ಕುಂಬಾರಗ ಪದ ಬರಕೊಟ್ಟೆನು

-ಶಿಶುನಾಳ ಶರೀಫ್

ಕುಂಬಾರಗ ಪದ ಬರಕೊಟ್ಟೆನು ಸದ್ಗುರು
ಸಾಂಬಾ ವಿದುಧೃತ ಬಿಂಬಾ                        ||ಪ||

ಅಂಬರ ತಿರುಗಿಯಮೇಲೆ ಅರಲು ನೀರು
ತುಂಬಿದ ಕೆಸರಿನ ಕುಂಭ ಕೊರೆಯುವಂಥಾ     ||ಅ.ಪ.||

ಮಣ್ಣಿನೊಳು ಬೆನಕ ಹುಟ್ಟಿಸಿ ಮೆರೆವಾ
ತನ್ನ ಹಸ್ತ ಮಧ್ಯದೊಳಿರುತಿರುವಾ
ಸಣ್ಣ ಹಸಿಯ ತಿಳಿಯಿಂದಲಿ ತೀಡಿ
ನುಣ್ಣಗೆ ಮುಚ್ಚಳ ಮಡಕಿಯ ಮಾಡುವ            ||೧||

ಕಾಲ ಕರ್ಮವೆಂಬ ಅರಲನು ತುಳಿದು
ಮಳಲಿನ ಮಧ್ಯದೊಳದು ತಾನಿಳಿದು
ಮೂಲ ಬ್ರಹ್ಮದಾಕಾರದ್ಹೊಳವಿಕೆಯ
ಜೋಲಿವೊಳಗ ಪ್ರಭು ಕೋಲನ್ಹಿಡಿವಾ             ||೨||

ಪೇಳ್ವೆ ಮೊದಲು ಮುನಿಪುರವೆಂಬ ನಗರಾ
ಚಲ್ವಾಯ್ತು ಮುಂದೆ ಮೈಸೂರೆಂಬ ಪೆಸರಾ
ಶಾಲಿವಾಹನ ಶಕ ಕರ್ತನೆನಸಿ ಮಹಂ-
ಕಾಳಿಗಧಿಪ ಭೂಪಾಲನೆಸಿಕೊಂಡ                  ||೩||

ಶೂಲಕ್ಕೆ ಹಾಕಿದ ಶಿವತಾನು ಸುತ್ತು
ಕ್ಷಣದೊಳಗದು ಶೂಲವು ಮರಳಿ ಜಿಗಿತು
ಪೊಳ್ಳ ಗಡಗಿ ಬದಿಗಿಟ್ಟು ಶಿಶುವಿನಾಳ
ಆಳುವ ದೊರೆ ಆವಿಗಿ ಹಾಕಿದ                       ||೪||
****

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ