ವಿಪರ್ಯಾಸ


- ಗಿರಿಜಾಪತಿ ಎಂ. ಎನ್

ಏನು ಬರೆಯಲಿ ಏನು ಹಾಡಲಿ
ದಿನದ ಕಾವ್ಯಕೆ ಶುಭನುಡಿ,
ನಿತ್ಯದುದಯವು ಬರೆವ ಮುನ್ನುಡಿ
ಪುಟ-ಪುಟಕೂ ನೀಡಲು ಕೆಂಗಿಡಿ,

ನಿಸರ್ಗ ಸಗ್ಗವು ಬೆಂಗಾಡಾಗಿರೆ
ಇನ್ನೆಲ್ಲಿ ಪೂಜೆಯು ಪ್ರಕೃತಿಗೆ,
ಇಂಚರದ ಬಳಗಕೆ ಠಾವೆ ಇರದಿರೆ
ಎಲ್ಲಿನ್ನೆಲ್ಲಿ ಗಾನವು ಕೊಳಲಿಗೆ,

ರಾಯರಳಿದರು ರಾಯತನವು ತಾ ಸಾಗಿರೆ,
ಯಾವ ನೆಲೆಯಿದೆ ಹಸಿವಿನೊಡಲಿಗೆ,
ಧರ್ಮದರ್ಥವು ಅನರ್ಥವಾಗಿರೆ
ಇನ್ನಾವ ಬೆಲೆಯಿದೆ ದೇವ ಪ್ರೀತಿಗೆ....

ಜಗವೆ ಮಾರುವ ಕಟ್ಟೆಯಾಗಿರೆ
ಕೊಡು ಕೊಳ್ಳುವವರೆತ್ತಬಲ್ಲರು ಮಾನ'ವ
ಸರಕು ನೂಪುರ ಗಂಟೆ ಮೊಳಗಿರೆ
ಸುಪ್ರಭಾತವೆಲ್ಲಿಯೋ ಮಾನವ....

        *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ