ಛಾಯೆ

- ಗಿರಿಜಾಪತಿ ಎಂ. ಎನ್

ಯಾವ ತೀರದಿ ನಿಲ್ಲಲಿದೆಯೋ
ಜಗದ ಜೀವನ ನೌಕೆಯು...
ಭೀತ ಛಾಯೆಯು ನಿತ್ಯ ಕಾಡಿದೆ
ಯುದ್ಧ ಕಾರಣ ಛಾತಿಯು...

ಕ್ಷಿಪಣಿ-ಯಕ್ಷಿಣಿ ನಭದ ರಂಗದಿ
ರುದ್ರ ತಾಂಡವ ತಾಲೀಮಿದೆ...
ನಂಬಿ-ನಂಬದ ಮಾತಿನೊರೆಯಲಿ
ಜೀವ ಮಹತಿಯು ಸೊರಗಿದೆ...

ವಿನಾಶಿಯಾಗಲು ವಿಜ್ಞಾನ ಸಾಗಿದೆ
ಅವಿನಾಶಿಯಾಗಲು ವಿಜ್ಞಾನ ಸಾಗಿದೆ
ಅವಿನಾಶಿ ಆತ್ಮನ ತೊರೆದಿದೆ...
ಯಾವ ಸಾಧನೆಗಾಗಿ ಶೋಧನೆ
ನಾಳೆ ಬಿತ್ತಿ-ಬೆಳೆಸಲು ವೇದನೆ...

        *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ