ಜ್ಞಾನದೇಗುಲ

-ರವಿ ಕೋಟಾರಗಸ್ತಿ

ಬಾಳ ಕನಸು ಕಮರಿ
ದೇಹ ಪರರಿಗೆ ಮಾರಿ
ಹರ್ಷವೆಂಬ ಕರ್ಕಶದಲಿ ನಾರಿ
ಸುಡುತಿಹಳು ಬೆಂಕಿಯಲಿ ಮೈಸಿರಿ

ಯೌವನದ ಕನಸಲಿ
ಆಚಾರ-ರೂಢಿಗಳ ಸವಾರಿಯಲಿ
ಪುರುಷನ ಚಪಲತೆಯಲಿ
ಸಿಲುಕಿ ಹೆಣ್ಣು ಕೊರಗುತಿಹಳು

ಸಮಾಜದ ಕಣ್ಣು ತೆರೆಸಿ
ಕವಿದಿಹ ಕತ್ತಲೆಯ ದೂಡಿ
ಬೆಳಕು ಬೀರುತ...
ಮೌಢ್ಯತೆಯ ಬಿಗಿ ಸಡಿಲಿಸುವ
ನೊಂದುಬಳಲುವ ವನಿತೆಯರಿಗೆ
ಆಸರೆಯ ದೇಗುಲ ‘ವಿಮೋಚನಾ’

ಭೂಮಾತೆಯ ತೂಕದ ಹೆಣ್ಣಿನ
ದಾಸ್ಯ-ಭೋಗದ ಸಂಕೇತವ
ಅಳಿಸುತಲಿ ನಿಸ್ವಾರ್ಥದ ಸಂಗಾತಿ
ದಲಿತ ಶೋಷಿತ ಮಕ್ಕಳ
ನೋವಿನಲಿ ಬೆಂದು ಬಾಡುತಿಹ
ಸ್ತ್ರೀಕುಲಕ್ಕೆ ಜ್ಞಾನ ಮಂದಿರ
"ವಿಮೋಚನೆ" ಜ್ಞಾನ ದೇಗುಲ

         ***

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ