ವಾರಿಜಾಕ್ಷಿ ವನಪಿನೊಯ್ಯಾರೆ

- ಶಿಶುನಾಳ ಶರೀಫ್

ವಾರಿಜಾಕ್ಷಿ ವನಪಿನೊಯ್ಯಾರೆ
ಬಾರೆ ನೀರೆ ನಿನ್ನನಗಲಿರಲಾರೆ            || ಪ ||

ದೀರೆ ಮರೆಯದಿರಲಾರೆ ಬ್ರಹ್ಮದ
ನೀರು ತುಂಬಿದ ಕೆರಿಯ ಮೇಲಿನ
ಏರಿಯೊಳು ನೀ ಬಾರದಿಹೆ ನಾ
ದಾರಿಯೊಳು ತರುಬಿದರೆ ಸುಮ್ಮನೆ       ||ಅ.ಪ.||

ಹರನಾ ಹಿಡಿದೆ ವಿಧಿ ತಲಿಗಡಿದೆ
ಹರಿಯ ಚರಣಾಂಬುಜವನ್ನು ಪಡಿದೆ
ಪರಮನಾರದಋಷಿಯ ಕಲಹದಿ
ಪರಿಯಗೆಡಸಿದಿ ಪಾವನಾತ್ಮಳೆ
ಧರಿಗೆ ಶಂಕರಿಯಾದೇ ಶಿವನಾ
ಶಿರದಿ ಮೆರದೇ ಗಂಗೆಯಾಗಿ                ||೧||

ಹಸಿತ ವದನದ ಕುಸುಮಗಂಧಿಯಳೆ
ವಸುಧಿ ದೆಸೆಗೆಡಿಸುತ್ತ ನಿಂತಿಹಳೆ
ಎಸೆವ ಶಿಶುನಾಳೇಶನ ಹಸುಳೆಗೆ
ಆಸಮ ಹಾದರ ಕಲಿಸಿದ್ಯಾ ಬಿಡು
ರಸಿಕರಾಟ ಗೋವಿಂದ ಸದ್ಗುರು
ಉಸುರಿದಾತ್ಮ ವಿಚಾರ ತಿಳಕೋ          ||೨||
                        ***

ಕೀಲಿಕರಣ: ಎಮ್.ಎನ್.ಎಸ್.ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ