ಸಾವಿರಪದ ಸರದಾರ

-ರವಿ ಕೋಟಾರಗಸ್ತಿ

ಸಾವಿರ ಪದ ಸರದಾರ
ಸಾವು ಮುತ್ತಿತೇ ಧೀರಾ
ಮೂಢ ಸಾವು.. ನಿನ್ನ
ಅರಿಯದೆ.. ಅಟ್ಟಹಾಸದಿ
ಒಯ್ಯುತಿಹನೆಂಬ ಭ್ರಮೆಯಲಿ
ಒಪ್ಪಿಸುತಿಹದು ಅಹವಾಲ ಯಮನಿಗೆ

ಇನ್ನ... ನಗುವಿನ ಚೆಲುವು
ಇಂಪಾದ ಕೋಗಿಲೆ ಧ್ವನಿಯು
ಜೀವ ತುಂಬಿ ಜನ್ಮ ನೀಡುತಿಹವು
ಸಾವಿರ ಪದಗಳ ಸಾಲಾಗುತ
ಅಮರನಾದ... ನೀ ಸರದಾರ

ಅನುದಿನ.. ನೀ ಹಾಡಿದಿ
ಜನಪದ ಸಿರಿ ಬೆಳೆಸಿದಿ
ಅತೃಪ್ತ ಮನದಿ... ಸದಾ ನೀ
ಸಂತೃಪ್ತಿಗಾಗಿ ಅಂತರಾತ್ಮದಿ ಸವೆದಿ
ಅಮಾನವೀಯತೆ ಹಳಿಯುತಲಿ
ಜನಪದರ ಜನಮನ ಸೆಳೆದಿ

         ***

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ