ಸಾಕ್ಷಾತ್ಕಾರ

- ಗಿರಿಜಾಪತಿ ಎಂ. ಎನ್

ನಿನ್ನೆ ಧ್ಯಾನವೆ ನನ್ನ ಉಸಿರಲಿ,
ಹಸಿರ ತೆರೆದಲಿ ನೆಲೆಸಲಿ...
ನಿನ್ನೆ ದರುಶನವೆನ್ನೆ ಮನದಲಿ,
ಬಾಳ ಭರವಸೆ ತುಂಬಲಿ....

ಇರುಳು ಕವಿದೆಡೆಯಲ್ಲಿ
ನಿನ್ನಯ ಬೆಳಕಿನುತ್ಸವ ಕೊನರಲಿ,
ಮನವು ಕದಡಲು
ನಿನ್ನ ನೇಹದ ಮಧುರ ಗಾನವು ತಣಿಸಲಿ...

ಬೇಗೆಗಳಾ ಬವಣೆಯಲ್ಲಿ,
ನಿನ್ನ ಕೈಯದು ತಾ ಹಿಡಿಯಲಿ,
ಬಾಳ ಬಂಡಿಯ ಹಾದಿಯಲ್ಲಿ,
ನಿನ್ನ ಜೊತೆ-ಹಿತ ದೊರೆಯಲಿ...

        *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ