ಕಲ್ಯಾಣಿಯು ಕರುಣವಾಯಿತು ನಮಗ

-ಶಿಶುನಾಳ ಶರೀಫ್

ಕಲ್ಯಾಣಿಯು ಕರುಣವಾಯಿತು ನಮಗ         ||ಪ||

ಮಲ್ಲೇಶ ಕೇಳೆಲೋ ಸುಣ್ಣ ತಂಬಾಕವು
ಸೊಲ್ಲು ಸಾರಿತು ಗುಲ್ಲುಎನಿಸುತಲಿ           ||ಅ.ಪ.||

ಕಲ್ಯಾಣದಿಂ ಹೊರುತು ದಾರಿ ಹಿಡಿದಿರುತಲಿ
ಶಿಗ್ಗಲಿಯೊಳು
ಬಾಯಲಿ ನುಡಿದ ಪರಿಪರಿಯ
ಮೋಹಕ್ಕೆ ಬೆರೆತು ಕಾಲಿಡುತಲಿರೆ
ಸರಸದಿ ಭೀಮಗ ಅರಕಿರಲಿವು ಕಲ್ಯಾಣಿ   ||೧||

ಶಿಶುನಾಳಂಧೀಶ ಬಂದು ಬ್ಯಾಗದಿಂದ-
ಲೊಸೆದಪ್ಪಿ ಕೊಂಡೆನೆಂದು ಆ
ಮಹಾಸದ್ಗುರು ಗೋವಿಂದ ಕರುಣದಿ
ಹಸನಾಗಿ ಉಸುರುವೆ
ರಸಿಕರಲಿ ಅಪ್ಪುದು ಕಲ್ಯಾಣಿಯು           ||೨||

****

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ