ಭಾಷ್ಯ ಬರೆಯುವುದೆಂತು

- ಗಿರಿಜಾಪತಿ ಎಂ. ಎನ್

ಭೂರಮೆಯ ಭೌಮದನಿಕೇತನಕೆ
ಭಾಷ್ಯ ಬರೆಯುವುದೆಂತು ಬರಿ ಮಾತು ||
ಮೌನ ತವಸಿಯ ತಪದಾ ನೆಲೆಯಲಿ
ಮಾತಿಗೆಲ್ಲಿಯ ಕಾಲ ಸಂದಲಹುದು ||

ಎತ್ತರೆತ್ತರ ಶೃಂಗಾರನಂಗವು ಮೌನ
ಹಿಮದ ಪಾದಾದಿಯಲು ಮತ್ತೆ ಮೌನ ||
ಕಂದರಂದ್ಹರದಾಳದಳದಲೂ ನಿಃಶಬ್ದ
ನೀರವ ಉಷೆಗೆ ಸಂಧ್ಯಾ ಧ್ಯಾನ ಯಾನ ||

ಅಮರ ಸಮೀರದಿ ಗಾನ ದೌಘನ
ಮೇಘ ಮಂಡಲದ ತಾಳವಾದನ ||
ಸೃಷ್ಟಿ ಸಮಾಧಿಸ್ಥ ಸ್ಥಿತಿ ಯತಿ ಧ್ಯಾನ
ಋಕ್ಕುಗಳಾ ನಾದದಾ ಬ್ರಹ್ಮ ಬಿಂದು ||

ಕರ್ಮದಾಚೆಯ ವೇದಾಂತ ಸಾರದಲಿ
ಜೀವ ರೂಹಿರೂಪಿನೊಳಗಾತ್ಮ ಸಿಂಧು ||
ಅಂಗಾನಂಗವು ರಂಗ ಬಿನ್ನಪಮಾಟವು
ಅನಂಗ ಸಂಗ-ಸಾಂಗತ್ಯದ ನೋಟವು ||

        *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ