ನೋಡಿ ತಡೆಯಲಾರದೆ ಕೇಳಿದೆ

- ಶಿಶುನಾಳ ಶರೀಫ್

ನೋಡಿ ತಡೆಯಲಾರದೆ ಕೇಳಿದೆ
ಕೂಡಿ ಗಡ ಕಾಡಬ್ಯಾಡಾ ಬೇಡಿದ್ದು ಕೊಡುವೆ       ||ಪ||

ಹರಿಹರಪುರನಿಗೆ ಕ್ಷೀರವಿತ್ತು ಸಲಹಿದೆ
ಚಾರುತನದಲಿ ಶ್ರುತಿ ಸಾರುತಿದೆ ನೋಡಿ               ||೧||

ಮೂರುಗಿರಿ ಮೇಲಕೆ ಏರಿನೊಳು ವರ್ಣಿಸಿ
ನೀರಿಗ್ಹೋಗೋ ದಾರಿಯೊಳು ಜೇರುಗಿಂಡಿಯೊಳು
ಮಾರಿನೋಡು                                                ||೨||

ಮೋದಿನಿಗೆ ಸದ್ಗುರು ಆದಿ ಶಿಶುವಿನಾಳಧೀಶ
ನಾದ ಬ್ರಹ್ಮದೊಳು ಬೈಲಾದ ಮೇಲೆ ಹಾದಿನೋಡಿ   ||೩||

         ***

ಕೀಲಿಕರಣ: ಎಂ.ಎನ್.ಎಸ್.ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ