ಹಾರೈಕೆ

- ಗಿರಿಜಾಪತಿ ಎಂ. ಎನ್

ದಿನವು ದಿನಪನ ಬರವು ಕೋರಿದೆ
ಶುಭದ ಹಾರೈಕೆ,
ಜೊನ್ನ ರಂಗನು ಸುಮಕೆ ಚಿತ್ರಿಸೊ
ನಭದ ಓಲೈಕೆ,

ಹಸಿರು ಬೆಟ್ಟದ ಬಟ್ಟಲದ ತುಂಬ
ಅಮೃತಾ ಫಲದಾ ಪೇಯವು
ತೆರೆ-ತೊರೆ, ನದ ನದಿಗಳ
ರಸ ಪೀಯೂಷ ಪಾನೀಯವು,

ಬೀಸೋ ಚಾಮರ
ಹೊತ್ತ ಸಮೀರ ನಿನದದಿ,
ಹಾಸು-ಹೊಕ್ಕಾಗಿ ಮಿಡಿದಿದೆ
ಎದೆಯ ಗೂಡಿನೊಳಂದದಿ,

ತನ್ನೆದೆನ್ನುವುದೆಲ್ಲರಲ್ಲಿ
ತುಂಬು ಕಾಣಿಕೆ ನೀಡಿದೆ...,
ಎಲ್ಲವೆಲ್ಲರಿಗಾಗಿ ಎನ್ನುವ
ವಿದುರ ನೀತಿಯ ತೋರಿದೆ.

        *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ