ಕಾವ್ಯವೆಂದರೆ

- ಗಿರಿಜಾಪತಿ ಎಂ. ಎನ್

ಏನೆನ್ನಲಿ ಏನೆನ್ನಲಿ ಎನ್ನ
ಮನದಮನ್ವಂತರದ ಧಾರೆಗಿನ್ನು ನಾನು
ಬರಿದೆ ಬರೆವರ ಪದದಿ
ಕಟ್ಟುವುದೆಂತೀ ಬುದುಕಿನಕ್ಕರವ ನಾನು-ನೀನು ||

ಬರೆದುದೆ ಬದುಕಲ್ಲ
ಬದುಕಿದ್ದು ತಾ ನಿಲುಕಲ್ಲ.
ಕಾವ್ಯವೆಂದರೆ ಅದುವೆ
ಜನನಮರಣದಾಚೆ ಈಚೆ ಬಾಳು ||

ಹೇಳುವರು-ಹೇಳಿದ್ದು,
ಕೇಳುವರು-ಕೇಳಿದ್ದು,
ಉಂಡುಂಡು ಮರೆತು ಮಲೆಯುತಲಿರಲು,
ಸಂವಾದವೇತರದು ಶೂನ್ಯದಲ್ಲಿ. ||

ವೇಷಿಗರ ಬಿನ್ನಾಣ,
ಮುಗಿಲಗಲ ಕುಣಿತದಲಿ,
ಮಣ್ಣರಂಗದ ಪಾಡು,
ಪಾಡಾಗದ ಚರಮಗೀತೆ. ||

        *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ