ಕನ್ನಡ ಡಿಂಡಿಮ

ಬಾರಿಸು ಕನ್ನಡ ಡಿಂಡಿಮವ,


ಓ ಕರ್ನಾಟಕ ಹೃದಯ ಶಿವ!



ಸತ್ತಂತಿಹರನು ಬಡಿದೆಚ್ಚರಿಸು;

ಕಚ್ಚಾಡುವರನು ಕೂಡಿಸಿ ಒಲಿಸು.

ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು;

ಒಟ್ಟಿಗೆ ಬಾಳುವ ತೆರದಲಿ ಹರಸು!



ಬಾರಿಸು ಕನ್ನಡ ಡಿಂಡಿಮವ,

ಓ ಕರ್ನಾಟಕ ಹೃದಯ ಶಿವ!



ಕ್ಷಯಿಸೆ ಶಿವೇತರ ಕೃತಿ ಕೃತಿಯಲ್ಲಿ

ಮೂಡಲಿ ಮಂಗಳ ಮತಿಮತಿಯಲ್ಲಿ;

ಕವಿ ಋಷಿ ಸಂತರ ಆದರ್ಶದಲಿ

ಸರ್ವೋದಯವಾಗಲಿ ಸರ್ವರಲಿ!



ಬಾರಿಸು ಕನ್ನಡ ಡಿಂಡಿಮವ,

ಓ ಕರ್ನಾಟಕ ಹೃದಯ ಶಿವ!



-ಕುವೆಂಪು

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ