿರುಗುವುದ್ಯಾತಕೆ
ಬಗಳಾಮುಖಿಯ ಮಗನಕೂಡ ರಗಳಿಯಾತಕೆ   ||೨||

ಹಸಿವು ತೃಷಿಯಗಳನು ಬಯಸುದ್ಯಾತಕೆ
ಶಿಶುನಾಳಧೀಶನ ಮರಿತು ಕುಸಿಯುದ್ಯಾತಕೆ   ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಆಮ್ಮೆ

- ಮುದ್ದು ಮೂಡುಬೆಳ್ಳೆ

ತುಂಡು ಕಂಡಿದ ಇಡೆಟ್ ಗಾಳಿ ಜೋರ್‌ಡ್ ನೂರೊಂದು ಉಲಯಿ ಬನ್ನಗ ಒರ ಕುಲ್ಲುದಿನಲ್ತ್‌ಡ್ಡ್ ಲಕ್ಕ್‌ದ್ ಉದ್ದೊಗ್ ದಿಟ್ಟಿಪಾರಾದ್ ಪಿದಾಯಿ ಪಜ್ಜೆದೀಯೆ.  ಮಲ್ಲ ಉಸುಲು ಉಂತುಂತುದ್ ಪಿದಾಯಿ ಬಪ್ಯುಂಡ್.  ಸಾದಿ ಅಸ್ಪಷ್ಟಾಪುಂಡು.  ಕಣ್ಣ್‌ಗ್ ಪುಗೆ ದಿಂಜಿನಂಚ ಆಪುಂಡು.  ಕತ್ತಲೆ!..... ಎನ್ನ ಸುತ್ತಲಾ ಕತ್ತಲೆ ದಿಂಜಿದ್ ಬತ್ತಿನಂಚ.... ಜೂವ ನಡು ಗೂಂಡು.

ಊರುನ ದಂಟೆ ಓಲು ಬೂರುಂದುಂಡಾ ದಾನಿಯಾ, ತೋಜುಜಿ..... ನೆತ್ತೆರ್‍ ಕುಂದಿನ ಕೈ ಕಾರ್‍ ಗಾಳಿದ ರಬಸೊಗು ಬೂರುದಲ್ಕ ಬಗ್ಗೂಂಡು..... ಕಣ್ಣ್‌ಗ್ ಕತ್ತಲೆ ದಿಂಜಿಲೆಕ್ಕ ಆಪುಂಡು.

`ಈ ಲೋಕ ಎನನ್ ದಾಯೆಗ್ ಒಂಟಿಯಾದ್ ಮಲ್ಪುಂಡು?'  ಪೋಡಿಗೆ ಆದ್ ಆದಾರೊಗ್‌ಂದ್ ಬೊಬ್ಬೆ ಪಾಡುವೆ..... ತಿರ್ತ್‌‌ದ ಪ್ರಪಾತದ ಇಡೆಡ್ದ್ ಎನ್ನನೇ ಮಾರ್ದನಿ ಬತ್ತ್‌ದ್ ಕೆಬಿಕ್ ತಟ್ಟುಂಡು.  ನೆಲಕ್ಕ್ ಚೆರಿಕೊರ್ಪ......

ಅಂದ್ ರಾಜಾ, ಒಂಜಿ ಕಾಲೊಡು ಈ ಎನ್ನ ಮಗೆ ಆದ್ ಇತ್ತ.  ಅಪಗ ಲೋಕೊನು ತೆರಿಯಂದಿ ಮುಗ್ಧ ಮನಸ್ಸ್‌ದ ಎಲ್ಯ ರಾಜು..... ಆನಿ ಈ ಎನ್ನಾಯೆ ಆದಿತ್ತ ಮಗ..... ಎನ್ನ ಮೋಕೆದ ಮಗೆ ಆದ್ ಇತ್ತ.  ಆರ್ತಿಡ್ ಎನನ್ "ಅಪ್ಪಾ" ಪಂದ್ ಪಿಂದೊಂದು ಇತ್ತ.  ನಿನನ್ "ಮಗ ಎನ್ನ ಮಗ ರಾಜಾ" ಇಂದ್ ಏತ್ ಸರ್ತಿ ಲೆತ್ತ್‌ಂಡಲಾ ಎಂಕ್ ತೃಪ್ತಿ ಆವೊಂದಿತ್ತಿಜಿ.  ಆಯಿಟ್, ಪಾತೆರೊಗು ನಿಲೆ ಅವಂದಿ ಅವ್ಯಕ್ತ ಸಂತೊಸ್ ಇತ್ತ್ಂಡ್.  ಆನಿದ ಮುಗ್ಧ ಮನಸ್ಸ್‌ದ ಬಾಲೆನೇ ಇನಿರ್ಕಲಾ ಆದಿತುದುವಡ ಈ ಎನ್ನ ಮಗೆ ಆದೇ ಒರಿದುವ.  ಆಂಡ, ಪ್ರಕೃತಿ ಮೋಸ ಮಲ್ತ್‌ಂಡ್-ಯಾನೊಂಜಿ ಆಸೆ ಮಲ್ತ್‌ಂಡ ವಿಧಿ ನನೊಂಜಿ ರೀತಿ ಬಗೆಂಡ್......!

"ಅಮ್ಮೆರೇ", ಎಂಕ್ ಮದಿಮೆ ನಿಶ್ಚಯ ಆತ್ಂಡ್.  ನನ ಪತ್ತ್ ದಿನ ಮಾತ್ರ ಒರಿದ್ಂಡ್.  ಈ ಕಾಗದ ಮುಟ್ಟಿ ಕೂಡ್ಲೆ ಪಿದಾಡ್ದ್ ಬಲ - "ಪನ್ಪಿನ ನಿನ್ನ ಕಾಕಜಿ ತಿಕ್ಕ್ಂಡ್ ರಾಜಾ.  ಕಾಗಜಿ ಈಯೆ ಬರೆ ದುಪ್ಪರೆ ಯಾವು.  ಈ ಕಲ್ತಿನಾಯೆ.  ಬರೆ ಬರೆದ್ ಅಬ್ಬೆಸ ಆತಿನ ನಿನ್ನ ಕೈ ಯಾಂತ್ರಿಕವಾದ್ "ಅಮ್ಮರೇ" ಪಂಡ್‌ದ್ ಎನನ್ ಸಂಬೋದನೆ ಮಲ್ತ್‌ದ್ ಬರೆತ್ಂಡ್.  ಆಂಡ, ನಿಕ್ಕ್ ದೈರ್ಯ ಉಂಡ ರಾಜಾ, ನಿನ್ನ ತಿಗಲೆ ಮುಟ್ಟುದು ತೂಲ..... ಅವುಲು ನಿನ್ನ `ಅಮ್ಮೆ' ಇನ್ಪಿ ನಾಯೆ ನನಲ ಗಟ್ಟಿಯಾದ್ ಕುಲ್ಲುದೆನ?  ಕಂಡಿತ ಇಜ್ಜಿ.  ಆ ಉಡಲ್‌ಡ್ ಎಂಕ್ ಒರಿದಿನ ಸ್ಥಾನದ ಮಾಯ್ತಿ ಎಂಕ್ ಉಂಡು.  ನಿನ್ನ ಕಣ್ಣ್‌ಡ್ ಹುಟ್ಟಾ ಬಿಕಾರಿ ಯಾನ್.  ನಿನ್ನ ಮದಿಮೆಗ್ ಬಿಕ್ಕೆ ನಟ್ಟು ನಾಯೆ ಬತ್ತ್ಂಡ ಆಯಗ್ ವಾತರತ್ತ ಎಕೊಲ್ಮೆ ತಿಕ್ಕು?.....

ಸೂರ್ಯನ ತಾಪೊಗು ಬಲಿಯಾದ್ ಸಗ್ತಿ ಕುಂದ್‌ದ್ ಬೇರ್‌ದ ಬಲ ಕಳೆವೊಂದು, ಇತ್ತೆನಾ ಬೊಕ್ಕನಾ ಪನ್ಪಿನ ಕುಂಬು ಮರ ಬೂತಗಾಲಿನ್ ತಡೆವುಂಡಾ?  ಜೀವತ ಕಾಲೊನು ಪೂರಾ ಕಷ್ಟ ಕಾರ್ಪಣ್ಯ.  ಬೇನೆಡ್ ಕಳೆದ್ ಬೇಸರ್‌ದ್ ಪೋಯಿನ ಎನ್ನ-ಮುಪ್ಪು ಅಡರ್‌ದಿನ ಜೂವೊಗು, ತಿಗಲೆ ಉಡೆದ್ ಪೋಪುನಂಚಿನ ಪಾತೆರೊಳೆನ್ ತಡೆತೊನಿಯೆರೆ ಸಾಧ್ಯ ಇಜ್ಜಿ.

ಮಸ್ತ್ ಕಾಲ ಕರಿಂಡ್.  ಆನಿ, ನಿಕ್ಕಾದ್ ಯಾನ್ ಬತ್ತಿನ ಕಷ್ಟ ನೆನಪುನಗ ಇನಿಕ್‌ಲ ಕಣ್ಣ್‌ಡ್ ನೀರ್‍ ಬರ್ಪುಂಡ್.  ನಿನನ್ ಪೊರ್ಲುಡು ತಾಂಕರೆಗಾದ್, ನಿಕ್ಕ್ ಬರವು ಕಲ್ಪಾವೆರೆಗಾದ್.  ಯಾನ್ ಎಂಚೆಂಚಿ ಕಷ್ಟೊಲಗ್ ಪೂರ ಬೆರಿಕೊರಿಯೆ.  ರಾಜಾ, ಯಾನ್ ಪರಿದ್ ಚಿಂದಿ ಆತಿನ ಅಡ್ಡಕುಂಟು ಕಟೊಂದು ನಿಕ್ಕ್ ಮಲ್ಲಕ್ಲೆ ಜೊಕುಲೆಲಕತ್ತಿನ ಅಂಗಿ ಚಡ್ಡಿಲೆನ್ ಪೊಲ್ಪಾದ್ ಕೊರ್‍ಯೆ.  ಈ ಸಾಲೆಗ್ ಪೋನಗ ನಟ್ಟುನಾಯನ ಮಗೆ ಪನ್ಪಿನ ಪಾತೆರ ನಿಕ್ಕ್ ಬರಾಂದಿಲೆಕ್ಕ ಏತ್ ಪ್ರಯತ್ನ ಮಲ್ಪರೆ ಸಾದ್ಯ ಉಂಡಾ ಆತ್ ಮಲ್ತೆಂ ಯಾನ್‌ಲ ನಿನ್ನ ಬೆರಟ್ಟ್ ಬತ್ತಿನ ರಡ್ಡ್ ಜೋಕುಲು ಬಡವು ಆನಗ ಗಂಜಿದ ತೆಲಿಲಾ ಪರ್‍ದ್ ನಿಕ್ಕ್ ಮಾತ್ರ ಪೊರ್‍ಲುಡು ಬುಳೆವೊಡು ಪಂಡ್‌ದ್ ನಾಲ್ ಪೊರ್ತು ಬಂಜರ ಗಂಜಿ ಪಾಡಿಯೆ.  ಪೇಂಟೆದ ಸಾಲೆಗ್ ಪೋನಗ ನಿಕ್ಕ್ ಬೋಡು-ಬೋಡಾಯಿಲೆಕ್ಕ ಕರ್ಚಿಗ್ ಕಾಸ್ ಕೊರಿಯೆ.  ನಿನ್ನ ನೇಸದ ಕಾಯಿಲೆ ಗುಣ ಅವೆರೆಗ್ ಬೊಡಾದ್ ನಿನನ್ ತುಂಬೊಂದು ಊರೂರುದ ಪಂಡಿತೆ ರ್‍ನಾಕ್ಲೆನ ಕೈತಲ್ಗ್ ತಿರ್‍ಗ್‌ದ್ ಗುನ ಮಲ್ಪಾಯೆ.  ಬಡ ಪತ್ತ್ ನಿನನ್ ಸೋಂಕಂದಿಲೆಕ್ಕ ನಿನನ್ ತಾಂಕಿಯೆ.  ನಿನ ಅಪ್ಪೆ ಜವ್ವನೊಡೇ ತೀರ್‌ಪೊಯಲ್.  ಆಲ್ ಪೋಯಿಬೊಕ್ಕ ನಿಕ್ಕ್ ಅಪ್ಪೆಲಾ - ಅಮ್ಮೆಲಾ ಯಾನೇ ಆದ್ ತಾಂಕಿಯೆ.  ಆಂಡ ಈ ಕೊರಿನ ಪ್ರತಿಪಲ ಉಂದಾ?

ಊರುಡು ನಿನ್ನ ಕಲ್ತ್‌ದ್ ಆನಗ ಕೆಲಸೊಗು ನಿನನ್ ದೂರದ ಉರು ಬೊಂಬಾಯಿಗ್ ಕಡಪುಡಿಯೆ.  ಬೇಲೆಲಾ ತಿಕ್ಕ್ಂಡ್.  ಆ ಸಂತೊಸ್‌ಡ್ ಯಾನ್ ಮರ್‍ಲೆನೇ ಆಯೆ.  "ಎನ್ನ ಮಗಕ್ ಬೊಂಬಾಯಿಡ್ ಕೆಲಸ ತಿಕ್ಕ್ಂಡ್.  ಎನ್ನ ಕಷ್ಟ ದೂರ ಆಂಡ್.  ದೇವೆರ್‍ ಕಣ್ಣ್ ಜತ್ತೆರ್‍" ಪಂಡ್ದ್ ಊರು ನಿಲ್ಕೆ ಪಣ್ಣೊಂದು ಬತ್ತೆ.....

ಇನಿಕ್ ಮೂಜಿ ವರ್ಷೊಡ್ಡು ಪಿರವು..... ನಿನನ್ ತೂವೆರೆಗ್, ನಿರೆಕರೆತ್ತ ಸೆಟ್ರೆನ ಒಟ್ಟುಗು ಈ ಉಪ್ಪುನ ಬೊಂಬಾಯಿಗ್ ಬತ್ತೆ.  ನಿಕ್ಕ್ ನಿನೆಪುಂಡ ರಾಜಾ?  ನಿನ್ನ ಕಾಸ್ಲಾ ದಂತೆ, ಕಾಕಜಿಲಾ ಇಜ್ಜಾಂದೆ ಮಸ್ತ್ ಸಮಯ ಕರಿದಿತ್ತ್ಂಡ್.  ಯಾನ್ ಮೋಕೆಡ್, ಸಾಂಕ್‌ದಿ ಮಗೆ - `ಎನ್ನ ರಾಜೆ, ಎಂಚ ಉಲ್ಲೇನಾ, ಆಯನ್ ತೂವೊಡು - ಇಂದ್ ಆಸೆ ಕಟ್ಟೊಂದು ಕಣ್ಣ್ ಕೆಬಿ ತೆರಿಯಂಚಿನ ಪೇಂಟೆ ಬೊಂಬಾಯಿಗ್ ಬತ್ತೆ.....

ಸುಮಾರ್‍ ವರ್ಸ ಕರಿನೆಡ್ದ್ ಬೊಕ್ಕ ಈತ್ ಅಪ್ರೂಪೊಡು, ಪೊಲುðಕಂಟ್ ಆತಿನ ನಿನನ್ ತೂದು ಸಂತೋಸ್ ತಡೆಯೆರೆ ತೀರಂದೆ "ರಾಜಾ, ಮಗಾ, ಎನ್ನ ಬಾಲೆ ರಾಜಾ.....",  ಇಂದ್‌ದ್ ನಿನನ್ ಆರಾದ್ ಪತ್ತಿಯೆ.

ನಿನ್ನ ಸುತ್ತ ಇತ್ತಿನಕ್ಲು `ಗಲ್ಲ್'ಂದ್ ತೆಲ್ತೆರ್‍.  ಯಾನ್ ಏರ್‍ ಪಂಡ್‌ದ್ ಕೇಂಡಿನಾ ದಾನ್ನ?  ಈ ನಿನ್ನ ಬೊಂಬಾಯಿದ ಭಾಸೆಡ್, ಅಕ್ಲೆಗ್ ದಾದನಾ ಪಂಡ.  ಬೊಕ್ಕ ಎನ್ನಂಚಿ ತೂದು ನಾಸಿಗೆ, ಗರ್ವ, ನಾಲೀಸ್‌ಡ್.

ಈ ಎನ್ನ ಮರ್ಯಾದಿ ದೆಪ್ಪರೆಗ್ ಇಡೆ ಬತ್ತನಾ?  ಈ ಕುರ್ತೆಲ್ ಗಡ್ಡ, ಕಾಡ್‌ದಲೆಕ್ಕ ಉಪ್ಪುನ ಕುಜಲ್, ಕುರೆಪಟ್ಟ್ ಪರಿದಿನ ಕುಂಟು!..... ನಿಕ್ಕ್ ಬೊಂಬಾಯಿಗ್ ಬರಿಯೆರೆ ಏರ್‍ ಪಂಡೆರ್‍?.....

ರಾಜಾ, ಸಂತೋಡ್, ಮೋಕೆಡ್ ಈ ಎನನ್ ಎದ್ಕೊನಂಡ್ ಅಸೆಡ್ ಬತ್ತಿನ ಯಾನ್, ತಿಗಲೆ ದರಿಯುನ ಆ ಪಾತೆರೊನು ಜೂವೊಡು ಉಪ್ಪಮುಟ್ಟ ಎಂಚ ಮದಪೊಡು.....?

ಎನ್ನ ನಿರೆಲ್ ತೊವೆರೆಗ್‌ಲ ನಿಕ್ಕ್ ಅನಿ ಇಷ್ಟ ಇತ್ತ್‌ಜಿ.  ಯಾನ್ ದರಿದ್ರೆ ಆಂಡಲಾ ಎನ್ನ ಸ್ವಾಭಿಮಾನ ಎನನ್ ನಿನ್ನ ಎದುರು ದಿಂಜ ಪೊರ್ತುಉಂತಾಯಿಜಿ.  ಅನಿಯೇ ಬಯ್ಯಡ್ ಯಾನ್ ಊರೂಗು ಪಿರ ಪಿದಾಡಿಯೆ.  "ಅಮ್ಮೆರೆ, ಉಂತುಲೆ" ಪನ್ಪಿನ ಒಂಜಿ ಪಾತೆರಲ ನಿನ್ನ ನಾಲಯಿಡ್ ಬತ್ತ್‌ಜಿ!ಽಽ.....

ಹಳ್ಳಿಗ್ ಪಿರಬತ್ತಿ ಬೊಕ್ಕ ಶೆಟ್ರ್‍ ನನೊಂಜಿ ಒರ್ತಮನ ಪಂಡೆರ್‍.  ನಿನ್ನ ಒಟ್ಟುಗು ಕೆಲಸ ಮಲ್ಪು ನಕುಲು ನಿನಡ ಯಾನ್ ಏರ್‌ಂದ್ ಕೇಂಡಿನಪಗ ಈ ಪಂಡಗೆ, "ಆಯೆ, ಊರ್ದ ಎಂಕ್ಲೆ ಇಲ್ಲದ ಬೇಲೆದಾಯೆ....."

ಆವಡ್, ನಿನ್ನ ಉಡಲ್ಡ್ ಯಾನ್ ಎಂಚ ನಿಲೆ ಆತೆ ಪಂಡ್‌ದ್ ತೆರಿಂಡ್.  ಅಂಚಿನಾಯೆ..... ಇತ್ತೆ ನಿನ್ನ ಮದಿಮೆಗ್ ಯಾನ್ ಬತ್ತ್ಂಡ ಎನನ್ ತರಕೊನುವನಾ?

ನಿಕ್ಕ್ ಮದಿಮೆ ಆಂಡ ಯಾನ್ ದಾಯೆ ಬರೊಡ್?.....  ಈ ಏರಾ ಯಾನ್ ಏರಾ?  ಲೋಕೊಡ್ ಮಾತ ಮದಿಮೆ ಆವನಗ ಯಾನ್ ಪೋವೊಡಾ?  ಯಾನ್ ದೂರ ಉಂತುದು ತೂಪಿನ ಕೈಬಾಯದಾಂತಿನ!  ಪುಟ್ಟಾ ಬಿಕಾರಿ.... ಮಲ್ಲಜನ ಅದುಪ್ಪುನ ನಿಕ್ಕ್‌ಲಾ ದರಿದ್ರೆ ಆಯಿನ ಎಂಕ್‌ಲಾ ವಾ ಸಮ್ಮಂದಲಾ ದಾಂತೆ ಉಪ್ಪನಗ, ಯಾನೆಂಚ ನಿನ್ನ ಅಮ್ಮೆ ಆವೆ?  ಎನ್ನ ಮಗೆ ಏಪನಾ ಸೈದೆ!  ಆಯಗ್ ಬುಡೊಡಯಿನ ಕಣ್ಣನೀರ್‍ ಏಪನೇ ಬುಡುದಾತ್ಂಡ್!ಽಽ.....

ನಿನ್ನ ಮದಿಮೆದ ಕಳಟ್ ನಿಕ್ಕ್ ದಾರೆ ಮಯಿಪು ನಕ್ಲು ವಾ ಸಂತಾಂದಕುಲಾ ಏರ್‍ಲಾ ಉಪ್ಪೆರ್‍.  ಯಾನ್ ಎನ್ನ ಮಗೆಂದ್ ಆಸೆಡ್ ಬತ್ತ್ಂಡ ದೂರ ಉಂತುದ್ ಬಂಜಿಗ್ ಬಿಕ್ಕೆ ಮಾತ್ರ ಎಂಕ್ ತಿಕ್ಕು.

ಬೊಡ್ಚಿ ಯಾನ್ ಬರ್ಪುಜಿ....

ಮದಿಮೆಗಾ, ಮಸಣೊಗಾ ಓಡೆ ಬೋಡಾಂಡಲ ಪೋ.  ಎಂಕ್ ಮೂಲು ನಿತ್ಯದ ಗಂಜಿದ ತೆಲಿ ತಿಕ್ಕು.  ಎನ್ನ ದಿನ ಕರಿಯೊಂದು ಬತ್ತ್ಂಡ್.  ಪುಟ್ಟಾಯಿನ ದೇವೆರ್‍ ಬೇಗ ತರ್‍ಪುಡಾಲೆ ಇಂದ್ ಆರೆನೇ ನಟ್ಟುನು ಯಾನ್.

ಅಲಾಽಽ..... ಕತ್ತಲೆ ಎನ್ನ ಸುತ್ತ ಮುತ್ತೊಂದು ಬತ್ತ್ಂಡ್.  ಯಾನ್ ಒಬ್ಬಂಟಿ..... ಈ ಕತ್ತಲೆಡ್ ಯಾನ್ ಒಂಬ್ಬಟಿ......!

            *****

ಕೀಲಿಕರಣ: ಕಿಶೋರ್‍ ಚಂದ್ರ

ಮ್ಯಾಸ್ಸೆ ಫರ್ಗ್ಯುಸನ್

- ಮಂಜುನಾಥ ವಿ ಎಂ
ಚಿತ್ರ: ರಾಂಗೋಪಾಲ್ ರಾಜಾರಾಮ್











ನೀಲಿಹೂಗಳ ಬುಡ್ಡೆಸೊಪ್ಪನ್ನೋ, ಹೂಳೆತ್ತಿದ ಕೆರೆಮಣ್ಣನ್ನೋ,
ಇಟ್ಟಿಗೆಗಳನ್ನು ತುಂಬಿಕೊಂಡೋ ಆ ಕೆರೆದಡದ ಮೇಲೆ ಸಾಗಿಹೋಗುವ
ಮ್ಯಾಸ್ಸೆ ಫರ್ಗ್ಯುಸನ್ ಟ್ರ್ಯಾಕ್ಟರ್ ಅನ್ನು ಆಗಾಗ ನೋಡುತ್ತಿರುತ್ತೇನೆ.

ಬಟವಾಡೆಯ ವಿಚಾರದಲ್ಲೋ, ಹೆಂಡಗಡಂಗಿನವನ ಜೊತೆ ಕಿರಿಕ್
ಮಾಡಿಕೊಂಡೋ-ಹೀಗೆ ಒಂದಿಲ್ಲೊಂದು ತರಲೆಗಳಲ್ಲಿ
ಸಿಕ್ಕಿಕೊಂಡು ಆ ಟ್ರ್ಯಾಕ್ಟರ್‌ನ ಡ್ರೈವರ್‌ಗಳು ಬದಲಾದರೂ,
ಯಾಕೋ ಗುಟ್ಕಾ ಸವಿಯುವ ಆ ಹೆಣ್ಣು ಮಾತ್ರ ಕದಲಲಾರಳು.

        *****

ನಿನ್ನೊಂದು ನಗೆ

- ಡಾ || ರಾಜಪ್ಪ ದಳವಾಯಿ

ಕ್ಷಮಿಸು ಗೆಳತಿ ನಾನಿಂದು
ಮಾಡಿದವಮಾನವ
ನಿನ್ನೆದುರು ನಾನು ಕ್ಷಣ
ಕ್ಷಣಕೂ ಅಲ್ಲ ಮಾನವ ||

ಅರಿಯದಾದೆ, ನಿನ್ನ ಎಲ್ಲರೆದುರು
ಅಸವಲ್ಲದವಳೆಂದರೂ
ನೀನು ವಹಿಸಿದ ಮೌನವಿಂದು
ಕೊಲ್ಲುತಿದೆ ನಾನೆಂಥವನೆಂದು ||

ನನ್ನ ಕ್ಷಮೆಗೆ ಸೂಚನೆ ನಿನ್ನಿಂದೇಗೆ
ನಿನ್ನ ಸ್ಥಿತಿ ನೆನೆದು ನನ್ನೆದೆ ಬೇಗೆ
ಜ್ವಾಲೆ ಹೊಮ್ಮಿಸುತಿದೆ ಘೋರಾಗಿ
ನಂದಿಸಬಲ್ಲದೆಲ್ಲ ನಿನ್ನೊಂದು ನಗೆ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಚಂದನ ಗೀತ

- ಗಿರಿಜಾಪತಿ ಎಂ. ಎನ್

ಇಳಾ ನಿನ್ನ ಮಹಾ ಕಾವ್ಯಕೆ
ಇದುವೆ ನನ್ನಯ ಪಲ್ಲವಿ
ಬಾನುವಿನ ಪ್ರಣಯ ಪರಿಧಿ
ಕಾಣಬಲ್ಲವನೇ ಭವಿ?||

ನಿನ್ನ ಅವನ ಆಂತರ್ಯದ
ಅರಿವಿನರಿವು ದುಸ್ತರ
ಅಂತರಂಗದಂತರಾಳದಾಳ
ಎನಿಎನಿತೊ ಬಿತ್ತರ||

ಅವನ-ನಿನ್ನ ಮೌನ `ವಿಶ್ವ'
ಜಗದ ಜಗಕೆ ಭಾಷ್ಯಿಕೆ
ಮೌನದಳವಿನ ಸಮಾಧಿಯಲ್ಲಿ
ಸೃಷ್ಟಿ ಸತ್ಯದ ಚಂದ್ರಿಕೆ||

ಹೊನಲ ನಂದನ ಭೂಮಿಕೆಯಲಿ
ಭಾವವಲ್ಲರಿ ಚಂದನ
ಹೊನಲೊನಲಿನ ಕಿರಣಗಳಲಿ
ಅಕ್ಕರದಕ್ಷರಗಳ ಕ್ಷಯ ತೋರಣ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಉತ್ತರಾಧಿಕಾರಿ

- ಅಬ್ಬಾಸ್ ಮೇಲಿನಮನಿ

ಅಮರಪ್ಪನವರು ತಮ್ಮ ಇಡೀ ಆಯುಷ್ಯವನ್ನು ರಾಜಕೀಯದಲ್ಲೇ ಕಳೆದರು.  ಅಧಿಕಾರದ ಸುಖ ಅನುಸರಿಸುವರು.  ಸಾಕಷ್ಟು ಧನ, ಕನಕ, ಸಂಪತ್ತು ವರ್ಧಿಸಿಕೊಂಡರು.  ದೆಹಲಿ, ಬೆಂಗಳೂರು, ಸ್ವಂತ ಊರು ಎಲ್ಲೆಂದರಲ್ಲಿ ಬಂಗ್ಲೆ ಪ್ಲಾಟು ಹೊಂದಿದ್ದರು.

ದೇಶದ ರಾಜಕಾರಣಕ್ಕೆ ಅನಿವಾರ್ಯವೆನ್ನುವಂತಿದ್ದ ಅವರಿಗೆ ಇತ್ತಿತ್ತಲಾಗಿ ಸಕ್ಕೆ ಕಾಯಿಲೆ, ಹೃದಯ ಬೇನೆ, ಬೆನ್ನು ನೋವು, ಮಂಡಿ ಬೇನೆ, ಉಬ್ಬನ, ಗಂಟಲು ಬೇನೆ ಹೀಗೆ ವಿವಿಧ ಕಾಯಿಲೆಗಳು ಒಮ್ಮೆಲೆ ಅಕ್ರಮಿಸಿಕೊಂಡು ಅವರ ಜೀವದ ಸೊಗಸನ್ನೇ ಹಿಂಡಿ ಹಾಕಿದ್ದವು.  ಬೆನ್ನುವ ನೋವು, ಗಂಟಲು ನೋವಿನ ಚಿಕಿತ್ಸೆಗೆಂದು ಅವರು ಸರಕಾರಿ ಖರ್ಚಿನಲ್ಲಿ ವಿದೇಶಕ್ಕೂ ಹೋಗಿ ಬಂದಿದ್ದರು.  ವೈದ್ಯರು ಅವರಿಗೆ ಹಚ್ಚು ಮಾತಾಡದಿರಲು ಎಚ್ಚರಿಸಿದ್ದರು.  ತೆವಲುಗಳಿಂದ ದೂರವಿರಲು, ಆಹಾರದ ಬಗ್ಗೆ ಕಟ್ಟುನಿಟ್ಟು ಪಲಿಸಲು, ಹೇಳಿದ್ದೂ ಅಲ್ಲದೆ ಆವೇಶಕ್ಕೆ ಅವಕಾಶ ನೀಡಬಾರದೆಂದು ಸ್ಪಷ್ಟವಾಗಿ ಹೇಳಿದ್ದರು.  ಅಮರಪ್ಪನವರು ತಮ್ಮ ಹತವೈಭವವನ್ನು ನೆನಪು ಮಾಡಿಕೊಳ್ಳುತ್ತ ಇರಬೇಕಾದ ಪರಿಸ್ಥಿತಿ ಒದಗಿತು.

ಕೊನೆಗೂ ತಮ್ಮ ಅಭಿಮಾನಿಗಳ ಸಮಾವೇಶವನ್ನು ನಡೆಸಿ ತಾವು ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಘೋಷಿಸಿದರು.  ಕೂಡಿದ ಜನ ಬೇಸರದಿಂದ "ನಾವು ಅದಕ್ಕೆ ಅವಕಾಸ ನೀಡುವುದಿಲ್ಲ" ಎಂದರು.  "ನೀವೇ ನಮಗೆ ದಿಕ್ಕು ದೆಸೆ ನಮ್ಮನ್ನು ಅನಾಥರನ್ನಾಗಿ ಮಾಡಬೇಡಿರಿ" ಎಂದು ಗೋಳಾಡಿದರು.  ತಮ್ಮ ಅಭಿಮಾನಿಗಳ ಪ್ರೀತಿ ವಿಶ್ವಾಸಕ್ಕೆ ಮಾರು ಹೋದ ಅಮರಪ್ಪನವರು "ನಾನು ನಿಮ್ಮೊಂದಿಗೆ ಇರುತ್ತೇನೆ.  ನಿಮ್ಮೆಲ್ಲರ ಅನುಕೂಲಕ್ಕಾಗಿ ನನ್ನ ಉತ್ತರಾಧಿಕಾರಿಯೊಬ್ಬ ಇರುತ್ತಾನೆ.  ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ, ನಿಷ್ಠೆ, ಗೌರವ, ಅಭಿಮಾನದ ಬೆಂಬಲವನ್ನು ನೀವು ಅವನಿಗೂ ಕೊಡಬೇಕು.  ನಾನೆಂದರೆ ಅವನು;  ಅವನೆಂದರೆ ನಾನು ಎಂದು ತಿಳಿಯಬೇಕು" ಎಂದರು.

ಅವರು ಹಾಗೆ ಹೇಳುತ್ತಿರುವಂತೆ ವೇದಿಕೆಯ ಮೆಲಿದ್ದ ಐದಾರು ಯುವಕರ ಮುಖ ಅರಳಿಕೊಂಡವು.  ಅವರೆಲ್ಲ ಅಮರಪ್ಪನವರ ಖಾಸಾ ಆದ್ಮಿಗಳಾಗಿದ್ದರು.  ಹಗಲಿರುಳು ಅವರ ಏಳ್ಗೆಗಾಗಿ, ಪ್ರತಿಷ್ಠೆಗಾಗಿ ರಕ್ತ ಸುಟ್ಟುಕೊಂಡಿದ್ದರು.  ನಿಷ್ಠೆಯಿಂದ ಶ್ರಮಿಸಿದ್ದರು.  ಬದುಕು ಸವೆಸಿದ್ದರು.  ಅನೇಕ ಸಂದರ್ಭಗಳಲ್ಲಿ ಅಮರಪ್ಪ ಆ ತರುಣರ ಬಗ್ಗೆ ಮೆಚ್ಚುಗೆ ಮಾತು ಆಡುತ್ತ ನಾಯಕರನ್ನಾಗಿಸುವ ಆಸೆ ತೋರುತ್ತಲೇ ಬಂದಿದ್ದರು.  ಈಗ ಅಂಥ ಅವಕಶ ಬಂದೀತೆಂದು ತರುಣರು ಹಿಗ್ಗಿಕೊಂಡು ತಮ್ಮ ಗರಿಗರಿ ಅಂಗಿ ತೀಡಿಕೊಂಡು ಮೈಯೆಲ್ಲಾ ಕಿವಿಯಾಗಿ ಕುಳಿತರು.  ಅಮರಪ್ಪ ಅವರತ್ತ ದೃಷ್ಟಿ ಚೆಲ್ಲಿ ತಮ್ಮ ಉತ್ತರಾಧಿಆರಯಿನ್ನು ಸಾರಿಯೇ ಬಿಟ್ಟು "ಮಹಾಜನಗಳೆ, ನಿಮಗೆಲ್ಲರಿಗೂ ಇನ್ನು ಮುಂದೆ ನನ್ನ ಮಗನೆ ನಾಯಕ!"

            *****

ಕೀಲಿಕರಣ: ಕಿಶೋರ್‍ ಚಂದ್ರ

ಕುಲಕರ್ಣಿ ಕೊಟ್ಟ ಪಾವಲಿ ರೊಕ್ಕ

- ಶಿಶುನಾಳ ಶರೀಫ್

ಕುಲಕರ್ಣಿ ಕೊಟ್ಟ ಪಾವಲಿ ರೊಕ್ಕದೀ
ಬ್ರಹ್ಮನೆಲಗಾಂಬುದ್ಯಾಂಗಲೋ ಮನವೇ
ಬಲುದಿನದ ಸಲಗಿಯಲಿ
ಸಾಲಿ ಬರಸಿದ ಸ್ನೇಹ ತಿಳಿದು ಇಲ್ಲಿಗೆ ಬಂದಲ್ಲೇ ಮನಸೇ           ||೧||

ಪೊಡವಿಯೊಳು ಗುಡಗೇರಿ ಹಿರಿಯ ಪೋಲೀಸ-
ಗೌಡ ಕರದರೆ ಇಲ್ಲಿಗೆ ಬಂದೆಲ್ಲೇ ಮುನಸೇ
ಕಡು ಹರುಷ ಇವನ ಐಶ್ವಯ೯ ಹಂಗಿನಲಿ
ಜಡಮತಿಗೆ ಯೋಗ್ಯವಾದೀತೆ ಮನಸೇ                                ||೨||

ಸ್ಠೂಲತನುಕಾರ ಕಚೇರಿ ಮಾಮಲೆದಾರ-
ನಾಲಯಕೆ ಹೋಗಸಿದೆಲ್ಲಲ್ಲೋ ಮನಸೇ
ವಸುಧಿಯೊಳ್ ಶಿಶುನಾಳಧೀಶನೂರವನ ಕವಿತಾ
ಹೆಸರು ಗುರುಗೋವಿಂದನೇ ಮನವೇ
ತುಸುಕೊಟ್ಟನೆಂದು ಜರಿಯಬ್ಯಾಡಾ
ಆಸೆಯನು ಮುರಿದು ಮುಂದಕ್ಕೆ ನಡೆಯಲೋ ಮನಸೇ           ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಸಿಲ್ವರ್ ಮರಗಳ ದೊಡ್ಡ ಕಾಡು

- ಮಂಜುನಾಥ ವಿ ಎಂ

ಅಲ್ಲಿ-ಚರ್ಚಿನಲ್ಲಿ,
ಸಿಲ್ವರ್ ಮರಗಳ ದೊಡ್ಡ ಕಾಡು ಬೆಳೆದುಕೊಂಡಿದ್ದರಿಂದ
ವರ್ಷಾ ವರ್ಷ ಅವುಗಳನ್ನು ಕಡಿದು, ಸವರಲಾಗುತ್ತಿತ್ತು.

ಆ ಆಶ್ರಮಕ್ಕೆ ನರ ನಾಡಿಗಳೇ ಇಲ್ಲದ ಕ್ರಿಮಿನಲ್‌ಗಳು,
ನಿವೃತ್ತ ಸೂಳೆಯರು, ಎಲ್ಲಾ ವಿಧದ ಅಂಗವೈಕಲ್ಯ,
ಮನೋವೈಕಲ್ಯಗಳಿಂದ ನರಳುವ ದಿಕ್ಕಿಲ್ಲದ ನಿರ್ಗತಿಕರು
ಬಂದು ದಾಖಲಾಗುತ್ತಿದ್ದದ್ದರಿಂದ ಅವರನ್ನು ವಾರಕ್ಕೊಬ್ಬಬ್ಬರಂತೆ
ಕುತ್ತಿಗೆ ಕೊಯ್ದು, ಹೂಳಲಾಗುತ್ತಿತ್ತು.

ನಡು ರಾತ್ರೆಯ ಚೀರಾಟ ಹಗಲಿನ ಸಮಾಧಿಗಳನ್ನು
ಸ್ವರ್ಗ ಶಾಂತಿಯಲ್ಲಿಡುತ್ತಿತ್ತು.
           *****

ನಿನ್ನ ನೆನಪು

- ಡಾ || ರಾಜಪ್ಪ ದಳವಾಯಿ

ನಿನ್ನ ನೆನಪನ್ನು ನೆನಪೆನ್ನಲೆ ?
ಇಲ್ಲ, ನೆನಪೂ ನಾಚಿತಲ್ಲ !
ನಿನ್ನ ನೆನಪನ್ನು ನೀನೇ ಎನ್ನಲೆ ?
ಇಲ್ಲ, ಅದೂ ಎಂದಿತು ಒಲ್ಲೆ ! ||

ಜಗದ ಯಾವುದಕೆ ಹೋಲಿಸಲಿ
ನೀನವಕೆ ಸಮವಲ್ಲ ಮೊಲ್ಲೆ
ಬರಿ ಹೋಲಿಕೆ ಸಾಂತ್ವನವಲ್ಲೆ
ತತ್ವ ಸೇರಿದ ಮಾತಿದಲ್ಲ ನಲ್ಲೆ ||

ಮಾತು ಮೀರಿ ಮೌನ ಬೆಳೆದಿದೆ
ನಿನ್ನ ನೆನಪು ಮನದಲ್ಲಿ ನಲಿದಿದೆ
ನೆನಪ ಮಂಜು ಜೀವ ತುಂಬಿದೆ
ಕಂಗಳಲ್ಲಿ ಮೂಕ ರಾಗ ಹಾಡಿದೆ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಬೋವುಪಾಡಿಡ್ ಇಕ್ರಮೆ

- ಮುದ್ದು ಮೂಡುಬೆಳ್ಳೆ

ಆ ಊರ್‍ದ ಪುಡೆಟೊಂಜಿ ತಾಂಟ್ ಮೋಂಟ್ ಸಾದಿ ಮಣ್ಣ್‌ದವು.  ಆ ಮಾರ್ಗದ ಬಲತ್ತ ಮುರ್ಗಿಲ್ಡ್ ಬೋವು ಪಾಡಿನ್ಪಿ ಪುದಾರ್‌ದೊಂಜಿ ಕಾಡ್.  ಕಾಡ್‌ದ ಉಲಯಿ ಕಿರಾಲ್ ಬೋವು ಮರದ ಮುದೆಲ್ಡ್ ಎಸ. ಐ. ಇಕ್ರಮೆ ಎತೆಟ್ ಉಂತೊಂದೆ.

ಪೀಸಿನಕಲೆಡ್ ಇರ್ವೆರ್‍ ಓಸಿದಕಲ್ನ ಬೆರಿಯೆ ಪಾರ್ದೆರ್‍.  ಬಾಕಿದಕುಲು ಮಾತ ಮಂತಿರ್ಲೆ ಸಮ್ಮಾನದ ಲೇಸ್‌ಗ್ ಬಂದೋಬಸ್ತ್ ಡ್ಯೂಟಿಡುಲ್ಲೆರ್‍.  ಟೇಶನ್ ರೈಟ್ರ್‍ ಉಗ್ರಸೇನವೆಲಾ ಮೆಡಿಕಲ್ ರಜೆಟ್ ತೆಲಾದೆ.  ಇಂಚಿತ್ತಿ ಅಡ್ರಗಂಡಿದ ಚಪಟ್ ದಿನನೇ ತೂದು ಇಂಚಿಡ್ದ್ ಈ ಕಾಡ್ದುಲಾಯಿ ಉಂಬ್ಯೆ ಒರಿ ಒಲ್ತ್ ಸಾರೆತ್ಯಾದ್ ಬತ್ತ್‌ದ್ ಮುಲ್ಪ ಬಲ್ಲ್‌ದ ಉರ್‍ಲುಗ್ ಕಂಟೆ ಲೊಡ್ಡಿಯೆಪ್ಪ!

ಸುಂಚನೆ ತಿಕ್ಕಿನೇ ಕುದ್ದು ಮಂರ್ತ್‌ಲೆನ ಕಾರ್ಯಂತೆ ತಾಕೀತ್ ಮಲ್ತ್‌ನೆಟ್ಟಾತ್ರ ಯಸಯ್ ಇಕ್ರಮೆ ಒಂಟಿಯಾದ್ ಮೋಂಟ್ರ್‌ಸೈಕಲ್ ಮಿತಾರ್ದ್ ಈ ಬೋವು ಪಾಡಿಗ್ ಬತ್ತ್ ಮುಟ್ಟುದೆ.

ಪೋಸ್ಟ್‌ಮಾರ್ಟಂ ಆವೊಡಾತ್ತ್‌ಂಡ್.  ಮರಕ್ ನೇಲೊಂದಿತ್ತಿ ಪುಣೊಕ್ಕು ಈತ್ ಪುರ್ತುಗು ನಲ್ಪತ್ತೆಣ್ಮ ಗಂಟೆ ಆಂಡಲ ಕರಿದುಪ್ಪು ಇನ್ಪಿಲೆಕ `ಜುಂಯ್ಯಂದ್' ಕೆಲೆಂಜಿಲು ರಾವೊಂದಿತ್ತ.  ಭೂಕಂಪ ಆದ್ ಊರ್‍ ಬುಡ್ನಕಲ್ಲೆಕ ಈ ಊರುಡು ನರಪುಟಿ ನರಮಾನಿ ಒರಿಲಾ ತೊಜೊಂದಿತ್ತ್‌ಜೆರ್‍.

`ಥತ್, ದರಿದ್ರದಾವು ಈ ಲೌಡಿ ಮಗಕ್ ಜೀವ ದಿನ್ನ ಆತ್‌ಂಡ ತನ್ನ ಕಾರ್‌ಬಾರ್‌ದ ಈ ಊರೂ ಬತ್ತ್‌ದೇ ಪೆರಣ ಗೊತ್ತೊನೊಡ್‌ತ್ತ್‌ಂಡಾ?  ಇನ್ಪಿ ಮಂಡೆ ಬೆಚ್ಚೊಡು ಎಸಯ್ ಇಕ್ರಮೆ ಪಿಸ್ತೂಲು ಸರ್ತ ಪತೊಂದು, ಸೈತಿನಾಯಗ್ ಸಾಪ್ಯೊಂದು, ರಿಕ್ಷನಾ, ಟ್ಯಾಕ್ಸಿಯಾ ಮಿನಿ ತಿಕ್ಕುಂಡಾ ತೂಕಾನ್ಪಿ ಆಸೆಡ್ ಮಾರ್ಗದ ಪುಡೆತಂಚಿ ನನದಾನಿ ಪಿಜಿರೊಡುನನ್ನಗ ಪುಣ ಉಲಯಿಡ್ದ್ ಆಸೆ ತೀರಂದಿ ಆತ್ಮ ಲಯಿತ್ತ್‌ದ್ ಇಕ್ರಮನ ಪುಗೆಲ್ಲ ಮಿತ್ತ್ ಏರ್‌ದ್ ಪಾತೆರ್‍ರೆ ಸುರು ಮಲ್ತ್‌ಂಡ್....

`ಅಂದಯಾ ಇಕ್ರಮಾ, ಕಾಯ್ದೆ ಕಾನೂನು ಮಾತ ಬೂಕುಡೇ ಒರಿದ್ ಇನಿತ ಸಮಾಜೊಡು ಏರ್‌ಪೇರೇ ಮಿತಿ ಮೀರೊಂದುಪ್ಪುನೆಕ್ ಬೇಜಾರಾಂಡಾ?  ನಿನ ಪಿಸ್ರ್‍ ತೊಜಾವರೆ ಏರ್‍ಲಾ ತಿಕ್‌ಜೆರತ್ತಾ?  ಒಂತೆ ತರ್‍ಲಾ.  ಇತ್ತೆ ನಿಕ್ಕ್ ಬೇಜಾರ್‍ ಮಾಜೆರೆ ಕೈತಲ್ದ ಒಂಜೂರ್ದ ಕಥೆ ಪನ್ಪೆ ಕೇನೆ' ಪಂದ್ ಸುರು ಮಾನ್‌ತ್ಂಡ್.....

`ತುಳು ದೇಸೊಡು ಕುಡ್ಚಿಕುಮೇರ್‍ ಪನ್ಪಿ ಒಂಜಿ ಊರು, ಈ ಊರುಡು ಕಿಟ್ಟೆ, ರಂಗೆ, ಅಬ್ಬು, ಜಗ್ಗು ಪನ್ಪಿ ಜವಣೆರ್‍ಲಾ ಅಕಲ್ನಾಲಾ ಅಕ್ಲನ ಜೋಸ್ತಾರ್ಲೆನ-ನಿರೆಕರೆತ್ತ ಸುತ್ತು ಬರ್ಕೆದಕಲ್ನ ಅಪ್ಪೆಮ್ಮೆ, ಅಜ್ಜೆ ಅಜ್ಜಿ, ಮೆಗ್ದಿ-ಪಲಿಂದ್ ಕಾನೇಸ್‌ಮಾರಿ ಲೆಕ್ಕೊಡು ಒಂಜಯಿ ನೂದು ಆಜಿನೂದೆದಾತ್ ಜನಮಾನಿ ಇತ್ತೆರ್‍.  ಒರಿಯೊರಿಯನ ಲಂಜೊಂಜಿ ಯಾಪ್ತಿ.  ಕೆಲವೆರೆಗ್ ಬೆನ್ನಿ ಬರೆ, ನನ ಕೆಲಸರೆಗ್ ದಪ್ಪು, ನಟ್ಟಿದ ಬೇಲೆ, ಉಗ್ಗೆಲ್ ತೊಡುನು ಕಾಡ್ ಕಡ್ಪುನ, ಇಲ್ಲ್ ಕಟ್ಟುನ, ಮಾರ್ಗ ಸರ್ಕೆ ಮಲ್ಪುನ ಇಂಚಿನ ಮಾತ ಬೇಲೆಲು.

ಕುಡ್ಚಿಕುಮೇರ್‍ ಪನ್ಪಿ ಆ ಗಿರಾಮದ ಮೂಡೈಮೆಯಿಟ್ ಕಿಂಞವೊಂಜಿ ಪೇಂಟೆ.  ಅಲ್ಪ ಎಂಕಟ್ರಮನ ಕಮ್ತೆರ್ನ ಒಂಜಿ ಜಿನಸ್‌ದಂಗಡಿ.  ಅಣ್ಣಪ್ಪೆರ್‍ನೊಂಜಿ ಚಾತ ಒಟೇಲ್, ಸೀತ್ರಾಂ ಸೆಟ್ರೆನ ಗಡಂಗ್ - ಇಂಚ ಮಾತ ಇತ್ತ್‌ದ್ ಜನೊಕ್ಲೆಗ್ ಬೋಡಾಯಿನ ಮಾತ ತಿಕ್ಕೊಂದಿತ್ತ್‌ಂಡ್, ಲಚ್ಚೆಮಿ, ಶಾಂತಲೆಕಂತಿ ಏಲಣ್ಮ ಪೊಣ್ಣುಲು ಬೀಡಿ ಕಟ್ಟೊಂದಿತ್ತೆರ್‍.  ಕಿಟ್ಟಪ್ಪಣ್ಣನ ಬೀಡಿ ಬ್ರೇಂಚ್ ಪೇಂಟೆಡೇ ಇತ್ತಂಡ್.  ಮಾಜಿ ಮಂಡಲ ಪ್ರಧಾನೆ ಕಿಟ್ಟಪ್ಪಣ್ಣೆ ಐವ ಎಕ್ರೆ ಸಾಗೊಳಿದ ಕಂಡ, ತೋಟದ ಗುರ್ಕಾರೆ.  ಇಡೀ ಊರೂಗೇ ಮಲ್ಲ ಜನ.  ಕಿಟ್ಟಪ್ಪಣ್ಣನ ಮಗೆ ಓಬು ಬೊಂಬಾಯಿಡ್ ಬೀರ್‍ದಂಗಡಿ ನಡಪಾವೊಂದಿತ್ತಿಲೆಕ್ಕನೇ ಒವ್ವಾ ಒಂಜಿ ಸಿನೆಮೊಡ್ಲಾ ಪಾರ್ಟ್ ಮಲ್ದೆಗೆ.  ಕಿಟ್ಟಪ್ಪಣ್ಣನ ಮಗಲ್ ಲತಾ ಹುಬ್ಬೊಲಿಡ್ ಮೆಡಿಕಲ್ ಓದೊಂದಿತ್ತೊಲು.

ಸಾಂತನ ಪಲಯೆ ಜಗ್ಗು ಪನ್ಪಿಯಗ್ ಮೀನ್ದ ಬ್ಯಾರ.  ತನ ಸೈಕಲ್ಡ್ ದಿನಾಲ ಕಡ್ಲ ಬರಿಕ್ ಪೋದು `ವಾರ್‌'ಡ್ ಒಂಜಿ ಪೊಡಯಿ ಮೀನ್ ಒಯಿಸೊಂದು ಕನಪ್ಪೆ.  `ಮೀನ್‌ಽಽಮೀನ್'ಂದ್ ಪನೊಂದು, ಸೈಕಲ್ದ `ಪೇಂ ಪೇಂ' ವಾರನ್ ಪಾಡೊಂದು ಊರೊರ್ಮೆ ಮೀನ್ ಮಾರೊಂದಿತ್ತೆ.

ಇಂಚ ಆ ಊರುಡು ಮಾತ ಇತ್ತಂಡಲಾ, ಪೇಂ ಟೆಡ್ ಕಲ್ತ್‌ಬತ್ತ್‌ದ ಬ್ಯಾಂಕ್ ಪರೀಕ್ಷೆ ಕಟ್ಟ್‌ದ್ ಬೆಲೆಗ್ ಕಾತೊಂದಿನ ಕಿಟ್ಟೆ, ರಂಗೆ, ರಾಜಲೆಕಂತಿ ಜವನೆ ರೆಗ್ ಊರುಡು ದಾಲಾ ಇಸೇಸ ತೋಜಂದೆ `ಚಪ್ಪೆ ಚಪ್ಪೆ' ಆವೊಂದಿತ್ತ್ಂಡ್.  ಭಾರತ ದೇಸೊದ ನಿಲಿಕೆಲಾ ಅಲ್ಪಲ್ಪ ಗಲಾಟೆ, ಸ್ಟ್ರೈಯ್ಕ್, ಭೂಕಂಪ, ಅತ್ಯಾಚಾರ, ಕೊಲೆ ಇಂಚಿನ ಮಾತ ಊರೂರುದ ಸುದ್ದಿ ಬರೊಂದುಂಡು.  ಎಂಕಲೆ ಊರ್‍ದ ಸುದ್ದಿಯೇ ದಾಲ ಬರ್‍ಪು ಜತ್ತಾಂದ್ ಅಕಲು ಬಾರಿ ಬೇಜರ್‌ಡಿತ್ತರ್‍.

ಇಂಚ ಕುಡ್ಜಿಕುಮೇರ್‌ಡ್ ಕೊರಗೊಂದುಪ್ಪುನ ಜವಣೆರ್‍ನ ಬುಲಿಪು ಕೇಂಡಾ ಪನ್ಪಿಲೆಕ ಓಬು ಬೊಂಬಾಯಿಡ್ದ್ ಬತ್ತೆ.  ಕಿಟ್ಟಪ್ಪಣ್ಣನ ಒರಿಯೆ ಮಗೆ ಆಯೆ.  ಬೊಂಬಯಿಡೊಂಜಿ ಬೀರ್‍ ಬಾರ್‍ ನಡಪಾವೊಂದು ಇತ್ತಿ ಲೆಕ್ಕನೆ `ಸಿನ್ಮಾಟಾರ್‍' ಆತಿನಾಯೆ.  ಪಂಚಾಯತ್ ಓಟು ಕೈತಲಾದಿತ್ತ್‌ಂಡ್.  ಕಿಟ್ಟಪ್ಪಣ್ಣಗ್ ಮಗನ ಸಾಯ ಬೋಡಿತ್ತ್ಂಡ್.  ಆತೇ ಅತ್, ಊರ್‍ಡೇ ಸುರೂತ್ತ ಟೀವಿ ಕಿಟ್ಟಪ್ಪಣ್ಣನ ಚಾವಡಿಡ್ ಜಿಗರ್‌ಂಡ್.

ಓಬು ಬತ್ತಿನಯೆನೇ ನಾಲ್ ದಿನೊತ್ತುಲಾಯಿ ಪೇಂಟೆಡ್ `ಓಬ್‌ರಾಜ್ ವೈನ್ ಸೆಂಟರ್‌'ನ್ಪಿ ಅಂಗಡಿ ಪಾಡ್ಯೆ.  ತನ್ನ ಬಜಾಜ್ ಬೈಕ್‌ಡ್ ಕುಲೊಂದು `ಢುಗುಢುಗ್ರುಂದ್ ಮಾರ್ಗೊಡು ಆಯೆ ಪೋಪಿನೆಟೇ ಕುಡ್ಚಿ ಕುಮೇರ್‌ದ ರಸ್ತೆಲು ಒಕ್ಕೆಲಾಯ.  ಆ ಪೊರ್ಲುನು ತೂವರೆಂದೇ ಬೀಡಿಕಟ್ಟುನ ಪೊಣ್ಣುಲ್ನ ಸಂಕೆ ಏರ್‌ಂಡ್‌ಂದ್ ತೆರಿನ ಕಿಟ್ಟೆ, ರಂಗೆ, ರಾಜಲೆಕಂತಿ ಜವಣ್ಯೆರ್‍ ಒಂಜಿ ದಿನ ಗ್ರಾಮ ಚಾವಡಿಡ್ ಸಬೆ ಸೇರ್‍ದ್ `ಯುವಕ ಮಂಡಲ' ಉದ್ಘಾಟನೆ ಮಲ್ತೊಂಡೆರ್‍.

ಕಿಷ್ಣ-ಲೀಲೆ ತೋಜಾರೆ ಸುರುಮಲ್ದೆ ಓಬುಂದ್ ತೋಜಿಂಡ್ ಬಾಕಿ ಜವಣರೆಗ್.  ಆಯಗ್ ನಾಲ್ ಬೊಟ್ಟುದು ಊರುಡು ಸುದ್ದಿ ಮಲ್ಪಡು.  ಪೇಪರ್‍ಡ್ ಆ ಸುದ್ದಿ ಬರೊಡುಂದ್ ಪಾತೆರೊಂಡರ್‍.  ಪಂಚಾಯತ್ ಗುರ್ಕಾರ್ಮೆಲಾ ಕರಿನ ಪತ್ತೈವ ವರ್ಸೊಡಿಂಚಿ ಕಿಟ್ಟಪ್ಪಣ್ಣನ ಸಂತೇಸಿಡ ಉಂಡು.  ಏರ್‍ನ ಅಮ್ಮನ ಗಂಟ್!  ಈ ಸರ್ತಿ ಒಂಜಿ ಕ್ರಾಂತಿ ಮಲ್ಪೊಡು.  ಯುವಕ ಸಂಘದಕುಲು ಮಾತ ಸೇರ್‍ದ್ ಮೀನ್‌ದ ಬ್ಯಾರದ ಜಗ್ಗನ್ ಕಿಟ್ಟಪ್ಪಣ್ಣಗ್ ಎದುರಾದ್ ಓಟುಗು ಉಂತಾವುನ ಅಂದಾಜ್ ಮಲ್ತೆರ್‍.

ಇಂಚ ಉಪ್ಪುನಗ ಒಂಜಿ ಐತಾರದಾನಿ ಇರ್ಲ್‌ಡ್ ಕಿಟ್ಟಪ್ಪನ ಇಲ್ಲಡ್ ವೀಸಿಯಾರ್‍ ದೀದ್`ರಾಮಾಚಾರಿ' ಪಿಚ್ಚರ್‍ ನಡತೊಂದುಂಡು.  ಊರ್‍ದ ಮಾತೆರೆಗ್ಲಾಬೇಲೆದ ಅಂತು ಏಲಿಕೆ ಕೊರ್‍ತೆ.  ಜೋಕುಲು ಪರಬೇರ್‍ ಪೊಂಜೊವುಂದ್-ಪಿಚ್ಚರ್‍ ತೂವರೆಗ್ ಮಾತರ್‍ಲಾ ಬತ್ತ್‌ದ್ ಬಯಬಕ್ತಿಡ್ ಕುಲೊಂದು ರೈಚಂದ್ರೆ ನಲಿತೊಂದು ಪ್ಪುನಗ ಕಂಡಿದುಲಯಿ ತೂತ್ತ ಕೊಲ್ಲಿಲು ಬತ್ತ್ ಬೂರ್ಯ!

`ಅಯ್ಯೊಯ್ಯೋ'ಂದ್ ಮಾತೆರ್ಲಾ ಬೊಬ್ಬೆ ಪಾಡ್ ಪಾಡ್ನಗನೇ ಪೊಂಜೊವೆನ ಸೇರೆಲೆಗ್, ಆಂಜೊವೆನ ಮುಂಡಾಸ್‌ಲೆಗ್ ತೂ ಪತ್ತ್ಂಡ್.  ಏಲೆಣ್ಮ ಜನತ ಮೆಯ್ದ ತೂ ಪತ್ತ್ಂಡ್.  ಪಿದಾಯಿ ಬಲ್ಪರೆ ತೂನಗ ಹೆಬ್ಬಾಗಿಲ್‌ನ್ ಪಿದಾಯಡ್ದೆ ಬಂದ್ ಮೇಲ್ದ್ಂಡ್!ಽಽ......

ಆತ್ ಪೊರ್ತುಗು ಒಲ್ತುಡ್ದಾ ಗುಡುರ್‍ರಂದ್ ಓಬುನ ಬೈಕ್ ಬತ್ತ್ ಉಂತುಂಡ್.  ದಡಿಬಿಡಟ್ ಬಾಕಿಲ್ ಗೆತ್ತೆ.  ಜನಸಂತೆ ಯಾನ್ ತಾನ್‌ಂದ್ ಪಿದಾಯಿ ಪಾರೊಂದು ಬತ್ತೆರ್‍.  ತೂಟ್ಟ್ ಪೊತ್ತೊಂದು ಇತ್ತಿನಕಲ್ನ ಸುತ್ತ ಕೆಲವೆರ್‍ ಸೇರ್‍ದ್ ಬಾಯಿ ಕೊರ್ದು ಬುಲಿತೆರ್‍.

`ಏರ್‌ಂಬ್ಯಾ ಅವು ತೂಕೊರ್ದು ಬಲ್ತಿನ ಬೋಸುಡಿ ಮಗನಕುಲು?'  ಇಂದ್ ಓಬು ಅರಬಾಯಿ ಕೊರ್‍ಯೆ.  ಎಬ್ಬಾಗಿಲ್ದ ಸರ್ತೊಡು ಆತ್ ದೂರೊಡು ಮರತ ಮುದ್ದೇಲ್ಡ್ ಕತ್ತಲೆಡ್ ಜವಣೆರ್‍ ಉಂತೊಂದಿತ್ತೆರ್‍.  ನನೊಂಜಿ ಬರಿಟ್ ತೂತ್ತ ಕೊಲ್ಲಿ ಬತ್ತ್ ಬೂರ್‍ದಿನ ಕಂಡದಾಪೆಲ್ಡ್ ಜಗ್ಗನ ಸೈಕಲ್, ಮೀನ್ದ ಪುಡಾಯಿ ನೆಲಕ್ಕ್ ಮಗ್ರ್‌ದಿತ್ತ್ಂಡ್, ಐತ ಬೆತ್ತಡಿಡ್ ಜಗ್ಗೆ ತನ ತಂಗಡಿ ಸಾಂತನ ಜೊಟ್ಟುಡು ಪತ್ತ್‌ದ್ ಪಟ್ಟ್ ಪಾಡೊಂದಿತ್ತೆ.....

`ಒಯ್ಪುಲೆಂಬೇ, ದರ್ಪುಲೇ!  ದಾದ ತೂಪರ್‍?'  ಇಂದ್ ಓಬು ಕಲ್ಕ್‌ದ್ ಲೈತ್‌ದ್ ಜಗ್ಗುನ ಕೊಲರ್‍ ಪತ್ಯೆ.  ನನೊಂಜಿ ಗುಂಪು ಮರತ್ತ ಮುದ್ದೇಲ್ಡಿತ್ತಿನಕಲೆನ್ ಗಿಡತ್ತೊಂದು ಪೊಂಡು.  ಮರ್ದಿನ.....

ಈ ಬೋವುಪಾಡಿಡ್ ಗುರ್ತ ತಿಕ್ಕಂಡಿ ರೂಪೊಡು ಪುಣವೊಂಜಿ ನೇಲೊಂದುಪ್ಪುನೆನ್ ಬಿಜಕ್ರೆ ಅರಾವುನಕುಲು ತೊಯೆರ್‍.

ಎಲಾ ಇಕ್ರಮಾ, ಇಂದಾ, ಜಗ್ಗೆ, ಓಬು, ಇರ್‍ವೆರ್‍ಲಾ ನಾಪತ್ತೆ ಆತೆರ್‍.  ಇತ್ತೆ ಪಣ್, ಸೈತಿನಾಯೆ ಏರ್‍!?  ಉಂದು ಕೆರ್ತಿನಾ, ಜೀವ ದೆತ್ತೊಂದಿನಾ?  ಕೆರ್ತಿನಿಂದಾಂಡ ಏರ್‍ ಕೆರ್ನಿ?  ನೆಕ್ಕ್ ಸರಿಕಟ್ಟ್ ಜವಾಬು ತೆದಿಲ್ಲಾ ಪನಂದೆ ಕುಲ್ಯಡ ನಿನ್ನ ಮಂಡೆ ಸೀಂತ್ರ್‌ದ್ ಪೋವು, ಜಾರ್ಗ್‌ತೆ ಇನ್ಂಡ್ ಬೇತಲತ.....!

ಯಸಯ್ ಇಕ್ರಮೆ ಕೂಲಿಂಗ್‌ಗ್ಲಾಸ್ ಗೆತ್ತ್‌ದ್ ಒರ ಬೆಗರ್‍ ಒಚ್ಚೊಂಡೆ..... `ಇಂದಾ ಮಾರಯ ಬೇತಲಾ, ಆತ್‌ಲಾ ತೆರಿಜಿಡ ಎಂಚ, ಕೊಲೆ ಆತಿನಿ ಜಗ್ಗೆ!  ಆಂಡ ನನ ಆವೆ ಉಪ್ಪುನ ಪೋಸ್ಟ್ ಮಾರ್ಟಂ, ಮಹಜರ್‍, ಯಾದಸ್ತುಲು ಪೂರ ಜಗ್ಗೆನೇ ಜೀವದೆತ್ತೊನ್ನಿಂದ್ ದಿರ್ಡ ಮಲ್ಪುವ.  ಸಾಂತ ಓಬುನ ಬಲೆಟ್ಟ್ ಬೂರ್‍ದಿನಿ, ಓಬುವೇ ಮಲ್ಪಾದಿನ ತೂ ಕೊರ್‍ಪಿ ನಾಟಕ ಇಂಚಿನವು ಮಾತ ಚಿಲ್ರೆ ಇಸಯೊಲು, ಎಂಕಯ್ತ ಒಂಜಿ ಲೆಕ್ಕನೇ ಅತ್ತ್, ಓಬು ಎಂಚಲಾ ಬೊಂಬಾಯಿಗ್ ಬಲ್ತದ್ ಆತ್‌ಂಡ್.  ಯಾನೀ ಕಾಕಿ ಅಂಗಿದ ಬೇಲೆಗ್ ಬರೊಡಾಂಡ ರಡ್ಡ್ ಲಕ್ಸ ರುಪಾಯಿ ಕೊರ್‍ತಿನಿ ಏರ್‍ ಗೊತ್ತುಂಡಾ?  ನಿನ್ನ ಈ ಅಜಕೆದ ಕತೆನ್ ಮಾತ ಕೇನೊಂದು ಕುಲ್ಲರೆ ಎಂಕ್ ಟ್ಯಾಮಿಜ್ಜಿ;  ಇಂಚಿನವು ದಿನೊಲ ನಡತ್ತೊಂದೇ ಉಪ್ಪುನವು, ತೂಲ, ಆ ಯುವಕ ಸಂಗದ ಜವಣ್ಯೆರ್‍ ಒರ್ಯೊರ್ಯನೇ ಪತ್‌ದೆಂಚ ಸೊಂಟ ಪೊಲಿಪುವೆ ತೂಲ......

--ಇಂದಾಯೆ ಪನೊಂದಿತ್ತಿಲೆಕನೆ ಬೇತಲೆ ಜಿಗ್ಗ ಲೈತೊಂದು ಪೊದು ನೇಲೊಂದುಪ್ಪಿ ಪುಣತ್ತುಲಾಯಿ ಪಿರ ಸೇರೊಂದು ತಾದಿ ತುವರೆ ಪತ್ಂ‌ಡ್.

            *****

ಕೀಲಿಕರಣ: ಕಿಶೋರ್‍ ಚಂದ್ರ

ವಿಸ್ಮಯ

- ಗಿರಿಜಾಪತಿ ಎಂ. ಎನ್

ಕಾಣದ ಕೈಗಳ ಲೀಲ ಹಾದಿಯಲಿ
ಸಾಗಿದೆ ವಿಶ್ವದ ತೇರು,
ಮಾಣದ ಶಕುತಿಯ ಮಾಯಾದೋಳಲಿ
ನಡೆದಿದೆ ಸೃಷ್ಟಿಯ ಉಸಿರು.

ನಿನ್ನಯ-ನನ್ನಯ, ನಿನ್ನೆಯ ಇಂದಿನ
ನಾಳೆಗಳಾ ಕತ್ತಲೆ ಬೆಳಕು
ಬೀಳುತಲೇಳುತ ಸಾಗೆ ನಿರಂತರ
ಶೂನ್ಯ ಥಳುಕು ಬಳುಕು.

ಚಿರ-ಸ್ಥಿರ-ಚರ ಚಿರಂತನವಾವುದೋ
ಅಳಿವು-ಉಳಿವು ಹೊಳಪಿನಾ ಸುಳಿಗೆ
ಯಾವ ಕೈಗಳ ಸಾಲುಗಳಿವೆಯೋ
ತೇರ ನೆಳೆಯುವ ದಿನ ಸರದಿಗೆ

ಯಾತ್ರೆ-ಜಾತ್ರೆಯಾ ಸಂದಣಿಯಲ್ಲಿ
ಕೊಟ್ಟು-ಕೊಳ್ಳುವರು ಯಾರೋ
ನೀಲಾಗಸವ ನೋಡುವ ತವಕದಿ
ಮುಗಿ ಬೀಳೆ ನಗದವರು ಯಾರೋ....

        *****
ಕೀಲಿಕರಣ: ಕಿಶೋರ್‍ ಚಂದ್ರ

ಸೂಜಿಯೇ ನೀನು ಸೂಜಿಯೇ

-ಶಿಶುನಾಳ ಶರೀಫ್

ಸೂಜಿಯೇ ನೀನು ಸೂಜಿಯೇ
ಈ ರಾಜ್ಯದೊಳಗೆಲ್ಲ ತೇಜ ಕಾಣಿಸುವಂಥ      ||ಪ||

ಹರಿಯ ಶಿರದಮ್ಯಾಲೆ ಮೆರೆದಂಥ ಸೂಜಿಯೇ
ಹರನ ಕಪಾಲದಿ ಬೆರೆದಂಥ ಸೂಜಿಯೇ
ಮರವಿಯ ಆರವಿಯ ಹೊಲಿವಂಥ ಸೂಜಿಯೇ
ಮರೆ ಮೋಸವಾಗಿ ಮಾಯವಾದಂಥ ಸೂಜಿಯೇ       ||೧||

ತಂಪುಳ್ಳ ಉಕ್ಕಿನೊಳ್ ಹುಟ್ಟಿದ ಸೂಜಿಯೇ
ಶಿಂಪಿಗರಣ್ಣಗೆ ಬಲವಾದ ಸೂಜಿಯೇ
ಇಂಪುಳ್ಳ ದಾರಕ್ಕೆ ಸೊಂಪುಗೊಡಿಸುವಂಥ
ಕಂಪನಿ ಸರಕಾರ ವಶವಾದ ಸೂಜಿಯೇ        ||೨||

ಆಂಗಳ ಬೈಲೊಳು ಹೋದಂಥ ಸೂಜಿಯೇ
ಸಿಂಗಾರದಂಗಿಯ ಹೊಲಿವಂಥ ಸೂಜಿಯೇ
ತುಂಗ ಶಿಶುನಾಳಧೀಶನ ಸೇವಕ
ರಂಗಿಲಿ ಹುಡುಕಲು ಸಿಗದಂಥ ಸೂಜಿಯೇ      ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಕಣಜ

- ಮಂಜುನಾಥ ವಿ ಎಂ

ಆ ಮನೆಯ ಕಣಜ ನಮಗೆ,
ದಿನಾರಾತ್ರೆ  ಒಂದೊಂದು ನೀತಿಕಥೆಯನ್ನು ಹೇಳು ತ್ತಿತ್ತು;
ಕೇಳಿಸಿಕೊಳ್ಳುತ್ತಿದ್ದದ್ದು ಮಾತ್ರ ಅವರಾಗಿದ್ದರು.

ಅವರೆಕಾಳು, ರಾಗಿ, ಗೋಧಿ, ತೊಗರಿ, ಹೆಂಡ, ಹಳೆಬಟ್ಟೆಗಳು,
ಔಷಧಿ ಬೇರುಗಳೆಲ್ಲವನ್ನೂ ತನ್ನೊಳಗೆ ಹೊತ್ತುಕೊಂಡು,
ದೂರದ ಗ್ರಾಮದ ದಢೂತಿ ಹೆಂಗಸಿನಂತೆ ಕಂಗೊಳಿಸುತ್ತಿತ್ತು.

ಅದನ್ನು ಕಟ್ಟಿದ ಆ ಓಣಿಯ ಅವನೋ,
ಸಂತೆಯಿಂದ ಬಿದಿರುಕಾಡನ್ನು ಬಳಸಿಕೊಂಡು ಇತ್ತ ಬರುತ್ತಿದ್ದಂತೆ-
ಆ ಕಣಜವನ್ನು ಬಾಯಿಗೆ ಬಂದಂತೆ ಬೈಯ್ಯುವುದನ್ನು ರೂಢಿ ಮಾಡಿಕೊಂಡಿದ್ದ.

ನಾವೆಲ್ಲರೂ ಎದ್ದೇಳುವ ಮುಂಚಿತವೇ ಅವನು ತನ್ನದೆಲ್ಲವನ್ನೂ
ಆರಂಭಿಸಿರುತ್ತಿದ್ದನೇನೊ.

ಏಕೆಂದರೆ, ಆಗ ಅವನು ಅಳುತ್ತಾ ನಡೆದುಹೋಗುತ್ತಿದ್ದ.

ಅಪ್ರಾಕೃತ ಸಾವಿನಿಂದ ಅವನು ಸತ್ತರೂ
ಆ ಕಣಜದ ನೀತಿಕಥೆಗಳು ಮಾತ್ರ ಮುಗಿದಿರಲಿಲ್ಲ,
ನಾವು ಬೆಳೆಯುವುದು ಕುಗ್ಗಲಿಲ್ಲ;

ನಮ್ಮ ನಡುವಿನ ಅವರು (ಕತೆ ಕೇಳಿಸಿಕೊಳ್ಳುತ್ತಿದ್ದವರು)
ಸಾಯುವುದೂ ಕಡಿಮೆಯಾಗಲಿಲ್ಲ.
            *****

ಜಲರೂಪಿನಗು

- ಡಾ || ರಾಜಪ್ಪ ದಳವಾಯಿ

ಜಗದಲೆಲ್ಲ ಹುಡುಕಿದೆ ನಿರಂತರ
ಕಳೆದವೆಷ್ಟೊ ಗೆಳತಿ ಮನ್ವಂತರ
ಎಲ್ಲೂ ಸಿಗಲಿಲ್ಲ ನಿನ್ನ ನಗುತರ
ನಾ ಮಡಿಲ ಮಾತೆ ಮಗು ತರ ||

ಅದೆಷ್ಟು ಶಕ್ತಿ ನವ ರೋಮಾಂಚನ
ಜಡ ಬದಕಿಗೆಲ್ಲ ಗರಿಗೆದರಿ ಸಿಂಚನ
ಎಣಿಸಲಾರದ ಬಣ್ಣ ಬಗೆಯರಂಜನ
ಮನದೊಳು ಸುಳಿಯೊಡೆದ ತನನನ |||

ನಿನ್ನ ನಗುವಿನಣುವದೇ ಪ್ರಮಾಣು
ನನ್ನ ಚೈತನ್ಯ ಜಲರೂಪಿ ಪರಮಾಣು
ಕ್ಷಣಕೆಲ್ಲ ನವನವೋನ್ಮಾದ ಪಯಣ
ಜತೆಗಿದೆಯಲ್ಲೆ ನಿನ್ನ ನಗುವದೇ ಪ್ರಾಣ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಸ್ವಂತದ್ದಲ್ಲ

-ಅಬ್ಬಾಸ್ ಮೇಲಿನಮನಿ

ಅದು ಮದುವೆ ಮನೆ.  ಅಕ್ಷತೆಯ ನಂತರ ಭೋಜನ ಪ್ರಾರಂಭವಾಯಿತು.  ಉದ್ದ ನಾಲ್ಕು ಸಾಲುಗಳಲ್ಲಿ ಜನರು ಊಟಕ್ಕೆ ಕುಳಿತಿದ್ದರು.  ಅದು ಪ್ರತಿಷ್ಠಿತ ವ್ಯಕ್ತಿಯ ಮಗನ ಮದುವೆಯಾಗಿರುವುದರಿಂದ ಸುಗ್ರಾಸ ಭೋಜನದ ವ್ಯವಸ್ಥೆ ಆಗಿತ್ತು.  ಊಟದ ರುಚಿಯನ್ನು ಪ್ರೀತಿಯಿಂದ ಸವಿಯತೊಡಗಿದ್ದರು ಜನ.  ಬಡಿಸುವವರು ಲವಲವಿಕೆಯಿಂದ ಊಟದೆಲೆಯ ಕಡೆಗೆ ಗಮನ ಹರಿಸಿದ್ದರು.

ಊಟಕ್ಕೆ ಬಡಿಸುವವರಲ್ಲಿ ಒಬ್ಬ ಕೆಲವರ ಹತ್ತಿರಕ್ಕೆ ಬಂದು ಅತಿಯಾದ ಕಾಳಜಿ ವ್ಯಕ್ತಪಡಿಸಿ "ಹೊಟ್ಟೆ ತುಂಬಾ ಊಟ ಮಾಡಿರಿ,  ನಾಚಿಕೆ ಮಾಡಿಕೊಳ್ಳಬೇಡಿರಿ" ಎನ್ನುವನು.  "ಈ ವಯಸ್ಸಿನಲ್ಲಿ ಉಣ್ಣದಿದ್ದರೆ ಹೇಗೆ... ಇನ್ನಷ್ಟು ತಗೋರಿ" ಎಂದು ಬಡಿಸುವನು.  "ನಿಮ್ಮ ಪಾಲಿನದು ಹಾಕಿದೆ... ಇದು ನನ್ನ ಪಾಲಿನದು.  ಮದುವೆ ಊಟ ಇದು ಹೊಟ್ಟೆ ಬಿರಿವಂತೆ ಉಣ್ಣಬೇಕು" ಎಂದು ಅವರು ಅಡ್ಡಾಗಿಟ್ಟ ಕೈಕೊಸರಾಡಿ ಎಲೆಗೆ ಪದಾರ್ಥ ಹಾಕುವನು.  "ನನ್ನ ಒತ್ತಾಯಕ್ಕಾದರೂ ಇಷ್ಟು ನೀಡಿಸಿಕೊಳ್ಳಬೇಕು", "ನಾನು ಪ್ರೀತಿಯಿಂದ ಬಡಿಸುತ್ತೇನೆ ತಗೊಳ್ಳಿರಿ".  "ಇದು ನಿಮ್ಮನೆ ಅಂತ ತಿಳ್ಕೊಳ್ಳಿರಿ" ಇಂಥವೇ ಮಾತುಗಳಿಂದ ಜಬರದಸ್ತಾಗಿ ಸಾಲುಗಳ ನಡುವೆ ಓಡಾಡುತ್ತಿದ್ದ.

ಊಟ ಮಾಡುವವರು ಬೇಡ... ಬೇಡ... ಸಾಕು... ಸಾಕು... ಎಂದು ಎಲೆಯನ್ನು ಪಕ್ಕಕ್ಕೆ ಎತ್ತಿಕೊಂಡರು.  ಅದರ ಮೇಲೆ ಅಡ್ಡ ಬಿದ್ದರೂ ಅವನು ಹಟ ಮಾಡಿ ನೀಡುತ್ತಿದ್ದ.  ಯಾರಾದರೂ ಹೊಟ್ಟೆ ಹಿಡಿದಷ್ಟು ತಿಂದಾರು.  ಅವನು ಒತ್ತಾಯ ಮಾಡಿ ನೀಡಿದ್ದೆಲ್ಲ ಎಂಜಲಾಗಿ ಎಲೆ ತುಂಬಿದ್ದನ್ನು ಕಂಡು ಒಬ್ಬ "ಬೇಡ ಅಂದ್ರೂ ಜುಲಾಮಿ ಮಾಡಿ ಇಷ್ಟು ಅನ್ನ ಆಹಾರ ಕೆಡಿಸುತ್ತಿದ್ದಾನಲ್ಲ ಈ ಮನುಷ್ಯ!" ಎಂದು ವಿಷಾದದಿಂದ ಪೇಚಾಡಿಕೊಂಡ.  ಅವನ ಪಕ್ಕದಲ್ಲಿದ್ದವನು ತಟ್ಟನೆ ಉದ್ಗರಿಸಿದ "ಹಾಳು ಮಾಡದೆ ಏನು ಮಾಡಿಯಾನು?  ಅದು ಅವನ ಸ್ವಂತದ್ದಲ್ಲ!"

            *****

ಕೀಲಿಕರಣ: ಕಿಶೋರ್‍ ಚಂದ್ರ

ಮುಂಗಾರು

- ಹಾರಾಸನ

ಶಾಖಸಿಕ್ತ ಪೃಥ್ವಿಯು ಲೀಲಾನ್ವೇಷಣೆಯಲಿ ನಿರಂತ್ಯ ತಿರುಗಾಟದಲಿ ನಿರತ
ತಾಪತಪ್ತವನಿಂಗಿಪ ಜಲಾವೃತದ ಸುಖಾನುಭವಕ್ಕೆ ಹಾತೊರೆಯುತ್ತಾಽ ವಿರತ
ಸ್ನಿಗ್ಧಶ್ವಾಸದಿಂ ಮೃತ್ಯುಭಾಸವ ಕಾಣ್ಬ ಮೂರ್ಛೆಗೆ ನೀಡುತ್ತಾ ಸ್ವಗತ ಸ್ವಾಗತ
ಹಾಗಿರಲು ತಣಿಸಿ ಸುಖವುಣಿಸಲು ಮತ್ತೆ ಜೀವ ತುಂಬಲು ಬಂತು ಮುಂಗಾರು
                ಮತ್ತೆ ಬಂತು ಮುಂಗಾರು

ನೊಂದ ಹೃದಯವದು ಯುದ್ಧಗೈಯುತ ವ್ಯಥೆಯೇ ಕಥೆಯಾಗಿಹ ಜೀವನ
ಚೆಂದ ಮೃಗಕಂದನು ವನರಾಜನ ಪಿಡಿಗೆ ಹೆದರಿ ಒಡುತ್ತಾ ಕಳೆದಿಹ ಯೌವನ
ಹಾತೊರೆದ ಹೃದಯಕ್ಕೆ ಹಾಯೆನಿಸುವ ಗೆಳೆಯನಪ್ಪುಗೆಯ ಸವಿಮಾತಿನಿಂದ
ಬಾಷ್ಪವಾರಿಯ ಹರಿಸಿ ದುಃಖವೆಲ್ಲವ ಸರಿಸೆನ್ನನೇ ತೋಯ್ದುದುದೆನಗೆ ಮುಂಗಾರು
                ಅದೇ ಎನಗೆ ಮುಂಗಾರು

ವಿಶ್ವವೊಂದು ಮನೆ, ಬಿಸುಟೆಲ್ಲ ಭೇದಗಳ, ಜಾತಿ ಮತ ಪಂಗಡಗಳ, ನಾವೆಲ್ಲ ಒಂದೇ
ತತ್ವಸತ್ಯವ ಸಾರುವುದೊಂದೇ ದಾರಿ ಸರ್ವ ಸ್ವಾತಂತ್ರ್‍ಯಕೆ, ಶಾಶ್ವತ ಪರಿಹಾರವೂ ಒಂದೇ
ಏಕತೆಯೊಂದೇ ನಿಜ, ಬಹುವೆಂಬುದು ಮಾಯೆ, ಕರಗುವುದು ಶೀಘ್ರವೇಕತೆಯಲಿ ಲೀನ
ಸರ್ವಶಕ್ತನೆಂಬುವೆವವನ ಕೃಪೆಯ ಸಾಗರದ ಹನಿಹಲವು ಸಾಕದುವೆ ಆತ್ಮಕ್ಕೆ ಮುಂಗಾರು
                ಅದುವೆ ಆತ್ಮಕ್ಕೆ ಮುಂಗಾರು

           *****

ಸ್ಥಾವರ! ಜಂಗಮ?

- ಗಿರಿಜಾಪತಿ ಎಂ. ಎನ್

ಅಂತರಂಗದ ಕದವ ತೆರೆಯಿಸೊ
ಅಂತರಾತ್ಮ ವಾಣಿಯನಾಲಿಸು
ಅಂತಕಾಂತನ ಕೃಪೆಯ ನೆಳಲಲಿ
ಚಿಂತಾತ್ಮನ ಕೊನೆಗಾಣಿಸು ||

ಚಿತ್ತ ಚಿತ್ತಾರ ಬಿತ್ತರ
ಬಣ್ಣ ಬದುಕಿನ ಕೆಡುಕಿಗೆ
ನೀನು ನಾನು ಎಲ್ಲರಿಲ್ಲಿ
ಮೃತ್ಯುಗೈಯಮಣ್ಣ ಬಿಂದಿಗೆ ||

ಬಿಸಿಲಗುದುರೆಯ ಸವಾರಿಯಲ್ಲಿ
ಸವೆಸಬಹುದೆ ಹಾದಿಯ
ಹುಸಿಹಂಬಲದ ನಾವೆಯಲ್ಲಿ
ಸೇರಬಹುದೆ ನಿಜ ತೀರವ ||

ಭಿತ್ತಿ ಭಿತ್ತಿಯು ಭೀತಿ ಬಲೆಯ
ಭಿತ್ತಿ ಬೆದರಿಸೂ ಸ್ಥಾವರ
ಆತ್ಮದಾನಂದದಾನಂದದ
ಜಂಗಮವಿಂದು ದುಸ್ಥರ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಜಿ.ಎಸ್. ಶಿವರುದ್ರಪ್ಪನವರ ಕಾವ್ಯದಲ್ಲಿ ಸಾಮಾಜಿಕ ಸಾಮರಸ್ಯದ ಆಶಯಗಳು

- ತಾರಿಣಿ ಶುಭದಾಯಿನಿ ಆರ್

ಗಣಕ-ತಂತ್ರಜ್ಞಾನವು ಜನಪ್ರಿಯವಾಗುತ್ತಿರುವ ಕಾಲ ಇದಾಗಿರುವುದಿಂದ ಮಾಹಿತಿ ಸಂಗ್ರಹ ಮತ್ತು ಒದಗಿದ ಮಾಹಿತಿಯನ್ನು ಆಯಾ ಆವಶ್ಯಕತೆಗಳಿಗೆ ಆನುಗುಣವಾಗಿ ವಿಭಜಿಸಿ ನೋಡುವ ತಂತ್ರವೂ ಕ್ಕೆಗೆಟುಕುವಂತಿದೆ. ಸಾಹಿತ್ಯದ ಸಂದರ್ಭದಲ್ಲಿಯೂ ಈ ರೀತಿಯ ವಿಭಜನೆಯ ಕ್ರಮಗಳು ಚಾಲ್ತಿಗೆ ಬಂದಂತೆ ಕಾಣುತ್ತಿವೆ. ಸಾಹಿತಿಯೊಬ್ಬನ ಜೀವನ ಚರಿತ್ರೆಯ ವಿವರಗಳು, ಆವನ ಸಾಧನೆಗಳು, ಪಡೆದ ಪುರಸ್ಕಾರಗಳು-ಇವೆಲ್ಲವನ್ನು ಮಾಹಿತಿಯಾಗಿ ಸಂಗ್ರಹಿಸಿ, ನಮಗೆ ಬೇಕಾದ ವಾದಗಳಿಗಾಗಿ ಅವನ ಸಾಹಿತ್ಯವನ್ನು ವಿಭಜಿಸಿ ನೋಡುತ್ತಿದ್ದೇವೇನೋ ಎಂಬ ಆನುಮಾನ ಕಾಡುತ್ತದೆ. ಜಿ‌ಎಸ್‌ಎಸ್ ಆವರೇ ಒಂದು ಕಡೆ ಬರೆಯುವಂತೆ,
  ತುಂಬಿದ
  ಮೈಮಾಂಸರಕ್ತ
  ಎಲ್ಲವನ್ನು ಹೀರಿ
  ಬರಿಯ ಮೂಳೆಯನ್ನಷ್ಟನ್ನೇ
  ಉಳಿಸಿ ಪಟ್ಟಿ ಹಾಕಿದ್ದೀರಿ.
  ಕವಿಯನ್ನು ಸಲೀಸಾಗಿ ಜೀರ್ಣಿಸಿಕೊಂಡು

  ಕವಿ ತನ್ನ ಜೀವಮಾನದಲ್ಲಿ ಬರೆಯುವುದು ಒಂದೇ ಕವಿತೆಯ ಎನ್ನುವ ಮಾತಿದೆ. ಅವನು ಹೊಳೆಯಿಸುವ ವಿಚಾರಗಳಾಗಲಿ, ಭಾವಗಳಾಗಲಿ ಒಂದು ಮೂಲದ ವೈಚಾರಿಕ, ಭಾವುಕ ವಿಸ್ತರಣೆಯೂ ಆಗಿರುತ್ತದೆ. ಈ ಮಾತಿನ ಹಿನ್ನೆಲೆಯಲ್ಲಿ ಜಿ‌ಎಸ್‌ಎಸ್ ಕವಿತೆಗಳನ್ನು ಸಾಮಾಜಿಕ ಕವಿತೆ, ಪ್ರಕೃತಿ ಕವಿತೆ ಎಂದೆಲ್ಲ ವಿಭಜಿಸಿ ನೋಡುವುದಕಿಂತ ಅವನ್ನೆಲ್ಲ ಕವಿ ತನ್ನ ತಾತ್ವಿಕ ನೆಲೆಗಟ್ಟಾಗಿ ರೂಪಿಸಿಕೊಳ್ಳುವುದರ ಬಗ್ಗೆ ನನಗೆ ಆಸಕ್ತಿಯಿದೆ.  ಪ್ರಕೃತಿ, ಸಾಮಾಜಿಕತೆ, ವೈಯಕ್ತಿಕತೆ, ತತ್ವ- ಇವುಗಳೆಲ್ಲವನ್ನು ಅವರು ಮೇಳವಿಸಿಕೊಂಡು ಆಭಿವ್ಯಕ್ತಿಗೆ ಕ೦ಡುಕೊಳ್ಳುವ ಕ್ರಮಗಳು, ವಿವೇಚಿಸುವ ಸಂದರ್ಭಗಳು ಯಾವ ರೀತಿಯದು ಎಂದು ವಿವೇಚಿಸುವ ಪ್ರಯತ್ನವನ್ನು ಇಲ್ಲಿ ಮಾಡಲು ಯತ್ನಿಸಿದ್ದೇನೆ.

೧೯೫೧ ರಿಂದ ತೀರಾ ಇತ್ತೀಚಿನವರೆಗು ಕಾವ್ಯರಚನೆಯಲ್ಲಿ ಆಸಕ್ತಿ ಉಳಿಸಿಕೊಂಡು ಆದರಲ್ಲಿ ತೊಡಗಿಸಿಕೊಂಡ ಕವಿ ಜಿ. ಎಸ್. ಶಿವರುದ್ರಪ್ಪ ಅವರ ಕಾವ್ಯವು ಕಾಲಕ್ಕೆ ತಕ್ಕ ಸಂವೇದನೆಗಳನ್ನು ರೂಪಿಸಿಕೊಳ್ಳುತ್ತ ನಿರಂತರವಾಗಿ ಪ್ರಯೋಗಶೀಲತೆಯಿಂದ ಕೂಡಿದೆ.  ವಿಮರ್ಶಕರಾದ ಕೆ. ಜಿ. ನಾಗರಾಜಪ್ಪನವರು ಗುರುತಿಸುವಂತೆ, "ಆವರ ಸಾಹಿತ್ಯ ಬದುಕು ಪ್ರಜ್ಞಾಪೂರ್ವಕವಾಗಿ ಸಂವೇದನಾತ್ಮಕವಾದುದು ಮತ್ತು ಪ್ರತಿಕ್ರಿಯಾತ್ಮಕವಾದುದು".  ಸಂವೇದನೆಗಳನ್ನು ಬದಲಾಯಿಸಿಕೊಳ್ಳುವುದು ಕಷ್ಟ ಎಂದು ಟಿ. ಎಸ್. ಎಲಿಯಟ್ ಯೇಟ್ಸ್, ಕವಿಯ ಬಗ್ಗೆ ಬರೆಯುವಾಗ ಹೇಳುತ್ತಾನೆ.  ಸಂವೇದನೆಗಳು ಕಾಲಕ್ಕೆ ತಕ್ಕಂತೆ  ರೂಪುಗೊಳ್ಳುವಂತಿವೆ ಎನ್ನುವುದನ್ನು ಇಲ್ಲಿ ಗಮನಿಸಬಹುದಾಗಿದೆ. ರಮ್ಯಸಂವೇದನೆಯಿಂದ ಕಾವ್ಯ ಬರೆಯಲಾರಂಭಿಸಿದ ಕವಿ ಜಿ‌ಎಸ್‌ಎಸ್ ಆನಂತರ ತಮ್ಮ ಸಂವೇದನೆಗಳನ್ನು ಬದಲಾಯಿಸಿಕೊಳ್ಳುವಂತೆ ಕಾಣುತ್ತಾರೆ.  ಆದರೆ ಅವರಲ್ಲಿ ರಮ್ಯಕನಸುಗಾರಿಕೆಯು ಉಳಿದಿದೆ.  ಕಾಲಕ್ಕೆ ತಕ್ಕ ಪ್ರತಿಸ್ಪಂದನ ನೀಡುತ್ತಲೇ  ತಮ್ಮ ತಾತ್ವಿಕ ನಿಲುವುಗಳಿಗೆ ಆವನ್ನು ಒಗ್ಗಸಿಕೊಳ್ಳುವುದು ಜಿ‌ಎಸ್‌ಎಸ್ ಆವರ ರೀತಿ.

(ಅ)

ಜಿ‌ಎಸ್‌ಎಸ್ ಆವರ ಕಾವ್ಯದಲ್ಲಿ ಸಾಮಾಜಿಕ ಸಾಮರಸ್ಯದ ಆಶಯಗಳೆಂಬ ವಿಷಯವನ್ನು ನೆನೆಯುವಾಗ ಕನ್ನಡ ಕಾವ್ಯ ಸಂದರ್ಭದಲ್ಲಿ ಸಾಮಾಜಿಕ  ಸಾಮರಸ್ಯವನ್ನು ಪ್ರತಿಪಾದಿಸುವ ಎರಡು ಕವಿ-ಪರಂಪರೆಗಳ ನೆನಪಾಗುತ್ತದೆ.  ಅವರೇ ಬಸವಣ್ಣ ಮತ್ತು ಕುವೆಂಪು. ಈ ಇಬ್ಬರ ಸಾಮಾಜಿಕ ಕಾಳಜಿಯ ಸತ್ವಗಳನ್ನು ಜಿ‌ಎಸ್‌ಎಸ್ ತಮ್ಮ ಕಾವ್ಯದಲ್ಲಿ ಬಲಗೊಳಿಸಿ ಪ್ರತಿಪಾದಿಸುತ್ತಾರೆ ಎನ್ನಬಹುದು.

ಬಸವಣ್ಣನವರ ಸಾಮಾಜಿಕ ಕಾಳಜಿಯು ಭಕ್ತಿಯಿಂದ ಪ್ರೇರೇಪಿತವಾಗಿದೆ.  ಇಹವು ಸರಿಯಾಗಿದ್ದರೆ ಪರವೂ ಸರಿಯಾಗಿದ್ದೀತು ಎನ್ನುವ ಆಶಯಗಳು  ಬಸವಣ್ಣನವರದು. ಇದಕ್ಕಾಗಿ ಬಸವಣ್ಣನದು ಸುಧಾರಣಾವಾದಿ ನೆಲೆಯಲ್ಲಿ ನಿಲ್ಲುತ್ತಾರೆ. ಆದೇ ಪಾತಳಿಯಲ್ಲಿ ಸಾಮಾಜಿಕ ಕಳಕಳಿಯು ಹುಟ್ಟುತ್ತದೆ. ಬಸವಣ್ಣ ಕೂಡಲ ಸಂಗಮನನ್ನು ಎಷ್ಟು ಆದ್ರತೆಯಿಂದ ನಿರ್ವಚಿಸಿಕೊಳ್ಳುತ್ತಾರೋ ಆಷ್ಟೇ ಭಾವದಲ್ಲಿ ಸಮಾಜದ ಕ್ಕೆಂಕರ್ಯವನ್ನು ಮಾಡಬಲ್ಲರು. ಭಕ್ತಿಯೆಂಬುದು ಶ್ರದ್ದೆಯ ಉನ್ನತ ಸ್ಥಿತಿ. ಈ ಜಗತ್ತಿನ ಆಗುಹೋಗಳ ಬಗ್ಗೆ ಶ್ರದ್ಧೆಯಿರುವ, ಅದರ ಉನ್ನತಿಗಾಗಿ ಬಯಸುವ ಭಾವವನ್ನೇ ಜಿ‌ಎಸ್‌ಎಸ್ ಕಾವ್ಯವು ತೋರುತ್ತದೆ.

ಬಸವಣ್ಣನವರ ಸಾಮಾಜಿಕ ಕಳಕಳಿಯು ಭಕ್ತಿಯ ಬಲದಿಂದ ಬಂದರೆ,  ಕುವೆಂಪು ಆವರಲ್ಲಿ ಆದು ಬೇರೆ ಸ್ವರೂಪದ್ದಾಗಿದೆ. ಆವರ ಸಾಮಾಜಿಕ ಸಾಮರಸ್ಯದ ಆಶಯಗಳು ಸ್ಪೂರ್ತಿ ಪಡೆದುಕೊಂಡಿದ್ದು ಇಪ್ಪತ್ತನೆಯ ಶತಮಾನದ ಆರಂಭಕಾಲದಲ್ಲಿ ರೂಪುಗೊಳ್ಳುತ್ತಿದ್ದ ಸ್ವಾತಂತ್ರ್ಯ ಚಳವಳಿಯ ಭಾಗವಾಗಿ ಬಂದ ಸುಧಾರಣಾವಾದಿ ತತ್ವಗಳಿಂದ.  ಆ ತತ್ವಗಳು ಜ್ಞಾನೋದಯದ ದರ್ಶನಗಳೂ ಆಗಿದ್ದವು. ಈ ಹಿನ್ನೆಲೆಯಲ್ಲಿ ಕುವೆಂಪು ಪಡೆದುಕೊಂಡ ಪರಂಪರೆಯ ಕಲ್ಪನೆಗಳಾದ `ಶಿವ' `ಅಶಿವ'ಗಳು ಸಾಮಾಜಿಕ ಅನಿಷ್ಟಗಳನ್ನು ನಿವಾರಿಸಿಕೊಳ್ಳುವ ಬಲ ಅವರಿಗೆ ತಂದುಕೊಡುತ್ತವೆ.  ಪರಿಷ್ಕರಣೆಯ ಮಾರ್ಗದ ವಿವೇಕಾನಂದರ೦ತಹ ವ್ಯಕ್ತಿತ್ವಗಳು ಕುವೆಂಪು ಸಾಮಾಜಿಕ ಕಲ್ಪನೆಯ ಆಧಾರಗಳು.  ಈ ಇಬ್ಬರು ಕವಿಪರಂಪರೆಗಳನ್ನು ಸಂಚಯನ ಮಾಡಿಕೊಂಡು ಜಿ.ಎಸ್.ಎಸ್ ಕಾವ್ಯ ತನ್ನ ಹಾದಿಯನ್ನು ನಿರ್ಮಿಸುತ್ತದೆ.  ಒಂದು ಆಧ್ಯಾತ್ಮಿಕ ಒಳನೋಟವೇ ಅವರ ಕಾವ್ಯದ ಆದಿಯಿಂದ ಅಂತ್ಯದವರೆಗು ಮುಂದುವರೆಯುತ್ತದೆ.  ಬಹುಷಃ `ತೀರ್ಥವಾಣಿ'ಯಂತಹ ಸಂಕಲನವು ಬಂದಿದ್ದು ಈ ಆಳದ ಶ್ರದ್ಧಯಿಂದಲೇ ಇರಬಹುದು.  ಅವರ ಮೊದಲ ಪ್ರಕೃತಿ ಕವಿತೆಗಳಲ್ಲಿ ಕಾಣುವ ಮೆಟಫಿಸಿಕಲ್ ಅಂಶವು ಸಾಮಾಜಿಕ ಆಶಯಗಳಲ್ಲಿಯೂ ಸಾಮಾಜಿಕ ಗುಪ್ತಗಾಮಿನಿಯಾಗಿ ಚಲಿಸುವುದನ್ನು ಗುರುತಿಸಬಹುದು.

ಸತ್‍ ಶಕ್ತಿಯನ್ನು ಆಶಿಸುವ ಕವನಗಳನ್ನು ತಮ್ಮ ಆರಂಭದ ಕಾವ್ಯದಲ್ಲಿ ಬರೆದಿರುವ ಜಿ‌ಎಸ್‌ಎಸ್ ಅವರಿಗೆ ಆತೀವವಾಗಿ ಕಾಡುವುದು ಕೃಷ್ಣಶಕ್ತಿ ಎಂಬ ಸಂಕೇತ. ಗಾಢಾಂಧಕಾರದಲ್ಲಿ ಕಾಯುವ, ಪೊರೆಯುವ ಶಕ್ತಿಯಾಗಿ ಅದನ್ನು ಅವರು ಪರಿಭಾವಿಸುತ್ತಾರೆ.
  ಕತ್ತಲ ಗೋವರ್ಧನವನ್ನೆತ್ತುವ
  ಸಾಸಿರ ಶ್ರೀಕೃಷ್ಣನ ಬೆರಳು
                (ದೀಪಾಪಳಿ)
`ಕೃಷ್ಣಶಕ್ತಿ'ಯ ಸಾಲುಗಳನ್ನು ಇಲ್ಲಿ ಉಲ್ಲೇಖಿಸಬಹುದು:
  ಸುತ್ತಮುತ್ತ ಅಂಧಕಾರ
  ಮಳೆಹನಿಗಳ ಪಂಜರ
  ದೈತ್ಯಸೆರೆಯ ಕಂಬಿಯೊಳಗೆ
  ಬಂತು ದೇವಕು೦ಜರ
             (ಕೃಷ್ಣಶಕ್ತಿ)
ಕೊಳಲು ಕೂಡ ಈ ವಿಶಾಲಶಕ್ತಿಯ ಸಂಕೇತವಾಗಿಯೇ ಬರುತ್ತದೆ.

ಹಾಗೆಯೇ ಕತ್ತಲು-ಬೆಳಕು ಆವರ ಕಾವ್ಯದಲ್ಲಿ ಬರುವ ಎರಡು ಆಂಶಗಳು. ಅವು ಪರಸ್ಪರ ವಿರೋಧಿ ಗುಣವುಳ್ಳವು.  ಬೆಳಕಿನ ಎದುರಿಗೆ `ಕಡುಮೌನದ ಇರುಳಿದೆ'.  ಬೆಳಕು ಚೈತನ್ಯಶಾಲಿಯಾದಾದರೆ ಕತ್ತಲೆ ಜಡ ಎಂಬ ನಿಲುವು ಇದೆ :
  ಜೀವಜೀವಾಳದಲಿ
  ಬಾಳಿನೊಳ್ಪನೆ ಬಗೆದು
  ಉದ್ಧಾರ ಯೋಗದಲಿ ತೊಡಗಿರುವ ಬೆಳಕೇ
             (ಆಹ್ವಾನ)
ಈ ರೀತಿ ಹೇಳುವಾಗ `ಜೀವ ಕತ್ತಲೊಳಿದೆ ! ಜಡದ ವೋಲದು ಬಿದ್ದಿದೆ' ಎನ್ನುವ ಸ್ಥಿತಿಯನ್ನು ವಿವರಿಸಲಾಗಿದೆ.  ಇದರ ಜೊತೆಯಲ್ಲಿಯೇ ಆಗಾಧವಾಗಿ ಹರಡಿದ ಕತ್ತಲಿನಂತೆ ಕಾಡುವ ಬಿರುಗಾಳಿಯೂ ಇದೆ (`ಬಿರುಗಾಳಿಯಬ್ಬರ' ಎನ್ನುವುದು ಆವರ ಕಾವ್ಯದಲ್ಲಿ ಸಾಧಾರಣವಾಗಿ ಬಳಕೆಯಾಗುವ ಪದಪುಂಜ) ಆದರೆ ಇವುಗಳಲ್ಲಿ ಯಾವುದೇ ಸತ್‍ಶಕ್ತಿಯ ಮೇಲಿನ ಆವರ ನಂಬಿಕೆಯನ್ನು ಕುಂದಿಸುವಂತವಲ್ಲ. ಕೇಡು (evil) ಕೊನೆ ಮುಗಿಯುವಂತದ್ದಲ್ಲ ಎಂದು ತಿಳಿದರೂ ಅದನ್ನು ಬೆಳಕಿನ ಮೂಲಕ ದೂರಸರಿಸಬಹುದೆಂಬ ನಂಬಿಕೆ, ಶ್ರದ್ಧೆಗಳು ಕವಿಗಿದೆ.  ಆದ್ದರಿಂದಲೇ ಬೆಳಕನ್ನು ಆವರು `ಮುದ್ದು ಬೆಳಕೇ', `ಸ್ವರ್ಣಬೆಳಕೇ' ಎಂದು ಕರೆಯುತ್ತಾರೆ. ಅಷ್ಟೇ ಆಲ್ಲದೆ ಬೆಳಕು ಒಂದು ಸಣ್ಣ ಹಣತೆಯ ರೂಪದಲ್ಲಿ ಒದಗಿ ಬಂದರು ಸರಿ ಅದು ಕೇಡನ್ನು ಅಷ್ಟರ ಮಟ್ಟಿಗೆ ದೂರಸರಿಸುವ ಶಕ್ತಿಯೆನ್ನುವ ನಂಬಿಕೆ ಅವರದ್ದು.  ಈ ತಾತ್ವಿಕತೆಯೇ ಅವರ ಮುಂದಿನ ಕಾವ್ಯಕ್ಕೆ ಮೂಲಾಧಾರವಾಗಿ ಉಳಿಯುತ್ತದೆ. ಹಣತೆಯೆನ್ನುವುದು ಈ ದೃಷ್ಪಿಯಲ್ಲಿ ಒಂದು ಆಶಯದ ರೂಪಕವೂ ಆಗಿ ಉಳಿಯುತ್ತದೆ.

(೪)
ಜಿ‌ಎಸ್‌ಎಸ್ ಆವರ ಕಾವ್ಯದಲ್ಲಿ ಕಾಣಿಸುವ ನಾನು, ನೀನು ಎಂಬ ಪದ ಗಮನಿಸಬೇಕು. `ನಾನು' ಎಂಬುದಲ್ಲಿ ತನ್ನೊಳಗನ್ನು ಕಂಡುಕೊಳ್ಳುವ ಆತ್ಮನಿರೀಕ್ಷಣೆ ಕ್ರಿಯಾಚೇತನ, `ನೀನು' ಎಂಬುದು ಸ್ವಯಂಪೂರ್ಣವಾದ ಎದುರು ಚೇತನ.  ನಾನು ಎಂಬ ಭಾವವು ಇದರ ಜೊತೆ ಸಾಮರಸ್ಯವನ್ನು ಸಾಧಿಸುವ ಪ್ರಕ್ರಿಯೆಯನ್ನು ನಿರೀಕ್ಷಿಸುತ್ತದೆ. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನಾನು ಎಂಬುದು ಸ್ವಯಂಪೂರ್ಣವಾಗಿ ಬೆಳೆದು ಮಹತ್ತಿನೊಡನೆ ಗುರುತಿಸಿಕೊಳ್ಳುವ ಅಸ್ತಿತ್ವ. ಇದನ್ನೇ ಡಿ. ಆರ್. ನಾಗರಾಜ್ ಆವರು ಜಿ.ಎಸ್.ಎಸ್.ಕುರಿತ ತಮ್ಮ ಲೇಖನದಲ್ಲಿ ಜಿ‌ಎಸ್‌ಎಸ್ ಕಾವ್ಯದ ಮೊದಲಘಟ್ಟ ಸೌಂದರ್ಯಾತ್ಮಕ, ಅನಂತರದ್ದು ಮೆಟಫಿಸಿಕಲ್ ಮತ್ತು ಕೊನೆಯಲ್ಲಿ ಅದು ರುದ್ರತಿಳಿವಿನದಾಗಿರುತ್ತದೆ ಎಂದು ಗುರುತಿಸಿದ್ದಾರೆ.

ಶಿವರುದ್ದಪ್ಪನವರ ಪ್ರಕೃತಿ ಕವನದಲ್ಲಿ ಕಾಣುವ ಆಧ್ಯಾತ್ಮಿಕ ಭಾವದ ನಾನು ಕ್ರಮೇಣ ಆತ್ಮನಿರೀಕ್ಷಣೆಯ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಅಂದರೆ ಇದು ಬಸವಣ್ಣನವರ ವಚನಗಳಲ್ಲಿ ಎದ್ದುಕಾಣುವ ಆತ್ಮನಿರೀಕ್ಷಣೆಯ ಗುಣಕ್ಕೆ ಹತ್ತಿರವಿದೆ.  ಆಗಿದೆ.  ಸುತ್ತಲ ಪ್ರಪಂಚದ ಆಸ್ತವ್ಯಸ್ತಗಳನ್ನು ಕಾಣುವ ಕವಿಗೆ ನಾನು ಎಂಬುದು ಶುದ್ಧಭಾವದಿಂದ ಒದಗದಿದ್ದರೆ ಆತ್ಮನಿರೀಕ್ಷಣೆ ಸಾಧ್ಯವಿಲ್ಲ. ಈ ಪ್ರೇರಣೆಯಿಂದಲೇ ಆತ್ಮನಿರೀಕ್ಷಣೆಯಲ್ಲಿ ತೊಡಗುವ ಕವಿ ಸಾಮಾಜಿಕ ಆವಸ್ಥೆಯ ಪಾಲುದಾರಿಕೆಯ ಹೊಣೆಯನ್ನು ಹೊರುತ್ತಾರೆ.  `ಅವಸ್ಥೆ' ಕವನವನ್ನೇ ಗಮನಿಸಿದರೆ, `ಚಳಿಗೆ ಗಡಗಡ ನಡುಗಿ ಮುದುರಿ ಮೂಲೆಗೆ ಕೂತ ಹರಕು ಚಿಂದಿಯ ಪುಟ್ಟ ಹುಡುಗ', `ಗೇಟಿನಾಚೆ ತಿರುಪೆಯ ಮುದುಕಿ ಆನ್ನಕ್ಕೆ ಅರಚುವುದು',  `ಕೊಳೆಗೇರಿಯಲ್ಲಿ ಚಿಂದಿಛಾವಣಿಯಲ್ಲಿ ಬದುಕಿರುವಸಂಖ್ಯರು'- ಇವರೆಲ್ಲಾ ಹೀಗಿರೋದಕ್ಕೆ ನಾನೂ ಕಾರಣ ಆನ್ನಿಸುತ್ತೆ.  ಬೆಚ್ಚನೆ ಮನೆಯಲ್ಲಿ ನಾ ಹೇಗೆ ತೆಪ್ಪಗಿರಲಿ?  ಎಂದು ಕೇಳಿಕೊಳ್ಳುವ ಕವಿ ಇಲ್ಲಿದ್ದಾರೆ.  ಹಾಗೆಯೇ ಈ ತಳಮಳ ಇದೆ :
  ಈ ಕೂಗುಗಳು, ನೋವುಗಳು
  ಈಟಿಯ ಹಾಗೆ ನಾಟಿ ನುಗ್ಗುತ್ತವೆ
  ಮನೆಯೊಳಕ್ಕೆ, ಮನದೊಳಕ್ಕೆ
  ನಿದ್ದೆಯೊಳಕ್ಕೆ ಕನಸಿನೊಳಕ್ಕೆ
  ನಾನೇನೂ ಮಾಡಲಾರದ ಆಸಹಾಯತನಕ್ಕೆ
  ತಿವಿದು ನನ್ನೆಲ್ಲವನ್ನೂ
  ಗಾಯಗೊಳಿಸುತ್ತದೆ.
             (ಅವಸ್ಥೆ)

   (ಈ)
ಆತ್ಮ ನಿರೀಕ್ಷಣೆಯ ಭಾವದ ಜೊತೆಯಲ್ಲಿಯೇ ಕಾಣಿಸಿಕೊಳ್ಳುವ ಸಿಟ್ಟು, ಸಾತ್ವಿಕ ರೋಷಗಳು ಜಿ‌ಎಸ್‌ಎಸ್ ಕಾವ್ಯದಲ್ಲಿ ಇರದೇ ಇಲ್ಲ- ವ್ಯವಸ್ಥೆಯ ಬಗ್ಗೆ 'ಅವಸ್ಥೆ' ಕವಿತೆಯಲ್ಲಿ ಅವರು ಬರೆಯುವಂತೆ,
  ರೇಗುತ್ತೇನೆ ನನ್ನ ಮೇಲೆ
  ನನ್ನಂಥವರ ಮೇಲೆ
  ನನ್ನಂಥವರ ಒಳಗೊಂಡ ಈ
  ಸಮಾಜದ ಮೇಲೆ
  ಇದರ ಪ್ರತಿನಿಧಿಯಾದ ವ್ಯವಸ್ಥೆಯ ಮೇಲೆ
  ಆದು ನಿರಂತರವಾಗಿ ಉಳಿಸಿರುವ ಈ
  ಅವಸ್ಥೆಯ ಮೇಲೆ.
            (ಆವಸ್ಥೆ)

ಇಲ್ಲಿ ಒಂದು ಅಂಶವನ್ನು ಗಮನಿಸಬೇಕು. ಆದೆಂದರೆ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲದಿದ್ದರೆ, ಆದರ ಮೇಲೆ ಸಿಟ್ಟು, ಆಕ್ರೋಶಗಳು ಹುಟ್ಟುವುದಿಲ್ಲ. ಈ ದೃಷ್ಟಿಯಲ್ಲಿ ಜಿ‌ಎಸ್‌ಎಸ್ ಆದರ ಕಾವ್ಯ ಚಿಕಿತ್ಸಕ ನೆಲೆಯದ್ದಾಗುತ್ತದೆ.

ವ್ಯವಸ್ಥೆಯಲ್ಲಿ ಉಂಟಾದ ಏರುಪೇರುಗಳು ಒ೦ದು body politicsನ ಸ್ವರೂಪವನ್ನು ಕೆಡಿಸಿ, ಸಾಮರಸ್ಯಕ್ಕೆ ತಡೆಯೊಡ್ಡುತ್ತವೆ ಎನ್ನುವುದು ಕವಿಯ ಗ್ರಹಿಕೆ.  ಆ ಏರುಪೇರುಗಳಲ್ಲಿ ನಗರೀಕರಣ ಆಥವಾ ಜಾಗತೀಕರಣ ಇರಬಹುದು ;  ಸ್ವಾತಂತ್ರ್ಯೋತ್ತರ ಕಾಲದಲ್ಲಿ ಉಂಟಾದ ರಾಜಕೀಯ ಸ್ಥಿತ್ಯಂತರಗಳಿಂದ ಆಥವಾ ಮೌಲ್ಯಪಲ್ಲಟಗಳಿಂದ ಸಾಮರಸ್ಯಕ್ಕೆ ಆಡ್ಡಿಯುಂಟಾಗುತ್ತದೆ ಎಂಬುದೇ ಇಲ್ಲಿನ ಗ್ರಹಿಕೆ.

ನಗರಪ್ರಜ್ಞೆ ಉದಯಿಸಿದಂತೆಲ್ಲ ಅಸ್ತಿತ್ವವಿಲ್ಲದ ಜನ ಸಮೂಹ ಸೃಷ್ಟಿಯಾಗಿ ಬೇರುಗಳಿಲ್ಲದೆ ಬದುಕುವುದನ್ನು ಕಾಣುವ ಕವಿಗೆ ಅದರ ಬಗೆ ಹೇವರಿಕೆಯಿದೆ.  ಜನರನ್ನು ಎಬ್ಬಿಸಲು ಕೋಳಿಯ ಆವಶ್ಶಕತೆಯಿಲ್ಲವೆಂದೂ, ಇಲ್ಲಿಯ `ಕಪ್ಪು ಹೊಗೆಯನ್ನು ಬಳಿದ ಮಿಲ್ಲುಗಳ ಜೀವವ ಸೇದಿಕೊಲ್ಲುವ ಕೂಗು' ಎಬ್ಬಿಸುತ್ತದೆ ಎಂದು ಆವರ ಕವನ `ಕೋಳಿಕೂಗಿತು' ಹೇಳುತ್ತದೆ. `ಮುಂಬೈಜಾತಕ' ಕವನವಂತು ನಗರೀಕರಣದ ಬಗ್ಗೆ ಆನಾದರವನ್ನೇ ತೋರುವಂತಿದೆ. ಇದು ಆಧುನಿಕವಾದದ ಕಾಣ್ಕೆ ಆಷ್ಟೇ ಅಲ್ಲ, ರೊಮ್ಯಾಂಟಿಕ್ ಭಾವವೂ ಹೌದು.

ಎಂಭತ್ತರ ದಶಕದ ರಾಜಕೀಯವನ್ನು ನವ್ಯರು ಸಿನಿಕತೆಯಿಂದ ನೋಡುವುದುಂಟು. ಆಧುನಿಕವಾದದ ಪರಿಣಾಮದಿಂದ ಉಂಟಾದ ಭ್ರಮನಿರಸನವು (disillusionment)  ಅವರಲ್ಲಿ ಕಾಣಿಸಿಕೊಳ್ಳುತ್ತದೆ. ಜಿ‌ಎಸ್‌ಎಸ್ ಅವರು ಗಾಂಧಿ ವಿನೋಬಾ ಕಾಲದ ಸತ್ವಶಾಲೀ ವ್ಯಕ್ತಿತ್ವಗಳನ್ನು ಕಂಡಂತೆಯೇ ನೆಹರೂ ಕಾಲದ ಆಷಾಡಭೂತಿ ರಾಜಕೀಯ ವ್ಯಕ್ತಿತ್ವಗಳನ್ನೂ ಕಂಡವರು.  ಆಧುನಿಕವಾದವು ಬಿಂಬಿಸಿದ ಭ್ರಮನಿರಸನದ ಅಂಶವು ಆವರಲ್ಲಿ ಕ೦ಡು ಬರುವಂತಿದ್ದರೂ ಆದು ನೇತ್ಯಾತ್ಮಕವಾಗಿ ತೋರುವುದಿಲ್ಲ. ರಾಜಕೀಯ ಪಲ್ಲಟಗಳಂತೆ ವ್ಯಕ್ತಿತ್ವಗಳಲ್ಲಿ ಉಂಟಾದ ಮೌಲ್ಯಪಲ್ಲಟಗಳಿಂದ ನೊಂದ ಕವಿಗೆ ಸಿಟ್ಟು, ಆಕ್ರೋಶಗಳು ಹುಟ್ಟುತ್ತವೆ. ವ್ಯವಸ್ಥೆಯ ಮೇಲಿನ ನಂಬಿಕೆ ಅವರಿಗಿದೆ.  ಆದ್ದರಿಂದ ಸ್ವಾರ್ಥಸಾಧಕತನ, ಆಸೆಬುರುಕತನ ಇತ್ಯಾದಿಗಳು ಸಾಮರಸ್ಯವನ್ನು ಕದಡುವ ದುಷ್ಟತನವು ಎಂದು ಆವರಿಗೆ ಕಾಣುತ್ತದೆ.  ವ್ಯವಸ್ಥೆ ಆವರಿಗೆ `ಹದ್ದು ನರಿ ತೋಳ ರಾಕ್ಷಸ ರಾಜ್ಯ'.  ಹೀಗೆಂದು ಬಣ್ಣಿಸುವಾಗ ಆವರಿಗೆ ಬದಲಾದ ವರ್ತಮಾನದ ಆರಿವು ಇದೆ :
  ಒಳಪದರ ತಕ್ಕಷ್ಟು ಸವೆದಿದೆ
  ವರ್ತಮಾನದ ಮತ್ತೆ
  ವಾಸ್ತವದ ಕಣ್ಣು ತೆರದಿದೆ.
     (ಕುಟುಂಬ ಯೋಜನೆಯ ವಿಚಾರ)

ಈ ಆಶಾಭಂಗವು `ಭೀಮಾಲಾಪ'ದಂತಹ ಕವಿತೆಗಳಲ್ಲಿ ಇನ್ನಷ್ಟು ಸ್ಫುಟವಾಗಿದೆ. ಒಂದೆಡೆ ಪ್ರಭುತ್ವದ ನಿರಂಕುಶತೆಯು ಕವಿಗೆ ಸೋಲಿನ ಹಾಡುಗಳನ್ನು ನಿರೂಪಿಸುವಂತೆ ಮಾಡಿದೆ :
  ಕಂಡ ಕಂಡ ಕಡೆ ಸೊಂಡಿಲ ಚಾಚುವ
  ಆನೆಗೆ ಆಂಕುಶವಿಲ್ಲ
    (ಸೋಲಿನ ಹಾಡು)
  ಕಾಡು ಕುದುರೆಗಳ ಹೂಡಿದ ರಥಕ್ಕೆ
  ದಾರಿಯ ಹಂಗಿಲ್ಲ
    (ಸೋಲಿನ ಹಾಡು)
  `ಸಾಕು ನಿಲ್ಲಿಸು ಸಾಮಗಾನ' ಕವಿತೆಯನ್ನು ಬರೆಯುವಾಗ `ಸಾಮಗಾನ' ಎಂದು ಮಧುರ ಧ್ವನಿಯ ಹೊರಡಿಸಿದ್ದ ಕವಿ ಸಿಟ್ಟಿಗೇಳಲು ಕಾರಣವಿದೆ.  ಪ್ರಭುತ್ವದ ಸೋಲು ಅವರ ಸತ್ವಹೀನ ಸಾಧನೆಗಳಲ್ಲಿದೆ :
  ದೇಶಾದ್ಯಂತ ಆಣೆಕಟ್ಟುಗಳ ಕಟ್ಟಿ ನಾವು
  ಬೆಳೆದಿದ್ದೇನು ಬರೀ ಹಸಿವೆ?
  ಹೊಲಗದ್ದೆಗಳ ತುಂಬ ತೆನೆಯೆತ್ತಿ ತೂಗುವುದೇನು?
  ಹಸಿರೆ ಆಥವಾ ನಿಟ್ಟುಸಿರೆ?
     (ಸಾಕು ನಿಲ್ಲಿಸು ಸಾಮಗಾನ)

ಇದರ ಜೊತೆಗೆ ಈ ಸಾಲುಗಳನ್ನು ನೋಡಬೇಕು :
  ಇದುವರೆಗು ಬಿತ್ತಿದ್ದು ಬೆಳೆಯಾಗಿ ತೆನೆದೂಗಲಿಲ್ಲ
  ಬೀಜವೇ ಐಬೋ, ನೆಲದಲ್ಲಿ ಹದವಿಲ್ಲವೊ
  ಗಿಡವಾಗಿ ಪುಟಿದೇಳಲೇ ಇಲ್ಲ.
                    (ವಿಫಲ)
ಇಲ್ಲೆಲ್ಲಾ ಆತ್ಮನಿರೀಕ್ಷಣೆಯ ಅಂಶವು ಸಾಮೂಹಿಕ ಸ್ವರೂಪದಲ್ಲೇ ಬರುತ್ತಿರುವುದನ್ನು ಗಮನಿಸಬಹುದಾಗಿದೆ.

(ಉ)
ಈಗಾಗಲೇ ಹೇಳಿದಂತೆ ಜಿ‌ಎಸ್‌ಎಸ್ ಅವರ ಕಾವ್ಯವು ಚಿಕಿತ್ಸಕ ನೆಲೆಗಳಿಂದ ಹುಟ್ಟುತ್ತವೆ.  ಆದರಿಂದಲೇ ವ್ಯವಸ್ಥೆಯ ಮೇಲಿನ ಸಿಟ್ಟು, ಆಕ್ರೋಶಗಳು ನಿಧಾನವಾಗಿ ವ್ಯಂಗ್ಯದ ಸ್ವರೂಪ ತಳೆಯುತ್ತವೆ.  ವ್ಯಂಗ್ಯವು ಎಂಭತ್ತರ ದಶಕದಲ್ಲಿ ಬಳಕೆಯಾಗುತ್ತಿದ್ದ ಅಸ್ತ್ರವೇ ಆಗಿದೆ.  ಆದರೆ ಜಿ‌ಎಸ್‌ಎಸ್ ಅವರ ವ್ಯಂಗ್ಯವು ನಿರಾಶೆಯಿಂದಾಗಲೀ, ಸಿನಿಕತೆಯಿಂದಾಗಲೀ ಕೂಡಿದುದಲ್ಲ ಎಂದು ನನ್ನ ಭಾವನೆ.  ಆತ್ಮ ನಿರೀಕ್ಷಣೆಯ ಉಗ್ರರೂಪದಂತೆ ಕಾಣುವ ವ್ಯಂಗ್ಯವು ಇಲ್ಲಿ ಕಾಣುತ್ತದೆ- `ನಮ್ಮತನವೆಲ್ಲವನು ಹರಾಜಿಗಿಟ್ಟು ನಿಂತಿದ್ದೇವೆ ಸ್ವಾಮಿ, ನಾವು ಗುಲಾಮರು, ಸೆಂಟ್‍ಪರ್ಸೆಂಟ್ ಗುಲಾಮರು' ಎಂದು ಹೇಳಿ ಹಳಿದುಕೊಳ್ಳುವ ವ್ಯಂಗ್ಯ ಇದೆ. ಅದರೊಳಗಿನ  ಒಳವ್ಯಂಗ್ಯವು ಪರಿಣಾಮಕಾರಿಯಾಗಿ ಬರುತ್ತದೆ-. ಉದಾಹರಣೆಗೆ,
  ಈ ದೇಶದಲ್ಲಿ ಎಲ್ಲವೂ
  ಆಮೂಲಾಗ್ರವಾಗಿ ಬದಲಾಗಬೇಕು.  ಆದರೆ
  ನಾನು ಕೂತ ಕುರ್ಚಿ, ಅದರ ಕೆಳಗಿನದೊಂದಿಷ್ಟಗಲ ನೆಲ
  ಇದ್ದಂತೆಯೇ ಇರಬೇಕು
                           (ಈ ದೇಶದಲ್ಲಿ)

ಇಷ್ಟೆಲ್ಲಾ ಪ್ರಕಟಗೊಳ್ಳುವ ವ್ಯಂಗ್ಯವು ಚಿಕಿತ್ಸಕ ನೆಲೆಯಿಂದಲೇ ಹುಟ್ಟುತ್ತದೆ.  ಇದು ಪರೋಕ್ಷವಾಗಿ ಶುದ್ಧೀಕರಣದ ಆಶಯವುಳ್ಳುದ್ದು.  ಅವರ `ಕಸಪೊರಕೆ' ಕವಿತೆಯ ಸಾಲುಗಳನ್ನು ಇಲ್ಲಿ ಉಲ್ಲೇಖಿಸುವುದಾದರೆ.
  ಈ ಮನೆಯ
  ಶುದ್ಧೀಕರಣವೆ ನಮ್ಮ ಕಸುಪೊರಕೆಗಿರುವ ಗುರಿ
  ಕಸಪೊರಕೆಯೆನಗೆ ಗುರು ; ಮತ್ತೆನ್ನ ಬಾಳಗುರಿ
                        (ಕಸಪೊರಕೆ)

  (ಊ)
`ಕುವೆಂಪು ಪರಂಪರೆಯ ಕವಿ ನಾನು' ಜಿ.ಎಸ್. ಶಿವರುದ್ದಪ್ಪನವರೇ ಆಗಾಗ್ಗೆ ಹೇಳುವುದುಂಟು.  ಕುವೆಂಪು ಪ್ರತಿಪಾದಿಸಿದ ಸರ್ವೋದಯ ತತ್ವ ಆಥವಾ ಸರ್ವರಿಗೆ ಸಮಬಾಳು ಎಂಬುದು ಜಿ‌ಎಸ್‌ಎಸ್ ಅವರು ಹುಡುಕಾಡುವ ಸಮಾನತಾ ಆಶಯಗಳಿಗೆ ಹತ್ತಿರವಿದೆ.  ಅವರು ಕುವೆಂಪು ಸರ್ವೋದಯತತ್ವವನ್ನು ರೂಢಿಸಿಕೊಳ್ಳುವುದು ಎರಡು ನೆಲೆಗಳಿಂದ.  ಒಂದು ಸಾಮಾನ್ಯತೆಯ ದರ್ಶನದಿಂದ ; ಇನ್ನೊಂದು ಸರ್ವರಿಗು ಸಮಬಾಳು ಎನ್ನುವ ತತ್ವವನ್ನು ವಿಶಾಲಾರ್ಥದಲ್ಲಿ ನಿರೂಪಿಸುವುದರಿಂದ.

ಜಿ‌ಎಸ್‌ಎಸ್ ಕಾವ್ಯವು ಸಾಮಾನ್ಯತೆಯ ದರ್ಶನದಲ್ಲೇ ರೂಪುಗೊಂಡಿರುವಂತದ್ದು.  `ಶ್ರೀಸಾಮಾನ್ಯವೇ ಭಗವದ್ಮಾನ್ಯ' ಎನ್ನುವ ಒಳನೋಟ ಮತ್ತು ವಿಕಾಸತತ್ವದ ಅರಿವುಗಳೇ ಅವರ ಕಾವ್ಯವನ್ನು ಮುನ್ನಡೆಸಿವೆ ಮತ್ತು ಅವು ಅವರ ಸಾಮಾಜಿಕ ಸಾಮಾರಸ್ಯದ ಆಶಯಗಳೂ ಆಗಿವೆ.  `ಸಮಾನ್ಯತಾ ರೀತಿ ಅದರ ಪ್ರೀತಿ' (ಗೊಂಬೆಯಾಟ) ಎಂದು ಗುರುತಿಸಿಕೊಳ್ಳುವ ಕವಿ,
  ಬಹುದೊಡ್ಡ ಮಾತನಾಡುತ್ತ
  ದಿನದಿನದ ಸರಳ ಸಾಧಾರಣ ಬದುಕಿ
  ಗವಮಾನ ಮಾಡುವವರನ್ನು ಕಂಡರೆ
  ನನಗಾಗುವುದಿಲ್ಲ.
                          (ನಿಲುವು)

ಹೀಗೆ ಅವರು ಸಾಮಾನ್ಯರ ಬದುಕಿಗೆ ಹೊರಳಿ ನಿಲ್ಲುತ್ತಾರೆ. ಅವರ ಹಣತೆಯ ರೂಪಕವನ್ನು ಇಲ್ಲಿಯೂ ಹಿಂಜಬಹುದಾದರೆ, ಅದೂ ಸಹ ಅವರ ಸಾಮಾನ್ಯತೆಯ ದರ್ಶನಾ ರೂಪಕವೇ ಆಗಿದೆ ಎನ್ನಬಹುದು.

ಕುವೆಂಪು ಅವರ ಸಾಹಿತ್ಯದಲ್ಲಿ ಬರುವ ಶ್ರೀಸಾಮಾನ್ಯನ ಪಾತ್ರವು ಬಂಡಾಯ ಸಾಹಿತ್ಯ ಮತ್ತು ವಿಮರ್ಶೆಗಳಲ್ಲಿ ಮತ್ತಷ್ಟು ಸ್ಫುಟವಾಯಿತು. ಅಲ್ಲದೆ ತಾತ್ವಿಕ ಬೆಂಬಲವನ್ನೂ ಪಡೆದುಕೊಂಡಿತು.  ಜಿ.ಎಸ್.ಶಿವರುದ್ರಪ್ಪನವರ ಕಾವ್ಯದಲ್ಲಿ ಅಂಚಿನಲ್ಲಿರುವವರನ್ನು ಕೇಂದ್ರಕ್ಕೆ ತರುವ ಪಲ್ಲಟಗಳ ಸೂಚನೆಯಿದೆ. ಬಂಡಾಯವು ಇದನ್ನು ಪ್ರತಿಪಾದಿಸಿತು.  ಪುರೋಹಿತಶಾಹಿಯನ್ನು ಖಂಡಿಸುವ, ಮಠಾಧಿಪತಿಗಳನ್ನು ಟೀಕಿಸುವ ಪ್ರವೃತ್ತಿಯೂ ಅವರ ಹಲವಾರು ಕವನಗಳಲ್ಲಿ ಕಾಣುತ್ತದೆ.  ಶೂದ್ರಸಮೂಹದ ಈ ವ್ಯವಸ್ಥೆಯಲ್ಲಿ ನರಳುತ್ತಿರುವುದನ್ನು ಗುರುತಿಸುವ `ಶೂದ್ರನಿಗೊಂದು ಪತ್ರ' ಕವನ ಮುಖ್ಯವೆನಿಸುತ್ತದೆ.  ಶೂದ್ರನ ಅಸ್ತಿತ್ವವು ಇನ್ನಿಲ್ಲದಂತೆ ಅಂಚಿಗೆ ತಳ್ಳಲ್ಪಟ್ಟಿದೆಯೆನ್ನುವುದನ್ನು ಖೇದದಿಂದ ಗುರುತಿಸುವ ಕವನ ಆದು :
  ನಾಮಕೆ, ಜುಟ್ಟಿಗೆ, ದಾರ, ವಿಭೂತಿಗೆ
  ಸದಾ ಬಾಗುತ ಕಾಲೊತ್ತುತ್ತವೆ
  ದಿಂಡಿರುಳುತ್ತವೆ
  ಚೂರುಪಾರಿಗೇ ಪರದಾಡುತ್ತವೆ.
  ಹೀಗಿರುವೀ ಮುಂದೆಯ ಕೂಡಿಸಿ
  ಹೊಸಹೊಳೆಯಲ್ಲಿವನೆಲ್ಲವ ಮೀಯಿಸಿ
  ತೊಳೆಯಬಹುದೇ ಶತಮಾನದ ಕೊಳೆಯ?
  ಏನು ಮಾಡುವುದು, ಹೇಳೋ ಗೆಳೆಯ ?
                        (ಶೂದ್ರನಿಗೊಂದು ಪತ್ರ)

  ಹಾಗೇ ಪೂರಕವಾಗಿ ಈ ಸಾಲುಗಳನ್ನು ಗಮನಿಸಬೇಕು :
  ಮುಗ್ಧರೆದೆಯ ಗದ್ದೆಗಳಲ್ಲಿ
  ಮತ-ಮೌಢ್ಯದ ಬೀಜವ
  ಸದಾ ಬಿತ್ತಿಬೆಳೆಯ ತೆಗವ
  ಚಾಣಾಕ್ಷರ ವೈಭವ
  ಇವರ ನಡುವೆ ಪಠಿಸಬಹುದೆ
  ಸರ್ವೋದಯ ಮಂತ್ರವನು
              (ಪ್ರಗತಿ)

ಅವರ ಇತ್ತೀಚಿನ ಪದ್ಯ `ಕಿಷ್ಕಿಂದೆಯ ಕತ್ತಲಲ್ಲಿ' ಕವಿತೆಯಲ್ಲಿ ವೈದಿಕ ಪರಂಪರೆಗೆ ಬಲಿಬೀಳುವ ಶೂದ್ರಸಮುದಾಯದ ಬಗ್ಗೆ ಮರುಕವಿದೆ.  ಹಾಗೂ ಅವರ ಶಕ್ತಿವ್ಯಯವಾಗುತ್ತಿರುವುದನ್ನು ಗುರುತಿಸಿ, ಅವರ ಬಾಳು ಕತ್ತಲಾಗಿರುವುದನ್ನು ಕಾಣಿಸುತ್ತದೆ.
  ವೀರವಾಲಿಯನು ಮರೆಮೋಸದಿಂದಿರಿದ | ವನ
  ಬೆನ್ನ ಹಿಂದೆಯ ಹೋದ ನಮ್ಮವರು ಸುರಕ್ಷಿತವೆ,
  ರಕ್ಕಸ ಪಡೆಯ ರಣರಂಗದಲ್ಲಿ?
                    (`ಕಿಷ್ಕಿಂಧೆಯ ಕತ್ತಲಲ್ಲಿ')

ಆದರೆ ಅದೇ ಪದ್ಯದಲ್ಲಿ ಸುಪ್ತವಾದ ಶೂದ್ರಶಕ್ತಿಯ ಬಗೆಗಿನ ನಂಬಿಕೆಯು ಸಮಾಧಾನದ ಅಂಶವಾಗಿದೆ :
   ....ಯಾವ ನಿಜವಾದ
  ಸತ್ವವೂ ಬತ್ತಿಹೋಗುವುದಿಲ್ಲ ಇದ್ದ
  ಕಿಂದ್ದಂತೆಯೇ ಸುಪ್ತವಾಗಿರುವುದು, ಈ
  ಬೆಳೆವ ಮಕ್ಕಳ ಒಳಗೆ, ಮರವು ಮಲಗಿದ
  ಹಾಗೆ ಬೀಜದೊಳಗೆ.....

ಶೂದ್ರ ಸಂಸ್ಕೃತಿಯ ಬಗೆಗಿನ ಈ ನಂಬಿಕೆ ಸಾಮಾಜಿಕ ಸಾಮರಸ್ಯದ ಕಾಳಜಿಯಿಂದ ಬಂದಿದ್ದು ಎನ್ನಬಹುದು.  ರಹಮತ್ ತರೀಕೆರೆ ಅವರು ತಮ್ಮ ಇತ್ತೀಚಿನ ಲೇಖನವೊಂದರಲ್ಲಿ ಶ್ರೀರಾಮ, ಲಕ್ಷ್ಮಣ ಸೀತೆಯರ ಮುಂದೆ  ಕೈಮುಗಿದು ಮಂಡಿಯೂರಿ ಕುಳಿತು ಆಂಜನೇಯನನ್ನು ವೈದಿಕಶಾಹಿಯು ಅವೈದಿಕರನ್ನು ಚಿತ್ರಿಸುವ ರೀತಿಯಾಗಿ ಗುರುತಿಸಿದ್ದಾರೆ.  `ವ್ಯಕ್ತಮಧ್ಯ'ದ ಕವನಗಳಲ್ಲಿ ಈ ಅರಿವು ವ್ಯಕ್ತವಾಗುವುದರೊಂದಿಗೆ, ತಮ್ಮ ಕಾಳಜಿಯನ್ನು ಕವಿ ತೋರ್ಪಡಿಕೊಳ್ಳುತ್ತಾರೆ ಎನ್ನಬಹುದು.

ಸ್ತ್ರೀಯರ ಬಗೆಗಿನ ಅವರ ದೃಷ್ಟಿಯು ಘನವೆತ್ತದ್ದಾಗಿದೆ.  ಈ ದೃಷ್ಟಿಗೆ ರಮ್ಯಹಿನ್ನೆಲೆಯಲ್ಲಿ ಸ್ಫೂರ್ತಿ ಒದಗಿದೆ.  ಪ್ರಕೃತಿಯ ಜೊತೆ ಸ್ತ್ರೀಯನ್ನು ಸಮೀಕರಿಸುವ ನವೋದಯದ ಭಾವವು ಇಲ್ಲಿದೆ.  ಸ್ತ್ರೀಕೇಂದ್ರಿತ ಕವನಗಳು ಹಲವಾರು ಜಿ‌ಎಸ್‌ಎಸ್ ಕಾವ್ಯದಲ್ಲಿ ಕಾಣುತ್ತವೆ.  ಮೆಟಫಿಸಿಕಲ್ ಆದ  ದೃಷ್ಟಿಕೋನವೇ ಇಲ್ಲಿಯು ಕೆಲಸ ಮಾಡುತ್ತದೆಯಾಗಿ, ಸ್ತ್ರೀಯ ಔನ್ನತ್ಯವೇ ಹೆಚ್ಚು ಕಾಣುತ್ತವೆ.  ಇದರ ಬಗೆಗಿನ  ತಾತ್ವಿಕ ಜಿಜ್ಞಾಸೆಗಿಂತ ಕವಿಯ ಕಾಳಜಿಯು ಸಾಮಾಜಿಕ ಸಾಮರಸ್ಯದ ಕಡೆಗೆ ತುಡಿಯುವ ಅಂಶವನ್ನು ಇಲ್ಲಿ ಗುರುತಿಸಬಹುದು.

ಈ ಎಲ್ಲಾ ಅಂಶಗಳಲ್ಲಿ ಜಿ‌ಎಸ್‌ಎಸ್ ಅವರ ಕಾವ್ಯವು ಸಬಾಲ್ಟ್ರನ್ ಅಂಶಗಳನ್ನು ಶ್ರೀಮಂತವಾಗಿ ಹೊಂದಿದ ಕಾವ್ಯವಾಗಿ ಕಾಣುತ್ತದೆ.  ಚರಿತ್ರೆಯನ್ನು ಅವರು ಅನುಸಂಧಾನ ಮಾಡುವ ರೀತಿಯೂ ವಿಭಿನ್ನವಾಗಿದ್ದು, ಚರಿತ್ರೆಯ ಪುನರಾವಲೋಕನಕ್ಕೆ ದಾರಿ ಮಾಡಿಕೊಳ್ಳುತ್ತದೆ.  ಇದುವರೆಗು ರಾಜಮಹಾರಾಜರ ಜೀವನ ಕತೆಗಳು, ಆವರ ಧೈರ್ಯಸಾಹಸದ ಕತೆಗಳನ್ನೇ ಚರಿತ್ರೆ ಎಂದು ನಂಬಿಸಲಾಗಿತ್ತು.  ಅದನ್ನು ಕವಿ ಮೊದಲು ಪ್ರಶ್ನಿಸಿಕೊಳ್ಳುತ್ತಾರೆ :
  ಈ ಚರಿತ್ರಯ ಚಕ್ರದಡಿ
  ನುಚ್ಚು ನೂರಾದವರು ಈ ಸಾ
  ಮಾನ್ಯ ಜನರೇ.  ಯಾರು ಬರೆದಿಟ್ಟಿದ್ದಾರೆ
  ಈ ಇವರು ಪಟ್ಟಪಾಡುಗಳನ್ನು?  ಶಾಸನದ ತುಂಬ
  ರಾರಾಜಿಸಿವೆ ಸದಾ ಪಟ್ಟಭದ್ರರ ಹೆಸರೇ.....
                                                  (ಚರಿತ್ರೆ ಅಂದರೆ-....)
ಏಕಲವ್ಯನ ಬೆರಳನ್ನು ಬಲಿತೆಗೆದುಕೊಂಡ ಕತೆಯನ್ನು ಚರಿತ್ರೆಯ ವಿಶ್ಲೇಷಣೆಗೆ ಬಳಸಿಲೊಳ್ಳುವ ಕವಿ ಹೇಳುತ್ತಾರೆ :
  ಬೆರಳಿನ ವಿಚಾರ ಹಾಗಲ್ಲ
  ಶೋಷಣೆಗೆ ಎಷ್ಟು ಮುಖ್ಯ? ಅದು
  ಚರಿತ್ರೆಯ ವಿಷಯ
            (ಚಕ್ರಗತಿ)

ಇಂಥ ಚರಿತ್ರೆಯ ವಿಷಯದ ಬಗ್ಗೆ ಜಾಗೃತರಾಗಿರಬೇಕೆಂಬುದೇ ಕವಿಯ ನಿಲುವು.  ಯಾವ ಕಾರಣಕ್ಕೂ ಚರಿತ್ರೆಯ ವೈಭವೀಕರಣ ಸಲ್ಲದೆಂಬ ಧೋರಣೆಯೂ ಅವರಲ್ಲಿದೆ.
  ಮುಂದಕ್ಕೆ ಚಲಿಸುತ್ತಿದ್ದರೆ ಅದು ಚರಿತ್ರೆ
  ನಿಂತು ಮಡುಗಟ್ಟಿದರೆ ಪುರಾಣ
  ಪರಿಸ್ಥಿತಿ ಹೀಗೆ ಪುರಾಣವಾಗುತ್ತಲೇ
  ಶುರುವಾಗುತ್ತದೆ ಅದರ ಪಾರಾಯಣ
                      (ಚರಿತ್ರೆ-ಪುರಾಣ)

ಚಾರಿತ್ರಿಕ ನಡೆಯನ್ನು ಗತಿಶೀಲತೆಯಿಂದ ಗುರುತಿಸುವ ಕವಿಗೆ, "ಚರಿತ್ರೆ ಎಂದರೆ ನಡೆದುದಷ್ಟೇ ಅಲ್ಲ, ನಡೆಯುತ್ತಿರುವುದೂ ಆಗಿದೆ".  ವಿಕಾಸಕ್ರಮದ ಗತಿಶೀಲತೆಯು ಜಿ‌ಎಸ್‌ಎಸ್ ಕಾವ್ಯದ ಒಳನೋಟ. `ಚಕ್ರ'ದ ಮೂಲಕ ಸಂಕೇತಿಸಿ ಅದನ್ನವರು ಸೂಚಿಸುತ್ತಾರೆ:
  ಈ ಕಾಲ ಮುಗಿತಾಯಕ್ಕೆ ಬಂದಿದೆ
  ಬದಲಾಗುವುದು ಅಗತ್ಯ
  ಚಕ್ರ ತಿರುಗುವುದಕ್ಕೆ
            (ಹೊಸಹುಟ್ಟು)

ಆವರ್ತನ ಗತಿಶೀಲತೆಯನ್ನು ಸೂಚಿಸುವ ನಿಟ್ಟಿನಲ್ಲಿ ಮನ್ವಂತರ ಮತ್ತು ಯುಗಾದಿಯ ಪರಿಕಲ್ಪನೆಗಳು ವ್ಯಕ್ತವಾಗುತ್ತವೆ.

ಜಿ.ಎಸ್.ಶಿವರುದ್ರಪ್ಪನವರ ಕಾವ್ಯವು `ಕಟ್ಟುವ' ರಚನಾತ್ಮಕ ನೆಲೆಯದು. ಸಮಷ್ಟಿಯನ್ನು ಕಟ್ಟಿಕೊಳ್ಳುವ ನೆಲೆಯಲ್ಲಿ ಅದು ವಿಕಾಸವಾಗುತ್ತದೆ.  ಇದಕ್ಕಾಗಿ ಸಮಗ್ರತೆಯ ದೃಷ್ಟಿಯೊಂದನ್ನು ಕವಿ ಹೊಂದಿದ್ದಾರೆ.  ಆ ಕಾರಣದಿಂದಲೇ ಸಾಮಾಜಿಕ ಅಸಮತೋಲನಗಳು ಸಾಮರಸ್ಯವನ್ನು ಹಾಳುಗೆಡಹುವ ಅಂಶಗಳಂತೆ ಅವರಿಗೆ ಕಾಣುತ್ತದೆ.  ವಾಸ್ತವವಾಗಿ ಪರಿಪೂರ್ಣತೆಯನ್ನು ಕಲ್ಪನೆಯು ರಮ್ಯವಾದಿ ನಿಲುವೇ ಹೌದು.  ಒಂದು ಪರಿಪೂರ್ಣ body politic   ನ ಸ್ವರೂಪವನ್ನು ಪರಿಭಾವಿಸುವ ಕವಿ ಅದನ್ನು `ಜನಗಣಮನ ಅಧಿನಾಯಕ' ಎನ್ನುವ ಕಲ್ಪನೆಯಲ್ಲಿ ಕಾಣುತ್ತಾರೆ. ಈ ಕಲ್ಪನೆಯು ಚಲಿಸುವ ಚಕ್ರದಂತೆ ಕಂಡು ವಿಕಾಸಕ್ಕಾಗಿ ಆವರ್ತನೆಗೊಳ್ಳುವಂತದ್ದು.  ಚಕ್ರದಲ್ಲಿನ ಕಡ್ಡಿಗಳು ಭಂಗಗೊಂಡರೆ ವಿಕಾಸದ ಚಲನೆಯು ಹಿಮ್ಮುಖವಾಗಿಬಿಡುತ್ತದೆ. ಜನತಂತ್ರದಲ್ಲಿ ನಂಬಿಕೆಯಿಟ್ಟಿರುವ ಕವಿಗೆ ಅದರ ವಿಕಾಸವು ಮುಖ್ಯವೇ ವಿನಾಶವಲ್ಲ.  ಆದ್ದರಿಂದಲೇ ಅದು ಹಾಳಾಗುತ್ತಿದೆ ಎನ್ನುವ ಸಂದರ್ಭದಲ್ಲೆಲ್ಲ ಅದನ್ನು ಪರಿಶೀಲಿಸುವ, ವ್ಯಂಗ್ಯಮಾಡುವ ಚಿಕಿತ್ಸಕ ಕ್ರಮಗಳಲ್ಲಿ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ. ಅವರ ಈ ಸಾಲುಗಳನ್ನು ನೋಡಬೇಕು:
  ಜನಗಣಮನ ಅಧಿನಾಯಕ
  ಕೀಲನು ಕಳಚುವ ತಂತ್ರಗಳು
     (ಸ್ವಾತಂತ್ರ್ಯೋತ್ಸವ-೧೯೮೪)

ಕೀಲು ಮುರಿಯದ ಸಮಗ್ರತೆಯ ಕಲ್ಪನೆಯೇ ಇಲ್ಲಿ ಆವರಿಸಿದೆ.  ಹಾಗೆಯೇ ಅವರ `ಒಡೆದ ಕನ್ನಡಿ' ಪದ್ಯವನ್ನು ಉದಾಹರಿಸುವುದಾದರೆ ಅಲ್ಲಿಯೂ ಕನ್ನಡಿ ಪೂರ್ಣದೃಷ್ಟಿಯ ಸಮಗ್ರತೆಯ ಸಂಕೇತ. ಅದರಲ್ಲಿ ಬಿರುಕುಗಳುಂಟಾದರೆ ಪೂರ್ಣನೋಟ ಸಾಧ್ಯವಾಗದು.
ಈ ಅರಿವು ಇರುವುದರಿಂದಲೇ ಕವಿ ಹೇಳುತ್ತಾರೆ ;

  ಒಡೆದಿರುವೀ ಕನ್ನಡಿ ಬಿರುಕಿನ ಗೆರೆಗೆರೆಯೇ
  ಗಡಿರೇಖೆಯೇ ಗುರುತು,
  ಕಾಣುವುದೆಂತೀ ಸಮಗ್ರ ಮಾನವ್ಯದ ಮುಖವಿದರೊಳು
  ಬರಿ ವಿಕೃತಿಯ ಹೊರತು?
                      (ಒಡೆದ ಕನ್ನಡಿ)

ಇದೇ ಪದ್ಯದಲ್ಲಿ ಬರುವ ಪದಪುಂಜ-`ಒಡೆದ ಹಡಗಿನತುಂಡು' ಎನ್ನುವುದೂ ಸಹ ಸಮಗ್ರತೆಯ ದೃಷ್ಟಿಕೋನದಲ್ಲೇ ಹುಟ್ಟಿರುವಂಥದ್ದು.  ಇದೊಂದು ರಮ್ಯಕಲ್ಪನೆಯೇ.  ಸಿನಿಕತೆಯ ಸೋಂಕಿಲ್ಲದೆ ಕವಿ ರಮ್ಯಭಾವದಿಂದಲೇ ಆಶಾವಾದಿಯಾಗಬಲ್ಲರು.  ಹಾಗಾಗಿ ಅವರು ಹೇಳುತ್ತಾರೆ ;
  ಒಂದೇ ಒಂದೇ ನಾವೆಲ್ಲರೂ ಒಂದೇ
  ಈ ದೇಶದೊಳೆಲ್ಲಿದ್ದರು
  ಭಾರತ ನಮಗೊಂದೇ
         (ಐಕ್ಯಗಾನ)
ಅವರ ಆಶಯವು ಧನಾತ್ಮಕವಾಗಿ ವ್ಯಕ್ತವಾಗುತ್ತದೆ :
  ಮೊಳೆವ ಪೈರಿನ ಮೇಲೆ ಬೆ೦ಕಿ
  ಮಳೆಗರೆದು ಹಾಳು ಮಾಡದಿರೋಣ
  ಸಾಧ್ಯವಾದಷ್ಟು ! ನೀರೆರೆದು ಬೆಳೆದು ಇಬ್ಬರೂ
  ಮನೆಯ೦ಗಳದ ಕಣದಲ್ಲಿ ಬಣವೆ ಕಟ್ಟೋಣ
  ತೂರಿಕೊಳ್ಳಲಿ ನಾಳೆ | ಇದರ ಜಳ್ಳು-ಕಾಳುಗಳನ್ನು
  ಈ ನಮ್ಮ ಮಕ್ಕಳೇ
                        (ಒಪ್ಪಂದ)

ಈ ಕಟ್ಟುವಿಕೆಯ ಆಶಯವು ಸಾಮರಸ್ಯವು ಆಶಯವೇ ಆಗಿದೆ.  ಇದೊಂದು ರಮ್ಯಭಾವವೇ ಆದರೂ, ಯಾವುದೇ ಒಂದು ಭೌತಿಕ ನಿರ್ಮಾಣಕ್ಕೂ ಕನಸುಗಳ ತಳಹದಿಯಿರಬೇಕು.  ಕನಸು, ದರ್ಶನಗಳಿಲ್ಲದೆ ಕಟ್ಟುವಿಕೆಯು ಸಂಭವಿಸುವುದಿಲ್ಲ.  ಕವಿಗೆ ಕನಸುಗಳಿವೆ.  ಆದರೆ ತೀರಾ ಭ್ರಮಾತ್ಮಕವಾಗಿಲ್ಲ.. ಈ ಕಾರಣದಿಂದಲೇ ಅವರು ಹೇಳುತ್ತಾರೆ ;
  ಈ ಕತ್ತಲೆಯನು ಗೆದ್ದು
  ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ
  ಹಣತೆ ಹಚ್ಚುತ್ತೇನೆ ನಾನು
        (ನನ್ನ ಹಣತೆ)

ಈ ರೀತಿಯ ಕನಿಷ್ಠ ಆಶಾವಾದ, ಕನಸುಗಾರಿಕೆಗಳಿಲ್ಲದೆ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಅನ್ನಿಸುತ್ತದೆ.

ಕಟ್ಟುವಿಕೆಗೆ ಪರಿಕರವಾಗಿ ಕವಿ ಬಳಸುವುದು ಪ್ರೀತಿಯನ್ನು.  ಕಂಡುಕೊಳ್ಳುವ ಅರಿವು ಮತ್ತು ಸಹಸ್ಪಂದನದ ದಾರಿಗಳನ್ನು ಹೊಳೆಯಿಸುವುದು ಪ್ರೀತಿ. ಹೃದಯಗಳನ್ನು ಬೆಸೆಯಬಲ್ಲ, ಎಲ್ಲೆಗಳನ್ನು ಮೀರಿ ಸಮಷ್ಟಿಯ ಹಿತವನ್ನು ಕಾಣಬಲ್ಲ ಶಕ್ತಿ ಅದಕ್ಕಿದೆ.  ಪ್ರೀತಿಯೆನ್ನುವುದಿಲ್ಲಿ ಸ್ಥಾಯಿಭಾವವಾಗಿ ನಿಲ್ಲುತ್ತದೆ.
  ಪ್ರೀತಿ ಇಲ್ಲದ ಮೇಲೆ
  ದಕ್ಷಿಣಾಫ್ರಿಕದ ಕಗ್ಗತ್ತಲಿಗೆ
  ಬೆಳಕು ಮೂಡೀತು ಹೇಗೆ?
  (ಸೆರಮನೆಯ ಕಂಬಿಯ ನಡುವೆ
  ಕಮರುವ ಕನಸು ಕೊನರೀತು ಹೇಗೆ?
  ಬರಿ ಪದಕ್ಕೆ ಪದ ಜೊತೆಗಿದ್ದ ಮಾತ್ರಕೆ
  ಪದ್ಯವಾದೀತು
  ಹೇಗೆ?
            (ಪ್ರೀತಿ ಇಲ್ಲದ ಮೇಲೆ)

ಪ್ರೀತಿಯೆಂಬುದು ಸಂಯೋಜಕ ಶಕ್ತಿ.  ಇದು ಜಿ. ಎಸ್. ಶಿವರುದ್ರಪ್ಪನವರು ಕಾಣುವ ಸಾಮರಸ್ಯದ ದರ್ಶನ.  `ಅವೈರದಿಂದ ಮಾತ್ರ ವೈರವು ನಾಶವಾಗುತ್ತದೆ.2 ಇದೇ ಸನಾತನ ಧರ್ಮ' ಎನ್ನುತ್ತಾನೆ ಬುದ್ಧ.  ಆ ಧರ್ಮಚಕ್ರ ನಿರಂತರವಾಗಿ ತಿರುಗುತ್ತ ಪ್ರೀತಿಯ ವಿಕಾಸಕ್ರಮವನ್ನು ಕಂಡುಕೊಳ್ಳುವಂತೆ ಜಿ‌ಎಸ್‌ಎಸ್ ಆವರ ಕಾವ್ಯದ ದರ್ಶನ ಇದೆ.  ಅವರ ಸಾಲುಗಳಲೇ ಈ ಲೇಖನವನ್ನು ಕೊನೆಗಾಣಿಸುವುದಾದರೆ,
  ಒಲವಿಗೆ ಒಲವಲ್ಲದೆ
  ಬೇರೇನಿದೆ ಕೊಡುಗೆ
           (ಮಳೆ)
(ಕರ್ನಾಟಕ ಸಾಹಿತ್ಯ ಆಕಾಡೆಮಿ ಫೆಬ್ರವರಿ ೨೦೦೭ ರಲ್ಲಿ ಜಿ‌ಎಸ್‌ಎಸ್ ಅವರ ಮೇಲೆ ಏರ್ಪಡಿಸಿದ್ದ ವಿಚಾರಸಂಕಿರಣದಲ್ಲಿ ಮಂಡಿಸಿದ ಪ್ರಬಂಧ).
ಆಕರ ಗ್ರಂಥಗಳು
1.  ಜಿ.ಎಸ್-ಶಿವರುಪ್ರಪ್ಪ, ಸಮಗ್ರಕಾವ್ಯ.
2. ಹಣತೆ (ಜಿ.ಎಸ್.ಶಿದರುವುಪ್ಪ ಅಭಿನಂದನ ಗ್ರಂಥ).

                     *****

ಕೀಲಿಕರಣ: ಎಂ. ಎನ್. ಎಸ್. ರಾವ್

ಇನಸ್ಪೆಕ್ಟರ ದಯಾನಿಧಿ

-ಶಿಶುನಾಳ ಶರೀಫ್

ಇನಸ್ಪೆಕ್ಟರ ದಯಾನಿಧಿ ವನಗಾವಲಧಿಕಾರ                                    ||ಪ||

ಘನಸಿರಿಯ ಪರಿ ಆರಣ್ಯದಿ ಶೋಭಿತಹ
ಜುರ್ಬಿಶರಿಯುತಾಧೀಶನ ಪದಾ                                                  ||೧||

ಹಮ್ ದೇಖಾ ತುಮ್ ಲೈಯನ್‍ತು ದೋದಿನ್ ಕರತೆ ಜವಿದಾ
ಸುಮ್ಮನೆ ಸಂದಿದೆ ನಾ ಪೇಳುವೆ ಲಾಲಿಸು ಹಿಮಕರ ಕಷ್ಟದಿ ಮುನಿದಾ  ||೨||

ಶಿಶುನಾಳ ಶ್ಯಾಹಿರಾತೋ ಸಲಾಮತ್ಹೋ ಉಸನೇ ರೋಷದಿ ಜಾನಪಿದಾ
ಕಸರಿಲ್ಲದೆ ನಾ ಉಸುರಿದ ಕವಿತವ ನಿಶಿಯೊಳು ಬೆಳಗಿ ದೇಶವಳಿದಾ    ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಬೀಮಾಬಿರು

- ಮುದ್ದು ಮೂಡುಬೆಳ್ಳೆ

ತೆನ್ಕಾಯಿ ಬಾನೊಡು ನೇಲ ಬೀಮಾಬಿರು ಬೂರ್‍ದ್‌ದಿತ್ತ್ಂಡ್.  ಅಂಚಿಮಚಿ ಪಿಚಿರುನ ಗುಪ್ಪೆ ಗುಪ್ಪೆ ಮುಗಲ್, ಆಯಗ್ ಸೋದ್ಯ!  ಇಂಚ ಏಪಾಂಡಲೊರ ಆಜೇಲ್ ರಂಗ್‌ದ ಈ ಬೀಮಾಬಿರು ಬರ್‍ಪಿನಾಂಡಲಾ ಒಲ್ತುಡ್ದ್!?  ಏತ್ ಪೊರ್ಲುಂಡು!  ಸುದ್ದಿದಾಂತೆ ಬಾನ ನಿಲಿಕೆ `ಬಿರು'ತಲೆಕ ನಿದ್ಪ ಬತ್ತ್ ಉಂತೂಂಡು, ಪಿನಿ ಒಂತೆ ಪೊರ್ತಾನಗ ಮಾಯಕ?!

ಅವೆನ್ ತೂವೊಂದೇ ಗುಡ್ಡೆ ಮಿತ್ತರಿನ ಆಯೆ-ಹರ್ಷೆ ಆ ನೇಲ ಪಾದೆದ ಕೈತಲ್ ನಡತೋಂದ್ ಬರ್‍ಪೆ, ಕರ್ಗಲ್ಲ್‌ದ ಪಡ್ಡಾಯಿ ಮರ್‍ಗಿಲ್ ಕುಲ್ಲರೇಂದ್ ಏರಾ ಕೆತ್ತ್‌ದ್ ದೀಯಿನಂಚಿನ ಜಾಗ್.  ಏಪಲಾ ಆಯೆ ಬತ್ತ್‌ದ್ ಕುಲ್ದು ಒರೋರ ಚಿತ್ರ ಬುಡ್ಪಾವುನ ಜಾಗೆ ಅವು, ಗುಡ್ಡೆದ ತಿರ್ತ್ ಸುತ್ತ ಕಾಡ್ ಕಂಡ, ತುದೆ ನೀರ್‍ ತಾರೆದ ತೋಟ.  ಆಯೆ ಆ ಪೊರ್ಲು ಕಾಣ್ಣ್‌ಡ್ ಒರ ದಿಂಜಾವೊಂದು ಅಡೇಗೆ ಕುಲ್ಲುವೆ.

ಪಡ್ಡಾಯಿಡ್ ಮುಗಲ್ದೊಟ್ಟುಗು ಕಣ್ಣ್ ಮುಚ್ಚಾಲೆ ಗೊಬ್ಬುನ-ತಿರ್ಬಾನೋಡು-ಗಲಿಗೆಗೊಂಜಿ ರಂಗ್ ಪಿಜಿರುನ ಬಂಗಾರ ಬಣ್ಣದ ನೇಸರ್‌ನ್ ತೂಪೆ.  ತೂಯಿ ನಾತ್‌ಲಾ ಇಯಾವುಜಿ.

ಅಯ್ದ್ ಒಂತೆ ಇಕಾರ-ಓ ಆಲ್ಪ-ರೆಂಜೆದ ಮರತ ಬರಿಟ್ ನಿದ್ಪ ಬಗ್ಗ್‌ದಿನ ಕುಂಟಿಲ್ದ ಮರಟ್, ಗಿಜಿರ್‍ ಗಿಜಿರ್‍ ಕುಂಟಲ ಪಂರ್ದ್ ದಿಂಜಿದಿನ ತೋಜಿಂಡ್, ಗುಡ್ಡೆ ಜತ್ತ್‌ದ ಪಿರ ಪೋವನಗ ಅವೆನ್ ಕೊನೊದು ಸುಷ್ಮಗ್ ಕೊರೊಡುಂದ್ ಎನ್ನುವೆ.

ಮುಗಲ್ದ ಇಡೆಟಿತ್ತಿನ ಸೂರ್ಯೆ ಪಿದಾಯಿ ಪಿಜಿ ರ್‍ನಗ ಅವೇ ಮರ್ಗಿಲ್‌ಡ್ದ್ ಏರಾ ಗುಡ್ಡೆದ ಮಿತ್ತ್.  ಮಿತ್ತವೊಂದು ಬರ್‍ಪಿನ ತೋಜಿಂಡ್, ಮಂಡಡದೆರ್ತ್‌ಕಣ್ಣ್ ಪಿಸಿರ್ತ್ ತೂಯೆ.  ಹಾಂ.  ತೆರಿಂಡ್, ಆ ರೂಪು ಕೈತಲ್ ಕೈತಲ್ ಬತ್ತ್‌ದ್ `ಸುಷ್ಮಾ' ಇಂದ್ ನೂರದು ಸರ್ತಿ ಲೆಪ್ಪರೆ `ಬಿಂಬಿಮ್ಮ್‌ಂ'ದ್ ಬಿಮ್ಮೊಲು ನಲಿಪುವ.

ತನ್ಕ್ ಈ ಒಂಜಿ ಸೀಕ್ ದಾಯೆಗ್ ಬತ್ತ್ಂಡಾ, ಒಂಜೊಂಜಿ ಪಾತೆರ ಪಾತರ್‍ನಗಲಾ ನಾಲಯಿ ಕಟ್ಟುಂಡು ಒಂಜಿ ಸಬ್ದೊಗು ನನೊಂಜಿ ಸಬ್ದೊನು ಒಯ್ತೊಯ್ತ್ ಪನ್ನಗ ಕೆಲವು ಗಲಿಗೆಲೇ ಕರಿದ್ ಪೋಪ.  ಅವು ಬೇತೆಕ್ಲೆಗ್ ಅರ್ಥ ಆಪುಜಿ.  ಅಯಿಕ್‌ಂದ್ ಆಯಡ ಪಾತ್ರೆರ್‍ರೆ ಬತ್ತಿನಕುಲು ಆಯನ್ ನಾಲೀಸ್ ಮಲ್ಪುವೆರ್‍.  ಗ್ರಾಮದ ಪಟ್ಲೆ ರಾದಪ್ಪುನ ಪಪ್ಪ ಇಲ್ಲಡ್ ಉಪ್ಪುನೆ ಕಮ್ಮೆ ಅಂಡ.  ಅಮ್ಮಗ್ ಬೆನ್ನಿದ ಬೇಲೆ ಅಟಿಲ್ದ ಕೆಲಸಡ್ ಪುರ್ಸತಿಜ್ಜಿ.  ಸಾಲೆ ಕಲ್ಪುನ ಏಪನೇ ಉಂತಾದ್ ಬೆನ್ನಿದ ಬೇಲೆದೊಟ್ಟುಗು ಪಿದಯಿಡ್ದ್ ಪಿದಯೇ ಉಪ್ಪುನ ಇರ್ವೆರ್‍ ಅಣ್ಣನಕ್ಲು ಆಯಡ ಪಾತೆರುನೇ ಇಜ್ಜಿ, ಆಂಡ ಅಕುಲು ಮಾತ ತನ್ಕ್ಲೆ ಉಲಾಯಿ ಏಪಲ ಆರಟೆ ಕೊಚ್ಚೊಂದು ತೆಲ್ತ್ ಪಾತೆರುನೆನ್‌-ಸುರು ಸುರೂಟು ತೂನಗ ಬುಲಿಪರೆನೇ ಬರೊಂದಿತ್ತ್ಂಡ್.  ಅಮ್ಮ ಅಂಡಲ ದಾನಿಃ  ಒರೋರ ಏತ್ ಜೋರ್‍ಡ್ ನೆರ್‍ದ್ ಬುಡ್ಪರ್‍.

"ಈ ದಡ್ಡ್ ದರಿದ್ರವೊಂಜಿ ನುಪ್ಪು ಕರ್‍ಚಿಗ್‌ಂದ್ ಎನ್ನ ಜಂಜಿಡ್ ಕೊಡಿದ್ಂಡ್...."  ಇಂದ್‌ಲಾಪನ್ಪೆರ್‍.  ಅಪ್ಪಾಪಗ ನೆರ್‍ಪನಿ ಕೇನ್ನಗ ಪಿಳ್ಳಕ್ಕಂದ್ ಕಣನೀರ್‍ ದಿಂಜಿದ್ ಆಯೆ ಮೂಲೆ ಸೇರುವೆ.  ಸಾಲೆಗ್ ಪೊರ್ತಾನಗ ಮನಿಪಂದೆ ಚೀರವುಪುಗೆಲ್ಡ್ ಪಾಡೊಂದ್ ಸಾಲೆಗ್ ಪೋಪೆ.

ಆಯೆ ಎಣ್ಣನೆ ಕ್ಲಾಸ್‌ಡ್ ಕಲ್ತೊಂದುಲ್ಲೆ.  ಸಾಲೆಡಾಂಡ ದಾನೆ, ಕೋಗಿ ಕಟ್ಟುನಕುಲು ಕಮ್ಮಿ ಇಜ್ಜೆರ್‍ ಕೆಲವೆರ್‍ ಸರ್‍ ಬೊಕ್ಕ ಮೇಡಂನಕುಲ್ಲಾ ಆತೆ.  ಆನುಲ್ಲಾ ಸರ್‌ನಕುಲ್ಲಾ ಬೋಡುಂದೇ ಆಯನ್ ಬೇಗ್ಪೇಗ ಪಾತೆ ರ್‍ಬದ್, ಆಯೆ ಉಬ್ಲೆ ಉಬ್ಲೆ-ಒಯ್ತೊತ್ತ್ ಪಾತೆರ್‍ನಗೆ ಬೂರ್‌ಬೂರ್‍ದ್ ತೆಲ್ಪುವೆರ್‍.  ಮಾಸ್ಟ್ರ್‌ನಕುಲು ನೆರ್‍ರೆ ಬಲ್ಲಿಂದ್ ಸಾಲೆದ ಪಾಠೊಲೆನ್ ಮಾತ ಆಯೆ ಮನಸ್ ದೀದ್ ಕೇನುವೆ, ಶಿಸ್ತ್‌ಡ್ ಉಪ್ಪುವೆ.  ಆಂಡ ಇಂಬ್ಯಗ್ ಸರಾಗ್ ಪಾತೆರ್‍ರೆ ಬರ್ಪುಜಿಂದ್ ಅಕುಲು ಮಾತ ಆಯಡ ಪ್ರಶ್ನೆ ಕೇನರ್‍ನೇ ಬರಂದೆ.  ದಡ್ಡೆರೆ ಸಾಲ್‌ಗ್ ಆಯನ್ ಸೇರಾದ್ ಬುಡ್ತೆರ್‍.  ಮೈದಾನ್‌ದ ಗೊಬ್ಬದ ಕಲೊಟು ಯಾನ್ಲಾ ಬರ್‍ಪಂಬೇ, ಇಂದ್ ಉಂಬ್ಯೆ ವಾ ಗುಂಪುದಕಲ್ಡ ಕೇಂಡಲಾ ಅಕುಲಾಯನ್ ಗೊಬ್ಬೆರೆ ಸೇರ್‍ಸಾವೊನುಜೆರ್‍, `ಪೋ, ಪೋಂಬೆ! ನಕ್ಕ್ ಬ್ಯಾಟ್ ಪತ್ತೆರೆ ತೆರೆಯುಜಿ ಬೆಬ್ಬೆಬ್ಬೆ-ದೂಮ' ಇಂಚ ಮಾತ......  ಆಯಲೆಕಾನೆ ಪಾತೆರ್ದ್-ಹಂಗ್ಸದ್ ಪಿದಯಿ ನೂಕುವೆರ್‍ ಅವುಲಾ ಆಯಗ್ ಬುಲಿಪೆರೆ ಬರ್ಪುಂಡು.

ಇಂಚ-ಮಾತೆರೆಡ್ದ್ ದುರ ಆದ್ ಆಯೆ ಇನೆ ದಾಂತಿ ಒಂಟಿ ಆದ್ ಪೋತೆ.  ಇಲ್ಲಡ್ ಪಾತೆರ್‍ನಕುಲಿಜ್ಜಿ.  ಸಾಲೆಡ್ ಪಾಸಾಡಿದಕುಲಿಜ್ಜಿ.  ಆಯೆ ಪೊರ್ಲು ಪ್ರಕೃತಿಸಿದ ಚಿತ್ರ ಬರೆಪೆ.  ಬಣ್ಣ ದಿಂಜಾವೆ;  ಇನಾಮುಲು ಬರ್‍ಪ, ಆಂಡ.  ಪಿತಿದೊಂಜಿ ಪಾತೆರ ಕೇನರೆಂದ್ ಉಡಲ್ ಕಾಪುಂಡು.

ಪೆರಾರ್ದೆಡ್ ಪದ್‌ನೈನ್ ಕರಿದ್ ಪಾದೆದ ಸುತ್ತದ ಕುಕ್ಕುದ ಮರಟ್ ಗಿಜಿರ್‌ಗಿಜಿರ್‍ ಪೂಪೋದ್ - ಐತ ಕಮ್ಮೆನೊಗು ಕುಪ್ಪುಲ್ ಪಕ್ಕಿ `ಕುಹೂ ಕುಹೂ' ಕೂಪಾಡೊಂದಿತ್ತ್‌ಂಡ್. 
`ಕುಪ್ಪುಲ್ ಕುಪ್ಪುಲ್ ತಾರೆ-ಬಾರೆ-ನೀರ್‍' ಎಂದ್ ಜೋಕುಲು ನಲಿತೊಂದಿಪ್ಪಿನ ಸಮಯ.  ಗುಡ್ಡೆದ ಗೋಂಕುದ ದೈಕ್ಲೆಡ್ ಪೂಕರಿದ್ ನಿನೆಕುಲು ಪೀಂಕೋದಿತ್ತ.  ಗ್ರಾಮದ ರಾಜಂದೈವದ ಕೋಗಲೊಗು ಕೊಡಿಯೇರ್‍ದ್ ಕೋರಿಗುಂಟ ಪಾಡ್ದಿತ್ತ್ಂಡ್.  ಊರ ಸಾಂತ್‌ಮಾರಿ;  ಗರಡಿದ ಅಗೇಲ್-ಮಾತ ಕೈತಲಾವೊಂದುಪ್ಪುನಗ ಪೊದ್ದೆ ಇಷ್ಟರ್‍ ಬಿನ್ನೆರ್‍ ಬರ್ಪಿನಕಲೆನ್ ಎದ್ಕೂನರೆ ಊರುಮಾತ `ತೆಯ್ಯ ತೆಯ್ಯ'ಂದ್ ಸನ್ನಾಯೊಡುಪ್ಪುನಗ-ನಿರೆಮನ್ತ ರಂಗಜ್ಜ ಇಲ್ಲಾಗ್ ಚಂದೀಗಡೊಡ್ಡು ಅಕುಲು-ಅಮ್ಮೆ ಮಗಲ್ ಬತ್ತ್‌ದಿತ್ತೆರ್‍.

ಓಂಜಿ ದಿನ ಆಯೆ ಪಾದಡ್ಡ್ ಜತ್ತ್ ಬತ್ತ್ದ್ ಬೇಲಿದ ಬರಿ ಕೇಪುಲ್ದ ಗಿಡ್ಡೊಡ್ಡು ದೈವದ ವಂಚವುಗು ದೀಯರೆಂದ್ ಕೇಪುಲ್ದ ಪೂಮೊಯ್ತೊಂದ್ ಉಪ್ಪು ನಗ, ಆಯನ್ ಏರೋ ಲೆತ್ತಿಲೆಕ ಅಂಡ್.  ಸಬುದ ಬತ್ತಿನಂಚಿಗ್ ಮಂಡೆ ತಿರ್‍ಗಾದ್ ತೂಪೆ.  ಬಟ್ಟಲ್ ಕಣ್ಣ್‌ದ ಕೆಂಪು-ಬೊಲ್ದು ವರ್ಣದ ನೇಲ ಪೊಣ್ಣೊರ್ತಿ ಒಂಜಾತ್ ದೂರೊಡು ಮುಗುರು ತೆಲಿಕೆಡ್ ಉಂತುದಿತ್ತೊಲು.

`ನಿನ್ನ ಪುದರ್‍ ಎಂಚಿನ' ಇಂದೇ ಆಲ್ ಕೇನ್ ದುಪ್ಪೊಡು.

"ಹತ್ ಹತ್ ಹತ್........ ಷ........"

ಈತ್ ಪನ್ನಗ ಆಯಗ್ ಸಾಕಾಪುಂಡು;  ನಾಸಿಗೆ ಆಪುಂಡು.  ತನ್ಕ್ ಮಾತೆರ್‍ಲಾ ಮಕ್ಕರ್‍ ಮಲ್ಪರೆಂದೇ ಈ ಉಬ್ಲೆ ಊನ ಉಂಡಾ ದಾನ್ಯಾ?  ಸುಮಾರಾದ್ ಆಯೆ ಆತ್ ಒಯ್ತ್ ಪಾತೆರ್‍ನಾತ್ ಪೊರ್ತುಗು ಮಾತೆರ್‍ಲಾ ಮೂಂಕು ಪೀಂಟಾವೊಂದು ದೂರ ಪೋಪಿ ನಕುಲೇ.

ಅಲ್ ಕಣ್ಣ್ ಬುಲಾದ್ ಪ್ರೆಸ್‌ನೆ ಪಾಡುಲೆಕ ತೂಪೊಲು.  ಅಲ್ಪನೇ ಕೈತಾಲೆ ಕಿದೆಕ್ ಪಾಡ್ಯರೆಂದ್ ತಪ್ಪು.  ಕುತ್ತೊಂದಿತ್ತಿನ ಆಯನ ಅಮ್ಮ ಅಲೆನ್ ಲೆಪ್ಪು ವೆರ್‍.  "ಇಡೆ ಬಲ ಮಾಗ.  ಆಯಡ ಪೊಟ್ಟಡ ಎಂಚಿನ ಪಾತೆರ್‍ವ?"

"ಆಂಟಿ.  ಇಂಬೇಽ?...."  ಕೇನೊಂದ್ ಅಲ್ ಕೈತಲಾವನಗ ಅಮ್ಮ ಪೆನ್ಪೆರ್‍;  "ಅಂದ್ ಎನ ಮಗನೇ, ಪುದಾರ್‍ ಹರ್ಸೆ, ದಾಯೆಗ್ಲಾ ಪ್ರೇಜನ ದಾಂತಿನವು ಅವು.  ಆಯಗ್ ಸಮಾ ಬಾಯಿ ಬರ್‍ಪುಜಿ.  ಉಬ್ಲೆ......"

"ಓಹೋ, ಪಾಪ" ಆಲ್ ಪಶ್‌ತಾಪೊಡು ಆಯನೊರ ತೂಪೊಲು.

ಆಲ ಸುಷ್ಮ, ತಿರ್ತಲ್ಲಡ್ ಒರಿಯೇ ಉಪ್ಪುನ ರಂಗಜ್ಜನ ಇಲ್ಲಗ್ ಬೌದಿನ ಬಿನ್ನೆದಿ.  ಅಕುಲು ಅಮ್ಮೆ-ಮಗಲ್ ಇರ್ವೆರ್‍ ಬತ್ತ್‌ದೆರ್‍.  ಆಲ್ನ ಪಪ್ಪ ಪ್ರೊಫೆಸರ್‍ ಆರ್‍ ರಂಗಜ್ಜನ ನನಿಕೆಗೆ.  ಕಿನ್ನಿಡ್‌ದಿಂಚಿ ದೂರೊಡ್ ಕಲ್ಕತ್ತಡ್ ಇತ್ತ್‌ದ್.  ಅವುಲೇ ಕಲ್ತ್‌ದ್ ಮದಿಮೆ ಆದ್ ಇತ್ತೆ ಪಂಜಾಬ್‌ದ ವಿಶ್ವವಿದ್ಯಾಲಯೊಡು ಭಾಷಾ ವಿಜ್ಞಾನದ ಪ್ರಾಧ್ಯಾಪಕೆರಾದುಪ್ಪುನ ಪ್ರೊಫೆಸರ್‍ ರಂಗನಾಥ್ ಇತ್ತೆ ತುಳುನಾಡ್‌ದ ಜನಪದ ಸಾಹಿತ್ಯ ಸಂಸ್ಕೃತಿಲೆನ್, ಭೂತಾರಾಧನೆದಂಚಿನ ಆರಾಧನಾ ಪದ್ಧತಿಲೆನೇ ಅತ್ತಾಂದೆ.  ಮುಲ್ಪದ ಜನಾಂಗ ಒಗ್ಗಟ್ಟ್‌ದ ಸಮಗತಿಲೆನ್-ಉಂದೆನ್ ಮಾತ ಕಲ್ತೊಂದು ಪೋವರೆಗ್‌ಂದ್ ಪುರ್ಸೊತ್ತುಡು ಬೌದಿನಿಗೆ.  ಅರ್‍ನ ಒರ್ತಿಯೇ ಮಗಲ್ ಸುಷ್ಮಾ ಕ್ರಿಮಿನಾಲಜಿ ಬೊಕ್ಕ ಸೈಕಾಲಜಿ ವಿಷಯೊಲೆಡ್ ಡಿಗ್ರ ಕಲ್ತೊಂದುಪ್ಪುನಾಲ್‌ಗೆ.

ಚಂದೀಗಡತಂಚಿನ ದೂರದ ಊರುಡ್ ಇತ್ತ್ಂಡಲ ಅಕ್ಲೆನ ಇಲ್ಲದ ಬಾಸೆ ತುಳುವೇ!  ಅಕುಲು ಇಡೇ ಬನ್ನಗ ಅಕಲೆಗ್ ಬರೊಂದಿತ್ತಿನ ತುಳು ಬಾಸೆ ಏತಾಂಡ್ಲ ಆತೆ;  ಆಂಡ, ಬತ್ತ್ ನಾಲೇ ದಿನೊಟು ಮುಲ್ತಕ್ಲೆಲೆಕನೇ ಆಯೆರ್‍.  ಪ್ರೊಫೆಸರ್‍ ದುಂಬೇ ಮುಲ್ಪದ ತುಳು ಸಂಶೋಧನಾ ಕೇಂದ್ರೊಗು, ಅಂಚೆನೇ ತುಳು ಭಾಷೆದ ಕೆಲವು ವಿದ್ವಾಂಸೆರಗ್ ತಾನ್ ಬರ್‍ಪಿನ ವಿಷಯ ತೆರಿಪೇ ಬತ್ತಿತ್ತೆರ್‍.  ನೇಮ ನಡಾವಳಿ, ಕೋಲ ಕಂಬುಳ, ನಾಗ ಮಂಡಲ ಆಪಿನ ಸಮಯನೇ.  ಓಲು ಅಂಚಿನ ಸುದ್ದಿ ಕೇಂಡಲಾ ಪ್ರೊಫೆಸರ್‍ ಪೋವೊಂದಿತ್ತರ್‍.

ಬತ್ತಿನ ಮಗ್‌ರನೆ ದಿನವನೇ ಸುಷ್ಮಾಗ್ ಉಂಬ್ಯನ ಗುರ್ತ ಆಯಿನ.  ಆಲೆಗ್ ಊರು ಪತ್‌ಂಡ್.  ಹರೀಸ್‌ಡ ಇಷ್ಟು ಆಂಡ್.  ತನ್ಕುಲು ಪೋಪಿನಡೆಗ್ ಆಯನನ್ಲ ಲೆತೊಂದ್ ಪೋರೆ ಸುರು ಮಲ್ತೆರ್‍. ಸುಷ್ಮ ಎಚ್ಚಾದ್ ಆಯನೊಟ್ಟಿಗೆ ಉಪ್ಪುವೊಲು.  ಆಲ್.  ಬೇತೆಕಲ್ನಲೆಕ ಆಯನ್ ಮಕ್ಕರ್‍ ಮಲ್ಪುಜೊಲು.  ಆಯನ ವಾ ಪಾತೆರೊಲೆನ್ಲಾ ಓಂಗೆರ್‍ದ್ ಅರ್ಥ ಮಲ್ತೊನ್ವೊಲು.  "ಅವು ಎಂಚಿನ ಹರೀಶ್, ಉಂದೆಂಚಿನ ಹರೀಶ್, ಇಂದ್‌ದ್ ಆಯಡ ಸವಾಲ್ ಪಾಡೊಂದಿಪ್ಪುವೊಲು.

ಇತ್ತೆತ್ತೆ ಸುಷ್ಮ ಆತ್ ದುರೊಡು ತೋಜರಿಜ್ಜಿ, ಆಯೆ ಸಂತೊಸ್‌ಡ್ ಪಾರ್‍ದ ಅಲೆನ್ ಎದ್ಕೊನುವೆ.  ಆಲ್ ಬತ್ತ್ಂಡ ಇಲ್ಲಡ್ ಮಾತೆರ್‍ಡಲಾ ತೆಲ್ತೊಂದ್ ತೆಲ್ತೊಂದೇ ಪಾತೆರುವೊಲು.  ಸುಷ್ಮಾ ಇನ್ನಗ ತನ ಇಲ್ಡ್ ಅಮ್ಮ, ಪಪ್ಪಗ್ ಅಣ್ಣನಕ್ಲೆಗ್ ಮಾತೆರೆಗ್ಲಾ ಇಷ್ಟ ಆತ್‌ಂಡ್, ಆಲ್ ಇಲ್ಲಡ್ ಬತ್ತ್‌ದ್ ಉಜ್‌ಎರ್‌ಡ್ ಬಾರ್‍ ಮೆದ್ಪುನಗ ನೇಲ್ಯಣ್ಣೆ ಕುಸೆಲ್ ಮುಲ್ಪುವೆ.  ಆಂಡ ಆಲ್ ಮಾತೆರೆಡ್ಡ್ ದಿಂಜ ಪಾತೆರ್‍ನು ಹರ್ಶಡ.  ದಿಂಜ ಪೊರ್ತು ಉಪ್ಪುಮ ಆಯನೊಟ್ಟುಗು.

ಇಂಚಿನವೇ ಐತಾರ್ದಾನಿ ಆತ್ತ್‌ಡ ಹರ್ಶಾಗ್ ಬೇಗ ಸಾಲೆ ಬುಡಿನಾನಿ ಬಯ್ಯಡ್ ಅಕುಲಿರ್‍ವೆರ್‍ಲಾ ಅ ಪಾದೆದ ಮಿತ್ತ್ ಪೊದು ಕುಲ್ಲುವೆರ್‍.  ಪಾದೆದ ಸುತ್ತ ಗುಡ್ಡೆ.  ಗುಡ್ವೆದ ಕೆಂಪು ಕೇಪುಲ ಪಂರ್ದ್, ಕಂರ್ಡೆ, ಚೂರಿ ಮುಲ್ಲ ಪಂರ್ದ್, ಕಾಡ್ ದುಲಾಯಿದ ನೆಲ್ಲಿದ ಮರಡ್ದ್ ನೆಲ್ಲಿ ಕಾಯಿ-ಉಂದೆನ್ ಮಾತ ಪೋನಗ, ಬನ್ನಗ ಗೆತ್ತ ತಿನ್ಪೆರ್‍.  ಆಲ್ ಚಂದೀಗಡತ ವಿಷಯ, ತನ ಕಾಲೇಜ್, ಪಾಸಾಡಿದ ಪೊಣ್ಣುಲು, ತನ್ಕ್‌ಲೆನ ಗೊಬ್ಬುಲು ಕಾಲೇಜ್‌ದ ಪಾಟೊಲು ಈ ಮಾತ ಸಂಗತಿನ್ಲಾ ಗಂಟೆಗಟ್ಲೆ ಆಯಗ್ ಪನೊಂದೇ ಪೋಪೊಲು, ಆಯೆ ಕಣ್ಣ್ ಬುಲಾದ್ ಕೆಬಿಯರಲಾದ್ ಕೇನೊಂದು ಕುಲ್ಲುವೆ.

ಮುರಾನಿ ಒಂಜಿ ನೇಮೊಗು ಪೋದಿತ್ತರ್‍.  ಅಲ್ಪದೆಯಿವ ಪಾತ್ರಿ ಸುಷ್ಮಗ್ ಗಂದ ಪುರ್ಸಾದ ಕೊರ್‍ನಗ `ಎನ್ನ ಸಿರಿಮಂಚವುದ ಒಂಜಿರೆ ಒಂಜರೆ ಗಂಧ ಕೊರ್‍ಪೆ.  ಒಂಜಿರೆ ಗಂದತ್ತೇ, ಸಾರ ಬಗೆತ ಅಬಯ!  ಪೋಯಿನಲ್ಪ ಬತ್ತಿ ನಲ್ಪ ಬೆರಿಸಾಯಾದ್ ಕಾಪುವೆ' ಇಂದ್ ಕಡ್ತಲೆ ಮುಟ್ಟಾದ್ ಗಂದಪಿಂಗಾರೊನು ಕೊರ್‍ನಗ ಅಲೆನ ಮೋನೆ ತೂತೊಡು, ಅಲೆನ ಬಯಬಕ್ತಿ ತೂತೊಡು!  ಹರ್ಶಗ್ಲಾ ಅಂಚೆನೇ ಗಂದ ಪುರ್ಸಾದ ಕೊರ್‍ಪಾಯೊಲು.  ಅಯಿಡ್ದ್ ಬೊಕ್ಕ "ಹರೀಶ್ ನಿಕ್ಕ್ ಸಮಾ ಪಾತೆರ್‍ರೆ ನನ ಕಂದಿತ ಬರ್‍ಪುಂಡು, ದೈವ ಆಶೀರ್ವಾದ ಮಲ್ತ್ಂಡ್ ತೂಲ" ಇಂದ್ ಆಯಗ್ ಎದಗಲಾ ಪನೊಂದುಲ್ಲೊಲು.

ಕರಿಯುನ ಕಾಲೊಗು ಬುದ್ದಿಯೊಂಜೇ, ದುಂಬು ದುಂಬು ಪೋಯೇಪುನು.  ತಿಂಗೊಲು ಮೂಜಿ ಕರಿನಗ ಹರ್ಶಗ್ ಶಾಕ್‌ದಂಚಿನ ಸುದ್ದಿ!  ಸುಷ್ಮಾನಕುಲು ಚಂದೀ ಗಡೊಕು ಪಿರ ಪಿದಾಡ್‌ದೆರ್‍!  ಪ್ರೊಫೆಸರ್‌ನ ಸಂಶೋಧನೆ, ಕ್ಷೇತ್ರಕಾಯ್ ಮುಗಿಂಡ್‌ಗೆ, ಸುಷ್ಮಾ ಮುಲ್ತ್‌ಡ್ದ್ ಪಿರ ಪೋಪಲ್‌ಂದ್ ಹರ್ಷೆ ಕನ ಮನಸ್‌ಡ್ಲಾ ಎನ್ನ್‌ದಿಜೆ.  ಇತ್ತೆತ್ತೆ ಆಯೆಗ್ ದುಂಬುಡ್ದು ಮಸ್ತ್ ಸರಾಗ್ ಪಾತೆರ್‍ರೆ ಆಪುಂಡು.  ನನ ಅಲೆನಂಚ ಏರ್‍ ತನ ಒಟ್ಟುಗು ಪಾತೆರೊಂದು ಉಪ್ಪೆರ್‍?  ತಾನ್ ದಾದ ಮಲ್ಪನು....?

"ಎನನ್ ಬುಡ್ದ ಪೋವೊಡ್ಚಿ ಸುಹ್....ಸುಹ್!ಽಽ ಈ ಮೂಲೆ ಕುಲ್ಲು" ಇಂದ್ ನಾಲಯಿ ಒಯ್ತೊತ್ತ್‌ದ್ ಬುಲ್ಪೆಲ್ ಮೋನೆಡ್ ಆಯೆ ಪನ್ಪೆ, "ಪೋಪಿನಾಂಡ ಎನನ್ಲಾ ಲೆತೊಂದು ಪೊ" ಇನ್ಪೆ.  "ಆವು, ನಿನ್ನ ಅಮ್ಮಡ ಕೇನ್ವೆ, ಆರ್‍ ಒಪ್ಪಿಯೆರ್‍ಡ ನಿನನ್ ಎಂಕುಲು ಲೆತೊಂದ್ ಪೋಪ.  ಆಂಡ ಎಂಕಲೆಗ್, ಉಂತೆರೆ ಆಪುಜಿ" ಇಂದ್ ಸುಷ್ಮಾ ಪಂತೊಲು.

ಆಯನ ಮನಸ್ ಗಾಳಿದಿಂಜಿನ ಪುಗ್ಗ ಆತ್ಂಡ್, ಅಮ್ಮ ಒಪ್ಪುವೆರಾ?  ಒಪ್ಪಂದೆ ದಾನಿ-ಉಂದೊಂಜಿ ಪುದೆ ದೂರ ಎಡ್ಡೆ ಅಂಡ್‌ಂದ್ ಎನ್ನ್ದ್ ಕುಸಿಟ್ ಕಡಪುಡ್ತ್ ಕೊರ್‍ವರ್‍, ಬೊಕ್ಕ ತನ್ಕ್ ಅಮ್ಮ, ಪೊಪ್ಪ, ಅಣ್ಣನಕ್ಲು, ಸಾಲೆ, ಈ ಕಾಡ್‌ಗುಡ್ಡೆ, ಈ ಪಾದೆ-ಉಂದೆನ್ ಮಾತ ಬುಡ್ದ್ ಓಲಾ ತೂವಂದಿ ಊರುಗು ಪೋದ್ ಉಪ್ಪರೆ ಆವಾ......ಓ ದಾನಿ ಆವಂದೆ?  ಅವುಲು ಸುಷ್ಮಾ ಉಪ್ಪುವೊಲು.... ಆಂಡ.... ಅಮ್ಮ? .... ಛೇ, ದಾಲ ಗೊತ್ತಾಪುಜತ್ತ...."

ಎಲ್ಲೆನೇ ಬಯ್ಯಡ್ ಸುಷ್ಮ ನಕುಲು ಪಿದಾಡುವೆರ್‍, ಇನಿ ಇತ್ತೆ ಅಮ್ಮ ಸುಷ್ಮಾಗ್ ವಾ ಉತ್ತರ ಕೊರುವೆರ್‍ ಇಂದ ಇನ್ನೊಂದು ಆಯೆ ಇತ್ತೆ ಪಾದೆದ ಮಿತ್ತ್ ಕುಲ್ಲುದೆ.  ಆಯನ ಇಲ್ಲಡ್ ಆಕಲೆಗ್ಂದ್ ಕೋರ್‍ರುಟ್ಟಿದ ತಮ್ಮನೊಗು ತಯಾರಾವೊಂದಿತ್ತ್ಂಡ್.

ಸುಷ್ಮ ಬರೊಂದುಪ್ಪುನಾಲ್ ಕೈತಲಾಪೊಲು, ಆಯೆ ಲಕ್ ದುಂತ್ವೆ.

"ಸುಹ್ ಸುಹ್....ಮ್ಮ!" ಆಯೆ ಪೆನ್ಪೆ.

"ಕುಲ್ಲು ಹರ್ಷ", ಆಲ್ ಕೊಂಡಟೊಡು ಆಯನ ರಡ್ಡ್ ಕೈಕ್ಲೆನ್ ಪತೊಂದು ಕುಲ್ಲಪಾದ್, ಮರ್‍ಗಿಲ್‌ಡ್-ದೂಲುರ್ತುದ್ ತಾನ್ಲಾ ಕುಲ್ಲುವೊಲು.  ಬಯ್ಯದ ನೆಸರ್‍ಡ್ ನಡತ್ತ್‌ದ್ ಬತ್ತಿನ ಸುಷ್ಮಾನ ಮುಂಡೊದ ಇಸಲ್‌ಡ್ ಬೆಗರ್‌ದಿಂಜಿದ್ ಮೋನೆ ಕೆಂಪಾತ್‌ಂಡ್, ತರೆ ಕೂಜಲ್ ಗಾಲಿಗ್ ನಲಿಗೊಂದಿತ್ತ್ಂಡ್....ಪೊರ್ಲುಽಽ....

`ನಿನಗ್ ಕಡಪುಡ್ಜೆರ್‌ಗೆ ಹರ್ಷ' ಇಂದಾಲ್ ಪನ್ಪಲ್, ಆಯಗ್ ಕಂಡೆಲ್ದ ನರೊಕುಲು ದಿಂಜಿಲೆಕ್ಕ ಆಪುಂಡು.  "ಎಂಕ್ಲು ಎಲ್ಲೆ ಪಿದಾಡೊಡೇ ಅತ್ತ, ಪಪ್ಪ ರೈಲ್ದ್ ತಿಕೇಟ್ ಕನ್ದೆರ್‍."

ಆಯೆ ಅರ್ಥ ಆವಂದಿಲೆಕ ಪಾತೆರದಾಂತೆ ಕುಲ್ಲುವೆ, ದೂರ ಬಾನೊಡು ಬೀಮಾಬಿರು ಮೂಡ್‌ದಿತ್ತ್ಂಡ್.  ಕೆಲವು ದಿನೊಡ್ದಿಂಚಿ ಆಪಗಪಗ ಮನಸ್‌ಡ್ ಮೆಂಚುನ ವೊಂಜಿ ಪಾತೆರ ಆಯನ ದೊಂಡೆಡ್ದ್ ಪಿದಾಯಿ ಬರ್‍ರೆ ಸನ್ನಾಯ ಮಲ್ಪುಂಡು....

`ದಾದ ಎನ್ನ್‌ದ್ ಕುಲ್ಲುದ ಹರ್ಷ?'  ಆಲ್ ಒಂಜಿ ಬೊಟ್ಟುದು ಕೇನ್ವಲ್, ದಾಲಾ ಬೇಜಾರ್‍ ಮಲ್ಪಡ್ಚಿ, ನಿನ್ನಮ್ಮ ನಿನನ್ ಪೊರ್ಲುಡ್ ತೂಪೆರ್‍, ಆರ್‍ ಪನೊಂದಿತ್ತೆರ್‍, ಎಂಕುಲು ಅಯನ್ ಮಲ್ಲಾ ಸ್ಪತ್ರೆಗ್ ಲೆತೊಂದ್ ಪೋದು ಪರೀಕ್ಷೆ ಮಲ್ಪಾವ, ಈತ್ ಪುರ್ತು ಎಂಕಲ್ನ ಬೇಲೆಡ್ ಆಯನಂಚಿ ತರೆ ಕೊರಂದಿನ ತಪ್ಪಾಂಡ್ ಇಂದ್ ಪನೊಂದಿತ್ತೆರ್‍ ಹರ್ಷ, ಬೊಕ್ಕನಿನನ್ ತೂವರೆ ಕುಡ ಬರ್ಪೆಯಾನ್ ಆವಾ....?

ಅಲ್ ಪನೊಂದೆ ಇತ್ತೊಲು, ಪಡ್ಡಾಯಿ ಸೂಯೆð ಒರ ಜಲ್ಸ್‌ಡ್ ಬೆಳಗ್‌ದ್ ಕಡಲಗರ್ಬೊಡು ಮುರ್‍ಕಿಯೆ.  ಮೆಲಮೆ.....ಲ್ಲ..... ಕತ್ತಲೆ ಮುತ್ತೊಂದು ಬರ್ಪುಂಡು.

`ನನ ಪೋಯಿ'

ಇರ್ವೆರ್‍ಲಾ ಲಕ್‌ದ್.  ಇಲ್ಲಗ್ ಪಿದಾಡ್ಯೆರ್‍.

"ಸುಷ್ಮಾ, ಎನ್ನ ಮೈತಿದಿಯಾದ್ ಎಂಕ್ಲೆ ಇಲ್ಲಡೇ ಬತ್ತ್ ಉಪ್ಪುಲಾ ಆವಾ?" ಇಂದ ಆಯಗ್ ಆಲೆಡ ಕೇನೊಡ್‌ಂದ್ ಇತ್ತಂಡ್.  ಆಂಡವು ಬಾಯಿ ಮುಟ್ಟು ಬರಂದೆ ದೊಂಡೆದುಲಾಯಿ ದೆಂಕುಲ್ದುಂಡು.... ಬರ್ಪಿ ವರ್ಷ ಬತ್ತಿನದಗ ಖಂಡಿತಾ ಕೇನೊಡುಂದ್ ಎನ್ನುವೆ.

ಮನದಾನಿ ಬಯ್ಯದ ರೈಲ್‌ಗ್ ಸುಷ್ಮ, ಅಲ್ನ ಪಪ್ಪ ಪಿದಾಡ್ದ್‌ಪೋಯೆರ್‍.

ಅಕುಲು ಪೋದುಮುಟ್ಟಿನ ಕಾಕಜಿ ಬರ್‍ಪುಂಡಾಂದ್ ರಂಗಜ್ಜೆಲಾ, ಹರ್ಷೆಲಾ ಕಾತೊಂದಿತ್ತ್‌ಂಡಲಾ ಕಾಕಜಿ ಬತ್ತ್‌ಜಿ.  ನಾಲಾಜಿ ದಿನತದಗ ಪೇಪರ್‍ಸ್ ಚಂದೀಗಡತ್ತ ಸುದ್ದಿಯೊಂಜಿ ಬತ್ತ್ಂಡ್.  ಉಗ್ರಗಾಮಿ ನಕಲ್ನ ಗುಂಪೊಂಜಿ ಪರವೂರುದಕುಲೇ ದಿಂಜ ಉಪ್ಪುನ ಚಂದೀಗಡತ ಒಂಜಿ ಕೊಲೊನಿಗ್ ನೂರ್ದು, ಪತ್ತಿರ್ವ ಜನೊನು ಗುಂಡು ದೀದ್ ಕೆರ್ಯೆರ್‌ಗೆ, ಆಯ್ಟ್ ಪ್ರೊಫೆಸರ್‍ ರಂಗನಾಥ್ ಪನ್ಪನಾರ್‍ನ ಇಡೀ ಸಂಸಾರಲಾ ಸೇರ್‍ದಂಡ್.  ಇಂದೆನ್ ಓದುದ್ ಹರ್ಷಗ್ ನೂದು ಬೀಮಾಬೀರು ಮಿತ್ತ್‌ಲಕ್‌ದ್ ತೂವಾದ್ ತುಂಡಾದ್ ಮಂಡೆಗ್ ಮಗರ್ಲೆಕಾಂಡ್.....

            *****

ಕೀಲಿಕರಣ: ಕಿಶೋರ್‍ ಚಂದ್ರ

ಇದ್ದಿಲು ಮಾರುವ ಹೆಂಗಸರು

- ಮಂಜುನಾಥ ವಿ ಎಂ

ನನ್ನ ತಾಯಿ ಕಡೆಯ ಸಂಬಂಧಿಕರಿವರು,
ಇದ್ದಿಲಿನಂತೆ ಕಗ್ಗತ್ತಲನ್ನು ಉಗಿಯಬಲ್ಲ ಮಹಾ ದರಿದ್ರರಂತಿದ್ದರು.

ಹೆಂಡದಾಸೆಗೆ ದಿನ್ನೆ ಬಯಲಿನ ಪೊದೆಗಳಲ್ಲಿ
ಇಸ್ಪೀಟು ಆಡಲು ಬರುವ ಗಂಡಸರ ಜೊತೆ ಮಲಗಿ ಎದ್ದದ್ದನ್ನು
ಎಷ್ಟೋ ಸಲ ನೋಡಿದ್ದೇನೆ.

ಒಂಟಿಗಿಡದ ಪನ್ನೀರ ಫಲಗಳು ದುರಾಶೆ ತುಂಬಿದ
ಅವರ ತೃಷೆಯನ್ನು ಹೋಗಲಾಡಿಸುತ್ತಿದ್ದವು.

ಊರೂರು ಅಲೆದು ಹೊತ್ತು ತಂದ ಇದ್ದಿಲನ್ನು ಸಂಜೆಗತ್ತಲು ಏರುತ್ತಿದ್ದಂತೆ
ಮಾರಿ, ಗಡಂಗು ಹೊಕ್ಕುಬಿಡುತ್ತಿದ್ದರು ತಾಟಗಿತ್ತಿಯರು.

ಅವರ ಸೊಂಟದ ಬದಿಯ ಕತ್ತಿಗಳು ವಾರಕ್ಕೊಮ್ಮೆಯಾದರೂ
ಕುಲುಮೆಗಾರನಲ್ಲಿಗೆ ಹೋಗಿ ಬರುತ್ತಿದ್ದದ್ದು ನೆನಪಾಗುತ್ತಿರುತ್ತದೆ.

        *****

ಅಕ್ಕ ನೀ ಕೇಳವ್ವ

- ಡಾ || ರಾಜಪ್ಪ ದಳವಾಯಿ

ಅಕ್ಕ ನೀ ಕೇಳವ್ವ
ತಂಗೀ ನೀ ಬಾರವ್ವ
ಸಂವಿದಾನ ತಿಳಿಯವ್ವ ||

ಹೆಣ್ಣಾಗಿ ಹುಟ್ಟಿದ್ದಿ
ಹಣ್ಣಾಗಿ ಬಾಳಿದ್ದಿ
ಕೂಸು ಗಂಡನ್ನ ಸಾಕಿ
ಸಂಸಾರ ಮಾಡಿದಾಕಿ ||

ಜಗವೆಲ್ಲ ತಿಳಿದೈತೆ
ತಲಿಯಾಗೆ ಗ್ಯಾನೆಐತೆ
ಘನ ಬಾಳ ಬಾಳಿದಾಕಿ
ಮುಜುಗರ ಬಿಡುಬಾಕಿ ||

ಗಂಡಂಗೆ ಹೆದ್ರಬ್ಯಾಡ
ಮಂದೀನ ಮರಿಬ್ಯಾಡ
ಜನ್ರ ಕೆಲ್ಸ ಮಾಡವ್ವ
ಊರಿಗೆ ಉಸಿರಾಗವ್ವ ||

ಸಂಸತ್ತು ಈ ದೇಶಕ್ಕ
ವಿಧಾನಸೌಧ ರಾಜ್ಯಕ್ಕ
ಹಳ್ಳಿ ಹಳ್ಳೀಗೆ ಪಂಚಾಯ್ತಿ
ದೊಡ್ಡದವ್ವ ಮಾರಾಯ್ತಿ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ನಾನು ಬದುಕುತ್ತೇನೆ

- ಅಬ್ಬಾಸ್ ಮೇಲಿನಮನಿ

ಸ್ಫರದ್ರೂಪಿ ಯವಕನೊಬ್ಬ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉನ್ನತ ಅಧಿಕಾರಿಯಾಗಿದ್ದ.  ಅವನು ತನ್ನ ತಾಯಿ ತಂದೆ ಸಂಬಂಧಿಕರೊಂದಿಗೆ ಬಂದು ಆ ಚೆಲುವಾದ ಹುಡುಗಿಯನ್ನು ನೋಡಿದ.  ಅವಳ ಮಾತು, ಅರ್ಹತೆಗಳೆಲ್ಲ ಅವನಿಗಿಷ್ಟವಾದವು.  ಹುಡುಗಿಯೂ ಅವನನ್ನು ಮೆಚ್ಚಿಕೊಂಡಳು.

ಎರಡೂ ಕಡೆಯ ಹಿರಿಯರು ಮಾತುಕತೆ ಆರಂಭಿಸಿಯೇಬಿಟ್ಟರು.

"ನಮ್ಮ ಮಗನಿಗೆ ಒಂದು ಲಕ್ಷ ವರದಕ್ಷಿಣೆ ಕೊಡಬೇಕು" ಹುಡುಗನ ತಾಯಿ ಮೊದಲು ಬೇಡಿಕೆ ಇತ್ತಳು.

"ಕಿಮ್ಮತ್ತಿನ ಎರಡು ಜತೆ ಬಟ್ಟೆ, ಉಂಗುರ, ಚೈನು, ವಾಚು ಕೊಡಬೇಕು" ಸಂಬಂಧಿಕರಲ್ಲಿ ಒಬ್ಬರು ತಮ್ಮ ಅಹವಾಲು ಸಲ್ಲಿಸಿದರು.

"ನನಗೆ ಓಡಾಡಲು ಇಂಡಿಕಾ ಕಾರು ಬೇಕು" ಹುಡುಗ ತನ್ನ ಡಿಮ್ಯಾಂಡ್ ಮುಂದಿಟ್ಟ.

"ನಮ್ಮ ಹುಡುಗ ದೊಡ್ಡ ಸ್ಥಾನದಲ್ಲಿದ್ದವನು.  ಅವನ ಮದುವೆಯನ್ನು ನಾವು ಹೇಳಿದ ಕಲ್ಯಾಣ ಮಂಟಪದಲ್ಲಿಯೇ ಮಾಡಿಕೊಡಬೇಕು" ಎಂದು ಕರಾರು ಹಾಕಿದರು ಹುಡುಗನ ತಂದೆ.

ಇದುವರೆವಿಗೂ ಸುಮ್ಮನೆ ಕುಳಿತಿದ್ದ ಹುಡುಗಿಯ ಕಡೆಯ ಹಿರಿಯರೊಬ್ಬರು:  "ವರೋಪಚಾರದಲ್ಲಿ ಕೊರತೆ ಇರುವುದಿಲ್ಲ.  ನಿಮ್ಮ ಮರ್ಯಾದೆಗೆ ಕುಂದು ಬಾರದಂತೆ ನಾವು ಮದುವೆ ಮಾಡಿಕೊಡುತ್ತೇವೆ.  ಆದರೆ ಇಂಥದ್ದೆ ಬೇಕು.  ಇಷ್ಟು ಬೇಕು ಎಂದು ಗೆರೆಕೊರೆದು ಹೇಳಬೇಡಿರಿ" ಎಂದರು.

ಅವರು ಮಾತಿನಿಂದ ವ್ಯಗ್ರಗೊಂಡ ಹುಡುಗನ ತಾಯಿ "ನಾವೇನು ಭಿಕಾರಿಗಳಲ್ಲ" ಎಂದಳು.

"ಅಂಥವರಾಗಿದ್ದರೆ ಎಷ್ಟೊ ಒಳ್ಳೆಯದಿತ್ತು.  ಕನಿಷ್ಟ ಪಕ್ಷ ಅವರಿಗೆ ಮನುಷ್ಯತ್ವವಾದರೂ ಇರುತ್ತಿತ್ತು.  ನೀವು ದರೋಡೆಕೋರರು!" ಬಾಗಿಲಲ್ಲಿ ನಿಂತು ಹೇಳಿದಳು ಹುಡುಗಿ.

ಅವಳ ಮಾತಿನಿಂದ ಅಪಮಾನಿತರಾದ ಹುಡುಗನ ಕಡೆಯವರ ಮೂಗಿನ ಹೊರಳೆ ಹಿಗ್ಗಿದವು.  "ಹುಡುಗಿ ಮದುವೆ ಮೊದಲೆ ಹೀಗೆ.  ನಾಳೆ ಏನು ಗತಿ?" ಅವರ ಜತೆಗೆ ಬಂದ ಮುದುಕ ಮುಖದ ಮೇಲೆ ಹೊಡೆದಂತೆ ಹೇಳಿದ.

"ಹುಡುಗಿ ಒಳ್ಳೆಯವಳು.  ಆದರೆ ನೇರ"  ಮೊಮ್ಮಗಳನ್ನು ಸಮರ್ಥಿಸಿಕೊಂಡಳು ಅಜ್ಜಿ.

"ನೀವು ನ್ಯಾಯವಾಗಿ ಮಾತಾಡಿರಿ" ಎಂದರು ಹುಡುಗಿಯ ತಂದೆ.

"ಅಪ್ಪ ಇವರೊಂದಿಗೆ ಚೌಕಾಸಿ ವ್ಯವಹಾರ ಬೇಡ" ನಿಷ್ಠುರವಾಗಿ ಹೇಳಿದಳು ಹುಡುಗಿ.

ಹುಡುಗನ ಕಡೆಯವರು ಎದ್ದು ಬಿರುಗಾಳಿಯಂತೆ ಹೊರಟರು.  ಹುಡುಗನ ತಾಯಿ ಹೊಸ್ತಿಲು ದಾಡುವಾಗ "ಈ ಜನ್ಮದಲ್ಲೇ ನಿನಗೆ ಮದುವೆ ಆಗುವುದಿಲ್ಲ" ಎಂದು ಶಪಿಸಿದಳು.

"ಆಗದಿದ್ದರು ಚಿಂತೆಯಿಲ್ಲ.  ನಾನು ಬದುಕುತ್ತೇನೆ" ಗಟ್ಟಿಯಾಗಿ ಹೇಳಿದಳು ಹುಡುಗಿ.

            *****
ಕೀಲಿಕರಣ: ಕಿಶೋರ್‍ ಚಂದ್ರ

ಹಣ್ಣು ಮಾವು

- ಹಾರಾಸನಾ

ಹಿರಣ್ಯಗರ್ಭನ ಕೋಶಬಾಹ್ಯವ ಸೀಳಿ
ಸುಖಸುಮ್ಮಾನವೋ ದುಃಖದುಮ್ಮಾನವೋ ತಿಳಿ
ಕರಟವೋ ಕಾರಣವಾಗಿ ಮುಂಸೃಷ್ಟಿಗಿರಲಿ
ರಸಾನಂದಸುಧೆಯ ಸಂವೃಷ್ಟಿಯಿರಲಿ

ಕೋಶಾಂತರ್ಯದಲ್ಲಿರ್ಪ ಕೋಶಾತೀತನ ತಿಳಿ
ಕರಟದಾಂತರ್ಯದ ಕಾರಣಬೀಜವು ನಿರ್ತಳಿ
ರುಚಿಯಿಂದಾಚೆಗಿರುವನೇ ಎಲ್ಲದರ ತಿರುಳಾಗಿ
ಆವ ದ್ವಂದ್ವಾತೀತ, ಜಗ ಮಾತ್ರ ಮರುಳಾಗಿ

ಅಂತರಾದಿತ್ಯನಿಂ ಬೀಜ ಕರಟಾದಿಯಾಗಿ
ತಿರುಳು ಸೇರಿ ಹಳದಿ ಸಿಪ್ಪೆಯು ಮಾಗಿ
ಬಾಹ್ಯತೇಜವ ಮೆರೆದು ಸರ್ವಾಕರ್ಷಿಯಾಗಿ
ಮಾವಿನಲೂ ಕಾಣ್ಬನು ವೇದಾಂತ ಪರಿಭಾಷಿಯಾಗಿ

             *****

ಹಾಡು-ಪಾಡು

- ಗಿರಿಜಾಪತಿ ಎಂ. ಎನ್

ಕುಸುಮವೊಂದು ಉಲ್ಲಾಸದಿಂದ
ಅರಳಿನಿಂತು ನಕ್ಕಿತು |

ನಭದ ನೀಲಿ ಬಣ್ಣ ಕಂಡು
ನಾನೇ ಚೆಲುವೆ ಎಂದಿತು |

ಇಳೆಯ ಮೇಲಣ ಕೊಳೆಯ ಕಂಡು
ಹಮ್ಮಿನಿಂದ ಅಣಕಿತು |

ಸುಳಿದು ಸೂಸೋ ತಂಗಾಳಿಗೆ
ಒನಪಿನಿಂದ ಬಳುಕಿತು |

ಹಾರಿ ಬಂದ ದುಂಬಿಯುಸಿರು
ಮಧುರ ಸುಧೆಯೆ ಎಂದಿತು |

ಮುಂಬೆಳಗು ಜಾರೆ
ಧಗೆ ಬಗೆಯು ಏರಿ ಏರೆ
ತಾಪಕದುವೆ ಬಳಲಿತು |

ಮುಖದಿ ಮೂಡಿದ ನೆರಿಗೆ ಕಂಡು
ದುಃಖದಿಂದ ನೊಂದಿತು |

ಮುಗಿಲ ಸ್ವಚ್ಛವಾದ ಬಣ್ಣ
ಇಳೆಯ ಪುಷ್ಟವಾದ ಮಣ್ಣ |

ವಂದಿಸುತಲೇ ಉದುರಿತು
ಉದುರಿ ಮಣ್ಣ ಸೇರಿತು ||

        *****

ಕೀಲಿಕರಣ: ಕಿಶೋರ್‍ ಚಂದ್ರ

ವಾರಿಜಮುಖಿ ದೊಡ್ಡಶಹರ ಹುಬ್ಬಳ್ಳಿಯೊಳು

-ಶಿಶುನಾಳ ಶರೀಫ್

ವಾರಿಜಮುಖಿ ದೊಡ್ಡಶಹರ ಹುಬ್ಬಳ್ಳಿಯೊಳು
ಕೋರಿ ಗಂಗಪ್ಪ ಸಾವುಕಾರನು                                  ||ಪ||

ಧಾರುಣಿಯೊಳು ಸಣ್ಣ ಊರು ಕರಡೀಗುಡ್ಡ
ಹಾರೈಸುತ ವ್ಯವಹಾರಕ್ಹೋಗಿ ಒಬ್ಬ
ವೀರ ಜಂಗಮನ ಹೇಣತಿ ಕೆಣಕಲು
ಮಾರಿಗೋಲಿಯೊಳು ಮರಣಹೊಂದಿದಾ                      ||ಅ.ಪ.||

ಸನುಮತಿಯಲ್ಲಿ ಸಾಧು ಸಜ್ಜನ ಸಂಪ್ರೀತನು
ಧನ ಸಿರಿ ಕನಕ ವಸ್ತು ಕೈಗೊಂಡು ಮೆರೆವ ಸಂಪ್ರೀತನು
ಗಣಗಣರತ್ನ ವಾಣಿಜ್ಯ ಕುಲಜಾತನು
ಅನುದಿನ ಕೂಡಿ ನಡೆವ ಸ್ನೇಹಿತ ಮಾಂತಯ್ಯನ ಪ್ರೀತನು
ಏನು ಹೇಳಲಿ ತನಗಾಗುವ ಹಾನಿಯು
ಕಣಗಾಣದೆ ಕೆಟ್ಟ ಹೆಣ್ಣಿನ ಸಂಗದಿ
ಮುಣ್ಣುಗೂಡಿಸಿ ಮಾಯದ ಉರ್ಲಗಣ್ಣಿಗೆ
ವಣ ಅಪಮೃತ್ಯುವಿನಿಂದ ಸತ್ತುಹೋದನೈ              ||೧||  

ಜಡಬುದ್ಧಿಗೆ ಜನ್ಮಾಂತರ ವಿಧಿಕೃತ ಕೂಡಿತು
ತಡೆಯದೆ ವಿಷಯದಿ ಮಾಯವ
ಒಡಲೊಳ್ ಮತ್ಸರ ಮೂಡಿತು
ಅಡಗಿಮಾಡಿ ಉಣಬಸಬೇಕೆಂಬುದು ಕಲಹವ ದೂಡಿತು
ಪ್ರೀತಿಯೆಡೆಗೊಂಡು ಅರಿವಿಲ್ಲದ ಕಲಹಕ ದೂಡಿತು
ನಡೆತಪ್ಪಿತುಯೆಂದೆನೆನುತಲೆ ಜಂಗಮ
ಕಡುರೋಷದಿ ಹಿಡಿದೆದ್ದು ಖಡ್ಲದಿಂ
ಕಡಿಯಲು ಪಕ್ಕದಿ ಎಲುಬು ಮುರಿದು ಶಿರ
ಸಿಡಿಮಿಡಿಗೊಳ್ಳುತಲಿ ಪೊಡವಿಗುದುರಿತೌ               ||೨||

ಕೆಲ ಬಲದವರೆಚ್ಚಿಸಲು ಪೋಲೀಸ ಕೇಳಿದಾ
ಅಳವಳಗೊಳುತಲಿ ಮನದೊಳಗತಿ ಕೋಪವ ತಾಳಿದಾ
ಬಲುಗಡ ಕುಲಕರ್ಣಿಗಳ ಕರಿಯಂತ್ಹೇಳಿದಾ
ಒಳಗಿಂದೊಳಗೆ ಬರೆದು ಹುಜೂರರಿಗೆ ರೀಪೋರ್ಟವ ಮಾಡಿದಾ
ಒಳಮಾತಿಲೆ ಅಯ್ಯನ ಕೈ ಖಡ್ಗವ ಕೆಳಗಿಳುಹಿಸಿ
ಎಳೆದೊಯ್ದು ಚಾವಾಡಿಗೆ ಸೆಳೆದು ಪಿಚಂಡಿಯ ಬಿಗಿದು ಬೇಗನೆ
ಕಳುಹಿಸಿ ಸುದ್ದಿ ಹುಬ್ಬಳ್ಳಿಯ ಸ್ಥಳಕ್ಕೆ                         ||೩||

ಸುದ್ದಿ ಕೇಳಿ ಹುಚ್ಚಪ್ಪತಮ್ಮ ಅತಿ ದುಃಖದಿ ಎದಿ ಬಾಯಿ
ಗುದ್ದಿಕೊಳ್ಳುತ ಬಿದ್ದ್ಹೊರಳಿದ ಭೂಮಿಗೆ ಶೋಕದಿ ಸತಿ ಸುತ-
ರಿದ್ದರಾತ್ಮ ಬಾಂಧವರು ಬಂದರಲ್ಲೇ ರೌದ್ರದಿ-
ಸಧ್ಯಕ್ಕ್ಹೋಗಿ ಹೆಣ ಹುಗಿಯಲು ನಡೆದರು ದಗ್ಧದೀ
ಮಧ್ಯರಾತ್ರಿಯಲೆದ್ದು ಶ್ರವಕ ಮಣ್ಣ
ಮುದ್ದಿಯೊಳಗೆ ಮುಚ್ಚಿಟ್ಟ ವಾರ್ತಿಯದು
ಚೋದ್ಯವಾಯಿತು ಶಿಶುನಾಳಧೀಶನಿಗೆ
ತಿದ್ದಿ ನಿನಗೆ ನಾ ತಿಳಿಸಿದೆ ಗೆಳತಿ                             ||೪||  

****

ಕೀಲಿಕರಣ: ಎಂ.ಎನ್.ಎಸ್. ರಾವ್

ಹಗಲುಗನಸು

- ಮಂಜುನಾಥ ವಿ ಎಂ

ಅವ್ವ ರಾತ್ರೆಯೊಂದು ಗಳಿಗೆ ಎದು  ಹಾಡಿಕೊಳ್ಳುತ್ತಾಳೆ;
ಅವರೆ ಹೊಲದಲ್ಲಿ ಗೇಯುವಾಗ ಬಿದ್ದ ಹಗಲುಗನಸೇ,

ಆ ಕ್ಷಣದ ದುಃಸ್ವಪ್ನವನ್ನು ಶಿಕ್ಷಿಸು,
ದಮನಗೊಳಿಸೂ ಅವನ ಕ್ರಾಂತಿಗೀತೆಯನ್ನು,
ಬೂಟಿನಿಂದ ಚಿಮ್ಮುವ ನೋವಿನ ರಕ್ತವನ್ನು,

ನೆಲದ ನೈದಿಲೆಗಳಲಿ ಕಾವ್ಯ ಅರಳಗೊಟ್ಟವನು,
ಕ್ರಾಂತಿ ಕಂಡವನು ಮಿಂದನವನು.

ಎಲುಬುಮೂಳೆಗಳಿಡಿದು ಬರುವವರಿಗೆ
ತನ್ನದೇ ರಕ್ತ ಮಾಂಸದಲಿ ಹೊದಿಸಿ, ಉಸಿರಾಡಿಸಿ
ತಾನು ಬೆತ್ತಲೆ ಮಲಗುವವನು.

ವಸಂತದಲಿ ಮೂಡಿಬರುವ ಹೆಣ್ಣಿಗೆ ಕನಸುಗಳ ತುಂಬುವವನು;
ನಾಳಿನ ದುಃಖ ದುಮ್ಮಾನಗಳನ್ನು ಇಂದೇ ಗಾಳಿಗೆ ತೂರುವವನು.

ನಾಳೆ ಅವನ ಗೋರಿಗೆ ಸಲ್ಲಬಹುದಾದ
ಆ ಗುಲಾಬಿಗಳನ್ನು ಇಂದೇ ಕಿತ್ತೆಸೆದುಬಿಡೂ
ನನ್ನ ಹೃದಯದಲ್ಲಿ ಬೆಳೆಯಲೀ ಹೆಮ್ಮರವಾಗಿ, ಉದುರಲೀ ಹಣ್ಣಾಗಿ.

ಅವರೆ ಹೊಲದಲ್ಲಿ ಗೇಯುವಾಗ ಬಿದ್ದ
ಹಗಲುಗನಸೇ . . . . . . .

ಬೆರಳಚ್ಚು ಯಂತ್ರದಲ್ಲಿ ಮೂಡಿಬರುತ್ತಿದ್ದ
ಬಿಳಿಹಾಳೆಯ ರಕ್ತ ಘೋಷಣೆಯ ಮೇಲೆ
ಈ ಅವ್ವನ ಚಿತ್ರಗಳು ಸರದಿಯಲ್ಲಿ ಸಾಲುಗಟ್ಟಿ ನಿಂತಿದ್ದವು.

        *****

ಹಳ್ಳೀಯೆ ನಮ ದೇಶ

- ಡಾ || ರಾಜಪ್ಪ ದಳವಾಯಿ

ಹಳ್ಳೀಯೆ ನಮ ದೇಶ
ಪಂಚಾಯ್ತಿ ನಮ ಕೋಶ ||

ನಮ್ಮ ಉದ್ಧಾರವ
ಮತ್ಯಾರು ಮಾಡ್ಯಾರು
ಸವಲತ್ತು ತಾಕತ್ತು
ಇನ್ಯಾರು ಕೊಟ್ಟಾರು ||

ಗ್ರಾಮಾದ ಸಹಕಾರ
ಅದೆ ನಮ್ಮ ಸರಕಾರ
ಪಂಚಾಯ್ತಿ ಕಾನೂನು
ತಿಳಿಬೇಕು ಇನ್ನೂನು ||

ಅಬಲರಿಗೆ ಸವಲತ್ತು
ಕೊಡಿಸೋಣ ಯಾವತ್ತು
ಉಳ್ಳವರ ಕೊಳ್ಳೆಯ
ತಡೆಯೋಣ ಗೆಳೆಯ ||

ಬಾರಕ್ಕ ಬಾರಣ್ಣ
ಪಂಚಾಯ್ತಿ ನಂಬೋಣ
ಆಮೂಲ್ಕ ನಾವೆಲ್ಲ
ಡೆಮಕ್ರಸಿ ಉಳಿಸೋಣ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಒಸಯೊ

- ಮುದ್ದು ಮೂಡುಬೆಳ್ಳೆ

ಐನ್ ಪಾಲೆ ಪಿಂಗಾರ ಪತ್ತೊಂದತ್ತಾ?.....
ಬಚ್ಚಿರೆ ಬಜ್ಜೆಯಿ ಸರ್ಕೆ ಉಂಡತ್ತಾ?....
ಇಂದಾ ಆ ಲಾಟಂದ ಬೊಲ್ಪಂತೆ ಮಲ್ಲಮಲ್ಪು ತುಕ್ರಾ.....
ಕುಟ್ಯೇ, ದುಂಪೋಽಽ.... ಪಾರ್‍, ತೊಡಮೆದ ಉರೊಲು ಗೆಪ್ಪು.....
ಇಂದದೇ, ಪೊಂಜೊವು - ನನ ಎಂಕುಲು ಪಿರಪಿಜಿರ್ದ್ ಊರು ಒಣಸ್‌ಗ್ ಬನ್ನಟ್ಟ ನಿದೆರ್ನತ್ತ್, ನಡೀರ್‌ಡ್ಡ್ ದುಂಬು ಒಣಸ್‌ಗ್
ತಯಾರಾವೂಡು.... ಕೇಂಡಾಽಽ.....?
ಇಂದಯಾ, ಬೆಟ್ರಿ ಪತೊಂದಿನಿ ಏರವು ಕಿಟ್ಟೆನಾ?.....
ಪೋತಿಯಾ, ಕಾರೊಂತೆ ಬೀಸ ಪಾಡ್ಲೆ.  ನಿಕುಲು ನಲ್ವೆರ್‍
ದುಂಪೋದು ಗುತ್ತುಗು ಸಾಯ್ತಿ ಮಾತ ಮುಟ್ಟಾಲೆ....
ರವ್ಯೇ, ಕಾಸೊಂತೆ ಜೋಕೆಂಬೇಽಽ.... ಪೋಯ್.... ಪೋಯಿ....
ಕಡೇಸ್‌ಂಡ್‌... ಪಾಡಿ ಕಡಪ್ಪರ್ನೇ ಪೊರ್ತ್ತು ಕೆಲಾವುಂಡು....
ಏರ್ದೇ, ಈ ನ್ಯಾಲೆನ್ ಲೆತ್ತ್‌ದ್ ಕಟ್ ಪಾಡ್ಲೇ...
ತಿಮ್ಮಾ, ಕೋರ್‍ಲೆನ ರೆಂಕೆ ಪತೊನ್ ರೆಂಕೆ... ಅಂಚ....
ಕಾರ್‍ ಕಟ್ಟಿಡ್ ಕಟ್ದತ್ತಾ?ಽ...
ವ್ವಬ್ಬ ಕತ್ತಲೆನೇ!.... ಇಂದಯಾ, ಬೊಲ್ಪುದಾಯೆ ಒಂತೆ
ಪಿರವುಂತುಲಾ.... ಇಂದಾ, ಆ ಪುಣಿಟೇ ಉಂತೋನು....
ಆಂ, ಅಕುಲು ದುಂಬೊತ್ತಡ್.... ಇಂದಯಾ, ಪುಣಿತ್ತ! ಕೆಯ್ ದೊಂಕಡೆ
ಎಂಚಿನವು ಆಗರ್ದ ಮೇಲ್ದ್.... ಪುಚ್ಚೆನಾ....?
`ಮ್ಯಾಂವ್ಽಽ'....
`ಪ್ಪುಚೆನೆಽಽ'....

ಬಗ್ಗ್‌ದ್ ಒಂಜಿ ಕಲ್ಲ್ ಪೆಜ್ಜಿಯೆ ದಾದುಪುಜಾರಿ, ಪುಚ್ಚೆ ಅಗರ್‍ದ ಆಕೋಡಿಗ್ ಪಿಡ್ಚ ಪಾಂಡ್.... ಕಂಡದ ಕಟ್ಟಪುಣಿ ಕಡತ್ತ್‌ದ್ ಅಕುಲು ಪಾಡಿದ ತಾದಿ ಪತ್ಯೆರ್‍ ವರ್ನಾದಿ ಪೋದು ಕಾಲಾದಿ ಬನ್ನಗ.... ಕಾಲಾದಿಪೋದು ಒರ್ಸಾದಿ ಬನ್ನಗ.... ಕೋಲ ಬಲಿ ಆಂಡ್, ಬಿರಿತಂಬಿಲ ಆಂಡ್....

ಎಂಚಿ ಮರ್ಯಲ!

ಕಣ್ಯೊಡು ದೊರ್ತಿನಿ ಪಣಿಯತ್ತ್, ಬಾಣನೇ ಬಿರಿಂಡ್!.... ಒಡ್ಕನೇ ದಾಂತಿ ಬರ್ಸ.... ಬೊಲ್ಲ.... ನೀರ್‍ ಎರ್ಕಿನಿ ತುದೆತೋಡ್ಡ್ ಮಾತ್ರತ್ತ್, ಇಲ್ಲಿಲ್ಲ್.... ಬಿತ್ತ್‌ಲ್.... ಕಿದೆ.... ಕೈಕಂಜಿ.... ಮಾತ ಬೊಲ್ಲೊಡು ಪೋಂಡು.... ಇನಿಮುಟ್ಟ ತೊದ್‌ಕೇನಂದಿ ಬೊಲ್ಲೊಗು.... ಊರು ಮರಕಟ್‌ದ್ ಪೋಂಡು.

ದೆಯಿವ ಮೂನಿಂಡಾ....  ದೇವೆರಾ?.... ಒರನಾ.... ಇರ್ವೊಲಾಽಽ....  ನಡ್ಪಾಯಿ ಕಂಡೊಲೆನೇಜಿದ ಪತ್ತ್ ಪತ್ತ್.... ಮಣ್ಣ್‌ದ್ದಿಂಚಿ ಸೀಂಟ್‌ದ್ ಬೊಲ್ಲೊಡು ಪೋಂಡು.... ಉಪ್ಪಮುಟ್ಟ ಬದ್ಕೊಡೇ, ಸೊಸಯ್ಟಿದ ಚಿತ್ತ್ ಕಂತ್ ಬಿತ್ಯೆರ್‍.... ಕೆಯ್ ಪಾಯಾಂಡ್....

    ಆ ಜಾಲ ಪೊಲಿಯೇ
    ಈ ಜಾಲ ಪೊಲಿಯೇ
    ಎಂಕಲೆಜಾಲ ಪೊಲಿಯೇ
    ಎಲ್ಪತ್ತೇಲ್ ಪೊಲಿಯೇಽಽ
    ಪೊಲಿಪೊಲಿಪೊಲಿ
    ಪೊಲಿಯೇ!ಽಽ....
    ಪೊಸಬಾರಕೆಯೆಪಡಿಮಂಚವುದು
    ದರ್ತ್ ಜಾಲ ಪೊಲಿಯಾಂಡ್....

            *    *    *

ಗಿರಾಮ ದೈವೊಗಿನಿ ಪೊಸಬಾರ ತಂಬಲ!

ತಿರ್ತಲ್ಲ ದಾದು ಪುಜಾರಿಗ್ ತುಂಬಾಯಿಂಚಿ ಪುದೆ.... ದೆಯವದ ಸೇವೆ, ಆಪುಂಜಿಂದಾಪುಜಿ, ಊರುಗು ಏಲ್ಕೆ ಆಂಡ್.  ಗಿರಾಮ ಕೂಡ್‌ಕಟ್ಟ್....  ಸಬೆ ಸರ್ವೆರ್‍ ಗುರ್ಕಾರ್ಲು ದೆಯ್ವದ ಚಾವಡಿಡ್ ಮಲ್ತಿಂಚಿ ಕಟ್ಟ್.... ಸಂಕ್ರಾಂದಿ....  ಸಾಣದ ಬಕಿಲರತ್ತಿ ಬೊಕ್ಕ ಒರ್ಸೊಗೊರಿಯಾಗ್ ಪೊಸಬಾರ ತಂಬಿಲ....

ಎಣ್ಣೆ, ತಾರಾಯಿ, ಬೊಂಡ, ಪೊದ್ದೊಲ್, ಬಜಿಲ್-ಬೆಲ್, ಪಣಿಯಾರ್ದ ಕೊಡಿಯಿತೆತ್ತ ಕಟ್ಟ್.... ಒಂಜಾ ರಡ್ಡಾ.... ?....

-ಬಯ್ಯಡೊರ ಪೋದು ಸಾಣೊಡು ದೀದ್ ಬತ್ತಾತ್‌ಂಡ್....

ತಿರ್ತಲ್ಲಗ್ ಪೊಸಬಾರ ತಂಬಿಲ್ದ ಮರ್ಯಾದಿ....  ಪರ್ಬೊಡ್ದು ಮಲ್ಲ ಪರ್ಬ!....

ಕುಟುಮ ಸಂತೇಸಿ, ಪೊದ್ದೆರಿಸ್ಟೆರ್‍ ಸೇರ್ವೆರ್‍
ಆಂಜೊವು ಪೇಂಟೆಗ್ ಪೋತೆರ್‍.
ಪೊಂಜೋವು ಅಟಿಲದ್ದಟ್ಟಣೆಡುಲ್ಲೆರ್‍.
ಪೊರ್ತು ಕಂತ್‌ದ್ ರಡ್ಡ್ ಗಲಿಗೆ ಆನಗ ಜನ
ಲೆತೊಂದು ಗುತ್ತುಗು ಪಿದಾಡ್ದೆ ದಾದು ಪುಜಾರಿ....

            *    *    *

ದೆಯಿವದ ಬಂಡಾರ ಉಪ್ಪುನು ಗುತ್ತುದಿಲ್ಲಡ್.

ಗುತ್ತಿನಾರ್‍ ಐತ ಆದ್ ಕುರ್ಸುಡು ಕುಲ್ದೆರ್‍.  ಚಾವಡಿಡ್ ಪಜೆ ಪಾಡ್ದ್ಂಡ್.  ಗಿರಾಮ ಕೂಡುಕಟ್‌ದ ಒರ್ಯೆರ್ಯೆ ಬತ್ತ್ ಕಲಕೊಡೊಂದು ತಿರ್ತ್.... ಜಾಲಮುಲ್ಲೆಡ್ ಅಲ್ಪಲ್ಪ ಸೇರ್ದ್ ಪಿಸ್‌ಪಿಸ್‌ನ್ಪೆರ್‍.  ಇನಿತ್ತ ದರ್ಸನೊಡು ಚಡ್ತೆ!?

ಮಂಚವುಡು.... ಪಜೆಟ್ಟ್.... ಜಾಲ್ದ ಪಡಿಮಂಚವ್ಡು....

ಓದ್ಯೇಸೆರ್ಗಾರನಕುಲು ಬತ್ತ್‌ದಾಂಡ್.  ದರ್ಸಂದ ಪುಸಪಾತ್ರಿ ರಾಮೆಲಾ ಬತ್ತೆ.  ಗಿರಾಮದ ಆಪಿಲ್ಲ ಗುರ್ಕಾರ್ಲ್ಲು ಒರ್‍ಯೊರ್ಯೆ ಬತ್ತೆರ್‍.

ದೆಯ್ವದ ನಗಪತ್ತುನಕುಲು ಯಾಪಲ್ದಲೆಕ ಕಡೇಸಾವಂದೆ ಬಯ್ಯಡ್ ಪೇಂಟೆದಂಚಿ ಪೋತಿನಕುಲ್ಲಾ ಬೆಬೇಗ ಬತ್ತೆರ್‍.

ಬಂಡಾರ ಪಿದಾಡ್ರೆ ನನಲಾ ಪೊರ್ತುಂಡು.... ಗಂಟೆ ಇರ್ಲ್‌‌ದ ಪತ್ಥಾವು!....  ತಾರ್ದಕಟ್ಟೆಡ್ ನೀರುಂಡು.  ಬತ್ತಿನಕುಲು ಕಾರ್‍ ದೆಕೊಂಡೆರ್‍.

ಕಣ್ಣ್ ಕಿಸಿಂರ್ಡ ತೋಜಂದಿ ಕತ್ತಲ್ದ ಕಾಡ್!.... ಗುತ್ತಿ ದಂಕೊಂದು ಲಾಟಾನ್, ತೊಟೆ ಪಸೊಂದಿ ಏಲೆಣ್ಮ ಜನ್ತೊಟ್ಟಿಗೆ ಪಾಡಿ ದಾಂಟ್‌ದ್, ತುದೆತ್ತ ಪಾಪು ದಾಂಟ್‌ದ್ ಗುತ್ತುದ ಜಾಲ್‌ಗ್ ಬತ್ತ್‌ದುಂತಿಯೆ ದಾದುಪೂಜಾರಿ....

`ಗುತ್ತಿನಾರೆಗ್ ಸೂಲ್ಮೆ'

`ಏರ್ಯ, ದಾದ್ವಾ, ಬಲ.... ಅಕುಲು ಮಾತ ಇಂಚಿ ಪಜೆಟ್ ಕುಲ್ಲಡ್....  ಇಂದಾ, ಚೆಂಬುಡು ನೀರುಂಡು....  ಅಲ್ಪ ತಾರ್ದ ಕಟ್ಟೆಡ್ ದೆಕೊನ್ನೆ....

.... ' ಗುತ್ತುದ ಮರ್ಯಾದಿ ಮಲ್ಲ....

ಗುತ್ತಿನಾರ್‍ ಈತ್ ಪಾತೆರ್ದ್ ಓದ್ಯದಾಯನಂಚಿ ತೊಯೆರ್‍.

`ಹೂಂ.... '

`ಪ್ಪೆ ಪ್ಪೆ.... ಪೇಂಽಽ........ ಡುಂ ಟಿಟಕ್....

ಝಡ್ಡ್ ಮುಕ್ಕ್, ಝಡ್ಡ್‌ಮುಕ್ಕು'....

-ಓದ್ಯೆ ಆಂಡ್. ಜೋಕುಲು ಕಣ್ಣ್‌ಕೆಬಿ ಅರತ್ತ........

            *    *    *

ಮಿತ್ತ್ ಸಾನೊಡು ಮುಕ್ಕಾಲ್ದಿ ದೆಯಿವದ ಮಣೆ ಮಂಚವು ದೆಕ್‌ದ್ ಸುದ್ದ ಮಲ್ತೆರ್‍.  ಪಣಿಯಾರದ ಅಟ್ಟಣೆ ಆಂಡ್, ದಾಸು ಮೂಲ್ಯೆ ಚರ್ವ ಬೆಯ್ಪಯೆ.  ಸುತ್ತಿಗೆದ ನರ್ಬೆ ಆವೋಂದುಂಡು....

ತಂಬಡ್ದ ನಾರಾಯ್ಣೆ ಮುಕ್ಕಾಲ್ದೆರೆ ಇಲ್ಲಾಡ್ದ್ ತಂಬಡ ತುಂಬೊಂಬತ್ತೆ.  ಸಾಂದುಲಯ್ ದಲಿಕ್ಕ್ ಬಿಗಿತ್ತ್‌ಕಟ್ಯೆ.

            *    *    *

ಗುತ್ತುದಿಲ್ಲಡ್ ಬಚ್ಚಿರೆಪೊಲ ಬೂಲ್ಯ ಆಂಡ್.  ಓದ್ಯದಕಲೆಗ್, ದರ್ಸಂದ ಪುಜಾರಿಗ್ ದೆಯ್ವದ ಚಾಕಿರ್ದಕಲೆಗ್ ಮಜಿರಿ ಬಟ್ವಾಡಿ ಆಂಡ್.  ಆತೊರ್ತುಗು ಬಂಟಗುಂತನಾಯೆಲ ಬತ್ತೆ.

ಪಾತ್ರಿಲು ಎಣ್ಣೆಗೆತೊಂದು ಮಿಯೊಂಬತ್ತೆರ್‍.  ದರ್ಸಂದ ಐತ ಅಯೆರ್‍.  ಬಂಡಾರದ ಕೊಟ್ಯಡ್ ಬೊಲ್ಪು ಪೊತ್ತಾಂಡ್.  ತುಡರ್‌ತೋಡ್.  ಬೆಡಿ ಕದಿನ ಆಂಡ್, ಓದ್ಯೆ ಆಂಡ್.

ನಗ ಪತ್ತು ನಕಲೆ ಕೈಕ್ ಒಂಜೊಂಜೆ ನಗ ಕಂತ್ ಕೊರ್ಯೆ ಪೂಜಾರಿ....

ಬಂಡಾರ ಪಿಡಾಡ್ಂಡ್.  ಎದುರುಡು ಗ್ಯಾಸ ಬತ್ತಿದಾಯೆ.... ಬೆತ್ತಡಿ ಓದ್ಯೆದ ಕುಲು.... ಅಕಲೆ ಬೆತ್ತಡಿ ಮುಗ-ನಗತ್ತಕುಲು, ಗುತ್ತಿನಾರ್‍, ಮಣಿಕಡ್ಸಲೆ ಪತೊಂದಿ ದರ್ಸಂದ ಪಾತ್ರಿ, ಬಂಟೆ....

ಮಜಲ್, ಬೊಟ್ಟು, ಒರ್ಕು ದಾಟೊಂದು ಬಂಡಾರ ಸಾಣೊಗು ಬತ್ತ್ ಮುಂಟ್‌ಂಡ್.... ನಾಗಸ್ರ, ತಾಸೆದ ಪೆಟ್ಟ್‌ಡ್ ಸಾಣ ಒಕ್ಕೆಲಯ್ತ ಆಂಡ್....

ಪಾತ್ರಿಗ್.... ಮುಕ್ಕಾಲ್ದಿಗ್ ಜೀಟಿಗೆದಯಗ್.... ದಡಿಮುಟ್ಟು ದರ್ಸನ.... ತಂಬಡದಾಯೆ ಕೋಲೊಯ್ತ್ ಪಾಡ್ಯೇ.... ದಡಿಮುಟ್ಟುಽಽ.... ದಡಿ ದ್ದಡಿ....

ಮುಕ್ಕಾಲ್ದಿ ಕುಂಬರೊಂದೇ ಒಂಜೇಜೇ ನಗ ಗೆತೊಂದು ಉಲಯಿ ಮಂಚವುಗು ತಪನೆ ಮಲ್ತೆರ್‍.  ನಿಲಟ್ಟ್‌ಕಾರ್‍ ಉಂತೂಜಿ.  ಅಕೇರಿಗ್ ಒಂಜಿಸುತ್ತು ಬೊಲ್ಪು ತೋಜಾಯೆರಾ ಇಜ್ಜಾ, ದಿಡೀಲಽಽ ಮಗರ್ಯೆರ್‍!....

ಓರತ್ತ ದರ್ಸನ ಪಿರಿಂಡ್.

            *    *    *

ತಂಬಿಲೊಗು ತಯಾರಾಂಡ್, `ಓಮ ದೀಯರಪ್ಪಣೆ ಕೊರ್ಲೆ....'

ದರ್ಸಂದ ಪಾತ್ರಿ ರಾಮೆ.... ಓಮ ದೀದಾದ್ ದರ್ಸನೊಗುಂತ್ಯೆ.  ಗುತ್ತಿನಾರೆನ ಮದಿಪು ಆಂಡ್.  ಸರ್ವೆರ್‍ ಪೂವರಿ ದಕ್ಯೆರ್‍.  ಪಾತ್ರಿನ ಮೆಯ್ಕ್ ಒಸಯ ಆತ್‌ಜಿ!

ಕುಡು ಪೂವರಿ ಪತ್ತೆರೆ ಆಂಗೈಕ್ ಬತ್ತ್ಂಡ್.
ಉತ್ತಿನಾರ್‍ ಬಗ್ತಿಡ್ ಕುಡ ಮದಿಪು ಮಲ್ತೆರ್‍ಃ

ಸುವಾಮೀ ದೈವ ಜುಮಾದೇ, ಒರ್ಸಾದಿಪೋದು ಕಾಲಾದಿ ಬನ್ನಗ, ಕಾಲಾದಿ ಪೋದು ಒರ್ಸಾದಿ ಬನ್ನಗ....  ಎರಿಯಕುಲು ಮಲ್ತಿ ಕಟ್‌ ಪಿರ್ಕಾರ ಗಿರಾಮ ಮಾಗಣೆ ನಿನಕೊಡಿಯಡಿಟ್ ಸೇರ್ದ್ ಪತ್ತೆರ್‍ ಒಂಜಿ ಬುದ್ದಿಯಾದ್ ಮಲ್ಪುಂಚಿ ಮದಿಪುಃ ಇನಿ ದೀಯಿಏಲ್ಯ, ಕೊಡತಿ ಬೊಂಡ, ಏರಾಯಿ ಗಂದಾದೀಪ, ಒಯ್ಪಾಯಿ ಸುದ್ದ ಬಂಡಾರೋ ಬಲಸಿ ಪನಿಯಾರೊಡು ಎಚ್ಚಿಕಮ್ಮಿ - ಏರ್‌ಪೇರ್‍ ದಾನೀ ಇತ್ತ್ಂಡಲ್ಲಾ ಬತ್ತಿಂಚಿ ತಪ್ಪುನು ದೈವ ಸಾರ್ಪತ್ತ್‌ದ್ ದೈವ ಮೆಯ್ಯೆಚ್ಚಿ ಬತ್ತ್ ಕಲೆ ಆದ್ ಸತ್ಯದ ನುಡಿ;  ಶಯದ ಗಂಡ ಕೊರೊಡುಂದ್ ಗಿರಾಮ ಸರ್ವೆರ್‍ ಮಲ್ಪುಂಚಿ - ಮದಿಪು.... ಸ್ ವಾ ಮೀಽಽ....

ಮದಿಪು.... ಪೂವರಿ ದಕ್ಕ್‌ನಗ ಪಾತ್ತಿನ ಮೆಯ್ಕ್ ದೈವ ಎಚ್ಚಿಡ್ ಬತ್ತ್ಂಡ್.... ದಡಿಮುಟ್ಟು ದರ್ಸನ ಆಂಡ್. ಕೊಡಿಯಡಿಟ್ ಕೂಡ್ಡಿನಕಲೆ ಮೆಯ್ ಕೊಕ್ಕೆರ್ಲಕ ಆರಬಟ.... ಓಽಽಽವ್ಽಽ.... ಬಂಟೆನ ಅಬ್ಬರ್‍ ಆಂಡ್....

ಬಲಿ ಸೇವೆ, ತಂಬಿಲ್ದ ರಗ್‌ತಾರ ಸೇವೆ ಆಂಡ್.
-ಸರ್ವ ಆಯಞೂಯೊಗು ಕೊಡಿಯಡಿಟ್ ತಯಾರಾಂಡ್.
ತಿಗಲೆಡ್ ಕೊದಂಡಿ ಗುದ್ದಿಲೆಕ್ಕಾಂಡ್ಃ
-ತಿರ್ತಲ್ಲ ದಾದು ಪುಜಾರಿಗ್
ಗುತ್ತಿನಾರೆ ಮೋನೆಡ್ ಪಸೆಯಿಜ್ಜಿ....
`ನಾನು ದುಂಬು ಬರಡ್....'
-ದೈವದ ನುಡಿಯಾಂಡ್.
ಇಡೀ ಸಬೆತ್ತ ಕಣ್ಣ್ ಮಿತ್ತನ್ನಾಂಡ್, ಮೋನೆ ಒರ್ದ್ಂಡ್....
ಓಲ್ಲೆ ನಾಣು?....

ಪಿದಯಿ ಜಗಲಿದ ಮುಲ್ಲೆಡ್ ಅಪಗನೇ ಬತ್ತ್‌ಕುಲ್ದಿನ ಅಡ್ಡಕುಂಟು, ಮೆಯ್ಸಲಿ ತರೆತ್ರ ಕೈಟ್ ಕಂಗಣದ ನಾಣು ಎದುರ್ಬತ್ತೆ.

ನಡತ್ತಿ ಕತೆ ಊರುಗು ಪೂರ ಗೊತ್ತುಪ್ಪುನು ಇಂಚ....

ನಾಣು ಗಿರಾಮದೈವದ ಪಾತ್ರಿ.  ಪತ್ತ್ ವರ್ಸೊಂಡಿಂಚ ದರ್ಸನೊಗುಂತೊಂಬತ್ತಿನ ಜಕ್ಕ್‌ಡ್ ಜವಣ್ಯೆ.  ಕರಿ ಒರ್ಸದ ಮಾರಿ ಬೊಲ್ಲೊಡ್ದು ತಿಂಗೊಲುಗು ದುಂಬು ಪೊಸ ಮದಿಮ್ಮಯೆ.

ಸುರೂಬೊಲ್ಲ ಏರ್ನಾನಿ ಗುತ್ತಿನಾರೆನ ಮಗಲೆನ್ ತೋಡು ದಾಂಟಾನಗ ಅಲೆಮೆಯ್ಕ್ ಕಯ್ ಪಾಡ್ಯೆಗೆ!  ಕೆಟ್‌ಪೋಯೆ.... ಪೋಕಲ ಆಯಗ್.

ಸುದ್ದಿ ತೆರ್‍ನ ಗುತ್ತಿನಾರ್‍ ಗುತ್ತು ಚಾವಡಿಗ್ ಲೆಪುಡಾದ್ ನೆರ್ಯೆರ್‍, ನಾಣು ಅಲಂಕ್‌ದ್ ಗುತ್ತಿನಾರ್‍ನ ಮೋನೆಗ್ ಅಂಬಿ ದಕ್ಕ್‌ದ್ ಪೆದಂಬ್ ಪಾತೆರ್ಯೆ....!  ಯಾನ್ ಏರ್‌ಂದ್ ಎನ್ನಿದಾರ್‍?.... ಈ ಗಿರಾಮೆ ದೈವದ ಪಾತ್ರಿ.... ಹ್ಞುಂಽಽ....

ಮಂದಾನ್ಯೇ ಗುತ್ತಿನಾರ್‍ ಗ್ರಾಮ ಕೂಡಾದೆರ್‍.  ನಾಣುನ್ ಪಾತ್ರಿ ಕೆಲಸೊಡ್ದು ಗೆತ್ತ್ ಪಾಡ್ದೆ, ಆಯಗ್ ಊರಜಲ್ ನುಪ್ಪು-ನೀರ್‍ ಕೊರ್‍ರೆ ಬಲ್ಲಿ.... ಇಂದೆರ್‍.

ಗಿರಾಮೊಗು ದೇವೆರ್‌ಲೆಕಂತಿ ಗುತ್ತಿನಾರ್‍!....

ಬೇವಾರ್ಸಿ ನಾಣುಗು ಹಾಂಕಾರತ್ತಾ?  ಪೊಸಪೊಣ್ಣನ್ ಅಡ್‌ದ್‌ಲಾ, ಇಂಚ ನಾಸಿಗೆ ಕೆಟ್ಟುಂಚಿ ಬೇಲೆ ಮಲ್ತೆ.... ಕೊಟ್ಟೆದಾಂಕರ!

ಪಿರ್ಪಾವೊಡು.... ಪಿರ್ಪಾವೊಡೇ.... ತಪ್ಪುಕಾಣ್ಗೆ  ಪರೀಯ ಕೊಪಾವೊಡು....!

ಊರು ಸರ್ಕೆ ಗುರ್ಕಾರ್ಲು ಸಲ್ಮಂತಾಯೆರ್‍.  ಗೀರಿಕಟ್‌ದಿ ಬರ್ಸದ ಬೊಲ್ಲ.... ಗಿಂಗೊಲಡೀ ಢರಿನವು ಜತ್ತ್‌ಜಿ....

ಪೊಸ ಬಾರ ತಂಬಲ್ದಾನಿ ಸಾನೊಡು ತೀರ್ಮನಾವೊಡುಂದ್....

ಗುತ್ತಿನಾರ್‍ ತಾಕೀತ್ ಮಲ್ದೆರ್‍.  ರಾಮೆ ಗಿರಾಮದೈವದ ಪೊಸ ಪಾತ್ರಿ....!

`ಎಂಚ, ನಾಣು, ಮಲ್ತಿ ತಪ್ಪು ಒಪ್ಪುವತ್ತಾ.... ನೀತಿ ಕೆಟ್ಟೀ ಬೇಲೆ ಮಲ್ತ, ದೈವ ದರ್ಸನೊಗು ನನ ಈ ಆವಯ, ಆತೇ ಅತ್ತ್....'

`ದೆಯಿವದ ನುಡಿಕ್ಕ್ ಅಡ್ಡ ಬತ್ತೆ....' ನಾಣು ಪಾತೆರ್ಯೆ.

`ದೆಯಿವದ ಚಾಕಿರಿಗ್ ಯಾನ್ ಬೋಡಾ ಬೊಡ್ಚಾನ್ಪಿನೆನ್ ಮಾಯಾನೇ ತೀರ್ಮಾನ ಮಲ್ಪೊಲಿ.... ಆಂಡ, ಬಾಕಿದೆಕ್ಕ್ ಒಂಚೂರು ತರ್‍ಲೇ.... ಗುಲಾಬಿ ಓಲ್ಲೊಲು, ಇಂಚಿ ಬಲಾ....'

ಎಲ, ಗುಲಾಬಿ!  ಈ ಪೊಣ್ಣುದಾಯೆ ಇಡೆ ಬತ್ತೊಲು?

``ಅಜಲ್ದ ಗುರ್ಕಾರ್ಲೆಗ್ ತರೆ ಕಿಂರ್ಬೊನಾಡಾಂಡ್.

ಗುಲಾಬಿ ತಿರ್ತಲ್ಲ ದಾದುಪುಜಾರಿನ ಮಗಲ್.  ಬೀಡಿ ಕಟ್ಟುವೊಲು.  ಇರ್ವ ವರ್ಸದ ಜವಂದಿ ಪೊರ್ಲೆದಿ.  ಅಲೆ ಇಲ್ಲಗಿನಿ ಪೊಸ ಬಾರ ತುಂಬಿಲ್ದ ಮರ್ಯಾದಿ!?....

ಸಾಣದ ಕಡಿಬಾಕಿಲ್‌ಗ್ ಬತ್ತುಂತಿನ ಗುಲಾಬಿನೊಟ್ಟುಗು ನನೊರ್ತಿ ಪೊಣ್ಣು.... ಗುತ್ತಿನಾರೆ ಮಗಲ್ ಜಲಜ....!

ನಾಣುಪಂಡೆ, "ದೈವದ ಕೊಡಿಯಡಿಟ್ ನಿಕುಲು ಇತ್ತಿವನನ್ ದೆಂಗವಂದೆ ಪನಿ...."

ಗುಲಾಬಿ ಉಂತಿನವ್ಲೇ ದೆಯ್ವೊಗು ಅಡ್ಡಬೂರ್ಯೊಲುಃ

"ದೆಯಿವಲಾ, ಗಿರಾಮಗಕುಲ್ಲಾ ಕೇನೊಡು.  ಬೊಲ್ಲದಾನಿ ಗುತ್ತಿನಾರ್‍ನ ಮಗೆ.  ಚಂದ್ರೆಲಾ, ಏರಾ ನನೊರಿಲಾ ಎನ ಮೆಯ್ಕ್ ಕೈಪಾಡ್ಯೆರ್‍.  ಎಂಕುಲು ಬುಲಿತ್ತ್ ಬೊಬ್ಬೆ ದೀವನಗ ನಾಣಣ್ಣೆ ಪಾರ್‍ ಬತ್ತೆರ್‍.  ಚಂದ್ರನ್ಲಾ ನನೊರ್ಯನ್ಲಾ ತೊರ್ತ್‌ಗಿಡತ್ತೆರ್‍.  ಅಕುಲು ಮನ್ದನಿ ಬೇತೆನೇ ಕತೆ ಕಟ್‌ದ್ ಊರುಡು ಪಂಡೆರ್‍...."

`ಅಂಚೆನೇ ಎನ್ನಲಾ ಒಂತೆ ಉಮಡು ಪನ್ರೆ!'.... ಎಲ ಕತೆನೆ! ಜಲಜಲ....!

ಜಲಜ ಪನೊಂಡೊಲು, "ನಾಣಣ್ಣೆ ಗುತ್ತುಗು ಬತ್ತಿನದಗ ಎನಡ ಕುಸಲ್ ಪಾತೆರ್ಯೆರ್‍;  ಯಾನ್ ತೆಲ್ತೆ....

ಪಪ್ಪ ತೂದು ಜೋರು ನೆರ್ಯೆರ್‍....     ತೇ, ಬೊಕ್ಕ ದಲ ಆತ್‌ಜಿ...."

ದೆಯಿವ ಜಿಮಾದಿ ಕಡ್ತಲೆ ಕಣ್ಣ್‌ಮುಟ್ಟಾದ್ `ಹೂಂ'ಕರ್ತೆಽಽ....

ಮಿತ್ತ ಮಿರ್ಲೋಕದಂಚಿ.... ಊರೊರ್ಮೆ ಮೋನೆಮೋನೆ.... ಕಣ್ಣಪರ್ತೆನ್ ಕಂತಾಯೆ ಮೋನೆಲೆಡ್ ಕಣ್ಣಿತ್ತ್‌ಜಿ....

ಓದ್ಯೆ.... ತಂಬಡ ದಡಿಮುಟ್ಟ್‌ಂಡ್....

ಒಡಿಯೇದಾಂತಿ ದರ್ಸನ!.... ಏರೇರಾ ಕುಂಬರ್ಯೆರ್‍....

            *    *    *

"ಓಽಽವ್ಽಽ.... ಓಽಽವ್ಽಽ.... ಉವೋವ್ಽಽ...."

ಸಾಣಾ ಜಾಲ್‌ಡ್ ಪಂಬದೆ ಕರಿಯೆ!

ದೆಯಿವದ ಮಾನಿ.... ಬೂತ ಕಟ್ಟುನಾಯಗ್

ದಿಮಿಕಿಟ್ಟ ದರ್‌ಸನ!  ದಡಿಮುಟ್ಟು ದರ್‌ಸಾನಾಽಽ

ಗಗ್ಗರದೆಚ್ಚಿಯಾ.... ನೇಮದೆಚ್ಚಿಯಾ....

ತೆಂಬರೆಜ್ಜಿ........ ಬೀರಯಿಜ್ಜಿ

ಅರದಲಜ್ಜಿ ಓಲುಂಡೆಣ್ಣೆ?

ಕಟ್ಟ್‌ಕಟ್ಲೆ ನೇಮನೆರಿ ದಾಂತೆನೇ

ದೆಯಿವ ಒಸಯಾಂಡಾ........?

`ತಿರ್ತಲ್ಲ ದಾದು ಪೂಜಾರಿ ಸಂಸಾರ.... ದಾದು ಪೂಜಾರೇಽಽ'

-ದೆಯಿವ ಪಾತ್ರಿನ ಲೆಪ್ಪು....

ಬುಗ್ಗಬುಗ್ಗಂದ್ ಪೊತ್ತೊಂದುಂಡು ದಾದು ಪುಜಾರಿ ಉಡಲ್....

ನುಡಿಯಾಂಡ್?

`....ಮಲ್ಲೆತ್ತ್, ಆಯಿನವು ಆದ್ ಪೋಂಡು, ಗಿರಾಮ ಸರ್ವೆರ್‍ ಎನ್ನ ಸಂಸಾರ ಬಲತ್ತಕೈ ಪೊತ್ತಾಂಡ ದತ್ತ ಕೈ ಬುಲಿಪೊಂಡು.  ಅನ್ನೆಯ ಮಲ್ತಿನಕಲೆಗ್ ಮಾಯೊಡು ಬುದ್ಧಿ ಪುಟ್ಟಾವೆ.  ಅಕ್ಲಾಸ ಬುಡೊಡ್ಚಿ.  ಈ ಇನಿ ಗಿರಮ ಒತ್ತಟ್ಟ್ ಮಲ್ತ್ ಕೊರ್‍ತಿಂಚಿ ತಂಬಿಲ್ದ ಸೇವೆ....  ಸಂತೋಸ್ ಮಲ್ತೊನ್ವೆ.  ಸತ್ಯದ ಗಂಡ, ಸಾಯದ ನುಡಿ ಕೊರ್‍ಪೆ.  ನಿನ್ನ ಸಂಸಾರ್‍ದ ಕೊಡಿ ವಾತರತ್ತ ದೋಸಲಾ ತಟ್ಟಂದಿನಂಚ ಬೆರಿಬುಡಂದೆ ಕಾಪುವೆ'

--ದಾದು ಪೂಜಾರಿ ಅಡ್ಡ ಬೂಯೆ.
ತಂಬಡೊಗು ಕೋಲು ಬೂಂರ್ಡ್.
ಓದ್ಯದಕುಲು ಉರಿತೆರ್‍
ಮೆಯ್ಯೆಚ್ಚಿ ಒಸಯಾಂಡ್....ಽಽಽ

            *****

ಕೀಲಿಕರಣ: ಕಿಶೋರ್‍ ಚಂದ್ರ