ಸಾಧುಗಳಿಗೆ ಶಿವನ ಚಿಂತೆ

ಸಾಧುಗಳಿಗೆ ಶಿವನ ಚಿಂತೆಯು ಆನಂತವು             ||ಪ||

ಬೇಧಭಾವವಳಿದು ಮಾಯಾ ಭ್ರಾಂತಿ ಕಳೆದು
ಭವನ ತುಳಿದು ಶಾಂತರೂಪದಿಂದ ಮೆರೆಯುವ      ||ಅ.ಪ.||

ದುಡ್ಡು ಹಣವು ಹೆಡ್ಡತನವನು ಜಡದೊತ್ತೆ
ಗುಡ್ಡನೇರಿ ತೋಪ೯ ಫನವನು
ಅಡ್ಡಬರುವ ಆಖಿಲ ವಿಷಯ
ಜಡ್ಡುಗಳಿದು ಜನನ ಮರಣ
ಕಡ್ಡಿಮುರಿದು ಕಮ೯ ಹಿಡಿದು
ಮಡ್ಡರಂತೆ ಮಾತನಾಡುವ                                ||೧||          

ತಂದೆ ಶಿಶುನಾಳಧೀಶನ ವಂದಿಸುವ ಗುರುಗೋ-
ವಿಂದರಾಜಾನಂದ ತೋಷನ
ಒಂದೇ ಲಕ್ಷ್ಯವಿಟ್ಟು ಸದಾ
ಬಿಂದುವಸ್ತು ಸವಿದು ಪರಮಾನಂದ ವನದೊಳಗಿಪ೯
ಚಂದದಿಂದ ಮಾತನಾಡುವ                             ||೨||
                       * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ