ರಾಜನೀತಿಯಲ್ಲಿ ಜಯವೋ

-ಶಿಶುನಾಳ ಶರೀಫ್

ರಾಜನೀತಿಯಲ್ಲಿ ಜಯವೋ
ಬಂತೋ ಇಂಗ್ಲಂಡ ದೇಶಕ್ಕೆ ಬೆಂಕಿಯ ಮಳಿಯೋ    ||ಪ||

ರಾಣಿ ರಾಜರ ವೈಭವಕೆ
ಪ್ರಾಣಹಾನಿಗಳಾದಾವು ಎಣಿ ಇಲ್ಲ ಇದಕೆ
ಜಾಣ ಕಲಿಗಳ ಸೈನ್ಯ ಹೊಕ್ಕಿತೋ
ಯೂರೋಪುಖಂಡಕೆಲ್ಲ ಮುಸುಕಿತೋ
ಕಾಣದಂಥಾ ಐದು ವ್ಯಕ್ತಿ
ಕ್ಷೋಣಿ ಗದಗದ ನಡುಗಿ ಹೋದೀತು                     ||೧||

ಹಿಂದುಸ್ಥಾನಕ ಬಂತು ಶೋಕ
ಮಂದಿ ಕುಂಡ್ಲಾಕ ನರಬೈಲಿ ಹೋತೋ ಕೈಲಾಕ
ಹಣದ ತೆರಿಗೆಯ ತೆಲಿಗೆ ಏಳು
ಏಣಿಸಿ ಹಡಗವ ತುಂಬಿ ಹೂರಣವ
ಹವಳ ದೇಶಕ್ಕೆಲ್ಲ ಇದು
ಕುಣಿದು ಕುಣಿದು ದಣಿವು ಆದಿತು                          ||೨|| 

ಬರದೆ ಬಾರದೆ ಸುಜ್ಞಾನ
ಗುರು ಶಿಶುನಾಳಧೀಶನ ಕುರುವಿನ ವಚನ
ಸತ್ಯ ಜಗಕೆಲ್ಲ ಇದು
ಬಿದ್ದಿತೋ ಜಗಳದ ಬೀಜ
ಮತ್ತೆ ಅಣ್ಣಿಗೇರಿ ಈಶನ
ಚಿತ್ರಗುಪ್ತರು ಕಾಣದೆ ಹೋದೀತು                         ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ