ಸಂಜೆಯ ಸ್ವಗತ

- ಡಾ || ಬಿ. ಪ್ರಭಾಕರ ಶಿಶಿಲ

ಬರಿದೆ ಕಳೆದುದು ಕಾಲ
ಬರೆಯಲಾರದೆ ಮನವ
ತಿರುಗಿ ಬಾರದ ದಿನಗಳ
ಭಿತ್ತಿ ಚಿತ್ತಾರದಲಿ
ಕನಸುಗಣ್ಣಿನ ಕಾವ್ಯ
ಕಳೆದುಕೊಂಡಿದೆ ದನಿಗಳ

    ಯಾರದೋ ಹೋಮ
    ವೈವಾಹಿಕದ ಧೂಮದಲಿ
    ಸೂರೆ ಹೋದುದು ರಾಗವು
    ವರ್ಣರಂಜಿತ ಕದಪು
    ಯಾರಿಗೋ ನೈವೇದ್ಯ
    ಇಂಗಿ ಹೋದುವೆ ಕಂಬನಿ

ಎಲ್ಲೋ ಮರೆಯಲಿ ಚೈತ್ರ
ವೈಶಾಖ ಧೀಂಗಿಣವು
ಬೇಡವೈ ಮಾನಿಷಾದ
ಬೇಟೆಗುಳಿದಿಹುದೇನು
ಮನದ ಬೆಂಗಾಡಿನಲಿ
ಸ್ಥಾಯಿಯಾದುದು ವಿಷಾದ

    ಮೋಡ ನಿಲ್ಲುವುದಿಲ್ಲ
    ಹನಿಯ ಚೆಲ್ಲುವುದಿಲ್ಲ
    ಟಿಸಿಲೊಡೆಯದೆಂದೆಂದು ಕವನ
    ಹೂವೆ ಅರಳದು ಇಲ್ಲಿ
    ಮಕರಂದವೆಲ್ಲಿಂದ
    ಹಾರೀತು ಎಲ್ಲಿ ಭ್ರಮರ?

೨೦೦೩
    *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ