ಕುರುಬರೋ ನಾವು ಕುರುಬರೋ

ಕುರುಬರೋ ನಾವು ಕುರುಬರೋ

ಏನು ಬಲ್ಲೇವರಿ ಆತ್ಮದ ಅನುಭವವೋ                    ||ಪ||


ಮುನ್ನೂರು ಅರವತ್ತು ಕುರಿ ಮೇಯಿಸಿಕೊಂಡು

ಸುಮ್ಮನೆ ಬರುವಂಥಾ                                         ||ಅ.ಪ.||


ಏಳುಸುತ್ತಿನ ಬೇಲಿ ಗಟ್ಯಾಗಿ ಹಚ್ಚಿ

ನಮ್ಮ ಕುರಿಗಳಿಟ್ಟೇವ್ರಿ ಬಚ್ಚಿ

ಈಡೆಂಬ ಬಾಗಿಲ ಹಾಕೇವಿರಿ ಗಟ್ಟಿ

ಸಿಟ್ಟೆಂಬ ನಾಯಿಯ ಬಿಟ್ಟೇವ್ರಿ ಬಿಚ್ಚಿ                        ||೧||


ತನುಯೆಂಬುವ ದಡ್ಡಿಯ ಹಸನಾಗಿ ಉಡುಗಿ

ತುಂಬಿ ಚಲ್ಲೇವರಿ ಹಿಕ್ಕಿಯ ಹೆಡಗಿ

ಗುರು ಹೇಳಿದ ವಾಖ್ಯವು ಹಾಲಿನ ಗಡಗಿ

ನಮ್ಮ ಕೈಯಲ್ಲಿ ಇರುವುದೇ ಮುಕ್ತಿ ಎಂಬ ಬಡಗಿ      ||೨||


ಸ್ಮಶಾನಭೂಮಿ ಇದು ಖರೆ

ನಾವು ಮೇಸಾಕ ಬಂದೇವರಿ ಕುರಿಯೇ

ತೋಳ ಮುರಿದು ಹತ್ತು ಕುರಿಯೇ

ನಾಗಲಿಂಗ ಅಜ್ಜ ಹೇಳಿದ ಪರಿಯೇ                       ||೩||


               * * *

-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ