ಇಂದು ಏಕಾದಶಿ ವ್ರತವ ತೀರಿಸಿದೆ

-ಶಿಶುನಾಳ ಶರೀಫ್

ಇಂದು ಏಕಾದಶಿ ವ್ರತವ ತೀರಿಸಿದೆ
ಶ್ರೀ ಗುರುನಾಥನುಪದೇಶ ಬಲದಿಂದ     ||ಪ||

ಹೊಂದಿದೆನು ದ್ವಿತೀಯ ಸಂದ್ಯಾವಂದನೆಯ ಕಾಲದಲಿ
ಬಂಧುರ ಬಯಲು ಬ್ರಹ್ಮಾನಂದದಲಿ      ||೧||

ತೋಟ ಸರೋವರ ಸಹಿತ ಲಕ್ಷ್ಮಿ ವಿಲಾಸಕೆ ಸೀಬೆ ವೃಕ್ಷದ ನೆಲದೀ
ನಿಟಾದ ವೃಂದಾವನವ ವಿವಾಹದ್ವಾದಶಿ ನಾಳೆ ನೋಡೆ
ತ್ರಿಕೂಟದ ಜೋತಿ ಬೆಳಕಿನೊಳುಸರಿದೆ      ||೨||

ಭೂಮಿಪ ಸಮಾನ ಮಾಮಲೇದೇಶಪಾಂಡೆ
ರಾಮರಾವಜಿ ನೀನು ಜ್ಞಾನದಿಂ ತಿಳಿದೇ     ||೩||

ಸೀಮೆಯೊಳು ಶಿಶುನಾಳಧೀಶನೊರವಿಲೆ ಬಂದು
ನೇಮಿಸಿರುವ ನಾಗನೂರೆಂಬಸ್ಥಲದಿ ನಿಂದು ||೪||

****

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ