ಗುಡಗುಡಿಯನು ಸೇದಿನೋಡೋ

-ಶಿಶುನಾಳ ಶರೀಫ್

ಗುಡಗುಡಿಯನು ಸೇದಿನೋಡೋ ನಿನ್ನ
ವಡಲೊಳಗಿನ ರೋಗಾ ತೆಗೆದು ಈಡ್ಯಾಡೋ             ||ಪ||

ಮನಸೆಂಬ ಚಂಚಿಯ ಬಿಚ್ಚಿ ದಿನ-
ದಿನಸು ಪಾಲಕವೆಂಬ ಭಂಗಿಯ ಕೊಚ್ಚಿ
ನೆನವೆಂಬ ಚಿಲುಮಿಗೆ ಹಚ್ಚಿ ಬುದ್ಧಿ
ಯೆನುವೆಂಥ ಬೆಂಕಿಯ ಮೇಲೆ ನೀ ಮುಚ್ಚಿ                  ||೧||  

ಬುರುಡಿಯೆಂಬುವದು ಶರೀರಾ ಇದು
ಮುರೆತು ಸುಕೃತ ಬಿಟ್ಟು ಕೊಳವಿಯಾಕಾರಾ
ವರನಾರಾಯಣನೆಂಬೋ ನೀರಾ ತುಂಬಿ
ಆರವೆಂಬ ಆರುವೀಯ ಹೊಚ್ಚೋ ಮೋಜುಗಾರಾ       ||೨||

ಶುದ್ಧಜ್ಞಾನವು ಮೇಲೇರುವದು
ದಾರಿದ್ರ್ಯ ದೇಹವು ಸುಟ್ಟು ಹೋಯ್ತು ಹಾರವದು
ಬುದ್ಧವಂತರಿಗೆ ತಿಳಿಯುವದು ನಮ್ಮ
ಮುದ್ದು ಚಿದಾನಂದ ಪಾದಕ್ಹೊಂದುವದು                   ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ