ಗ್ರಹಣ ಹಿಡಿದುದು ಕಾಣದೆ?

- ಶಿಶುನಾಳ ಶರೀಫ್

ಗ್ರಹಣ ಹಿಡಿದುದು ಕಾಣದೆ ಪ್ರಾಣ ಸಖಿಯಳೆ
ಜಾಣನಾದ ಚಂದ್ರಮನ ಆಳುಕಿಸಿ
ಕೋಣೆಯೊಳಗೆ ಆವಮನಗೊಳಿಸಿತೆ                                   || ೧ ||

ರಾಹು ಸಿಟ್ಟಲೆ ಬಂದು
ಠಾವು ತಿಳಿಯದೆ ನಿಂದು ತೋಯದ ಗೋನಿಯನು
ಕಾಡಬೇಕೆನುತಲಿ ರೋಹಿಣಿದೇವಿಗೆ ಆಯಾಸಪಡಿಸಿತೆ            || ೨ ||

ಮಂಗಳವಾರ ಒಂದಾದಿ ರಂಗುಮಂಟಪದೊಳು
ಸುಮ್ಮನಾಗಿ ಕೇತುವಿನ ಬಲದೆ
ಬಹು ಸಂಗನಾದ ಸಾರಂಗದೊಳು                                     || ೩ ||

ಯಂತ್ರ ಮಂತ್ರಿಕರೆಲ್ಲಾ
ಗೊತ್ತುಗೆಟ್ಟಿದ್ದು ಬಲ್ಹೆ
ನಿಂತು ನೋಡಿ ಶಿಶುನಾಳಧೀಶ ತನ್ನಂತೆ ತಾ ನೋಡಿದನವ್ವಾ || ೪ ||


           ***

ಕೀಲಿಕರಣ: ಎಮ್.ಎನ್.ಎಸ್.ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ