ಆನಂದವೆಂಬೋ ಮಂಟಪದೊಳ್

ಆನಂದವೆಂಬೋ ಮಂಟಪದೊಳ್
ವಿಲಾಸ ಮಾಡುನು ಬಾರೆ                                          ||ಪ||

ಹೇವೋರಿ ತೂರ್ಯಾತೀತದಿ ಬೆಂದು ಮನ-
ಹರಿದು ಸಹಜಾನಂದದಿ ಹೊಳೆದು ನೀನಲಿದ
ಸರಸದಿ ಸುಮ್ಮನೆ ಸುಂದರ ಸ್ಥಳದೊಳ್ ವಿಲಾಸ              ||೧||

ಮೂರೆರಡು ಕ್ಲೇಶವ ಕಳೆದು ಏಳ್‍ಮಡಿದು
ಈರೇಳು ಮೀರಿದ ಗುಡಿಪುರ ಶಿಶುನಾಳೇಶನೊಳು ವಿಲಾಸ ||೨||
               * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ