ಓದುವವ್ಗ ಎಚ್ಚರ ಇರಬೇಕು

- ಶಿಶುನಾಳ ಶರೀಫ್

ಓದುವವ್ಗ ಎಚ್ಚರ ಇರಬೇಕು

ಆಭವ ಮೆಚ್ಚುವ ತೆರದಿ
ಆರ್ಥವ ಪೇಳಿ ಸದ್ಭಕ್ತರಿಗೆ ಶುಭ
ಈ ಭವಬೇಧವಳಿದು ಸ್ವರ್ಗದ
ಸಭೆಯು ಹೌದೆನ್ನುವಂದದಿ

ಭಕ್ತಿಭೂಮಿ ಬೆಳೆಯದವರಿಗೆ ಬಹು
ಯುಕ್ತಿಯಿಂದಲಿ ಮುಕ್ತಿಲಲನೆ ಒಲಿಸಿ ತಿಳಿದವರಿಗೆ
ಯುಕ್ತವಾಗಿ ವಿರಕ್ತಿಮಾರ್ಗದಿ
ತತ್ವಜ್ಞಾನದಿಂದ ಮೆರವ ಮಹಿಮರಿಗೆ
ಐಕ್ಯವುಳ್ಳ ಶಿವೈಕ್ಯಭಾವದಿ
ಲಕ್ಷ್ಯವುಳ್ಳ ನಿಜಲಕ್ಷ್ಯವನಿಡುತಲಿ

ಸಾಧುಗಳು ಸೈಯೆಂಬ ಪರಿಯಿಂದಾ
ಸದ್ಗುರು ಕಟಾಕ್ಷದಿ
ನಾದ ಸ್ವರ ಸಂಗೀತ ಹಿತದಿಂ
ಮೇದಿನಿಗೆ ಶಿಶುನಾಳಧೀಶಾನ
ಮೋದದಿಂದಲಿ ಆಲ್ಲಮನ ಪಾದ ಸಂಪಾದಿಸಿ


         ***

ಕೀಲಿಕರಣ: ಎಂ.ಎನ್.ಎಸ್.ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ