ಜೀವನ ಕಾವ್ಯ

- ಮಸನೊಬು ಫುಕವೊಕ
ಕನ್ನಡಕ್ಕೆ: ಬಂದಗದ್ದೆ ರಾಧಾಕೃಷ್ಣ

ಮನುಷ್ಯರು ಏನನ್ನೋ ಕಂಡು
ಹಿಡಿಯುತ್ತಾರೆ.  ಅದಕ್ಕಾಗಿ ಪ್ರಕೃತಿಯನ್ನು
ಉಪಯೋಗಿಸುತ್ತಾರೆ.  ಈ ಎಲ್ಲಾ ಪ್ರಯತ್ನಗಳು
ಮಾನವ ಕಲ್ಯಾಣಕ್ಕಾಗಿ ಎಂದೇ ಭಾವಿಸುತ್ತಾರೆ.
ಇದರ ಪರಿಣಾಮವಾಗಿ ಇಂದು ಪೃಥ್ವಿ
ಮಾಲಿನ್ಯಗೊಂಡಿದೆ.  ಮಾನವನ ಅಭಿವೃದ್ಧಿ
ವಿಚಾರಗಳು ಗೊಂದಲಮಯವಾಗಿದೆ.
ಅಧ್ವಾನದ ಆಧುನಿಕ ದಿನಗಳಿಗೆ
ಆಹ್ವಾನವಿತ್ತಾಗಿದೆ.

ಈ ತೋಟದಲ್ಲಿ ನಾವು ಶ್ರಮ ರಹಿತ
ಕೃಷಿ ಮಾಡುತ್ತಿದ್ದೇವೆ ಪರಿಪೂರ್ಣವಾದ,
ಸ್ವಾದಯುಕ್ತ ಧಾನ್ಯಗಳನ್ನು ಮತ್ತು ಹಣ್ಣುಗಳನ್ನು
ತಿನ್ನುತ್ತೇವೆ.  ಇದರಿಂದ ನಮ್ಮೆಲ್ಲ ಚಟುವಟಿಕೆಗಳ
ಹಿಂದಿರುವ ಜಗತ್ತಿನ ಹೃದಯಕ್ಕೆ ನಾವು
ಹತ್ತಿರವಾಗುತ್ತೇವೆ.  ಬದುಕು
ಅರ್ಥಪೂರ್ಣವಾಗುವುದು.  ಆತ್ಮತೃಪ್ತಿ
ದೊರೆಯುವದು.  ಜೀವನ ಒಂದು ಕಾವ್ಯ.

     *****

1 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ