ಮರಣ ಮೃದಂಗ

- ಗಿರಿಜಾಪತಿ ಎಂ. ಎನ್

ಏಕೆ ಇನ್ನೂ ನಮ್ಮ ನಡುವೆ
ವಿರಸ ಕಲಹ ಹರಡಿದೆ,
ಕುರುಡ ಹಮ್ಮು ಬಿಮ್ಮುಗಳಲಿ
ಮಾನವತೆಯು ನರಳಿದೆ...
ಭೂಮಿ ಬಾಯ ತೆರೆಯುವಂತೆ,
ಬಾನು ಬೆಂಕಿಯುಗುಳುವಂತೆ,
ಸಮರ ತಂತ್ರ ನಡೆದಿದೆ...
ಶಾಂತವೀಣೆ ತಂತಿ ಹರಿದ
ದೇಶ ದೇಹದಲಪ ಸ್ವರ,
ದಯದ ತುಂಬುರ ನಾದವಿರದ
ಮನಮನದಲು ಮತ್ಸರ....
ರುದ್ರ ರೌದ್ರ ದುಂದುಭಿಯಲಿ
ಜೀವನುಂಗೋ ಕಾತರ
ಯಾವ ಬರುವಿಗಾಗಿ ತಾನಿದು
ಎಲ್ಲ ಯಾರ ಇರವಿಗೆ...
ಯಾವ ಭಾಗ್ಯದ ನೆಚ್ಚಿನಲ್ಲಿ
ಹುಚ್ಚು ಮದವು ಮೆರೆದಿದೆ....

        *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ