ಸಾಧುಗಳಿಗಿದೆ ಸಾಧನವೋ ಸುಜ್ಞಾನವೋ

ಸಾಧುಗಳಿಗಿದೆ ಸಾಧನವೋ ಸುಜ್ಞಾನವೋ
ಸಾಧುಗಳಿಗಿದೆ ಸಾಧನವೋ ಸುಜ್ಞಾನವೋ         ||ಪ||

ಪದುಮ ದಳದ ಮದವು ಬೆಳೆದು
ಸದಮಲಾತ್ಮಯೋಗ ತುದಿಯ-
ಲದನುಯೇರಿ ಮೆರೆಧು ಬೆರಿದು
ಕದಲದಂತೆ ಕರುಣ ರಸದ                                     ||೧||

ಚಂದ್ರ ಸೂಯ೯ರೊಂದುಗೂಡಿಭದಾ ಅಲ್ಲೆ ಮೂಡಿದಾ
ರಂದ್ರದೂಳಗೆ ಹೊಳೆವ ಮಿಂಚು
ಒಂದೇ ದೃಷ್ಟಿಯಿಂದ ನೋಡಿ
ಸಿಂಧುಶುಚಿನಾಥ ತಿಳಿದು ಬಿಂದುವಸ್ತು ಸವಿದು ಪರಮ  ||೨||

ಭೂತ  ಪಂಚಕವನಳಿದು ತೋರುವಾ
ಸುಪ್ರೀತಿಯಿಂದ ಮಾತು ಮಾತಿಗೆ ಮೋಜುಗಾಣುವಾ
ಧಾತ ಪರಬ್ರಹ್ಮನೇ ಈತತನೆಂದು
ಆರಿತು ಪವನಜಾಗದೊಳಗೆ ಜನ್ಮರೀತಿ
ಕೌತುಕದಿ ಕುಳಿತು ಮೆರೆವ                                        ||೩||

ತಾಗುನಾಗುವೆಲ್ಲ ಕಳಿದನು ಆಲ್ಲಿಳಿದನು
ಯೋಗ ಸಾಧನವನ್ನು ಮಾಡಿ
ಭೋಗ ವಿಷಯ ಕೂಗೆದೂಡಿ
ರಾಗದಿಂದ ರಜದ ಕೊನೆಯ
ಮೇಲೆ ನಿಂತು ಚಂದ್ರ ಜ್ಯೋತಿ                                  ||೪||

ಚಾಗು ಸದಾನಂದಜಲದೊಳು ಬೋಧಾ
ಅಗಲತೆಯನೇಕ ಮಂತ್ರ ಮೂಲಕಲೆಗಳಾ
ಏಕನಾಥ ಶಿಶುನಾಳಧೀಶನಲ್ಲಿ ತಾಕಿ ತಾಕಿ
ಜೋಕಿಯಿಂದ ಜನನ ಮರಣ ನೂಕಿ ನಿಲುವಂಥ           ||೫||
                        * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್ 

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ