ಭೋಧವಾದೀತೆ ಆನಂದ

ಭೋಧವಾದೀತೆ ಆನಂದ ಬಹು ಚಂದಾ
ಭೋಧವಾದೀತೆ ಆನಂದಾ
ಸಾದರಜ್ಞಾನ ಚತುಷ್ಟಿಯ ಕೊನೆಯೊಳು
ನಾದಬ್ರಹ್ಮದ ಬೀದಿಯೊಳಗೆ ಬಹು ಚಂದಾ                   ||೧||

ವೀರಯೋಗಿವರ ಪಾರಪರಾತ್ಪರ ಮೀರಿದ
ದಾರಿಯ ತೋರಿಸುವುದು ಬಹು ಚಂದಾ
ಶಿಶುನಾಳಧೀಶನ ಗೋವಿಂದಕುಮಾರಗೆ ಬಹು ಚಂದಾ   ||೨||
****
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ