ಪಯಣ

- ಗಿರಿಜಾಪತಿ ಎಂ. ಎನ್

ಸಾಗುತಿರಲಿ ಜೀವನ ಯಾತ್ರೆ
ಎಚ್ಚರೆಚ್ಚರ ಸಿರಿ ಬೆಳಕಲಿ
ಅಲ್ಲೊ, ಇಲ್ಲೊ, ಎಲ್ಲೋ ಮುಗ್ಗರಿಸದೆ
ಮನ - `ಮನ'ವ ಕೈಯ ಹಿಡಿಯಲಿ ||

ನೀನೆ ನಿನ್ನಯ ದಾರಿ ಬೆಳಕು
ಸಾಗು ಒಳ ಬೆಳಕಿನ ಪಥದಲಿ
ನಿನ್ನರಿವೆ ತಾನದು ಹೊನ್ನ ದೀವಿಗೆ
ಮರವೆ ತಾರದೆ ಜೊತೆ ಸೇರಲಿ ||

ದೇವ ದೇವರಿರವಿನರಿವಿಗೆ
ನೀನೆ ನಿನ್ನಯ ಆಲಯ
ಸಮತೆ ಸಮರಸ ಶಾಂತ ಕ್ಷಮತೆಗೆ
ನಡೆ ನುಡಿಯೇ ಶೃತಿಲಯ ||

ಮೇಲು ಕೀಳಿನ ಸೋಂಕ ಕಾಣದೆ
ಸ್ವಸ್ಥವಿರಲೆದೆ ಬಾಂದಳ
ಸ್ವಾರ್ಥ, ಕ್ರೌರ್ಯ, ದ್ವೇಷದೆದೆಗೂ
ಕಣ್ಣ ತೆರೆಸಲಿ ಪ್ರೀತಿ ಜೋಗುಳ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ನಮ್ಮಯ್ಯಾ ನಿಮಗೆ ಆಗದಾಗದೋ ಗಾಂಜೀ

-ಶಿಶುನಾಳ ಶರೀಫ್

ನಮ್ಮಯ್ಯಾ ನಿಮಗೆ ಆಗದಾಗದೋ ಗಾಂಜೀ       ||ಪ||

ಅಗದಾಗದು ಗಾಂಜಿ
ಹೋಗಿ ಬಹು ಸುಖವು
ಯೋಗಿ ಜನರು ಕಂದು
ಮೂಗು ಮುಚ್ಚಿಕೊಳ್ಳುವ                                 ||೧||

ಹರಿಗೆ ಸಕ್ಕರಿಯಾಯ್ತು ಸಾಕ್ಷಾತ್
ಹರಿಗೆ ಪ್ರತಿಯಾದುದೆ ಗೊತ್ತು ಈ ಮಾತು
ಆರಿಯದ ನರಗುರಿಗಳದು ಕೇಳದೆ
ಬರಿದೆ ವಿಚಾರಿಸದೆ ಹೋಯ್ತು ನಮ್ಮಯ್ಯಾ         ||೨||

ಸಿದ್ದ ಜ್ಞಾನದ ಮುನಿಯು ಸಂಗೀತಸ್ವರ
ತಿದ್ದುವ ಮೃದು ಮಧುರ ಗೊನಿಯೊಳು
ಸಧ್ಯಕ್ಕೆ ಶಿಶುನಾಳದೀಶನೊಳು
ಬದ್ಧಿಗೇಡಿತನ ಸಲ್ಲದು ನಮ್ಮಯ್ಯಾ                    ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಬೊಣ್ಯೋ ಬೂರೊಂದಿತ್ತ್ಂಡ್

-ಡಾ || ಪ್ರಭಾಕರ ಶಿಶಿಲ

ಆ ಕಟ್ಟೋಣೊದ ಬೇಲೆ ಸುರುವಾಯಿಬುಕ್ಕೊ ಊರುಡು ಬಾರೀ ಸಡಗರೋ.  ರಂಗ್ ರಂಗ್‌ದ ಲಾರಿಲು, ಬೇತೆ ಬೇತೆ ಸೊರೊತ್ತ ಯಂತ್ರೊಲು ಉರುಗು ಪೊಸ ರಂಗ್ ದಿಂಜಾದೊ.  ಕಟ್ಟೋಣೊದ ಬೇಲೆ ಬೇಗೊ ಮುಗ್ಯೊಡುಂದು ಬೇತೆ ಬೇತೆ ಬಾಸೆಲೆನ್ ಪಾತೆರುನ ಕಪ್ಪು ಕರಿಯಕುತ್ರಿ ಜನಕ್ಕುಲು ಪುರ್ಸೋತು ಇಜ್ಜಾಂದೆ ಬೆಂದೊಂದಿತ್ತೆರ್‍.  ಒರೊರೊ ಇರ್ಲ್‌ಡ್‌ಲಾ ಗಾಳಿ ಸುಡರ್‍ ಪೊತ್ತಾದ್ ಬೇಲೆ ಮಲ್ತೊಂದಿತ್ತೆರ್‍.  ಆ ಊರುಡಿತ್ತಿ ರಡ್ದ್ ಹೋಟೇಲ್, ರಡ್ಡ್ ಅಂಗಡಿ, ಒಂಜಿ, ಕಲಿತ್ತಬುಕೊಂಜಿ ಗಂಗಸರೆತ್ತ ಗಡಂಗ್‌ಲೆಗ್ ಪುರ್ಸೋತಿಜ್ಜಾಂದಿತ್ ಬೇರೊ.  ಊರುದ ನೆತ್ತೆರುರ್ಕುನ ಜವ್ವನೆರ್‍ ಬಯ್ಯೆಗ್ ಕಟ್ಟೋಣೊದ ಎದ್‌ರ್‌ತ ಕೆಲ್ಸಿಕಟ್ಟೆಡ್ ಸೇರ್‌ದ್ ಕೆಲಸ ಮಲ್ಪಿನ ಕಪ್ಪು ಕಪ್ಪು ಉಂಡೆ ಉಂಡೆ ಪೊಂಜೋವೆಲ್‌ನ ಮೈತ ತಗ್ಗ್ ಏರ್ತೆದ ವಿಷಯೊಲೆನ್ ದಿನೋಲಾ ಪಾತೆರೋಂದಿತ್ತೆರ್‍.  ಆತೊಂಜಿ ಪೊಂಜೇ ವೆಲ್‌ನ ಬೇಲೆಗ್ ದೀವೊಂದಿನ ಮೇಸ್ತ್ರಿನ ಅದೃಷ್ಟೊಗು ನಂಜಿ ಕಾರೊಂದಿತ್ತೆರ್‍.

ಅವು ನೂದು ಕಂಡಿ ಬಜೈದ ಸುಬ್ರಾಯ ಬಟ್ಟೇರ್‍ ಕಟ್ಟಾವೋಂದಿತ್ತಿನ ಕಟ್ಟೋಣೊ.  ಕಲ್ಜಿಗದ ಅಬತಾರೊಂದು ಬಾರೀ ಪುದಾರ್‍ ಪೋಯಿನ ಜೀವೊ ಇಪ್ಪಿ ದೇವೆರೆಗಾದ್ ಕಟ್ಟೊಂದಿತ್ತಿನ ಕಟ್ಟೋಣೊದ ಬೇಲೆ ಎಚ್ಚ್‌ಕಮ್ಮಿ ಮುಗ್ಯೊಂದು ಬತ್ತಿತ್‌ಂಡ್.  ಬಟ್ಟೆರ್‍ ಅಯ್ಕ್ ಭಗವಾನ್ ಮಂದಿರೊಂದು ಪುದಾರ್‌ಲಾ ದೀದೆತ್ತೆರ್‍.  ಆ ದೇವರ್‍ ಉಪ್ಪಿನ ಊರುಗು ಬಟ್ಟೇರ್‍ ಐನಾಜಿ ಸರ್ತಿ ಪೊದು ಬತ್ತಿ ಬುಕ್ಕೊ ದೇವರ್‍ನ ಇಸಯೊ ಊರು ಪೂರಾ ಪ್ರಚಾರೊ ಆಂಡ್.  ಮಾಂತಾ ಊರುಲೆಡ್ ಆ ದೇವರೆಗ್ ಮಂದಿರೊ ಉಪ್ಪುನಗ ಈ ಊರು ಈ ಇಸಯೊಡು ಪಿರವೊರಿಯೆರ ಬಲ್ಲಿಂದ್‌ದ್ ನಿಗೊದೀಯೆರ್‍ ಮಂದಿರೊದ ಒಕ್ಕೆಲ್ ಜಂಬರೋನ್ ಆ ದೇವೆರ್‍ನ ಕೈಯಿಡ್ದೇ ನಡಪ್ಪಾವೋಡುಂದು ಬಟ್ಟೇರ್‍ ಪಂಡೊಂದಿತ್ತೆರ್‍.

ಊರುದ ದೂಮಣ್ಣ ಗೌಂಡನ ಮಗೆ ರಡ್ಡನೇ ಕ್ಲಾಸ್‌ದ ಚಿನ್ನಪ್ಪಗ್ ಕಟ್ಟೋಣೊತಾಡೆಕ್ ಪುಲ್ಯಕಾಂಡೆ ಒರ, ಬಯ್ಯಗೊರ ಪೋಯಿಜಾಂಡ ನಿದ್ರೆನೇ ಬರಾಂದ್.  ಅಯನ ಇಲ್ಲ ಕಯಿತಲ್‌ದ ಕೂಸಪ್ಪೆ, ಬಾಳಣ್ಣೆ, ಡೀಕಯ್ಯೆರೆಗ್ಲಾ ಉಂದುವೇ ಬೇಲೆ.  ಅವುಲು ನಡಪುನ ಸಂಗತಿಲೆನ್ ಅಕ್‌ಲಕ್‌ಲೇ ಚರ್ಚೆ ಮಲ್ತೊಂದು.  ಒಂಜಿ ತೀರ್ಮಾನೊಗು ಬತ್ತಿಬೊಕ್ಕ ಇಲ್ಲಗ್ ವರದಿ ಮಲ್ಪಿನ ಅಕ್‌ಲೆನ ದಿನಚರ್ಯೆ.  ಬಟ್ಟೇರೆ ತೋಟೊಗು ಬೇಲೆಗ್ ಪೋವೊಂದಿತ್ತಿನ ದೂಮಣ್ಣಗ್ ಮಗನ ಪಾತೊರೊ ಪಂಡ ಸಸಾರೊ.  ಆಂಡ ಬೀಡಿ ಕಟ್ಟೋಂದು, ಇಲ್ಲೇ ಪರಪಂಚೋಂದು ತೇರಿಯೋಂದಿತ್ತಿನ ಚಿನ್ನಪ್ಪನ ಅಪ್ಪೆ ಎಂಕಮ್ಮಗ್ ಆಯನ ಪಾತೊರೊ ಕೇನ್ಯೇರೆ ಬಾರೀ ಇಸ್ಟೊ.  ಆಲೆಗ್ ಚಿನ್ನಪ್ಪೆ ಪಂಡ ದಿನಾ ಬರ್ಪಿನ ಉದಯವಾಣಿ ಪೇಪರ್‍ದಲೆಕ್ಕ.

ಒಂಜಿ ದಿನೊ ಚಿನ್ನಪ್ಪೆ ಕೊನಯಿನ ವಾರ್ತೆ ಕೇನ್‌ದ್ ಎಂಕಮ್ಮಗ್ ಆಶ್ಚರ್ಯೊಲಾ ಸಂತೋಸೋಲಾ ಒಟ್ಟುಗೇ ಆಂಡ್.  ಆ ನೋಟೀಸ್ ಕೊನದ್ ಓದಾಂತೆ ಇಪ್ಪೆಂದ್ಂಡ ಆಲೆಗ್ ಆಯ್ಡ್ ಇಸ್ವಾಸೊ ಬರ್‍ಯೆರ ಇತ್ತ್‌ಜಿ.  ಊರುಗು ಬೇಸ್ಯ ಪದಿನಾಜೆಗ್ ಕಲ್ಜಿಗೊದ ಅಬತಾರೊ ಬಗವಾನೆರ್‍ ಬರ್ಪೆರ್‍ ಆನಿಯೇ ಮಂದಿರೊದ ಒಕ್ಕೆಲ್ ಕಾರ್ಯೊ.  ಆನಿ ಊರೊರ್ಮೆ ತೋರಣೊ ಕಟ್ಟೊಡು, ಅಂಬಿ ಅಡ್ತಿ ಸುದ್ದೊವಾಯಿನ ಮುಂದಿಲ್‌ಗ್ ರಂಗೋಲೆ ಪಾಡೊಡು, ಸೂದ್ರೆರ್‍ ಮದುಮಾಸೊ ತಿನಾಂದೇ ಸೋಕುಡು ಮೀದ್ ಮಡಿಕುಂಟು ತುತ್ತೋಂದು ಮಂದಿರೊಗು ಬರೊಡು.  ದೇವೆರೆ ಕಾರ್ಯೊಗು ಮಲ್ಲಮನಸ್ ಮಲ್ತ್‌ದ್ ಕಾಣಿಕೆ ಕೊರೊಡುಂದು ಮಗೆ ಓದುತು ಪನ್ನಗ ಎಂಕಮ್ಮಗ್ ಬಾರೀ ಕುಸಿಯಾಂಡ್.

ಚಿನ್ನಪ್ಪೆ ಅಪ್ಪೆನ್ ಕಾಸ್‌ಗ್ ರಂದ್ಯೆರ ಸುರು ಮಲ್ತೆ.  ಆಲ್ ನಾಡ್ ನಾಡ್‌ದ್ ಗೋಡೆತ ತೂಂಬುಡು, ಅರಿತ ಡಬ್‌ಇಡ್, ಓಲೋಲೋ ದೀದಿತ್ತಿನ ಕಾಸ್ ಒಟ್ಟು ಮಲ್ತಲ್.  ಚಿನ್ನಪ್ಪೆ ಲೆಕ್ಕೊ ಪಾಡ್ಯೆ.  ಒಟ್ಟುಗು ಆಜಿ ಆಣೆ ಮೂಜಿ ಮುಕ್ಕಾಲ್!  ಆಯ್ನ್ ಚೀಲೊಡು ಪಾಡೊಂಡೆ.  ಇತ್ತೆ ಅಯನ ಮೋನೆಡ್ ಒಂಜಿ ಮುಗರ್‍ ತೆಲಿಕ್ ಮೂಡ್‌ಂಡ್.  ಎಲ್ಲೆ ಬಯ್ಯೆಗ್‌ವುಂದೆನ್ ಬಟ್ಟೆ ರೆಗ್ ಕೊರೊಡು, ಭಗವಾನ್ ಸಮಿತಿಗ್ ಎನ್ನ ಕಾಣಿಕೆಂದ್ ಪನೊಡುಂದು ಎನ್ನೊನಗ ಅಯಗ್ ಕುಸಿ ಆಂಡ್.

ದೂಮಣ್ಣೆ ಎಚ್ಚ ಪಾತೆರುನ ಜನೊ ಅತ್ತ್.  ಕೆಲ್ಸೊ ಮುಗೀದ್ ಬನ್ನಗ ಏಪಲಾ ಕತ್ತಲೆನೇ.  ಗಡಂಗ್‌ಡ್ ಒಂತೆ ಪಾಡ್ದ್ ಬತ್ತಿನಾನಿ ಆಯನ ಸೊರೊ ಊರಿಡೀ ಕೇನುಂಡು ಆನೆ ಒಂತೆ ಜಾಸ್ತಿ ಪಾಡ್ದಿತ್ತೆ.  ಅಂಚಾದ್ ಬಾರೀ ಕುಸಿಟ್ಟೇ ಇತ್ತೆ.  ಬತ್ತಿಲೆಕ್ಕೊನೇ ಊರುಗೇ ಕೇನಿಲೆಕ್ಕೊ ಬುಡೆದಿನ್ ಲೆತ್ತೆ.  "ಎಂಕೂ ಕೇಂಡನಾ?  ನಮ ಊರುಗು ದೇಬೆರ್‍ ಬರ್ಪೆರ್‌ಗೆ"  ಪೊಡಿತ್ತ ಬುರ್‍ಡೆಡ್ತ್ ಪೊಡಿನ್ ಅಂಗೈಗ್ ಪಾಡ್ತ್ ಒಂಜಿ ಈಡ್ ಏರ್ಸಾದ್ ಎಂಕಮ್ಮ ಕಂಡನ್ಯನ ಅಬತಾರೊ ತೂದು ಕೇಂಡಲ್ "ಏರ್‍ ಬತ್ತ್ಂಡ ನಂಕ್ ದಾನೆ?  ನಮೊ ಏಪಲಾ ಇಂಚನೇಅತ್ತಾ?"  ದೂಮಣ್ಣೆ ತೆಲಿತೋಂದೇ ಪಂಡೆ:  "ನಿನವು ಏಪಲಾ ಒಂಜೇ ರಾಗೊ ಆಟಿದ ಬರ್ಸತ ಲೆಕ್ಕೊ.  ಅಯ್ನ್ ಬುಡು.  ಇನಿ ದನಿಕುಲೆನ ಇಲ್ಲಲ್ ದೇಬೆರನ ಪೊಟೊ ತೂಯೆ.  ಏತ್.  ಏತ್ ಸೋಕು ಉಲ್ಲೆರ್‍ ಗೊತ್ತುಂಡಾ?  ಉದ್ದೋತ ಮಂಜೊಲು ಮಂಜೊಲು ಅಂಗಿ.  ಉಂಗುರುಂಗುರ ತರೆಕೂಜಲ್ ಕೆಂಪು ಕೆಂಪು ಬಚ್ಚಂಗಾಯ್ದ ಲೆಕ್ಕ ಉಲ್ಲೆರ್‍.  ಕಿಟ್ಣೆ ದೇಬೆರೆ ಅಬತಾರೊಂದು ದನಿಕಲು ಪಂಡರ್‍."

ಆಲ್ ಉಂದೆನ್ ಕೇನ್ದಿತ್ತಲ್ ದೇಬೆರ್‍ ನರಮಾನ್ಯಾದ್ ಅಬತಾರೊ ದೆತ್ತ್‌ತ್ತ್ ವೈಕುಂಟೊಡ್ದು ನರಲೋಕೊಗು ಜತ್ತ್‌ದೆರ್‍.  ಪೆದಾಂತಿನಕುಲೆಗ್ ಜೋಕುಲಾಪಿಲೆಕ್ಕ ಮಲ್ಪೆರ್‍ ನೀರ್‌ನ್ ಪೆಟ್ರೋಲು ಮಲ್ಪೆರ್‍.  ಗಾಳಿಡ್ ಕೈಯಾಡಿಸಾದ್ ವಾಚಿ, ಉಂಗುರು, ಬೊನ್ಯೊ ಕೊರ್ಪೆರ್‍.  ಇಂಚ ಮಾಂದಾ ಊರೊರ್‍ಮೆ ಸುದ್ದಿ ಯಾನಗ ಏರೆನೊಟ್ಟುಗೋ ಬೆಲ್ತ್‌ಪೋಯಿನ ತನ್ನ ರಡ್ಡ್ ಪೊಣ್ಣು ಬಾಲೆಳು ವಾಪಾಸ್ ಬಿರ್ಪಿಲೆಕ್ಕೊ, ಏರೆರೆಗ್ ತೋಜಿಪಾಂಡಲಾ ಗುಣ ಆವಂದಿ ತನ್ನ ವಾತೊ ಗುಣವಾಪಿಲೆಕ್ಕೊ ಆ ಸಾಮಿ ಮಲ್ಪೆರಾ ದಾನೋದ್ ಆಲ್ ಏತೋ ಸರ್ತಿ ಎನ್ನೊಂದಿತ್ತಲ್.  ಆಂಡ ಆತ್ ದೂರದ ಆ ಸಾಮಿನಾಡೆಗ್ ಎಂಚ ಪೋಪಿನ ಪನ್ಪಿನವೇ ಚಿಂತೆ.  ಇತ್ತೆ ಆ ದೇಬೆರ್‍ ತನ್ನ ಉರುಗೇ ಬರೋಂದುಲ್ಲೆರ್‍!

ಈ ಸಂತೋಸೊಟು ಎಂಕಮ್ಮ ಕಂಡನ್ಯಟ ಕೇಂಡಲ್ "ಇತ್ತೆ ಸಾಮಿ ಈಡೆಗೇ ಬರೋಂದುಲ್ಲೆರ್‍.  ಆರೆನ ದಯೆಟ್ಟ್ ರಡ್ಡ್ ಪೊಣ್ಣು ಬಾಲೆಳೆಲಾ ವಾಪಸ್ ಬರ್ಪಿಲೆಕ್ಕ ಆಂಡ, ಎನ್ನ ವಾತೊ ಗುಣ ಆಂಡ ಏತ್ ಎಡ್ಡೆತ್ತೆ?"

ದೂಮಣ್ಣೆ ಪುಸ್ಕ ತೆಲ್ತೆ.  ಆಯನ ಬಾಯಿಡಿತ್ತಿ ಬಚ್ಚಿರೆ ಬಜ್ಜೈತ ಕೆಂಪು ರಸೋ ಆಲೆನ ಮೋನೆಗ್ ಚಿರ್‍ಕ್‌ಂದ್ ರಟ್ಟ್‌ಂಡ್.  ಆಲ್ ಸೀರೆತ ಸೆರಂಗ್‌ಟ್ ಮೋನೆ ಉರ್ದೊಂದಿಪ್ಪುನಗ ದೂಮಣ್ಣೆ ಪಂಡೆ "ನಿಕ್ಕ್ ದಾನೆ ಮರ್ಲ ಎಂಕೂ?  ಅವು ರಡ್ಡ್‌ಲಾ ಮೈಟ್ ಸೊರ್ಕು ದಿಂಜಿದ್ ಬೆಲ್‌ದ್‌ಪೋದೊ.  ಅವು ವಾಪಸ್ ಬರ್‍ಯೆರ ಉಂಡೊ?  ಆಂಡ ನಿನ್ನ ವಾತೊ ಗುಣ ಆಯೆರೆಲಾ ಯಾವು.  ಅವು ಬುಡು.  ಇನಿ ದನಿಕುಲೆ ಇಲ್ಲಲ್ದ ಇಸೇಸೊ ಕೇನ್ದನಾ?"

"ದಾನೆ ಆಂಡ್?"  ಎಂಕಮ್ಮನ ಕೆಬಿ ನಿಮಿರ್‌ಂಡ್.  "ಅಲ್ಲ್ ಸಾಮಿನ ಬಾರೀ ಮಲ್ಲ ಪಟೋದೀತೆರ್‍.  ಆ ಪಟೊಡ್ತು ಬೊಣ್ಯೊ ಬೂರೊಂದುಂಡು.  ವಾ ಕಮ್ಮೆನೊ!  ಆಯ್ನ್ ಇಬೂ ತಿಂದ್ ಪನೊಡುಗೆ.  ದನಿಕುಲೆ ಮಗೆ ಎಲ್ಯಮಾಣ್ಯಣ್ಣೆ ಉಲ್ಲೇರತ್ತ?  ಆರೆನ ಮೈಟ್ ದೇವರ್‍ ಬರೋಂದುಲ್ಲೆರ್‍.  ಏತ್ ಜನ ಸೇರೊಂದುಲ್ಲೆರ್‍?  ಏತ್ ಕಾನಿಗೆ ಬತ್ತೊಂದುಂಡು ಗೊತ್ತುಂಡ?  ಇತ್ತೆ ಎಲ್ಯಮಾಣ್ಯಣ್ಣೆ ದೇವರ್‍ನಂಚನೇ ಆತೆರ್‍."

ಚಿನ್ನಪ್ಪಗ್ ಉಸಿಲ್‌ತಿಕೋಂದಿಲೆಕ್ಕಾಂಡ್, ದನಿಕುಲೆ ಮಗೆ ರಾಮಕಿಸ್ನೆ ಆಯನ ಕ್ಲಾಸ್‌ದಾಯೆ.  ಅಯೆ ಒಂಜಿ ವಾರೊಡ್ಧಿಂಚ ಸಾಲೆಗ್ ಬತ್ತೊಂದಿತ್ತಿಜೆ.  ಎಂಚಿನ ಬಾಗ್ಯೊ ಅಯನವು!  ತನ್ನ ಮೈಟ್‌ಲಾ ದೇವೆರ್‍ ಬರ್ಪಿನಲೆಕ್ಕೊ ಅಪೆತೆಂಟ್!  ಚಿನ್ನಪ್ಪೆ ತನ್ನ ಮೈ ಕೈ ತೂವೂಂಡೆ.  ಕಪ್ಪು ಸೀಂಕ್ರ್‌ಮೈ.  ಪದ್ಪೆದ ದಂಟ್‌ದಂಚಿನ ಕೈಕಾರ್‍!  ಬೆಗರ್‍ ವಾಸನೆ ಬರ್ಪಿನಿ ಪರ್ಕೊಟೆ ಅಂಗಿ.  ಇಂಚಿತ್ತಿನ ಮೈಡ್ ಕುಲೆ ಬರುವೋ ದಾನೊ!  ದೇವೆರ್‍ ಬರೋಡಾಂಟ ಬೊಲ್ದು ಬೊಲ್ದು ದಪ್ಪೊ ದಪ್ಪೊ ಮೈಯೇ ಉಪ್ಪೊಡೋ ದಾನೋ?  ಮದ್ದು ಮಾಸೊ ತಿನಾಂದೆ ಮಡಿಟ್ಟೇ ಉಪ್ಪೊಡೋ ದಾನೊ?  ಇಂಚ ಮಾಂತ ಎಣ್ಣೋಂದು ತರೆ ಕಿರ್ಬೋಂದು ಕುಲ್ಲಿನ ಮಗನ್ ತೂದು ದೂಮಣ್ಣೆ ಪಂಡೆ:  "ಎಲ್ಯ ಮಾಣ್ಯಣ್ಣೇರೆ ಮೈಡ್ ದೇವೆರ್‍ ಬಂತ್ತೊಂದುಲ್ಲೆರ್‍.  ನಿನ್ನ ಮೈಡ್‌ಲಾ ಬರ್ಪೆದೇರೆಂಡ ಬೆನಾಂದೆ ದುಡ್ಡು ಮಲ್ಪೊಲಿಂತ್ತ್ಂಡ್."

ಮಗೆ ಬೂರ್ನಾಸ್‌ಂದ್ ಪಂಡೆರತ್ತಾಂದ್ ಎಂಕುಗು ಪಿಸಿರ್‍ ಬತ್ತ್ಂಡ್.  "ಯಾವು ಒರ ಮನಿಪ್ಪಂದೆ ಕುಲ್ಲೆ.  ಈರ್‍ ದನಿ ಕುಲೆ ಲೆಕ್ಕೊ ಇಪ್ಪೆತಾರ್‌ಂಡ್ ಅಯೆ ಎಲ್ಯ ಮಾಣ್ಯಣೇರೆ ಲೆಕ್ಕೊ ಉಪ್ಪೆತೆ."  ಈ ಪಾತೆರೊಗು ದೂಮಣ್ಣನ ಬಾಯಿ ಬಂದಾಂಡ್.  ಇತ್ತೆ ಚಿನ್ನಪ್ಪೆ ಕೇಂಡೆ.  "ಅಮ್ಮೆರೇ ಎಂಕೊಂಜಿ ಪೊಟೊ ಕೊನತ್ ಕೊರ್ಪರಾ?"

"ವಾ ಪಟೋ ಮಗಾ?"

"ಅವ್ವೇ ಆ ದೇಬೆರನವು.  ನಮ್ಮ ಇಲ್ಲಲ್ಲಾ ಬೊಣ್ಯೊ ಬೂರುಂಡಾಂದ್ ತೂವೊಲಿತ್ತ್‌ಂಡ್."

ದೂಮಣ್ಣಗ್ ಇತ್ತೆ ಸಂತೋಸಾಂಡ್.  ಆವಡ್, ಬೋದಾಳೆಂದ್‌ದ್ ಎಣ್ಣಿನ ಮಗಕ್ಕ್‌ಲಾ ತರೆ ಉಂಡು.  ಪಂಡ್ ಆಂಡ್‌ಂದ್ ತರೆ ಆಡಯೆ.  ಕಿಸೆಕ್ ಕೈ ಪಾಡ್‌ನಗ ನಾಲಾಣೆ ಪಾವೊಲಿ ತಿಕ್ಕ್‌ಂಡ್.  ಅಯಿನ್ ಚಿನ್ನಪ್ಪಗ್ ಕೊರ್ದು "ಪೆಪ್ಪರ್‌ಮುಂಟ ದೆತೊನು ಮಗಾ" ಪಂಡೆ.  ಅಪ್ಪೆ ಕೊರಿನ ದುಡ್ಡುಗು ಉಂದೆನ್ಲಾ ಸೇರ್‍ನಾದ್ ಮಂದಿರೊತ ನಿಧಿಕ್ ಕಾಣಿಕೆ ಕೊರೊಡುಂದು ಚಿನ್ನಪ್ಪೆ ಎಣ್ಣೋಂಡೆ.

ಆ ರಾತ್ರೆ ಇಡೀ ಚಿನ್ನಪ್ಪಗ್ ಆ ದೇವೆರೆನೆವೇ ಕನೊ.  ಉದ್ದೋತ ಗೌನು ಪಾಡಿನ, ಗಾಳಿಗ್ ರಾಪಿನ ಕೂಜಲ್ದ ದೇವೆರೆನ ಪೊಟೊ ಇಲ್ಲಡೆಟ್ ದೀಯಿಲೆಕ್ಕೊ, ಅಯ್ತ ಎದ್‌ರ್‌ ಆಯೆ ಒಂಜಿ ಚಿಬಿಲೆ ಪೊತ್ತಾದ್ ದೀಯಿಲೆಕ್ಕೊ.  ಆ ಪೊಟೋಡ್ದು ಬೊನ್ಯೊ ಬೂರಿಲೆಕ್ಕೊ, ಜನೊಕ್ಕುಲು ಮಾಂತ ಇಲ್ಲಾಡೆಗ್ ಬತ್ತ್‌ದ್ ಪೊಟೊಕ್ಕು ಅಡ್ಡೊಬೂರ್‍ದು ಕಾನಿಗೆ ಪಾಡ್‌ದ್ ತನನ್ ಪುಗರ್‍ದ್  ಪೋಪಿಲೆಕ್ಕೊ.

ಮನದಾನಿ ಪುಲ್ಯಕಾಂಡೆ ದೂಮಣ್ಣೆ ಬೇಲೆಗ್ ಪಿದಾಡ್ನಾಗ ಎಂಕು ನೆಂಪು ಮಲ್ತಲ್:  "ಪಟೋ ಕನದ್ ಕೊರ್‍ಯೆರ ಮದಪ್ಪಡೇ."

"ವಾ ಪಟೊದೇ"?  ಡಿಂಗಾದಿಪುನ್ನಗ ನಡತ್ತಿನ ಪಾತೆರಕತೆ ಒಂಜಿಲಾ ದೂಮಣ್ಣಗ್ ನೆಂಪಿತ್ತಿಜಿ.

"ಅವ್ವೇ ಆ ದೇವೆರೆನವು".

ಅಮ್ಮೆರ್‍ ದಾದ ಪನ್ಪೆರೋಂದ್ ಚಿನ್ನಪ್ಪೆ ಅಪ್ಪೆಗ್ ಅಂಟೋಂದೆ ಉಂತ್ತೊಂದು ದೂಮಣ್ಣನ್ ತೂಯೆ.  ದೂಮಣ್ಣೆ ಬೀಡಿ ಪೊತ್ತಾವೊಂದು ಬಾಯಿಗ್ ದೀತ್ ರಡ್ಡ್ ದಮ್ಮು ಒಯ್ತೆ.  "ಈ ನಾಯಿ ತರೆತ್ತಯಗ್ ನನ ಅವೊಂಜ್ಜಿ!  ಮರ್‍ಯಾದಿಡ್ ಸಾಲೆಗ್ ಪೋದು ಓದಡ್".  ಎಂಕಮ್ಮಗ್ ಬೇಜಾರಾಂಡ್;  ಪಾಪೊ, ಬಾಲೆ ಆಸೆ ಮಲ್ತೊಂದುಂಡು.  ನಂಕ್ ಇತ್ತೆ ದೇಬೆರ್‍ ಒರಿತ್ತಿನ ಅವೊಂಜೆನೆ.  ಈರ್‍ ಕಾಸ್ ಕಚಿ ಮಲ್ಪಡುಂದಿಜ್ಜಿ.  ದನಿ ಕ್ಕುಲೆಡ ಕೇನ್ದ್ ಕೊನಂಡ ಈರೆನ ವಾ ಗಂಟ್ ಪೋಪುಂಡು?"

ನನ ಪಾತೆರ್‌ಂಡ ಪೊರ್ತಾಪುಂಡುಂದ್ ದೂಮಣ್ಣೆ ತರೆ ಆಡಾದ್ ಕೆಲ್ಸೊಗು ನಡೆತ್ತೆ.

"ಈ ಕೈಕಾರ್‍ ದೆಕ್ಕ್‌ದ್ ಸಾಲೆಗ್ ಪೋತು ಬಲ ಮಗಾ.  ಅಮ್ಮೆರ್‍ ಪಟೊ ಕನೆಯಿಜೇರ್‍ಡ ಜಾತ್ರೆಗ್. ದೆತ್ತೋನ್ಕೊ."  ಎಂಕಮ್ಮ ಮಗನ ತರೆ ಪೂಜಿದ್ ಪಂಡಲ್.  ಬಗವಾನ್ ಸಮಿತಿಗ್ ಕಾನಿಗೆ ಕೊರ್‍ಯೆರ ಉಪ್ಪಿನ ನೆಂಪಾದ್ ದೂಮಣ್ಣೆ ಬಾಯಿಡ್ ಬುರ್‍ರೆಂದ್ ಬಸ್ ಬುಡೋಂದು ಕೆರೆತ್ತಂಚಿ ಪಾರ್‍ಯೆ.

ಆನಿ ಆಯಗ್ ಪಾಠೊ ತರೆಕ್ಕೇ ಪತ್ತಿಜಿ.  ಒರ ಬಯ್ಯ ಆವಡ್‌ಂದ್ ದೇವೆರೆಡ ನಟ್ಟೋಂದೇ ಇತ್ತೆ.  ಸಾಲೆದ ಜೋಕುಲೆಡ ಪೂರಾ ಅಪ್ಪೆ ಕೊರ್ನ ಆಜಾಣೆ ಮೂಜಿ ಮುಕ್ಕಾಲ್ ಬುಕೊ ಅಮ್ಮೆ ಕೊರ್ನ ನಾಲಾಣೆ ಪಾವಲಿ ತೋಜಾದ್ ಇನಿ ಮಂದಿರೊಗು ಕಾನಿಗೆ ಕೊರ್‍ಯೆರುಂಡುಂದು ಪಂಡೋತ್ ಬತ್ತೆ.  ಸಾಲೆ ಬುಡಿ ಸಾತ್‌ಗ್ ಡುರ್‍ರ್‌ಂದ್ ಬಸ್ ಬುಡೋಂದು ಬಟ್ಟೇರೆ ಕಟ್ಟೋಣದಂಚಿ ಪಾರಿಯೆ.

ಕಟ್ಟೋಣದ ಎದ್‌ರ್‍ ಬಟ್ಟೇರ್‍ ಗಡಿಬಿಡಿಟ್ ಅಂಚಿ ಇಂಚಿ ಪೋವೊಂದಿತ್ತೆರ್‍.  ಏಪೊಲಾ ತನನ್ ತೂದು "ಸೂದ್ರ ಮುಂಡೇಮಗ.  ದೂರ ಉಂತು" ಪನ್ಪಿನ ಬಟ್ಟೇರೆಗ್ ಇನಿ ಕಾನಿ ಗೆದ ದುಡ್ಡು ತೂನಗ ಕುಸಿ ಆವು.  ನನ ಆರೆಡ ನೆರಡೆ ತಿಕ್ಕಾಂದ್‌ಂದ್ ಎಣ್ಣೋಂದು ಬಟ್ಟೇರೆ ಕೈತಲ್ ಪೋಯೆ.  ದುಡ್ಡು ದೆಪ್ಯೆರ ಚೀರಾವುಗು ಕೈಪಾಡ್‌ದ್ ಪರಡ್ಯೆ.  ಓಲುಂಡು ದುಡ್ಡು?  ಚಿನ್ನಪ್ಪಗ್ ಬುಲ್ಪೆರ ಬತ್ತ್ಂಡ್.  ಸಾಲೆಡ್ ಮಾಂತೆರೆಗ್‌ಲಾ ದುಡ್ಡು ತೋಜಾಯಿನವೇ ತಪ್ಪಾಂಡ್.  ಇತ್ತೆ ದಾದ ಮಲ್ಪಿನ?

ಚಪ್ಪೆ ಮೋನೆ ಮಲ್ತೋಂದು, ಚೀರಾವುಗು ಕೈ ಪಾಡೋಂದು.  ಒಂಜಿ ಕೈಟ್ ಮೂಕು ಸೀಟೊಂದು, ಬಾಯಿಡ್ ಮಣಮಣ ಏರೆಗೋ ನೆರೋಂದು ಉಂತೋಂದಿತ್ತಿನ ಚಿನ್ನಪ್ಪನ್ ತೂದು ಬಟ್ಟೇರ್‍ `ಓ ಸೂದ್ರ ನಾಯ್ತಮಗಾ ಮೀವಾಂದೆ ಈಡೆಗ್ ಬರ್‍ಯೆ ರಾವಂದ್.  ನಡುಪ್ಪು.... ನಡುಪ್ಪು ಪಂಡ್ದ್ ಜೋರು ಮಲ್ತೆರ್‍.

ಚಿನ್ನಪ್ಪೆ ದಾದ ಪನೊಡುಂದು ತೆರಿಯಾಂದೆ ಆರೆನೇ ತೂಯೆ.  ಬುಕೊ "ಯಾನ್ ದುಡ್ಡು ಈರ್‍" ಎಂದ್‌ದಾನ್ನೋ ಪನಿಯೆರ ಪೋದು ಪಾತೆರ್‍ಯೆರಾವಂದೆ ಉಂತಾಯೆ.

ಬಟ್ಟೇರೆಗ್ ಪಿಸಿರ್‍ ಏರ್‌ಂಡ್.  "ನಿನ್ನ ಅಮ್ಮೆ ದೂಮಣ್ಣಗ್ ದುಡ್ಡು ಕೊರ್ದು ಕೊರ್ದು ಎಂಕ್ ಸಾಕಾಂಡ್.  ಇತ್ತೆ ಈ ಕೇನ್ಯರ ಸುರು ಮಲ್ತನಾ?  ನಡುಪ್ಪುವನಾ ಅತ್ತ್ ಬೆರಿ ಪೊಡಿ ಮಲ್ಪೊಡ?"  ಬಟ್ಟೇರೆನ ಬೊಬ್ಬೆಗ್ ಕೆಲಸದಕುಲು ಕೆಲಸ ಉಂತಾದ್ ಚಿನ್ನಪ್ಪನೇ ತೂಯರ ಸುರು ಮಲ್ದೆರ್‍.  ಮಾಂತೆರೆನೆದ್‌ರ್‍ ಮರ್ಯಾದೆ ಪೋನಗ  ಈತೆನೆಡ ಕಟ್ಟ್‌ದೀಯಿನ ದುಕ್ಕೊದ ಕಟ್ಟೆ ಪುಡಾಂಡ್.  ಕಣ್ಣ್‌ಡ್, ಮೂಕುಡ್ ನೀರು ಉರ್ಕುಂಡ್.

ಚಿನ್ನಪ್ಪನ ಸುರ್‍ ಸುರ್‍ ಬುಲ್ಪಾಟಿಕೆ ಕೇನ್ದ ಬಟ್ಟೇರ್‍ ಒಂತೆ ಮೆತ್ತೆನಾಯೆರ್‍.  "ಒರೊ ಉಂತಾಪನಾ?  ನಿಕ್ಕ್ ಒಂಜಿ ಪೊಟೊ ದೂಮಣ್ಣನ ಕೈಡ್ ಕೊದೆð.  ಪೋದು ಮೀತ್ ಪೂಜೆ ಮಲ್ಪು.  ಚಿನ್ಪಪ್ಪನ ಬುಲ್ಪಾಟಿಕೆ ಒರೋನೆ ಉಂತ್ಂಡ್.  ಬಟ್ಟೇರೆ ಮಿತ್ತ್‌ದ ಕೋಪೊ ಸರ್‍ರ ಜಾರ್ದ್ ಪೊಂಡ್.  ಆಯೆ ಅಂಗಿಡ್ ಮೂಂಕುನು ಉರ್ದೋಂದು ಡುರ್‍ರ್‌ಂದು ಬಸ್ ಬಡೋಂದು ಪಾರ್‍ಯೆ.

ಅಮ್ಮೆ ಇಲ್ಲಲೇ ಉಪ್ಪಿನೆನ್ ತೂದು ಚಿನ್ನಪ್ಪಗ್ ಬಾರಿ ಅಚ್ಚಿರೊ.  ದೂಮಣ್ಣೆ ನಿರ್ಮಲೊ ಮೀದ್ ಬೊಲ್ದು ಕುಂಟು ಉತ್ತೊಂದು ಮುಂಡೊಗು ಪೊರ್ಲುಡು ಬಸ್ಮೊ ಪೂಜಿದಿತ್ತೆ.  ಜಾಲ್‌ಗ್ ಅಂಬಿ ಅಡಿತ್ತಿತ್‌ಂಡ್.  ಚಿನ್ನಪ್ಪೆ ಇಲ್ಲಗ್ ನೂರೊಂಡುಂದಿಪ್ಪುನಗ ದೂಮಣ್ಣೆ ಬೊಬ್ಬೆ ಪಾಡ್ಯೆ:  "ಓ... ಓ... ಉಂತು ಉಂತು.  ನಿನ್ನ ಅಂಗಿ, ಚಡ್ಡಿ ಮಾಂತ ಬಿಚ್ಚಿದ್ ಅಂಚನೆ ಕಿರೆಟ್ಟ್ ಮುರ್ಕುದ ಬಲ್ಲ.  ಸಾಲೆಡ್ ಏರೇರೆನ್ ಮುಟ್ಟುದು ಬತ್ತನೋ ದಾನೋ"?

ಚಿನ್ನಪ್ಪಗ್ ಬಟ್ಟೇರೆ ಪಾತೆರೊ ನೆಂಪಾಂಡ್.  ಅಲ್ಲೇ ಪಿದಯಿ ಕೋರಿಗೂಡುದ ಮಿತ್ತ್ ಚೀರಾವುದೀಯೆ.  ಅಂಗಿ ಚಡ್ಡಿ ಕೋಮಣೊ ಬಿಚ್ಚಾದ್ ಉರ್ಬುಲಿಯಾದ್ ಕಿರೆಕ್ ಬೆಲಿತ್ತೆ.  ದುಡುಮ್ಮ ಕಿರೆಕ್ಕ್ ಲಾಗಿದ್ ಕುಸಿಟ್ಟ್ ಮೀಂದಿಯೆ.  ಕಾರ್‌ದ ಕಜ್ಜಿಗ್ ತರುಕುಲು ತುಚ್ಚಿನಗ ಬಟ್ಟೇರ್‍ ಪನ್ನವು ನೆಂಪಾಂಡ್.  ಬೇಕೊ ಮಿತ್ತ್ ಬತ್ತ್‌ದ್ ಅಂಚನೆ ಇಲ್ಲಗ್ ಬೆಲಿತ್ತೆ.

ಎಂಕಮ್ಮಲಾ ಆನಿ ತೆರೆಕ್ಕ್ ಮೀದ್ ಮುಂಡೊಗು ಗಮಗಮ ಬಸ್ಮೊ ಪಾಡ್ದಿತ್ತಲ್.  ಅಂಬಿ ಅಡಿತ್ತಿ ಇಲ್ಲ್ ಕಿಲೀನಾದ್ ತೋಜೆತ್‌ಂಡ್.  ಚಿನ್ನಪ್ಪನ್ ತೂದು ಎಂಕಮ್ಮ "ಬಲ ಮಗಾ... ಸೀತೊ ಅವುಂದು ಸಿರೆಂಗ್‌ಡ್ ವರೆಸ್ಯಾಲ್.  ಅರ್ದ್‌ತ್ ಉಣ್ಗಾದ್ ದೀಯಿನ ಬೆಚ್ಚ ಚಡ್ಡಿಯೊಂಜೆನ್ ಅಯಗ್ ಕೊರ್ಯಲ್.

ಬಟ್ಟೇರ್‍ ಕೊರಿನ ಫೋಟೊ ಅಲ್ಲೇ ಗೋಡೆದ ಮಿತ್ತ್ ಇತ್ತ್ಂಡ್.  ಆ ಪೊತೆಲಿಕ್ಕೆದ ದೇವೆರ್‌ನ ತೂದು ಅಯನ ಬೇಜಾರ್‍ ಮಾಂತ ಒರೊನೇ ಮಾಯವಾದ್ ಪೋಂಡ್.  ದೇವೆರ್‌ಗ್ ಅಡಡೊ ಬೂರ್ದು ನಮಸ್ಕಾರೊ ಮಲ್ದೆ.  ಉಂದೆನ್ ತೂದು ಎಂಕಮ್ಮನ ಮೋನೆ ಅಗಲಾಂಡ್.  "ಎಂಕ್‌ಲಾ ಒಂತೆ ಬೊಣ್ಯೊ ಬೋಡು ಮುಂಡೊಗು ಪಾಡ್ಯೆರ."  ಮಗೆ ಕೇನ್ನಗ ಉಲಾಯಿಡಿತ್ತಿನ ದೂಮಣ್ಣೆ ಪಂಡೆ.  "ಅಯಿನ್ ಬೊಣ್ಯೊಂದು ಪನೆರಾವಂದ್.  ದನಿಕ್ಕುಲು ಪಂತೆರ್‍ ಅಯ್ನ್ ಇಬೂತಿಂದ್ ಪನೋಡುಗೇ".

ಯತ್ಯಾಸೊ ಗೊತ್ತಾವಂದೆ ಚಿನ್ನಪ್ಪೆಕೇಂಡೆ:  "ದಾಯಿಗ್?" ದೂಮಣ್ಣಗ್ ಇತ್ತೆ ಪಿಸಿರ್‍ ಬತ್ತ್‌ಂಡ್.  "ಪಿದಂಬು ಪಾತೆರ್‍ವನಾ?  ಬೊಣ್ಯೊ ದಿಕ್ಕೆಲ್‌ಡ್ ಉಪ್ಪಿನವು.  ಉಂದು ಆ ದೇವೆರೇ ಕೊರಿನವು.  ಅಂಚಾದ್ ಉಂದೆನ್ ಇಬೂತೀಂದ್ ಪನೊಡು".  ಕೈಡಿತ್ತಿ ಕರಡಿಗೆದ ಮುಚ್ಚೆಲ್‌ದೆತ್ತ್‌ದ್ ಮಗಕ್ಕ್ ತೋಜಾದ್ ಪಂಡೆ:  "ಪಾಡೋನು".  ಚಿನ್ನಪ್ಪೆ ಅಮಸರೊಡು ಕರಡಿಗೆಗ್ ಕೈ ಪಾಡಿನಗ ಒಂತೆ ಇಬೂತಿ ನೆಲಕ್ಕ್ ಬೂರ್‌ಂಡ್.  ಮಗನ ಮಂಡೆಗ್ ಟಕ್ಕಂದ್ ಒಂಜಿ ಕುಟ್ಟಿ ಪಾಡ್ದ್ ದೂಮಣ್ಣೆ ಕರಡಿಗೆ ಮುಚ್ಚಿಯೆ ನೆಲ ತೋಜ್ಪಾದ್ ಮಗಟ್ಟ ಪಂಡೆ:  "ಆಯ್ನೇ ಪಾಡೋನು".

ಚಿನ್ನಪ್ಪೆ ನೆಲಟ್ಟಿತ್ತಿನ ಬೊಣ್ಯೊನು ಮುಂಡೊಗು ತಿಕ್ಕೋಂಡೆ.  "ಅಂಚನೇ ಒಂತೆ ಬಾಯಿಗ್ಲಾ ಪಾಡೋನು.  ದನಿಕುಲು ಪನ್ದೇರ್‍ ಕಾಯಿಲೆ ಬತ್ತ್‌ಂಡ ಮರ್ದ್ ಪರೊಡುಂದು ಇಜ್ಜಿ.  ಇಬೂತಿ ಒಂತೆ ತಿದ್‌ಡ ಯಾವೊಂದು".  ದೂಮಣ್ಣೆ ಪನ್ನಗ ಎಂಕಮ್ಮ ಬಗ್ಗ್‌ದ್ ಬೊಣ್ಯೊನು ಕೈ ಬಿರೆಲ್‌ಡ್ ದೆತ್ತೊಂದು ಬಾಯಿಗ್ ಪಾಡೊಂದು ವಾತೊ ಗುಣ ಆವಡ್ ದೇವೆರೇಂದ್ ನಟ್ಟೋಂಡಾಲ್.

ಆನಿ ಬಯ್ಯಗ್ ಬಜಿಲ್ ಕದಳಿ ಬಾರೆದ ಪಂರ್ದ್‌‌ತ ರಸಾಯನೊದ ಪಳಾರೊ.  ರಾತ್ರೆ ಉಪಾಸೋಂದು ದೂಮಣ್ಣೆ ಪಂಡೆ.  ಪ್ರತಿ ಗುರುವಾರೊಲಾ ಉಂದೇ ಕ್ರಮೋಂದು ಆಮ್ಮೆ ಪನ್ನಾಗ ಚಿನ್ನಪ್ಪಗ್ ಬಾರೀ ಸಂತೋಸಾಂಡ್.  ಆತ್ ಪೊರ್ತುಗ್ ಬಟ್ಟೇರೆನ ಕಟ್ಟೋಣೊಡ್ದು ಬಜನೆ ಕೇನ್ಡ್.  ಬಜನೆದ ಸೊರೊ ಕೇಂಡಿ ಚಿನ್ನಪ್ಪೆ ಅಮ್ಮಡ ಕೇಂಡೆ:  "ಯಾನ್ ಬಜನೆಗ್ ಪೋವೊಡಾ."

ದೂಮಣ್ಣೆ ಪರಾಂದೆಲಾ ಸಂತೋಸುಟಿತ್ತಿನ ಆನಿ ಮಾತ್ರ.  ತೆಲಿತ್ತೋಂದೇ ಮಗಟ್ಟ ಪಂಡೆ:  "ಸರಿ ಮಗ ಪೋದು ಬಜನೆ ಮಲ್ಪು.  ಒಂತೆ ತೈರ್‍ದ್ ಯಾನ್‌ಲಾ ಬರ್ಪೆ".

ಬಾರೀ ಕುಸಿಡ್ ಚಿನ್ನಪ್ಪೆ ಬಸ್ಸ್ ಸ್ಟಾರ್ಟ್ ಮಲ್ಪುನಾಗ ಎಂಕಮ್ಮ ಪಂಡಲ್:  "ಬಜನೆತಲ್ಲ್ ಬ್ರಾಣೆರನ್ ಮುಟ್ಟುದು ಅಕುಲೆನ ಮಡಿ ಆಲ್ ಮಲ್ಪಡಾ.  ಮನ್ಸೆರೆನ್ ಮುಟ್ಟುದು ನಿನ್ನ ಮಡಿನ್‌ಲಾ ಆಲ್ ಮಲ್ತೊನಡಾ."  ಚಿನ್ನಪ್ಪ ಮಲ್ಲ ಸೊರೊಡು ಆವುಂದ್ ಪಂಡ್‌ದ್ ಬಸ್ಸ್ ಬುಡಿಯೆ.

ಕಟ್ಟೋಣೋದ ಎದ್‌ರ್‍ ಜನೊಕ್ಕುಲು ಸಾಲ್‌ಡ್ ಕುಲ್ಲುದಿತ್ತೆರ್‍.  ಮುಂಡೊಗು ಬೊಣ್ಯೊ ಪೂಜಿದಿತ್ತಿನ ಟ್ಟೇರ್‍ ಚಿನ್ನಪ್ಪನ್ ತೂದು "ಅಲ್ಲ್ ಕುಲು" ಪಂಡ್‌ದ್ ಪಿರಾವುದ ಜಾಗೆ ತೋಜಾಯೆರ್‍.  ಚಿನ್ನಪ್ಪೆ ತನ್ನ ಎದ್‌ರ್‍ ಕುಲ್ದಿನಕುಲೆನ್ ತೂಯೆ.  ದೂರೊಡು ಉಂತೊಂದು ಕಣ್ಣ್ ಬಾಯಿ ಬುಡುದು ಉಂದೆನ್ನ್ಮಾಂತ ತೂಪೆತಿನ ಮನ್ಸೆರೆನ್‌ಲಾ ತೂಯೆ.  ಇನಿ ಏರೆನ್ಲಾ ಮುಟ್ಯೆರ ಬಲ್ಲೀಂದ್ ಅಪ್ಪೆ ಪನ್ನವು ನೆಂಪಾದ್ ಬಟ್ಟೇರೆನೇ ತೂವೂಂದು ಕುಲ್ಯೆ.

ಬಟ್ಟೇರ್‍ ಒಂಜಿ ಪೊಸ ಬಜನೆ ಪಂಡ್‌ದ ಕೊರಿಯೆರ ಸರು ಮಲ್ಪೆರ್‍.

"ಓಂ ಭಗವಾನ್ ಓಂ ಭಗವಾನ್
ಓಂ ಭಗವಾನ್ ಸತ್ಯನಾಥ ಭಗವಾನ್"

ಚಿನ್ನಪ್ಪನ ಸಾಲೆಡ್‌ಲಾ ಪ್ರತಿ ಸನಿವಾರೊ ಬಜನೆ ಇತ್ತ್‌ಂಡ್.  ಅಲ್ಲ್ `ನೋಡು ನೋಡು ಗೋಪಿ ನಿನ್ನ ಮಗನ ಲೂಟಿಯಾ' `ಎಲ್ಲಿರವೆ ತಂದೆ ಬಾರೋ' `ಯಮನೆಲ್ಲು ಕಾಣೆನೆಂದು ಹೇಳಬೇಡ' ಇಂಚಿತ್ತಿನ ಪರಾ ಬಜನೆ ಅತ್ತಾಂದೆ ಬಟ್ಟೇರ್‍ ಪಂಡ್‌ದ್ ಕೊರ್ಪಿನಂಚಿನ ಪೊಸ ಪೊಸ ಬಜನೆಲೇ ಇತ್ತಿಜೊ.  ಪೊಸ ರಾಗೊದ ಪೊಸ ಬಜನೆ ಕೇಂಡ್‌ತ್ ಚಿನ್ನಪ್ಪಗ್ ಬಟ್ಟೇರ್‍ ಮಲ್ಲ ಜನೊ ಅಂದ್‌ಂದಾಂಡ್.  ಬಜನೆ ಮುಗಿನಾಗ ಮಾಂತೆರ್ಲಾ ಲಕ್ಕ್‌ದುಂತಿಯೆರ್‍.  ಬಟ್ಟೇರ್‍ ಪೊಸ ಮಂಗಳೊ ಪಂಡ್ ಕೊರಿಯೆರ್‍.  ಅವು ಆಯನ ಸಾಲೆದ "ಚಲಿಸುವ ಜಲದಲಿ ಮತ್ಸನಿಗೆ" ಮಂಗಳೊದ ಲೆಕ್ಕತ್ತ್.  ಬಾರೀ ಎಡ್ಡೆರಾಗೊ.  ಆಂಡ ಅಯ್ತ ಒಂಜಿ ರಡ್ಡ್ ಸಾಲ್ ಬುಡುಂಡ ಚಿನ್ನಪ್ಪಗ್ ಒರಿ ನವು ನೆಂಪುಡು ಒರಿಯಿಜಿ.

ಮಂಗಳೊ ಮುಗಿಬುಕ್ಕೊ ಮಾಂತೆರ್‍ಲಾ ಕುಲ್ಯೆರ್‍.  ಬಟ್ಟೇರ್‍ ಒಂಜೆ ಕರಂಡಿಗೆಡ್ ಇಬೂತಿ ಪಾಡ್ದ್ ಕುಲ್ಲಿನಕುಲೆ ಎದ್‌ರ್‍ ಪತ್ತೊಂದು ಬತ್ತೆರ್‍.  ಅಪಗ ಬಟ್ಟೇರೆ ಮಲ್ಲಮಗೆ ಮಲ್ಲ ಮಾಣ್ಯಣ್ಣೇರ್‍ ಇಬೂತಿ ಸ್ಲೋಕೊ ಪಂಡ್ ಕೊರಿಯೆರ್‍:

"ಪರಮ ಪವಿತ್ರಂ ದೇವಂ ವಿಭೂತಿಂ
ಪರಮಂ ವಿಚಿತ್ರಂ ಲೀಲಾ ವಿಭೂತಿಂ
ಪರಮಾರ್ಥ ಇಷ್ಟಾರ್ಥ ಮೋಕ್ಷ ಪ್ರದಾನಂ
ದೇವಾ ವಿಭುತಿಂ ಇದಮಾಶ್ರಯಾಮಿ."

ಸುಮಾರ್‍ ಸರ್ತಿ ಆಯಿನ್ ಪಂಡ್‌ದ್ ಪಂಡ್‌ದ್ ಚಿನ್ನಪ್ಪಗ್ ಅವು ಬಾಯಿ ಪಾಠೊ ಬತ್ತ್ಂಡ್.

ಇಬೂತಿ ದೆತ್ತೋಂದು ಮಾತೆರಲ್ಲಾ ಮಲ್ತಿನಂಚನೆ ಒಂತೆ ಬಾಯಿಗ್ ಪಾಡೋಂದು, ಒರಿನೆನ್ ಚಿನ್ನಪ್ಪೆ ಮುಂಡೊಗು ತಿಕ್ಕೋಂಡೆ.  ಆಯೆ ಇಬೂತಿ ಸ್ಲೋಕೊಡೇ ಮುರ್ಕುದಿಪ್ಪುನಗ ತೋರೊತ ಕೈಯೊಂಜಿ ಆಯನ ಬೆರಿನ್ ಮುಟ್ಟುಂಡು.  ತಿರ್‌ಗ್‌ದ್ ತೂನಗ ಅಮ್ಮೆರ್‍!  "ಮುಗೀಂಡತ್ತ ಮಗಾ, ನನ ಪೋಯಾ?"  ಅಮ್ಮೆರ್‍ ದಿನೊಲಾ ಇಂಚನೇ ಇತ್ತ್ಂಡ ಏತ್ ಎಡ್ಡೆಂದ್ ಚಿನ್ನಪ್ಪೆ ಎಣ್ಣೋಂದಿಪ್ಪುನಗ ಬಟ್ಟೇರ್‍ ಬತ್ತೆರ್‍.  ದೂಮಣ್ಣನ್ ತೂದು ಪಿರೀತಿಡ್ "ಎಂಚಿ ದೂಮಾ ಪೂಜೆ ಮಲ್ದನಾ?  ಕೇಂಡರ್‍."  ದೂಮಣ್ಣೆ ತರೆ ಬಗ್ಗಾದ್ "ಊದು ಬತ್ತಿ ಪೂತ್ತಾದ್ ದೀತೆ" ಪಂಡೆ.

"ಅವು ಯಾವಂದ್ ದೂಮಾ.  ಒಂಜಿ ದೀಪೊ ಬೋಡು.  ಚಿಬಿಲೆಳಾ ಅವು.  ಪರ್ತಿದ ಬತ್ತಿ ಮಲ್ಪೋಡು.  ತಾರಾಯಿದ ಎಣ್ಣೆ ಪಾಡ್‌ದ ದೀಪೊ ಪೊತ್ತಾವೊಡು.  ಚಿನ್ನಪ್ಪಾ ಈ ದಿನೊಲಾ ಈಡೆ ಬರೊಡು.  ಮೂಲು ಬಜನೆ ಕಲ್ಪೊಡು.  ಇಲ್ಲಡ್ ಬಜನೆ ಪನೊಡು ದಾನೆ?"  ಬಟ್ಟೇರ್‍ ಪನ್ನಾಗ ಚಿನ್ನಪ್ಪೆ ಸಂತೋಸೊಡು ತರೆ ಆಡಯೆ.

ಇಲ್ಲಾಗ್ ಬರ್ಪಿ ಸಾದಿಡ್ ದೂಮಣ್ಣೆ ಮಗಟ ಪಂಡೇ "ಇಂಚಾಂಡ ನಮೊ ಬಿರಾಣೆರೆ ಲೆಕ್ಕೊನೇ ಆಪೊ.  ದಿನೋಲಾ ಬಜನೆ, ಪೂಜೆ, ಇಬೂತಿ.  ಈ ದೇವೆರೆಡ್ದ್ ಈತ್ ಮಾಂತ ಆಂಡ್.  ನನ ಗುರುವಾರೊ ಗುರುವಾರೊ ಮದು ಮಾಸೊ ಇಜ್ಜಿ.  ಆನಿ ಯಾನ್ ಪರ್‍ಯೆರಲಾ ಇಜ್ಜಿ.  ಯಾನ್ ಆ ದೇವೆರಡ್ಡ ನಟ್ಟುನೆ ಒಂಜೇ.  ಒರೊ ನಮ ಪೊಟೊಡ್ತು ಇಬೂತಿ ಬೂರ್‍ಯೆರ ಸುರುವಾಂಡ ಆಂಡ್.  ಬುಕೊ ಬೇಲೆಗ್ ಪೋವಂದೆಲಾ ಬದ್ಕೊಲಿ."

ಇಲ್ಲಡೆಡ್ ಎಂಕಮ್ಮಲಾ ಬೀಡಿ ಕಟ್ಟೋಂದು ಆಲ್ ಎಲ್ಯ ಉಪ್ಪುನಗ ಕಲ್ತಿನ ಒವ್ವೋ ಒಂಜಿ ಬಜೆತದ ರಾಗೊ ಒಯ್ತೋಂದಿತ್ತಲ್.  ಚಿನ್ನಪ್ಪೆ ಬಟ್ಟೇರ್‍ ಪನ್ನೇನ್ ಪೂರ ಅಪ್ಪೆಗ್ ಒಪ್ಪಿಸಾಯೆ.  ನೆಂಪಾಯಿನ ಬಜೆನೆದ ಸಾಲ್‌ಳೆನ್ ಪಂಡೆ.  "ಆ ಇಬೂತಿದ ಬಜನೆ ಪನ್‌ಮಗಾ" ದೂಮಣ್ಣೆ ಪನ್ನಗ ಅಯಗ್ ರಡ್ಡ್ ಸಾಲ್ ಮಾತ್ರ ನೆಂಪಾಡ್.  "ಬುಡು ಒರಿನೆನ್ ಎಲ್ಲೆ ಕಲ್ತೊನು" ಅಮ್ಮೆ ಸಮದಾನೊಡೇ ಪಂಡೆ.

"ಇತ್ತೆ ದೀಪೊಗು ದಾನೆ ಮಲ್ಪಿನ"?  ದೂಮಣ್ಣೆ ಎಂಕಮ್ಮ ಪಂಡೋಂದೇ ಉಲಯಿ ಪೋಯಲ್.  ಉಲಯಿ ಓಲೋಲೋ ನಾಡ್ದ್ ಚಿಬಿಲೆ ಪತ್ತೊಂದು ಬತ್ತಲ್.  ದೂಮಣ್ಣೆ ತಾರಾಯಿತ ಎಣ್ಣೆ ಮೈತೆ.  "ಬತ್ತಿಗ್ ಪರ್ತಿ ಇಜ್ಜತ್ತಾ"?  ದೂಮಣ್ಣೆ ತರೆ ಬೆಚ್ಚ ಮಲ್ದೆ.  ಎಂಕಮ್ಮ ಪರಾ ಪೆಟ್ಯದ ಬಾಯಿದೆತ್ತ್‌ದ್ ಪರಾ ಬೊಲ್ದು ಕುಂಟುದ ತುಂಡೊಂಜೆನ್ ದೆತ್ತಲ್.  ಅಯ್ನ್ ಎಲ್ಯ ತುಂಡು ಮಲ್ತ್‌ದ್ ಕೈತ ನಡುಟು ದೀದ್ ತಿರ್‍ಗಾದ್ ಬತ್ತಿ ಮಲ್ತ್‌ದ್ ಚಿಬಲೆಟ್ ದೀಯಲ್.  ದೂಮಣ್ಣೆ ಕಡ್ಡಿ ಗೀರ್‌ದ್ ದೀಪೊ ಪೊತ್ತಾಯೆ.  ಆಂಡ ಪೊಟೋ ಗೊಡೆದ ಮತ್ತ್‌ ಉಂಡು.  ಅಲ್ಲ್ ದೀಪೊನು ದೀಪುನೆ ಎಂಚ?  ದೂಮಣ್ಣೆ ಯೋಚನೆ ಮಲ್ತೊಂದು ಉಲಯಿ ಪೋಯೆ.  ಕೆಲ ದಿನೊಕ್ಕು ದುಂಬು ಅಂಗಡಿಡ್ದ್ ಕೊನದಿನ ಕಾಲಿ ರಟ್ಟ್‌ತ ಪೆಟ್ಟಿಗೆನ್ ಪತ್ತೊಂದು ಬತ್ತೆ.  ಅಯ್ತ ಒಂಜಿ ಬಾಗೊನು ಪರ್ತ್‌ದೆತ್ತೆ.  ಆಯ್ನ್ ಪೋಟೊತ ತಿರ್ತ್ ತಿಕ್ಕಾಯೆ.  ಅವು ಬೂರಾಂದಿಲೆಕ್ಕ ರಡ್ಡ್ ಆಣಿ ಹಾಕ್‌ತ್ ಉಂತಾಯೆ.  ಇತ್ತೆ ಚಿಬಲೆ ಉಂತುನಾತ್ ಜಾಗೆ ಆಂಡ್.  ಚಿಬಲೆದ ಸೊಡರ್‌ಗ್ ದೇವೆರೆ ಪೋಟೋ ನನಲಾ ಸೋಕು ತೋಜ್ಯೆರೆ ಸುರುವಾಂಡ್.  ಎಂಕಮ್ಮ ಅಯ್ನ್ ತೂದು ಬಯೋ ಬಕ್ತಿಡ್ ಕೈ ಮುಗಿಯಲ್.  ಚಿನ್ನಪ್ಪೇಲಾ ಕೈ ಮುಗಿದ್ "ದೇವೆರೇ ನಿನ್ನ ಪೊಟೊಡ್ದು ಒರೊ ಇಬೂತಿ ಬೂರಿಲೆಕ್ಕ ಮಲ್ಪು" ಪಂಡ್‌ದ್ ನಟ್ಟೊಂಡೆ.

ಪುಲ್ಯಕಾಂಡೆ ಚಿನ್ನಪ್ಪೆ ಲಕ್ಕ್‌ನಾಗ ಎಂಕಮ್ಮ ಜೆತ್ತಿನಲ್ಪನೇ  ನರಕ್ಕೊಂದಿತ್ತಲ್.  ದೂಮಣ್ಣೆ ಅಟ್ಟಿಲ್ದ ಕೆಲಸದ ಗಡಿಬಿಡಿಟ್ಟಿತ್ತೆ.  ಉಲಯಿಡ್ತ್ ಒಂತೆ ನೀರ್‍ ಕೊನದ್ ದೂಮಣ್ಣೆ ಅಯ್ಕ್ ಒಂತೆ ಇಬೂತಿ ಪಾಡ್ದ್ ಆಲೆಗ್ ಪರ್ಪಾಯೆ.  ಆಂಡಲಾ ನರಕ್ಕುನೆ ಉಂತಿಜಿ.  ಉಂದುನ್ ತೂದು ದೂಮಣ್ಣೆ ಪಮಡೆಃ `ಮಗಾ... ಇನಿ ಈ ಸಾಲೆಗ್ ಪೋವಡ.  ಅಪ್ಪೆನೊರ ಯಾನ್ ಲೆತ್ತೋಂದು ಚಾತು ಪಂಡಿತೆರಾಡೆಗ್ ಪೋದು ಬರ್ಪೆ'.  ಶಾಲೆ ತತ್ತ್‌ಂಡತ್ತಾಂದ್ ಚಿನ್ನಪ್ಪೆ ಒರೊ ಚಪ್ಪೆ ಆಯೆ.  ಸಾತ್‌ಗೇ ಪೊಟೋತ ನೆಂಪಾತ್ ಅಯನ ಬೇಜಾರ್‍ ಒರೊನೇ ಮಾಯಕಾಂಡ್.

ಅಪ್ಪೆನ ಕೈ ಪತ್ತೊಂದು ಅಮ್ಮೆ ಪೊಪುನಯಿನ್ ಕಣ್ಣ್‌ಗ್ ಬೂರುನಾತ್ ದೂರ ತೂಯಿನ ಚಿನ್ನಪ್ಪಗ್ ಅಕ್ಲು ಬರ್ಪಿಮುಟ್ಟದಾಯ್ತ ಮಲ್ಪಿನಾಂದ್ ಯೋಚನೆ ಸುರುವಾಂಡ್.  ಪದಿರಾಡೊಂಜ್ಲಿ ಪದಿರಾಡ್ ಮಗ್ಗಿ ಗಟ್ಟಿಡ್ ರಡ್ಡ್ ಸರ್ತಿ ಪಂಡೆ.  ಬಾಯಿಗ್ ಬರ್ಪಿ ಪದ್ಯೊಲೆನ್ ಪಂಡ್‌ದ್ ನಲ್ತೆ.  ಒಂಜಿ ಬೈರಾಸ್ ಪತ್ತೋಂದು ಕಿರೆಕ್ಕ್ ಪೋದು ದಡುಮ್ಮಲಾಗಿಯೆ.  ಮಲಂಕಾನಿ ಮೀಂದೋಂದು ಬಾಯಿಟ್ ನೀರ್‍ ಚಿಂದಾದ್ ಸುರ್‍ಕಂದ್ ಉಗಿಯೋಂದು ಒಂತೆ ಪೊರ್ತು ಕಲೆಯೆ.  ಇಲ್ಲಡ್ ಬತ್ತ್‌ದ ನೆಂಪಾಯಿನ ಮಾಂತಾ ಬಜನೆಲ್‌ನ್ ಪಂಡೆ.  ಬಡಾವಾಣಾಗ ನಂಗ್ ಸೂಟುಪಾಡ್ದ್ ರಡ್ಡ್ ಉಂಡೆ.

ಆಂಡಲಾ ಪೊರ್ತೇ ಪೋಪುಜಿ.  ಕುಡಾ ದೇವೆರ್‍ನೆ ಪೊಟೋತ ಎದ್‌ರ್‍ ಬತ್ತ್‌ದ್ ಉಂತ್ಯೆ.  ಪಟೊದ ಎದ್‌ರ್‌ತ್‌ ಚಿಬಿಲೆದ ಬತ್ತಿ ಪಿದಾಯಿ ನಿಲ್ಕೊಂದಿತ್ತ್‌ಂಡ್.  ಓ ಇನಿ ಚಿಬಿಲೆ ಪೊತ್ತಾತಿಜಿ.  ತನಾಂಡಲಾ ಪೊತ್ತಾದ್ ದೇವೆರೆನ್ ಬಯಬಕ್ತಿಡ್ ನಟ್ಟೊನೊಡು.  ಪಟೊಡ್ತು ಇಬೂತಿ ಬೂರಿಲೆಕ್ಕ ಆವೊಡು.  ಇಂಚಂದ್‌ದ್‌ ಎಣ್ಣಿನ ಚಿನ್ನಪ್ಪೆ ಮುಂದಿಲಿಗ್ ಬೆಲ್ತೆ.  ಅಲ್ಪ ನಾಲೈನ್ ಮಡಲ್ ಉಣುಂಗೋಂದಿತ್ತೊ.  ಅಯ್ಡದ್ ರಡ್ಡ್ ಮಡಲ್ದಗರಿ ಪತ್ತೊಂದು ದಿಕ್ಕೆಲ್ತಾಡೆಗ್ ಪೋಯೆ.  ದಿಕ್ಕೆಲ್ದ ಗೆಂಡೊಗ್ ಅವೆನ್ ತಾಗಾದ್ ಗಟ್ಟಿ ಉರಿತ್ತೆ.  ಒಂತೆ ಪೊರ್ತುಡು ಅವೆಕ್ ಸೂ ಪತ್ತ್ಂಡ್.  ಅವೆನ್ ಅಂಚನೇ ಪತ್ತೋಂದು ಪಟೊತಾಡೆಗ್ ಬತ್ತೆ.  ಚಿಬಿಲೆದ ಬತ್ತಿನ್ ಪೊತ್ತಾಯೆರ ಕಸರತ್ತ್‌ ಮಲ್ದೆ.

ಪಟೋ ದೀದಿತ್ತಿನ ಗೋಡೆತ ಎದ್‌ರ್‌ಡ್ ಬೆದರ್‍ದ ಅಡ್ಡೊ ಒಂಜಿತ್ತ್‌ಂಡ್.  ಬತ್ತಿ ಮಲ್ಪೆರಾಂದ್ ಒಂತೆ ಪರತ್ ಬೊಲ್ದು ಕುಂಟುಲೆನ್ ದೂಮಣ್ಣೆ ಅಡ್ಡೊಗು ಕಟ್ಟ್‌ದಿತ್ತೆ.  ಚಿನ್ನಪ್ಪನ ಲಾಗಾಟೊಡು ಸೂ ಬತ್ತಿಗ್ ತಾಗುನ ಬದಲ್ ಅಡ್ಡೊಗು ಕಟ್ಟ್‌ದಿತ್ತಿನ ಕುಂಟುಗು ತಾಗ್‌ಂಡ್.  ಕುಂಟುಗು ಪತ್ತಿನ ಸೂ ಬೆದ್‌ರ್‌ತ ಅಡ್ಡೊಗು ಪತ್ತ್‌ಂಡ್.  ಅಡ್ಡೊಡ್ದು ಇಲ್ಲ ಮಾಡ್‌ಗ್ ಮಾಡ್‌ತ ಮುಳಿಕ್ ಸೂ ಪತ್ತ್‌ನಗ ಚಿನ್ನಪ್ಪೆ ಕಂಗಾಲಾಯೆ.  `ಸ್ವಾಮಿ ದೇಬೇರೇ.  ಒರ ಸೂ ತೆಕ್ಕಾಲ.  ಒರ ನಿನ್ನ ಕಾರ್ನಿಗೊ ತೊಜಿಪ್ಪಾಲ.  ದೇಬೆರೇ ಸೂ ತೆಕ್ಕಾಲಾಂದ್' ಬೊಬ್ಬೆ ಪಾಡ್ದ್‌ ಕೈ ಮುಗಿಯೆ.

ಸೂ ಏರೋಂದೇ ಪೋಂಡು.  ಪೊತ್ತೊಂದಿತ್ತಿ ಮಾಡ್‌ದ ಅಡ್ಡ ಒಂಜಿ ಪಟೊಕ್ಕೇ ಬೂರುಂಡು.  ಪಟೋ ನೆಲಕ್ಕ್ ಬೂರುದು ನರಿನಗ ಚಿನ್ನಪ್ಪೆ ಇಲ್ಲದ ಪಿದಾಯಿ ಬೆಲ್ತೆ "ಅಯ್ಯೋ ಸೂ ಸೂ ಇಲ್ಲ್ ಪೊತ್ತೋಂತುಂಡು.  ಅಯ್ಯೋ... ಏರಾಂಡಲಾ ಬಲ್ಲೆ" ಎಂದ್‌ದ್ ಅರೆಬಾಯಿ ಪತ್ತಿಯೆ.  ದೂರೊಡಿತ್ತಿ ಇಲ್ಲಾಲೆಡ್ ಇತ್ತಿನ ಪರಬ್ಬೇರ್‌ಲಾ, ಪೊಡಿ ಜೋಕುಲ್ಲಾ ಮಾತ್ರೊ.  ಮಾಂತೆರ್‍ಲಾ ಇಂಬ್ಯನ ಸೊರೊ ಕೇಂಡ್‌ತ್ ಬಲಿತ್ತೋಂದು ಬತ್ತ್‌ದ್ ಒಟ್ಟುಗು ಅರೆಬಾಯಿ ಪತ್ಯೆರ ಸುರು ಮಲ್ತೆರ್‍.

ಬೊಬ್ಬೆ ಕೇನ್ದ್, ಪುಗೆ ತೂದು ಬಟ್ಟೇರೆ ತೋಟೊಡು ಕೆಲಸೊ ಮಲ್ತೊಂದಿತ್ತಿ ಏಲೆದಕುಲು ಬಲ್ತೊಂದು ಬತ್ತೆರ್‍.  ಪೊತ್ತುನ ಇಲ್ಲನ್ ತೂದು ತಿಕ್ಕಿನ ಕರ ಕೆಡ್ಯಟ್ ನೀರ್‍ ಕೊನದ್ ಸೇತೆರ್‍.  ಮಾಂತಾ ಉರಿದ್ ಪೋಯಿ ಬುಕೊ ಸೂ ಉಂತ್‌ಡ್.  ಸೂಡು ಕರೆಂಟಿನ ಮಾಡ್‌ ಇಜ್ಜಂದಿ ಇಲ್ಲ್ ಕಪ್ಪಾಯಿನ ಮಣ್ಣ್‌ದ ಗೋಡೆಲು ನಡೆತಿನೆಕ್ ಸಾಕ್ಷಿದ ಲೆಕ್ಕೊ ತೋಜೊಂದಿತ್ತೊ.

ಇಲ್ಲಡೆ ವಾಪಾಸ್ ಬರೋಂದಿತ್ತಿನ ದೂಮಣ್ಣೆ ದೂರೊಡ್ಡೇ ಬೊಬ್ಬೆ ಕೆಂಡ್‌ದ್, ಎಂಕಮ್ಮನ್ ಪಿರ ಬುಡ್ದು ಬೆಲ್ತೋಂದೇ ಬತ್ತೆ.  ಇಲ್ಲ್‌ನ್ ತೂದ್ ಮರಕಟ್ಟ್‌ದ್ ಉಂತಿಯೆ.  ಮಗನ ನೆಂಪಾದ್ ಅಂಚಿ ಇಂಚಿ ತೂಯೆ.  ಕಂಗಾಲಾದಿತ್ತಿನ ಮಗನ್ ತೂಯಿ ಬುಕೊ ದೂಮಣ್ಣಗ್ ಜೀವೊ ಬತ್ತ್‌ಂಡ್.  ಮಗನ ತಲೆ ಪೂಜಿದ್ ಅರ್ಕ್‌ಪತ್ತೋಂದು ಕೇಂಡೆ:  "ದಾನೆ ಆಂಡ್ ಮಗಾ?"  ಚಿನ್ನಪ್ಪೆ ಪೋಡ್ಡ್‌ದ್ ನಡಿಗ್ಯೆ.  ಸತ್ಯ ಪಂಡ ಅಮ್ಮೆ ಗುಂಡಿ ದೆತ್ತ್‌ದ್ ಕವುಂಪುವೆಂದ್ ಬುಲ್ಪೆರ ಸುರು ಮಲ್ತೆ.  ಬುಲ್ತೊಂದೇ ಪಂಡೆ:  "ಎಂಕ್ ಗೊತ್ತುಜ್ಜಿ".

ದೂಮಣ್ಣನ್ ತೂಯಿ ಬುಕ್ಕೊ ಅಲ್ಪ ಸೇರ್ದಿತ್ತಿನ ಜನೊ ಒರ್‍ಯೊರ್‍ಯಾದ್ ಜಾರ್‍ಯೆರ ಸುರು ಮಲ್ದೆರ್‍.  ದೂಮಣ್ಣೆ ಒಂತೆ ಪೊರ್ತು ಇಲ್ಲನೇ ತೂವೋಂದು ಉಂತ್ಯೆ.  ಎಂಕಮ್ಮ ಮೆಲ್ಲ ಮೆಲ್ಲ ಕಾರ್‍ ಒಯ್ತೋಂದು ಬತ್ತಲ್.  ಅಯ್ಯನ ಮಂಡೇಂದ್ ಪಂಡ್‌ದ್ ಜಾಲ್‌ಡೇ ಕಾರ್‍ ನೀರ್ದ್ ಕುಲ್ಯಲ್.  ಪೊತ್ತುದು ಪೋಯಿನ ಇಲ್ಲದ ಉಲಯಿ ದೂಮಣ್ಣೆ ಮೆಲ್ಲ ಕಾರ್‌ದೀಯೆ.  ಚಿನ್ನಪ್ಪ್ ಪಟೋತ್ತ ನೆಂಪಾಂಡ್.  ದೇವೆರೆನ ಪಟೋ ಆಯಿನೆಡ್ದಾದ್ ಅವು ಪೊತ್ತುಂದಿಪ್ಪಾಂದ್‌ದ್ ಅಮ್ಮನ ಬೆರಿಯೇ ಪೋಯೆ.  ಎಂಕಮ್ಮ "ಜಾಗ್ರತೆ ಮಗ ಗೆಂಡೊ ದೊಂಕಡಾ" ಪಂಡಲ್.

ಚಿನ್ನಪ್ಪೆ ಜಾಗ್ರತೆಡ್ ಒಂಜೊಂಜೇ ಪಜ್ಜೆದೆರ್ತ್ ದೀವೊಂದು ಉಲಯಿಪೋಯೆ.  ಪಟೊ ನೇಲಾಯಿನಲ್ಪ ಆಣಿಲು ಆಂಚನೇ ಒರಿಇತ್ತೊ.  ತಿರ್ತ್ ಬೊಣ್ಯೋದ ರಾಸಿಡ್ ಅಲ್ಲಲ್ಲ್ ಪುಡಾದ್ ರಟ್ಟಿನ ಕನ್ನಡಿತ ಚೂರುಲು ಇತ್ತೊ.  ನನ ಈ ಇಲ್ಲಾಡೆಗ್ ಪಟೋ ಕೊನರ್‍ಯೆರ ಇಜ್ಜಿ.  ನನ ಪಟೊಡ್ದು ಇಬೂತಿ ಬೂರ್‍ಯೆರಲಾ ಇಜ್ಜಿಂದ್‌ದ್ ಎನ್ನಿನ ಚಿನ್ನಪ್ಪಗ್ ಬುಲ್ಪೆರ ಬತ್ತ್‌ಂಡ್.

ಮಾಡ್ ಇಜ್ಜಂದಿ ಇಲ್ಲದುಲಯಿ ಕಾರೊದ ಕೊಂಬು ಬೂರೊಂದಿತ್ತ್‌ಂಡ್.  ಸೂ ಇಡೀ ಇಲ್ಲನೆ ಪೊತ್ತಾಂಡಲು ಗೋಡೆತ ಒಂಜಿ ಬಿದ್ದಿರ್‍ದ ಅಡ್ಡೊ ಪೂರ ಪೊತ್ತಾಂತೆ ಇತ್ತ್ಂಡ್.  ನೀರ್‍ ಚೇತಿನೆಡ್ತಾತ್ ಅವು ಕರಂಟ್‌ದ್ ಪೋಂಡಲಾ ಅಯ್ತ ಉಲಯಿಡ್ತ್ ಒಂತೆ ಪುಗೆ ಬರೋಂದೇ ಇತ್ತ್‌ಂಡ್.  ಚಿನ್ನಪ್ಪೆ ಅಯ್ನೇ ತುಯೆರ ಸುರುಮಲ್ತೆ.  ಅಂದ್, ಕರೆಂಟಿನ ಅಡ್ಡೊದ ಬಾಗೊಡ್ದು ಒಂತೊಂತೆನೇ ಒಂತೊಂತೆನೇ ಬೊಣ್ಯೊ ಬೂರೊಂದಿತ್‌ಂಡ್!

                         *****

ಕೀಲಿಕರಣ: ಕಿಶೋರ್‍ ಚಂದ್ರ

ತುಳು ಗಾದೆಗಳು


೧      :    ಆಟಿಡ್ದ್ ಬೊಕ್ಕ ಅರೆಗಾಲ; ಮಾಯಿಡ್‌ದ್ ಬೊಕ್ಕ ಮಾರಿಯಾಲ   
೨      :    ಅಪ್ಪ ತಿಂದ್oಡ ಯಾವಂದೋ ?  ಗುರಿ ಲೆಕ್ಕ ಮಲ್ಪೋಡಾ ?   
೩      :    ಅರಿ ಇತ್ತ್oಡ  ಪುರಿ ಉಂಡು.   
೪      :    ಅರಿ ತಿನ್ಪಿನಾಯೆ ಪೊಯೆಡ. ಬಾರ್ ತಿನ್ಪಿನಾಯೆ ಬರ್ಪೆ.   
೫      :    ಅಳೆಕ್ ಪುಳಿ ಬೋಡೇ?   
೬      :    ಆನೆ ಸಯ್ತ್ಂಡಲ ಸಾರೊ ವರಣ್ ಬೆಲೆ ಉಂಡುಗೆ   
೭      :    ಆನೆನ್ ದೇರ್ಪರೆ ಆನೆನೆ ಆವೊಡು   
೮      :    ಇಲ್ಲ್ ನಾಲಾಂಡ ನಟ್ಟುನಾಯೆಗ್  ಎಡ್ಡೆ ಆಂಡ್.   
೯      :    ಕಂಚಾಲ್ ಇತ್ತಂದ ಎನ್ಚಲಾ ಉಣೋಲಿ   
೧೦     :    ಕುರೀದಿನ ಕುಂಬುಡೊಗ್ ತೆಟ್ ಪೋತಿ  ತಾರಾಯಿ.   
೧೧     :    ತುಳುವೆರೆ ಮನಸ್  ತುಳುವೆ ಪೆಲಕಾಯಿದಂಚ.   
೧೨     :    ತೂನಗ ದಿನ್ನೊ ; ಪಾತೆರ್ನ ಬೊಜ್ಞ   
೧೩     :    ಪೆಲಕಾಯಿದ ಮೈ ಮುಳ್ಳುಂದು ಕಂಚೋಲು ಪಂತುಂದುಗೆ   
೧೪     :    ಮತ್ತ್ ಮೀರ್ಂಡ ಮರ್ಳೆರ ಲೆಕ್ಕೊ   
೧೫     :    ಮನಸ್  ಮಲ್ಲೆ  ಕೈ  ಕುದ್ಯ.   
೧೬     :    ಮರತ್ತ ಪುರಿ ಮರನೇ  ತಿನ್ಪುoಡು.   
೧೭     :    ಮರ್ಮಲೆಗ್ ಬುದ್ಧಿ ಪಂಡ್‌ದ್ ಮಾಮಿಗ್ ಬಂಜಿ ಬೈದ್ಂಡ್‌ಗೆ   
೧೮     :    ಮೂಂಕುದಾಂತಿನಾಲೆಗ್ ಮೂಂಕುತ್ತಿ ದಾಯೆ ಮಾದಿರ?   

ಸೇದಿದಿಯಾ ಬತ್ತಿ ನೀ ಸೇದಿದಿಯಾ

-ಶಿಶುನಾಳ ಶರೀಫ್

ಸೇದಿದಿಯಾ ಬತ್ತಿ ನೀ ಸೇದಿದಿಯಾ                 ||ಪ||

ಸೇದಿ ಬತ್ತಿಯ ಹೊಗಿ
ಊದಿ ಊರ್ಧ್ವಕೆ ನಿಂತು
ನಾದ ಬ್ರಹ್ಮದ ಗರುಪಾದವ ಭಜಿಸಿ            ||೧||

ವಿಷಯವನೆಲ್ಲವ ಬಿಟ್ಟು
ವ್ಯಸನಕಗ್ನಿಯ ಕೊಟ್ಟು
ಹಸನಾದ ಹಸರು ತಂಬಾಕದ ಬತ್ತಿಯ          ||೨||

ಸಧ್ಯಕ್ಕೆ ಶಿಶುನಾಳ
ಸದ್ಗುರು ದಯದಿಂದ
ಬುದ್ಧಿತಿಳಿದು ದಿವ್ಯ ಸಿದ್ಧಜ್ಞಾನದ ಬತ್ತಿ    ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಹದಿನಾಲ್ಕು ವರ್ಷಗಳ ನಂತರ

-ರವಿ ಕೋಟಾರಗಸ್ತಿ

ಹದಿನಾಲ್ಕು ವರುಷಗಳ ಮೇಲೆ
ಸವಿನೆನಪುಗಳ ಬುತ್ತಿಯಲಿ
ಏನೇನೊ ಹಲವು ಕನಸನೆ ಹೊತ್ತು
ಮಣ್ಣ ವಾಸನೆ ಅರಸುತ ಹಳ್ಳಿಗೆ ನಡೆದೆ

ಕರಿಮಣ್ಣಿನ ಏರೆಹೊಲದ ದಿಬ್ಬದಿ
ನನ್ನೂರು ಕಾಣುವ ತವಕದಿ
ಹೆಜ್ಜೆಯ ಮೇಲೆ ಹೆಜ್ಜೆಯಿಡುತ ಇಳಿದಾಗ
ಜುಳು... ಜುಳು... ಹರಿಯುತಿಹಳು
ಕಷ್ಣೆಯುದರದೊಳಗಿನ `ಡೋಣಿ'

ಹದಿನಾಲ್ಕು ವರ್ಷಗಳ ಹಿಂದೆ
ಹೇಗಿತ್ತು ಹಾಗೆ ಇಂದಿಗು ಎಲ್ಲೆಲ್ಲೂ
ಪರಿಚಯದ ಮರುಛಾಯೆ
ಕಣ್ಮುಂದೆ ತುಂಬಿ ಮರುಕಳಿಸಿತ್ತು
ಮನದಿ ಇಲ್ಲುಂಡ ಸುಖವೆಲ್ಲ
ಬಾಲ್ಯದ ಬನವ ತವಕದಲಿ
ಹೊಕ್ಕಾಗ ಎಲ್ಲೆಡೆಗೂ ಹದಿನಾಲ್ಕು ವರ್ಷಗಳ
ಮುದುಡಿದ ಮುದಿ ನೆರಳು ಕವಿದಿತ್ತು

ವರುಣ ದುಬಾರಿಯಾಗಿದ್ದು...
ಎಲ್ಲೆಡೆ ಬಣ... ಬಣ
ನೆಲ ಜಲ - ಮನಗಳು
ನಿಂತ ಮರವಾಗಿದ್ದವು ಒಣಗಿ...

ಹೊಟ್ಟೆಪಾಡಿಗಾಗಿ ಗುಳೆ ಎದ್ದು ಹೋಗಿದ್ದ
ನನ್ನೂರಿನ ಅಣ್ಣ-ತಮ್ಮಂದಿರು
ಅಕ್ಕ-ತಂಗಿಯರು ಕಾಣದ
ಓಣೆಲ್ಲಾ ಮೌನ ಆವರಿಸಿತ್ತು

ಓಡಾಡಿ... ಆಡಿದ
ಬೆಚ್ಚಗಿನ ಮನೆಗಳೆಲ್ಲಾ ನೆಲಕೆ
ಕುಸಿದ ಮಣ್ಣಿನ ಗುಡ್ಡೆಗಳೆಲ್ಲ
ಹುಗಿದಿಟ್ಟುಕೊಂಡ ಬಾಲ್ಯದ ನೆನಪುಗಳೆಲ್ಲಾ
ಬಿದ್ದಿದ್ದವು ಮಾಸಿ ತಬ್ಬಲಿಯಾಗಿ

ಅಂದು ಗಿಜಿ-ಗಿಜಿ ತುಂಬಿದ
ಭೇದವೆಣಿಸದ ಮನಗಳು ಓಣಿಗಳು
ನಿರ್ಜೀವ ಸವೆತದ ಮುದುಡಿದ
ಆ ಹಿರಿಜೀವಗಳ ಅಸಹಾಯಕತೆ ಕಾಣುತ

ಕಣ್ಮುಂದೆ ಕಟ್ಟುತಲಿ
ಜೀವ ಮರಮರನೆ ಬಳಲಿತು
ಅವ್ವ-ಅಪ್ಪ- ಹೋದ
ಅಜ್ಜ-ಮುತ್ತಜ್ಜರು ಹೋದ
ಮನೆ-ಮನ-ಬರಿದಾಗಿತ್ತು

ಆ ಹಿರಿಜೀವಗಳ ಸ್ಪರ್ಶದ
ಪ್ರೀತಿ ಉಂಡ ಬಾಲ್ಯವು
ಅವರೊಡನೆ ಈ ಲೋಕವು ಹೋಯ್ತು
ಎಲ್ಲೋ ಮಣ್ಣಲ್ಲಡಗಿದ....
ಈ ಜಗದ ರೀತಿ ನೀತಿಯಿದು

ಹಸಿ ಗಾಯದಿ ಬಸಿವ
ನೆತ್ತರ ತೆರಹದಿ
ಬರಿಯ ವ್ಯಥೆಯೇ ಜೀವ ತುಂಬಿರಲು

ಸುಡು ಬಿಸಿಲಿನ ನಡು ಹಗಲು
ಮುಸ್ಸಂಜೆ ಕವಿದಿತ್ತು...
ಮನಕ್ಕೆಲ್ಲ ತಂಪು ಎರೆದಿತ್ತು
ಅಂದು ಇಂದಿನ ನಡುವೆ ತಿರುಗಿತ್ತು
ಹದಿನಾಲ್ಕು ವರ್ಷಗಳ
ಕಠೋರ ನಿಷ್ಕರುಣ ಕಾಲಚಕ್ರ

         *****

ಕೀಲಿಕರಣ: ಕಿಶೋರ್‍ ಚಂದ್ರ

ಬಾ ಬಾ ಸಿರಿಯೆ

- ಡಾ || ರಾಜಪ್ಪ ದಳವಾಯಿ

ಬಾ ಬಾ ಸಿರಿಯೆ ಈ ಅಂತರ ಸರಿಯೆ
ಬದುಕಿಗೆ ಬಣ್ಣದ ಲಾಸ್ಯವ ಸುರಿಯೆ

ದುಂಬಿಯ ಝೇಂಕಾರದ ಮೋಹಕತೆ
ಭ್ರಮಿಸಲು ನಿಂತರಳಿದೆ ಪುಷ್ಪಲತೆ

ಎಲ್ಲಿಯೆ ನೋಡಲಿ ಕಣ್‌ಮನ ತಂಪು
ಕುಹು ಕೋಗಿಲೆಯೆ ಸುರಿ ನೀರಿನಿಂಪು

ಗಿರಿಕಂದರಗಳ ಭೂರಮೆ ತೊಡುಗೆ
ಬೀಸುವ ತಂಗಾಳಿಯ ಬಳುಕು ನಡಿಗೆ

ಎತ್ತರ ಎತ್ತರ ಚಿತ್ತಾರ ಉತ್ತರ
ವಿಸ್ಮಯ ಹೊಮ್ಮಿದೆ ಆಹ! ನಿರಂತರ

        *****

ಕೀಲಿಕರಣ: ಕಿಶೋರ್‍ ಚಂದ್ರ

ಉತ್ತಮ ಸೆಳಕಿನಿಂದ ಆರಂಭವಾಗುವ ಜನ

- ಮಂಜುನಾಥ ವಿ ಎಂ

ಸಂಜೆ ಐದರ ನಂತರದ ರೈಲುಗಾಡಿ ಬಂದು ನಿಂತಿದೆ.
ಇನ್ನೇನು ಹೊರಡುತ್ತದೆ;
ಬೋಗಿಗಳು ಅದಲು ಬದಲಾಗಬೇಕಷ್ಟೇ.

ಸೆಪ್ಟೆಂಬರ್‍ ತಿಂಗಳ ಮಳೆಗಾಲದ ನಡುಮಧ್ಯಾಹ್ನ
ಅವರೆಲ್ಲರೂ ಬಂದು ನೆಲೆ ನಿಂತರು.

ಆ ಮರಗಿಡಗಳು ಬೆಳೆಯುತ್ತಲೇ ಇವೆ.
ಕೆಲವರು ನಗಲು ಪ್ರಾರಂಭಿಸಿದ್ದಾರೆ ಎನ್ನುವ ಸುದ್ದಿ.

ಅಳುವುದರ ಸತ್ಯಾಸತ್ಯತೆ ಅವರ ನರನಾಡಿಗಳಲ್ಲಿ
ಪ್ರವಹಿಸುತ್ತಿದೆ.

ಇನ್ನೇನು ಎದ್ದು, ಎಲ್ಲವನ್ನೂ ಹೇಳಿಬಿಡಬೇಕೆಂಬ
ಕಾತರದ ಹುಡುಗನ ಕಣ್ಣುಗಳಲ್ಲಿ-
ಸೀಗಡಿ, ಕರಿಮೀನು ಉರಿಯುವ ಆ ಮೂಲೆಯ
ರೋಗಗ್ರಸ್ತ ಕುಟುಂಬ-
ಅವಳ ಪ್ರೇಮದ ಲೆಕ್ಕಾಚಾರವನ್ನು ಗುಣಿಸಿ ಹಾಕುತ್ತಿರುತ್ತದೆ
           *****

ಡೊಂಕು ಬಾಲದ ನಾಯಕರೆ

- ವೀಣಾ ಮಡಪ್ಪಾಡಿ

ಮೂರ್ತಿಯು ಸಂಜೆ ಕಛೇರಿ ಮುಗಿಸಿ ಮನೆಗೆ ವಾಪಾಸಾಗುವಾಗ ದಾರಿಯಲ್ಲಿ ಆ ನಾಯಿಮರಿಯನ್ನು ಕಂಡನು.  ಅದು ಹಸಿವು ಬಾಯಾರಿಕೆಗಳಿಂದ ಕಂಗೆಟ್ಟು ಸರಿ ಒಡಾಡಲೂ ಆಗದೆ ದೈನಾವಸ್ಥೆಯಲ್ಲಿ  ಜೋಲು ಮೋರೆ ಹಾಕಿ ಕೂತಿತ್ತು.  ಇನ್ನೇನು ಯಾವುದಾದರೂ ಕಾರು, ಆಟೋ, ಬಸ್ಸಿನ ಅಡಿ ಬಿದ್ದು ಅಪ್ಪಚ್ಚಿಯಾಗುವುದರಲ್ಲಿತ್ತು.  ಅದರ ಎರಡು ಉದ್ದನೆ ಕಿವಿ, ಕಪ್ಪು ಬಿಳಿ ಬಣ್ಣ, ಹಣೆಯಲ್ಲೊಂದು ಬಿಳಿ ಮಚ್ಚೆ, ಅದನ್ನು ಅತ್ಯಂತ ಆಕರ್ಷಕವನ್ನಾಗಿಸಿತ್ತು.  ಅವನ ಗಮನ ಸೆಳೆದದ್ದು ಅದರ ಮುದ್ದಾದ ಮೈಬಣ್ಣ.

ಅವನ ಪುಟಾಣಿ ಮಗಳು ಮನೆಗೊಂದು ನಾಯಿಮರಿ ಬೇಕೆಂದು ಅವನನ್ನು ಪೀಡಿಸುತ್ತಿದ್ದಳು.  ಅಣ್ಣ ಶಾಲೆಗೆ ಹೋದ ಮೇಲೆ ಮನೆಯಲ್ಲಿ ಅವಳಿಗೆ ತುಂಬಾ ಬೋರಾಗುತ್ತಿತ್ತು.  ನಾಯಿ ಬೇಕೆಂದು ಅದೆಷ್ಟು ಸಲ ಅಂಗಲಾಚಿದ್ದಳೋ.  ಅವಳಿಗೆ ನಾಯಿಮರಿ ಪದ್ಯವೆಂದರೆ ಪ್ರೀತಿ.  ಅವಳ ಆಸೆ ಅತಿಯಾದಾಗ ಅವಳಪ್ಪ ನಾಯಿಮರಿಗಳ ಎರಡು ಗೊಂಬೆ ತಂದುಕೊಟ್ಟಿದ್ದ.  "ಇದಲ್ಲಾ... ನನಗೆ ನಿಜವಾದ ನಾಯಿಮರಿಯೇ ಬೇಕು" ಎಂದು ಚಂಡಿ ಹಿಡಿದ ಅವಳನ್ನು ಸಮಾಧಾನಿಸಲು ಅವಳಪ್ಪ ಅಮ್ಮನಿಗೆ ಸಾಕಾಗಿ ಹೋಯ್ತು.

ಈಗ ಪುಟಾಣಿ ನಾಯಿ ಮರಿಯೊಂದು ಕಣ್ಣಿಗೆ ಬಿದ್ದಾಗ ನಾಯಿಮರಿಗಾಗಿ ಚಂಡಿ ಹಿಡಿಯುವ ಮಗಳ ಮುಖ ಮೂರ್ತಿಯ ಕಣ್ಣಿಗೆ ಕಟ್ಟಿದಂತಾಯಿತು.  ಅವನಿಗೆ ಖಚಿತವಾಗಿ ಗೊತ್ತಿತ್ತು ಅದೊಂದು ಹೆಣ್ಣು ಮರಿಯೆಂದು.  ಹೆಣ್ಣು ಮರಿಗಳನ್ನು ಯಾರೂ ಸಾಕುವುದಿಲ್ಲ.  ಅವನ್ನು ಎಲ್ಲೆಲ್ಲೋ ಬಿಟ್ಟು ಬಿಡುತ್ತಾರೆ.  ಅವು ಹೊಟ್ಟೆಗಿಲ್ಲದೆ ಅರಚಿ ಯಾವುದೋ ವಾನಗಳ ಕೆಳಗೆ ಬಿದ್ದು ಅಪ್ಪಚ್ಚಿಯಾಗುತ್ತವೆ.  ಅಥವಾ ದೊಡ್ಡ ಗಂಡು ಬೀದಿ ನಾಯಿಗಳು ಅವುಗಳನ್ನು ಕೊಂದು ಹಾಕಿ ಬಿಡುತ್ತವೆ.  ಅವನಿಗೆ ಮನುಷ್ಯರ ವರ್ತನೆಯೇ ವಿಚಿತ್ರವೆನಿಸಿತು.  ಎಲ್ಲಾ ಮನುಷ್ಯರು ಹೇಂಟೆ ಇರಲಿ ಎಂದು ಬಯಸುತ್ತಾರೆ.  ಮೊಟ್ಟೆ ಸಿಗತ್ತದಲ್ಲಾ!  ಆಕಳು ಮರಿ ಬರಲೆಂದು ಹಾರೈಸುತ್ತಾರೆ.  ಹಾಲು ಕೊಡುತ್ತದಲ್ಲಾ?  ಹೆಣ್ಣು ನಾಯಿಮರಿ ಯಾರಿಗೂ ಬೇಡ.  ಅವನ್ನು ಹೇಗೋ ನಿವಾರಿಸಿಕೊಳ್ಳುತ್ತಾರೆ.  ಪಾಪ ಶ್ರಾವಣದಲ್ಲಿ ಗಂಡು ನಾಯಿಗಳ ಪಾಡು ಯಾರಿಗೂ ಬೇಡ.

ಮೂರ್ತಿ ನಾಯಿ ಮರಿಯೊಂದನ್ನು ತರುವ ಬಗ್ಗೆ ಹೆಂಡತಿಯೊಡನೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದನು.  ಅವಳು "ಪಮೇರಿಯನ್ ಆದರೆ ತನ್ನಿ.  ಅಥವಾ ಆಲ್‌ಶೇಷಿಯನ್.  ಅದಿಲ್ಲದಿದ್ದರೆ ಮುದೋಳದ ಬೇಟೆನಾಯಿಯೂ ಆದೀತು.  ಕಂತ್ರಿ ನಾಯಿ ಬೇಡವೇ ಬೇಡ"  ಎಂದಿದ್ದಳು.  ಅವಳು ಹೇಳಿದಂತಹ ನಾಯಿಮರಿಗಳನ್ನು ತಂದು ಸಾಕಲು ತನ್ನ ಸಂಬಳ ಸಾಲದೆನ್ನುವುದು ಅವನಿಗೆ ಖಚಿತವಾಗಿ ಗೊತ್ತಿತ್ತು.  ಒಂದು ಪಮೇರಿಯನ್ ಅಥವಾ ಆಲ್‌ಶೇಷಿಯನ್ ಸಾಕುವ ಖರ್ಚಲ್ಲಿ ಇಬ್ರು ಮನುಷ್ಯರನ್ನು ಧಾರಾಳ ಸಾಕಬಹುದು ಎಂದು ಅವನು ಹೆಂಡತಿಯೊಡನೆ ಹೇಳಿದ್ದ.  ನಾಯಿಮರಿ ಸಾಕುವ ಆಲೋಚನೆಯನ್ನೇ ಕೈಬಿಟ್ಟಿದ್ದ.

ಆದರೆ, ಈಗ ಈ ಕಪ್ಪು ಬಿಳಿ ಹೆಣ್ಣು ಮರಿಯನ್ನು ಕಾಣುವಾಗ ಅವನ ಹೃದಯ ಬಾಯಿಗೆ ಬಂದಂತಾಯಿತು.  ಪಾಪ!  ಎಷ್ಟು ಮುದ್ದಾಗಿದೆ.  ಈ ಮಾನವ ಎಷ್ಟು ನಿಷ್ಕರುಣಿ.  ಹೆಣ್ಣಿಗಾಗಿ ಹಂಬಲಿಸುತ್ತಾನೆ.  ಅವಳಿಗಾಗಿ ಸಮಯ, ಹಣ ವ್ಯಯಿಸುತ್ತಾನೆ.  ಹೆಣ್ಣನ್ನು ಸ್ಪೂರ್ತಿ ಅಂದುಕೊಳ್ಳುತ್ತಾನೆ.  ಆದರೆ ಹೆಣ್ಣು ನಾಯಿಮರಿಯನ್ನು ಬೀದಿಗೆ ಬಿಡುತ್ತಾನೆ.  ಅವನದೇ ಸ್ವಂತ ಮಗು ಹೆಣ್ಣಾದರೆ ಅದನ್ನು ಬೀದಿಪಾಲು ಮಾಡುತ್ತಾನೆಯೆ?  ಇಂಥವರನ್ನು ಪಾಪ ಪ್ರಜ್ಞೆ ಏಕೆ ಕಾಡುವುದಿಲ್ಲ?

ಮೂರ್ತಿ ನಾಯಿಮರಿಯತ್ತ ಧಾವಿಸಿದ.  ಅದನ್ನು ಬಾಚಿ ಎತ್ತಿಕೊಂಡ.  ಅದು ನಡುಗುತ್ತಾ ಮುಲುಗುಟ್ಟಿತು.  ಯಾವಾಗಲೂ ಸಿಟಿಬಸ್ಸಿಗೆ ಕಾಯುವ ಮೂರ್ತಿ ಅಂದು ಆಟೋವೊಂದನ್ನು ನಿಲ್ಲಿಸಿ ನಾಯಿಮರಿಯೊಡನೆ ಅದರೊಳಗೆ ನುಗ್ಗಿದ.  ದಾರಿಯಲ್ಲಿ ಬೇಕರಿಯೊಂದರಿಂದ ಬ್ರೆಡ್ಡು, ರಸ್ಕು ಮತ್ತು ನಂದಿನಿ ಮಿಲ್ಕ್ ಪಾರ್ಲರಿನಿಂದ ಹಾಲು ತೆಗೆದುಕೊಂಡು ಬಂದ.

ಬೇಗ ಬಂದ ಗಂಡನ ಕೈಯಲ್ಲಿನ ಹೆಣ್ಣು ನಾಯಿಮರಿಯನ್ನು ನೋಡಿ ಅವನ ಹೆಂಡತಿಯ ಮುಖ ದಪ್ಪಗಾಯಿತು.  "ಈ ದರಿದ್ರದ್ದನ್ನು ಯಾಕೆ ತಂದ್ರಿ?  ಕಂತ್ರಿ ಹೆಣ್ಣು ನಾಯಿಮರಿಯನ್ನು?" ಎಂದು ಗಂಡನನ್ನು ಗದರಿಕೊಂಡಳು.  "ಬಿಡೇ, ಪಾಪ ಸಾಯೋದ್ರಲ್ಲಿತ್ತು.  ನಮ್ಮ ಪಾಪು ನಾಯಿಮರಿಗೆ ಅಲವತ್ತು ಕೊಳ್ಳುತ್ತಿತ್ತಲ್ಲಾ?  ಹಾಗೆ ತಂದು ಬಿಟ್ಟೆ" ಎಂದ.  ಮಗಳಿಗೆ ನಾಯಿಮರಿಯನ್ನು ನೋಡಿ ತುಂಬಾ ಖುಷಿಯಾಯಿತು.  ಅದು ಹಾಲು ಕುಡಿಯುವುದನ್ನು, ಬ್ರೆಡ್ಡು ತಿನ್ನುವುದನ್ನು ನೋಡಿ ಕೈ ತಟ್ಟಿ ಕುಣಿದಳು.  ಮೂರ್ತಿ ಅದಕ್ಕೆ ಶಾಂಪೂ ಹಾಕಿ ಬೆಚ್ಚನೆಯ ನೀರಲ್ಲಿ ಸ್ನಾನ ಮಾಡಿಸಿ ಹಳೆಯ ಟವಲೊಂದರಲ್ಲಿ ಮೈ ಉಜ್ಜಿದ.  ಅದು ಅವನ ಮಗಳೊಡನೆ ಮಲಗಿ ಹಾಯಾಗಿ ನಿದ್ದೆ ಮಾಡಿತು.

ಮರುದಿನ ಬೆಳಿಗ್ಗೆ ಮೂರ್ತಿ ಏಳುವ ಮೊದಲು ಅವನ ಹೆಂಡತಿ ಸುಪ್ರಭಾತ ಆರಂಭಿಸಿದಳು.  "ಹಾಳಾದ ನಾಯಿ, ಎಲ್ಲೆಂದರಲ್ಲಿ ಇಸ್ಸಿ ಹೊಯ್ದಿದೆ.  ಎರಡು ಕಡೆ ಕಕ್ಕ ಮಾಡಿದೆ.  ನಾನು ನೋಡದೆ ತುಳಿದುಬಿಟ್ಟೆ.  ಛೀ!  ಅಸಹ್ಯ.  ಸುಮ್ಮನೆ ಆ ನಾಯಿಮರಿಯನ್ನು ಎಲ್ಲಾದರೂ ಬಿಟ್ಟು ಬನ್ನಿ."

ಗಡಬಡಿಸಿ ನಿದ್ದೆಯಿಂದೆದ್ದ ಮೂರ್ತಿಗೆ ವಸ್ತುಸ್ಥಿತಿ ಏನೆಂದು ತಿಳಿಯಲು ಸ್ವಲ್ಪ ಹೊತ್ತು ಹಿಡಿಯಿತು.  ಅವನು ನಾಯಿಮರಿಯನ್ನು ನೋಡಿದ.  ಅದು ಮಗಳೊಟ್ಟಿಗೆ ಮಲಗಿ ಕೊಂಡಿದೆ.  "ಏನೇ ನಿನ್ನದು ಪಿರಿಪಿರಿ?  ಆ ನಾಯಿಮರಿಗೆ ಎಷ್ಟು ಬುದ್ಧಿ ಇದೆ ನೋಡು.  ಅದು ಹಾಸಿಗೆಯಲ್ಲಿ ಇಸ್ಸಿ, ಕಕ್ಕ ಮಾಡಿಲ್ಲ.  ನಿನ್ನ ಮಗಳು ಹಾಸಿಗೆಯಲ್ಲೇ ಮಾಡ್ತಿದ್ಲಲ್ಲಾ?  ಆಗ ಹೇಗೆ ಸಹಿಸಿಕೊಂಡಿ?  ಇನ್ನು ಮುಂದೆ ರಾತ್ರೆ ಮತ್ತು ಬೆಳಿಗ್ಗೆ ನಾನದನ್ನು ಹೊರಗೆ ಕರಕೊಂಡು ಹೋಗ್ತೇನೆ.  ಮಧ್ಯಾಹ್ನ ಮಗಳು ಹೊರಗೆ ಕರಕೊಂಡು ಹೋಗಿ ಇಸ್ಸಿ ಮತ್ತು ಕಕ್ಕ ಮಾಡಿಸಲಿ."

ಮೂರ್ತಿಯ ಮಾತು ನಿಜವಾಯಿತು.  ಹಾಗೆ ರಾತ್ರೆ ಮತ್ತು ಬೆಳಿಗ್ಗೆ ಅವನು, ಮಧ್ಯಾಹ್ನ ಅವನ ಮಗಳು ನಾಯಿ ಮರಿಯನ್ನು ಇಸ್ಸಿ ಮತ್ತು ಕಕ್ಕಕ್ಕೆ ಮನೆಯಿಂದ ಹೊರಗೆ ಕರಕೊಂಡು ಹೋಗಲು ತೊಡಗಿದ ಮೇಲೆ ಅದು ಮನೆಯೊಳಗೆ ಗಲೀಜು ಮಾಡಲೆ ಇಲ್ಲ.  ಈಗೀಗ ಮೂರ್ತಿಯ ಹೆಂಡತಿಗೂ ನಾಯಿಮರಿ ಇಷ್ಟವಾಗತೊಡಗಿತು.  ಅದಕ್ಕೆ ಜ್ಯೋತಿ ಎಂದು ಅವಳೇ ಹೆಸರಿಟ್ಟು ಬಿಟ್ಟಳು.  ಮೂರ್ತಿಗೂ ಆ ಹೆಸರು ಪ್ರಿಯವಾಯಿತು.

ನಾಯಿಮರಿ ಈಗ ಬಲಿತು ಹೆಣ್ಣು ನಾಯಿಯಾಯಿತು.  ಆ ವರ್ಷದ ಶ್ರಾವಣ ಬಂದಾಗ ಮೂರ್ತಿಯ ಮನೆಯೆದುರು ಗಂಡುನಾಯಿಗಳು ಜಮಾವಣೆಯಾಗಿ ತೃತೀಯ ಮಹಾಯುದ್ಧ ಆರಂಭಿಸಿದವು.  ಅವುಗಳ ಚಿತ್ರವಿಚಿತ್ರ ಆರ್ತನಾದ, ಬೊಗಳುವಿಕೆ, ವಿಶಿಷ್ಟ ನಾದದ ಸ್ವರಗಳು ಮೂರ್ತಿಯ ಮನೆಯವರ ನಿದ್ದೆಕೆಡಿಸತೊಡಗಿದವು.  ಜ್ಯೋತಿಯನ್ನು ಹೊರಗಡೆ ಇಸ್ಸಿ ಮತ್ತು ಕಕ್ಕಕ್ಕೆ ಕರಕೊಂಡು ಹೇದಾಗಲೆಲ್ಲಾ ಗಂಡುನಾಯಿಗಳು ಮೂರ್ತಿಯನ್ನು ಕ್ಯಾರೇ ಮಾಡದೆ ಜ್ಯೋತಿಯನ್ನು ಹಿಂಬಾಲಿಸಿ ಬಿಡುತ್ತಿದ್ದವು.  ಮೂರ್ತಿ ಕಲ್ಲೆತ್ತಲೆಂದು ಬಾಗಿದರೆ ಅವನನ್ನೆ ಗುರ್‍ರೆಂದು ಹೆದರಿಸತೊಡಗಿದವು.  ಜ್ಯೋತಿಯೂ ಸರಪಣಿ ಬಿಚ್ಚಿ ಅವುಗಳೊಡನೆ ಹೋಗಲು ಹೆಣಗಾಡ ತೊಡಗಿತು.  ಅದು ಹೇಗೋ ಮೂರ್ತಿ ಅದನ್ನು ಸಂಭಾಳಿಸಿ ಮನೆಗೆ ಕರಕೊಂಡು ಬಂದ.  ಅವ ಬಾಗಿಲು ತೆಗೆದು ಒಳ ನುಗ್ಗುವಾಗ ಗಂಡುನಾಯಿಗಳ ಒಂದು ಹಿಂಡೇ ಅವನ ಹಿಂದೆ ನುಗ್ಗಿ ಬಿಟ್ಟಿತು.  ಅವುಗಳನ್ನು ನೋಡಿ ಅವನ ಹೆಂಡತಿ, ಮಗ, ಮಗಳು ಏನು ಮಾಡುವುದೆಂದು ದಿಗ್ಬ್ರಾಂತರಾಗಿ ನಿಂತು ಬಿಟ್ಟರು.  ಕೊನೆಗೆ ಮೂರ್ತಿ ಜ್ಯೋತಿಯನ್ನು ಮಂಚದ ಕಾಲಿಗೆ ಕಟ್ಟಿ ಹಾಕಿ ಮೂಲೆಯಲ್ಲಿದ್ದ ಸರಳೊಂದರಿಂದ ಒಂದು ನಾಯಿಗೆ ಬಡಿದ.  ಅದು ಕಿರ್‍ರೋ ಮರ್‍ರೋ ಎಂದು ಹೊರಗೆ ಓಡಿತು.  ಈಗ ಮೂರ್ತಿಯ ಹೆಂಡತಿಗೆ ಧೈರ್ಯ ಬಂದು ಕಸಬರಿಕೆ ತಂದು ನಾಯಿಯೊಂದರ ಮುಖ ಮೂತಿ ನೋಡದೆ ಚಚ್ಚಿದಳು.  ಮಗ ಕ್ರಿಕೆಟ್ಟು ಬ್ಯಾಟು ತಂದು ಎರಡು ನಾಯಿಗಳಿಗೆ ಬೌಂಡರಿ ಬಾರಿಸಿದ.  ಹಾಗೂ ಹೀಗೂ ನಾಯಿಗಳೆಲ್ಲಾ ಒಡಿ ಹೋದ ಮೇಲೆ ಮೂರ್ತಿ ಉಸ್ಸಪ್ಪಾ ಎಂದು ಉಸಿರುಬಿಟ್ಟ.

ಅಂದು ಅವನಿಗೆ ಕಛೇರಿಯಲ್ಲಿ ಮನಸ್ಸಿಟ್ಟು ಕೆಲಸ ಮಾಡಲಾಗಿಲಿಲ್ಲ.  ನಾಯಿಗಳು ಇನ್ನು ಏನೇನು ಮಾಡಿ ಹಾಕುತ್ತವೋ ಎಂಬ ಗಾಬರಿಯಲ್ಲಿ ದಿನ ಕಳೆಯಿತು.  ಯಾರಿಗಾದರೂ ಈ ಬೀದಿನಾಯಿಗಳು ಕಚ್ಚಿ ಬಿಟ್ಟರೇನು ಗತಿ?  ಮತ್ತೆ ಹೊಕ್ಕುಳ ಸುತ್ತ ೧೩ ಇಂಜೆಕ್ಷನ್ನು ತೆಗೆದುಕೊಳ್ಳಬೇಕಲ್ಲಪ್ಪಾ.  ದೇವ್ರೇ ಎಂದು ಚಿಂತಾಕ್ರಾಂತನಾದ.  ಹಾಗೂ ಹೀಗೂ, ಹೇಗೋ ಮನೆಗೆ ಬಂದು ತಲುಪಿದ.

ಮನೆಯ ಹೊರಗೆ ಒಂದೇ ಒಂದು ನಾಯಿ ಅವನಿಗೆ ಕಾಣಸಿಗಲಿಲ್ಲ.  ಯಾವ ದೇವರು ಅದೇನು ಪವಾಡ ಮಾಡಿ ಬಿಟ್ಟನೋ ಎಂದು ಅವ ಖುಷಿಯಿಂದ ಕಾಲಿಂಗ್ ಬೆಲ್ಲು ಒತ್ತಿದ.  ಮಗಳು ಓಡಿ ಬಂದು ಬಾಗಿಲು ತೆರೆದಳು.  ಅವಳ ಮುಖ ಮೌನವಾಗಿತ್ತು.  "ಏನಾಯಿತು ಮಗಳೇ" ಎಂದು ಮೂರ್ತಿ ಕೇಳಿದ್ದಕ್ಕೆ "ಮಧ್ಯಾಹ್ನ ನಾನು ಜ್ಯೋತಿನ ಹೊರಗೆ ಕರ್ಕೊಂಡು ಹೋಗಿದ್ದೆ.  ಅದು ನನ್ನ ಕೈಯಿಂದ ಬಿಡಿಸಿಕೊಂಡು ನಾಯಿಗಳೊಟ್ಟಿಗೆ ಓಡಿ ಹೋಯ್ತು" ಎಂದು ಅತ್ತೇ ಬಿಟ್ಟಳು.  ಮೂರ್ತಿ ಹೆಂಡತಿಯ ಮುಖ ನೋಡಿದ.  ಹಾಳಾಗಿ ಹೋಗಲಿ ದರಿದ್ರದ್ದು ಎಂಬಂತಿತ್ತು ಅವಳ ಮುಖ ಭಾವ.  ಮೂರ್ತಿ ಮಗಳನ್ನು ಅಪ್ಪಿ ಸಂತೈಸಿದ.  "ಹೋಗಲಿ ಮಗಳೇ, ನಿನಗೆ ಇನ್ನೊಂದು ಮರಿ ತಂದು ಕೊಡುತ್ತೇನೆ" ಎಂದ.  ಮೂರ್ತಿಯ ಹೆಂಡತಿ "ನೀವು ಒಂದು ತಂದದ್ದೇ ಸಾಕು.  ಇನ್ನೆಂದು ಈ ಮನೆಗೆ ನಾಯಿಮರಿ ತರಬೇಡಿ" ಎಂದು ಸಿಡುಕಿದಳು.

ಶ್ರಾವಣ ಮುಗಿದು ಮೂರು ದಿನ ಆಗಿತ್ತು.  ಒಂದು ಬೆಳಿಗ್ಗೆ ಯಾರೋ ಬಾಗಿಲು ಬಡಿದಂತಾಗಿ ಮೂರ್ತಿ ಹೋಗಿ ನೋಡಿದರೆ ಜ್ಯೋತಿ ಬಾಲವನ್ನು ಬಾಗಿಲಿಗೆ ಬಡಿಯುತ್ತಾ ನಿಂತುಕೊಂಡಿದೆ.  ನೆಟ್ಟಗೆ ಒಳಗೆ ಬಂದ ಜ್ಯೋತಿ ಮೂರ್ತಿಯ ಮಗಳ ಹಾಸಿಗೆಯ ಬಳಿಗೆ ಬಂದು ಅವಳನ್ನು ನೆಕ್ಕಿ ಎಬ್ಬಿಸಿಯೇ ಬಿಟ್ಟಿತು.  "ಅಮ್ಮಾ.... ಜ್ಯೋತಿ ಬಂದ್ಲು" ಎಂದು ಸಂಭ್ರಮದಿಂದ ಮಗಳು ನುಡಿದಳು.  ಅಮ್ಮ, ಅಣ್ಣ ಜ್ಯೋತಿಯ ಬಳಿಗೆ ಬಂದಾಗ ಅದು ಕುಯಿಂ ಕುಯಿಂ ಮಾಡುತ್ತಾ ಎಲ್ಲರನ್ನೂ ಮೂಸಿ ಮೂಸಿ ನೆಕ್ಕಿ ಮುಜುರೆ ಸಲ್ಲಿಸಿತು.

"ಈ ದರಿದ್ರಕ್ಕೆ ಕಳೆದ ಇಪ್ಪತ್ತು ದಿನ ನಾವು ಯಾರೂ ಬೇಕಿರಲಿಲ್ಲ.  ಈಗ ಬಂದಿದೆ ಮುಂಡೇದು.  ಎಲ್ಲಾದ್ರೂ ಕೊಂಡು ಹೋಗಿ ಬಿಟ್ಟು ಬನ್ನಿ" ಎಂದು ಮೂರ್ತಿಯ ಹೆಂಡತಿ ಸಿಡುಕಿದಳು.  ಅವಳ ಕೋಪ ಅರ್ಥವಾದಂತೆ ಜ್ಯೋತಿ ಮೂರ್ತಿಯ ಮಗಳ ಹತ್ತಿರ ಬಂದು ಮಲುಗತೊಡಗಿತು.  ಮೂರ್ತಿಯ ಮಗಳು ಜ್ಯೋತಿಯ ಕುತ್ತಿಗೆಯನ್ನು ತಬ್ಬಿಕೊಂಡು "ಇಲ್ಲ.  ಇದನ್ನು ಕೊಂಡು ಹೋಗಲಿಕ್ಕೆ ನಾನು ಬಿಡುವುದಿಲ್ಲ" ಎಂದಳು.

ದಿನಗಳು ಉರುಳಿದವು.  ಜ್ಯೋತಿ ಈಗ ತುಂಬು ಗರ್ಭಿಣಿ.  "ಇನ್ನೀಗ ಇದು ನಾಯಿ ಮನೆ ಆಗಿ ಬಿಡುತ್ತದೆ ನೋಡಿ" ಎಂದು ಮೂರ್ತಿಯ ಹೆಂಡತಿ ಆಗಾಗ ಸಿಡುಕತೊಡಗಿದಳು.  ಮೂರ್ತಿಯ ಮಗಳು "ಎಷ್ಟು ನಾಯಿ ಮರಿಗಳಿದ್ದರೂ ನನಗೆ ಬೇಕು.  ಅವುಗಳನ್ನು ನಾನು ಸಾಕುತ್ತೇನೆ" ಎಂದು ಮರು ನುಡಿಯತೊಡಗಿದಳು.

ಕೆಲವು ವಾರಗಳ ಬಳಿಕ ಮೂರ್ತಿಗೆ ಬೆಳಿಗ್ಗೆ ಸಂಭ್ರಮದ ಕೇಕೆ ಕೇಳಿ ಎಚ್ಚರವಾಯಿತು.  ಮಗಳು ಕರೆಯುತ್ತಿದ್ದಳು.  "ಅಪ್ಪಾ ಬಂದು ನೋಡಿ.  ಎಷ್ಟೊಂದು ಮರಿಗಳು."

ಮೂರ್ತಿ ಗಡಬಡಿಸಿ ಎದ್ದು ಬಂದು ನೋಡಿದರೆ ಅವನ ಮುದ್ದಿನ ಜ್ಯೋತಿ ಎಂಟು ಮರಿಗಳನ್ನು ಈದು ಅವನನ್ನು ಹೆಮ್ಮೆಯಿಂದ ನೋಡುತ್ತಿದೆ.  ಅವ ಜ್ಯೋತಿಯ ಒಂದೊಂದೆ ಮರಿಗಳನ್ನು ಎತ್ತಿ ಲಿಂಗ ಪರೀಕ್ಷೆ ಮಾಡತೊಡಗಿದ.  ಎಂಟರಲ್ಲಿ ಏಳು ಹೆಣ್ಣು ಮರಿಗಳು!  ಮೂರ್ತಿ ತಲೆಗೆ ಕೈ ಇಟ್ಟು ಕುಳಿತು ಬಿಟ್ಟ.

             *****

ಕೀಲಿಕರಣ: ಕಿಶೋರ್‍ ಚಂದ್ರ

ಹೆಂಡಗಡಂಗಿನ ಚಿತ್ರ

- ಮಂಜುನಾಥ ವಿ ಎಂ

ಗೋಡೆ ಮೇಲಿನ ದೊಡ್ಡ ಗಾತ್ರದ ಎಲೆಗಳ ಹೂಬಳ್ಳಿ
ಸ್ತಬ್ಧ ಚಿತ್ರವಾಗಿಯಷ್ಟೇ ಉಳಿದಿದೆ.  ಎಂದೋ ಉದುರಿದ ಎಲೆಗಳು
ನೆಲ ಬಗೆದು ಬೂಮಿಯೊಡಲು ಸೇರಿ, ಗೆದ್ದಲಿಡಿದು ಎಲುಬು ತಿಂದ
ಮನುಷ್ಯನಂತೇ ಆಗಿಹೋಗಿವೆಯೇನೊ.

ಬುದ್ಧಿ ಬಂದಾಗ ಮೂಲೆ ಸೇರಿದ ಪ್ರಜ್ಞಾಹೀನ ಇನ್ನೂ ಮೇಲೆದ್ದಿಲ್ಲ.
ಉಡುಪು ಮಾಸಿಲ್ಲ, ಪ್ರೇಮ ಮಾತ್ರ ಬೆಂಕಿಯಂತೆ ಉರಿದು ಹೋಗುತಿದೆ.
ಮಳೆಗಾಲದ ಬಣ್ಣಬಣ್ಣದ ಚಿಟ್ಟೆಗಳು ಒಳಸುಳಿದು ಹೂದೋಟದತ್ತ ಹಾರಿಹೋಗಲಾರಂಭಿಸಿವೆ.

ಹುಲಿ ಆಡಿಸುವವನು ಈಗಷ್ಟೇ ಪೀಪಾಯಿ ಘಾಟು ಹೆಂಡ ಏರಿಸಿ,
ಜನರ ಮಧ್ಯೆಯೇ ನಡೆದುಹೋಗಿದ್ದಾನೆ.

ವಸಂತಮಾಸದ ಹಿರಿಮೆಯಲಿ ಹಿಗ್ಗುವ ಪ್ರಕೃತಿ ಸೌಂದರ್ಯದ ಮೋಹಕಪ್ರಭೆ - ಹೆಂಡಗಿರಾಕಿಗಳನ್ನು
ಯಥೇಚ್ಛವಾಗಿ ಕರೆತರುತ್ತಿದೆ.
ದಮ್ಮಡಿಯಿಲ್ಲದೆ ಕುಡಿದವನೊಬ್ಬ ಅಡವಿಟ್ಟು ಹೋದ ಸ್ಯಾಕ್ಸಫೋನ್
ಇನ್ನೂ ಅಡ್ಡಗೋಡೆಯ ಮೇಲಿದೆ.

ತಡಿಕೆ ಮರೆಯಲ್ಲಿ ಹಂದಿಬಾಡಿನ ಚಾಕಣ ಉರಿಯುತ್ತಿದ್ದವಳು ಮಾತ್ರ
ಅಂದು ಗೈರು ಹಾಜರು.  ಹಸಿ ನೆಲಗಡಲೆ, ಆಲೂಗಡ್ಡೆ ನಂಜಿಕೊಳ್ಳುವ
ಕುಡುಕರಿಗೆ ಅವಳ ಚಿಂತೆಯೇ ಇಲ್ಲ.

ನಾಲ್ಕೈದು ಬಾತುಕೋಳಿಗಳೊಂದಿಗೆ ಬಂದು ಮೂಲೆ ಸೇರಿದ ಬೇಟೆಗಾರ-
ಅಂದಿನ ಶೌರ್ಯ ಸಾಹಸಗಳ ವರ್ಣನೆ ಮಾಡುತ್ತಲೇ ನೆಲಕ್ಕೆ ಬೀಳುತ್ತಾನೆ.

ಕಾಲವನ್ನೇ ಮೀರಿ ಮುನ್ನಡೆಯುವ ಹೆಂಡಗಡಂಗು-
ಕ್ಷಣಕಾಲ ನಿಂತು ನಡೆದಂತೆಯೂ ಭಾಸವಾಗುತ್ತಿತ್ತು.

          *****

ಕರುಣಿಕರು ಕೊಟ್ಟ ಆರಪಾವು ಜೋಳ

-ಶಿಶುನಾಳ ಶರೀಫ್

ಕರುಣಿಕರು ಕೊಟ್ಟ ಆರಪಾವು ಜೋಳದಿಂದ
ಹೊಟ್ಟೆ ಬರ ಹಿಂಗುವುದ್ಯಾಂಗಲೋ ಮನಸೇ               ||ಪ||

ಸ್ಥಿರವಲ್ಲ ಸಂಸಾರ ಕೆರವನಟ್ಟಿಯ ಸರಿ
ಬರಿದೆ ಆಸೇಕ ಬಿದ್ದಲ್ಲೋ ಮನಸೇ                            ||ಅ.ಪ.||

ನೇಮಿಸಿ ದೇಶಪಾಂಡೆ ಭೀಮರಾಯನೆಂಬೊ
ನಾಮವನು ಕೇಳಿ ಬಂದೆಲ್ಲೋ ಮನಸೇ
ಇವನ್ನು ಕೊಡುತಿದ್ದಿಲ್ಲ ಶಿವನೇ ಸದ್ಗುರು ಬಲ್ಲಾ
ಅವರಪ್ಪ ಬಲು ಜ್ಞಾನಿಯೋ ಮನಸೇ                         ||೧||

ಸತಿ ಸಂತರ ಹಸಿವಿಗೊದಗದ ಕಾಳು ಮನಿಗೊಯ್ಯೋ
ಮತಿಗೇಡಿಯೆನ್ನುತಿಹರೋ ಮನಸೇ
ಜತನದಲಿ ಮಹಾರಾಯನ ಸರಕಿನೊಳಗೆ ಸುರುವಿ
ಹಿತದಿ ಹಿಂದಕ್ಕೆ ನೀ ನಡಿಯಲೋ ಮನಸೇ                 ||೨||

ಆರು ಬೇಡಿದರಿಲ್ಲಾ ಆರು ಕಾಡಿದರಿಲ್ಲಾ
ಪ್ರಾರಬ್ದ ಕೃತಭೋಗವು ಮನಸೇ
ಚಾರುತರದ ವ್ರ್‍ಇಷಬನಮಂತ್ರ ಬಲವಿರಲು
ನರರ ಹಂಗಿನ್ನೇನಲೋ ಮನಸೇ                              ||೩||

ಇಂದಿಗೆ ದುಷ್ಕಾಳ ವಂದೇ ಎನ್ನಲಿಬ್ಯಾದ
ಮುಂದೆ ಪ್ರಳಯ ಕಾಲವೋ ಮನಸೇ
ಬಂದ ಭವಾ ಕಳಿದು ಶಿಶುನಾಳ ಮಂದಿರದಿ ಗೋ-
ವಿಂದ ಗುರುವಿನ ಹೊಂದಿಕೋ ಮನಸೇ                      ||೪||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಚಿನ್ಮಯಿ

- ಗಿರಿಜಾಪತಿ ಎಂ. ಎನ್

ದಾರಿ ತೋರುವವರಾರು ನಿನಗೆ
ಚಿನ್ಮಯಾನಂದದ ಶಿವ ಬೆಳಕಿನೆಡೆಗೆ ||

ವೀಧಿ ಬೀಧಿ ಹಾದಿಯಲ್ಲು ಕಲ್ಲು ಮುಳ್ಳಿನ ಕಂದರ
ಪೊಳ್ಳು-ಜೊಳ್ಳು ಭರವಸೆ ಗೋಪುರ
ಹೆಜ್ಜೆ-ಹೆಜ್ಜೆಗೂ ಮುಖವಾಡ ಬಿಂಬವು
ಹಗಲುಗನಸಿನ ಡಂಗುರ ||

ಎನು ನೆಚ್ಚುವೆ ಯಾರ ಮೆಚ್ಚುವೆ
ಹುಚ್ಚು-ಪೆಚ್ಚು ಸಂತೆ ಸಂದಣಿಯಲಿ
ಪೆಚ್ಚು ಮನಸಿಗೆ ಹಿಡಿದ ಗ್ರಹಣವ
ಬಿಡಿಸಲಾಗದು ಬರಿಗೈಯಲಿ ||

ಬರಿ ನರರಿಲ್ಲಿಲ್ಲವೋ ನಾಕಗೆಡಿಸೊ
ಮೃಗ ಮೊಗಜರ ರಣ ಭೀಕರ
ಗೆದ್ದ ಕಟ್ಟಿದ ಹುತ್ತ ಕಬಳಿಸೋ
ಉರಗ ಲೋಕದ ಕರಿ ನಾಗರ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಪಶ್ಚಿಮಘಟ್ಟ

-ರವಿ ಕೋಟಾರಗಸ್ತಿ













ಮುತ್ತಿಡುತ ನೀಲಾಗಸಕೆ
ಜಗವ ಬೆರಗುಗೊಳಿಸಿ
ನದಿ-ತೊರೆಗಳ-ಧಾಮ
ಹಸಿರ ಸಿರಿಯ ವೈಯ್ಯಾರದ
ನಿತ್ಯೋತ್ಸವದ ಪಶ್ಚಿಮಘಟ್ಟ

ತುಂಬಿದ ಮಾಲೆಗಳಲ್ಲಿ
ಬೆಟ್ಟಗಳ ಸಾಲು ಬೆಸೆದು
ಹೊದ್ದ ನಿತ್ಯ ಹರಿದ್ವರ್ಣ

ವಾತ್ಸಲ್ಯದ ಮಡಿಲು ಮಾದಾಯಿ
ಮಾತೃ ಒಡಲ ಅಪ್ಪುಗೆಯಲಿ
ಜಲಧಾರೆ ಹರಿಸುತಲಿ
ಜೀವಸೆಲೆಯ ಪರಿಸರಬೀಡು

ಕಂಗೆಟ್ಟ ಕಾನನ ರೋಧಿಸುತಿಹದು
ಬಾಳು-ಬದುಕಿನ ಪ್ರಶ್ನೆಗೆ
ಉತ್ತರ ಕಾಣದ ಒಡಲ-ಮಡಿಲು
ಉಳಿವಿಗಾಗಿ ವನಸಿರಿಯು ಬಳಲುತಿಹದು

ಮಾದಾಯಿ ಯೋಜನೆಗಾಳದಿ...
ಶತ-ಶತಮಾನಗಳ ಸಾಕ್ಷಿಯ
ನೆರಳಾಗಿರುವ ಹಸಿರು ಜೀವನೆಲೆ
ಬರಡಾಗಿಸುತಿಹ ವಿಜ್ಞಾನ ಸವಾರಿಯ
ಬಾಹುಗಳ ಹಿಡಿತದ ಬ್ರಹ್ಮರಾಕ್ಷಸ

ಆಧುನಿಕತೆಯ ಆಕ್ಟೋಪಸ್
ಜಾಗತೀಕರಣದ ಬಂದಿಯಾಗಿ
ಅಣೆಕಟ್ಟು, ರಸ್ತೆ, ಪೋಕ್ರಾನಗಳ
ವಿಷದಾಳದ ಆಳದಿ ಕುಬ್ಜರಾಗಿಹರು

ಮನುಕುಲದ ಕಣ್ಣಾಗಿ
ಒಡಲ ತೃಷೆ ತಣಿಸುವ
ಭೂದೇವಿಯ ಸಿರಿಗೆ ಬೆಂಕಿಯಿಡಲು
ಮಾದಾಯಿ ಯೋಜನೆ ಕೊಳ್ಳಿ ಹಿಡಿದಿಹರು

ಮೆದುಳಿರದ ಮಾನವ
ಮಂಕುತನದ ಹೃದಯ ಹೀನತೆಗೆ
ಮೌನ ಧಿಕ್ಕಾರದಿ-ಕಾಡೆಲ್ಲಾ ಕೂಗುತ
ಮನುಕುಲದಳಿವು ಕನಸಲಿ ಕಾಣುತ
ಮೌನದಿ ಕೊರಗುತ ಮಲುಗಿಹಳು

         *****

ಕೀಲಿಕರಣ: ಕಿಶೋರ್‍ ಚಂದ್ರ

ಸತ್ಯ ಬೇಕೆಂದು

- ಡಾ || ರಾಜಪ್ಪ ದಳವಾಯಿ

ಸತ್ಯ ಬೇಕೆಂದು ಜಗವೆಲ್ಲಾ ಸುತ್ತಿದೆ
ನಡುವೆ ಜನರಿಲ್ಲದೆ ಮನದಲ್ಲೇ ಸತ್ತಿದೆ

ನ್ಯಾಯ ಬೇಕೆಂದು ಮನೆ ಮೆನಯ ತಟ್ಟಿದೆ
ಹೊರ ಬರ ಬಿಡದ ಜನ ಬಾಗಿಲೆಲ್ಲ ಮುಚ್ಚಿದೆ

ದೇವರು ಬೇಕೆಂದು ಬೀದಿ ಬೀದಿ ಅಲೆದೆ
ಎಲ್ಲೆಲ್ಲೂ ಜನರೆ, ಹುಸಿ ಸುತ್ತಾಡಿ ಬರಿದೆ

ನೀತಿ ಬೇಕೆಂದು ಮನ ಮನ ಬೇಡಿದೆ ಬಿಕ್ಷೆ
ಕೊಡದ ಜನರಿಂದ ಸಿಕ್ಕಿತಯ್ಯೋ ತಕ್ಕ ಶಿಕ್ಷೆ

ಪ್ರೀತಿ ಬೇಕೆಂದು ನಿನ್ನನರಸಿ ಬಂದೆನಲ್ಲೆ
ನೀ ಮನಕೆ ಸವಿ ಗಂಗೆ ನವ ಚೇತನವಲ್ಲೆ

        *****



ಕೀಲಿಕರಣ: ಕಿಶೋರ್‍ ಚಂದ್ರ

ಕಲ್ಯಾಣಿಯು ಕರುಣವಾಯಿತು ನಮಗ

-ಶಿಶುನಾಳ ಶರೀಫ್

ಕಲ್ಯಾಣಿಯು ಕರುಣವಾಯಿತು ನಮಗ         ||ಪ||

ಮಲ್ಲೇಶ ಕೇಳೆಲೋ ಸುಣ್ಣ ತಂಬಾಕವು
ಸೊಲ್ಲು ಸಾರಿತು ಗುಲ್ಲುಎನಿಸುತಲಿ           ||ಅ.ಪ.||

ಕಲ್ಯಾಣದಿಂ ಹೊರುತು ದಾರಿ ಹಿಡಿದಿರುತಲಿ
ಶಿಗ್ಗಲಿಯೊಳು
ಬಾಯಲಿ ನುಡಿದ ಪರಿಪರಿಯ
ಮೋಹಕ್ಕೆ ಬೆರೆತು ಕಾಲಿಡುತಲಿರೆ
ಸರಸದಿ ಭೀಮಗ ಅರಕಿರಲಿವು ಕಲ್ಯಾಣಿ   ||೧||

ಶಿಶುನಾಳಂಧೀಶ ಬಂದು ಬ್ಯಾಗದಿಂದ-
ಲೊಸೆದಪ್ಪಿ ಕೊಂಡೆನೆಂದು ಆ
ಮಹಾಸದ್ಗುರು ಗೋವಿಂದ ಕರುಣದಿ
ಹಸನಾಗಿ ಉಸುರುವೆ
ರಸಿಕರಲಿ ಅಪ್ಪುದು ಕಲ್ಯಾಣಿಯು           ||೨||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಪ್ರೀತಿಯ ತಾಜಮಹಲ್

- ಅಬ್ಬಾಸ್ ಮೇಲಿನಮನಿ
                                                               - ೧ -

ಲಖನೌದಿಂದ ಪುಷ್ಪಕ ಎಕ್ಸಪ್ರೆಸ್ ರೈಲಿನಲ್ಲಿ ರಾತ್ರಿಯೆಲ್ಲ ಪ್ರಯಾಣಿಸಿ ನಾವು ಆಗ್ರಾ ತಲುಪಿದಾಗ ಬೆಳಗಿನ ಹೂ ಬಿಸಿಲು. ಜಗದ್ವಿಖ್ಯಾತ ತಾಜಮಹಲು ಇರುವ ಭೂಸ್ಪರ್ಶ,  ಹಿತಕರ ಗಾಳಿಯೊಂದಿಗೆ ಮಿಳಿತಗೊಂಡು ಅದಮ್ಯ ಪುಳಕ ಆನುಭವಿಸುತ್ತಿರುವಂತೆ ಮಹೇಶ ನಮ್ಮನ್ನು ಟ್ರ್ಯಾಕ್ಸಿನಲ್ಲಿ ತುಂಬಿಕೊಂಡು ಹೊರಟರು. ಸಾಹಿತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಲಖನೌಗೆ ಬಂದಿದ್ದ ನಮಗೆ ಆಗ್ರಾ, ದೆಹಲಿ, ಮಧುರಾ, ಜಯಪುರ ನೋಡಿಕೊಂಡು ಹೋಗಲು ಆಹ್ವಾನ ನೀಡಿದ್ದು ಆವರೆ.

ತಾಜಮಹಲ್ ನೋಡಬೇಕೆನ್ನುವುದು ನನ್ನ ಬಹುದಿನದ ಕನಸು. ಸಂಗಮವರಿ ಕಲ್ಲಿನಲ್ಲಿ ಕೆತ್ತಿದ ತಾಜಮಹಲು ಒಂದು ಆಮರ ಪ್ರೇಮದ ಕಾವ್ಯ. ಪರಿಶುದ್ಧ ಸೌಂದರ್ಯದ ಪ್ರತೀಕ. ಮಾನವೀಯ ಕ್ಕೆಗಳಿಂದ ಸೃಜಿಸಲ್ಪಟ್ಟ ಆದ್ಭುತ ಇಮಾರತು.  ಜಗತ್ತಿನ ಪ್ರೇಮಿಗಳಿಗೆ ಸ್ಪೂರ್ತಿಯ ಸೆಲೆ ಎನ್ನುವುದರ ಬಗ್ಗೆ ಕೇಳಿದ್ದೆ. ಓದಿಯೂ ಇದ್ದೆ.

ಈಗದನ್ನು ಕಣ್ಣಾರೆ ನೋಡುವ ಆವಕಾಶ ಪ್ರಾಪ್ತವಾಗಿರುವ ಕ್ಷಣದಿಂದ ಆತ್ಯಂತ ಖುಷಿ ಆನಿಸಿತ್ತು. ತಾಜಾ ಬೆಳಕಿನಲಿ ತಾಜ್ ಹೇಗೆ ಕಾಣಿಸಬಹುದೆಂದು ವಾಹನದ ಕಿಟಕಿಯಾಚೆಗೆ ಕಣ್ಣುಹರಡಿ ಕುಳಿತೆ.  ರಸ್ತೆಯುದ್ದಕ್ಕೂ ಬರಿ ಕಟ್ಟಡಗಳು. `ತಾಜ್ ಕಾಣಿಸುತ್ತಿಲ್ಲ' ನಾನು ನಿರಾಶೆಯಿಂದ ಹೇಳಿದೆ. "ಆದು ಐದು ಕಿಲೋಮೀಟರ ದೂರದಲ್ಲಿದೆ" ಎಂದರು ಮಹೇಶ.

"ಆಗ್ರಾಕ್ಕೆ ಬಂದೀವಿ ತಾಜಮಹಲ್ ನೋಡದ ಹೋಗ್ತೀವೇನು ? ಸ್ವಲ್ಪ ತಡಕೋರಿ" ಆರ್ಜುನ ತಮಾಷೆ ಮಾಡಿದರು ಹೊರಗಿನ ದೃಷ್ಟಿಯನ್ನು ಕದಲಿಸದೆ ನಾನು ನಕ್ಕೆ.

ನಿತ್ಯದ ಬದುಕಿಗೆ ಸಜ್ಜುಗೊಳ್ಳುತ್ತಿರುವ ಜನರ ಧಾವಂತ. ಓಡಾಡುವ ಜಟಕಾ, ರಿಕ್ಷಾ, ಸ್ಯೆಕಲ್ ರಿಕ್ಷಾ, ಕಾರು, ಸಿಟಿ ಬಸ್ಸು, ಸೆಟರ್ ತೆರೆದುಕೊಳ್ಳುತ್ತಿರುವ ಅಂಗಡಿಗಳು ಕಣ್ಣು ತುಂಬುತ್ತಿರುವ ಹಾಗೆ ನನ್ನ ಮನಸ್ಸು ಮೊಗಲ್ ದೊರೆಗಳ ಗತವೈಭವವನ್ನು ಧ್ಯಾನಿಸತೊಡಗಿತ್ತು.

"ಆರೆ, ಇಸಿ ಮಾಽಽಕಿ, ಮರ್ ಜಾತಿ ಸೂವ್ವರ್!" ಸಡನ್ನಾಗಿ ಬ್ರೇಕ್ ಹಾಕಿ ಜೋರು ಧ್ವನಿಯಲ್ಲಿ ಬೈದಾಡಿಕೊಂಡ ಡ್ರೈವರ್. ಆತ್ತ ಗಾಬರಿಯಿಂದ ನೋಡಿದರೆ,  ಟ್ಯಾಕ್ಸಿಗೆ ಆಡ್ಡವಾಗಿ ಆನೆಮರಿಯಂಥ ಹಂದಿಯೊಂದು ತನ್ನ ಹತ್ತೆಂಟು ಮರಿಗಳೊಂದಿಗೆ ಜಬರದಸ್ತಾಗಿ ಗುರುಗುಟ್ಟುತ್ತ ನಿಂತುಕೊಂಡಿತ್ತು. ಆದರ ಮೈಮೇಲೆ ತೊಪ್ಪೆ ತೊಪ್ಪೆ  ಕೊಳಕು. ಬಾಲ ಆಲ್ಲಾಡಿಸಿ, ಕೊಳಕನ್ನು ವಾಹನಕ್ಕೂ ಸಿಡಿಸಿ ಹಂದಿ ಲೇವಡಿ ಧಿಮಾಕಿನಿಂದ ಬದಿಗೆ ಸರಿದು ಹೋಯಿತು. ಆನೆ, ಕುದುರೆ, ಒಂಟೆಗಳು ಓಡಾಡಿದ ಈ ಬೀದಿಗಳಲ್ಲಿ ಈಗ ಬಿಡಾಡಿ ದನಗಳು, ಹಂದಿ-ನಾಯಿಗಳು ಯಥೇಚ್ಛವಾಗಿ ತಿರುಗಾಡಿ ಕೊಂಡಿರುವುದಕ್ಕೆ ಬೇಸರವೆನಿಸಿತು.

ತೆಗ್ಗು ತವರಿನ ರಸ್ತೆಗಳು ನಮ್ಮನ್ನು ಕುಕ್ಕರಿಸತೊಡಗಿದ್ದವು.  ಆಜುಬಾಜು ಗಟಾರು ತುಂಬಿದ ಕೊಳಚೆ ರಸ್ತೆ ಆವರಿಸಿಕೊಂಡಿದ್ದ ಕಸ. ಬ್ರಹ್ಮಾಂಡದ ಗಲೀಜು! "ಇದು ಆಗ್ರಾನೋ; ಹೊಲಸಿನ ಉಗ್ರಾಣೋ?" ಕೋರಟಕರ ಮೂಗು ಮುಚ್ಚಿಕೊಂಡೇ ಹೇಳಿದರು. "ಸರ್, ನಾವೀಗ ಆಗ್ರಾದ ಸೆಂಟರ್ ಪ್ಲೇಸಿನಲ್ಲಿದ್ದೀವಿ" ಎಂದರು ಮಹೇಶ. "ಊರು ಒಂದೀಟೂ ಸ್ವಚ್ಛ ಇಲ್ಲ" ಹಂಚಾಟೆ  ಮುಖ ಸಿಂಡರಿಸಿದರು  "ನಮ್ಮ ದೇಶದಾಗ ಎಲ್ಲ‌ಊರುಗಳ ಸ್ಥಿತಿ ಹೀಂಗಽಽ ಇರುದು" ಎಂದರು ಬಾಗವಾನ ಸರ್.  "ಇದು ಪ್ರಸಿದ್ಧ ಪ್ರವಾಸಿ ಸ್ಥಳ. ಇಲ್ಲಿನ ಆಡಳಿತ ಸ್ವಚ್ಛತೆಗೆ ಗಮನ ಕೊಡಬೇಕಾಗಿತ್ತು" ಶಿರಹಟ್ಟಿಮಠ ಅವರ ದನಿಯಲ್ಲಿ ಬೇಸರದ ಛಾಯೆಯಿತ್ತು.

"ಆವರು ಏನು ಹೇಳುತ್ತಿದ್ದಾರೆ ?" ಡ್ರೈವರ್ ಸ್ಟೇರಿಂಗ್ ತಿರುಗಿಸುತ್ತಲೇ ಒಮ್ಮೆ ಹಿಂತಿರುಗಿ ನೋಡಿ ಕೇಳಿದ.  ಮಹೇಶ ನಮ್ಮ ಆಭಿಪಪ್ರಾಯಗಳನ್ನು ಸಂಕ್ಷಿಪ್ತವಾಗಿ  ಡ್ರೈವರ್‌ನಿಗೆ ತಿಳಿಸಿದರು.  ತಟ್ಟನೆ ಕಣ್ಣು ಕೆಂಪಗೆ ಮಾಡಿಕೊಂಡ ಡ್ರೈವರ್ "ಸರ್, ಇಲ್ಲಿನ ಆಡಳಿತಕ್ಕೆ ಬಕಾಸುರನ ಹೊಟ್ಟೆ ಇರುವುದು" ಎಂದ.  ವ್ಯವಸ್ಥೆಯ ಭ್ರಷ್ಟತೆಯನ್ನು ಪ್ರತಿಭಟಿಸುವವನ ಮಾತಲ್ಲಿ ವ್ಯಗ್ರತೆಯಿತ್ತು.

ಮಹೇಶ ಇದ್ದದ್ದು ಕ್ವಾಟರ್‍ಸ್‍ನಲ್ಲಿ ಮೂವತ್ತರ ಹರೆಯದ ಮಹೇಶ, ಬಾಗವಾನ ಸರ್ ಮೆಚ್ಚಿನ ಶಿಷ್ಯ.  ಬಿಜಾಪುರದ ಒಂದು ಹಳ್ಳಿಯವರು.  ಡಿಪ್ಲೋಮಾ ಮೆಕ್ಯಾನಿಕಲ್ ಪದವೀಧರ.  ಆಗ್ರಾದ ಏರ್ ಫೋರ್‌ಸ್‌ನ ತಾಂತ್ರಿಕ ವಿಭಾಗದಲ್ಲಿ ಮೂರು ವರ್ಷದಿಂದ ಕೆಲಸ ಮಾಡುತ್ತಿದರು.  ಹೆಂಡತಿ ಚೊಚ್ಚಲು ಹೆರಿಗೆಗೆಂದು ತವರಿಗೆ  ಹೋಗಿದ್ದಳು.  ನಮ್ಮನ್ನು ಕ್ವಾಟರ್ಸ್ನಲ್ಲಿ ಇರಿಸಿಕೊಳ್ಳುವ ಆಸೆ ಮಹೇಶಗಿತ್ತು ಆದರೆ ಆಫೀಸ್ ಇನ್‍ಸ್ಪೆಕ್ಷನ್ ಇದ್ದುದ್ದರಿಂದ ಕ್ಯಾಂಪಸ್ನಲ್ಲಿ ಓಡಾಡುವುದು ದುಸ್ತರವೆಂದು ವಿಷಾದಿಸಿದ ಮಹೇಶ ನಮ್ಮನ್ನು ಅರ್ಜುನ ನಗರದ ಕೆ.ಕೆ. ಟೂರ್ ಮತ್ತು ಟ್ರಾವೆಲ್ಸ್‍ನ ರೂಮೊಂದರಲ್ಲಿ ಇರಿಸಿದರು.

ನಾವು ಸ್ನಾನ, ಟೀಫಿನ್ ಮುಗಿಸುವುದರೊಳಗೆ ಮನೆಗೆ ಹೋಗಿ ಬಂದರು ಮಹೇಶ.  ಅವರ ಜೊತೆಗೆ ಈಗ ಮುರುಗನ್ ಇದ್ದರು.  ಮಹೇಶರ ಆತ್ಮೀಯ ಗೆಳೆಯ ಮುರುಗನ್ ಚೆನ್ನೈದವರು ಅವರಿಗೂ ಏರ್ ಫೋರ್ಸ್‍ನ ತಾಂತ್ರಿಕ ವಿಭಾಗದಲ್ಲಿ ಮೇಲುಸ್ತುವಾರಿ ಕೆಲಸ.  ಕನ್ನಡದಲ್ಲಿ ಸೊಗಸಾಗಿ ಮಾತಾಡುತ್ತಿದ್ದರು.  ಬೆಂಗಳೂರನಲ್ಲಿ ಇದ್ದು ಓದಿದವರಂತೆ. ಟ್ರಾಕ್ಸ ಹತ್ತುವ ಮುಂಚೆ "ನಾವು ಮೊದಲು ಸಿಕಂದರ್ ಇಮಾರತು ನೋಡೋಣ" ಎಂದರು ಮುರುಗನ್.

"ತಾಜ್‍ಮಹಲ್ ಬೇಡವೆ?" ನಾನು ಕೇಳಿದೆ.
"ಸಿಕಂದರ ಇಮಾರತು ನೋಡಿ, ಊಟ ಮಾಡಿಕೊಂಡು ತಾಜಮಹಲ್ ನೋಡಲು ಹೋಗೋಣ ಅಲ್ಲಿತನಕ ಬಿಸಿಲು ಕಮ್ಮಿ‌ಆಗಿರುವುದು"  ಮಹೇಶ ಹೇಳಿದರು.

ಆಗ್ರಾದ ಬಿಸಿಲು ತುಸು ಹೆಚ್ಚೆನಿಸಿತು.  ಆದರೆ ಓಡುತ್ತಿರುವ ವಾಹನದೂಳಗೆ ತೂರಿ ಬರುವ ಗಾಳಿ ಬಿಸಿಯ ತಾಪವನ್ನು ತುಸು ತಗ್ಗಿಸಿತು.  ಅಕಬರನ ಸಮಾಧಿ ಇರುವ ಸಿಕಂದರ್ ಮಹಲಿನ ಬೆರಗಿನಲ್ಲಿ ತಾಪ ಇನ್ನೂ ಗೌಣವೆನಿಸಿತ್ತು.

ತಾಜಮಹಲಿನ ದ್ವಾರದಲ್ಲಿ ಇರುವಾಗ ಸೂರ್ಯ ಹಿತವೆನಿಸತೊಡಗಿದ್ದ.  ಮಹೇಶ ಮತ್ತು ಮುರುಗನ್ ಪ್ರವೇಶ ಟಿಕೀಟು ಖರೀದಿಸಿ ತಂದರು.  ಸೆಕ್ಯುರಿಟಿ ಅಧಿಕಾರಿಗಳು ನಮ್ಮನ್ನು ತೀವ್ರವಾಗಿ ತಪಾಸಿಸಿ ಒಳಬಿಟ್ಟರು.  ಪರಿಶುದ್ಧ ಪ್ರೇಮದ ಸಂದೇಶ ಸಾರುವ ಈ ತಾಣಕ್ಕೆ ಆತಂಕವಾದಿಗಳ ಮತ್ತು ಧರ್ಮಾಂಧರ ಕೆಟ್ಟ ನೆದರು ಬಿದ್ದಿರುವುದು ಎಂಥ ವಿಪರ್ಯಾಸ!

ಒಳಗೆ ಕಾಲಿಡುತ್ತಿದ್ದಂತೆ ದೂರದಿಂದಲೇ ಕಂಡಿತು ಹಾಲುಗಲ್ಲಿನ ತಾಜಮಹಲ್!  ಅದರ ಆಪೂರ್ವ ಸೌಂದರ್ಯವನ್ನು ಆಸ್ವಾದಿಸುವಲ್ಲಿ ತನ್ಮಯಗೊಂಡ ಕಿಕ್ಕಿರಿದ ಜನ.  ಫೋಟೋಗ್ರಾಫರ್ಗಳಿಗೆ ಸುಗ್ಗಿಯೆಂದರೆ ಸುಗ್ಗಿ ಎಲ್ಲೆಲ್ಲಿಂದ ಬಂದವರಿಗೆ ತಾಜಯೆದುರು ನಿಂತು ನೆನಪಿನ ಬುತ್ತಿ ಕಟ್ಟಿಕೊಳ್ಳುವ ತವಕ.  ಸುತ್ತ ಹಸಿರು ಹುಲ್ಲಿನ ಮಕಮಲ್ಲಿನಲ್ಲಿ, ಬಳಕುವ ಗಿಡಗಳ ಲಾವಣ್ಯದೊಂದಿಗೆ ಸ್ಪರ್ಧೆಗಿಳಿದಂತೆ ಯುವ ಪ್ರೇಮಿಗಳು ಆಲ್ಲಲ್ಲಿ ಕುಳಿತು, ಕಣ್ಣಭಾಷೆಯಲ್ಲಿ ಒಲವಿನ ಮಾತು ಉಲಿಯುತ್ತಿದ್ದರೆ.  ಗಂಡ-ಹೆಂಡತಿಯರು ಶಾಹಜಹಾನ್-ಮುಮತಾಜ್‌ರನ್ನು ಮೈಯೊಳಗೆ ಆಹ್ವಾನಿಸಿಕೊಂಡವರಂತೆ, ಕ್ಯಾಮರಾ ನೋಟಕ್ಕೆ ಪೋಜು ನೀಡುವಲ್ಲಿ ಆಸಕ್ತರಾಗಿದ್ದರು.

ಸಂಜೆಯ ಸೂರ್ಯನ ಕಿತ್ತಳೆಯ ರಂಗು ತಾಜ್‌ನ ಕಳೆ ಹೆಚ್ಚಿಸಿತ್ತು.  ಸಂಗಮವರಿ ಕಲ್ಲಿನ ಸ್ವರ್ಶ ಹಿತಾನುಭವ ನೀಡುತ್ತಿರುವಂತೆ ನಾನು ತಲೆಯೆತ್ತಿ ನೋಡಿದೆ. ಅಬ್ಬಾ !  ತಾಜಮಹಲೇ, ಏನು ನಿನ್ನ ವೈಭವ ! ಸ್ವಗತವಾಗಿ ಉದ್ದರಿಸಿದ್ದೆ. ಮನಸ್ಸು ಉಲ್ಲಸಿತವೆನಿಸಿತ್ತು.

ಮುಮತಾಜಳ ಕಬರ್ ನೋಡಲು ಗೆಳೆಯರು ಸರದಿಯಲ್ಲಿ ನಿಂತುಕೊಂಡರು.  ಒಳಗೆ ಹೋಗುವಾಗ ನನ್ನನ್ನು ಕರೆಯಿರಿ ಎಂದು ನಾನು ಜನಸಂದಣಿ ಇಲ್ಲದ ಕಡೆಗೆ ನಿಂತುಕೂಂಡು ತಾಜ್‌ನ ಗುಮ್ಮಟದತ್ತ ದೃಷ್ಟಿ ಹರಡಿದೆ.

"ಪ್ರಿಯ ಪ್ರವಾಸಿಗ, ನನ್ನ ಮಹಲಿಗೆ ಬಂದಿರುವ ನಿನಗೆ ಸ್ವಾಗತ ಕೋರುವೆ" ಹೆಣ್ಣು ಧ್ವನಿಯೊಂದು ಕೇಳಿಸಿತು.  ಮಮತಾಜಳದೆ ಆದು?  ಆನುಮಾನ ಕಾಡಿತು. ನನಗೆ.  "ನಾನೇ, ವಿಶ್ವವಿಖ್ಯಾತ ಸಾಮ್ರಾಟ ಶಾಹಜಹಾನನ ಪ್ರಿಯತಮೆ ಅಂಜುಮಂದ್ ಬಾನು ಉರ್ಫ್ ಮುಮತಾಜ.  ಈ ಮಹಲಿನಲ್ಲಿ ಮಲಗಿರುವವಳು" ಮತ್ತೇ ಆದೇ ಉಲಿತ.  ಸತ್ತವರು ಮಾತಾಡುವುದು ಅದ್ಹೇಗೆ ಸಾಧ್ಯ?  ಕಲ್ಪನಾಲೋಕದಿಂದೀಚೆಗೆ ಬಂದು ಇಮಾರತಿನ ಮೇಲೆ ಸೂಕ್ಷ್ಮ ನೋಟ ಬೀರಿದೆ.  ಎಷ್ಟು ನಾಜೂಕಾಗಿದೆ ಇಲ್ಲಿನ ಕುಸುರಿ ಕೆಲಸ. ಇದು ಮನುಷ್ಯ ನಿರ್ಮಿತವೆ ?

"ಪ್ರಿಯ ವೀಕ್ಷಕನೆ, ಯಮುನಾ ತೀರದ ಈ ಮಹಲು ನನ್ನ ಮನದಿಚ್ಛೆಯನ್ನು ಮೂರ್ತಗೊಳಿಸಿದೆ. ಇಂಥದೊಂದು ಮಹಲು ಸ್ವರ್ಗದಲ್ಲೂ ಇಲ್ಲ.  ನನ್ನ ಹೃದಯದೊಡೆಯ ಶಾಹಜಹಾನನಿಗೆ ನಾನು ಕೃತಜ್ಞಳಾಗಿದ್ದೇನೆ.  ನನ್ನ ನೆನಪನ್ನು ಆವನು ಈ ಭೂಮಿಯ ಮೇಲೆ ಆಮರಗೊಳಿಸಿದ್ದಕ್ಕೆ" ಮುಮತಾಜಳ ಅಂತರಂಗದ ಮಾತು ನನ್ನ ಹೃದಯ ತುಂಬಿಕೊಂಡವು.

"ಆತ್ಮೀಯ" ಗಂಡು ಧ್ವನಿ ಕೇಳಿಸಿತು. ಅದು ಶಾಹಜಹಾನನದೇ ಇರಬೇಕನಿಸಿತು.  ಅವನು ಹೇಳಿದ ನನ್ನ ಮುಮತಾಜಳ ಪ್ರೀತಿಯೆದುರು ಈ ಮಹಲು ಏನೂ ಅಲ್ಲ, ಅವಳು ನನ್ನ ಹೃದಯದಲ್ಲಿ ಶಾಶ್ವತಳಾಗಿದ್ದಾಳೆ. ಆದರೆ ಅವಳ ಇಚ್ಛೆಯಂತೆ ನಾನು ಈ ಇಮಾರತು ನಿರ್ಮಿಸಿದ್ದೇನೆ.  ಅವಳು ನನ್ನ ಪ್ರೇಮ ಸಾಮ್ರಾಜ್ಞಿ.  ಆಕೆಯನ್ನು ನಾನು ನನ್ನ ಜೀವಕ್ಕಿಂತಲೂ ಹೆಚ್ಚು ಪ್ರೀತಿಸಿದ್ದೇನೆ.  ಮುಮತಾಜ ನಮ್ಮ ಅರಮನೆಯ ಪರಿಸರದಲ್ಲಿ ಹುಟ್ಟಿ ಬೆಳೆದ ಹುಡುಗಿ.  ಅವಳ ತಂದೆ ಯಾಮಿನುದ್ದೌಲಾ ಸಾಮ್ರಾಜ್ಞಿ.  ನೂರಜಹಾನಳ ಸಹೋದರ.  ನನ್ನ ತಂದೆ ಜಹಾಂಗೀರನ ದರಬಾರಿನಲ್ಲಿ ಅತ್ಯುಚ್ಛ ಪದವಿಯಲ್ಲಿದ್ದ.  ಅತಿ ಸುಂದರಿ.  ಮುಗ್ದೆಯಾದ ಮಮತಾಜಳನ್ನು ನಾನು ಚಿಕ್ಕಂದಿನಿಂದ ನೋಡುತ್ತ ಬಂದವನು.  ಅವಳ ಯೌವನಕ್ಕೆ ಸೋತವನು.  ನಮ್ಮ ಪ್ರೇಮದ ವಿಷಯ ತಿಳಿದ ನನ್ನ ತಂದೆ ಸಂತೋಷದಿಂದ ನಮ್ಮ ಮದುವೆ ನೆರವೇರಿಸಿದರು. ಮಮತಾಜಳಿಗೆ ರಾಜಮಹಲಿನ ಉತ್ಕೃಷ್ಟತೆ ಪ್ರಾಪ್ತವಾಯಿತು."

ಶಾಹಜಹಾನನ ಧ್ವನಿಯಲ್ಲಿ ಹೆಪ್ಪುಗಟ್ಟಿತ್ತು ಹೆಮ್ಮೆ.

"ನಾನು ಅವರ ಹೃದಯದಲ್ಲಿ ಸ್ಥಾನ ಪಡೆದುಕೂಂಡದ್ದು ನನ್ನ ಅದೃಷ್ಟ.  ನಾವಿಬ್ಬರೂ ಪರಸ್ಪರ ಅಧಿಕವಾಗಿ ಪ್ರೀತಿಸುತ್ತಿದ್ದೆವು.  ಎಂಥ ಸಮಯದಲ್ಲೂ ವಿಚ್ಛಿನ್ನಗೊಳಿಸಲಾರದ ಪ್ರೀತಿಯದು.  ನಾನಂತೂ ಅವರನ್ನು ನೆರಳಿನಂತೆ ಹಿಂಬಾಲಿಸಿಕೊಂಡಿರುತ್ತಿದ್ದೆ.  ಮಹಲಿನಲ್ಲೂ ಆಷ್ಟೆ ದರಬಾರಿನಲ್ಲೂ ಅಷ್ಟೆ.  ರಾಜನೀತಿ ವಿಷಯದಲ್ಲಿ ಅವರ ಮೇಲೆ ನನ್ನ ಒತ್ತಡಗಳಿರಲಿಲ್ಲ. ಅವರು ಸಲಹೆ ಇಚ್ಛಿಸಿದಾಗ ನಾನು ಸಹಕರಿಸುತ್ತಿದ್ದೆ.  ನನ್ನ ದೊರೆಯ ಬಗ್ಗೆ ನನಗೆ ಬಹಳ ಅಭಿಮಾನವಿದೆ. ಅವರು ತಮ್ಮ ತಂದೆಯಂತೆ ಹೆಂಡತಿಯ ಕೈಗೊಂಬೆಯಾಗಲಿಲ್ಲ.  ನನ್ನನ್ನು ಎಂದಿಗೂ ಅಗೌರವದಿಂದ ಕಾಣಲಿಲ್ಲ" ಶಾಹಜಹಾನನನ್ನು ಎದೆಯಾಳದಿಂದ ಪ್ರಶಂಸಿದಳು ಮುಮತಾಜ.

"ಮುಮತಾಜಳಿಲ್ಲದ ಕ್ಷಣಗಳು ನನ್ನ ಪಾಲಿಗೆ ನರಕವೆನಿಸಿದ್ದವು.  ಆಕೆ ನನ್ನ ಕಣ್ಣಿದುರಿಗೆ ಸದಾ ಇರಬೇಕೆಂದು ಹಂಬಲಿಸುತ್ತಿದ್ದೆ.  ಅವಳ ನಗುಮೊಗದ ಬೆಳಕು ನನ್ನನ್ನು ಅಪೋಷಿಸಿಬೇಕೆಂದುಕೊಳ್ಳುತ್ತಿದ್ದೆ.  ಹೀಗಿದ್ದಾಗಲೇ ನನ್ನ ಜೀವನದಲ್ಲಿ ಮುಸಿಬತ್ ಎದುರಾಯಿತು.  ನನಗೆ ರಾಜ್ಯಾಭಿಷೇಕವಾದ ಎರಡನೆಯ ವರ್ಷದ ಸಮಯ.  ದಖನ್‍ಲ್ಲಿ ಖಾನ್ ಜಂಹಾ ಲೋದಿಯ ವಿದ್ರೋಹವನ್ನು ಹತ್ತಿಕ್ಕಲು ನಾನು ಹೊರಡಬೇಕಾಯಿತು.  ಮುಮತಾಜ್‍ಳೂ ನನ್ನ ಜೊತೆಗಿದ್ದಳು.  ಆಗ ಆಕೆ ಗರ್ಭವತಿ.  ಹೆಣ್ಣು ಕೂಸಿಗೆ ಜನ್ಮಕೊಡುವ ಸಂದರ್ಭ ಅವಳ ಪ್ರಕೃತಿಯಲ್ಲಿ ಗಡಬಡ ಆಯಿತು.  ಅವಳ ಸ್ಥಿತಿ ನೋಡಿ ನಾನು ಆಘಾತಗೊಂಡೆ.  ಅವಳ ಮುಖವು ಹಳದಿ ವರ್ಣಕ್ಕೆ ತಿರುಗಿತ್ತು" ಶಾಹಜಹಾನನ ಗಂಟಲು ಬಿಗಿದಿತ್ತು.

ಕ್ಷೀಣ ಸ್ವರದಲ್ಲಿ ಉಲಿದಳು ಮಮತಾಜ "ನನ್ನ ದೊರೆಯ ಬಾಡಿದ ಮುಖ ಕಂಡು ಸಂಕಟ ಅನುಭವಿಸಿದೆ.  ಕಣ್ಣಲ್ಲಿ ನೀರು ಒಂದೇ ಸವನೇ ಧುಮ್ಮಿಕ್ಕಿತು. ಅವನನ್ನು ನಾನು ಅಗಲುವ ಹೊತ್ತು ಸಮೀಪಿಸಿತು.  ನನ್ನನ್ನು ಕಳೆದುಕೊಳ್ಳಲು ಅವನಿಗೆ ಬಿಲ್‍ಕುಲ್ ಮನಸ್ಸಿರಲಿಲ್ಲ. ನನಗೂ ಅಷ್ಟೆ ಅದರೆ ಪರವರ್ದಿಗಾರನ ಇಚ್ಛೆ ಬೇರೆ ಇತ್ತೇನೋ !  ನಾನು ಯಾತನೆ ನಡುವೆಯೂ ದೊರೆಯ ಹಸ್ತವನ್ನು ನನ್ನ ಹಸ್ತದ ಮೇಲೆ ಇರಿಸಿಕೊಂಡೆ  ...... ನನ್ನ ಸಾವಿನ ಬಗ್ಗೆ ಅವನಿಗೂ ಮನವರಿಕೆಯಾಯಿತೇನೋ.  ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆಂದು ಹೇಳಲು ಪದಗಳೇ ಇಲ್ಲ ಎಂದು ಗೋಳಾಡಿದ.  ಸಾವಿನ ಕೊನೆಯಲ್ಲಿ ನಾನು ಪ್ರಾರ್ಥಿಸಿಕೊಂಡೆ ದೊರೆ, ನೀವು ನನ್ನನ್ನು ಪ್ರೀತಿಸುವುದೇ ನಿಜವಾದರೆ ನನ್ನ ಸಾವಿನ ನಂತರ, ನನ್ನ ಮಕ್ಕಳ ಕ್ಷೇಮದ ಸಲುವಾಗಿ ನೀವು ಬೇರೆ ಮದುವೆ ಆಗಬಾರದು.  ನನ್ನ ಹೆಸರು ಈ ಭೂಮಿಯ ಮೇಲೆ ಶಾತ್ವತವಾಗಿ ಉಳಿಯಲು ಭವ್ಯವಾದ ಸ್ಮಾರಕವೊಂದನ್ನು ನಿರ್ಮಿಸಬೇಕು ಎಂದು, ದೊರೆ ನನ್ನ ವಚನವನ್ನು ಹಾರ್ದಿಕವಾಗಿ ಸ್ಟೀಕರಿಸಿದ. ನಾನು ಸಮಾಧಾನದಿಂದ ಕಣ್ಮುಚ್ಚಿಕೊಂಡೆ."

ತೃಪ್ತಿಯಿತ್ತು ಅವಳ ಧ್ವನಿಯಲ್ಲಿ.

"ನನ್ನ ಮುಮತಾಜಳ ಅಮರ ಪ್ರೇಮದ ಕುರುಹು ಇದು. ಅವಳನ್ನು ನಾನು ಇಲ್ಲಿಯೇ ಕಬರ್‍ನಲ್ಲಿ ಮಲಗಿಸಿದ್ದೇನೆ.  ನಾನೂ ಅವಳೊಂದಿಗೆ ಬೆರೆತಿದ್ದೇನೆ.  ಆಗಲೇ ಸೂರ್ಯ ಮುಳುಗಿದ.  ಒಳಗೆ ಮೋಂಬತ್ತಿ ಉರಿಯುತ್ತಿದೆ.  ಅದರ ಬೆಳಕಿನಲ್ಲಿ ಅವಳ ಗೋರಿಯನ್ನು ಒಮ್ಮೆ ನೋಡು ಮುಸಾಫೀರ್" ಶಾಹಜಹಾನನ ಮಾತು ಬಾನುಲಿಯಂತೆ ಕೇಳಿಸಿತ್ತು.

"ಸರ್ ಬನ್ನಿ, ಒಳಗೆ ಹೋಗಲು ನಮ್ಮ ಸರದಿ ಬಂದಿದೆ" ಕೂಗಿ ಕರೆದರು ಮಹೇಶ.  ಜನರಿಗೋ ಕಬರ್ ನೋಡುವ ಜರೂರತೆ.  ನಾನೂ ಅವಸರದ ಹೆಜ್ಜೆ‌ ಇರಿಸಿದೆ. ಒಳಗೆ ಮೊಂಬತ್ತಿ ಢಾಳವಾಗಿ ಬೆಳಗತೊಡಗಿತ್ತು.  ಕಬರ್‍ನ ಮೇಲಿನ ಕಪ್ಪು ಅಕ್ಷರಗಳು ಸ್ಪಷ್ಟವಾಗಿ ಗೋಚರಿಸಿದ್ದವು.  ಈ ಗೋರಿ ಅಂಜುಮಂದ ಬಾನು ಬೇಗಂ ಉರ್ಫ್ ಮುಮತಾಜಳದು.  ೧೬೩೧ರಲ್ಲಿ ಅವಳು ಮೃತಳಾದಳು.  ಸ್ವರ್ಗದ ದೇವತೆಗಳು ಅವಳನ್ನು ಭೇಟಿಯಾಗಲು ಬಂದರು ಮತ್ತು ಅವರು ಉಲಿದರು. "ಮುಮತಾಜಳ ವಾಸಸ್ಥಾನ ಸ್ವರ್ಗದಲ್ಲಿ ಶಾಶ್ವತವಿದೆ ! " 

ತಾಜಮಹಲು ಬಿಟ್ಟು ಬರಲು ನನಗೆ ಮನಸ್ಸಾಗಲಿಲ್ಲ.  ಆದರೆ ವೀಕ್ಷಣೆಯ ಸಮಯ ಮುಗಿದಿತ್ತು ಜನರೊಂದಿಗೆ ನಾನು ಭಾರವಾದ ಹೆಜ್ಜೆ ಇರಿಸಿದೆ.

"ಇನ್ನಷ್ಟು ಹೊತ್ತು‌ಇಲ್ಲೆ‌ಇರಬೇಕನಿಸಿತ್ತು ನನ್ಗ ?" ದ್ವಾರ ಬಾಗಿಲು ದಾಟುತ್ತ ಹೇಳಿದೆ ನಾನು. "ನಿಮ್ಗ ತೃಪ್ತಿ ಆಗದಿದ್ರ ಮತ್ತಽಽ ಬರೂಣು ಬರ್‍ರಿ" ಎಂದರು ಶಿರಹಟ್ಟಿಮಠ.

"ನಾಳೆ ಜಯಪುರಕ್ಕೆ ಹೋಗಬೇಕಲ್ಲ" ಬಾಗವಾನ ನೆನಪಿಸಿದರು. 

"ನಾಡದು ಹುಣ್ಣಿಮೆ. ಬೆಳದಿಂಗಳಲ್ಲಿ ತಾಜಮಹಲ್ ನೋಡಲು ಅವಕಾಶ ಇರುವುದು"  ಎಂದರು ಮುರುಗನ್. "ನಾವು ಈ ಅವಕಾಶ ತಪ್ಪಸ್ಗೋಬಾರ್ದು" ಕೂಡಲೇ ಹೇಳಿದೆ ನಾನು. "ನಾವು ತೀಕೀಟಿಗೆ ಪ್ರಯತ್ನಿಸುತ್ತೇವೆ" ಎಂದರು ಮಹೇಶ.

ವ್ಯಾನ್ ಪಾರ್ಕ್ ಮಾಡಿದ ಕಡಗೆ ನಾವು ನಡೆಯುತ್ತಲೇ ಬಂದೆವು.  ಮುರುಗನ್ ನನ್ನ ಪಕ್ಕದಲ್ಲಿಯೇ ಇದ್ದರು.  ತಾಜಮಹಲ್ ಬಗ್ಗೆ ಆವರಿಗೆ ಉತ್ಕಟ ಪ್ರೀತಿಯಿತ್ತು. ಅದರ ನಿರ್ಮಾಣದ ಸಂಗತಿಗಳನ್ನು ಅವರು ರೋಚಕವಾಗಿ ಹೇಳುತ್ತಲೇ ಇದ್ದರು.

ನಮ್ಮನ್ನು ನೋಡಿದ ಡ್ರೈವರ್ ರಸೀದ್ ವ್ಯಾನ್ ತಂದು ರಸ್ತೆಗೆ ನಿಲ್ಲಿಸಿದ.  ಅಲ್ಲಿದ್ದ ಹೋಟೇಲಿನಲ್ಲಿ ಚಹ ಕುಡಿದು ವ್ಯಾನ್ ಹತ್ತಿದೆವು.  ರಸೀದನ ಹತ್ತಿರ ಬಂದ ವ್ಯಕ್ತಿಯೊಬ್ಬ ಸಲಾಂ ಸಾಬ್ ಎಂದ.

"ಕ್ಕಾ ಬೋಲ್ತಾ ಹೈ ಬಾದಶಹಾ? ತುಮ್ಹಾರೆ ಬೇಗಂ ಸಾಹೇಬಾ ಮಿಲ್ ಗಯಿ ನಾ?" ರಸೀದ್ ಕೇಳಿದ.  ಆ ವ್ಯಕ್ತಿ ಮಾತಾಡದೆ ಗಂಭೀರವಾಗಿ ನಿಂತ.  ರಸೀದ್ ಐದು ರೂಪಾಯಿಯ ನಾಣ್ಯವೊಂದನ್ನು ಅವನ ಕ್ಕೆಗೆ ಕೂಟ್ಟು "ಚಲೋ ಭೈ, ಚಾಯ್ ಪೀವೋ" ಎಂದ.  ಖುಷಿಯಾಗಿ ಆ ವ್ಯಕ್ತಿ ಸೆಲ್ಯುಟ್ ಹೊಡೆದು ಪಕ್ಕಕ್ಕೆ ಸರಿದ.  ಅವನ ಮುಖ ನನಗೆ ಅಸ್ಪಷ್ಟ ಕಂಡಿತು.

                    - ೨ -

ಕುದುರೆ ಗಾಡಿಯಲ್ಲಿ ಕುಳಿತು ಆಗ್ರಾದ ಬೀದಿಗಳನ್ನು ಸುತ್ತುವ ಆಸೆಯಿತ್ತು ನನಗೆ.  ಭಾರಿ ಎತ್ತರದ ಕುದುರೆಯ ಜಟಕಾಗಳು ಮೊಗಲ ಬಾದಶಹದ ಕಾಲವನ್ನು  ನೆನಪಿಸಿಕೊಡುವಂತೆ ಓಡಾಡತೊಡಗಿದ್ದವು. "ಲಾಲ್ ಕಿಲ್ಲಾ ನೋಡಲು ಜಟಕಾದಾಗ ಹೋಗುಣು" ಎಂದೆ ನಾನು.  "ನೋಡುವ ಸ್ಥಳಗಳು ದೂರದಲ್ಲಿವೆ.  ಜಟಕಾದಲ್ಲಿ ಹೋದರೆ ಸಮಯ ಸಾಲುದಿಲ್ಲ" ಎಂದರು ಮಹೇಶ.  ನಾನು ಮತ್ತೆ ಟ್ರ್ಯಾಕ್ಸ್ ಹತ್ತಬೇಕಾಯಿತು.  ಆಗ್ರಾದ ಕೋಟೆಯ ಹೆಬ್ಬಾಗಿಲಿನಲ್ಲಿ ಒಳ್ಳೆಯ ಗೈಡ್ ಸಿಕ್ಕ.  ಅವನ ಇತಿಹಾಸ ಪ್ರಜ್ಞೆ ಚುರುಕು ಮತ್ತು ಲವಲವಿಕೆಯದ್ದಾಗಿತ್ತು.  ಬಹಾದ್ಹೂರವ ಮೊಗಲ್ ಬಾದಶಹ ಆಕಬರ್ ನಿರ್ಮಿಸಿದ ಕೆಂಪುಕಲ್ಲಿನ ಕೋಟೆ ಅತ್ಯಂತ ಅದ್ಭುತ, ಅಲ್ಲಿನ ಜಹಾಂಗೀರ್ ಮಹಲ್, ಅಂಗೂರಿಬಾಗ್, ಖಾಸಮಹಲ್, ದಿವಾನ್-ಏ-ಖಾಸ್, ಶೀಶ್ ಮಹಲ್‍ಗಳ ವೈಭವಗಳನ್ನು ಆಸ್ವಾದಿಸುತ್ತ ಸುಮ್ರಾನ್ ಬುರ್ಜ್ ತಲುಪಿದೆವು.  ಪತ್ನಿ ನೂರಜಹಾನ್‍ಳಿಗೆಂದೇ ಜಹಾಂಗೀರ್ ನಿರ್ಮಿಸಿದ ಈ ಇಮಾರತು ಅಮೂಲ್ಯ ಮತ್ತು ಬಣ್ಣ ಬಣ್ಣದ ಕಲ್ಲುಗಳಿಂದ ಆಕರ್ಷಕವೆನಿಸಿತ್ತು.  ಇಲ್ಲಿಯೇ ಶಾಹಜಹಾನ್‍ನ ಅವಸಾನನವಾಗಿದ್ದೆಂದು ಗೈಡ್ ಹೇಳಿದ.  ದೊರೆ ತನ್ನ ಆಕ್ಕರೆಯ ಪುತ್ರಿ ಜಹಾನ್ ಆರಾಳ ತೊಡೆಯ ಮೇಲೆ ಮಲಗಿಕೂಂಡೆ ಕೊನೆಯ ಉಸಿರು ಇರುವವರೆಗೆ ತಾಜಮಹಲ್ ನೋಡುತ್ತಿದ್ದನಂತೆ.  ಇಲ್ಲಿಂದ ಮುಮತಾಜಳ ಸಮಾಧಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಹೊಳೆವ ಚಂದ್ರ ತುಕಡಿಯೋ, ಸ್ವರ್ಗದಿಂದ ಭೂಮಿಗೆ ಬಿದ್ದ ಒಂದು ಸುಂದರ ಮಹಲೋ ಎಂಬಂತ್ತಿದ್ದ ತಾಜ್‍ಮಹಲ್‍ನ್ನು ನಾನು ಹೃದಯ ತುಂಬಿಕೊಂಡೆ.

ಆ ಜಾಗೆಯಿಂದ ಕದಲುವಷ್ಟರಲ್ಲಿ `ಸಲಾಂ ಸಾಹೇಬ್' ಎಂಬ ಧ್ವನಿ ಕೇಳಿಸಿತು.
"ಸಲಾಂ ಅಮರಬಾಬು, ಠೀಕ್ ಹೈನಾ ?' ಗೈಡ್ ಕೇಳಿದ.  ನಾನತ್ತ ಹೊರಳಿದೆ.  ನಿನ್ನೆ ತಾಜ್‍ನ ಬಳಿ ಕಂಡ ವ್ಯಕ್ತಿ ಕುತೂಹಲ ಹುಟ್ಟಿಸಿದ.  ಮುಂದೆ ಬರುತ್ತಿದ್ದಂತೆ ಗೈಡನನ್ನು ಕೇಳಿದೆ ನಾನು "ಆ ಅಮರಬಾಬು ಯಾರು ?"

"ಇದೇ ಊರಿನವನು. ಬಹಳ ದಿನಗಳಿಂದ ಈ ಕಿಲ್ಲಾ ತಾಜಮಹಲ್ ಎಂದು ಸುತ್ತಮುತ್ತ ಓಡಾಡಿಕೊಡಿರುತ್ತಾನೆ.  ಎಷ್ಟೋಜನ ಆವನನ್ನು ಪಾಗಲ್ ಎನ್ನುತ್ತಾರೆ.  ಆದರೆ ಆವನು ಹಾಗೆ ವರ್ತಿಸುವುದಿಲ್ಲ ನನ್ನ ನೋಡಿದಾಗಲೆಲ್ಲ ಸಲಾಂ ಹೇಳುತ್ತಾನೆ.  ಪಾಪ, ಆವನು ಪ್ರೇಮಿಸಿದ ಹುಡುಗಿ ಪ್ರೀತಿ, ನೀಚರಿಗೆ ಬಲಿಯಾದಳು.  ಇವನು ಆಕೆಯನ್ನು ಹುಡುಕುತ್ತ ಈಗಲೂ ಆಲೆದಾಡುತ್ತಿದ್ದಾನೆ." ಗೈಡ್ ಇಷ್ಟು ಹೇಳಿ ಮುಖ್ಯ ದ್ವಾರದಲ್ಲಿ ನಮ್ಮನ್ನು ಬೀಳ್ಕೊಟ್ಟು ಬೇರೆ ಪ್ರವಾಸಿಗರತ್ತ ಸರಿದು ಹೋದ.

"ನಾವೀಗ ಊಟಕ್ಕೆ ಹೋಗೋಣ" ಎಂದರು ಮಹೇಶ.
"ಸಾಸಿವೆ ಎಣ್ಣಿ ಊಟ ಬ್ಯಾಡ. ಗಂಟಲು ಕೆರಿತೈತಿ" ಹಂಚಾಟೆ ಹೇಳಿದರು.
"ತುಸು ದೂರದಲ್ಲಿ ಉಡುಪಿ ಹೋಟೆಲು ಇದೆ. ನಮ್ಮ ಕಡೆಗಿನ ಊಟ ಸಿಗುವುದು" ಎಂದರು ಮುರುಗನ್.  ಅರ್ಜುನ ಕೂಡಲೇ ಸಮ್ಮತಿಸಿದರು.  ವ್ಯಾನು ಏರಿ ಕುಳಿತೆವು.

ಕೆಂಪು ಕಿಲ್ಲಾದ ಗುಂಗಿನಲ್ಲಿದ್ದ ಕೋರಟಕರ "ಮೊಗಲ್ ಬಾದಶಹರು ಸೌಂದರ್ಯ ಆರಾಧಕರು!" ಎಂದು ಸಂತಸ ವ್ಯಕ್ತಪಡಿಸಿದರು.

"ಅದಕ್ಕೆಽಽ ಆವರಿಗೆ ತಾಜಮಹಲ್‍ನಂಥ ಸುಂದರ ಇಮಾರತಿ ಕಟ್ಟಾಕ ಸಾಧ್ಯ ಆತು"  ಶಿರಹಟ್ಟಿಮಠ ಸಾಕ್ಷಿಯೊದಗಿಸಿದರು.

ತಾಜ್ ಮತ್ತೆ ನನ್ನ ಕಣ್ಣಿದುರಿಗೆ ಬಂದು ನಿಂತಿತು. ಜೂತೆಗೆ ಅಮರ ಬಾಬು ಕೂಡ.  ಏನವನ ಕಥೆ ? ಕುತೂಹಲ ನನ್ನೊಳಗ ಹೆಪ್ಪುಗಟ್ಟಿತ್ತು.

"ನಾನು ತಾಜಮಹಲ್ ಖರೀದಿಸಬೇಕು" ಊಟದ ನಡುವೆ ಹೇಳಿದೆ ನಾನು.

"ಆಗ್ರಾನ ಖರೀದಿ ಮಾಡ್ಕೊಂಡು ಹೋಗ್ರಲ್ಲಾ" ಕೋರಟಕರ ತಟ್ಟನೆ ಜೋಕ್ ಮಾಡಿದರು.

"ಹತ್ತಾರು ಗೆಳೆಯರು ಹಣಾ ಕೊಟ್ಟಾರ ಅವರಿಗೆ ಸಂಗಮವರಿ ಕಲ್ಲಿನ ತಾಜ್, ಮಾದರಿಗಳನ್ನ ಒಯ್ಯಬೇಕು" ಎಲ್ಲರ ನಗುವಿನ ಮಧ್ಯೆ ಹೇಳಿದೆ ನಾನು.

"ನಾಳೆ ನಿಮ್ಮನ್ನು ಹ್ಯಾಂಡಿಕ್ರಾಫ್ಟ್ ಅಂಗಡಿಗೆ ಕರೆದುಕೂಂಡು ಹೋಗ್ತೇನೆ. ಅಲ್ಲಿ ನಿಮಗೆ ಬೇಕಾದ ಮಾದರಿಗಳು ಸಿಗ್ತಾವೆ" ಮುರುಗನ್ ಹೇಳಿದರು.

                - ೩ -

ಹುಣ್ಣಿಮೆಯ ಬೆಳದಿಂಗಳಲ್ಲಿ ತಾಜ್ ನೋಡುವ ಅತ್ಯಾಸಕ್ತಿಯಿಂದ ಜನಸಂದಣಿ ವಿಪರೀತವಾಗಿತ್ತು.  ಸೌಂದರ್ಯಾನುಭೂತಿಗಾಗಿ ತವಕಿಸುವ ಮನುಷ್ಯನ ನಿತಾಂತ ಆಸ್ಥೆ ಕಂಡು ಸಂತಸವೆನಿಸತು ನನಗೆ.  ಪ್ರಪಂಚ ಕ್ರೂರವಾಗುತ್ತ ನಡೆದಿದೆ.  ಜೀವ ಪ್ರೀತಿಯ ಅಮಾಯಕರನ್ನು ಚಾಕೂ, ಮಚ್ಚು, ಖಡ್ಗ ತ್ರಿಶೂಲಗಳಿಂದ ಇರಿದಿರಿದು ಕೊಲ್ಲಲಾಗುತ್ತಿದೆ.  ಬಾಂಬು ಸ್ಪೋಟಿಸಿ ಛಿದ್ರಿಸಲಾಗುತ್ತಿದೆ.  ಬದುಕಿಸುವ ಪ್ರಕೃತಿಯನ್ನು ಅದರ ಚೆಲುವನ್ನು ನಿರ್ದಾಕ್ಷಿಣ್ಯವಾಗಿ ವಿಕಾರಗೊಳಿಸುವ, ಅಧಮವಾಗಿ ಉಡಾಯಿಸುವ ರಾಕ್ಷಸಿ ಪ್ರವೃತ್ತಿಯವರಿಗೆ ಎಲ್ಲವನ್ನೂ ಸುಡಗಾಡು ಮಾಡುವ ತವಕ. ಚಿಂತಿತನಾಗಿದ್ದ ನಾನು.  ಕೋರಟಕರ ಬಾಳೆಹಣ್ಣು ಹುಡುಕಿಕೂಂಡು ಹೋಗಿದ್ದರು.  ಅವರ ಜೊತೆಯಲ್ಲಿ ಶಿರಹಟ್ಟಿಮಠ ಇದ್ದರು ಬಾಗವಾನ, ಮಹೇಶ, ಮುರುಗನ್ ತಿಕೀಟು ಕೌಂಟರ್‍ನ ಸರದಿಯಲ್ಲಿದ್ದರು.

ಅಮರಬಾಬು ದೂರದಿಂದ ಬರುವುದು ಕಾಣಿಸಿತು. "ಸರ್, ಆ ವ್ಯಕ್ತಿ ಈ ಕಡೆಗೆ ಬರಾಕ ಹತ್ಯಾನ" ನಾನು ಹಂಚಾಟೆಯವರಿಗೆ ಹೇಳಿದೆ. "ಅವನ ಬಗ್ಗೆ ನಿಮಗೊಳ್ಳೆ ಆಸಕ್ತಿ ಹುಟ್ಟಿಕೊಂಡೈತಿ" ಎಂದರವರು.  ಅವನು ನಮ್ಮ ವ್ಯಾನ್ ಸಮೀಪ ಬಂದ.  ತುಸು ದೂರದಲ್ಲಿ ನಿಂತು ಸಿಗರೇಟು ಸೇದುತ್ತಿದ್ದ ರಸೀದನಿಗೆ ಮಾಮೂಲಿಯಾಗಿ `ಸಲಾಂ' ಹೇಳಿದ. ಹೊಗೆ ಉಗುಳುತ್ತ ರಸೀದ್ "ಕಲ್ ಪಾಂಚ್ ರುಪೆ ದೇದಿಯಾ ನಾ ?" ಎಂದ.

"ಜೀ..ಸಾಬ್" ಸೆಲ್ಯೂಟ್ ಮಾಡಿದ ಕೈಯನ್ನು ಹಣೆಯ ಮೇಲಿಂದ ತೆಗೆಯದೆ ಹೇಳಿದ ಆಮರಬಾಬು.  "ಫಿರ್..ಕ್ಯಾ ಚಾಯಿಯೆ?" ಧ್ವನಿಯೆತ್ತರಿಸಿದ ರಸೀದ್.  ಈಗ ಅಮರಬಾಬು ಮಾತಾಡಲಿಲ್ಲ. ಮೈಮೇಲಿನ ಹರಕು ಶರ್ಟು ಬಿಚ್ಚಿ ಮೌನವಾಗಿ ವ್ಯಾನ್ ಮೇಲಿನ ಧೂಳು ಒರೆಸತೊಡಗಿದ.  ಅವನದು ಮೂವತ್ತು ಮೂವತ್ತೈದರ ಪ್ರಾಯ ಇರಬಹುದು. ಎತ್ತರದ ಸಪೂರ ದೇಹ.  ಮುಖದ ಕಾಂತಿಯನ್ನು ಮರೆಮಾಚಿದ ಕುರುಚಲು ಗಡ್ಡ-ಮೀಸೆ.  ತಲೆತುಂಬ ದಟ್ಟ ಜಿದ್ದುಗಟ್ಟಿದ ಗುಂಗುರು ಕೂದಲು.  ದಿಟ್ಟಿಸುವ ಕಣ್ಣುಗಳಲ್ಲಿ ಮಡುಗಟ್ಟಿದ ನೈರಾಶ್ಯ.  ವ್ಯಾನ್ ಮೇಲಿನ ಧೂಳು ಕೂಡವಿ, ಶರ್ಟನ್ನು ಮುದ್ದೆಮಾಡಿ ಬಗಲನಲ್ಲಿಟ್ಟುಕೊಂಡು ನಿಂತ ಆಮರಬಾಬು. ಅವನ ವಿಶಾಲ ಎದೆಯಲ್ಲಿದ್ದ ಹಚ್ಚೆಯಲ್ಲಿ ತಾಜಮಹಲ ಚಿತ್ತಾರ ಕಂಡಿತು.  ಅದರ ಮಧ್ಯೆ ಪ್ರೀತಿ ಎಂಬ ಹಿಂದಿ ಲಿಪಿ.  ಅದಮ್ಯ ವಿಸ್ಮಯ ನನಗೆ.  ಅದನ್ನು ಗಮನಿಸಿದವನಂತೆ ರಸೀದ್ ಹೇಳಿದ.  "ಶಾಹಜಹಾನ್ ಬೇಗಮ್‍ಳಿಗೆ ನೆಲದ ಮೇಲೆ ತಾಜಮಹಲ್ ಕಟ್ಟಿಸಿದ.  ಅಮರಬಾಬು ತನ್ನ ಹುಡುಗಿಗಾಗಿ ಎದೆಯ ಮೇಲೆ ತಾಜ್‍ನ ಹಚ್ಚೆ ಹಾಕಿಸಿಕೂಂಡಿದ್ದಾನೆ."

ಅಪಹಾಸ್ಯದ ಧಾಟಿಯಿರಲಿಲ್ಲ ಅವನ ಮಾತಿನಲ್ಲಿ.

"ಅಮರಬಾಬು ನೀನು ಪ್ರೇಮಿಸಿದ ಹುಡುಗಿ ಯಾರು?" ಹಿಂದಿಯಲ್ಲಿ ಕೇಳಿದ ನಾನು.
"ಪ್ರೀತಿ" ಉತ್ಸಾಹದಿಂದ ಹೇಳಿದ ಅವನು.
"ತುಮ್ ಪ್ರೀತಿಕೊ ಬಹುತ್ ಪ್ಯಾರ್ ಕರತೆ ಥೆ ನಾ?" ರಸೀದ್ ಕೇಳಿದ.
"ಆಜ್‍ಬಿ ಕರತಾ ಹೂಂ. ಆಖರಿ ದಮ್‍ತಕ್ ಕರತಾ ರಹುಂಗಾ" ಅಮರಬಾಬುವಿನ ಅಂತರಾಳ ಉಸುರಿತ್ತು.  ಅದರ ಜಾಡಿನಲ್ಲಿಯೇ ಕೇಳಿದೆ ನಾನು "ಫಿರ್ ಓ ಕಹಾನಿ ಕ್ಯಾ ಹೈ?"

ಆಮರಬಾಬು ನನ್ನತ್ತ ಮುಖ ತಿರುಗಿಸಿದ.  ಅವನ ಕಣ್ಣು ಒದ್ದೆಯಾಗಿದ್ದವು.

ಕಸಿವಿಸಿಯೆನಿಸಿತು ನನಗೆ "ಚಾಯ್ ಪೀವೋಗೆ?" ಕೇಳಿದೆ ನಾನು.  ಅವನು ಶರ್ಟಿನಿಂದ ಕಣ್ಣೀರು ಒರೆಸಿಕೊಳ್ಳುತ್ತ `ಹೂಂ' ಎನ್ನುವಂತೆ ಕತ್ತು ಅಲ್ಲಾಡಿಸಿದ.  "ಠೀಕ್ ಹೈ ಚಲೋ" ರಸೀದ್ ಅವನನ್ನು ಮುಂದೆ ಹಾಕಿಕೊಂಡು ನಡೆದ.  ನಾನು ಹಿಂಬಾಲಿಸಿದೆ.

ಚಹದ ಗಾಡಿಯೆದುರು ನಿಂತಾಗ "ಕುಚ್ ತೊ ಖಾಲೇನಾ ?" ಎಂದೆ. ಆಮರಬಾಬು ಎರಡು ಕಚೋರಾಗಳನ್ನು ಗಬಗಬನೆ ತಿಂದು, ಚಹ ಕುಡಿದ.  ಹಸಿವು ಹಿಂಗಿತೇನೋ, ಕಣ್ಣಿನಿಂದಲೇ ಕೃತಜ್ಞತೆ ಸೂಚಿಸಿದ ಆವನು.  ನಾವೂ ಚಹಾ ಕುಡಿದೆವು.  ಹಣ ಇಸಿದುಕೂಳ್ಳುವಾಗ ಹೊಟೇಲಿನವನು ಕೇಳಿದ "ಆಮರಬಾಬುನ ಕಥೆ ಕೇಳಿದಿರಾ?"

"ನಿಮಗೂ ಗೊತ್ತು ಅವನ ಕಥೆ ?" ಪ್ರತಿಯಾಗಿ ಕೇಳಿದೆ ನಾನು.

"ಅವನದು ಮುಗಿಯದ ಕಥೆ" ಎಂದು ನಕ್ಕ ಆವನು.

ಈಚೆಗೆ ಬಂದಾಗ ರಸೀದ್ ಹೇಳಿದ "ಅಮರಬಾಬು, ತಾಜಮಹಲ್‍ನತ್ತ ದೃಷ್ಟಿ ಹೊರಳಿಸಿ `ಏಕ್ ಶಾಹಜಹಾನ್ ಬನವಾ ಕೆ ಹಸಿ ತಾಜಮಹಲ್ | ಹಮ್ ಗರಿಬೋಂಕಿ ಮೊಹಬತ್ ಕಾ ಉಡಾಯಾ ಹೈ ಮಜಾಕ್ ||" ಸಾಹಿಲ್‍ನ ಕವಿತೆಯ ಸಾಲೊಂದನ್ನು ಉಲಿಯುತ್ತ ತಲೆಯ ಮೇಲೆ ಶರ್ಟನ್ನು ಬೀಸುತ್ತ ಹೊರಟೇ ಹೋದ.

ರಸೀದ್ ನಕ್ಕ. ನನಗೆ ನಿರಾಶೆಯೆನಿಸಿತು. ವ್ಯಾನ್ ಹತ್ತಿರಕ್ಕೆ ಬಂದಾಗ ರಸೀದನೆ ಆಮರಬಾಬುವಿನ ಕಥೆ ಹೇಳಿದ.

            - ೪ -

ಆಗ್ರಾ ಶಹರದ ಕೊಳಗೇರಿ ಪ್ರದೇಶದಲ್ಲಿ ತಾಯಿಯೊಂದಿಗೆ ವಾಸವಾಗಿದ್ದ ಆಮರಬಾಬು.  ಸೈಕಲ್ ರಿಕ್ಷಾ ತುಳಿಯುತ್ತಿದ್ದ, ಅವನ ತಂದೆ ಎದೆನೋವಿನಿಂದ ಆಸುನೀಗಿದಾಗ ಅವನಿಗಿನ್ನು ಚಿಕ್ಕ ವಯಸ್ಸು.  ತಾಯಿ ತಾಜ್‍ಮಹಲ್ ಬಗೀಚನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಳು. ಅರಮಬಾಬು ಪ್ರೇಮಿಸಿದ ಹುಡುಗಿ ಪ್ರೀತಿ.  ಅವಳ ತಂದೆ ಆಲ್ಲಿ ಕೂಲಿಯಾಗಿದ್ದ.  ತಾಯಿಗೂ ಕೂಲಿಯ ಕೆಲಸವಿತ್ತು ಅವರ ಝೊಪಡಿಗಳು ಕೂಡ ಎದುರು-ಬದುರಾಗಿದ್ದವು.  ಪರಸ್ಪರರಲ್ಲಿ ಸಂಬಂಧವೂ ಅನ್ಯೋನ್ಯವಾಗಿತ್ತು.  ತಾಜಮಹಲಿನ ಪರಿಸರದಲ್ಲಿಯೇ ಅಮರಬಾಬು-ಪ್ರೀತಿ ಆಡಿಕೊಂಡು ಬೆಳೆದಿದ್ದರು.

ಅವನು ಮೆಟ್ರಿಕ್ಯುಲೇಶನ್ ಓದುತ್ತಿರುವಾಗ ಪ್ರೀತಿ ಏಳನೆಯ ತರಗತಿಯಲ್ಲಿ ಆಭ್ಯಸಿಸುತ್ತಿದ್ದಳು.  ಓದಿನ ಹಂಬಲದ ನಡುವೆಯೂ ಆವನು ಸ್ಯೆಕಲ್ ರಿಕ್ಷಾ ನಡೆಸುತ್ತಿದ್ದ.  ಪ್ರೀತಿಯನ್ನು ಶಾಲೆಗೆ ಬಿಟ್ಟು ಮತ್ತೆ ಕರದು ತರುವ ಜವಾದ್ದಾರಿಯೂ ಅವನದೇ ಆಗಿತ್ತು.  ಆಕೆ ಹೈಸ್ಕೂಲಿಗೆ ಸೇರಿಕೊಂಡ ಮೇಲೆ ಅಮರಬಾಬು ಪಗಾರದ ಮೇಲೆ ರಿಕ್ಷಾ ಓಡಿಸಲಾರಂಭಿಸಿದ್ದ.  ಆದೇ ಹೊತ್ತಿಗೆ ಪ್ರೀತಿ ಮೈನೆರೆದಿದಳು.  ಅವಳ ದೇಹದಲ್ಲಿ ಬದಲಾವಣೆ ಕಂಡಿತ್ತು.  ಪರಿಮಳ ಸೂಸುವ ಹೂವಿನಂತಿದ್ದ ಆಕೆಯ ಮಾತಿನಲ್ಲಿ ನೋಟದಲ್ಲಿ ಲಜ್ಜೆ ಅಪೂರ್ವವೆನಿಸಿತ್ತು.  ಅಮರಬಾಬು ಅವಳಿಗೆ ತೀವ್ರ ಆಕರ್ಷಿತನಾಗಿದ್ದ.

ತಾಜಮಹಲ್ ಅವರಿಬ್ಬರಲ್ಲಿ ಮೊಹಬತ್ ಸೃಜಸಿತ್ತು.  ಯಮುನೆಯ ತೀರ, ಕೆಂಪುಕಿಲ್ಲಾ ಅವರ ಕನಸುಗಳಿಗೆ ರಂಗು ತುಂಬಿದ್ದವು. ಅವರ ಪ್ರೇಮದ ಒಡನಾಟದಿಂದ ಹಿರಿಯರಿಗೆ ಸಂತೋಷ ಅನಿಸಿತ್ತು.  ಪ್ರೀತಿ ಮೆಟ್ರಿಕ್ ಮುಗಿಸುತ್ತಿರುವಂತೆ ಅಮರಬಾಬು ರಿಜರ್ವ್ ಪೋಲೀಸ್ ಹುದ್ದೆಗೆ ಆಯ್ಕೆಯಾಗಿದ್ದ.  ತರಬೇತಿಗೆ ಹೋಗುವ ಮೊದಲು ಮದುವೆಯಾಗಲು ಪ್ರೀತಿ ಅವನನ್ನು ಒತ್ತಾಯಿಸಿದ್ದಳು.  ತನ್ನ ಮೇಲೆ ವಿಶ್ವಾಸವಿಡು ಎಂದಿದ್ದ ಅಮರಬಾಬು. "ನೌಕರಿ ಮಾಡುವವರಿಗೆ ವರದಕ್ಷಿಣೆ ಆಸೆ ಹೆಚ್ಚು" ಎಂದಾಕೆ ಕೆಣಕಿದ್ದಳು.  "ನಾನು ನೌಕರಿ ಮಾಡುವುದು ನಿನ್ನ ಸಲುವಾಗಿ. ನಿನ್ನನ್ನು ರಾಣಿಯಂತೆ ಇಡುವ ಆಸೆ ನನಗೆ" ಅಮರಬಾಬು ಒಡಲ ಮಾತು ಹೇಳಿದ್ದ.

"ನಾನು ಬಡವರ ಹುಡುಗಿ" ವಾಸ್ತವ ನೆನೆಪಿಸಿ ಕೊಟ್ಟಿದ್ದಳಾಕೆ.

"ನಾನೇನು ಅಮೀರನೆ ?" ಅವನು ಕೇಳಿದ್ದ.

"ನೌಕರಿ ಬಂದ ಮೇಲೆ ನೀನು ಆಮೀರನಾಗುತ್ತಿ" ಆಕೆ ಗಂಭೀರವಾಗಿ ಹೇಳಿದ್ದಳು. "ನೀನೂ ಆಮೀರಳಾಗುತ್ತಿ" ಎಂದು ಅವಳನ್ನು ತನ್ನ ಎದೆಯಲ್ಲಿ ಹುದುಗಿಸಿಕೂಂಡಿದ್ದ ಅಮರಬಾಬು.

"ನನ್ನ ಮೇಲೆ ಅಷ್ಟು ಪ್ರೀತಿಯೆ ನಿನಗೆ ?" ಪರೀಕ್ಷಿಸುವಂತೆ ಕೇಳಿದ್ದಳು ಪ್ರೀತಿ.

"ನೀನಿಲ್ಲದಿದ್ದರೆ ಈ ಎದೆಗೆ ಉಸಿರಾಟವೇ ಇಲ್ಲ" ತಟ್ಟನೆ ಹೇಳಿದ್ದ ಆಮರಬಾಬು.

"ಬಾದಶಾಹ ಶಾಹಜಹಾನ ಮುಮತಾಜ್‍ಳನ್ನು ಹೀಗೆ ಪ್ರೀತಿಸುತ್ತಿದ್ದ"

"ಹೂಂ"

"ಅವಳ ಪ್ರೀತಿಗಾಗಿ ಈ ತಾಜ್‍ಮಹಲ್ ಕಟ್ಟಿಸಿದ"

"ಹೂಂ"

"ನನ್ನ ಸಲುವಾಗಿ ನೀನೇನು ಮಾಡುತ್ತಿ?" ಹುಡುಗಾಟ ಮಾಡಿದ್ದಳಾಕೆ
.
"ನಾನಂತೂ ಶಾಹಜಹಾನ ಅಲ್ಲ ಆದರೆ ನನ್ನದೆಯ ಮಹಲಿನೊಳಗೆ ನಿನ್ನನ್ನು ತುಂಬಿಕೂಂಡಿರುತ್ತೇನೆ" ಗಾಢವಾಗಿ ಉಲಿದಿದ್ದ ಆವನು.

ಮರುದಿನ ನೋಡಿದರೆ ಅವನು ಎಂಥ ಸಂಕಟ ಆನುಭವಿಸತೊಡಗಿದ್ದ.  ತನ್ನ ಎದೆಯ ತುಂಬ ತಾಜಮಹಲ್‍ನ ಹಚ್ಚೆ ಹಾಕಿಸಿಕೊಂಡು ಆವಳೆದುರು ನಿಂತಿದ್ದ.
ಹೆಪ್ಪುಗಟ್ಟಿದ ರಕ್ತಕಣಗಳಲ್ಲಿ ಅಸಾಧ್ಯ ಯಾತನೆ.  ಅದು ಪ್ರೀತಿಗಾಗಿಯೇ ಅಂದಿದ್ದ.  ಅವನ ತಾಯಿ, ಆತ್ತೆ-ಮಾವ ಗಾಬರಿಯಾಗಿದ್ದರು.  ಅವನ ಹುಚ್ಚಾಟ ಕಂಡು ನಕ್ಕಿದ್ದರು ಕೂಡಾ. ಪ್ರೀತಿ ತನ್ನೊಡಲ ಉಸಿರಿನಿಂದ ಅವನೆದೆಯ ಗಾಯ ಮಾಯಿಸಿದ್ದಳು.  ಪೋಲೀಸ್ ತರಬೇತಿಗೆ ಸಂತೋಷದಿಂದ ಬೀಳ್ಕೊಟ್ಟಳು.

ಯಮುನೆ ಹರಿಯುತ್ತಿದ್ದಳು. ಸೂರ್ಯ-ಚಂದ್ರ ಬೆಳಗುತ್ತಿದ್ದರು.  ತಾಜಮಹಲ್ ನೋಡುವ ಜನರ ಧಾವಂತದಲ್ಲಿ ಸಡಗರವಿತ್ತು ಒಮ್ಮೆಯಾದರೂ ಪ್ರೀತಿ ಆ ಕಡೆಗೆ ಸುಳಿದಾಡಲಿಲ್ಲ.  ಅಮರಬಾಬು ಅವಳಿಗೆ ನಿರಂತರವಾಗಿ ಪತ್ರ ಬರೆಯುತ್ತಿದ್ದ.

ಆ ದಿನ ಬೆಳಗಿನ ಹೊತ್ತು ಒಲೆಯ ಮುಂದೆ ಕುಳಿತ ಪ್ರೀತಿ ಪರೋಟ ಬೇಯಿಸುತ್ತಿದ್ದಳು.  ಅವಳ ತಾಯಿ-ತಂದೆ ಮನೆಯಲ್ಲಿಯೇ ಇದ್ದರು.  ಇದ್ದಕ್ಕಿದ್ದಂತೆ ಆ ಏರಿಯಾದ ಕಾರ್ಪೋರೇಟರ್ ಸಂಜಯಗುಪ್ತಾ ತನ್ನ ಹೆಂಡತಿ, ಮಗನನೊಂದಿಗೆ ಕಾರಿಳಿದು ಝೊಪಡಿ ಹೊಕ್ಕಿದ್ದ.  ಸುತ್ತುಬಳಸಿ ಮಾತಾಡದೆ ಪರಸ್ಪರ ಬೀಗರಾಗೋಣ ಅಂದಿದ್ದ.  ಅವನ ಮಗ ರಾಜೇಂದ್ರನ ಕಣ್ಣು ಪ್ರೀತಿ ಮೇಲೆ ನೆಟ್ಟಿತ್ತು ಅವಳ ರೂಪಕ್ಕೆ ತಲೆಕೆಡಿಸಿಕೊಂಡಿದ್ದ ಅವನು.  ಅವಳನ್ನೆ ಮದುವೆಯಾಗುವುದಾಗಿ ಹಠ ಹಿಡಿದಿದ್ದ. ತನ್ನ ವರ್ಚಸ್ಸಿನ ಪ್ರಭಾವದಲ್ಲಿ ಉಡಾಳರ ಗ್ಯಾಂಗ್ ಲೀಡರಾಗಿ ಅಧ್ವಾನಗಳನ್ನು ಎಸಗುತ್ತಿದ್ದ ಮಗನನ್ನು ನಿಯಂತ್ರಿಸಲು ಗುಪ್ತಾನಿಗೆ ಈ ಸಂಬಂಧ ಆನಿವಾರ್ಯವೆನಿಸಿತ್ತು.  ಪ್ರೀತಿಯನ್ನು ತನ್ನ ಸೊಸೆಯನ್ನಾಗಿ ಮಾಡಿಕೊಳ್ಳಲು ಅವನು ತೀರ್ಮಾನಿಸಿದ್ದ.  ಪ್ರೀತಿ ಅವನ ನಿರ್ಧಾರವನ್ನು ಮುಲಾಜಿಲ್ಲದೆ ತಿರಸ್ಕರಿಸಿದ್ದಳು.  ಅಮರಬಾಬುನೊಂದಿಗೆ ಆಕೆಯ ನಿಶ್ಚಿತಾರ್ಥ ಆಗಿದೆಯೆಂದು ತಂದೆ-ತಾಯಿ ಸ್ಪಷ್ಟಪಡಿಸಿದ್ದರು. "ಪ್ರೀತಿ ನನ್ನ ಹೆಂಡತಿಯಾಗದಿದ್ದರೆ ನಾನು ವಿಷ ಕುಡಿಯುತ್ತೇನೆ.  ಯಮುನೆಗೆ ಹಾರಿಕೂಳ್ಳುತ್ತೇನೆ" ಎಂದು ರಾಜೇಂದ್ರ ಹೆದರಿಸಿದ್ದ.

"ನೀನು ಸತ್ತರೆ ನನಗೇನು? ನಾನು ಅಮರಬಾಬುನ ಹೆಂಡತಿ" ಪ್ರೀತಿ ದೃಢಪಡಿಸಿದ್ದಳು.  ಅವಮಾನದ ಮುಖ ಹೊತ್ತು ಹೋಗಿದ್ದ ರಾಜೇಂದ್ರ.  ಈ ಸಂಗತಿಯನ್ನು ಯಾರು ಆಮರಬಾಬುವಿನ ಕಿವಿಗೆ ತಾಕಿಸಲಿಲ್ಲ.  ಪ್ರೀತಿ ಅವನಿಗೆ ಬರೆದ ಕಾಗದದಲ್ಲಿ "ನೀನು ಬಂದ ಕೂಡಲೇ ಮದುವೆ" ಎಂದು ತಿಳಿಸಿದ್ದಳು.

ಅದರ ನಂತರದ ನಾಲ್ಕಾರು ದಿನಗಳಲ್ಲಿ ಆಘಾತಕರ ಸುದ್ದಿ ಆಮರಬಾಬುವಿನ ಎದೆಯೊಡೆಸಿತ್ತು.  ಪ್ರೀತಿ ಯಮುನಾ ನದಿಯಲ್ಲಿ ಮುಳುಗಿ ಸತ್ತಳು.  ಧಾವಿಸಿ ಬಂದ ಅಮರಬಾಬು ಆವಳ ಮುಖ ನೋಡಲಿಲ್ಲ.  ಅವಳ ಬೆತ್ತಲೆಯ ಶರೀರ ನೀರಲ್ಲಿ ನೆನೆದು ಮುಟ್ಟಲು ಆಸಾಧ್ಯವೆನಿಸಿತ್ತು.  ಪೋಲೀಸರು ಗಡಿಬಿಡಿಯಲ್ಲಿ ಮಹಜರು ನಡೆಸಿ ನದಿಯ ದಡದಲ್ಲಿಯೇ ಹೂಳುವ ವ್ಯವಸ್ಥೆ ಮಾಡಿದ್ದರು.

ಅಮರಬಾಬು ಅಲ್ಲಿ ಕುಳಿತು ಇಡೀ ದಿನ ರೋಧಿಸಿದ್ದ.

ರಾಜೇಂದ್ರನ ರಾಕ್ಷಸಿಯೊಡಲಲ್ಲಿ ಅವಮಾನದ ಕೆಂಡ ಪ್ರಜ್ವಲಿಸಿತ್ತು.  ಅವನು ಆ ನಡುಹಗಲಲ್ಲಿ ಗುಡಿಸಲು ಹೊಕ್ಕು ಪ್ರೀತಿಯನ್ನು ಕಾರಿನೊಳಕ್ಕೆ ಹಾಕಿಕೊಂಡು  ಹೋಗಿದ್ದ ಅವನೊಂದಿಗೆ ಇನ್ನೂ ನಾಲ್ಕು ಹುಡುಗರಿದ್ದರು.  ಅವಳ ತಲೆಯ ಮತ್ತು ದೇಹದ ಮೇಲೆ ಪರಚಿದ ಗಾಯಗಳಿದ್ದವು.  ಸಾಮೂಹಿಕ ಅತ್ಯಾಚಾರಕ್ಕೆ ಪ್ರೀತಿ ಒಳಗಾಗಿದ್ದಳು.  ಆದರೆ ಪೋಲೀಸರು ತಮ್ಮ ಮಹಜರಿನ ವರದಿಯಲ್ಲಿ ಗಾಯದ ಗುರುತುಗಳನ್ನು ದಾಖಲಿಸಲಿಲ್ಲ.  ವೈದ್ಯರ ಸರ್ಟಿಫಿಕೇಟ್ ಅವಳ ಮೇಲೆ ಆತ್ಯಾಚಾರ ಸಂಭವಿಸಿಲ್ಲವೆಂದು ಖಚಿತಗೊಳಿಸಿತ್ತು. ಪತ್ರಿಕೆಗಳು ಅವಳದ್ದು ಆತ್ಯಹತ್ಯ ಪ್ರಕರಣ ಎಂದು ಹೂತು ಹಾಕಿದ್ದವು.  ರಾಜೇಂದ್ರ ಮತ್ತು‌ ಅವನ ಗೆಳೆಯರು ರಾಜಾರೋಷವಾಗಿ ತಿರುಗಾಡಿಕೊಂಡಿದ್ದರು.  ಪ್ರೀತಿಯ ತಾಯಿ-ತಂದೆಗಳ ಸಂಕಟ, ಹೋರಾಟಗಳು ಗುಪ್ತಾನ ಹಣ ಮತ್ತು ಅಧಿಕಾರಗಳೆದುರು ನಪುಂಸಕವೆನಿಸಿದ್ದವು.  "ನನ್ನ ಪ್ರೀತಿಯನ್ನು ಕೊಂದವರಿಗೆ ಶಿಕ್ಷೆಯಾಗಬೇಕು" ಎಂದು ಆಮರಬಾಬು ರಸ್ತೆಗಿಳಿದು ಕೂಗಿಕೂಂಡ.  ಅವನನ್ನು ಪಾಪ ಎನ್ನುವಂತೆ ನೋಡಿದರು ಜನ.  ಬೂರ್ಜ್ವಾ ವ್ಯವಸ್ಥೆಯಿಂದ ಬೇಸತ್ತ ಅಮರಬಾಬು ಕೆರಳಿದ.  ತಲೆ ಕೆದರಿಕೊಂಡ.  ಅಂಗಿ ಹರಿದುಕೊಂಡ.  ಆಮೇಲೆ ಗಹಗಹಿಸಿ ನಕ್ಕ. ಕೆಲವರು ಆವನನ್ನು ಹುಚ್ಚ ಎಂದರು. ಆ ಅವಸ್ಥೆಯಲ್ಲಿ ಅವನು ಆಗ್ರಾದ ಕಿಲ್ಲಾ, ತಾಜಮಹಲು, ಯಮುನಾ ತೀರಗಳಲ್ಲಿ ಪಿರಿಪಿರಿ ತಿರಿಗಿದ, ಪ್ರೀತಿ
ಸತ್ತಿಲ್ಲ ಎನ್ನುವಂತೆ.

ಹೀಗೆ ತಿರುಗಾಡಿಕೂಂಡು ಬಂದು ಪ್ರೀತಿಯನ್ನು ಹೂಳಿದ ಜಾಗೆಯಲ್ಲಿ ಕುಳಿತುಕೊಳ್ಳುತ್ತಿದ್ದ.  ಅವನ ಅವಸ್ಥೆ ತಾಯಿಯ ಸಂಕಟ ಹೆಚ್ಚಿಸಿತ್ತು.  ಅದು ಕೊರಗಾಗಿ ಅವಳನ್ನು ಬಲಿ ತೆಗೆದುಕೊಂಡಿತ್ತು.  ಅತ್ತೆ ಮಾವ ಅವನನ್ನು ಕರೆದೊಯ್ದು ಮನೆಯಲ್ಲಿ ಇರಿಸಿಕೊಂಡರೂ ಪ್ರೀತಿ.... ಪ್ರೀತಿಯೆಂದು ಕನವರಿಸುತ್ತಿದ್ದ ಅಮರಬಾಬು ಮತ್ತೆಮತ್ತೆ ತಾಜಮಹಲ್ ಪರಿಸರಕ್ಕೆ ಬಂದು ಬಿಡುವನು.  ಪ್ರೀತಿಗೊಂದು ಸಮಾಧಿ ಕಟ್ಟುವ ವಾಂಛೆಯಿಂದ ಏನೋ ಅವನು ಅಲ್ಲಿ ಇಲ್ಲಿಂದ ಕಲ್ಲು ಹೊತ್ತು ತರುವನು. ಆಸ್ಥೆಯಿಂದ ಎಂಬಂತೆ ಸಮಾಧಿ ಕಟ್ಟುವನು.  ಮುಮ್ತಾಜಳ ಭಾಗ್ಯ ಪ್ರೀತಿಗಿರಲಿಲ್ಲ.  ಶಹಜಹಾನನ ದೌಲತ್ತು ಅಧಿಕಾರ ಅಮರಬಾಬುಗಿರಲಿಲ್ಲ.  ತಾಜಮಹಲಿನ ಪಕ್ಕ ತನ್ನ ಪ್ರೀತಿಯ ಹುಡುಗಿಯ ಸಮಾಧಿಯನ್ನು ಸ್ಥಿರಗೊಳಿಸಬೇಕೆನ್ನುವ ಅವನ ಉತ್ಕಟ ಹಂಬಲ ಕ್ಕೆಗೂಡಲಿಲ್ಲ.  ದುರಾದೃಷ್ಟವೆನ್ನುವಂತೆ ವರ್ಷಕ್ಕೊಮ್ಮೆ ಉಕ್ಕಿ ಬರುವ ಯಮುನೆ ಈ ಸಮಾಧಿಯನ್ನು ಕೊಚ್ಚಿಕೊಂಡುಹೋಗಿಬಿಡುತ್ತಾಳೆ.  ಬಡವರ ಪ್ರೀತಿಗೆ ಯಾವ ಕುರುಹುಗಳು ಇರಬಾರದೆನ್ನುವಂತೆ.

ಕಥೆಯನ್ನು ಹೇಳಿ ಮುಗಿಸಿದ ರಸೀದನ ಧ್ವನಿಯಲ್ಲಿ ವಿಷಾದವಿತ್ತು.

ಆಮರಬಾಬುವಿನ ಎದೆಯ ಮೇಲಿನ ತಾಜಮಹಲ್ ಚಿತ್ತಾರ ನನ್ನ ಕಣ್ಣುಕಟ್ಟಿತ್ತು. ಒಳಗೆ ತಳಮಳ, ಮಿಡಿತ.  ಮಹೇಶ ಮತ್ತು ಮುರುಗನ್ ನಮ್ಮೆದುರು ಬಂದು ನಿಂತರು.  ಹುಣ್ಣಿಮೆ ಬೆಳಕಲ್ಲಿ ತಾಜಮಹಲ್ ನೋಡುವ ಜನಸಂದಣಿಯಲ್ಲಿ ತಾವು ಪ್ರವೇಶ ತಿಕೀಟು ದೊರಕಿಸಿಕೊಳ್ಳಲು ಹೋರಾಟ ಮಾಡಿದ ಸಾಹಸಗಾಥೆಯನ್ನು ಉತ್ಸಾಹದಿಂದ ವಿವರಿಸಿದರು.  ನನಗದು ಅಗಾಧವೆನಿಸಲಿಲ್ಲ.  ಆಕಾಶದಲ್ಲಿ ಪೂರ್ಣ ಚಂದಿರ ಆಪೂರ್ವವೆನಿಸತೊಡಗಿದ್ದ.  ತನಗೆ ತಾಜ್ ನೋಡಬೇಕೆನಿಸಲಿಲ್ಲ.

            *****

ಕೀಲಿಕರಣ: ಎಂ.ಎನ್.ಎಸ್. ರಾವ್

ಮಾದಾಯಿ

-ರವಿ ಕೋಟಾರಗಸ್ತಿ

ಹಸಿರು ಸೀರೆಯುಟ್ಟು....
ಭೂಮಡಿಲ... ಮುತ್ತಿಟ್ಟು
ಜಲ-ತಾರೆಗಳ ಅಪ್ಪಿ
ಹರಿದ್ವರ್ಣದ ಆಲಿಂಗನ
ನಿತ್ಯ ಕಾನನಗೋಡೆ ಮಾದಾಯಿ ಮಡಿಲು

ಏರು ತಗ್ಗುಗಳ...
ಬೆಟ್ಟಗಳ ನಡುವಲಿ
ಜುಳು... ಜುಳು... ಸುಮಧುರ
ನಿಸರ್ಗ ನಿನಾದ ಸಂಗೀತ ಚೆಲ್ಲುತ
ಬಳಲಿದ ದಾಹಕೆ ತಂಪೆರೆಯುತಿಹದು

ಗಿರಿ-ಕಾನನಗಳ...
ಜೀವನಾಡಿಯಾಗಿ
ಗಿಲ್ಲ... ಗಿಲ್ಲ ಗೆಜ್ಜೆ ನಾದದಲಿ
ಹೆಜ್ಜೆಯಲಿ ಆಡುತ
ಹಾಡುತ ಹರಿಸುತಿಹಳು
ಮಹಾತಾಯಿ... ಮಾದಾಯಿ

ಗಡಿ-ನಾಡು... ಭೇದವೆಣಿಸದೆ
ದುಡಿವ ಕೈಗಳಿಗೆ ಜೀವಧಾರೆಯಾಗಿ
ಬಹುಜನರ ಒಡಲು ತುಂಬಿಹಳು

ಮಲಪ್ರಭೆಯ ವಾತ್ಸಲ್ಯದಡಿ...
ನೆರಳಾಗಿ... ಎಲ್ಲೆ ಮೀರಿ...
ಅಪ್ಪುಗೆಯಲಿ ಐಕ್ಯವಾಗಿಹಳು

ವೈವಿಧ್ಯದ ಭಾಷೆ-ವೇಷಗಳ
ಬದುಕು-ಕನಸು ಬೇರಾದರೂ
ಒಡ ಹುಟ್ಟಿದವರೆನ್ನುತ ಸಾರುತಲಿ

ಜಗಕ್ಕೆ ಸಾಕ್ಷಿಯಾಗಿಹಳು ಮಾದಾಯಿ
         *****

ಕೀಲಿಕರಣ: ಕಿಶೋರ್‍ ಚಂದ್ರ

ಭಾಷ್ಯ ಬರೆಯುವುದೆಂತು

- ಗಿರಿಜಾಪತಿ ಎಂ. ಎನ್

ಭೂರಮೆಯ ಭೌಮದನಿಕೇತನಕೆ
ಭಾಷ್ಯ ಬರೆಯುವುದೆಂತು ಬರಿ ಮಾತು ||
ಮೌನ ತವಸಿಯ ತಪದಾ ನೆಲೆಯಲಿ
ಮಾತಿಗೆಲ್ಲಿಯ ಕಾಲ ಸಂದಲಹುದು ||

ಎತ್ತರೆತ್ತರ ಶೃಂಗಾರನಂಗವು ಮೌನ
ಹಿಮದ ಪಾದಾದಿಯಲು ಮತ್ತೆ ಮೌನ ||
ಕಂದರಂದ್ಹರದಾಳದಳದಲೂ ನಿಃಶಬ್ದ
ನೀರವ ಉಷೆಗೆ ಸಂಧ್ಯಾ ಧ್ಯಾನ ಯಾನ ||

ಅಮರ ಸಮೀರದಿ ಗಾನ ದೌಘನ
ಮೇಘ ಮಂಡಲದ ತಾಳವಾದನ ||
ಸೃಷ್ಟಿ ಸಮಾಧಿಸ್ಥ ಸ್ಥಿತಿ ಯತಿ ಧ್ಯಾನ
ಋಕ್ಕುಗಳಾ ನಾದದಾ ಬ್ರಹ್ಮ ಬಿಂದು ||

ಕರ್ಮದಾಚೆಯ ವೇದಾಂತ ಸಾರದಲಿ
ಜೀವ ರೂಹಿರೂಪಿನೊಳಗಾತ್ಮ ಸಿಂಧು ||
ಅಂಗಾನಂಗವು ರಂಗ ಬಿನ್ನಪಮಾಟವು
ಅನಂಗ ಸಂಗ-ಸಾಂಗತ್ಯದ ನೋಟವು ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಶೂನ್ಯ

- ಮಸನೊಬ ಫುಕವೊಕ
ಕನ್ನಡಕ್ಕೆ: ಬಂದಗದ್ದೆ ರಾಧಾಕೃಷ್ಣ

ಹುಟ್ಟಿನ ಕಾರಣ ತಿಳಿಯದೇ
ಕಡೆಗೊಮ್ಮೆ ಕಣ್ಣುಮುಚ್ಚಿ ಅರಿಯದ
ಅನಂತದಲ್ಲಿ ವಿಲೀನವಾಗುವುದಷ್ಟೇ
ನಮಗೆ ಗೊತ್ತು.  ಎಂದೋ ಒಮ್ಮೆ ಓದಿದ
ನೆನಪು - ಮೂಲಭೂತವಾಗಿ ಇರುವುದು
ಬರೀ ಪೂರ್ವ ಪಶ್ಚಿಮಗಳಲ್ಲ.  ಹತ್ತು
ಅನಂತ ದಿಕ್ಕುಗಳು.  ಹೌದು, ಮೂಡಣ,
ಪಡುವಣ ಎಲ್ಲಾ ಭ್ರಮೆಗಳು.

ಮೂಡಣ, ಪಡುವಣ
ಅರಿಯದಿರುವುದು ಸತ್ಯಕ್ಕೆ ಹೆಚ್ಚು
ಹತ್ತಿರವಾದುದು.  ವಾಸ್ತವದಲ್ಲಿ ಸೂರ್ಯ
ಎಲ್ಲಿಂದ ಬರುತ್ತಾನೆಂದು ಯಾರಿಗೂ
ಗೊತ್ತಿಲ್ಲ.  ಸಾಕಾರವೇ ನಿರಾಕಾರ,
ನಿರಾಕಾರವೇ ಸಾಕಾರ-ಬುದ್ಧನ
ಬೋಧನೆ ಎಲ್ಲಾ ಅಂಶಗಳನ್ನೂ
ಒಳಗೊಂಡಿದೆ.  ಸ್ಥಾವರ, ಜಂಗಮ
ಎಲ್ಲವೂ ಒಂದೇ.  ಆದರೆ ಎಲ್ಲವೂ
ಶೂನ್ಯ.

ಮನುಷ್ಯನು ಜೀವಿಯೂ
ಅಲ್ಲ.  ನಿರ್ಜೀವಿಯೂ ಅಲ್ಲ.  ಆತ
ಜನಿಸಿಯೂ ಇಲ್ಲ.  ಗತಿಸಿಯೂ ಇಲ್ಲ.  ಆ
ದಿನ ಭತ್ತದ ಕುಯಿಲು ಮಾಡುತ್ತಿದ್ದಾಗ
ಯುವಜನರಿಗೆ ಹೇಳಿದೆ - ವಸಂತದಲ್ಲಿ
ನಾಟಿ ಮಾಡಿದಾಗ ಭತ್ತ
ಮೊಳಕೆಯೊಡೆದು ಜನ್ಮ ಪಡೆಯಿತು.
ಈಗ ಹಣ್ಣಾಗಿದೆ.  ಸತ್ತಂತೆ ಕಾಣುತ್ತಿದೆ.  ಈ
ಹುಟ್ಟುಸಾವಿನ ಆಟ ನಿರಂತರ....

     *****

ಕೀಲಿಕರಣ: ಕಿಶೋರ್‍ ಚಂದ್ರ

ಕರುಣೆಯೇ ಇಲ್ಲ

- ಡಾ || ರಾಜಪ್ಪ ದಳವಾಯಿ

ಕರುಣೆಯೇ ಇಲ್ಲವೆಂದುಕೊಂಡಿದ್ದೆ ಜಗದಲ್ಲಿ
ನೀನು ಸಾಂತ್ವನಗೊಳಿಸಿದ ಮೇಲೆ ಅದು ನಿಜವಲ್ಲ

ನಶ್ವರ, ಜೀವ ಸಾಕಿನ್ನು, ಬದುಕಬಾರದೆಂದಿದ್ದೆ
ಆ ಭಾವ ತಪ್ಪೆನಿಸಿ ನೀನು ನನ್ನ ಬದುಕಿಸಿದೆ

ಸಂಗಾತಕೆ ಜೀವವೇ ಇಲ್ಲವೆಂಬೆನ್ನ ಹಂಬಲ
ನೀನು ಜೊಗೆಯಾದ ಪರಿಯ ನಾನೇಗೆ ನಂಬಲ

ಜೀವನವ ಸಾವು ಗೆದ್ದಿತೆಂದು ಸದಾ ಚಿಂತಿಸಿದೆ
ಅಲ್ಲ ಅಲ್ಲ ಸಾಧ್ಯವಿಲ್ಲೆಂದು ನೀನದ ಹುಸಿ ಮಾಡಿದೆ

ಅಯ್ಯೋ, ಅನಾಥನೆಂದುಕೊಂಡೆ ಜೀವನದಲ್ಲಿ
ನೀ ನನ್ನ ಎದೆಗಪ್ಪಿದ ಮೇಲೆ ಅದೂ ನಿಜವಲ್ಲ

        *****

ಕೀಲಿಕರಣ: ಕಿಶೋರ್‍ ಚಂದ್ರ

ಮಹಾನಗರ ರಸ್ತೆ - ಮರುಚೇತನ

-ರವಿ ಕೋಟಾರಗಸ್ತಿ
ಚಿತ್ರ: ರಾಂಗೋಪಾಲ್ ರಾಜಾರಾಮ್












ಮಹಾನಗರದ ಮುಖ್ಯ ರಸ್ತೆಯಾಗಿದ್ದು
ನನ್ನ ಅಸ್ತಿತ್ವಕ್ಕೆ ನಾನೇ ಶಪಿಸುತ್ತಾ
ತಲೆ ಎತ್ತುವ ಧನ್ಯತೆ ಕಳೆದಿತ್ತು.

ಬಾಯಾರಿದ ಭೂ ಒಡಲು ಹಸಿರಾಗಿಸಲು
ಧಾರಾಕಾರ ವರುಣನ ವಿಜಯೋತ್ಸವ
ತಗ್ಗು-ಗುಂಡಿಗಳಲಿ ನನ್ನ ದೇಹದ ವಸ್ತ್ರಾಪಹರಣ

ಮಾನ ಬಿಟ್ಟವರು ನನ್ನ ಮಾನ ಮುಚ್ಚಲು
ಬರಿ ಉಸುಕು-ಮಣ್ಣು ಚೆಲ್ಲುತ ಗುಳಂವಾಗಿಸುವರು
ಆಡಳಿತ-ಅಧಿಕಾರಿಗಳು ನೂರು ಸಾವಿರ ಲಕ್ಷ ಲಕ್ಷ

ಸ್ವಾಭಿಮಾನ ಮರೆತ ನಗರವಾಸಿಗಳು
ನನ್ನ ಮೈಮೇಲೆ ನಡೆದಾಡುವಾಗೊಮ್ಮೆ
ಏಳುತ್ತ-ಬೀಳುತ ಹಾಕುವರು ಶಾಪ-ತಾಪ

ತಮಗಾದ ಅನ್ಯಾಯ ಪ್ರತಿಭಟಿಸದಿರುವ
ನಗರವಾಸಿ ನಾಗರಿಕ ವರ್ಗದ
ಭವಿಷ್ಯ ಮೆಲುಕಾಡಿಸುತ್ತಾ ಮೈಚಾಚಿ ಮಲಗಿರುವೆ

ಸ್ವಾತಂತ್ರ್‍ಯ ಸಿಕ್ಕು ಅರ್ಧಶತಕವಾದರೂ
ನಡೆದಿರುವವು ನನ್ನಿಹ ಮೈಮೇಲೆ
ಅತ್ಯಾಚಾರ ಭಾಷೆ-ಕೋಮು ದ್ವೇಷದ ಇರಿತಗಳು

ಕಾರ್ಮಿಕರ ಮೌನ ಹೋರಾಟ - ಮುಷ್ಕರ
ಅಬಲೆಯರ ಆರ್ತನಾದ ಅಪಘಾತ ಗಲಭೆಗಳ
ರಕ್ತದ ಮಡುವಿನಲ್ಲಿ ನರಳಾಟ ಕೇಳುತ ಮೌನವಾಗಿರುವೆ.

ಹುಸಿ ಭರವಸೆ ನೊಂದವರ ನಿಟ್ಟುಸಿರು
ಕೇಳುತ ನೋಡುತ ಬೇಸತ್ತು ಮಲಗಿದ್ದೆ
ಪುಳಕಿತಗೊಂಡೆ ಈ ದಿನ ವೀರಯೋಧರ ಶವಯಾತ್ರೆ ತಿಳಿದು

ದಶ ದಶಕಗಳಿಂದ ಬರಿ ಡಂಬಾಚಾರದ
ನಯ - ವಂಚಕರಿಂದ ತುಳಿಸಿಕೊಂಡು ಸಾಕಾಗಿದ್ದ
ಮೈಮನ ಕಾತರಿಸುತ್ತಿದೆ ವೀರಯೋಧನ ಸ್ಪರ್ಶಕ್ಕಾಗಿ

ಮಾತೃ-ಭೂಮಿಯ ಗಡಿ-ಶಿಖರಗಳಲಿ
ಮಡಿದ-ಮಕ್ಕಳು ಮನೆ ಎನ್ನದೆ
ರಾಷ್ಟ್ರಪ್ರೇಮದ ದೃಢತೆಯಲಿ ಶತ್ರುಗಳ ಸದ್ದಡಗಿಸಿ
ಜೀವ ನೀಡಿದ ವೀರ ಆ ಧೀರ ಸೈನಿಕರು

ನಗರ-ನಾಗರಿಕ ಸನ್ಮಾನ-ಹೆಮ್ಮೆಯ ದುಃಖದಿ ಕಣ್ಣೀರು
ಶವಪೆಟ್ಟಿಗೆಯಡಿ ವೀರ ಜವಾನರು
ಕೊನೆ ಮೆರವಣಿಗೆ ಮೈಮೇಲೆ ಸಾಗುವ ಕ್ಷಣ
ರೋಮಾಂಚನದಿ ದೇಹದ ಕಣ ಕಣವೂ ಧನ್ಯ ಧನ್ಯ

ಹೊತ್ತವರು-ಹೆತ್ತವರೆಲ್ಲಾ ಅತ್ತರು ಹೆಮ್ಮೆಯಲಿ
ಸಾಗಿತ್ತು ರಸ್ತೆಯುದ್ದಕ್ಕೂ ಅಂತಿಮ ಶವ ಯಾತ್ರೆ-ಜಾತ್ರೆ
`ಜವಾನ-ಅಮರ ರಹೇ' ಮುಗಿಲು ಮುಟ್ಟಿದ ಘೋಷಣೆ

ತಾಯಿನಾಡಿಗಾಗಿ ಮಡಿದ ವೀರ ಜವಾನರ ಸ್ಪರ್ಶ
ನನ್ನ ಅಸ್ತಿತ್ವದ ಸಾರ್ಥಕತೆಗೆ ಜೀವ ತುಂಬಿತು
ಮರು ಚೇತನದಿ ಈ ತನುವು ಧನ್ಯತೆ ಪಡೆದಿತ್ತು.

         *****

ಕೀಲಿಕರಣ: ಕಿಶೋರ್‍ ಚಂದ್ರ

ಕೋಟೆ

- ಮಸನೊಬ ಫುಕವೊಕ
ಕನ್ನಡಕ್ಕೆ: ಬಂದಗದ್ದೆ ರಾಧಾಕೃಷ್ಣ

ಮನುಷ್ಯರು ಆಕ್ರಮಣ ಮಾಡುವ
ಮತ್ತು ರಕ್ಷಣೆ ಮಾಡುವ ವಿಧಾನವನ್ನು
ಕಲಿತರು.  ಇದರಿಂದಾಗಿ ಆಗುವ
ಪರಿಣಾಮಗಳಿಗೆ ಒಬ್ಬರನ್ನೊಬ್ಬರು
ಅಪಾದಿಸತೊಡಿದರು.  ಆದರೆ ಎರಡೂ
ಕೈಸೇರದೇ ಚಪ್ಪಾಳೆಯಾಗದು
ಕೋಟೆಯನ್ನು ಕಟ್ಟುವುದೇ ಮೊದಲನೇ
ತಪ್ಪು.  ಕೋಟೆ ಕಟ್ಟುವವರು ತಮ್ಮ
ರಕ್ಷಣೆಗಾಗಿ ಎಂಬ ಕಾರಣ ಕೊಟ್ಟರೂ ಅದು
ಆಳುತ್ತಿರುವ ರಾಜನ ಇಚ್ಫೆಯಾಗಿರುತ್ತದೆ.
ಸುತ್ತಲಿನ ಪ್ರದೇಶಗಳ ಮೇಲೆ
ಬಲತ್ಕಾರವಾಗಿ ತನ್ನ ಪ್ರಾಬಲ್ಯ
ಬೀರುತ್ತಿರುತ್ತದೆ.  ಆಕ್ರಮಣಗಳ
ಬೆದರಿಕೆಯಿಂದ ಕೋಟೆ ಕಟ್ಟುತ್ತಿದ್ದೇನೆ
ಎನ್ನುವ ಬಾಯಿ ಬುಡುಕ ಒಳಗೆ ಯುದ್ಧ
ಸಾಮಾಗ್ರಿಗಳನ್ನು ಜಮಾವಣೆ
ಮಾಡುತ್ತಿರುತ್ತಾನೆ.

     *****

ಕೀಲಿಕರಣ: ಕಿಶೋರ್‍ ಚಂದ್ರ

ಸಂಜೆಯ ಸ್ವಗತ

- ಡಾ || ಬಿ. ಪ್ರಭಾಕರ ಶಿಶಿಲ

ಬರಿದೆ ಕಳೆದುದು ಕಾಲ
ಬರೆಯಲಾರದೆ ಮನವ
ತಿರುಗಿ ಬಾರದ ದಿನಗಳ
ಭಿತ್ತಿ ಚಿತ್ತಾರದಲಿ
ಕನಸುಗಣ್ಣಿನ ಕಾವ್ಯ
ಕಳೆದುಕೊಂಡಿದೆ ದನಿಗಳ

    ಯಾರದೋ ಹೋಮ
    ವೈವಾಹಿಕದ ಧೂಮದಲಿ
    ಸೂರೆ ಹೋದುದು ರಾಗವು
    ವರ್ಣರಂಜಿತ ಕದಪು
    ಯಾರಿಗೋ ನೈವೇದ್ಯ
    ಇಂಗಿ ಹೋದುವೆ ಕಂಬನಿ

ಎಲ್ಲೋ ಮರೆಯಲಿ ಚೈತ್ರ
ವೈಶಾಖ ಧೀಂಗಿಣವು
ಬೇಡವೈ ಮಾನಿಷಾದ
ಬೇಟೆಗುಳಿದಿಹುದೇನು
ಮನದ ಬೆಂಗಾಡಿನಲಿ
ಸ್ಥಾಯಿಯಾದುದು ವಿಷಾದ

    ಮೋಡ ನಿಲ್ಲುವುದಿಲ್ಲ
    ಹನಿಯ ಚೆಲ್ಲುವುದಿಲ್ಲ
    ಟಿಸಿಲೊಡೆಯದೆಂದೆಂದು ಕವನ
    ಹೂವೆ ಅರಳದು ಇಲ್ಲಿ
    ಮಕರಂದವೆಲ್ಲಿಂದ
    ಹಾರೀತು ಎಲ್ಲಿ ಭ್ರಮರ?

೨೦೦೩
    *****

ಕೀಲಿಕರಣ: ಕಿಶೋರ್‍ ಚಂದ್ರ

ಸಾವ ಕೊಂದ ಮಗು

- ಕಂನಾಡಿಗಾ ನಾರಾಯಣ

ಮಗುವೊಂದರ ಎಲ್ಲಾ ಸುಖಗಳನ್ನು ಅನುಭವಿಸಿದ ನಾಲ್ಕೈದು ವರ್ಷಗಳ ನಂತರ ಒಬ್ಬ ಮಗನೂ ಹುಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ನನ್ನ ಹೆಂಡತಿಗೆ ಅನ್ನಿಸಲಾರಂಭಿಸಿ, ದಿನವೂ ಪೀಡಿಸಲಾರಂಭಿಸಿದ್ದಳು.  ಕಂಡಕಂಡ ದೇವರುಗಳಿಗೆಲ್ಲಾ ಹರಕೆಹೊತ್ತು, ತಿಂಗಳಾಗುವ ಮೊದಲೇ ಇನ್ನೇನು ತನಗೆ ಗಂಡು ಮಗು ಹುಟ್ಟೇಬಿಟ್ಟಿತೆನ್ನುವಂತೆ ಸಂಭ್ರಮಿಸುತ್ತಿದ್ದಳು.  `ಪಕ್ಕದ ಮನೆಯ ಲತಾಗೆ ಎರಡೂ ಹೆಣ್ಣು ಮಕ್ಕಳು.. ಅವರಪ್ಪಗೆ ಬಹಳ ದುರಾಸೆ, ಅದಕ್ಕೇ ಎರಡೂ ಹೆಣ್ಣು ಆಗಿದ್ದಾವೆ ಅಂತ ಜನ ಆಡಿಕೊಳ್ಳುತ್ತಿದ್ದಾರೆ ರೀ..' ಎಂದು ಸುತ್ತಮುತ್ತಲಿನವರ ಪ್ರವರಗಳನ್ನು ವರ್ಣಿಸುತ್ತಾ, ಈಗಾಗಲೇ ಒಬ್ಬ ಹೆಣ್ಣು ಮಗಳ ಅಪ್ಪನಾಗಿರುವ ನನಗೆ ಇನ್ನೊಂದು ಹೆಣ್ಣುಮಗು ಆಗದಂತಿರಲಿ ಎಂದು ನನಗೇ ಅಸಿಬಿಡಬೇಕೆನ್ನುವಂತೆ ಮಾಡುತ್ತಿದ್ದಳು.

ಅವಳ ಯಾವ ಪೂಜೆಗೆ ಅದ್ಯಾವ ಭಗವಂತ ಒಲಿದನೋ ಕಾಣೆ.  ಐದು ತಿಂಗಳಾಗುತ್ತಿದ್ದಂತೆಯೇ ಯಾವ ಡಾಕ್ಟರರಿಗೋ ಓಲೈಸಿ ತನಗೂ ಗಂಡು ಮಗು ಹುಟ್ಟುತ್ತಿದೆಯೆಂಬ ಸತ್ಯವನ್ನು ತಿಳಿದುಕೊಂಡು ಸಂಭ್ರಮಿಸಲಾರಂಭಿಸಿದ್ದಳು.  ಅವಳ ಖುಷಿ, ಉದ್ವೇಗ ಎಷ್ಟಿತ್ತೆಂದರೆ, ಈ ಪ್ರಪಂಚದಲ್ಲಿ ಈ ವಿಷಯ ಬಿಟ್ಟು ಬೇರೆ ಏನೂ ಇಲ್ಲವೇನೋ ಅಸಿಬಿಟ್ಟಿತ್ತು.  ಒಂದು ವೇಳೆ ಡಾಕ್ಟರರ ಭವಿಷ್ಯ ಸುಳ್ಳಾಗಿ -ತನ್ನ ಕಾಟ ತಪ್ಪಿಸಿಕೊಳ್ಳಬೇಕೆಂದು ಸುಳ್ಳು ಹೇಳಿದ್ದಾರೇನೋ ಅನ್ನಿಸಿ- ಎಲ್ಲಿ ತನಗೆ ಹೆಣ್ಣು ಮಗು ಆಗಿಬಿಡುತ್ತದೋ ಎಂದು ತನ್ನಷ್ಟಕ್ಕೆ ತಾನೇ ಆತಂಕಪಟ್ಟುಕೊಳ್ಳುತ್ತ ಚಡಪಡಿಸಲಾರಂಭಿಸಿದ್ದಳು.  ಅವಳ ತಳಮಳವನ್ನು ಅವಳೇ ತಾಳಲಾರದೇ ಒಂದು ದಿನ ರಾತ್ರೆ ಮೂರೂವರೆ ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಸೇರಿಸಬೇಕಾಯಿತು!

ಆ ಅಪರಾತ್ರಿಯಲ್ಲಿ ಫೋನು ಮಾಡಿ ಡಾಕ್ಟರರನ್ನು ಎಬ್ಬಿಸಿ ಆಸ್ಪತ್ರೆಗೆ ಕರೆಸಿಕೊಂಡದ್ದಾಯಿತು.  ಏಳು ತಿಂಗಳಲ್ಲಿ ಮಗು ಹುಟ್ಟಿದರೆ ಅದರ ಅಂಗಾಂಗಗಳು ಪೂರ್ಣವಾಗಿ ಬೆಳವಣಿಗೆಯಾಗಿರದೇ ತಾಯಿ ಮಕ್ಕಳಿಬ್ಬರ ಜೀವಕ್ಕೂ ಅಪಾಯವಾಗಲೂಬಹುದು ಎಂದು ಡಾಕ್ಟರರು ಮಗುವಿನ ಹುಟ್ಟನ್ನೇ ಮುಂದಕ್ಕೆ ಹಾಕಲು ಏನೆಲ್ಲಾ ಪ್ರಯತ್ನ ಬೇಕೋ ಅದನ್ನೆಲ್ಲಾ ಮಾಡಲಾರಂಭಿಸಿದ್ದರು.  ಎಷ್ಟು ಹೇಳಿದರೂ ಕೇಳದೇ, ತನ್ನಿಂದ ಇನ್ನು ತಡೆದುಕೊಳ್ಳಲಾಗುತ್ತಿಲ್ಲ, ದಯವಿಟ್ಟು ಸಿಜೇರಿಯನ್ ಮಾಡಿ ತೆಗೆದುಬಿಡಿ ಡಾಕ್ಟರರೇ ಎಂದು ಬಡಬಡಾಯಿಸಲಾರಂಭಿಸಿದ್ದಳು.  ಅವರಾದರೂ ಇನ್ನೇನು ಮಾಡಿಯಾರು?  ಇದುವರೆಗೂ ಲೇಬರ್ ಪೇನ್ ಬರದಂತೆ ಕೊಟ್ಟಿದ್ದ ಇಂಜೆಕ್ಷನ ಬದಲಾಗಿ ಹೆರಿಗೆನೋವು ಬರುವಂತಹ ಇಂಜೆಕ್ಷನ್ ಕೊಟ್ಟರು!

`ಸುಮ್ಮನೆ ಕೂರಬಾರದು.. ಒಂದಷ್ಟು ಚೆನ್ನಾಗಿ ಓಡಾಡಬೇಕು..' ಅಂತ ಹೇಳಿ ಹೋದ ಡಾಕ್ಟರರು ಗಂಟೆಯಾದರೂ ತಿರುಗಿ ನೋಡಲೇ ಇಲ್ಲ. ಅದು ಕೆಲಸ ಮಾಡಲು ಇನ್ನೆಷ್ಟು ಹೊತ್ತು ಬೇಕೆಂದು ಅವರಿಗೆ ಗೊತ್ತಿರಬೇಕು.  ಆದರೆ ಈಕೆ ಸುಮ್ಮರಬೇಕಲ್ಲ.. ನನ್ನ ಜೀವ ತಿನ್ನಲಾರಂಭಿಸಿದಳು.  `ಎಂಥ ಆಸ್ಪತ್ರೆ ಅಂತ ತಂದು ಸೇರ್‍ಸಿದ್ರೋ.. ನಾನು ಇಂಗಾದ್ರೂ ಸಾಯ್ಲಿ, ಬೇರೆಯವಳನ್ನ ಕಟ್ಟಿಕೊಳ್ಳಬಹುದು ಅಂತ ಕಾದಿದೀರೇನೋ.. ಹಾಳಾಗೋಗ್ಲಿ, ನನ್ನನ್ನ ಸಾಯ್ಸಾದ್ರೂ ಸಾಯಿಸ್ಬಿಡ್ರೀ.. ನಂಗೆ ತಡೆಯಕ್ಕಾಗ್ತಾಯಿಲ್ಲ..' ಅನ್ನುವುದರ ಜೊತೆಗೆ ಕೈಯ್ಯಿಂದ ಹೊಟ್ಟೆಯೊಳಗಿರುವ ಮಗುವಿನ ಜುಟ್ಟು ಹಿಡಿದು ಹೊರಕ್ಕೆಸೆದುಬಿಡುವವಳಂತೆ ಆರ್ಭಟಿಸಲಾರಂಭಿಸಿದಳು..

ನಾನಾದರೋ ಅವಳ ಸಂಕಟ ನೋಡಲಾರದೇ, ಡಾಕ್ಟರರನ್ನ ಹುಡುಕಿಕೊಂಡು ಹೋಗಿ, ಅವಳ ನೋವನ್ನ ನನ್ನದೇ ನೋವು ಎನ್ನುವಂತೆ ವಿವರಿಸಿ ಏನಾದರೂ ಪರಿಹಾರ ನೀಡಿ ಅಂತ ಕೋರಿಕೊಂಡೆ.  ಕ್ಯೂ ನಿಂತಿದ್ದ ಹತ್ತಾರು ಜನ ಗರ್ಭಿಣಿಯರ ನೋವನ್ನೆಲ್ಲಾ ತನ್ನದೇ ಎನ್ನುವಂತೆ ಹಾಗೂ ಇದೆಲ್ಲಾ ಸಹಜ ಎನ್ನುವಂತೆ ಅವರನ್ನೆಲ್ಲಾ ಸಮಾಧಾಸುತ್ತಿದ್ದ ಡಾಕ್ಟರರು, ನನ್ನ ಕಡೆ ನೋಡಿ ಒಂದು ತಿಳಿನಗೆ ಬೀರಿ ಸುಮ್ಮನಾದರು.

ನನಗೋ ಮತೆ ಮತ್ತೆ ಪೀಡಿಸಲು ಸಂಕೋಚವಾಗಿ ಸುಮ್ಮನೇ ನಿಂತೆ.  ಹೆಂಗಸರ ಈ ಲಿಂಗಸಂಬಂಧೀ ಸಮಸ್ಯೆಗಳನ್ನು ಗಂಡಸಾದ ಆ ಡಾಕ್ಟರರು ಹೇಗೆ ನಿಭಾಯಿಸುತ್ತಾರೋ ಎಂದು ನೋಡುತ್ತಾ ನಿಂತಿದ್ದೆ.  ಒಬ್ಬೊಬ್ಬರದೂ ಒಂದೊಂದು ತರಹದ ನೋವು.. ಕೆಲವರನ್ನ ಒಳ ರೂಮಿಗೆ ಕರಕೊಂಡು ಹೋಗಿ ಪರಿಶೀಲಿಸಿ, ಹೊರಬಂದು ಅರ್ಥವಾಗದ ಭಾಷೆಯ ಪದಗಳನ್ನು ಹೇಳಿ ಏನೇನೋ ಬರೆದುಕೊಡುತ್ತಿದ್ದರು.

ನಾನು ಮತ್ತೂ ಸುಮ್ಮನೆ ನಿಂತಿರುವುದನ್ನು ನೋಡಿ -ಮೌನ ಪ್ರತಿಭಟನೆಯ ರೀತಿ ನಿಂತಿರಬಹುದೆಂದು ಭಾವಿಸಿ- `ಬಾ ನೋಡೋಣ' ಎಂದು ಹೊರಟವರನ್ನು ಹಿಂಬಾಲಿಸಿದೆ. ಹೊಟ್ಟೆಯನ್ನೆಲ್ಲಾ ಹಿಚುಕಿ ನೋಡಿದ ಅವರಿಗೆ ಅದೇನು ಅರ್ಥವಾಯಿತೋ, `ಇನ್ನೂ ಎರಡು-ಎರಡೂವರೆ ಗಂಟೆ ಬೇಕು.. ಕೀಲುಗಳೆಲ್ಲಾ ಸಡಿಲಾಗಬೇಕು.. ಚೆನ್ನಾಗಿ ವಾಕ್ ಮಾಡಿಸಿ ಅಂದರೆ ಸುಮ್ಮನೇ ಇದ್ದೀರಲ್ಲಾ..' ಎಂದು -ಮತ್ತೆ ಅಲ್ಲಿಗೆ ಬರಬೇಡ ಎನ್ನುವಂತೆ- ನನ್ನನ್ನ ಬೈದು ಹೋದರು. 

ನಾನು ಅವಳಿಗೆ ಬೈದು -ಕಾಲು ಮುರಿದುಕೊಂಡವರನ್ನು ನಡೆಸುವಂತೆ- ಕೈಹಿಡಿದು ಓಡಾಡಿಸಲಾರಂಭಿಸಿದೆ, ಆಕೆಯ ಹಿಡಿ ಶಾಪದ ಜೊತೆಗೇ.  ಅಷ್ಟರಲ್ಲಿ ಊರಿಂದ ಅವರಮ್ಮ ನೇರವಾಗಿ ಆಸ್ಪತ್ರೆಗೆ ಬಂದವರೇ -ಆಸ್ಪತ್ರೆ ಅಂತ ಇರುವುದೇ ಮಲಗಿ ವಿಶ್ರಮಿಸಲಿಕ್ಕೆ ಎನ್ನುವಂತೆ- ಯಾಕೆ ಹೀಗೆ ಹಿಂಸೆ ಕೊಡುತ್ತಿದ್ದೀರಾ ಎಂದು ಮುಖ ಕಿವುಚಿಕೊಂಡು ಅಸಹನೆ ತೋರುತ್ತಾ, `ಇಂಥ ಎಷ್ಟು ಹೆರಿಗೆ ಮಾಡಿಸಿಲ್ಲ, ಮೊದ್ಲು ಕರ್‍ಕಂಬಂದು ಮಲುಗುಸ್ರೀ.. ಅದೇನೋ ಹೇಳ್ತಾರಲ್ಲ, ಆರು ಹೆತ್ತೋಳ್ಮುಂದೆ ಮೂರು ಹೆತ್ತೋಳು ಏನೋ ಹೇಳುದ್ಲಂತೆ ಹಂಗೆ.. ಹೆಂಗಸರ ನೋವು ಆ ಗಂಡಸು ಡಾಕ್ಟ್ರಿಗೇನು ಗೊತ್ತಾಗುತ್ತೆ?' ಅಂದವರೇ, `ಬೇರೆ ಯಾರೂ ಹೆಂಗ್ಸ್ರು ಡಾಕ್ಟ್ರು ಇರ್ಲಿಲ್ವ ಈ ಊರಲ್ಲಿ..' ಅಂತ ನನ್ನ ಮುಖ ನೋಡದೇ, ಮುಖದ ಮೇಲೆ ಚಚ್ಚಿದಂತೆ ಮಾತಾಡುತ್ತಾ, ಮಾತೃಪ್ರೀತಿಯಿಂದ ಆಕೆಯನ್ನು ಕರಕೊಂಡು ಹೋಗಿ ಮಲಗಿಸಿ ಯಾವಯಾವುದೋ ಅಂಗಗಳನ್ನ ನೀವಲಾರಂಭಿಸಿದರು.

ಅಂತೂ ಇಂತೂ ಗಂಟೆಯಾದ ಮೇಲೆ ಹುಟ್ಟಿದ ರೆಟ್ಟೆಗಾತ್ರದ ಮಗು ಗಂಡು ಎಂದು ಖಾತ್ರಿಯಾಗುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ಎಲ್ಲವನ್ನೂ ಮರೆತು ನಿರಾಳಳಾದಳು. ಆದರೆ ನನ್ನ ಕೊರಳಿಗೆ ಬಿದ್ದ ಆ ಮಗುವಿನ ಜೀವದ ಕುರಿತು ನನಗೆ ಆತಂಕ ಶುರುವಾಯಿತು.  ನರ್ಸ್‌ಗಳು ಮಗುವನ್ನು ಇನ್‌ಕ್ಯುಬೇಟರ್‌ನಲ್ಲಿ ಇಟ್ಟು ನೀಲಿ ಬಣ್ಣದ ಲೈಟ್ ಹಾಕಿ ಸುಮ್ಮನೇ ಕುಂತುಬಿಟ್ಟಿದ್ದರು.  ಅದಕ್ಕೆ ಏನಾಗಿದೆ ಎಂದೂ ಹೇಳದೇ, ತಮಗೆ ಗೊತ್ತಿರುವ ವಿದ್ಯೆ ಇಷ್ಟೆ, ಮುಂದಿನದನ್ನು ನೋಡಿಕೊಳ್ಳಲು ಮಕ್ಕಳ ಡಾಕ್ಟರರೇ ಬರಬೇಕು ಎಂದುಬಿಟ್ಟರು.

            ***

ತನ್ನೆಲ್ಲಾ ತೀಟೆಗಳನ್ನು ತೀರಿಸಿಕೊಂಡಂತೆ ಹೊತ್ತು ಮುಳುಗುವ ಹೊತ್ತಿಗೆ ಬಂದ ಮಕ್ಕಳ ಡಾಕ್ಟರರು, ಮಗುವಿನ ಶ್ವಾಸಕೋಶಗಳು ಇನ್ನೂ ಸರಿಯಾಗಿ ಬೆಳೆಯದೇ ಇರುವ ಕಾರಣ ಉಸಿರಾಟಕ್ಕೆ ತುಂಬಾ ತೊಂದರೆಯಾಗಿದೆ, ಈಗಿಂದೀಗಲೇ ರಾಜಧಾನಿಗೆ ಕರಕೊಂಡು ಹೋಗಬೇಕೆಂದು ಬರೆದುಕೊಟ್ಟರು. ಅದಕ್ಕೆಲ್ಲಾ ಎಷ್ಟು ಖರ್ಚಾಗುತ್ತೋ ಗೊತ್ತಿಲ್ಲ, ಜೇಬಲ್ಲಿ ನೋಡಿದರೆ ಅಷ್ಟೊಂದು ದುಡ್ಡಿಲ್ಲ.. ಆದಾಗ್ಯೂ, `ಯಾಕೆ ಇಷ್ಟೊಂದು ತಡ ಮಾಡುತ್ತಿದ್ದೀರಿ, ನಿಧಾನ ಆದರೆ ಮಗುವಿನ ಜೀವಕ್ಕೇ ಅಪಾಯವಿದೆ.. ಇದರ ಮೇಲೆ ನಿಮ್ಮಿಷ್ಟ..' ಎಂದು ನಮ್ಮ ಮೇಲೆಯೇ ತಪ್ಪನ್ನು ಹೊರಿಸಿ ಹೊರಟುಬಿಟ್ಟರು.

ಆ ಆಸ್ಪತ್ರೆಯ ಆಂಬುಲೆನ್ಸ್ ಒಂದೇಸಮನೇ ಸೈರನ್ ಕೂಗಿಸುತ್ತಾ, ಮುಂದಿದ್ದ ಲಾರಿ ಬಸ್ಸುಗಳಿಂದೆಲ್ಲ ದಾರಿ ಬಿಡಿಸಿಕೊಂಡು ಗಂಟೆಯೊಳಗೆ ಮುಂದಿನ ಆಸ್ಪತ್ರೆ ಸೇರಲು ತವಕಿಸುತ್ತಿತ್ತು.  ಇನ್ನೇನು ಐದು ಮಿಷದ ದಾರಿ ಬಾಕಿ ಇದೆ ಅನ್ನುವ ಹೊತ್ತಿಗೆ, ಹೆದ್ದಾರಿಯಿಂದ ಹೊರಳಿ ಊರಕಡೆಗೆ ತಿರುಗುತ್ತಿದ್ದಂತೆಯೇ, ರಸ್ತೆಯ ಪಕ್ಕದ ಯಾವುದೋ ಗುಂಡಿಗೆ ದಬಕ್ಕೆಂದು ಬಿದ್ದ ರಭಸಕ್ಕೆ ಆಕ್ಸಿಜನ ಸಿಲಿಂಡರ್ ವಾಲಾಡಿ ಏನೋ ಏರುಪೇರಾಗಿ ಮಗುವಿನ ಮೂಗಿಂದ ಬರುತ್ತಿದ್ದ ಗೂರಲು ಸದ್ದೂ ಇಲ್ಲವಾಗಿ ಮತ್ತಷ್ಟು ಆತಂಕಕ್ಕೊಳಗಾದೆ.  ನನಗರಿವಿಲ್ಲದೇ ಗಂಟಲ ನರದ ತುಂಬಾ ದುಃಖ ಎಂಬುದು ಉಕ್ಕಿಬಂದು ಉಸಿರಾಡಲೂ ಕಷ್ಟವೆನಿಸಿ, ಕಣ್ಣಂಚಿನಲ್ಲೂ ನೀರು ಇಣುಕಿತು.

ಯಾರದಾದರೂ ಮಕ್ಕಳು ಸತ್ತಾಗ, `ಅದಕ್ಯಾಕೆ ಇಷ್ಟೊಂದು ಅಳಬೇಕು, ಒಂದೆರಡು ವರ್ಷದಲ್ಲೇ ಅಂತಹುದೇ ಇನ್ನೊಂದು ಮಗುವನ್ನು ಪಡೆಯುವುದಕ್ಕಾಗುವುದಿಲ್ಲವೇ?...' ಅನ್ನುತ್ತಿದ್ದ ನನಗೆ, ಮಗುವೊಂದಕ್ಕೆ ಜೀವ ಕೊಡುವುದೂ ಎಷ್ಟೊಂದು ಕಷ್ಟದ ಕೆಲಸ ಎಂಬ ಸತ್ಯದ ಅರಿವಾದದ್ದು ಆಗಲೇ.  ಈ ಜಗದ ಒಂದೊಂದು ಜೀವಿಯೂ ಒಂದೊಂದು ಆಂಟಿಕ್ ಪೀಸ್‌ಗಳಿದ್ದಂತೆ.  ಆ ಒಂದು ಕ್ಷಣದಲ್ಲಿ, ೧೦೦% ಅಂತಹದೇ ಇನ್ನೊಂದು ಜೀವಿ ಈ ಭೂಮಿಯ ಮೇಲೆ ಇರಲು ಸಾಧ್ಯವಿಲ್ಲ! ಕ್ಲೋನಿಂಗ್ ಮೂಲಕವೂ ಅಸಾಧ್ಯ! ಸೃಷ್ಟಿ ಎಂಬುದು ಎಂತಹ ವಿಚಿತ್ರ ಅಲ್ಲವಾ! 

ರಾತ್ರಿ ಹತ್ತು ಗಂಟೆಯ ವೇಳೆಗೆ ಮಕ್ಕಳ ಆ ಆಸ್ಪತ್ರೆಗೆ ಸೇರಿಸುತ್ತಿದ್ದಂತೆಯೇ ಮಗುವನ್ನು ಒಳಗೆ ಎಳೆದುಕೊಂಡು, ಅದಕ್ಕೆ `ಬೇಬಿ ಆಫ್...' ಎಂದು ತಾಯಿಯ ಹೆಸರನ್ನು ಬರೆದ ಒಂದು ಚೀಟಿಯನ್ನು ಅಂಟಿಸಿ ನಮ್ಮಿಂದ ಬೇರ್ಪಡಿಸಿದರು.  ಕಂಡೀಷನ್ ಹೇಗಿದೆ ಡಾಕ್ಟರ್‌ರೇ ಎಂದರೆ, ಮತ್ತೇನೂ ಕೇಳದಂತೆ, `ಡೋಂಟ್ ವರಿ, ಇಲ್ಲಿಗೆ ಬರುವವರೆಗೆ ಜೀವ ಇದ್ದರೆ ಸಾಕು, ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ' ಎಂದುಬಿಟ್ಟರು.

ದಿನ ಬೆಳಗ್ಗೆ ಒಂದು ಸಲ, ಸಂಜೆ ಒಂದು ಸಲ ಗಾಜಿನ ಕಿಟಕಿಯ ಪರದೆಯನ್ನು ಸರಿಸುವ ಮೂಲಕ -ಪ್ರಯೋಗ ಶಾಲೆಯಲ್ಲಿ ಸಲ್ಯೂಷನ್ ಟ್ಯೂಬ್‌ನಲ್ಲಿ ಇಟ್ಟಿರುವ ಪಿಂಡಗಳನ್ನು ತೋರಿಸುವಂತೆ- ತೋರಿಸುತ್ತಿದ್ದರು. ಅಗೋ ಆ ನಂಬರಿನ ಮಗು ನಮ್ಮದೇ ಎಂದು ಯಾರಾದರೂ ನೆಂಟರು ಬಂದಿದ್ದವರಿಗೆ ತೋರಿಸಬಹುದಾಗಿತ್ತು. ಆ ಒಂದೂವರೆ ಅಡಿ ಉದ್ದದ ದೇಹಕ್ಕೆ ಎಲ್ಲೆಲ್ಲಿಂದಲೋ ಹರಿದು ಬಂದಿರುವ ಕೆಂಪು ಹಳದಿ ನೀಲಿ ಬಣ್ಣದ ನರಗಳಂತಹ ವಿದ್ಯುತ್ ವೈರುಗಳು ಜೀವ ನೀಡುವ ಮಾಂತ್ರಿಕನ ಪ್ರಯೋಗದಂತೆ ಕಂಡುಬರುತ್ತಿದ್ದವು.

            ***

ಮಾರನೆಯ ದಿನ ಮಗುವಿನ ತಾಯಿಯನ್ನು ಕರೆಸಬಹುದೆಂದಾಗ, ಒಂದು ಆಶಾಕಿರಣ ಚಿಗುರಿತು -ಮಗುವಿಗೆ ಹಾಲು ಕುಡಿಸಲೆಂದೇ ಇರಬೇಕೆಂದು.  ಹಾಗೆಂದು ಹೆಂಡತಿಗೆ ಹೇಳಿದಾಕ್ಷಣ ಆಕೆ ಖುಷಿಯಾಗಿ ಹೋದಳು.  ತನ್ನ ಮಗುವಿಗೆ ಏನೂ ಆಗಿಲ್ಲವೆಂಬ ಭರವಸೆ ಆಕೆಗೆ ಬಂದು ಹೋಯಿತು.  ಕೂಡಲೇ ಹೆರಿಗೆ ಆಸ್ಪತ್ರೆಯಿಂದ ಡಿಸ್‌ಛಾರ್ಜ್ ಮಾಡಿಸಿಕೊಂಡು ಬಂದುಬಿಟ್ಟಳು.  ಆವರೆಗೂ ಮಗುವನ್ನೇ ನೋಡಿರದಿದ್ದ ಆಕೆ ಕೂಡಲೇ ಮಗುವನ್ನು ನೋಡಬೇಕೆಂದು ಹಠ ಹಿಡಿದು ಕುಂತಳು.  ಆದರೆ ಈಕೆ ಬಂದಿರುವಳೆಂದ ತಕ್ಷಣ ಒಳಗೆ ಕರೆದುಕೊಂಡು ಹೋಗಿ ತೋರಿಸಲು ಆಕೆಯೇನೂ ವಿ.ವಿ.ಐ.ಪಿ. ಅಲ್ಲವಲ್ಲ.  ಆದರೆ ಆಕೆಯ ಕಾಟ ತಡೆಯಲಾರದೇ ದೊಡ್ಡ ಡಾಕ್ಟರರ ಬಳಿ ಹೋಗಿ ಹೀಗೆ ತಾಯಿಯನ್ನು ಕರೆಸಿರುವುದಾಗಿ ಹೇಳಿ ಬಂದೆ.  ಅವರದೇ ಆದ ಲೋಕದಲ್ಲಿದ್ದ ಅವರು ಕೇಳಿಸಿಕೊಂಡರೋ ಇಲ್ಲವೋ.  ಆದರೂ, `ಸರಿ..' ಎಂದರಷ್ಟೇ. ಹಾಗೆಂದು ಬಂದು ಹೆಂಡತಿಗೆ ಹೇಳಿ ಸಮಾಧಾನ ಮಾಡಿದೆ.  ಅವರಿಗೆ ಬೇಕೆಂದಾಗ ಕರೆಸುವರೆಂದೆ.  ಆದರೆ ಎಷ್ಟು ಹೊತ್ತಾದರೂ ಯಾರೂ ಬಂದು ಕರೆಯದಿದ್ದಾಗ ಮತ್ತೆ ನನ್ನನ್ನು ಕಾಡಲು ಶುರುಮಾಡಿದಳು.  ಮತ್ತೊಮ್ಮೆ ಹೋಗಿ ಹೇಳಿ ಬರುವಂತೆ ಪೀಡಿಸಲಾರಂಭಿಸಿದಳು.  ಇಲ್ಲದಿದ್ದರೆ ತಾನೇ ಇನ್‌ಕ್ಯುಬೇಟರ್ ರೂಮಿಗೆ ನುಗ್ಗಿಹೋಗಿ ಮಗುವಿಗೆ ಹಾಲು ಕುಡಿಸುವುದಾಗಿ ಬೆದರಿಸಿದಳು.

ಆದಾಗ್ಯೂ ನರ್ಸ್ ಒಬ್ಬರನ್ನು ಕಂಡು, ಎರಡು-ಮೂರು ದಿನದಿಂದ ಎದೆಹಾಲು ತುಂಬಿಕೊಂಡು ಆಕೆ ತುಂಬಾ ನೋವು ಅನುಭವಿಸುತ್ತಿದ್ದಾಳೆಂದು ವಿವರಿಸಿ, ಮಗುವಿಗೆ ಹಾಲು ಕುಡಿಸಲು ಅವಕಾಶ ಕೊಡಬೇಕೆಂದು ಕೋರಿಕೊಂಡೆ -ಹೆಣ್ಣಿನ ಕಷ್ಟ ಇನ್ನೊಂದು ಹೆಣ್ಣಿಗೆ ತಾನೇ ಅರ್ಥವಾಗುವುದೆಂದು.  ಆದರೆ ಆಕೆ `ಒಂದು ಲೋಟದಲ್ಲಿ ಕರೆದುಕೊಡಿ, ಕುಡಿಸುತ್ತೇವೆ. ಒಂದು ವಾರದವರೆಗೂ ಮಗುವನ್ನು ಮುಟ್ಟಲು ಯಾರಿಗೂ ಅವಕಾಶ ಕೊಡುವುದಿಲ್ಲ, ಇನ್‌ಫೆಕ್ಷನ್ ಆಗುತ್ತದೆ' ಎಂದುಬಿಟ್ಟಳು.
ಹಾಗೆಂದು ಹೆಂಡತಿಗೆ ಹೇಳುವುದು ಹೇಗೆ?  ಅವಳ ಅಮ್ಮನ ಮೂಲಕ ಹೇಳಿಸಿದೆ.  `ದೊಡ್ಡ ಡಾಕ್ಟರರ ಅಪ್ಪ, ಇವರ ಆಫೀಸಿನಲ್ಲೇ ಕೆಲಸ ಮಾಡುವುದಂತೆ.  ಅವರ ಮೂಲಕ ಹೇಳಿಸು'ವಂತೆ ಆಜ್ಞಾಪಿಸಿದಳು. ಅದುವರೆಗೂ ಕಛೇರಿಯ ಕೆಲಸಕ್ಕೆ ಸಂಬಂಧಿಸಿದಂತೆ ಯಾವುಯಾವುದಕ್ಕೋ ಇನ್‌ಫ್ಲುಯೆನ್ಸ್ ಮಾಡಿಸಬಹುದೆಂದು ತಿಳಿದಿದ್ದ ನನಗೆ ಇದು ಹೊಳೆದೇ ಇರಲಿಲ್ಲ.  ಅದೊಂದನ್ನೂ ಪರೀಕ್ಷಿಸಿಬಿಡೋಣವೆಂದು, ನನ್ನ ಮೇಲಾಧಿಕಾರಿಯಾಗಿದ್ದ ಅವರ ಮನೆಯನ್ನು ಹುಡುಕಿಕೊಂಡು ಹೋಗಿ ಹೀಗೆಹೀಗೆಂದು ವಿವರಿಸಿದೆ.  ತಾಯಿ ಕರುಳಿನ ಆಕೆಗೆ ಆಸ್ಪತ್ರೆಯ ಈ ಫಾರ್ಮಾಲಿಟೀಸ್‌ಗಳೆಲ್ಲಾ ಅರ್ಥವಾಗುವುದಿಲ್ಲವೆಂದು ಆರೋಪಿಸಿದೆ -ನನ್ನದೇನೂ ತಪ್ಪಿಲ್ಲ- ಎನ್ನುವಂತೆ.  ನನ್ನ ಅಹವಾಲನ್ನು ಕೇಳಿದ ಅವರು ನಕ್ಕುಬಿಡುವರೆಂದೇ ಭಾವಿಸಿ ಅಳುಕಿನಲ್ಲೇ ವೇದಿಸುತ್ತಿದ್ದೆ.  ಆದರೆ ಅವರು ನಗಲಿಲ್ಲ.  ತನ್ನ ಮಗನಿಗೆ ಫೋನ್ ತೆಗೆದುಕೊಂಡು, ಬೇಬಿ ಆಫ್ ಸೋ ಅಂಡ್ ಸೋ ಎಂಬ ಮಗು ನನಗೆ ತುಂಬಾ ಬೇಕಾದವರದು, ಸ್ವಲ್ಪ ಹೆಚ್ಚು ಕೇರ್ ತೊಗೋ ಎಂದಷ್ಟೇ ಹೇಳಿ ಸುಮ್ಮನಾದರು.


ನಾನು ಹೇಳಿದ್ದೇನು, ಅವರು ಮಾಡಿದ್ದೇನು.. ಎಂದು ನಾನು ಮುಖ ಮುಖ ನೋಡುತ್ತಿದ್ದಂತೆಯೇ, `ನನ್ನ ಮಗ ಇವತ್ತು ನೂರಾರು ಮಕ್ಕಳನ್ನು ಉಳಿಸುವ ಶಕ್ತಿ ಹೊಂದಿರುವ ಕರ್ನಾಟಕದ ಕೆಲವೇ ಕೆಲವು ಡಾಕ್ಟರರಲ್ಲಿ ಒಬ್ಬನಾಗಿರುವುದಕ್ಕೆ ಕಾರಣ, ಅವನೂ ಹುಟ್ಟಿದಾಗ ನಿಮ್ಮ ಮಗುವಿನಂತೆಯೇ ಇದ್ದದ್ದು..' ಎಂದಂದು ಒಂದು ಕ್ಷಣ ಅಂತರ್ಮುಖಿಯಾದರು.  `ನನ್ನ ಹೆಂಡತಿಯೂ ಹದಿನೈದು ದಿನಗಳ ಕಾಲ ಹೀಗೆಯೇ ಪರಿತಪಿಸಿದ್ದಳು..' ಎಂದು ತಮ್ಮಷ್ಟಕ್ಕೆ ತಾನೆ ಎನ್ನುವಂತೆ ಹೇಳಿಕೊಂಡರು.
ಮತ್ತೊಂದು ಕ್ಷಣದಲ್ಲಿ ಧ್ಯಾನದಿಂದ ಹೊರಬಂದವರಂತೆ, `ಅದಕ್ಕೇ ಅವನನ್ನು ಮಕ್ಕಳ ಡಾಕ್ಟರರನ್ನೇ ಮಾಡಬೇಕೆಂದು ಹಠ ಹಿಡಿದೆ.. ಓದಿಸಿದೆ.. ಇವತ್ತು ಅವನಂತೆಯೇ ಪ್ರಿಮೆಚೂರ್ ಆಗಿ ಹುಟ್ಟಿರುವ ಸಾವಿರಾರು ಮಕ್ಕಳನ್ನು ಉಳಿಸಿದ ಸಾರ್ಥಕ್ಯತೆ ನನ್ನದು..' ಎಂದು ಒಂದು ನಿರಾಳ ಉಸಿರುಬಿಟ್ಟರು.  `ನೀವೇನೂ ಯೋಚನೆ ಮಾಡಬೇಡಿ.  ನನ್ನ ಮಗನ ಕೈಗೆ ಜೀವ ಇರುವ ಒಂದು ಭ್ರೂಣ ಕೊಟ್ಟರೂ ಬದುಕಿಸಿಬಿಡುವಷ್ಟು ಶಕ್ತಿಯನ್ನು ಆ ಭಗವಂತ ಕೊಟ್ಟಿದ್ದಾನೆ...' ಎಂದು ಧೈರ್ಯ ತುಂಬಿದರು.

ಡಾಕ್ಟರರಿಗೆ ಅವರ ತಂದೆ ಫೋನು ಮಾಡಿದ್ದರು ಎಂಬ ಕಾರಣಕ್ಕೋ ಏನೋ ವಿಚಾರಿಸಿಕೊಳ್ಳಲು ಬಂದರು.  ಕೇವಲ ಐದು-ಐದೂಕಾಲು ಅಡಿ ಎತ್ತರದ ಪೀಚಲು ದೇಹ. ಒಂದು ಕ್ಷಣ ನನ್ನ ಮಗನೇ ದೊಡ್ಡವನಾಗಿ ಎದುರು ಬಂದು ನಿಂತಿರುವನೇನೋ ಎನ್ನುವಂತಿದ್ದರು.  ನನ್ನ ಮಗ ಹುಟ್ಟತ್ತಲೇ ಸಾವಿನ ಜತೆಗೆ ಮಾಡುತ್ತಿರುವ ಈ ಹೋರಾಟದಲ್ಲಿ ಗೆದ್ದುಬಿಟ್ಟರೆ ಅವನನ್ನೂ ಹೀಗೆ ಜೀವ ಉಳಿಸಬಲ್ಲಂತಹ ಡಾಕ್ಟರರನ್ನಾಗಿಯೇ ಮಾಡಬೇಕೆಂಬ ಆಲೋಚನೆಯೊಂದು ಮನಃಪಟಲದ ಮುಂದಿನಿಂದ ಹಾದುಹೋಯಿತು.  ಆದರೆ ಯಾರಿಗೆ ಗೊತ್ತು, ದಿನತ್ಯವೂ ಕೊಲ್ಲುವ ಕಾಯಕವೇ ಮಹಾಪ್ರಧಾನವೆಂದುಕೊಂಡಿರುವ ಈ ದರಿದ್ರ ಪ್ರಪಂಚದಲ್ಲಿ ಅವನು ಏನಾಗಬಯಸುತ್ತಾನೋ? 
ಖುಷಿಯಿಂದ ನನ್ನ ಸಹೋದ್ಯೋಗಿಯ ಹೆಸರು ಹೇಳಿ ಪರಿಚಯ ಮಾಡಿಕೊಂಡೆ.  ಹೆಂಡತಿಯನ್ನೂ ಪರಿಚಯ ಮಾಡಿಕೊಟ್ಟೆ.  ಆಕೆ, `ನನ್ನ ಮಗನನ್ನ ಉಳಿಸಿಕೊಡಿ ಡಾಕ್ಟರರೇ.. ಅವನಿಗೆ ನಿಮ್ಮ ಹೆಸರನ್ನೇ ಇಡುತ್ತೇನೆ..' ಎಂದು ಆಮಿಷ ತೋರಿದಳು.  ಆದರೆ ಅವರು ಬುದ್ಧನಂತೆ, ಸ್ಥಿತಪ್ರಜ್ಞನಂತೆ ಒಂದು ಸಲ ಮುಗುಳ್ನಕ್ಕರು.  ಪುಣ್ಯ, ಸಾವಿರದ ಮನೆಯಿಂದ ಸಾಸಿವೆ ಕಾಳು ತರಲು ಹೇಳಲಿಲ್ಲ; ಅಥವಾ ದಿನತ್ಯ ಯಾವುಯಾವುದೋ ಕಾರಣಕ್ಕೆ ದುಡಿಯುತ್ತಿರುವವರೆ ಮಡಿಯುತ್ತಿರುವ ದುರಂತದ ಬಗ್ಗೆ ಹೇಳಲಿಲ್ಲ.  `ನನ್ನ ಮೇಲೆ ಆ ವಿಶ್ವಾಸವೊಂದಿದ್ದರೆ ಸಾಕು, ನನ್ನ ಪ್ರಯತ್ನ ನಾನು ಮಾಡುತ್ತೇನೆ..' ಎಂಬ ಒಂದು ಆಶ್ವಾಸನೆಯನ್ನು ಮಾತ್ರ ಕೊಟ್ಟು ಹೊರಟುಹೋದರು.

ಎಷ್ಟು ಹೊತ್ತೆಂದು ಹೀಗೆ ಚಾತಕ ಪಕ್ಷಿಯಂತೆ ಕಾಯುತ್ತಾ ಕೂರುವುದು.  ಆಕೆಯ ಮನಸ್ಸನ್ನ ಬೇರೆಡೆಗೆ ಸೆಳೆಯಬೇಕೆಂದು, ಸ್ನೇಹಿತ ರಂಜನನನ್ನು ಮಾತಾಡಿಸಿಕೊಂಡು ಬರೋಣ ಎಂಬ ನೆಪ ಹಾಕಿ ಕರೆದುಕೊಂಡು ಹೋದೆ.  ಹತ್ತಿರವಿದ್ದೂ ದೂರವಿರುವ ಆ ಮಗುವಿನ ಬಳಿ ಇರದಿದ್ದರೆ ಅವಳಿಗೂ ನೆಮ್ಮದಿ ಸಿಗುತ್ತಿತ್ತು.
ಗೆಳೆಯನ ಹೆಂಡತಿ ಹಾಗೂ ಅವರ ಆರು ತಿಂಗಳ ಮಗುವಿನೊಂದಿಗೆ ಅವಳು ಬೆರೆಯಲಾರಂಭಿಸಿದಳು.  ನಾನು, ನನ್ನ ಗೆಳೆಯ ಬೇರೆ ಬದುಕು ಇಲ್ಲದೆ ಸಂಜೆಯ ಒಂದು ಸುತ್ತನ್ನು ಹಾಕಿಬರೋಣವೆಂದು ಹೊರಗೆ ಹೋದೆವು.  ಈವತ್ತಿನ ನಮ್ಮ ಮಗುವಿನ ಸ್ಥಿತಿಯ ಬಗೆಗೆ ಮಾತನಾಡುವಾಗ, ಹುಟ್ಟಿದ ವಾರದೊಳಗೆ ಜಾಂಡೀಸು ಬಂದಿದ್ದ ತಮ್ಮ ಮಗುವನ್ನೂ ಆ ಡಾಕ್ಟರರೇ ಉಳಿಸಿಕೊಟ್ಟಿದ್ದು ಎಂದ.  ಅವರ ಕೈಗುಣದ ಬಗ್ಗೆ ಗುಣಗಾನ ಮಾಡಿದ.  ಅವರು ಮುಟ್ಟಿದ್ದಾರೆಂದ ಮೇಲೆ ನಿಮ್ಮ ಮಗು ಬದುಕೇ ಬದುಕುತ್ತದೆ, ಡೋಂಟ್ ವರಿ ಎಂದು ಸಮಾಧಾನ ಮಾಡಿದ.  ಆದರೆ ನಾನಂತೂ, ಆ ಮಗುವನ್ನು ಬದುಕಿಸಲು ನನ್ನ ಕೈಲಾದ ಪ್ರಯತ್ನ ಮಾಡುವುದನ್ನು ಬಿಟ್ಟರೆ ಉಳಿದಂತೆ ನಿರ್ಲಿಪ್ತನಾಗಿಹೋಗಿದ್ದೆ.  ನಾಳೆ ಹೆಚ್ಚುಕಡಿಮೆಯಾದರೆ, ಒಂದು ಸಣ್ಣ ಪ್ರಯತ್ನ ಮಾಡಿದ್ದರೆ ಬದುಕುತ್ತಿತ್ತೇನೋ ಎಂಬ ಒಂದು ಕಳಂಕ ಮನಸ್ಸಿನಲ್ಲಿ ಇರಬಾರದಲ್ಲ..  ಆದರೆ ಗೆಳೆಯರು ಪಾಪ, ಬಾಯಿಮಾತಿಗಾದರೂ ಸಮಾಧಾನ ಹೇಳಬೇಕಲ್ಲ, ಹೇಳುತ್ತಾರೆ.  ನಾನಾಗಿದ್ದರೂ ಬೇರೆಯವರಿಗೆ ಹಾಗೆಯೇ ಧೈರ್ಯ ಹೇಳುತ್ತಿದ್ದೆ ತಾನೆ ಎಂದುಕೊಂಡು ಅದರಿಂದ ಸಂತೋಷವೂ ಇಲ್ಲ; ದುಃಖವೂ ಇಲ್ಲ ಎಂಬಂತೆ ಸುಮ್ಮನಿರುತ್ತಿದ್ದೆ.

ಮನೆಗೆ ಹಿಂದಿರುತ್ತಿದ್ದಂತೆ ನಡುಮನೆಯಲ್ಲಿ ರಂಜನನ ಮಗುವನ್ನು ತೊಡೆಯ ಮಲಗಿಸಿಕೊಂಡು ನನ್ನ ಹೆಂಡತಿ ಹಾಲು ಕುಡಿಸುತ್ತಿದ್ದಳು! ನಮ್ಮನ್ನು ಕಂಡೊಡನೆ ಆಕೆಗೆ ಅದೇನು ಕಸಿವಿಸಿ ಅನಿಸಿತೋ, ತಟ್ಟನೆ ಎದೆಬಿಡಿಸಿ ಮಗುವನ್ನು ಎತ್ತಿಕೊಂಡು ಅಡುಗೆ ಮನೆಯಲ್ಲಿದ್ದ ಅದರ ತಾಯಿಯ ಬಳಿಗೆ ಓಡಿದಳು.  ಆದರೆ ಮಗು ಮಾತ್ರ ಇನ್ನೂ ಹಾಲು ಬೇಕೆನ್ನುವಂತೆ ರಚ್ಚೆ ಹಿಡಿದು ಚೀರಾಡಲಾರಂಭಿಸಿತು.  ರಂಜನನ ಮುಖ ನೋಡಿದೆ.  ಸದ್ಯ, ಪೂತಿನಿಯಂತೆ ವಿಷದ ಹಾಲು ಕುಡಿಸಲು ಬಂದಿರುವ ತಾಯಿಯೆನ್ನುವಂತೆ ಅನುಮಾನಿಸದೇ ಸುಮ್ಮನಿದ್ದದ್ದು ಸಮಾಧಾನವೆಸಿತು.  ಆದರೆ ನನ್ನ ಹೆಂಡತಿ, ಅದರ ತಾಯಿ ಅಡುಗೆ ಮಾಡಲು ತೊಂದರೆ ಮಾಡುತ್ತಿದ್ದುದರಿಂದ ತಾನು ಎತ್ತುಕೊಂಡಿದ್ದಾಗಿ ಏನೋ ಸಮಜಾಯಿಷಿ ನೀಡಲು ಬಂದಳು.  ನಾನು ಏನೋ ಸಮರ್ಥನೆ ಹೇಳಲು ಉಪಕ್ರಮಿಸಿದಾಗ ತನಗೆಲ್ಲ ಅರ್ಥವಾಗುತ್ತದೆಯೆನ್ನುವಂತೆ ಗೆಳೆಯ ಭುಜವನ್ನು ಅದುಮಿ ಸುಮ್ಮರಿಸಿದ.

ರಾತ್ರಿಯ ಊಟ ಮುಗಿಸಿಕೊಂಡು ಆಸ್ಪತ್ರೆಗೆ ಬರುತ್ತಿದ್ದಂತೆಯೇ ನರ್ಸ್ ಒಬ್ಬಳು `ಇಲ್ಲಿವರೆಗೆ ಎಲ್ಲಿ ಹೋಗಿದ್ದಿರಿ?' ಎಂದು ಆಕ್ಷೇಪಿಸಿದಳು.  ನಾನು ಮಗುವಿಗೆ ಏನಾಯಿತೋ ಎಂದು ಗಾಬರಿಗೊಂಡೆ.  `ಮಗುವಿಗೆ ಹಾಲುಣಿಸಬೇಕು, ತಾಯಿಯನ್ನು ಕರೆಸಿರಿ..' ಎಂದಾಗ ನೆಮ್ಮದಿಯ ನಿಟ್ಟುಸಿರುಬಿಟ್ಟೆ.  ತಾಯಿಯರ ಕೋಣೆಗೆ ಹೋಗಿ ಆಕೆಯನ್ನು ಕರೆದು ಹಾಗೆಂದು ಹೇಳಿದಾಗ ಬಾಣಂತಿಯೆಂಬುದನ್ನೂ ಮರೆತು ಕುಣಿದು ಕುಪ್ಪಳಿಸುವವಳಂತೆ ಓಡೋಡಿಬಂದಳು.

ಮುಖದ ಸುತ್ತ ಮಾಂಸವೇ ಇಲ್ಲದ ಬರಿಯ ಚರ್ಮ ಅಂಟಿಸಿದಂತಿರುವ ತಲೆ.. ಮೂಳೆಬಿಟ್ಟುಕೊಂಡ ನೀಳ ಮೈ.. ಬಿಳಿಯ ಬಟ್ಟೆಯಲ್ಲಿ ಸುತ್ತಿದ ಸಣ್ಣಗೊಂಬೆಯಂತಿದ್ದ ಆ ಮಗುವನ್ನು ನೀಡಿದಾಗ, ಅದರ ಆಕಾರ ನೋಡಿ, ಇದು ತನ್ನ ಮಗುವೇ ಅಲ್ಲವೇನೋ ಎನ್ನುವಂತೆ ಎಲ್ಲಿ ಹಠಹಿಡಿಯುವಳೋ ಎಂದು ಭಯವಾಯಿತು.  ಹುಟ್ಟುತ್ತಲೇ ಸಾವಿನ ಮನೆ ಹೊಕ್ಕು ಹೋರಾಡಿ ಜಯಿಸಿ ಬಂದ ಮಗುವಿಗೆ ಆಗ ಜೀವ ಮುಖ್ಯವಾಗಿತ್ತೇ ವಿನಃ ಲಕ್ಷಣವಲ್ಲ..

ಆದರೆ ಆಕೆ ಅದೇನನ್ನೂ ಯೋಚಿಸಲೇ ಇಲ್ಲ.  ನೆಲದಲ್ಲಿ ಕುಳಿತು ಎದೆ ತೆರೆದು ಹಾಲು ಕುಡಿಸಲಾರಂಭಿಸಿದಳು.  ರಾಜಾ ರವಿವರ್ಮನ ಚಿತ್ರದಲ್ಲಿ ಹಾಲು ಕುಡಿಸುತ್ತಿರುವ ತಾಯಿಯಂತೆ, ಅದು ಹಾಲು ಕುಡಿಯುವುದರಿಂದ ಪಡುತ್ತಿರುವ ಸಂತೋಷವನ್ನು ಅನುಭವಿಸುತ್ತಿದ್ದಳು..
                              *****

ಹೊಂಬೆಳಕು

- ಗಿರಿಜಾಪತಿ ಎಂ. ಎನ್

ಬಾಽ....... ಬಾಽ....... ಬೆಳಕೆ....... ಬಾಽ
ಮನೆಯ ಬೆಳಗು ಬಾ, ಮನವ ತೊಳೆಯು ಬಾ
ಜ್ಞಾನದ ಹೊಂಬೆಳಕೆ,
ಧ್ಯಾನದ ಸಿರಿಬೆಳಕೆ ಬಾಽ..... ಬಾಽ ||

ಮೂಡಲ ಸಂಸ್ಕೃತಿ ಹಿಮಗಿರಿ ಸಾಲಲಿ,
ಸಾಮಗಾನವನು ನುಡಿಸುತ ಬಾ
ಪಡುವಲದುತ್ಕೃತಿ ನೀಲಧಿ ಮಿಂಚಲಿ
ರಜನಿ ತಾರಾ ತೋಟವ ಸುತ್ತುತ ಬಾ ||

ನನ್ನೊಳು ನೀನಾಗಿ, ನಿನ್ನೊಳು ನಾನಾಗಿ
ಒಳಗಿನೊಳಗುಳ ಪಲ್ಲವಿಸಲು ಬಾ
ವಿಭೇದ ಭೇದದ ಮನ ಸರಿಸುತ ದೂರಕೆ
ವಸುದೈವ ಕುಟುಂಬವೆನ್ನಲು ಬಾ ||

ರಸಿಕ ರಸಾಂಬುಧಿ ರಸ ಸರಸಿಜೆ ಶಾರದೆ
ಅನುರಾಗ ವೀಣೆಯ ರಾಗಿಸು ಬಾ
ಹಗೆಯ ತಿಮಿರತನ ದೂಡುತ ದೂರಕೆ
ದಿನಕರ ಗಿರಿಯನು ತೋರಿಸು ಬಾ ||

ಮನಸಿಜನಾಭನ ಮಾನಸದಾಲಯ
ಮತಿ ಸನ್ಮತಿಯನು ಕರುಣಿಸು ಬಾ
ಮಾರಣ ಹೋಮದ ಬಲಿ ಪೀಠವ ಕೀಳಿಸಿ
ಸ್ಮುರ ಸುಂದರ ಸತ್ಯವ ಸ್ಥಾಪಿಸು ಬಾ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ದತ್ತೂರಿ ಕೊಟ್ಟಿವನು ಸತ್ತುಹೋಗಲಿ ಸಾಂಬಾ

-ಶಿಶುನಾಳ ಶರೀಫ್

ದತ್ತೂರಿ ಕೊಟ್ಟಿವನು ಸತ್ತುಹೋಗಲಿ ಸಾಂಬಾ
ಮತ್ತೆ ಅವರಿಗೆ ಮರಣ ಮೂರು ತಿಂಗಳಿಗೆ
ಚಿತ್ತದೊಳು ಮಹೇಶಮಂತ್ರ ಜಪದೊಳಿರಲು
ಮೃತ್ಯುವಿನ ಭಯವ್ಯಾಕೆ ಮರೆಯದಿರು ಸಾಂಬಾ   ||೧||

ಮೂರು ದೇಹದೋಳಿದ್ದು ತೋರುತಿಹ ಭವಗೆದ್ದು
ಮೀರಿ ದೇಹದೊಳಗಿದು ಬರಲರಿಯದು
ತಾರಕದ ಕೃತಿಯೊಳು ಸೇರಿಕೊಂಡವಗೆ
ಆರೇನು ಮಾಡುವರು ಆದನಳಿದ ಬಳಿಕ              ||೨||

ವಸುಧಿಯೊಳು ಶಿಶುನಾಳಶೀಶ ಹುಬ್ಬಳ್ಳಿಯೊಳು
ಹಸನಾಗಿ ಮಹಾಂತೇಶನ್ವಾಲಯದೊಳು
ಕಳಿತಿರಲು ಇಂತಿಷ್ಟು ಐತಿದು
ಆರಕಿ ಇರಲಿ ಸಾಂಬಾ                                    ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಧ್ಯಾನಿಸಬಹುದಾದ ದೇವರು

- ಮಂಜುನಾಥ ವಿ ಎಂ

ಆ ದೇವರು ನಮ್ಮನ್ನು ಧ್ಯಾನಿಸುವುದಿಲ್ಲ;
ನಮ್ಮ ಆತ್ಮ ನಿವೇದನೆಗಳು ಪುಟಿದೇಳುವಾಗ ಸ್ವತಃ ನಾವೇ
ಒತ್ತಡಕ್ಕೀಡಾಗುತ್ತೇವೆ.

ಸದಾಕಾಲ ಮೋಜಿನೊಂದಿಗೆ ಬದುಕುವ ಜನ
ಸಾಂತ್ವನ ಹೇಳಲು ಬರುತ್ತಾರೆ;
ನೂರನೆಯ ಸಲ ನಾವು ಸಾಯಲು ಸಿದ್ಧರಾಗಬೇಕಾಗುತ್ತದೆ.

ತುಟಿಗಳಿಂದ ರಕ್ತ ಹನಿಸುತ್ತೇವೆ;
ಅವರು ಬ್ರಾಂಡಿಯ ಜಿಗುಟುತನದಿಂದ ನಮ್ಮನ್ನು ಧೃತಿಗೆಡಿಸುತ್ತಾರೆ.

ನಾವು ನದಿಯಂತೆ ಹರಿದೋಗುವ ಮಂದಿ
ಆದರೆ, ಪಾರ್ಥೇನಿಯಮ್ ಜಾತಿಯ ಇತರೆ ಸಸ್ಯಗಳಂತೆ
ಮರುಹುಟ್ಟು ಪಡೆಯುತ್ತಿರುತ್ತೇವೆ- ಹಳೆ ವಾಸನೆಯೊಂದಿಗೆ.

          *****

ತಾದಿಕತೆ

- ಮುದ್ದು ಮೂಡುಬೆಳ್ಳೆ

"ಬಲೆ ಬಲೆ ಬಲೆಽಽ.... ಕಡೆಸಂಡು!..... ನನಲಾ ಸಾದಿ ಕಡಪರೆ ಉಂಡು ಒಂತೆತ್!  ಪಿದಾಡ್ನಗ ಬರ್‍ಪಂದ್ ಧಿಮಿಕುಟ್‌ದರ್‍....."

- ಸೀತಕ್ಕೆ ಜೋಕುಲೆನ್ ರುಮುರುಮ್ಮ ನಡಪರೆ ಪಂಡಲ್, ಅಕುಲು ಒಟ್ಟುಗು ಮೂವೆರುಲ್ಲೆರ್‍;  ಸೀತಕ್ಕೆ, ಅಲೆನ ಕಂಞ ಮಗೆ ಸದನೆ, ಸದನನ ಜೋಸ್ತಿ-ಅಕ್ಲೆನ ನಿರೆಮನೆತ್ತ-ರಾಜು.  ರಾಜು ಪೇಂಟೆದ ಎಲ್ಮೆಂಟ್ರಿ ಸಾಲೆಗ್ ಪೋಪೆ.  ಏಳನೆ ಕ್ಲಾಸ್ ನನದಾನಿ ಮುಗ್ಯರೆ ಆಂಡ್.  ಸದನೆ-ಆಯನ ಪುದಾರ್‍ ಬುಡ್ಪದ್ ಪನ್ಪುಂಡ-ಸದಾ ನಂದೆ-ಮುವ್ಪೊಡು ಸಾಲೆ ಬುಡ್ದು, ಅಪ್ರಾಯ ಕಮ್ತರ್‍ `ಸಿರ್‍ದೇಯಿ ಭವನ' - ಒಟೇಲ್ದ್ ಬೇಲೆ ಮಲ್ಪುವೆ.

ಮೂವೆರೆಪ್ಪ ಇತ್ತೆ ಒಟ್ಟಾದ ಪಿದಾಡ್‌ದಿನಿ ಊರುಡ್ದು ಸುಮಾರ್‍ ಏಲ್ ಮೈಲ್ ದೂರೊದ ಬಂದಾ ಡಿಡ್ ಪೊಸತ್ ಕಟ್ಟಾದಿನ ದೇವಸ್ಥಾನ ಒಕ್ಕೆಲ್‌ಗ್, ಮೂಜಿ ದಿನತ್ತ ಉಚ್ಚಯಗೆ;  ಬಾರಿ ಗಡ್ದ್ ಉಂಡುಗೆ.  ಒಲ್ತೊಲ್ಪ ಜನ ಮಾತ ಬರ್‍ಪೆರ್‌ಗೆ.  ಎಲ್ಲೆಕಡೆ ಉಚ್ಚಯ;  ಪಗೆಲ್ಡ ಐನ್ ಸಾವುರ ಜನ್ತ ಒಣಸ್‌ಗೆ.

`ಒಂಜಿ ಗಲ್ಗೆ ಪೋದ್ ಬರೊಡುಂದ್ ಸೀತಕ್ಕೆಗ್ ಅಪಾಸ್ಗೆ ಏಪನೆ ಸುರಾತ್‌ಂಡ್.  ಅಂಚಂದ್ ಅಲ್ ಬೇಲೆ ಏತೇ ಉಪ್ಪಡ್, ಎಂಚಾಂಡಲ ಪುರ್ಸತ್ ಮಲ್ತೊಂದು ಊರುಡ್ ನಡಪುನ ಕೋಲ.  ಕಂಬುಲ, ತೇರ್‍, ಆಯನ, ಸಾತ್ ಮಾರಿ-ಇಂಚಿನೆಕ್ ಮಾತ್ ಪೋಪಿನ ದುಂಬುಡ್ದಿಂಚಿಲ ಉಂಡು.  ಪಾಸಾಡಿಗ್ ಫೋಂ ಜೊವು ತಿಕ್ಯೆರ್‌ಡ ಪಡ್ಡೆದ್ರದ ಅಲಡೆ, ಢಕ್ಕೆಬಲಿ, ಉದ್ಯಾರದ ಕಲ್ಲಡ, ಪೆರ್ಣಂಕಿಲ ತೇರ್‍, ಪೆರ್ಯೊಟ್ಟು ಆಯನ, ಬೆರ್ಮೆರ್‍ ಬೈದೆರ್‍ಲೆ ಗರಡಿದ ನೋಮೊಗು-ತೆನ್ಕಾಯ ಬಡಗ್ ತಿಟ್ಟ್‌ಲೆನ ಆಟೊಲೆಗ್, ಇಂಚ ಮಾತ ಯಾಪೋಗೊರ ಪೋಪಿನಲ ಉಂಡು.  ದೆಯಿವ ದೇವೆರೆಡೆ ದಿಂಜ ಬಯಬಗ್‌ತಿ.  `ಪೂ ಪಾಡುನಡೆಗ್ ಪೂತ ಎಸಲ್ ಪಾಡ್ದ್' ಆಂಡಲ ದೇವೆರೆಗೊಂಜ ಕೈ ಮುಗಿಂಡ ಸಲ್ಮಂತ.

ಊರ್‍ದ ಮಲ್ಲ ಕುಳವಾರ್‍ ರಾಮೆಗ್ಗಡ್ರೆನ ಇಲ್ಲಲೇ ಸೀತಕ್ಕೆಗ್ ಎಚ್ಚಾದ್ ಬೇಲೆ.  ಅರಿತ ಮಿಲ್ಲ್, ರೇಷಿಮೆದ ಕೃಷಿ, ಕೋರ್‍ಲೆನ ಫಾರ್ಮ್-ಮಾತಲಾ ಗೌಡೆರೆಗ್ ಉಂಡು.  ಸೀತಕ್ಕೆಲೆಕಂತಿನ ನಲ್ವೆರ್‍ ಪೊಂಜೊವೆಗ್, ಇರ್ವೆರ್‍ ಆಂಜೊವೆಗ್-ಬೆನಲಾತ್ ಬೇಲೆ, ಉನಲಾತ್ ನುಪ್ಪು ಗೌಡೆರೆ ಇಲ್ಲಡ್ ಅರೆಗಾಲ-ಮರ್ಯಲ ತಪ್ಪಂದ್.  ಸಂಬಲ ಮಾತ್ರ `ಉಂಡ್-ತಿಂದ್ ತುಂಡು ಕಂಬೊಲಿ'ದಾತೆಗ್.  ಸೀತಕ್ಕೆನ ಇರ್ವೆರ್‍ ಮಗಲಾರ್‍ಲೆಗ್ ಮದ್ಮೆ ಆತ್‌ಂಡ್.  ಕಡೇತಾಯೆ ಸದನೆ ಮಾತ್ರ ಕೈತಾಲ್ ಉಪ್ಪುನಾಯೆ.  ಅಪ್ಪೆ ಬಾಲೆಲು ಗೌಡರ್‍ನ ಒಕ್ಕೆಲ್‌ಡೇ ಉಪ್ಪುನು.

ರಾಮೆಗ್ಗಡ್ರು, ರಾಜುನ ಅಪ್ಪೆಮ್ಮೆ-ಮೊಕುಲು ಮಾತ ಕೋಡೆನೇ ದೇವಸ್ಥಾನ ಒಕ್ಕೆಲ್‌ಗ್ ಬಂದಾಡಿಗ್ ಪೋದಾತ್ಂಡ್.  ಅಲ್ಪ ಎಗಡ್ರೆನವೇ ಗುಕಾರ್ಮೆಗೆ.  ಅಕುಲು ಮಾತ ದಿಂಜ ದಿಂಜ ಕಾಸ್ ಕೊರ್ತಿನೆಕ್ ದೇವಸ್ಥಾನದ ಎದುರು ಸಿಲೆಕಲ್ಲ್‌ಡ್ ಅಕ್‌ಲೆನ ಪುದರ್‍ ಬರೆದ್ ಪಾಡುವೆರ್‌ಗೆ, ಬೂಕುಡು ಪಟಲಾ ಪಾಡುವೆರ್‌ಗೆ, ಅವು ಸೂರ್‍ಯ ಚಂದ್ರೆ ಉಪ್ಪಮುಟ್ಟು ಉಪ್ಪುಗೆ!....

`ತಾನ್‌ಲಾ ಒಂಜಿ ಗಲಿಗೆ ಬರ್‍ಪೆಂದ್' ಸೀತಕ್ಕೆ ಕೋಡೆನೇ ಎಗಡ್ರೆ ಬುಡೆದಿಡ ಪಂಡ್‌ದಾತ್‌ಂಡ್.  ರಾಜುನ ಅಪ್ಪೆ ಕೊರಪಳಕ್ಕೆ `ಬನ್ನಗ ರಾಜುನ್ಲಾ ಲೆತೊಂದ್ ಬಲ್ಲಾಂದ್' ಪಂತೆರ್‍, ಸದನೆ ಬರಾಂದೆ ಕುಲ್ಲುವೆನಾ?

ಏತೇ ಅಮಸರ ಕುಟ್‌ಂಡಲಾ ಸೀತಕ್ಕೆನ ಒರ್ಬಡಿದ ಬೇಲೆ ಮುಗಿನಗ ಪೊರ್ತು ಬಯ್ಯಾಂಡ್.  ಅಟಿಲ್ ಆವೊಡೇ?  ಕೋಡೆ ಬೋವು ಪಾಡಿಡ್ದ್ ಪೆಜ್ಜಿದ್ ಕೊಣದಿನ ಕಲ್ಲಲಾಂಬುಗು ಒಂಜಿ ತೌತೆ ಮೂರ್‍ದ್ ಪಾಡ್ದ್, ನುಪ್ಪುದ ಕರ ಜಾವಾದ್ ಕೋರಯಿಗ್ ಕಬಿಡ್ದ್ ದೀದ್ ಬಿಸಲೆಡ್ ಕಜಿಪು ಕೊದಿಪಾದ್ ಆನಗ ಸದನೆಲಾ ಓಟೇಲ್ಡ್ ಬೇಲೆ ಆದ್ ಬತ್ತೆ.  ರಡ್ರಡ್ದ್ ಉಂಡೆರ್‍.  ರಾಜು ಎಂಚಲಾ ಮದ್ದೆನೆಡಿಂಚಿ ಕಾತೊಂದು, `ಪೋಯಿ'ಂದ್ ಬಂಗ್ರ ಬರೊಂದಿತ್ತೆ.  ಮೂವೆರಪ್ಪ ಪಿದಾಡ್ದೆರ್‍.  ಇನಿ ರಾತ್ರೆದ ಪೂಜೆ, ಬಲಿ ತೂವರೆ ಉಂಡು.

"ನನ ಏತ್ ದೂರ ಉಂಡುಯಾ ಅಪ್ಪಾ?"

- ಸದನೆ ಕೇಂಡೆ.  ಸೀತಕ್ಕೆಗ್ ತೆರಿಂಡ್-ಜೋಕ್ಲೆಗ್ ನಡತ್ತ್‌ದ್ ಕಾರ್‍ ಬೇನೆ ಅವರೆ ಸುರುವಾಂಡ್‌ಂದ್.  ಇಲ್ಲ್ ಪಿದಾಡ್ನಗನೆ ಪೊತು ಕಂತರೆ ಆತ್ಂಡ್.  ಇತ್ತೆ ದಾಲ ರಡ್ಡ್ ಮೈಲ್ ಸಾದಿ ಕರಿದುಪ್ಪು ಆತೆ.  ನಡತ್ತ್‌ದೇ ಪೋವೊಡಾಯಿನ ಸಾದಿ.  ಈ ಮಾರ್ಗೊಡು ಒಂಜಿ ಬಸ್ಸ್ ದಿನೊಕ್ಕು ರಡ್ಡ್ ಸರ್ತಿ ತಿರ್‍ಗುಂಡು.  ದೇವಸ್ಥಾನ ಮುಟ್ಟೂಡ್‌ಂದಾಂಡ ಉಲತಾದಿದೆ ನಾಲ್ ಮೈಲ್ ಸಾದಿ ಉಂಡು.  ಆಂಡ ಸದಾನಂದನ ಬಜಿಕಾರ್‌ಗ್ ರಸ್ತೆದ ಕಲ್ಲ್‌ಲ ಕಂತೊಂದುಡಂಡು.  ಜೋಕುಲೆನ್ ಓಡೆಗ್‌ಲಾ ಲೆತೊಂದು ಪೋಪಿನಿಂದ್‌ಂಡ ಬಂಙಪ್ಪ!  ಇತ್ತೆ ಎಂಚಾಂಡಲ ಮಂಗಟ್ಟಾದ್ ನನ ಆಜಿ ಮೈಲ್ ನಡಪಾವೊಡತ್ತ!.....

ಸೀತಕ್ಕೆ ಇಂಚಂದಲ್.  "ನನ ದಿಂಜ ದೂರ ಇಜ್ಜಿದೆ ಮಗಾ, ನಮ ಎಗಡ್ರೆ ಇಲ್ಲಲ್ದ್ ನಿಕಲೆ ಸಾಲೆ ಪೋಯಿನ್ಯಾಡ್ದ್ ರಡ್ಡ್ ಬಕ್ಕರ್‍ ಮಿಕ್ಕು ಆತೆ....."

ಕಾರ್‍ದಡಿ ನೆಲ ಕತ್ತಲೆ ಪಾಡ್ದ್.  `ಕಣ್ಣ್ ಕುಸ್‌ ರ್‍ಂಡ ತೋಜುಜಿ' ಇನ್ಪಿಲೆಕಾಂಡ್.  ರಾಜುಡ ಬೆಟ್ರಿ ಇತ್ತಂಡ್;  ಐತ ಬೊಲ್ಪುಡ್ ನಡತೆರ್‍ ಪೋಪಿನ ಸಾದಿ ಒಂಜಿ ಮೂಜಿ ಮೈಲ್ ಬಾರೀ ಪೋಡಿಗೆದವು.  ಓಲ್ಲಾ ರಾತ್ರೆ ದಿಂಜ ಮಿನಿ ಆದ್ ಪೋಂಡ ಕಡ್‌ದ ಬರಿಟ್ ತಿಕ್‌ದ್ ಬೂರ್‍ದು ಜೋಕುಲು ಪೋಡ್ಯೆರ್‍!  ಇಂಚಪ್ಪ ಉಂದೇ ಕಾಡ್ಡೊಂಜಿ `ನೈಪಿಲಿ'ಲಾ ತಿರ್‍ಗೊಂದುಂಡುಂದ್ `ಗಾಬ್' ಆತ್‌ಂಡ್!  ಮೆಣ್ಪುರಿ ರಾಪುನ ತೂದೇ ಪೋಡ್ಯುನ ಈ ಜೋಕುಲು ನನ ಪಿಲಿ ಮಿನಿ ಎದುರು ಬತ್ತ್ಂಡ ಚಡ್ಡಿ ಚಂಡಿ ಮಲ್ತೊಂದ್ ಅರ ಬಾಯ್ ಕೊರ್‍ವೆರ್‍.  ಕತ್ತಲೆ ಆಯಿಬೊಕ್ಕ ನರ ಪುರಿತ ಸಂಚಾರ ಇಜ್ಜಿ.  ಕಾಡ್‌ಡ್-ಬಲ್ಲೆಡ್ ಏರ್‍ ದೆಂಗ್‌ದ್ ಕುಲ್ಲಿಯೆರ್‌ಡಲ ತೆರಿಯಂದ್.

"ಅಂದದೆ ಜೋಕುಲೆ, ನಿಕ್‌ಲೆಗ್ ತದಿ ಸಾಗರೆಂದ್ ಯಾನೊಂಜಿ ಕತೆ ಪನ್ಪೆ-ಆವಂದಾ?"

ಸೀತಕ್ಕೆ ಇಂಚ ಪನ್ನಗೆ ಜೋಕುಲೆನ ಕೆಬಿ ಅರಲ್‌ಂಡ್.  ಅವುಲಾ ರಜುಗು ಪೊಸ ಪೊಸ ಕತೆ ಕೇನ್ನುಂದ್ ಪಂಡ ಮರ್ಯಲೊಡು ಕೈತಿನ ಕರುಕುರುಂದ್ ತಿನ್ಪಿನಾತ್ ಕುಸಿ.

`ಹಾಂ, ಹಾಂ,- ಪನಿ' ಇಂದೆರ್‍ ಇರ್ವೆರ್‍ಲಾ.

ಸೀತಕ್ಕೆ ಸೊಂಟೊಗ್ ತಿಕ್ಕಾವೊಂದಿನ ಬಚ್ಚಿರೆದ ತಂಚಿಡ್ದ್ ಬೀಜ ಗೆತ್ತ್ ತಿಂದ್‌ದ್.  ಪಿಚಿಕ್ಕಂಚರ ಒರ ಉಬ್ಬಿದ್, ದತ್ತ್ ಬಲತ್ತ್ ಒಲ ತೂಯಲ್.  ತಿರ್ಲೊಲಿಕೆ ಬತ್ತ್ಂಡ್.  ನನ ಕುಡ್ತಕುಮೇರ್‍ ಕಡತ್ತ್ಂಡ ತಿಕ್ಕು ನವೇ ಕುಂಟಲ ಕಾಡ್.  ಆ ಕುಂಟಲ ಕಾಡ್‌ದ ಪಾಡಿಡೇ ಏತ ಮಾತ ಕತೆ ಪಿರವುದು ನಡತ್ತ್‌ಜಿ!..... ಮಡ್ಮಯಿ ಲ್‌ಗ್ ಒರ ಪೋದು ಮುಟ್‌ಂಡ್ ಬೊಕ್ಕ ಪೋಡಿಗೆ ಇಜ್ಜಿ.....

"ಇಂದಾ.  ಉಂದು ದಾಲ ಪತ್ತ್ ಪದಿನೈನ್ ವರ್ಸ ಪಿರವುದ ಕತೆ, ಅದಗ ಇತ್ತೆದಲೆಕ್ಕ ಆಲ್ಪಲ್ಪ ಇಲ್ಲ್, ಅಂಗಡಿ, ಇಲೆಟ್ರಿ ಬೊಲ್ಪು ಮಿನಿ ದಾಲ ಇತ್ತ್‌ಜಿ.  ಎಡ್ಮೇರ್‍ ಡೊಂಜಿ, ಬೊಳ್ಳೆಡೊಂಜಿ ಅಂಗಡಿ ಬುಡ್‌ಂಡ ತಿರ್ಲೊಲ್ಕೆಡೊಂಜಿ ಓಟ್‌ಲ್, ಒಂಜಿ ಗಡಂಗ್-ಬೊಕ್ಕ ಮಡ್ಮಯಿಲ್ ಮುಟ್ಟು ಸಾದ್ಯಪುಡೆ ಕಾಡಬಲ್ಲೆನೇ, ಮಣ್ಣ್‌ದ ಮಾರ್‍ಗವೊಂಜಿ ಇತ್ತೆದಲಕನೆ ಆಪಗಲಾ ಇತ್ತ್ಂಡೇ.  ಆಂಡಲಾ ಬಸ್ಸ್ ಕಾರ್‍ ಮಿನಿ ತಿರ್‍ಗೊಂದಿತ್ತ್‌ಜಿ.  ಓಲೊಲು ತೂಂಡಲಾ ಕಾಡ್, ಬಲ್ಲಗೆ, ಬೆದ್ರ್‍ ಪುಂಡಲ್.  ಕುಂಟಲಕಾಡ್‌ದ ಗಿಜಿರ್‌ಪಾಡಿದ ಬರಿಟೆ ಪಗೆಲ್‌ಗ್ಲಾ ನರಮಾನಿ ಒರಿಯೊರಿ ತಿರ್‍ಗರೆ ಪೋಡ್ಯೋಂದಿತ್ತೆರ್‍.

ಮಡ್ಮಯಿಲ್‌ಡ್ ಅದಗ ಒಂಜಿ ಬೇತೆ ನಮುಂದ ಗಂಗಸರದ ಗುತ್ತಿಗೆ ಇತ್ತ್ಂಡ್‌ಗೆ.  ಮಾತ ಇತ್ತೆದ ಲೆಕ ಸರ್ಕಾರ ಲೈಸನ್ಸ್ ಕೊರ್ದು ಗಡಂಗ್ ನಡಪಾವೊಂದಿತ್ತ್‌ಜಿ;  ಹಳ್ಳಿಡ್ ಕೆಲವು ಇಲ್ಲ್‌ಲೆಡ್ ಕಂಟ್ರಿ ಗಂಗಸರ ಬೆಯ್ಪಾವೊಂದ್‌ತ್ತೆರ್‍.  ಆನಿದ ಆ ಗಡಂಗ್‌ಗ್ ಮೂವೆರ್‌ ಕಾಯಂ ಗಿರಾಕಿಲು ಇತ್ತೆರ್‌ಗೆ, ಅಕಲ್ನ ಪುದಾರ್‍ ಎಂಚಿನಪ್ಪಾ..... ಸುಡ್ಕಾಡ್‌ದವು..... ಬಂಜಿಡುಂಡು ಬಾಯಿಗ್ ಬರ್‍ಪುಜಿಯೆ..... ಹಾಂ! ಎಂಚಿನವುಲ ಉಪ್ಪಡ್‌-ಅಕುಲು ಮೂವೆರ್‍ ಆಂಜೊವು ಮೂಜಿ ಜಾತಿದಕುಲು;  ಅಂಚಂದ್ ಬಾರೀ ಜೋಸ್ತ್ಯಲ್ಲು.  ಅನುಮುಪ್ಪ ದಿನಲಾ ಅಕುಲು ಬಯ್ಯದನಗ ಆ ಮಡ್ಮಯಿಲ್ದ ಗುತ್ತಿಗೆದ ಬಾಕಿಲ್‌ಡ್ ಪೋದು ಪಟ್ಟಾಂಗೋಗು ಕುಲ್ಯೆರ್‌ಡ ಉಣ್ಕೆಲ್ ರಾತ್ರೆ ಮುಟ್ಟು ಉರ್ದಕಲ್ನ ಜಾತಕ ಬುಡ್ಪಾದ್ ನಾಲಯಿದ ನರ್ಕೆ ಗೆತ್ತೊಂದು, ನಡೀರ್‍ ಆನಗ-ಇಲ್ಲಗ್ ಪಿದಾಡಿಯೆರ್‌ಡಲಾ ಆಂಡ್, ಅತ್ತಾ ಪರ್‍ದ್ ಮೂಕುಮುಟ್ಟು ಆಂಡ ಗುತ್ತಿಗೆದ ಬಾಕಿಲ್‌ಡೇ ಮಗರ್‍ದ್ ಮನದಾನಿ ಕಾಂಡೆ ಪೋಯೆರ್‌ಡಲಾ ಆಂಡ್.  ಮೂವೆರೆಗ್ಲಾ ಮದ್ಮೆ ಆದ್ ಬುಡೆದಿ ಬಾಲೆಲು ಮಿನಿ ಇತ್ತೆರ್‍.

ಆನಿ..... ಇಂಚೆನೆ ಮರ್ಯಲದ ದಿನ ಕಾರ್ತಿಂಗೊಲ್ಡು ಬೆನ್ನಿ ಸಾಗೊಳಿ ಮಾತಾ ಮುಗಿದ್‌ಂಡ್.  ಇನಿತ ದಿನತಲೆಕ ಬರ್‍ಸದ ಬರೆಗಾಲ ಅತ್ತ್‌ ಆನಿ ಬರ್ಸ ಗೀರ್‍ ಕಟ್‌ದ್ ಬರೊಂದುಂಡು.  ಇಂಚೆನೆ ಕತ್ತಲೆ ಆದ್ ಪೋತುಂಡು.  ಆತಾವನಗ ಮಡ್ಮಯಿಲ್ ತುದೆನ್ ಓಡೊಡು ದಾಂಡೊಂದ್ ಬತ್ತಿನ ಪೊಸ ಜನ ಒರಿ ಗುತ್ತಿಗೆದ ಉಲಾಯಿ ಬತ್ತೆರ್‍.

ಸಾಧಾರ್‍ನ ಮುಪ್ಪತ್ತಯಿನ್ ನಲ್ಪ ಒರ್ಸ ಪ್ರಾಯ ಆವು.  ಎಡ್ಡೆ ಗನಾಗಟ್ಟಿದ ಪೊರ್ಲು ಜನ.  ಸೋಕುದ ಅಂಗಿ ಕುಂಟು, ಸೂಟು ಬುಟೀಸ್ ಮಾತ ಇತ್ತ್‌ಂಡ್‌ಗೆ.  ಆಯೆ ಕೈಟಿತ್ತಿನ ಒಂಜಿ ನೇಲ್ಯ ಪೆಡಿಗೆನ್ ಆ ಮೆಯಿ ದೀದ್ ಬರ್ಸದ ನೀರ್‍ ಜತ್ತೊಂದಿತ್ತಿ ಒಚ್ಚರೆಂದ್ ಪೆಟ್ಟಿಗೆದ ಬೀಗ ಗೆತ್ತೆ.

ಗುತ್ತಿಗೆಡ್ ಗಂಗರ ಮಾರುನ ಒರಿ ಜವಣೆ ಇತ್ತೆ.  ಬೇತೆ ಇತ್ತಿನಕ್ಲು ಆ ಮೂವೆರ್‍ ಕಾಯಂ ಗ್ರಾಕಿಲು, ಆಕುಲು ಬತ್ತಿನ ಪೊಸಬನೇ ಕಣ್ಕಣ್ಣ್ ತೂಯೆರ್‍.  ಪೆಟಿಗೆದ ಬಾಕಿಲ್ ಜತ್ತಿನಪಗ ಉಲಾಯಿ ಎಡ್ಡೆಡ್ಡೆ ವಸ್ತುಲು ತೋಜಿಯ.  ನೋಟುದ ರಡ್ಡ್ ಮೂಜಿ ಅಟ್ಟಿಲು ಇತ್ತ.  ಕೈಟ್ ವಾಚಿ, ಬಿರೆಲ್‌ಡ್ ಉಂಗಿಲ ಬಾರೀ ಕಿರಯದವು ಆದುಪ್ಪು!  ಈ ಜನ ಪಿದಾಯಿ ಊರುಡ್ಡು ಬತ್ತಿನಾಂದ್!

ಆಯೆ ಆಂಗಿದ ಕಿಸೆಡ್ದ್ ಉದ್ದು ಸಿಕ್ರೆಟ್ ಗೆತ್ತ್‌ದ್ ಪೊತ್ತಾದ್ ಒಂಜಿ ದಮ್ ಒಯ್ತೆ.  ಆಡೇಗೇ ಕುಲ್ಲಿಯೆ.  ತೂಪಿನ ಆ ಮೂವೆರ್‌ಡ ಕೇಂಡೆ.

"ಅಂದೆಯೆ ಕೊಡಂಗಲಗ್ ನನ ಏತ್ ದೂರ ಉಂಡು?"

ಕೊಡಂಗಲಗಾ?  ಈ ಬರ್ಸೊಡು ರಾತ್ರೆಗ್ ಎಂಚ ಪೋಪರ್‍ ಈರ್‍?  ಏರೆಡೆಗ್ ಪೋವೊಡು, ಒಲ್ತುಬತ್ತರ್‍?  ಮೂವೆರ್‌ಲ ಕೇಂಡರ್‍.

"ಯಾನ್ ಬತ್ತಿನಿ ಬೊಂಬಾಯಿಡ್ದ್.  ಕಿಂಞಡೇ ಯಾನ್ ಅಡೆಗ್ ಪೋಯಿನಾಯೆ, ದುಬಾಯಿಗ್ ಪೋದ್ ಪತ್ತ್ ವಸ್ಮ ಆಂಡ್.  ಊರುಗು ಉಂದುವೇ ಸುರೂ ಬಪ್ಪಿನಿ.  ಇತ್ತೆ ದಾಲ ಇರ್ವ ವರ್ಸ ಮಿಕ್ಕು ಯಾನ್ ಬರಂದೆ.  ಅಂಚಾದ್ ಮುಲ್ಪ ಏರಗ್‌ಲ ಎನ್ನ ಪೊಲಬು-ಗುರ್ತ ಉಪ್ಪುನು ಕಷ್ಟ.  ಇತ್ತೆ ತುದೆತ ಅಪೆಲ್ ಮುಟ್ಟು ಒಂಜಿ ಟ್ಯಾಕ್ಸಿಡ್ ಬತ್ತೆ.  ಬನ್ನಗ ಕಡೇಸ್‌ಂಡ್ ಮೂಲು ನನಲಾ ಸೇತ್ಮೆ ಆತ್‌ಜಿ ಅತಾ?"

ಆಯೆ ಪಾತೆರೊಂದಿತ್ತಿಲೆಕನೆ ಪರಿಯೆ.  ಪರ್‍ಪಿಲೆಕನೆ ಪಾತೆರ್ಯೆ ಮೊಕಲೆಗ್ ನಾಲಾಯಿಡ್ ಜೊಲ್ಲೆ ಅರಿಮಡ್ ಆಯಗ್ ತೆರಿಂಡ್.  ಗುತ್ತಿಗೆದಾಯಡ ಪಂಡ್ದ್ ಅಕ್ಲೆಗ್‌ಲಾ ಮೂಜಿ ಗ್ಲಾಸ್ ಗಂಗರ ಕೊರ್‍ರೆ ಪಂಡೆ.

"ಕೊಂಡಂಗಲಡ್ ಈರೆಗ್ ಏರ್‍ನ ಪೈಕ್‌ಡ್?  ಒರಿ ಕೇಂಡೆ"

"ಮರ್ಸಿನ ಬಾಯಿಂದ್ ಎನ್ನ ಅಪ್ಪೆನ್ ಪುದಾರ್‍.  ಅಪ್ಪೆರ್‍ ಮಾತ್ರ ಉಪ್ಪುನು ಊರುಡು.  ಬೇತ ಏರ್‍ಲಾ ಇಜ್ಜಿ, ಯಾನ್ ಬರ್‍ಪೆಂದ್ ಕಾಕಜಿಲಾ ಪಾಡ್ದ್‌ಜಿ"

ಮೂವೆರ್‌ಲಾ ಪಿಸಪಿಸಂದ್ ಪಾತೆರೊಂಡೆರ್‍.  "ಮರ್ಸಿನ ಬಾಯಿನ ಮಗೆನಾ ಈರಿತ್ತೆ?  ಬುಡಿ ಸುದ್ದಿ.  ಈರ್‍ ಸುರೂಟೇ ಪನರೆ ಇಜ್ಜ, ಎಂಕ್ಲೆ ಇಲ್ಲ್ ಅಲ್ಪನೆ!  ಈರೆನ್ ಅಡೆಮುಟ್ಟು ಮುಟ್ಟಾವುನ ಕೆಲಸ ಎಂಕಲ್ನ.  ಬಲೆ ಪೋಯಿ" ಇಂದೆರ್‍.

`ಅಂದಾ?'! ಬಾರಿ ಕುಸಿ ಆಂಡ್ ಅಯಗ್.  ನನೊಂತೆ ಕುಲ್ಲುದ್ ಬಂಜಾರ ಪರ್ಯೆ, ಬರ್‍ಸ ಒಂತೆ ಪನಿ ಆನಗ ಲಕ್‌ದ್ ಪಿದಡಿಯೆರ್‍.  ಒರಿ ದುಬಾಯಿದಾಯನ ಪಟ್ಟಿಗೆ ತುಂಬೊಂಡೆ.

ಕುಂಟಲಕಾಡ್‌ದಲ್ಪ ಬನ್ನಗ ತುಂಬೊಂದಿನಾಯೆ ಪೆಟಿಗೆ ತಿರ್‍ತ್ ಜಾವಯೆ, ದುಬಾಯಿದಾಯೆ ದಾದಂದ್ ಕೇನೊಡು ದುಂಬು ಮೂವೆರ್‍ಲಾ ಆಯನ ಮಿತ್ತ್ ಬೂರ್ದ್ ಅಡ್ಡ ಮಗ್‌ತ್ತ್‌ದ್ ಕಕ್ಕಿಲ್ ಪುಜೆಂಕಿಯೆರ್‍.....

ಪುಣ ಬೂರ್‌ಂಡ್!  ಸುಲಾಬೊಡು ತೈತಿನಾಯನ ಪುಣೊನು ಒಯ್ತೊಂದು ಪೋದು ಕಾಡ್‌ದ ಉಲಾಯಿ ಪುದೆಲ್‌ಡ್ ಮದೆ ಮಲ್ತೆರ್‍.  ಒರಿ ಪಾರ್‍ದ್‌ಪೋದು ಒಲ್ತಾವೊಂಜಿ ಬಲ್ಲ್‌ಕನತ್ತೆ.  ಪುಣೊನು ಕಾಡ್‌ದುಲಾಯಿ ಒಂಜಿ ಗೋಲ್ದ ಮರಕ್ಕ್ ನೇಲಾದ್ ದೀಯೆರ್‍.  ಪೆಟಿಗೆ ಪತೊಂದು ಮೂವೆರಪ್ಪ ತನತನಕ್ಲೆ ಇಲ್ಲಗ್ ಪೋದು ಪೆಟಿಗೆಡಿತ್ತಿನೆನ್ ಮೂಜಿ ಪಾಲ್ ಮಲ್ತೆರ್‍.  ಸಾವಿರ ಗಟ್ಲೆ ಕಾಸ್, ಬಂಗರ್‍ ಒರಿಯೊರಿಯನ್ ಪಾಲ್‌ಗ್ ಬತ್ತ್ಂಡ್.

ಅಂಚ ಕೆರ್‍ದ್ ಮರಕ್ ನೇಲಾಯಿನ ಪುಣೊನು ನಲೈನ್ ದಿನೊಡ್ದು ಬೊಕ್ಕ ಬಿಜಕ್ರೆ ಅರಾವರೆ ಬತ್ತಿನ ಪೊಂಜೊವು ತೂದು ದಿಗಿಲ್ ಪಾರ್‌ಂಡ್, `ಒಪ್ಪದೇಯೆರೆ!ಽಽ' ಇಂದ್ ಅಲ್ಕ್ ಬೂರ್‍ದು ಕಲ್ಕಿಯೆರ್‍, ಮರಟ್ ಗುಯ್ಯಿಂದ್ ಕಿಲೆಂಜಿ ರಾವೊಂದಿತ್ತ.  ಏರಾ ಒರಿ ಮರಕ್ ಬಲ್ಲ್ ಪಾಡೊಂದು ಪೆರಣ ಬುಡ್ತೆ ಇಂದ್ ಊರುಗು ಬತ್ತ್‌ದ್ ಆಂಜೆವೆಗ್ ತೆರಿಪಾಯಂರ್‍.  ಬೊಕ್ಕ ಪುಣ ಏರ್‍ನಾಂದ್ ಒರಿಲಾ ಪನ್ಪಿನಕುಲೇ ದಾಂತೆ ಅವು ಮಾಜಿದ್ ಪೋಂಡು.  ಮರ್ಸಿನ ಬಾಯಿಗ್ ಮಗೆ ದಾಂತೆಪೋಯಿನವುಲಾ ಗೊತ್ತಾತ್‌ಜಿ.....

ಸೀತಕ್ಕೆನ ಕತೆ ಕೇಂಡ್ದ್ ಇರ್ವೆರ್‍ ಜೋಕುಲೆಗ್ಲಾ ಮೆಯಿ ಕೊಕ್ಕೆರ್ತ್ ಪೋಂಡು.  ರಾಜುಗು ದಾದನೋ ಅಂದಾಜಾಂಡ್.  ಕೇಂಡೆ:

"ಅಂಚ ಕೆರ್ತಿನ ಆ ಮೂವೆರ್‍ ಇತ್ತೆ ಓಲ್ಲೆರ್‍?"

"ಅವ್ವನ್ ಕೇನ್ಬರದೆ ಜೋಕ್ಲೆ?.  ಒರೊಕ್ ಅಕುಲು ಮಾತ ಮುಲ್ಲಾದಿಗೆ ದಿಂಜೆದ್ ನೇಲನೇಲ್ಯ ಇಲ್ಲ್ ಕಟ್ಟಾಯೇರ್‍, ಎಡೇನ ಕರ್ಚಿ ಮಲ್ತೆರ್‍.  ಆಂಡ ಏರ್‍ ತೊಜೆರ್‌ಡಲಾ ದೇಯೆರ್‍ ತೂಪುಜೆರಾ.  ಮಲ್ತಿನ ಹಾಲ್ ಕೆಲಸ ತನ್ನ ಮನಸ್‌ನಾಂಡಲ ತಿನ್ಪುಜಾ?  ಮಾನ್ಯ ಕೆರ್‍ನ ಮಗುರೆನ ಒರ್ಸ ಆ ಮೂವೆರೆಡ್ ಒರಿ ಅವೇ ಸಾದಿಡೆ ಬನ್ನಗ ಆಯಗ್ `ಧಸಕ್ಕಂದ್' ತಿಗೆಲೆಗ್ ದಾದವಾ ಪೊಗ್ಗಿ ಲೆಕಾಂಡ್‌ಗೆ.  ಇಲ್ಲಗ್ ಪೋದು ಜೆತ್ತಿನಾಯೆ ನೆತ್ತರ್‍ ಕಕ್ಕ್‌ದ್ `ಬಡಕ್ಕ' ತೈತೆ.  ನನೊರಿಲಾ ಕೆಳ್ಕಿಲ್ ಬಲ್ಲ್ ಗೆತೊಂದ್ ಪೋಯೆ, ಅಕಲ ಜೋಕುಲು ಆಲೆಲು ಬೊಕ್ಕಲಾ ತಾದಿಡೇ ಬೂರಿಯೆರ್‍.....

ಸೀತಕ್ಕೆ ಪನ್ಪಿನ ಉಂತಾದ್ ಬಚ್ಚಿರೆದ ತಂಚಿಡ್ದ್ ಬಜ್ಜೆಯಿದ ತುಂಡು ಪೂಲು ಬಾಯಿಂಗ್ ಪಾಡೊಂಡೊಲು.  ಕಥೆ ಕೆನೊಂಕೇನೊಂದು ಜೋಕ್ಲೆಗ್ ಕುಂಟಲ ಕಾಡ್ ಕಡತ್ತ್ ಪೋಯಿನವೇ ತೆರಿಜಿ.  ಆಂಡ್ ಒಂಜಿ ನಮೂನಿ ಪೋಡಿಗೆಡ್ ಕಣ್ಣ್‌ಗ್ ಮುತ್ತೊಡಾಯಿನ ನಿದ್ರೆ ಒಡೆಗಾ ಪಾರ್‍ದ್ ಸರಾಗ ನಡತ್ತೆರ್‍.  ಕದೊನಿ, ನಗಾರಿ, ಓದ್ಯೆ, ಬೆಡಿ, ಬೇಂಡ್, ಗರ್ನಾಲ್‌ದ ಸಬುದ ಅಂದಾ-ಅತ್ತಾಂದ್ ಕೆಬಿಕ್ ಬೂರ್‍ರೆ ಸುರುವಾಂಡ್.  ದೇವಸ್ಥಾನ ಕೈತಲಾಂಡ್‌ಂದ್ ತೋಜುಂಡು.

"ಅಂದೆಯೆ ಸೀತಕ್ಕಾ, ಅಕುಲು ಮೂವೆರ್‍ ಆ ಪೊಸಬನ್ ಲೆತೊಂದ್ ಪೋತಿನೆನ್ ಗುತ್ತಿಗೆಡಿತ್ತಿನ ಬೇಲೆದಾಯೆ ತೂತ್‌ಜೆನಾ?  ಆಯಗಾಂಡ್ಲ ಪಂತೊಲಿಯೇ?"  ರಾಜು ಕೇಂಡೆ.

"ಪನರೆ ಪಂತೊಲಿಯೆ, ಸೀತಕ್ಕೆ ಪಂಡಲ್." ಆಂಡ ಮಾನ್ಯಕೆರಿನ ಮೊನದಾನೇ ಪುಲ್ಯಕಾಂಡೆ ಆ ಮೂವೆರ್‍ಲಾ ಆರೆ ಇಲ್ಲಗ್ ಬತ್ತ್‌ದ್, " ಬಾಯಿ ಮಿನಿ ಬುಡ್ರಿಯ ಇಂದಾಂಡ ನಿಕ್ಕ್‌ಲಾ ಆಯನವೆ ಗತಿ ತೋಜಾವಂದ್ ತೆಗೆ ಬಾಪ್‌ರೆ" ಮಲ್ತೆರ್‍, ಜೂವ ಓರಿಂಡ ನಟ್‌ದಾಂಡ ಬದ್ಕೆ `ಇನ್ನೊಂದು ಆರ್‍ ರಾತ್ರೋರಾತ್ರಿ ಲಕ್‌ದ್ ಪಾರ್‍ಯೆರ್‍.  ಲತ್ತ್ ಪಿರಯದ ಬುಡೆದಿ ಜೋಕುಲೆನ್ ಬುಡ್ಡು, ಗಟ್ಟಾಗ್ ಪಾರ್‌ಯೆರ್‍!' ಪಾತೆರ ಉಂತಾದ್ `ಹೂಂಽಽ' ಇಂದ್ ಸೀತಕ್ಕೆ ಉದ್ದೊಗೊಂಜಿ ಉಸುಲು ಬುಡ್ಯೊಲುಃ `ಓಲಾಉಪ್ಪೆರ್‍'. ಬರುವೆರ್‍...... ಒಂಜತ್ತ್ ಒಂಜಿ ದಿನ ಬರುವೆರ್‍ ಇಂದ್ ಕಾತೊಂದು ಮುತ್ತೇಸನ ಇನಿಮುಟ್ಟುಗೆತ್ತ್‌ಜಿ.  ಅವು ಆನಿ ಗುತ್ತಿಗೆಡ್ ಬೇಲೆಡಿತ್ತಿನ ಬೇತೆ ಏರ್‍ಲಾ ಆತ್ತ್ ರಾಜೋ, ಉಂಬ್ಯನ-ಎನ್ನ ಸದನನ ಅಮ್ಮೆರೇ.

--ಇನಿ ಮುಟ್ಟು ಪನಂದಿನೆನ್ ಸೀತಕ್ಕೆ ಇನಿ ಈ ಜೋಕುಲೆ ಎದುರು ಪಂಡೊಲು.  ಸದನಗ್ ದೊಂಡೆಡ್ ಎಂಚಿನವಾ ತಿಕೊನಿಲೆಕ್ ಆಂಡ್;  ದಾದಂದ್ ಆಯಗ್ ತೆರಿಜಿ..... ರಾಜು ಕುಡ ಕೇಂಡೆ,

"ಅಂದ್ಽಽ..... ಆ ಮೂವೆರೆಡ್ ಮೂಜಿನೆದಾಯೆ ಸೈತಿನಿ ಎಂಚ"

ಆರಾ?..... ಆರ್‍ನ ಸೌಬಾಗ್ಯೊನು ಇನಿಕ್ ದಾದೆನ್ ಪನ್ಪಿನಿ!  ಬಾಕಿದ ಇರ್ವೆರ್‍ ಸೈತಿನೆಟ್ ಮೇರೆನವುಲ `ಕೈ' ಉಂಡುಂದ್ ಕೆಲವೆರ್‍ ಪನ್ಪೆರ್‍..... ಅವು ಮಾತಾ ನಂಕ್ ದಾಯೆ ಮಗಾ?  ಎನಲೆಕಂತಿನಾಲ್ ದೇವರ್‍ ಕೈಕಾರ್‌ಗ್ ಸುಕ ಕೊಂರ್ಡ ಬೆಂದ್ ತಿನುವೆ ಸಿವಾಯಿ ನನೊರಿಯನ ತಿಂದ್‌ದ್ ಯಾನ್ ಉದ್ದಾರ ಅವೆಂದ್ ಆಸೆ ಮಲ್ಪಯೆ..... ಹಾಂ.  ಆ ಮೂಜನೆದಾರ್‍..... ಏರೆಡ್ಲಾ ಪನಡೆ ಜೋಕುಲೇ, ಆರೇ ನಮ್ಮ ನಮ್ಮ!.....

ಆತೊರ್ತುಗು ಗುಡುಮ್ಮಂದ್ ಕದಿನದ ಸಬುದ ಮಾತೆರೆನ್ಲಾ ಅಲಕ್ಕ ಉಂತಾಂಡ್!......

            *****

ಕೀಲಿಕರಣ: ಕಿಶೋರ್‍ ಚಂದ್ರ