ಹೋಗುತಿಹುದು ಕಾಯ ವ್ಯರ್ಥ

- ಶಿಶುನಾಳ ಶರೀಫ್

ಹೋಗುತಿಹುದು ಕಾಯ ವ್ಯರ್ಥ
ಇದರ ಲಾಘವ ತಿಳಿದವ ಯೋಗಿ ಸಮರ್ಥ       ||ಪ||

ಏಳು ಜನ್ಮಾಂತರದಿನವು
ಹೀಂಗ ಹೇಳದೆ ಹೋದವು ನಿನಗಿಲ್ಲೋ ನೆನಹು
ಭೋಗಲಂಪಟ ಸುಖಘನವು ಭವ
ರೋಗದಿ ಮರಣಕ್ಕೆ ಆಯಿತೋ ಅನುವು           ||೧||

ಬದುಕೇನು ಮಾಡಿದಿ ಇಲ್ಲೆ ಸುಳ್ಳೇ
ಮುದುಕ್ಯಾಗಿ ಮೆರದೆಲ್ಲೆ ಛೀ ಹುಚ್ಚು ಮರುಳೇ
ಅದಕೆ ಕೇಳುವ ಯಮನಲ್ಲೇ ಸಧ್ಯ
ನೆದರಿಟ್ಟು ನೋಡಿಕೋ ಉದಿಸಿದ್ಯಾವಲ್ಲೆ          ||೨||

ಇನ್ನಾರ ತಿಳಿ ಕಂಡ್ಯಾ ತಮ್ಮ ನುಡಿ
ಓಂ ನಮ: ಶಿವಯೆಂಬೋ ಮಂತ್ರವು ನಿಮ್ಮ
ಪುಣ್ಯಪಾಪಂಗಳ ಕರ್ಮಾ ಕಳೆದುಳಿದುದೇ
ಚೆನ್ನ ಶಿಶುನಾಳಧೀಶನಧರ್ಮಾ                     ||೩||

          *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ