ಜಗತ್ತು ಬದಲಾತು

- ಡಾ || ರಾಜಪ್ಪ ದಳವಾಯಿ

ಜಗತ್ತು ಬದಲಾತು
ಬುದ್ದಿಯ ಕಲಿಬೇಕು ||

ಮಡಿ ಮೈಲಿಗೆಯ
ಕೈಬಿಡಬೇಕು
ದೆವ್ವ ಪಿಶಾಚಿಯ
ಭಯ ಬಿಡಬೇಕು ||

ಜಾತಿ ಭೇದ ಮರೆತು
ಸಹಮತ ತರಬೇಕು
ರಾಹು ಗುಳಿಕಾಲಗಳ
ಲೆಕ್ಕವ ಬಿಡಬೇಕು ||

ಹಲ್ಲಿಯ ಶಕುನ ನಂಬಬೇಡಿ
ತೀರ್ಥಧೂಪ ನಂಬಿಕೆ ಬಿಡಿ
ಆರೋಗ್ಯ ಕೆಟ್ಟರೆ ಆಸ್ಪತ್ರೆ
ಬುದ್ದಿ ಕೆಟ್ಟರೆ ಶವಯಾತ್ರೆ ||

ಮಕ್ಕಳ ಶಾಲೆಗೆ ಕಳಿಸಬೇಕು
ಪೌಷ್ಠಿಕ ಆಹಾರ ನೀಡಬೇಕು
ಶುದ್ಧ ಗಾಳಿ ಶುದ್ಧ ನೀರಿಗೆ
ಪರಿಸರವನ್ನು ಕಾಪಾಡಬೇಕು ||

        *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ