ಉತ್ತಮ ಸೆಳಕಿನಿಂದ ಆರಂಭವಾಗುವ ಜನ

- ಮಂಜುನಾಥ ವಿ ಎಂ

ಸಂಜೆ ಐದರ ನಂತರದ ರೈಲುಗಾಡಿ ಬಂದು ನಿಂತಿದೆ.
ಇನ್ನೇನು ಹೊರಡುತ್ತದೆ;
ಬೋಗಿಗಳು ಅದಲು ಬದಲಾಗಬೇಕಷ್ಟೇ.

ಸೆಪ್ಟೆಂಬರ್‍ ತಿಂಗಳ ಮಳೆಗಾಲದ ನಡುಮಧ್ಯಾಹ್ನ
ಅವರೆಲ್ಲರೂ ಬಂದು ನೆಲೆ ನಿಂತರು.

ಆ ಮರಗಿಡಗಳು ಬೆಳೆಯುತ್ತಲೇ ಇವೆ.
ಕೆಲವರು ನಗಲು ಪ್ರಾರಂಭಿಸಿದ್ದಾರೆ ಎನ್ನುವ ಸುದ್ದಿ.

ಅಳುವುದರ ಸತ್ಯಾಸತ್ಯತೆ ಅವರ ನರನಾಡಿಗಳಲ್ಲಿ
ಪ್ರವಹಿಸುತ್ತಿದೆ.

ಇನ್ನೇನು ಎದ್ದು, ಎಲ್ಲವನ್ನೂ ಹೇಳಿಬಿಡಬೇಕೆಂಬ
ಕಾತರದ ಹುಡುಗನ ಕಣ್ಣುಗಳಲ್ಲಿ-
ಸೀಗಡಿ, ಕರಿಮೀನು ಉರಿಯುವ ಆ ಮೂಲೆಯ
ರೋಗಗ್ರಸ್ತ ಕುಟುಂಬ-
ಅವಳ ಪ್ರೇಮದ ಲೆಕ್ಕಾಚಾರವನ್ನು ಗುಣಿಸಿ ಹಾಕುತ್ತಿರುತ್ತದೆ
           *****

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ